<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2802103225554897449</id><updated>2011-11-18T05:13:15.010+01:00</updated><category term='ಸೆಭಾ'/><category term='ಧಾರವಾಡದ ಪಲ್ಲವಿಯವರ ಬ್ಲಾಗ್'/><category term='http://thatskannada.oneindia.in/nri/article/2009/0205-indian-teachers-over-qualified-under-skilled.html]'/><category term='http://bisilahani.blogspot.com/2009/12/blog-post_24.html'/><category term='ತೇಜಸ್ವಿನಿ ಹೆಗಡೆಯವರ &quot;ಮಾನಸ&quot;'/><category term='“ಛಾಯಾಕನ್ನಡಿ”'/><title type='text'>ಬಿಸಿಲ ಹನಿ</title><subtitle type='html'>ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ.</subtitle><link rel='http://schemas.google.com/g/2005#feed' type='application/atom+xml' href='http://bisilahani.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2802103225554897449/posts/default?max-results=100'/><link rel='alternate' type='text/html' href='http://bisilahani.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/2802103225554897449/posts/default?start-index=101&amp;max-results=100'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><generator version='7.00' uri='http://www.blogger.com'>Blogger</generator><openSearch:totalResults>115</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2802103225554897449.post-7995108253339040349</id><published>2011-10-25T10:30:00.001+01:00</published><updated>2011-10-25T10:33:20.785+01:00</updated><title type='text'>ಕಾಡಿಗೆ ಎದುರಾಗಿ ನಿಂತ ಹುಡುಗಿ ಭಾಗ - 2</title><content type='html'>ನಿಮಗೆ ಆಶ್ಚರ್ಯವಾಗಬಹುದು-ನನಗೆ ಹಸಿವೇ ಎನಿಸುತ್ತಿರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಪಾರ್ಸಲ್ಲಿನಲ್ಲಿದ್ದ ಸಿಹಿತಿಂಡಿಯನ್ನು ತಿನ್ನುತ್ತಿದ್ದೆ. ಮರದಲ್ಲಿ ಸಿಹಿಯಾದ ಹಣ್ಣುಗಳು ಕಾಣಿಸಿದವು. ಆದರೆ ನಾನು ಅವನ್ನು ತಿನ್ನಲು ಹೋಗಲಿಲ್ಲ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಹಣ್ಣುಗಳು ಸಿಹಿಯಂತೆ ಕಾಣಿಸಿದರೂ ವಿಷಕಾರಿಯಾಗಿರುತ್ತವೆಂದು ನನಗೆ ಗೊತ್ತಿತ್ತು. ನಾನು ಮುಸ್ಸಂಜೆಯವರೆಗೂ ನಡೆಯುತ್ತಲೇ ಇದ್ದೆ. ಕೊನೆಗೆ ನದಿ ದಂಡೆ ಮೇಲೆ ಒಂದು ನುಣುಪಾದ ಜಾಗ ಸಿಕ್ಕಿತು. ಅಂದು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದೆ. &lt;br /&gt;&lt;br /&gt;ಮರುದಿವಸ ಬೆಳಿಗ್ಗೆ ಎದ್ದಾಗ ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ. ದಿನನಿತ್ಯದ ವಾಡಿಕೆಯಂತೆ ಕೋಲಿನಿಂದ ಹುಲ್ಲನ್ನು ಸರಿಸುತ್ತಾ, ನೆಲವನ್ನು ತಡಕಾಡುತ್ತಾ, ಜೇಡರ ಹುಳುಗಳೇನಾದರೂ ಇವೆಯೋ ಎಂಬುದನ್ನು ನೋಡುತ್ತಾ, ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಒಮ್ಮೊಮ್ಮೆ ನದಿ ದಂಡೆಯ ಮೇಲಿನ ರಸ್ತೆ ದುಸ್ತರವಾದಾಗ ನೀರಿನ ಮೂಲಕ ಹಾದುಹೋಗುತ್ತಿದ್ದೆ. ಆಗಲೇ ನನ್ನ ಬ್ಯಾಗಿನಲ್ಲಿದ್ದ ಸಿಹಿತಿಂಡಿಗಳು ತೂತಿನ ಮೂಲಕ ಕಳದುಹೋಗಿದ್ದು ನನ್ನ ಗಮನಕ್ಕೆ ಬಂತು. ಆದರೂ ನನಗೆ ಹಸಿವೇ ಅನಿಸದಿದ್ದರಿಂದ ನಾನು ಇದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. &lt;br /&gt;&lt;br /&gt;ನಡೆಯುತ್ತಾ ಹೋದಂತೆ ಸ್ವಲ್ಪ ದೂರದರಲ್ಲಿಯೇ ನನಗೆ ರಣಹದ್ದುಗಳು ಕಂಡವು. ಎಲ್ಲಿ ಹೆಣಗಳಿರುತ್ತವೋ ಅಲ್ಲಿ ಸಾಮಾನ್ಯವಾಗಿ ಹದ್ದುಗಳಿರುತ್ತವೆ ಎಂದು ನನಗೆ ತಿಳಿದಿತ್ತು. ಈ ರಣಹದ್ದುಗಳು ವಿಮಾನ ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಮಾಂಸ ತಿನ್ನಲು ಅಲ್ಲಿ ಸೇರಿರಬೇಕು ಎಂದು ನನಗೆ ಗೊತ್ತಾಯಿತು.  &lt;br /&gt;ನಾನಿನ್ನೂ ನಮ್ಮ ವಿಮಾನದ ಭಗ್ನಾವಶೇಷಗಳು ಬಿದ್ದ ಜಾಗದಲ್ಲಿಯೇ ಇದ್ದೆ. ನಾನು ನಡೆದು ಹೋಗುತ್ತಿದ್ದಂತೆ ವಿಮಾನದ ಮೈಕಟ್ಟಿನ ಒಂದು ಭಾಗ ಅಲ್ಲಿ ಬಿದ್ದಿರುವದನ್ನು ಕಂಡೆ. ವಿಮಾನದ ಸಂಖ್ಯೆ ಇನ್ನೂ ಹಾಗೆ ಕಾಣಿಸುತ್ತಿತ್ತು. ಸ್ವಲ್ಪ ದೂರದರಲ್ಲಿಯೇ ಮುರಿದು ಬಿದ್ದ ವಿಮಾನದ ಇನ್ನೊಂದು ಭಾಗ ಕಾಣಿಸಿತು. ಅದು ಕ್ಯಾಬಿನ್ನಿನಂತಿದ್ದು ಅದರ ವೈರ್ ಗಳು ತಳಕುಹಾಕಿಕೊಂಡಿದ್ದಲ್ಲದೆ ಅದರ ಲೋಹದ ತಗಡೊಂದು ಬಾಗಿತ್ತು.&lt;br /&gt;&lt;br /&gt;ಅಲ್ಲಿ ಪೆಟ್ರೋಲ್ ವಾಸನೆ ಇನ್ನೂ ಹಾಗೆ ಇತ್ತು. ಆದರೆ ಬದುಕುಳಿದವರ ಬಗ್ಗೆ ಯಾವಂದೂ ಕುರುಹುಗಳು ಕಾಣಿಸಲಿಲ್ಲ. ಆ ಅವಶೇಷದ ಬಳಿ ನಾನು ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಾನು ಮುಂದೆ ಹೋಗಲೇಬೇಕಿತ್ತು. ಆದರೂ ನಾನು ನಡೆದು ಹೋಗಬೇಕಾದ ದಾರಿ ನಿಧಾನವಾಗಿ ಸಾಗುತ್ತಿದ್ದರಿಂದ ನನ್ನ ಪಯಣ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ. &lt;br /&gt;&lt;br /&gt;ಎರಡನೆಯ ದಿನವಾಗಲಿ, ಮೂರನೆಯ ದಿನವಾಗಲಿ ನನ್ನ ಗಾಯಗಳು ನಂಗೆ ಒಂಚೂರು ನೋವು ಕೊಡಲಿಲ್ಲ. ಬದಲಾಗಿ ಅತಿಯಾದ ಬಿಸಿಲಿನಿಂದ ನನ್ನ ಬೆನ್ನಲ್ಲಿ ಅಸಾಧ್ಯ ಉರಿಯೂತವುಂಟಾಯಿತು. ಏಕೆಂದರೆ ನನ್ನ ಡ್ರೆಸ್ಸಿನ ಹಿಂಭಾಗದಲ್ಲಿ ಕಟ್ಟಿಕೊಳ್ಳುವ ಬೆಲ್ಟಿನ ಗುಂಡಿ ಕಿತ್ತುಹೋಗಿದ್ದರಿಂದ ನನ್ನ ಬೆನ್ನು ಹಾಗೆ ತೆರೆದುಕೊಂಡಿತ್ತು. ಮರಗಳ ಸಂಧಿಯಿಂದ ತೂರಿ ಬರುವ ಸೂರ್ಯನ ಕಿರಣಗಳು ನನ್ನ ಬೆನ್ನನ್ನು ಸುಟ್ಟುಹಾಕಿದ್ದವು. ಪೆರುವಿನ ಕಾಡುಗಳಲ್ಲಿ ಮಳೆ ಎಷ್ಟು ಕೆಟ್ಟದಾಗಿರುತ್ತದೋ ಅಷ್ಟೇ ಕೆಟ್ಟದಾಗಿ ಬಿಸಿಲು ಕೂಡ ಇರುತ್ತದೆ. ಹಿತಮಿತವಾದ ಹವಾಮಾನ ಜೀವನಕ್ಕೆ ಒಗ್ಗಿಕೊಂಡ ಯೂರೋಪಿನ ಜನ ಇವೆರಡನ್ನೂ ತಡೆದುಕೊಳ್ಳಲಾರರು.   &lt;br /&gt;&lt;br /&gt;ಎರಡನೆಯ ರಾತ್ರಿ ಒಳ್ಳೆ ವಿಶ್ರಾಂತೆ ತೆಗೆದುಕೊಂಡೆ. ಮಾರನೆಯ ದಿನ ನನ್ನ ಬೆನ್ನ ಮೇಲೆ ಉರಿಯೂತವಿದ್ದಾಗ್ಯೂ ನಾನು ಬಹಳಷ್ಟು ದೂರವನ್ನು ನಡೆದೆ. ನಾನು ನೀರು ಮತ್ತು ಸಿಹಿತಿಂಡಿಗಳನ್ನು ಬಿಟ್ಟು ಬೇರೇನೂ ತಿನ್ನದಿದ್ದರೂ ನನ್ನಲ್ಲಿ ಶಕ್ತಿ ಇನ್ನೂ ಹಾಗೆ ಇದೆ ಎಂದನಿಸುತ್ತಿತ್ತು. ಮೇಲಿಂದ ಮೇಲೆ ನನಗೆ ಸೊಳ್ಳೆಗಳು, ನೊಣಗಳು ಕಚ್ಚುತ್ತಿದ್ದವು. ಅವುಗಳನ್ನು ದೂರವಿಡಲು ಅಸಾಧ್ಯವಿತ್ತು. ಆದರೆ ಅವನ್ನು ಲೆಕ್ಕಿಸದೆ ನಡೆದೆ. ಪ್ರತಿಸಾರಿ ಸೊಳ್ಳೆಗಳು ಕಚ್ಚಿದಾಗ ನನ್ನ ಚರ್ಮದ ಕೆಳಗೆ ಮೊಟ್ಟೆಗಳನ್ನಿಡುತ್ತಿದ್ದುದು ಹಾಗೂ ತದನಂತರದಲ್ಲಿ ಅವು ಮರಿಗಳಾಗಿ ಹೊರಬರುವದು ನನ್ನ ಗಮನಕ್ಕೆ ಬರಲಿಲ್ಲ. &lt;br /&gt;ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನಗಳ ಹಾರಾಟದ ಸದ್ದು ಕೇಳಿಸಿದ್ದರಿಂದ ನಾನು ಸೊಳ್ಳೆಗಳು ಹಾಗೂ ನೊಣಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲುಹೋಗಲಿಲ್ಲ. &lt;br /&gt;  &lt;br /&gt;ನಾನು ವಿಮಾನದ ಸದ್ದು ಬಂದತ್ತ ಕೂಗಿದೆ. ಹಾಗೆ ಜೋರಾಗಿ ಕೂಗುತ್ತಾ ಹೋದೆ. ನಂಗೆ ಗೊತ್ತಿತ್ತು ನಾನು ಕೂಗುವದು ನಿಷ್ಪ್ರಯೋಜಕವೆಂದು. ಆದರೂ ನಾನು ಒಂದೇ ಸಮನೆ “ಹಲೋ, ಹೆಲ್ಪ್....ಹೆಲ್ಪ್” ಎಂದು ಕೂಗುತ್ತಲೇ ಇದ್ದೆ. ಬಿಡದೆ ಮತ್ತೆ ಮತ್ತೆ ಕೂಗಿದೆ “ಹಲೋ, ಹೆಲ್ಪ್” ಎಂದು. ಊಹೂಂ, ಪ್ರಯೋಜನವಾಗಲಿಲ್ಲ. &lt;br /&gt;&lt;br /&gt;ವಿಮಾನಗಳೇನೋ ನನಗೆ ಹತ್ತಿರವಾಗಿಯೇ ಇದ್ದವು. ಆದರೆ ವಿಮಾನ ಚಾಲಕರಿಗೆ ಮರದ ಕೆಳಗಿದ್ದ ನನ್ನನ್ನು ನೋಡಲಾಗಲಿಲ್ಲ. ನಂಗೂ ಅಷ್ಟೇ-ಅವರನ್ನು ನೋಡಲಾಗಲಿಲ್ಲ. ಆದರೂ ಅವರ ಗಮನವನ್ನು ನನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದೆ. &lt;br /&gt;&lt;br /&gt;ವಿಮಾನದ ಸದ್ದು ಕ್ರಮೇಣ ಸತ್ತುಹೋಯಿತು. ನಾನು ಪುನಃ ಒಂಟಿಯಾದೆ. ಆದರೆ ದೃತಿಗೆಡಲಿಲ್ಲ. ಸುಮ್ಮನೆ ನಡೆಯುತ್ತಾ ಹೋದೆ. ನಂಗೆ ಹಸಿವೆ ಎನಿಸುತ್ತಿರಲಿಲ್ಲ. ಆಗಾಗ ನದಿಯ ಶುಭ್ರ ನೀರನ್ನು ಕುಡಿಯುತ್ತಿದ್ದೆ. ಭರವಸೆ ಮಾತ್ರ ಇನ್ನೂ ಹಾಗೆ ಉಳಿದಿತ್ತು. &lt;br /&gt;&lt;br /&gt;ನನ್ನ ಬಳಿಯಿದ್ದ ಸಿಹಿತಿಂಡಿಗಳೆಲ್ಲಾ ಇದೀಗ ಖಾಲಿಯಾಗಿದ್ದವು. ತಿನ್ನಲೂ ಏನೂ ಇರಲಿಲ್ಲ. ನಾನು ನದಿ ದಂಡೆಯ ಮೇಲೆ ಪ್ರಯಾಸದಿಂದ ಸಾಗುತ್ತಿರಬೇಕಾದರೆ ಮೊಸಳೆಗಳು ನನ್ನತ್ತ ಈಜಿಕೊಂಡು ಬರುತ್ತಿದ್ದವು. ನನಗೆ ತಕ್ಷಣ ಅಲ್ಲಿ ವಿಷಕಾರಿ ಮೀನುಗಳು ಇರುವದು ನೆನಪಿಗೆ ಬಂತು. ಅವು ಸಾಮಾನ್ಯವಾಗಿ ನದಿ ದಂಡೆ ಮೇಲೆಯೇ ಮಲಗಿರುತ್ತಿದ್ದವು. ಆಗ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ “ಅಕಸ್ಮಾತಾಗಿ ಈ ಮೀನಿನ ಮೇಲೆ ಕಾಲಿಟ್ಟರೆ ಸಾಕು, ನನ್ನ ಕಥೆ ಮುಗಿದಂತೆಯೇ ಸರಿ” ಎಂದು. ಈಗ ಮತ್ತಷ್ಟು ಹುಶಾರಾಗಿ ನಡೆಯುತ್ತಾ ಹೋದೆ.  &lt;br /&gt;&lt;br /&gt;ಒಂಬತ್ತನೆಯ ದಿನ ನಡೆಯುತ್ತಾ ಹೋದಂತೆ ಅನತಿ ದೂರದಲ್ಲಿ ಒಂದು ದೋಣಿ ಇರುವದು ಕಾಣಿಸಿತು. ನಾನು ಮೊದಲು ಅದಾಗಲೇ ಯಾರೋ ಬಳಸಿ ಬೀಸಾಡಿದ ಒಂದು ಒಡೆದ ದೋಣಿಯಾಗಿರಬಹುದೆಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದ ಮೇಲೆ ಗೊತ್ತಾಗಿದ್ದು ಅದೊಂದು ಗಟ್ಟಿಯಾದ ಮರದಿಂದ ಮಾಡಿದ ಹೊಸದಾದ ದೋಣಿಯೆಂದು.  &lt;br /&gt;    &lt;br /&gt;   &lt;br /&gt;&lt;br /&gt;ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ&lt;br /&gt;ಕನ್ನಡಕ್ಕೆ: ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-7995108253339040349?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/7995108253339040349/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/10/2.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/7995108253339040349'/><link rel='self' type='application/atom+xml' href='http://www.blogger.com/feeds/2802103225554897449/posts/default/7995108253339040349'/><link rel='alternate' type='text/html' href='http://bisilahani.blogspot.com/2011/10/2.html' title='ಕಾಡಿಗೆ ಎದುರಾಗಿ ನಿಂತ ಹುಡುಗಿ ಭಾಗ - 2'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>0</thr:total></entry><entry><id>tag:blogger.com,1999:blog-2802103225554897449.post-2594295290828955328</id><published>2011-10-21T11:43:00.010+01:00</published><updated>2011-10-21T12:00:51.663+01:00</updated><title type='text'>ಮಹಾಪತನ</title><content type='html'>&lt;a href="http://2.bp.blogspot.com/-jszP04cz-SQ/TqFNbeJdYRI/AAAAAAAAAaw/o-Tb8sQcv_M/s1600/1319170716.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 250px; height: 256px;" src="http://2.bp.blogspot.com/-jszP04cz-SQ/TqFNbeJdYRI/AAAAAAAAAaw/o-Tb8sQcv_M/s320/1319170716.jpg" border="0" alt=""id="BLOGGER_PHOTO_ID_5665894940553339154" /&gt;&lt;/a&gt;&lt;br /&gt;ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ ಪದವಿ ಪಡೆಯುವ ತನಕ ವಿಶ್ವವಿದ್ಯಾನಿಲಯದಲ್ಲಿ ಉಳಿಯಲಿಲ್ಲ. ಈಜಿಪ್ಟಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತಾದ ಗಡಾಫಿ 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಬಾಗವಾಗಿಯೇ ಸೇನೆಗೆ ಸೇರಿದ.  &lt;br /&gt;&lt;a href="http://1.bp.blogspot.com/-DbawABFmAVk/TqFNpEDNuXI/AAAAAAAAAa8/EuuK0d-I-I8/s1600/gaddafi-620_2032245c.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 200px;" src="http://1.bp.blogspot.com/-DbawABFmAVk/TqFNpEDNuXI/AAAAAAAAAa8/EuuK0d-I-I8/s320/gaddafi-620_2032245c.jpg" border="0" alt=""id="BLOGGER_PHOTO_ID_5665895174065994098" /&gt;&lt;/a&gt;&lt;br /&gt;&lt;br /&gt;ಗ್ರೀಸ್ ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್ ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.&lt;br /&gt;   &lt;br /&gt;1969ರಿಂದಲೂ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಕರ್ನಲ್ ಮೌಮರ್ ಗಡಾಫಿ ಲಿಬಿಯಾವನ್ನು ನಲವತ್ತೆರೆಡು ವರ್ಷಗಳ ಕಾಲ ಸಮರ್ಥವಾಗಿ ಆಳಿದವ. ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ, ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು.  &lt;br /&gt;&lt;a href="http://3.bp.blogspot.com/-ExMLLRgHZeE/TqFPfIKvLrI/AAAAAAAAAbs/6S7v-i84Y2I/s1600/untitled.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 198px; height: 131px;" src="http://3.bp.blogspot.com/-ExMLLRgHZeE/TqFPfIKvLrI/AAAAAAAAAbs/6S7v-i84Y2I/s320/untitled.bmp" border="0" alt=""id="BLOGGER_PHOTO_ID_5665897202395852466" /&gt;&lt;/a&gt;&lt;br /&gt;&lt;br /&gt;1969ರಲ್ಲಿ ಅಧಿಕಾರಕ್ಕೆ ಬಂದ ನಂತರ ಲಿಬಿಯಾ ಅಳವಡಿಸಿಕೊಂಡಿದ್ದ ಸಂವಿಧಾನವನ್ನು ರದ್ದು ಮಾಡಿ ತನ್ನದೇ ಆದ ಹೊಸ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳಿರುವ “ದಿ ಗ್ರೀನ್ ಬುಕ್” ಪ್ರಕಟಿಸಿ ಅದರನುಸಾರ ಆಡಳಿತ ನಡೆಸಿದ. ಗಡಾಫಿಯ ಆಡಳಿತದಲ್ಲಿ ಲಿಬಿಯಾ ಅಪಾರ ಪ್ರಗತಿ ಸಾಧಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಲಿಬಿಯಾ ಮೊದಲ ಸ್ಥಾನದಲ್ಲಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು. &lt;br /&gt;&lt;a href="http://2.bp.blogspot.com/-0QcXM6kaHlQ/TqFQFvck_VI/AAAAAAAAAb4/VkuqhG4qabc/s1600/5632493844_a438b36c6e_s.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 75px; height: 75px;" src="http://2.bp.blogspot.com/-0QcXM6kaHlQ/TqFQFvck_VI/AAAAAAAAAb4/VkuqhG4qabc/s320/5632493844_a438b36c6e_s.jpg" border="0" alt=""id="BLOGGER_PHOTO_ID_5665897865774693714" /&gt;&lt;/a&gt;&lt;br /&gt;&lt;br /&gt;ಲಿಬಿಯಾದ ಕುರಿತಂತೆ ಹೊರಜಗತ್ತಿನಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಐರ್ಲಂಡ್ ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ತಿಯಲ್ಲಿಟ್ಟಿತ್ತು. 1986ರಲ್ಲಿ ಬರಿನ್ ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಲಿಬಿಯಾದ ಮೇಲೆ ಬಾಂಬ್ ದಾಳಿ ನಡೆಸಿತ್ತು. 1988ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಪಾನ್ ಅಮ್ ವಿಮಾನದಲ್ಲಿ ಬಂಬಿಟ್ತ ಅರೋಪವೂ ಲಿಬಿಯಾದ ಮೇಲಿತ್ತು. ಬಹುಕಾಲ ಇದನ್ನು ಗಡಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾವನ್ನು ವಿಶ್ವಸಂಸ್ಥೆ ನಿಷೇಧಕ್ಕೆ ಗುರಿಪಡಿಸಿತ್ತು. 2003ರಲ್ಲಿ ಈ ಅಪರಾಧ ಒಪ್ಪಿಕೊಂಡು ಮೃತರಿಗೆ ಪರಿಹಾರ ಕೊಟ್ಟದ್ದು ಈಗ ಇತಿಹಾಸ.&lt;br /&gt;&lt;a href="http://1.bp.blogspot.com/-wtAL__2QkBI/TqFOKqNbNxI/AAAAAAAAAbI/LMcACGQ2KHo/s1600/muammaralgaddafidzdnwurxm43m.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 213px;" src="http://1.bp.blogspot.com/-wtAL__2QkBI/TqFOKqNbNxI/AAAAAAAAAbI/LMcACGQ2KHo/s320/muammaralgaddafidzdnwurxm43m.jpg" border="0" alt=""id="BLOGGER_PHOTO_ID_5665895751245051666" /&gt;&lt;/a&gt;&lt;br /&gt;&lt;br /&gt;1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲ ಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಇತರೆ ತೈಲ ರಾಷ್ಟ್ರಗಳಿಗೂ ಸಹ ತನ್ನ ನೀತಿಯನ್ನೇ ಅನುಸರಿಸಿ ಎಂದು ಗಡಾಫಿ ಸಲಹೆಯನ್ನಿತ್ತ. ಪರಿಣಾಮವಾಗಿ ಈ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಲಿಬಿಯಾದಲ್ಲಿ ಹೇರಳ ತೈಲ ಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದ. ಹೀಗಾಗಿ ಲಿಬಿಯಾ ಬಹಳ ಬೇಗನೆ ಜಗತ್ತಿನ ಭೂಪಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಮಿಂಚತೊಡಗಿತು.  &lt;br /&gt;&lt;br /&gt;ನಾನು ಇವನ್ನೆಲ್ಲಾ ಈತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶಿಲನಾಗಿದ್ದ, ಚಾಣಾಕ್ಷನಾಗಿದ್ದ ಎಂದು ತೋರಿಸಲು ಹೇಳಿದೆ. ಹಾಗಾದರೆ ಇನ್ನು ಲಿಬಿಯಾದ ಅಧ್ಯಕ್ಷನಾಗಿ ಆತ ಲಿಬಿಯನ್ನರಿಗೆ ಮಾಡಿದ್ದೇನು ಎಂಬುದನ್ನು ಹೇಳಿದರೆ ಅಲ್ಲಿ ನಿಜಕ್ಕೂ ಕ್ರಾಂತಿಯೊಂದರ ಅವಶ್ಯಕತೆಯಿತ್ತೆ? ಅದು ಗಡಾಫಿಯ ಹತ್ಯೆಯಲ್ಲಿ ಕೊನೆಯಾಗಬೇಕಿತ್ತೆ? ಖಂಡಿತ ಇದರ ಹಿಂದೆ ಅಮೆರಿಕಾದ ಕೈವಾಡವಿದೆಯಲ್ಲವೆ? ಎಂದು ನಿಮಗನಿಸಿದರೆ ಆಶ್ಚರ್ಯವಿಲ್ಲ. ದೂರದಲ್ಲಿ ಕುಳಿತಕೊಂಡ ನಾವೆಲ್ಲರೂ ಗಡಾಫಿ ಬಗ್ಗೆ ಆತ ಒಬ್ಬ ಕೄರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ ಎಂದು ಇನ್ನೂ ಏನೇನೋ ಆತನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಇವು ಅರ್ಧ ಸತ್ಯ. ಅರ್ಧ ಸುಳ್ಳು. ಹಾಗೆ ನೋಡಿದರೆ ಗಡಾಫಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕೄರಿಯಾಗಿದ್ದನೆ ಹೊರತು ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕೄರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ ಯಾವತ್ತೂ ಆಗಿರಲಿಲ್ಲ. ಇದು ನಾನು ಲಿಬಿಯಾದಲ್ಲಿ ಮೂರೂವರೆ ವರ್ಷ ಇದ್ದು ಕಂಡುಕೊಂಡ ಸತ್ಯ. ಹಾಗೆ ಒಂದು ವೇಳೆ ಆತ ಅಷ್ಟೊಂದು ಕೄರಿಯಾಗಿದ್ದರೆ ಅಥವಾ ಕೆಟ್ಟ ಆಡಳಿತ ನಡೆಸಿದ್ದರೆ ಆತ 42 ವರ್ಷಗಳ ಕಾಲ ಆಳ್ವಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಸರಿಯಾಗಿ ಅಂತರಾಷ್ಟ್ರೀಯ ಚಾನೆಲ್ಗಂಳಾದ ಬಿ.ಬಿ.ಸಿ. ಮತ್ತು ಆಲ್ಜೇಜಿರಾಗಳು ಗಡಾಫಿಯನ್ನು ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ಇದು ಮುಂಚಿನಿಂದಲೂ ಲಿಬಿಯಾದ ತೈಲ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟ  ಅಮೆರಿಕನ್ನರಿಗೆ ಲಿಬಿಯಾದ ಮೇಲೆ ಹಿಡಿತ ಸಾಧಿಸಲು ಮತ್ತಷ್ಟು ಅನುಕೂಲವನ್ನು ಮಾಡಿಕೊಟ್ಟಿತು. &lt;br /&gt;&lt;a href="http://3.bp.blogspot.com/-bUpBSsWv7_s/TqFO7G0rvGI/AAAAAAAAAbg/O9U2_icC-vg/s1600/gaddafi.gif"&gt;&lt;img style="display:block; margin:0px auto 10px; text-align:center;cursor:pointer; cursor:hand;width: 250px; height: 272px;" src="http://3.bp.blogspot.com/-bUpBSsWv7_s/TqFO7G0rvGI/AAAAAAAAAbg/O9U2_icC-vg/s320/gaddafi.gif" border="0" alt=""id="BLOGGER_PHOTO_ID_5665896583559625826" /&gt;&lt;/a&gt;&lt;br /&gt;&lt;br /&gt;&lt;br /&gt;ಗಡಾಫಿ ಒಬ್ಬ ತಿಕ್ಕಲು ಸರ್ವಾಧಿಕಾರಿಯಾದರೂ ಆತ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದ. ಇಡಿ ಆಫ್ರಿಕಾ ಖಂಡದಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಲಿಬಿಯಾವನ್ನು ಮುಂಚೂಣಿಯಲ್ಲಿಟ್ಟಿದ್ದ. ನೆರೆ ರಾಷ್ಟ್ರಗಳಾದ ಟ್ಯುನಿಶಿಯಾದಲ್ಲಿ, ಈಜಿಪ್ಟ್ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸಿದ್ದೆವು. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ಒಂದು ವೇಳೆ ಅವರ ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದೆ ಹೋದರೆ ಅವರಿಗೆ ಆಯಾ ಹುದ್ದೆಗೆ ನಿಗದಿಪಡಿಸಿದಷ್ಟು ಸಂಬಳವನ್ನು ಕೆಲಸ ಸಿಗುವವರಿಗೂ ಪ್ರತಿ ತಿಂಗಳು ನೀಡುತ್ತಿದ್ದ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದ. ಜೊತೆಗೆ ಅವರು ಓದು ಮುಗಿಸುವವರೆಗೂ ಅವರ ವಸತಿ ಮತ್ತು ಕಾರಿನ ಖರ್ಚುವೆಚ್ಚವನ್ನು ಅವನೇ ಭರಿಸುತ್ತಿದ್ದ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಿದ್ದ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತಿತ್ತು.&lt;br /&gt;&lt;br /&gt;ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36-37 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಬಡ್ಡಿರಹಿತ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ (ಅಸಲನ್ನು) ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಿದ್ದರು. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುತ್ತಿರಲಿಲ್ಲ. ಕಾರುಗಳನ್ನು ಫ್ಯಾಕ್ಟರಿಗಳು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡುತ್ತಿದ್ದ. &lt;br /&gt;&lt;br /&gt;ಆತನ ಆಡಳಿತದಲ್ಲಿ ಲಿಬಿಯಾ ದೇಶ ಯಾರಿಂದಲೂ ಒಂದು ಪೈಸೆಯಷ್ಟು ಸಾಲ ತೆಗೆದುಕೊಂಡಿರಲಿಲ್ಲ. ಒಬ್ಬೇ ಒಬ್ಬ ಭಿಕ್ಷುಕನನ್ನು ಅಲ್ಲಿ ಕಾಣುವಂತಿರಲಿಲ್ಲ. ಹಾಗೆ ಒಂದು ವೇಳೆ ಕಂಡರೆ ಅವರು ಲಿಬಿಯಾದ ಭಿಕ್ಷುರಲ್ಲ. ಬದಲಾಗಿ, ಅವರು ಈಜಿಪ್ಟ್ ಅಥವಾ ನೈಜರ್, ನೈಜಿರೀಯಾ ದೇಶದ ಭಿಕ್ಷುಕರಾಗಿರುತ್ತಾರೆ. ಹೆಣ್ಣುಮಕ್ಕಳ ವಿಷಯದಲ್ಲಿ ಕೂಡ ಗಡಾಫಿ ಔದಾರ್ಯವನ್ನು ತೋರಿಸಿದ್ದ. ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿರಲಿಲ್ಲ. ಅವರಿಗೆ ಎಲ್ಲ ರಂಗಗಳಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ದುರಂತವೆಂದರೆ ಜಗತ್ತಿನ ಎಲ್ಲ ಪತ್ರಿಕೆಗಳು, ಟೀವಿ ಚಾನಲ್ ಗಳು ಮತ್ತು ಇತರೆ ಮಾಧ್ಯಮಗಳು ಆತ ಲಿಬಿಯನ್ನರಿಗೆ ಕೊಟ್ಟ ಸೌಲತ್ತುಗಳನ್ನಾಗಲಿ ಅಥವಾ ಆತನ ಇನ್ನೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನಾಗಲಿ ಯಾವತ್ತೂ ಮಾಡಲೇ ಇಲ್ಲ.  &lt;br /&gt;&lt;br /&gt;ಗಡಾಫಿ ಯಾವತ್ತೂ IMFನಿಂದಾಗಲಿ, ವರ್ಲ್ದ್ ಬ್ಯಾಂಕಿನಿಂದಾಗಲಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಲಿಬಿಯಾವನ್ನು ಆರ್ಥಿಕವಾಗಿ ಆದಷ್ಟೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ, ತೈಲ ಉತ್ಪನ್ನ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡಿದ ಹಣವನ್ನು ಡಾಲರ್ ಗಳಲ್ಲಾಗಲಿ, ಯೂರೋಗಳಾಲ್ಲಗಲಿ ಸ್ವೀಕರಿಸಬೇಡಿ ಬದಲಾಗಿ ಚಿನ್ನದ ರೂಪದಲ್ಲಿ ಸ್ವೀಕರಿಸಿ ಎಂದು ಹೇಳಿದ್ದ. ಆದರೆ ಅಮೆರಿಕಾವೂ ಸೇರಿದಂತೆ ಬೇರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲವನ್ನು ಕೊಳ್ಳುವಷ್ಟು ಚಿನ್ನವಿರಲಿಲ್ಲ. ಒಂದು ವೇಳೆ ಗಡಾಫಿ ಹೇಳಿದಂತೆ ಚಿನ್ನ ಕೊಟ್ಟು ತೈಲವನ್ನು ಕೊಂಡುಕೊಂಡಿದ್ದರೆ ಈ ಎಲ್ಲ ರಾಷ್ಟ್ರಗಳು ದಿವಾಳಿಯೇಳುವ ಸಂಭವವಿತ್ತು. ಇದೇ ಗಡಾಫಿಯ ಹತ್ಯೆಗೆ ಮೂಲ ಕಾರಣವಾಯಿತು. ಇದೆಲ್ಲದಕ್ಕೆ ಅಲ್ಲಿ ಎದ್ದ ಕ್ರಾಂತಿಯೊಂದು ನೆಪವಾಯಿತಷ್ಟೆ. ಸದಾ ತನ್ನ ಹಿತಾಸಕ್ತಿಯ ಬಗ್ಗೆಯೇ ಯೋಚಿಸುತ್ತಲೇ ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಾದ ಪರಮನೀಚತನಕ್ಕೆ ಕೊನೆಯಾದರು ಇದೆಯೇ?       &lt;br /&gt;&lt;a href="http://2.bp.blogspot.com/-YC4mio8CoHg/TqFOgAai03I/AAAAAAAAAbU/Ov-8jX_7Nwg/s1600/colonel-gaddafi-pic-afp-philippe-desmazes-706376664.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 208px;" src="http://2.bp.blogspot.com/-YC4mio8CoHg/TqFOgAai03I/AAAAAAAAAbU/Ov-8jX_7Nwg/s320/colonel-gaddafi-pic-afp-philippe-desmazes-706376664.jpg" border="0" alt=""id="BLOGGER_PHOTO_ID_5665896117982909298" /&gt;&lt;/a&gt;&lt;br /&gt;&lt;br /&gt;&lt;br /&gt;ಏನಾದರಾಗಲಿ 42 ವರ್ಷ ಲಿಬಿಯಾದ ಅವಿಭಾಜ್ಯ ಅಂಗವೇ ಆಗಿದ್ದ ಗಡಾಫೆ ಈಗ ಅಲ್ಲಿಲ್ಲ. ಅವನಿಲ್ಲದ ಲಿಬಿಯಾ ಹೇಗಿರುತ್ತದೆ? ಅವನ ನಂತರದ ದಿನಗಳು ಹೇಗಿರುತ್ತವೆ? ಮುಂದೇನಾಗಬಹುದು? ಲಿಬಿಯಾವನ್ನು ಸಂಕ್ರಮಣ ಕಾಲಘಟ್ಟಕ್ಕೆ ತಂದು ನಿಲ್ಲಿಸುರುವ NTC (National Transition Council) ಲಿಬಿಯಾದ ಜನತೆಗೆ ಗಡಾಫಿ ಕೊಟ್ಟ ಆಡಳಿತವನ್ನೇ ಮುಂದುವರಿಸುತ್ತದೆಯೇ? ಅಥವಾ ಅವನಿಗಿಂತ ಚನ್ನಾಗಿ ನಡೆಸುತ್ತದೆಯೆ? ಅಥವಾ ಇರಾಕಿನಂತೆ, ಅಫಘಾನಿಸ್ತಾದಂತೆ ಲಿಬಿಯಾ ಸಹ ಅಮೆರಿಕಾದ ಕೈಗೊಂಬೆಯಾಗಿ ಉಳಿಯುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಒಟ್ಟಿನಲ್ಲಿ ಗಡಾಫಿಯ ಸಾವನ್ನು ಲಿಬಿಯಾ ದೇಶದ ದುರಂತವೆನ್ನಬೇಕೋ ಅಥವಾ ಕಾಲದ ವ್ಯಂಗ್ಯವೆನ್ನಬೇಕೋ ತಿಳಿಯುತ್ತಿಲ್ಲ.&lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;&lt;br /&gt;ಈ ಲೇಖನ ಇವತ್ತಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಇದರ ಲಿಂಕ್ ಇಲ್ಲಿದೆ http://kendasampige.com/article.php?id=4828&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-2594295290828955328?l=bisilahani.blogspot.com' alt='' /&gt;&lt;/div&gt;</content><link rel='enclosure' type='' href='http://kendasampige.com/article.php?id=4828' length='0'/><link rel='replies' type='application/atom+xml' href='http://bisilahani.blogspot.com/feeds/2594295290828955328/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/10/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/2594295290828955328'/><link rel='self' type='application/atom+xml' href='http://www.blogger.com/feeds/2802103225554897449/posts/default/2594295290828955328'/><link rel='alternate' type='text/html' href='http://bisilahani.blogspot.com/2011/10/blog-post.html' title='ಮಹಾಪತನ'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-jszP04cz-SQ/TqFNbeJdYRI/AAAAAAAAAaw/o-Tb8sQcv_M/s72-c/1319170716.jpg' height='72' width='72'/><thr:total>0</thr:total></entry><entry><id>tag:blogger.com,1999:blog-2802103225554897449.post-5427520168010915137</id><published>2011-10-02T12:06:00.005+01:00</published><updated>2011-10-09T10:59:07.191+01:00</updated><title type='text'>ಕಾಡಿಗೆ ಎದುರಾಗಿ ನಿಂತ ಹುಡುಗಿ - ಭಾಗ 1</title><content type='html'>ನನಗೆ ವಿಮಾನ ಹಾರಾಟವೆಂದರೆ ಬಲು ಇಷ್ಟ. ನಾನು ಈಗಾಗಲೇ ಬಹಳಷ್ಟು ಸಾರಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ನನಗೆ ವಿಮಾನವೆಂದರೆ ಒಂಚೂರು ಹೆದರಿಕೆಯೆನಿಸುತ್ತಿರಲಿಲ್ಲ. ಹೀಗಾಗಿ ಲೀಮಾದಲ್ಲಿ ನಾನು ನನ್ನ ತಾಯಿಯೊಡನೆ ವಿಮಾನದೊಳಕ್ಕೆ ಕುಳಿತಂತೆ ನನಗೆ ನಿರಾತಂಕವೆನಿಸಿತು. ಅದು ಕ್ರಿಸ್ಮಸ್ ಮುನ್ನಾ ದಿನ. ನಾವು ಪುಕಲ್ಪಾದಲ್ಲಿ ಕಾಡಿನಿಂದಾಚೆಯಿರುವ ನನ್ನ ತಂದೆಯನ್ನು ನೋಡಲು ಹೋಗುತ್ತಿದ್ದೆವು. ನಮಗೆ ಈಗಾಗಲೇ ನನ್ನ ತಂದೆ ಹಬ್ಬಕ್ಕಾಗಿ ಕ್ರಿಸ್ಮಸ್ ಗಿಡವನ್ನು ತಯಾರಿಸಿಟ್ಟುಕೊಂಡು ನಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದಾರೆಂದು ತಿಳಿದಿತ್ತು. &lt;br /&gt;&lt;br /&gt;ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ನಮ್ಮ ವಿಮಾನ ’ಲಾಕ್-ಹೀಡ್ ಎಲೆಕ್ಟ್ರಾ’ 11.15 ಆದರೂ ಇನ್ನೂ ಹೊರಡದೇ ಇದ್ದದ್ದು ನಂಗೆ ಒಂಚೂರು ಬೇಸರ ಮೂಡಿಸಲಿಲ್ಲ. ಏಕೆಂದರೆ ಪೆರುವಿನಲ್ಲಿ ವಿಮಾನಗಳು ಸಮಯಕ್ಕೆ ಸರಿಯಾಗಿ ಹೊರಡುವದು ತುಂಬಾ ಅಪರೂಪವಾಗಿದ್ದರಿಂದ ನನಗದು ಒಗ್ಗಿಹೋಗಿತ್ತು. ವಿಮಾನದಲ್ಲಿ ಒಟ್ಟು 80 ಜನ ಪ್ರಯಾಣಿಕರಿದ್ದರು. ಆದರೆ ನಾನು ಅದ್ಹೇಗೋ 19ನೇ ಸಾಲಿನಲ್ಲಿರುವ ಬಲಬದಿಯ ಕಿಟಕಿ ಪಕ್ಕದ ಆಸನವನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾದೆ. ಎಲ್ಲವೂ ಸಹಜವಾಗಿಯೇ ಇತ್ತು: ವಿಮಾನ ನೆಲದಿಂದ ಮೇಲಕ್ಕೆ ಹಾರುವದು, ಪೆಸಿಫಿಕ್ ಸಾಗರದ ಮೇಲೆ ಸುತ್ತು ಹಾಕುವದು, ನಿಧಾನಕ್ಕೆ ಎತ್ತರ ಹೆಚ್ಚಿಸಿಕೊಳ್ಳುವದು, ಆಂಡೀಸ್ ಪರ್ವತಗಳನ್ನು ದಾಟುವದು, ಮಧ್ಯಾಹ್ನದ ಊಟ ಹಾಗೂ ಗಗನ ಸಖಿಯರ ನಗುಮುಖಗಳು.........ಹೀಗೆ ಎಲ್ಲವೂ ಸುಗಮವಾಗಿತ್ತು. ನಾವು ಹಿಮದಿಂದಾವೃತವಾದ ಆಂಡೀಸ್ ಪರ್ವತ ಶಿಖರಗಳನ್ನೂ ಹಾಗೂ ಪೂರ್ವದುದ್ದಕ್ಕೂ ಚಾಚಿಕೊಂಡು ನಿಂತಿರುವ ದಟ್ಟ ಕಾಡುಗಳನ್ನೂ ನೋಡುತ್ತಾ ಕುಳಿತೆವು. ಸ್ವಲ್ಪ ಹೊತ್ತಿನ ನಂತರ ಗಗನ ಸಖಿಯರು ಮಂದಹಾಸ ಬೀರುತ್ತಾ ಊಟದ ತಟ್ಟೆಗಳನ್ನು ಎತ್ತಲು ಬಂದರು. ಅಷ್ಟೊತ್ತಿಗಾಗಲೆ ಕೆಲವು ಪ್ರಯಾಣಿಕರು ನಿದ್ರೆ ಹೋಗಿದ್ದರು.&lt;br /&gt; &lt;br /&gt;ಲೀಮಾದಿಂದ ಪುಕಲ್ಪಾದವರಿಗೆ ವಿಮಾನ ಪ್ರಯಾಣದ ಸಮಯ ಕೇವಲ ಒಂದು ಗಂಟೆಯಷ್ಟೆ. ಹೊರಗಡೆ ಯಾವುದೇ ಮಂಜಿನ ಮುಸುಕಗಳಿಲ್ಲದೆ ಎಲ್ಲವೂ ನಿಚ್ಛಳವಾಗಿದ್ದರೆ ಜಗತ್ತಿನಲ್ಲಿಯೇ ಈ ವಿಮಾನ ಹಾರಾಟ ಅತ್ಯಂತ ನಯನ ಮನೋಹರವಾಗಿರುತ್ತದೆ. ಆದರೆ ಹಾರಾಟ ಆರಂಭಿಸಿ ಅರ್ಧ ಗಂಟೆಯೊಳಗೆ ಹೊರಗಿನ ದೃಶ್ಯಗಳೆಲ್ಲವೂ ಮಂಕಾದವು. ಇದ್ದಕ್ಕಿದ್ದಂತೆ ನಾವು ಕುಳಿತ ವಿಮಾನ ಕುಲುಕಾಡತೊಡಗಿತು. ಆ ಕುಲುಕಾಟ ರಭಸವಾಗುತ್ತಿದ್ದಂತೆ ನಮಗೆಲ್ಲರಿಗೂ ಸೀಟು ಬೆಲ್ಟುಗಳನ್ನು ಬಿಗಿದುಕೊಳ್ಳುವಂತೆ ಸೂಚನೆ ನೀಡಲಾಯಿತು. ಆಗಲೂ ಸಹ ನಾನು ಎದೆಗುಂದಲಿಲ್ಲ. ಏಕೆಂದರೆ ಈ ರೀತಿಯ ಹವಾಮಾನ ಪ್ರಕ್ಷುಬ್ಧತೆ ಪರ್ವತಗಳು ಪೂರ್ವ ದಿಕ್ಕಿನೆಡೆಗೆ ಬಾಗಿ ಚಾಚಿಕೊಂಡಿರುವ ಕಡೆಯಲ್ಲೆಲ್ಲಾ ಸರ್ವೇ ಸಾಮಾನ್ಯವೆಂದು ನನಗೆ ಗೊತ್ತಿತ್ತು. &lt;br /&gt;ಇದ್ದಕ್ಕಿದ್ದಂತೆ ನಮ್ಮ ಕಿಟಕಿಗಿ ಅಡ್ದಲಾಗಿ ಮಳೆ ಪಟಪಟನೆ ಬೀಳತೊಡಗಿತು. ಈಗ ವಿಮಾನ ಲಂಬವಾಗಿ ಚಲಿಸತೊಡಗಿತು. ಮೊಟ್ಟಮೊದಲಬಾರಿಗೆ ವಿಮಾನದಲ್ಲಿದ್ದ ಪ್ರಯಾಣಿಕರು ಕಿರುಚಿದರು. &lt;br /&gt;&lt;br /&gt;ನಾನು ಕಿಟಕಿಯಿಂದಾಚೆ ಮೋಡಗಳಲ್ಲಿ ಮಿಂಚಿ ಮರೆಯಾದ ಕೋಲ್ಮಿಂಚೊಂದನ್ನು ನೋಡಿದೆ. ಅದು ತೀರಾ ಅಪಾಯಕಾರಿ ಎನಿಸುವಷ್ಟರಮಟ್ಟಿಗೆ ನಮಗೆ ಹತ್ತಿರದಲ್ಲಿತ್ತು. ನಾವು ಪುಕಾಲ್ಪವನ್ನು ಬಹಳ ಸಮಯದ ಹಿಂದೆಯೇ ಸೇರಿರಬೇಕಾಗಿತ್ತು. ಆದರೆ ಇನ್ನೂ ಹೋಗುತ್ತಲೇ ಇದ್ದೆವು. ಮತ್ತೆ ವಿಮಾನದ ಕುಲುಕಾಟ ತೀವ್ರವಾಯಿತು. ಈಗ ಮತ್ತಷ್ಟು ಕಿರಿಚಾಟಗಳು ಕೇಳಿಸಿದವು. ಈ ಸಾರಿ ಅದು ಮೊದಲಿಗಿಂತ ಜೋರಾಗಿತ್ತು. ಹಿಂದೆಯೇ ರ್ಯಾಕಿನಲ್ಲಿಟ್ಟಿದ್ದ ಕೆಲವು ಹ್ಯಾಂಡ್ ಲಗೇಜುಗಳು ಕೆಳಗೆ ಬಿದ್ದವು.  &lt;br /&gt;&lt;br /&gt;“ಇದೇ ಕೊನೆ”  ನನ್ನ ಅಮ್ಮ ಹೇಳಿದಳು. ಅಮ್ಮ, ಒಮ್ಮೆ ಅಮೆರಿಕಾದಲ್ಲೆಲ್ಲೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಬಿರುಗಾಳಿಗೆ ಸಿಕ್ಕು ಭಾರಿ ಹೊಯ್ದಾಟಕ್ಕೆ ಸಿಲುಕಿದ್ದಳು. ಅಂದಿನಿಂದ ಅವಳಿಗೆ ವಿಮಾನವೆಂದರೆ ಭಯವಿದ್ದೇ ಇತ್ತು. ಆದರೆ ಈ ಸಾರಿ ಅವಳಿಗೆ ಗಾಬರಿಯಾಗಿದ್ದು ವಿಮಾನದ ಹೊಯ್ದಾಟದಿಂದಲ್ಲ. ಆದರೆ ಅದಕ್ಕೆ ತಗುಲಿಕೊಂಡಿರುವ ಬೆಂಕಿಯಿಂದ. &lt;br /&gt; &lt;br /&gt;ನಾನು ವಿಮಾನದ ಬಲಭಾಗದ ರೆಕ್ಕೆಯಿಂದ ಹೊರಹೊಮ್ಮುವ ಶುಭ್ರ ಹಳದಿ ಬೆಂಕಿಯ ಜ್ವಾಲೆಗಳನ್ನು ನೋಡಿದೆ. ನನ್ನ ಅಮ್ಮನನ್ನೂ ನೋಡಿದೆ. ಅವಳು ಭಯದಿಂದ ನಡಗುತ್ತಿದ್ದಳು. ಅದೇ ವೇಳೆಗೆ ವಿಮಾನ ಒಮ್ಮೆ ಭಯಂಕರವಾಗಿ ಕುಲುಕಿತು. ಅಷ್ಟೆ, ಮರುಕ್ಷಣ ನಾನು ವಿಮಾನದೊಳಗಿಲ್ಲ ಎಂಬ ಅರಿವಾಯಿತು. ನಾನು ವಿಮಾನದ ಹೊರಗೆ ನನ್ನ ಸೀಟಿನಲ್ಲಿ ಕುಳಿತುಕೊಂಡು ತೆರೆದ ಗಾಳಿಯಲ್ಲಿ ಹಾರಾಡುತ್ತಿದ್ದೆ. &lt;br /&gt;&lt;br /&gt;&lt;a href="http://1.bp.blogspot.com/-Y2Sptl_KUZ4/TohGU5DTlYI/AAAAAAAAAag/m4xTi8dsJk8/s1600/koepcke3.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 267px; height: 320px;" src="http://1.bp.blogspot.com/-Y2Sptl_KUZ4/TohGU5DTlYI/AAAAAAAAAag/m4xTi8dsJk8/s320/koepcke3.jpg" border="0" alt=""id="BLOGGER_PHOTO_ID_5658850256517043586" /&gt;&lt;/a&gt;&lt;br /&gt;&lt;br /&gt;ನಂಗಿನ್ನೂ ಚನ್ನಾಗಿ ನೆನಪಿದೆ-ನಾನು ಬಿಗಿಯಾಗಿ ಸೀಟು ಬೆಲ್ಟನ್ನು ಬಿಗಿದುಕೊಂಡಿದ್ದರಿಂದ ನನ್ನ ಹೊಟ್ಟೆ ಒತ್ತಿದಂತಾಗಿ ನನಗೆ ಉಸಿರಾಡಲಾಗುತ್ತಿರಲಿಲ್ಲ. ಜೊತೆಗೆ ನಾನು ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ಕೆಳಗೆ ಬೀಳುತ್ತಿದ್ದನೆಂದು ಅರಿವಾಯಿತು. ಹಾಗೆ ಎತ್ತರದಿಂದ ಗಿರಗಿರನೆ ಕೆಳಗೆ ಬೀಳುವಾಗ ನನ್ನ ಕೆಳಗಿರುವ ಕಾಡಿನ ಮರಗಳು ಕಾಲಿಫ್ಲವರಿನಂತೆ, ಬಹಳಷ್ಟು ಕಾಲಿಫ್ಲವರಿನಂತೆ ವೃತ್ತಾಕಾರವಾಗಿ ಸುತ್ತುತ್ತಿವೆ ಎಂಬಂತೆ ಭಾಸವಾದವು. ಆಮೇಲೇನಾಯಿತೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ನನಗೆ ಎಚ್ಚರ ತಪ್ಪಿತು.   &lt;br /&gt;&lt;br /&gt;ಮಾರನೆಯ ದಿನ ಮಳೆಯಿಂದಾಗಿ ನನಗೆ ಎಚ್ಚರವಾಯ್ತು. ಮಳೆ ಬಿರುಸಾಗಿ ಸುರಿಯುತ್ತಿತ್ತು. ಗುಡುಗುಗಳ ಆರ್ಭಟ ಕೇಳಿಸುತ್ತಿತ್ತು. ಬೆಳಕು ಗೋಚರಿಸುತ್ತಿತ್ತು.&lt;br /&gt;&lt;br /&gt;ನಾನು ನನ್ನ ಸೀಟಿನ ಕೆಳಗೆ ಮಲಗಿದ್ದೆ. ಆದರೆ ನನ್ನ ಪಕ್ಕದ ಸೀಟು ಖಾಲಿಯಾಗಿತ್ತು. ನನ್ನ ಅಮ್ಮನ ಬಗ್ಗೆ ಯಾವೊಂದು ಕುರುಹು ಇರಲಿಲ್ಲ. ಮಾತ್ರವಲ್ಲ, ನನ್ನ ಅಮ್ಮನ ಎಡಭಾಗಕ್ಕೆ ಕುಳಿತ ವ್ಯಕ್ತಿಯ ಬಗ್ಗೆಯೂ ಸಹ ಯಾವೊಂದು ಕುರುಹು ಕಾಣಿಸಲಿಲ್ಲ. ವಿಮಾನ ಜೋರಾಗಿ ಕುಲುಕಿದಾಗ ಅವನಿನ್ನೂ ನಿದ್ರೆ ಮಾಡುತ್ತಲೇ ಇದ್ದ. ಅಲ್ಲಿ ವಿಮಾನದ ಕುರುಹುಗಳಾಗಲಿ, ಅವಶೇಷಗಳಾಗಲಿ ನನಗೆ ಎಲ್ಲೂ ಕಾಣಿಸಲಿಲ್ಲ. ನಾನು ಒಬ್ಬಂಟಿಯಾಗಿ ಬಿದ್ದಿದ್ದೆ. ನನ್ನೊಟ್ಟಿಗೆ ವಟಗುಟ್ಟುವ ಕಪ್ಪೆಗಳು ಮತ್ತು ಜಿರ್ರಗೂಡುವ ಹುಳುಗಳ ಸದ್ದು ಮಾತ್ರ ಇದ್ದವು.&lt;br /&gt;&lt;br /&gt;ನಾನು ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದೆ. ತಕ್ಷಣ ನಾನು ಭೂಮಿಗೆ ತುಸು ಇಳಿಜಾರಾಗಿರುವ ಕಾಡೊಂದರಲ್ಲಿ ಬಿದ್ದಿರುವೆನೆಂದು ನನಗೆ ತಿಳಿಯಿತು. &lt;br /&gt;ನಿಮಗೆ ಆಶ್ಚರ್ಯವಾಗಬಹುದು. ನಾನು ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದರೂ ನನಗೆ ಅಷ್ಟಾಗಿ ಬಿದ್ದಿದ್ದೇನೆ ಅನಿಸಿರಲಿಲ್ಲ. ನನ್ನ ಸೀಟು ಬೆಲ್ಟು ಕಿತ್ತು ಹೋಗಿತ್ತು. ಜೊತೆಗೆ ನನ್ನ ಶೂ, ಕನ್ನಡಕ, ಹಾಗೂ ನನ್ನ ಅಮ್ಮ ಉಡುಗೊರೆಯಾಗಿ ಕೊಟ್ಟ ಉಂಗುರ ಎಲ್ಲವೂ ಕಳೆದುಹೋಗಿದ್ದವು. ನಾನು ಹಾಕಿಕೊಂಡಿದ್ದ ’ಹಿಪ್ಪೀ’ ಡ್ರೆಸ್ಸು ಒಂಚೂರು ಹರಿಯದೆ ಹಾಗೆ ಇದ್ದದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ನನ್ನ ಕುತ್ತಿಗೆಯ ಕೆಳಭಾಗದ ಮೂಳೆಯೊಂದು ವಿಚಿತ್ರ ರೀತಿಯಲ್ಲಿ ಹೊರಚಾಚಿಕೊಂಡಿತ್ತು. ಮೊದಮೊದಲು ನಾನದನ್ನು ನನ್ನ ಶರ್ಟಿನ ಕಾಲರ್ ಇರಬಹುದೆಂದುಕೊಂಡೆ. ಆಮೇಲೆ ಅದು ಕುತ್ತಿಗೆಯ ಕೆಳಭಾಗದ ಮೂಳೆಯೆಂದು ಖಾತ್ರಿಯಾಯಿತು. ನನ್ನ ಒಂದು ಕಣ್ಣು ಊದಿಕೊಂಡಿತ್ತು. ತಲೆಯ ಮೇಲೆ ಹೊಡೆತ ಬಿದ್ದಿತ್ತು ಹಾಗೂ ಪಾದದ ಮೇಲೆ ಸಣ್ಣ ಗಾಯವಾಗಿತ್ತು. ನಂಗೆ ನೋವಿರಲಿಲ್ಲ. ಆದರೆ ಏಳಲು ಹಾಗು ಎದ್ದು ಸುತ್ತಮುತ್ತ ನೋಡಲು ನನ್ನಲ್ಲಿ ಎಳ್ಳಷ್ಟೂ ಶಕ್ತಿ ಇರಲಿಲ್ಲ. ಹೀಗಾಗಿ ನಾನು ಇಡಿ ರಾತ್ರಿಯನ್ನು ಅರೆ ನಿದ್ರೆ, ಅರೆ ಎಚ್ಚರದಲ್ಲಿ ಕಳೆದೆ. &lt;br /&gt;&lt;br /&gt;ಮರುದಿವಸ ಬೆಳಿಗ್ಗೆ ಎದ್ದೆ. ಒಂದು ಕ್ಷಣ ನನ್ನ ತಲೆ ತಿರುಗಿದಂತೆ ಭಾಸವಾಯಿತು. ಆದರೂ ಸಾವರಿಸಿಕೊಂಡು ನನ್ನ ಬಳಿಯಲ್ಲಿ ಬಿದ್ದಿದ್ದ ಪಾರ್ಸಲ್ಲೊಂದನ್ನು ಗಮನಿಸಿದೆ. ಅದನ್ನು ತೆರೆದು ನೋಡಿದರೆ ಅದರೊಳಗೆ ಒಂದು ಕೇಕು ಹಾಗೂ ಕೆಲವು ಆಟಿಕೆ ಸಾಮಾನುಗಳಿದ್ದವು. ಆ ಕೇಕು ಅವತ್ತು ಕ್ರಿಸ್ಮಸ್ ದಿನವೆಂದು ಜ್ಞಾಪಿಸಿತು. ನನಗೆ ನನ್ನ ಅಪ್ಪ ಮತ್ತು ಅವನ ಕ್ರಿಸ್ಮಸ್ ಗಿಡ ನೆನಪಾಯಿತು. ತಕ್ಷಣ ನಾನು ನಿರ್ಧರಿಸಿದೆ; ಬಹುಶಃ ಅಪ್ಪ, ಅದಾಗಲೇ ಅವನ ಹೆಂಡತಿಯನ್ನು ಕಳೆದುಕೊಂಡಾಗಿದೆ. ಆದರೆ ಅವನು ತನ್ನ ಮಗಳನ್ನೂ ಸಹ ಕಳೆದುಕೊಳ್ಳುವಂತಾಗಬಾರದು-ಅದಕ್ಕೋಸ್ಕರವಾದರೂ ನಾನು ಬದುಕಲೇ ಬೇಕು.  &lt;br /&gt;&lt;br /&gt;ನನ್ನ ಅಪ್ಪ-ಅಮ್ಮ ನನಗೆ ಈ ಮೊದಲೇ ಕಾಡಿನ ಗಂಡಾಂತರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿವಳಿಕೆ ಕೊಟ್ಟಿದ್ದರು-ಉದಾಹರಣೆಗೆ ದೊಡ್ಡ ದೊಡ್ದ ಪ್ರಾಣಿಗಳಾದ ಓಸ್ಲಾಟ್, ಜಾಗೂರ್, ಅಥವಾ ಟೇಪ್ರೀಸ್ ಅಂಥ ಅಪಾಯಕಾರಿಯಲ್ಲ ಆದರೆ ಸಣ್ಣ ಸಣ್ಣ ಹುಳುಹುಪ್ಪಡಿಗಳಾದ ಜೇಡರಹುಳು, ಇರುವೆಗಳು, ನೊಣಗಳು, ಸೊಳ್ಳೆಗಳು ತುಂಬಾ ಅಪಾಯಕಾರಿಯೆಂದು. ಜೊತೆಗೆ ಒಂದು ವೇಳೆ ಕಾಡಿನಲ್ಲಿ ಕಳೆದುಹೋದರೆ ಮೊದಲು ನದಿಯೊಂದನ್ನು ಕಂಡುಹಿಡಿಯಲು ಪ್ರಯತ್ನಪಡಬೇಕು. ಏಕೆಂದರೆ ನದಿಯ ದಂಡೆಗುಂಟ ಮರ ಕಡಿಯುವ ಕೊನಿಬೋ, ಶಿಪಿಬೋ, ಕ್ಯಾಕ್ಟೈಬೋ, ಜನಾಂಗಕ್ಕೆ ಸೇರಿದ ರೆಡ್ ಇಂಡಿಯನ್ನರು ಅಲ್ಲಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಲ್ಲವೇ ಬೇಸಾಯ ಮಾಡಿಕೊಂಡಿರುವ ಬಿಳಿಯರು ಕಾಣಸಿಗುತ್ತಾರೆ. ನದಿಗಳೇ ಅವರ ರಸ್ತೆಗಳು. ಕೊನೆಗೆ ಈ ಎಲ್ಲ ರಸ್ತೆಗಳು ರಿಯೊ ಉಕ್ಯಾಲಿ ಎಂಬ ನದಿಗುಂಟ ಇರುವ ದೊಡ್ಡ ರಸ್ತೆಗೆ ಬಂದು ಸೇರುತ್ತವೆ. ಮುಂದೆ ರಿಯೊ ಉಕ್ಯಾಲಿ ನದಿಯು ಹರಿದುಕೊಂಡು ಬಂದು ದೊಡ್ಡದಾದ ಅಮೇಜಾನ್ ನದಿಯನ್ನು ಸೇರುತ್ತದೆ.&lt;br /&gt;&lt;br /&gt;&lt;br /&gt;&lt;a href="http://3.bp.blogspot.com/-xxEUB-yDZjE/TohHY6b5KdI/AAAAAAAAAao/MyIe7z4txrA/s1600/koepcke7.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 217px;" src="http://3.bp.blogspot.com/-xxEUB-yDZjE/TohHY6b5KdI/AAAAAAAAAao/MyIe7z4txrA/s320/koepcke7.jpg" border="0" alt=""id="BLOGGER_PHOTO_ID_5658851425119709650" /&gt;&lt;/a&gt;&lt;br /&gt;&lt;br /&gt;ಹೀಗಾಗಿ ಮೊದಲು ನಾನು ನದಿಯೊಂದನ್ನು ಕಂಡುಹಿಡಿಯಲೇಬೇಕಿತ್ತು; ಅದರಲ್ಲೂ ರಿಯೊ ಉಕ್ಯಾಲಿ ನದಿಯನ್ನು. ಏಕೆಂದರೆ ಪುಕಲ್ಪಾ ಇದ್ದದ್ದು ಉಕ್ಯಾಲಿ ನದಿ ದಂಡೆ ಮೇಲೆ. ಅಲ್ಲಿ ನನ್ನ ಅಪ್ಪ ಕಾಯುತ್ತಿದ್ದ.&lt;br /&gt;&lt;br /&gt;ಇಲ್ಲ. ನಾನು ಆ ಕ್ರಿಸ್ಮಸ್ ಕೇಕು ತಿನ್ನಲಿಲ್ಲ. ಬರೀ ಒಂದೇ ಒಂದು ತುಂಡು ರುಚಿ ನೋಡಿದೆ. ಅದು ನೆನೆದು ಹಸಿಯಾಗಿದ್ದರಿಂದ ಅದರ ರುಚಿ ತುಂಬಾ ಕೆಟ್ಟಿತ್ತು. ಬದಲಾಗಿ, ಆ ಪಾರ್ಸಲ್ಲಿನಿಂದ ಬೇರೆ ಕೆಲವು ಸಿಹಿತಿಂಡಿಗಳ ಪೊಟ್ಟಣವನ್ನು ಹೊರತೆಗೆದು ತಿಂದೆ. ಅದು ಯಾರದೋ ಕ್ರಿಸ್ಮಸ್ ಉಡುಗೂರೆಯಾಗಿತ್ತೆಂದು ಕಾಣುತ್ತದೆ. &lt;br /&gt;&lt;br /&gt;ನನಗೆ ಅಲ್ಲೊಂದು ಕೋಲು ಸಿಕ್ಕಿತು. ಆ ಕೋಲಿನ ಸಹಾಯದಿಂದ ದಾರಿಗಾಗಿ ತಡಕಾಡುತ್ತಾ ಮತ್ತು ಆ ಹಾದಿಯಲ್ಲಿ ಯಾವುದೇ ಜೇಡ, ಇರುವೆ, ಹಾವುಗಳಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ ನಡೆಯುತ್ತಾ ಹೊರಟೆ. ಒಂದೆರೆಡು ಹೆಜ್ಜೆ ಕಿತ್ತಿಟ್ಟಿರಲಿಕ್ಕಿಲ್ಲ, ಮತ್ತೆ ತಲೆ ತಿರುಗಿತು. ಮೇಲಿಂದ ಮೇಲೆ ನಾನು ವಿಶ್ರಾಂತಿ ತೆಗೆದುಕೊಳಬೇಕಿತ್ತು. ಏಕೆಂದರೆ ಪ್ರತಿ ನಾಲ್ಕು ಹೆಜ್ಜೆಗೆ ಇಡಿ ವಿಶ್ವವೇ ಗಿರಗಿರನೆ ತಿರುಗಿದಂತೆ ಕಾಣುತ್ತಿದ್ದರಿಂದ ನನಗೆ ಏನನ್ನೂ ಗಮನವಿಟ್ಟು ನೋಡಲು ಸಾಧ್ಯವಾಗುತ್ತಿರಲಿಲ್ಲ.&lt;br /&gt;    &lt;br /&gt;ಕ್ರಮೇಣ ನನಗೆ ಅತಿ ಹತ್ತಿರದಲ್ಲೆಲ್ಲೋ ನೀರಿನ ಝುಳುಝುಳು ಶಬ್ಧ ಕೇಳಿಸಿತು. ಈ ಸಮಯದಲ್ಲಿ ನನಗೆ ಯಾವ ಶಬ್ಧವನ್ನೂ ಕೇಳಲು ಇಷ್ಟವಿರಲಿಲ್ಲ. ಆದರೆ ಈ ಶಬ್ಧ ನದಿಯೊಂದರ ಹರಿವ ಶಬ್ಧದಂತೆ ಭಾಸವಾಗಿ ಕಿವಿಗಳು ತಟ್ಟನೆ ನಿಮಿರಿದವು. ಆದರದು ನದಿಯಾಗಿರಲಿಲ್ಲ. ಅಲ್ಲಿ ನದಿಯೊಂದು ಸಣ್ಣ ಝರಿಯಾಗಿ ಮಾರ್ಪಟ್ಟಿತ್ತು ಅಷ್ಟೆ. ಅದರ ನೀರು ತಿಳಿಯಾಗಿದ್ದರಿಂದ ಅಲ್ಲಿ ಒಂದಷ್ಟು ನೀರನ್ನು ಕುಡಿದು ವಿಶ್ರಮಿಸಿದೆ. ಅಲ್ಲಿಂದ ಆ ಝರಿ ದೊಡ್ದದಾದ ಝರಿಯೊಂದಕ್ಕೆ ದಾರಿ ತೋರಿಸಲಿತ್ತು. &lt;br /&gt;&lt;br /&gt;ಪೆರುವಿನ ಕಾಡಿನಲ್ಲಿ ಹರಿಯುವ ನದಿಗಳು ನೇರವಾಗಿ ಒಂದೇ ಸರಳ ರೇಖೆಯಲ್ಲಿ ಹರಿಯುವದಿಲ್ಲ. ಅವು ವಕ್ರ ವಕ್ರವಾಗಿ ಅನೇಕ ತಿರುವುಗಳಲ್ಲಿ ಹರಿಯುತ್ತವಾದ್ದರಿಂದ ನದಿ ದಂಡೆಗುಂಟ ಸುತ್ತು ಹಾಕಿಕೊಂಡು ಮೈಲಿಗಟ್ಟಲೆ ನಡೆದರೂ ಕೊನೆಯಲ್ಲಿ ನೂರು ಗಜದಷ್ಟು ದಾರಿ ಸವೆದಿರುವದಿಲ್ಲ.  &lt;br /&gt;ಅಲ್ಲಿ ಸೊಳ್ಳೆಗಳಿದ್ದವು; ಬಿಲಿಯನ್ಗ ಟ್ಟಲೆ ನೆರೆದಿದ್ದ ಸೊಳ್ಳೆಗಳು. ಅವು ಭಯಂಕರವಾಗಿದ್ದು ಅಕ್ಷರಶಃ ನರಕವನ್ನು ತೆರೆದಿಟ್ಟಿದ್ದವು. ಇವಲ್ಲದೆ ನದಿಯ ನಡುಗಡ್ದೆಗಳಲ್ಲಿ ಹಾಗೂ ದಂಡೆಯ ಮೇಲೆ ಮೊಸಳೆಗಳಿದ್ದವು. ಅವು ಕಪಟ ಹಾಗು ಆಸೆಬುರುಕ ಮೊಸಳೆಗಳು. ಜೊತೆಗೆ ಅಲ್ಲಿ ಚೂಪು ಹಲ್ಲಿನ ಮೀನುಗಳಿದ್ದು ಅವು ಸದಾ ರಕ್ತ ಒಸರುವ ಗಾಯಗಳಿಗಾಗಿ ಹಾತೊರೆಯುತ್ತಿದ್ದವು. ನನ್ನ ಪಾದದ ಮೇಲೆ ಬೇರೆ ½ ಇಂಚು ಆಳ ಹಾಗೂ 2 ½ ಇಂಚು ಅಗಲದಷ್ಟು ಗಾಯವಾಗಿತ್ತಲ್ಲ? ಹೀಗಾಗಿ ನಾನು ತಕ್ಷಣ ಹುಶಾರಾದೆ. &lt;br /&gt;&lt;br /&gt;ಇಷ್ಟೆಲ್ಲಾ ಇದ್ದಾಗ್ಯೂ ನಾನು ನದಿಯ ಬಳಿಯೇ ಇರಬೇಕಿತ್ತು. ಅದು ಬಿಟ್ಟು ಬೇರೆ ಗತಿ ಇರಲಿಲ್ಲ. ನದಿ ದಂಡೆಗಳು ದಟ್ಟವಾಗಿ ಬೆಳೆದಿದ್ದರಿಂದ ಅಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಕೆಲವು ಸಾರಿ ನಾನು ನದಿಯ ಮೂಲಕ ಹಾದುಹೋಗಬೇಕಿತ್ತು. ಏಕೆಂದರೆ ನಾ ನಡೆವ ದಾರಿಯಲ್ಲಿ ಒಣಗಿದ ಎಲೆಗಳು ರಾಶಿರಾಶಿಯಾಗಿ ಬಿದ್ದಿರುತ್ತಿದ್ದವು ಇಲ್ಲವೇ ಮರದ ಟೊಂಗೆಗಳು ಮುರಿದುಕೊಂಡು ಬಿದ್ದು ನನ್ನ ದಾರಿಯನ್ನು ಮುಚ್ಚಿಹಾಕುತ್ತಿದ್ದವು. ಹೀಗೆ ನಡೆದುಕೊಂಡು ಹೋಗುವಾಗ ತಕ್ಷಣ ನನಗೆ ಗುಂಯ್ಯಗುಡುವ ನೊಣಗಳ ಸದ್ದು ಕೇಳಿಸಿತು. ಅದರ ಹಿಂದೆಯೇ ವಿಮಾನದ ಮೂರು ಸೀಟುಗಳು ಕಾಣಿಸಿದವು. ಅಲ್ಲಿ ಮೂರು ಹುಡುಗಿಯರ ಹೆಣಗಳು ಕಾಣಿಸಿದವು. ಅವು ಕೊಳೆತು ನಾರುತ್ತಿದ್ದು ಅವುಗಳ ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ನಾನು ಅವುಗಳ ಪಕ್ಕದಲ್ಲಿ ಹಾದುಹೋಗುತ್ತಿದ್ದಂತೆ ಅವುಗಳಲ್ಲಿ ನನ್ನ ಅಮ್ಮನ ಹೆಣ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. &lt;br /&gt;&lt;br /&gt;&lt;br /&gt;ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ&lt;br /&gt;ಕನ್ನಡಕ್ಕೆ: ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-5427520168010915137?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/5427520168010915137/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/10/1.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/5427520168010915137'/><link rel='self' type='application/atom+xml' href='http://www.blogger.com/feeds/2802103225554897449/posts/default/5427520168010915137'/><link rel='alternate' type='text/html' href='http://bisilahani.blogspot.com/2011/10/1.html' title='ಕಾಡಿಗೆ ಎದುರಾಗಿ ನಿಂತ ಹುಡುಗಿ - ಭಾಗ 1'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-Y2Sptl_KUZ4/TohGU5DTlYI/AAAAAAAAAag/m4xTi8dsJk8/s72-c/koepcke3.jpg' height='72' width='72'/><thr:total>1</thr:total></entry><entry><id>tag:blogger.com,1999:blog-2802103225554897449.post-2628700298472131680</id><published>2011-09-05T12:36:00.011+01:00</published><updated>2011-09-09T07:53:51.775+01:00</updated><title type='text'>ಶಿಕ್ಷಣದ ಸಂತೆಯಲ್ಲೊಬ್ಬ ಸಂತ</title><content type='html'>&lt;a href="http://2.bp.blogspot.com/-i-9oDxZtn-A/Tmm369GPWHI/AAAAAAAAAaY/4RPaByH1FM4/s1600/P8171732.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://2.bp.blogspot.com/-i-9oDxZtn-A/Tmm369GPWHI/AAAAAAAAAaY/4RPaByH1FM4/s320/P8171732.JPG" border="0" alt=""id="BLOGGER_PHOTO_ID_5650249430974027890" /&gt;&lt;/a&gt;&lt;br /&gt;ಕಳೆದ ವರ್ಷ ಶ್ರಾವಣದ ಒಂದು ದಿನ ಗದುಗಿನ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಅಣ್ಣಿಗೇರಿ ಮಾಸ್ತರರ ಆಶ್ರಮ ಹೊಕ್ಕಾಗ ಬೆಳಿಗ್ಗೆ  11.45 ರ ಸಮಯ. ಅದಾಗಲೇ ಹುಡುಗರೆಲ್ಲಾ ಸಾಲಿಗೆ ಹೋಗಿದ್ದರಿಂದ ಎಲ್ಲೆಡೆ ನೀರವ ಮೌನ ಆವರಿಸಿತ್ತು. ಆದರೆ ಆ ಆಶ್ರಮದ ಮರದಲ್ಲಿರುವ ಪಕ್ಷಿಗಳು ಆಗೊಮ್ಮೆ ಈಗೊಮ್ಮೆ ಕೂಗು ಹಾಕುತ್ತಾ ಅಲ್ಲಿ ಆವರಿಸಿದ್ದ ಮೌನವನ್ನು ಮುರಿಯಲು ಪ್ರಯತ್ನಿಸುತ್ತಿದ್ದವು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕಣ್ಣಾಮುಚ್ಚಾಲೆಯಾಡುವ ಸೂರ್ಯ ಅಂದು ಅದೇನೋ ಬೆಳಿಗ್ಗಿನಿಂದಲೇ ಪ್ರಖರವಾಗಿ ಬೆಳಗುತ್ತಿದ್ದ. ನಾವು ಅವರ ಹತ್ತಿರ ಅಪಾಯಿಂಟ್ಮೆಂಟ್ ತೆಗೆದುಕೊಂಡಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ನೇರವಾಗಿ ಭೇಟಿಯಾಗಬಹುದಿತ್ತು. ಹೀಗಾಗಿ ಕೇಳಬೇಕಾದ್ದನ್ನು ಒಂದಷ್ಟು ಮನಸ್ಸಲ್ಲೇ ಯೋಚಿಸಿಕೊಂಡು ಹೊರಟೆ.&lt;br /&gt;&lt;br /&gt;&lt;a href="http://2.bp.blogspot.com/-y8DSA9ed5iI/TmS20QXSfLI/AAAAAAAAAZQ/YtKLhQucG-U/s1600/Photo%2B1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-y8DSA9ed5iI/TmS20QXSfLI/AAAAAAAAAZQ/YtKLhQucG-U/s320/Photo%2B1.JPG" border="0" alt=""id="BLOGGER_PHOTO_ID_5648840841491545266" /&gt;&lt;/a&gt;&lt;br /&gt;&lt;br /&gt;&lt;br /&gt;ನಾವು ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಆಶ್ರಮದ ಕೋಣೆಯೊಂದರ ಮುಂದೆ ಖುರ್ಚಿ ಹಾಕಿಕೊಂಡು ತಾವೇ ಬೆಳೆಸಿದ ಹೂದೋಟದತ್ತ ದೃಷ್ಟಿ ನೆಟ್ಟು ಕುಳಿತಿದ್ದ ಅಣ್ಣಿಗೇರಿ ಮಾಸ್ತರರು ನಮ್ಮನ್ನು ನೋಡಿದವರೆ ಎದ್ದು ನಿಂತು ಹಣೆಗೆ ಕೈ ಹಚ್ಚಿ ತಮ್ಮ ಕನ್ನಡಕದೊಳಗಿಂದ ನಮ್ಮನ್ನು ನೋಡತೊಡಗಿದರು. ನಾವು ಅವರಿಗೆ ಗೊತ್ತು ಸಿಗದೇ ಹೋದರೂ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ “ಬರ್ರೀ,... ಬರ್ರೀ..... ಒಳಗ ಬರ್ರೀ.” ಎಂದು ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ನಮ್ಮನ್ನು ಸಹ ಆತ್ಮೀಯವಾಗಿ ಸ್ವಾಗತಿಸಿದರು. ಬೆನ್ನಹಿಂದೆಯೇ “ಲೇ ತಮ್ಮಾ, ಅಲ್ಲೊಂದೆರೆಡು ಖುರ್ಚಿ ತಗೊಂಬಾರೋ” ಎಂದು ಅಲ್ಲೇ ಇದ್ದ ಶಿಷ್ಯನಿಗೆ ಆಜ್ಞೆಯಿತ್ತರು. ಆ ಶಿಷ್ಯ ಓಡಿಹೋದವನೆ ಮಾಸ್ತರರ ಪಕ್ಕದಲ್ಲಿ ಒಂದೆರೆಡು ಖುರ್ಚಿಯನ್ನು ತಂದುಹಾಕಿದ. ಅಂದು ಆ ಹುಡುಗ ಮೈಯಲ್ಲಿ ಹುಶಾರಿಲ್ಲದ ಕಾರಣ ಸಾಲಿಗೆ ಹೋಗದೆ ಆಶ್ರಮದಲ್ಲೇ ಉಳಿದಿದ್ದ. ಆಗಷ್ಟೆ ಚೇತರಿಸಿಕೊಂಡು ತಕ್ಕಮಟ್ಟಿಗೆ ಓಡಾಡುತ್ತಿದ್ದ.&lt;br /&gt;&lt;br /&gt;&lt;a href="http://1.bp.blogspot.com/-c7tmri3tCW4/TmS3soPcr7I/AAAAAAAAAZY/UaDCFQPrfIo/s1600/Photo%2B2.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-c7tmri3tCW4/TmS3soPcr7I/AAAAAAAAAZY/UaDCFQPrfIo/s320/Photo%2B2.JPG" border="0" alt=""id="BLOGGER_PHOTO_ID_5648841809973784498" /&gt;&lt;/a&gt;&lt;br /&gt;&lt;br /&gt; &lt;br /&gt;ಆಗ ತಾನೆ ವಿದ್ಯಾರ್ಥಿಗಳನ್ನು ಕಳಿಸಿ ಹೊರಗೆ ಖುರ್ಚಿಯ ಮೆಲೆ ಬಿಳಿ ನೆಹರೂ ಶರ್ಟ್, ಬಿಳಿ ಪಂಚೆಯನ್ನು ಹಾಕಿಕೊಂಡು ಕುಳಿತಿದ್ದ ಮಾಸ್ತರರು ಥೇಟ್ ಗಾಂಧಿವಾದಿಯಂತೆ ಕಂಡರು. ಅವರಿಗೆ 82 ವರ್ಷ ವಯಸ್ಸಾಗಿದೆ ಎಂದು ಹೇಳಿದರೆ ನಮಗೆ ನಂಬಲಸಾಧ್ಯವಾಗಿತ್ತು. ಏಕೆಂದರೆ ನಾನು ಎರಡು ದಶಕಗಳ ಹಿಂದೆ ಅವರ ಕೈಲಿ ಓದುವಾಗ ಅವರ ಕಂಗಳಲ್ಲಿ ಯಾವ ಹೊಳಪು ಇತ್ತೋ ಅದೇ ಹೊಳಪು ಇನ್ನೂ ಹಾಗೆ ಇತ್ತು. ಮುಖದಲ್ಲಿ ಎಂದಿನಂತೆ ಅದೇ ಲವಲವಿಕೆ, ಉತ್ಸಾಹ, ಚೈತನ್ಯ ಎಲ್ಲವೂ ಹಾಗೆ ಇದ್ದವು. ನಾನು ಅವರನ್ನು ನೋಡಿದವನೆ ಅವರ ಪಾದಗಳಿಗೆ ನಮಸ್ಕರಿಸಿ “ನಾನು ಉದಯ್ ಇಟಗಿ ಅಂತಾ-ನಿಮ್ಮ ಹಳೆಯ ವಿದ್ಯಾರ್ಥಿ. 88 ರಿಂದ 91 ರವರೆಗೆ ನಿಮ್ಮ ಕೈಯಲ್ಲಿ ಕಲಿತವನು. ಈಗ ನಾನು ಇಂಗ್ಲೀಷ್ ಉಪನ್ಯಾಸಕನಾಗಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ನನ್ನನ್ನು ನಾನು ಪರಿಚಯಿಸಿಕೊಂಡೆ. ಸಾವಿರ ಸಾವಿರ ಶಿಷ್ಯ ಬಳಗವನ್ನು ಹೊಂದಿರುವ ಮಾಸ್ತರರು ನನ್ನನ್ನು ಹೇಗೆ ತಾನೆ ಗುರುತು ಹಿಡಿದಾರು? ಆದರೂ “ಗುಡ್, ವೇರಿಗುಡ್” ಎಂದು ಹೆಮ್ಮೆಯಿಂದ ಬೀಗುತ್ತಾ ನನ್ನ ಬೆನ್ನು ಚಪ್ಪರಿಸಿದರು. ಮುಂದುವರೆದು “ಬಾಳ ಜನ ಹುಡುಗ್ರು ನೋಡ್ರಿ. ಗೊತ್ತು ಹತ್ತಂಗಿಲ್ಲ. ನೀವs ಗೊತ್ತುಪಡಿಸ್ಕೋಬೇಕ್ರಿ. ನಿಮ್ಮನ್ನ ಗೊತ್ತುಹಿಡಿದಿದ್ದಕ ಮನಸ್ಸಿಗೆ ಕೆಟ್ಟ ಮಾಡ್ಕೋಬ್ಯಾಡ್ರಿ.” ಎಂದು ಕ್ಷಮೆ ಯಾಚಿಸುವ ದನಿಯಲ್ಲಿ ಹೇಳಿದರು.  &lt;br /&gt;&lt;br /&gt;&lt;a href="http://4.bp.blogspot.com/-kRx84f8quWM/TmS5OuMXfpI/AAAAAAAAAZo/RLa_ZWOIrRE/s1600/Photo%2B3.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-kRx84f8quWM/TmS5OuMXfpI/AAAAAAAAAZo/RLa_ZWOIrRE/s320/Photo%2B3.JPG" border="0" alt=""id="BLOGGER_PHOTO_ID_5648843495198654098" /&gt;&lt;/a&gt;&lt;br /&gt;&lt;br /&gt;&lt;br /&gt;ನಾನು “ಇರ್ಲಿ ಸರ್. ನಿಮಗಾದ್ರು ಹೆಂಗ ಗೊತ್ತು ಹಿಡಿಲಿಕ್ಕಾದಾತು? ಎಲ್ಲಾ ಶಿಕ್ಷಕರು ತಮ್ಮ ಎಲ್ಲಾ ಶಿಷ್ಯರನ್ನು ನೆನಪಿನಲ್ಲಿಟ್ಕೋಳಿದಿಕ್ಕೆ ಆಗೋದಿಲ್ರಿ. ಬಾಳ ಕಷ್ಟ ಐತಿ” ಎಂದು ನಕ್ಕೆ. “ನೀವೂ ಮಾಸ್ತರ ಅಲ್ರಿ ಮತ್ತ? ನಮ್ಮದು ನಿಮ್ಮದು ಒಂದ ಅನುಭವ! ಇದರ ಮ್ಯಾಲೆ ಹೆಚ್ಚಿಂದು ಹೇಳೋದರ ಏನ ಐತಿ. ಎಲ್ಲಾನೂ ಅರ್ಥ ಮಾಡ್ಕೋತಿರಿ” ಎಂದು ಅವರೂ ನಕ್ಕರು. ಆ ನಗೆಯಲ್ಲಿ ಅದಮ್ಯ ಜೀವನೋತ್ಸಾಹ ಪುಟಿಯುತ್ತಿತ್ತು. ನಾನು ಅವರನ್ನು ಎರಡು ದಶಕಗಳ ಹಿಂದೆ ನೋಡಿದ್ದಕ್ಕೂ, ಈಗ ನೋಡುವದಕ್ಕೂ ದೈಹಿಕವಾಗಿ ಒಂಚೂರು ವ್ಯತ್ಯಾಸ ಕಾಣಿಸಲಿಲ್ಲ. ಅದೇ ಸದೃಢ ದೇಹ. ಅದೇ ಹೊಳೆಯುವ ಕಂಗಳು. ಅದೇ ಕಂಠ, ಅದೇ ಮಾತು, ಅದೆ ಹಾಸ್ಯಪ್ರಜ್ಞೆ, ಅದೇ ಚೈತನ್ಯ ಎಲ್ಲವೂ ಇನ್ನೂ ಹಾಗೇ ಇದ್ದವು. &lt;br /&gt;&lt;a href="http://1.bp.blogspot.com/-y-9kpZqXf3U/TmS59fiR7GI/AAAAAAAAAZw/mqEP4dOsLi8/s1600/Photo%2B5.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-y-9kpZqXf3U/TmS59fiR7GI/AAAAAAAAAZw/mqEP4dOsLi8/s320/Photo%2B5.JPG" border="0" alt=""id="BLOGGER_PHOTO_ID_5648844298717883490" /&gt;&lt;/a&gt;&lt;br /&gt;&lt;br /&gt;&lt;br /&gt;ಮಾಸ್ತರರು ಪ್ರಚಾರಪ್ರಿಯರಲ್ಲ. ಮೊದಲಿನಿಂದಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ಬಂದವರು. ಮೀಡಿಯಾ, ಪತ್ರಿಕೆಯವರು, ಫೋಟೋ ಎಂದರೆ ಅವರಿಗೆ ಅಲರ್ಜಿ ಎನ್ನುವದು ನನಗೆ ಚನ್ನಾಗಿ ಗೊತ್ತಿತ್ತು.  ಹೀಗಾಗಿ ನಾನೇ ಸಂಕೋಚದಿಂದ “ಸರ್, ದಿನಪತ್ರಿಕೆಯೊಂದಕ್ಕೆ ನಿಮ್ಮ ಮೇಲೆ ಒಂದು ಲೇಖನ ಬರಿಬೇಕಂತ ಮಾಡೇನ್ರಿ. ಹಿಂಗಾಗಿ ನಿಮ್ಮಕೂಡ ಒಂದಷ್ಟು ಮಾತಾಡಿ ವಿಷಯ ಸಂಗ್ರಹಣೆ ಮಾಡಿ ಬರಿತೇನ್ರಿ. ಅದಕ ಅವಕಾಶ ಮಾಡಿಕೊಡ್ರಿ” ಎಂದು ಅತ್ಯಂತ ವಿನಮ್ರತೆಯಿಂದ ಕೇಳಲೋ ಬೇಡ್ವೋ ಎಂಬಂತೆ ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ “ಹುಚ್ಚರು ಅದೀರಿ ನೀವು. ಅಲ್ರಿ, ನಾ ಏನ್ ಮಾಡೇನಿ ಅಂತಾ ನನ್ನ ಮೇಲೆ ಲೇಖನ ಬರಿಯೋಕೆ ಹೊಂಟೀರಿ ನೀವು? ಎಷ್ಟೊಂದು ಜನ ಎಷ್ಟೊಂದು ಮಾಡ್ಯಾರ? ಎಷ್ಟೊಂದು ಸಾಧಿಸ್ಯಾರ? ಅವರ ಬಗ್ಗೆ ಬರೀರಿ. ಅವರಿಗೆ ಇನ್ನೂ ಹುರುಪು ಬರ್ತದ. ನಾ ಏನ್ ಸಾಧಿಸೀನಿ ಅಂತಾ ಬರಿತೀರಿ? I am just an ordinary man. What is there to write about me? ಸುಮ್ಮನೆ ಕೂತ್ಕೊಂಡು ಮಾತಾಡಂಗ ಇದ್ರ ಮಾತಾಡ್ರಿ” ಎಂದು ಗದರಿದರು. ನನಗೆ ಮೊದಲೇ ಇವರನ್ನು ಈ ವಿಷ್ಯದಲ್ಲಿ ಒಪ್ಪಿಸುವದು ಕಷ್ಟ ಎಂದು ಚನ್ನಾಗಿ ಗೊತ್ತಿದ್ದರಿಂದ ಪಟ್ಟು ಬಿಡದೇ ಕೊನೆಪಕ್ಷ ನನ್ನ ಬ್ಲಾಗಿನಲ್ಲಾದರೂ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದೆ. ನಾನು ಬೇಡಿಕೊಳ್ಳುವ ರೀತಿಯನ್ನು ನೋಡಿ ಮಾಸ್ತರರು ಕೊನೆಗೂ ಕರಗಿದರು, ಒಪ್ಪಿಕೊಂಡರು. “ಅಲ್ರೀ, ನನ್ನ ಬಗ್ಗೆ ಬರಿತೇನಿ ಅಂತೀರಿ. ಬರೆಯೋದಾದ್ರ ಬರೆ ಒಳ್ಳೇದ ಬರಿಬ್ಯಾಡ್ರಿ. ಕೆಟ್ಟದ್ದೂ ಬರೀರಿ. ನಾನೂ ಮನುಷ್ಯಾ ಅದೀನಿ. ನಂದರಾಗು ಒಳ್ಳೇದು ಕೆಟ್ಟದ್ದೂ ಎರಡೂ ಅದವು. ಹೌದಲ್ರಿ?” ಎಂದು ಕೇಳಿದರು. &lt;br /&gt;&lt;br /&gt;ನಾನು “ನೀವು ಹೇಳೋದು ಖರೆ ಐತ್ರಿ ಸರ್. ಆದ್ರ ನಾನು ಇಷ್ಟು ದಿವಸ ನಿಮ್ಮನ್ನು ಗುರಗಳನ್ನಾಗಿಯೇ ನೋಡಿದ್ರಿಂದ ನಂಗ ಇದವರೆಗೂ ನಿಮ್ಮಲ್ಲಿ ಯಾವ್ದೂ ಕೆಟ್ಟದ್ದು ಕಂಡಿಲ್ರಿ. ಮೇಲಾಗಿ, ನಿಮ್ಮ ಕೆಟ್ಟತನದ ಬಗ್ಗೆ ತಿಳ್ಕೊಬೇಕಂದ್ರ ನಾನು ನಿಮ್ಮ ಹತ್ತಿರದ ಒಡನಾಡಿಯಾಗಿರಬೇಕು, ಇಲ್ಲ ಗೆಳೆಯನಾಗಿರಬೇಕು. ಆದ್ರ ನಾನು ಇವೆರೆಡೂ  ಅಲ್ಲಲ್ರಿ?” ಎಂದು ನಕ್ಕೆ. ಜೊತೆಗೆ ಅವರೂ ನಕ್ಕರು. ನಾನು ಮುಂದುವರೆದು “ಕೆಟ್ಟದ್ದು ಬರೆಯುವಂಥದ್ದು ಕೆಟ್ಟದೇನು ಮಾಡೀರಿ ನೀವು? ನೀವು ಮಾಸ್ತರಾದಾಗಿಂದ ನಿಮ್ಮ ಜೀವನಾನ ವಿದ್ಯಾರ್ಥಿಗಳಿಗೋಸ್ಕರ ತೇದಿರಿ. ನಮ್ಮಂತ ವಿದ್ಯಾರ್ಥಿಗಳನ್ನು ರೂಪಿಸಿದ್ದೀರಿ. ನಿಮ್ಮ ಬಗ್ಗೆ ಕೆಟ್ಟದ್ದು ಬರದ್ರ ನನಗ ಕೆಟ್ಟಾಕೈತ್ರೀ” ಎಂದು ತರ್ಕದ ಮಾತನಾಡಿ ಮಾಸ್ತರರ ಬಾಯಿ ಕಟ್ಟಿಬಿಟ್ಟೆ. &lt;br /&gt;&lt;br /&gt;ಮುಂದೆ ಮಾಸ್ತರರು ಹೆಚ್ಚಿಗೇನೂ ಮಾತನಡದೆ ನಾನು ಮಾಡುವ ಕೆಲಸಕ್ಕೆ ಮೌನ ಸಮ್ಮತಿಯನ್ನು ಕೊಟ್ಟರು. ನಾನು ನನ್ನ ಕ್ಯಾಮರಾವನ್ನು ನನ್ನ ಅಕ್ಕನ ಮಗನ ಕೈಗಿಡುತ್ತಾ ಆಶ್ರಮದ ಒಂದಿಷ್ಟು ಫೋಟೋಗಳನ್ನು ಹಾಗೂ ನಾವು ಮಾತನಾಡುವದನ್ನು ಮಾಸ್ತರರಿಗೆ ಗೊತ್ತಾಗದಂತೆ ಕ್ಲಿಕ್ಕಿಸು ಎಂದು ಸೂಚನೆಯನ್ನು ಕೊಟ್ಟು ಮಾಸ್ತರರೊಂದಿಗೆ ಮಾತಿಗಿಳಿದೆ. ಆದರೆ ಅವನು ಒಂದಷ್ಟು ಫೋಟೋಗಳನ್ನು ತೆಗೆದಿರಲಿಕ್ಕಿಲ್ಲ, ಆಗಲೇ ಮಾಸ್ತರರಿಗೆ ಅವನು ಕದ್ದು ಫೋಟೋ ತೆಗೆಯುವದು ಗೊತ್ತಾಗಿಹೋಯಿತು. “ಏಯ್, ಬ್ಯಾಡ್ರಿ, ಫೋಟೋ, ಗೀಟೋ ಏನು ಬ್ಯಾಡ್ರಿ. ಹಿಂಗಾದ್ರ ನಾನು ನಿಮ್ಮ ಕೂಡ ಮಾತಾಡಂಗಿಲ್ಲ ನೋಡ್ರಿ” ಎಂದು ಮನಿಸಿಕೊಂಡರು. ನಾನು ಅವರನ್ನು ಮತ್ತೆ ಪರಿಪರಿಯಾಗಿ ಓಲೈಸುತ್ತಾ at least ನಾವು ಮಾತನಾಡುವದನ್ನಾದರೂ ವಿಡಿಯೋ ತೆಗೆದುಕೊಳ್ಳಲು ಅನುಮತಿ ಕೊಡಬೇಕು ಎಂದು ಕೇಳಿಕೊಂಡೆ. ನಾನು ನನ್ನ ಅಕ್ಕನ ಮಗನಿಗೆ ವಿಡಿಯೋ ತೆಗೆಯಲು ಹೇಳಿ ನಾನು ಮಾಸ್ತರರೊಂದಿಗೆ ಮಾತಿಗಿಳಿದೆ. ಕಾಲು ಗಂಟೆ ಅವನು ವಿಡಿಯೋ ತೆಗೆದಿರಲಿಕ್ಕಿಲ್ಲ ಆಗಲೇ ಮಾಸ್ತರರು “ಸಾಕು ಬಿಡ್ರಿ, ಸಾಕು. ಎಷ್ಟು ತೆಗಿತೀರಿ? ಕ್ಯಾಮರಾ ಬಂದ್ ಮಾಡಬಿಡ್ರಿ” ಎಂದು ಹೇಳಿದರು. ನಾನು “ದಯವಿಟ್ಟು ನಮ್ಮ ಮಾತುಕತೆ ಮುಗಿಯುವರೆಗೂ ರೆಕಾರ್ಡ್ ಆಗಲಿ. ಇದು ಲೇಖನ ಬರೆಯುವದಕ್ಕೆ ಸಹಾಯವಾಗುತ್ತೆ” ಎಂದೆ. ಅವರು ಮನಸ್ಸಿಲ್ಲದೆ ಒಪ್ಪಿಕೊಂಡರು.   &lt;br /&gt;       &lt;br /&gt;ಶಿಕ್ಷಣ ಎಂಬುದು ವ್ಯಾಪಾರೀಕರಣಗೊಂಡು ಉದ್ಯಮದ ರೂಪ ಪಡೆದ ಈ ಹೊತ್ತಿನಲ್ಲಿ ಹಾಗೂ ಟೂಷನ್ ಎಂಬ ಮಹಾಮಾರಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ದಂಧೆಯಾಗಿ ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಇಲ್ಲೊಬ್ಬ ನಿವೃತ್ತ ಶಿಕ್ಷಕರು ಮಕ್ಕಳಿಗೋಸ್ಕರ ಉಚಿತ ಅಕ್ಷರ ದಾಸೋಹ ನಡೆಸುತ್ತಾರೆ. ಅವರೇ ಶ್ರೀಯುತ ಬಿ.ಜಿ. ಅಣ್ಣಿಗೇರಿಯವರು.  ಶಿಕ್ಷಣದ ಸಂತೆಯಲ್ಲೊಬ್ಬ ಸಂತನಂತಿರುವ ಈ ಶಿಕ್ಷಕ ಗದುಗಿನ ತುಂಬಾ ಅಣ್ಣಿಗೇರಿ ಸರ್, ಅಣ್ಣಿಗೇರಿ ಮಾಸ್ತರ್ ಎಂದೇ ಹೆಸರಾದವರು. ನಿರಂತರವಾಗಿ 56 ವರ್ಷಗಳಿಂದ ಉಚಿತ ಶಿಕ್ಷಣ ದಾಸೋಹ ನಡೆಸುತ್ತಿರುವ ಇವರು ಮೊದಲಿನಿಂದಲೂ ಸದ್ದುಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಬಂದವರು. ಈ ಕಾರಣಕ್ಕಾಗಿಯೇ ಅವರು ಈ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ವಿದ್ಯಾರ್ಥಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆಶ್ರಮದ ಮಕ್ಕಳೇ ತಮ್ಮ ಮಕ್ಕಳೆಂದು ಭಾವಿಸಿ ಸತತ 56ವರ್ಷಗಳಿಂದ ಆ ಮಕ್ಕಳಿಗೆ ತಮ್ಮದೆಲ್ಲವನ್ನೂ ಧಾರೆಯೆರೆದಿದ್ದಾರೆ. ಮದುವೆ ಯಾಕೆ ಆಗಲಿಲ್ಲ ಎಂದು ಕೇಳಿದರೆ ಮೊದಲಿನಿಂದಲೂ ಬಡತನದಲ್ಲಿಯೇ ಬೆಂದೆದ್ದು ಬಂದಿದ್ದರಿಂದ ಮದುವೆಯ ಬಗೆಗಿನ ಮಧುರ ಕಲ್ಪನೆಗಳು ನನ್ನಲ್ಲಿ ಹುಟ್ಟಲೇ ಇಲ್ಲ ಎಂದು ಹೇಳುತ್ತಾರೆ. ತಮ್ಮ 33ನೇ ವಯಸ್ಸಿನಲ್ಲಿ ಒಮ್ಮೆ ಮದುವೆಯ ಯೋಚನೆ ಬಂತಂತೆ. ಆದರೆ ಅವರು ನಡೆಸುತ್ತಿದ್ದ ವಿಶೇಷ ತರಗತಿಗಳಿಂದಾಗಿ ಮದುವೆಯ ಬಗ್ಗೆ ಚಿಂತಿಸಲು ಅವಕಾಶ ಸಿಗಲಿಲ್ಲ ಎಂದು ನಗುತ್ತಾ ಹೇಳುತ್ತಾರೆ.    &lt;br /&gt;ಶ್ರೀಯುತ ಅಣ್ಣಿಗೇರಿಯವರು ಗದಗ್ ಜಿಲ್ಲೆಯ ರೋಣ ತಾಲೂಕಿನ ಮುದೇನಗೂಡಿಯಲ್ಲಿ ಜೂನ್ 3, 1930ರಲ್ಲಿ ಬಡ ಕುಟುಂಬವೊಂದರಲ್ಲಿ ಹುಟ್ಟಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗ್ರಾಮಸ್ಥರ ಹಣಕಾಸಿನ ಸಹಾಯದಿಂದ ಮುದೇನಗೂಡಿಯಲ್ಲಿ ಮುಗಿಸಿದರು. ಮುಂದೆ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ರೋಣಕ್ಕೆ ಹೋದರು. ಅಲ್ಲಿ ವಾರಾನ್ನ ತಿಂದುಕೊಂಡು ಓದಿದರು. 1954 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ. ಇಡ್ ಪದವಿ ಪದವಿ ಪಡೆದುಕೊಂಡು ಅದೇ ವರ್ಷ ಗದುಗಿನ ಮಾಡೆಲ್ ಹೈಸ್ಕೂಲಿನಲ್ಲಿ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲಿನಲ್ಲಿ) ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಮುಂದೆ ಅದೇ ಹೈಸ್ಕೂಲಿನ ಹೆಡ್ಮಾಸ್ಟರ್ ಆಗಿ 1988 ರಲ್ಲಿ ನಿವೃತ್ತರಾದವರು. ಅವರ ಕಾಲದಲ್ಲಿ ಮಾಡೆಲ್ ಹೈಸ್ಕೂಲ್ ಕೀರ್ತಿಯು ಉತ್ತುಂಗ ಶಿಖರವನ್ನು ಮುಟ್ಟಿತ್ತು.&lt;br /&gt;&lt;a href="http://3.bp.blogspot.com/-dLDl3S0m86U/TmS-a2FlnjI/AAAAAAAAAaQ/3FIY-3Cs8Vc/s1600/Photo%2B10.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-dLDl3S0m86U/TmS-a2FlnjI/AAAAAAAAAaQ/3FIY-3Cs8Vc/s320/Photo%2B10.JPG" border="0" alt=""id="BLOGGER_PHOTO_ID_5648849201034272306" /&gt;&lt;/a&gt;&lt;br /&gt;&lt;br /&gt;  &lt;br /&gt;ಅವರು ಗದುಗಿಗೆ ಬಂದ ವರ್ಷವೇ ಅಲ್ಲಿಯ ದಲಾಲರ ಸಹಾಯದಿಂದ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಒಂದು ವಕಾರದಲ್ಲಿ ಸಣ್ಣದೊಂದು ಕೋಲಿ ಹಿಡಿದು, ದೂರದ ಊರಿಂದ ಗದುಗಿಗೆ ಓದಲು ಬರುವ ಹುಡುಗರನ್ನು ತಮ್ಮಲ್ಲಿರಿಸಿಕೊಂಡು ಓದಿಸತೊಡಗಿದರು. ಮುಂದೆ ಅದು ಒಂದು ಪರಿಪಾಠವಾಗಿ ಬೆಳೆದು ಇವತ್ತು ಒಂದು ಸಣ್ಣ ಆಶ್ರಮವಾಗಿ ನಿಂತಿದೆ. ಇಲ್ಲಿ 80ಕ್ಕೂ ಹೆಚ್ಚು ಜನರು  ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ಬೆಳಿಗ್ಗೆ ಊಟ ಮಾಡುತ್ತಾರೆ. ಮಧ್ಯಾಹ್ನಕ್ಕೆ ಸಾಲಿಯಲ್ಲಿ ಕೊಡುವ ಬಿಸಿಯೂಟ ಮಾಡುತ್ತಾರೆ. ರಾತ್ರಿ ಹಳೆ ವಿದ್ಯಾರ್ಥಿಯೊಬ್ಬರು ಕೊಡಿಸಿದ ಅಕ್ಕಿಯಿಂದ ಅನ್ನ ತಯಾರಿಸಿ, ತೋಂಟದಾರ್ಯ ಮಠದಿಂದ ಸಾರು ತಂದು ಊಟ ಮಾಡುತ್ತಾರೆ. &lt;br /&gt;&lt;br /&gt;ಅಣ್ಣಿಗೇರಿ ಮಾಸ್ತರರದು ಶಿಸ್ತುಬದ್ಧ ಜೀವನ. ಆ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಐದಾರು ಕಿಲೊಮೀಟರಿನಷ್ಟು ವಾಕ್ ಹೋಗುತ್ತಾರೆ. ನಂತರ ಸ್ನಾನ, ಪ್ರಾರ್ಥನೆ ಮಾಡುತ್ತಾರೆ, ಪ್ರಾರ್ಥನೆಯಲ್ಲಿ ಆಶ್ರಮದ ಮಕ್ಕಳು ಸಹ ಭಾಗಿಯಾಗುತ್ತಾರೆ. ಇದಾದ ಬಳಿಕ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ತರಗತಿಗಳಿಗೆ ಹೋಗುತ್ತಾರೆ. ಆನಂತರ ಲಘು ಉಪಾಹಾರ, ಒಂದಷ್ಟು ಅಧ್ಯಯನ, ಮಧ್ಯಾಹ್ನ ಮಿತವಾದ ಆಹಾರ ಸೇವನ, ಬಳಿಕ ವಿಶ್ರಾಂತಿ, ನಂತರ ಸುಮಾರು ಎರಡು ಗಂಟೆಗಳಷ್ಟು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಅಷ್ಟೊತ್ತಿಗೆ ಸಾಯಂಕಾಲದ ಪಾಠಕ್ಕಾಗಿ ಮಕ್ಕಳು ಬಂದಿರುತ್ತಾರೆ. ಮತ್ತೆ ಅವರಿಗೆ ಸಂಜೆ ಆರರಿಂದ ಏಳು ಗಂಟೆಯವರೆಗೆ ಪಾಠ ತೆಗೆದುಕೊಳ್ಳುತ್ತಾರೆ. ಆನಂತರ ತಮ್ಮ ಆಶ್ರಮದಲ್ಲಿ ವಸತಿಯಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸುತ್ತಾ, ಅವರ ಕುಂದುಕೊರತೆಗಳನ್ನು ಗಮನಿಸುತ್ತಾ, ಅವರ ವಿಧ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ, ತಪ್ಪಿದ್ದರೆ ಬಯ್ಯುತ್ತಾ, ಅವರನ್ನು ತಿದ್ದುತ್ತಾ, ಓದುವದಕ್ಕೆ ಹುರಿದುಂಬಿಸುತ್ತಾ ತಮ್ಮ ಸಮಯ ಕಳೆಯತ್ತಾರೆ. ಈ ತರದ ಜೀವನಕ್ರಮವನ್ನು ಕಟ್ಟುನಿಟ್ಟಾಗಿ ಚಾಚೂತಪ್ಪದೇ ಪಾಲಿಸುತ್ತಾರೆ. &lt;br /&gt;&lt;br /&gt;ಮೊದಲೆಲ್ಲಾ ಇವರೊಟ್ಟಿಗೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಇಲ್ಲಿಗೆ ಬಂದು ಉಚಿತವಾಗಿ ವಿಜ್ಞಾನ ಮತ್ತು ಗಣಿತದ ಪಾಠಗಳನ್ನು ಹೇಳಿ ಹೋಗುತ್ತಿದ್ದರು. ಆದರೆ ಅವರೆಲ್ಲಾ ಈಗ ಬರುವದನ್ನು ನಿಲ್ಲಿಸಿದ್ದಾರೆ. ಯಾಕೆಂದು ಕೇಳಿದರೆ “ಅಲ್ರಿ ಅವರೂ exist ಆಗಬೇಕಲ್ರಿ. ಅವರಿಗೂ ಮದುವೆಯಾಯಿತು. ಹೆಂಡತಿ ಮಕ್ಕಳಿರೋರು. ಬರೇ ಪುಗಸೆಟ್ಟಿ ಪಾಠ ಮಾಡು ಅಂದ್ರ ಎಷ್ಟು ದಿವಸ ಮಾಡ್ತಾರ?” ಎಂದು ನಗುತ್ತಾ ನಮಗೇ ಮರುಪ್ರಶ್ನೆ ಹಾಕುತ್ತಾರೆ ಮಾಸ್ತರರು. &lt;br /&gt;&lt;br /&gt;ಹೀಗಾಗಿ ಈಗ ಬರೀ ಅಣ್ಣಿಗೇರಿ ಮಾಸ್ತರ್ ಒಬ್ಬರೇ ಎಲ್ಲ ತರಗತಿಗಳಿಗೆ ಇಂಗ್ಲೀಷ್ ಮತ್ತು ಗಣಿತದ ಪಾಠ ಹೇಳುತ್ತಾರೆ. ಆದರೆ ಸಮಾಯಾಭಾವ ಹಾಗೂ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಿದ್ದರಿಂದ ಈಗ ಬರೀ 9 ಮತ್ತು 10ನೇ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಾರೆ. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರು ಪಾಠ ಮಾಡುವ ರೀತಿ ಹೇಗಿರುತ್ತದೆಂದರೆ ಎಲ್ಲವನ್ನೂ ಬುನಾದಿಯಿಂದಲೇ ಆರಂಭಿಸುತ್ತಾರೆ. ಉದಾಹರಣೆಗೆ ಲಂಭಕೋನ ತ್ರಿಭುಜಕ್ಕೆ ಸಂಬಂಧಪಟ್ಟಹಾಗೆ ಪೈಥಾಗೋರಸ್ ನ ಪ್ರಮೇಯವನ್ನು ಬೇರೆಯವರ ಹಾಗೆ ನೇರವಾಗಿ ಆರಂಭಿಸುವ ಮೊದಲು ಲಂಭಕೋನ ತ್ರಿಭುಜ ಎಂದರೇನು? ಅದರ ಲಕ್ಷಣಗಳೇನು? ಹಾಗೂ ಹೇಗೆ ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರೆಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ ಎನ್ನುವದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾ ಪೈಥಾಗೋರಸ್ ನ ಪ್ರಮೇಯದೊಳಕ್ಕೆ ಇಳಿಯುತ್ತಾರೆ. ಪ್ರಮೇಯ ಹೇಳಿಕೊಟ್ಟ ಮಲೆ ಅಷ್ಟಕ್ಕೆ ಸುಮ್ಮನಾಗುವದಿಲ್ಲ. ಅದನ್ನು ಮತ್ತೆ ಮತ್ತೆ ಹೇಳುತ್ತಾ, ವಿದ್ಯಾರ್ಥಿಗಳ ಕೈಲಿ ಹೇಳಿಸುತ್ತಾ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿಕೊಡುವದರ ಮೂಲಕ ಎಂಥ ದಡ್ಡನನ್ನೂ ಅರ್ಥ ಮಾಡಿಸುತ್ತಾರೆ. ಇಂಗ್ಲೀಷನ್ನೂ ಅವರು ಹೆಚ್ಚು ಕಮ್ಮಿ ಇದೇ ರೀತಿ ಹೇಳಿಕೊಡುತ್ತಾರೆ, ಇಂಗ್ಲೀಷ್ ಗ್ರಾಮೀಣ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಿದ್ದಂತೆ. ಆದರೆ ಅಣ್ಣಿಗೇರಿ ಮಾಸ್ತರರು ಅದನ್ನು ಸರಳವಾಗಿಸುತ್ತಾ, ಇಂಗ್ಲೀಷಿನ ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳುತ್ತಾ ಅರ್ಥ ಮಾಡಿಸುತ್ತಾರೆ. ಮಾತ್ರವಲ್ಲ, ಮದ್ಯ ಮಧ್ಯ ವಿದ್ಯಾರ್ಥಿಗಳನ್ನು ನಗಿಸುತ್ತಾ, ತಾವು ಅವರೊಂದಿಗೆ ಮಕ್ಕಳಾಗಿ ಎಲ್ಲೂ ಬೋರಾಗದಂತೆ ಪಾಠ ಹೇಳಿಕೊಡುತ್ತಾರೆ. ಇದು ಅವರು ಪಾಠ ಮಾಡುವ ವೈಖರಿ.&lt;br /&gt;&lt;a href="http://3.bp.blogspot.com/-WekXwdENez0/TmS67KMYeGI/AAAAAAAAAZ4/7_iuokvEDG0/s1600/Photo%2B7.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-WekXwdENez0/TmS67KMYeGI/AAAAAAAAAZ4/7_iuokvEDG0/s320/Photo%2B7.JPG" border="0" alt=""id="BLOGGER_PHOTO_ID_5648845358140782690" /&gt;&lt;/a&gt;&lt;br /&gt;&lt;br /&gt;&lt;br /&gt;ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರುವದಿಲ್ಲ. ಹಳ್ಳಿಯ ಬಡಮಕ್ಕಳು ಸೇರಿದಂತೆ ಗದಗ-ಬೇಟಗೇರಿಯ ಶ್ರೀಮಂತರ ಮಕ್ಕಳೂ ಸಹ ಅವರ ಬಳಿ 100ಕ್ಕೂ ಹೆಚ್ಚು ಜನ ಟೂಷನ್ ಗೆ ಬರುತ್ತಾರೆ. ನಾನು ಅವರ ಬಳಿ ಪಾಠಕ್ಕೆ ಹೋಗುವಾಗ (ಅಂದರೆ 1990 ರಲ್ಲಿ) ಒಂದೊಂದು ತರಗತಿಯಲ್ಲಿ ಇನ್ನೂರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಕೋಣೆ ಹಿಡಿಸದೆ ಇದ್ದಾಗ ಬಯಲಲ್ಲಿರುವ ಮರದ ಕೆಳಗೆ ತರಗತಿಗಳು ನಡೆಯುತ್ತಿದ್ದವು. ಆಗ ಅವು ನಮಗೆಲ್ಲಾ ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಆದರೆ ಈಗ ಕ್ಲಾಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಾರಣ ಕೇಳಿದರೆ ಮಾಸ್ತರರು ಹಸನ್ಮುಖಿಯಾಗಿ “ಅಲ್ರೀ, ಈಗಿನ ಸ್ಟೂಡೆಂಟ್ಸ್ ಗೆ ಆಗಿನ ಸ್ಟೂಡೆಂಟ್ಸ್ ಗೆ ಬಾಳ ಫರಕ್ ಐತ್ರಿ. ಈಗಿನ ಹುಡುಗರು ’ಅಣ್ಣಿಗೇರಿ ಮಾಸ್ತರಗ ವಯಸ್ಸಾಗೇತಿ. ಅವ ಏನ್ ಪಾಠ ಮಾಡ್ತಾನ?’ ಅಂತಾರ್ರಿ. ಇನ್ನು ಅವರ ಪೇರೆಂಟ್ಸ್  ’ಅಣ್ಣಿಗೇರಿ ಮಾಸ್ತರ್ ರೊಕ್ಕಾನ ತಗೊಳಲ್ಲ. ರೊಕ್ಕ ತಗೊಳ್ಳದಾಂವ ಅದೇನು ಪಾಠ ಮಾಡ್ತಾನ? ಸುಮ್ನ ಬೇರೆ ಕಡೆ ಪಾಠಕ್ಕ ಹೊಗಿ ಉದ್ಧಾರ ಆಗ್ರಿ’ ಅಂತಾ ಹೇಳ್ತಾರಂತರೀ” ಎಂದು ಈಗಿನ ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಿಗಳ ಮನೋಸ್ಥಿತಿಯ ಬಗ್ಗೆ ವಿಷಾದ ಮಿಶ್ರಿತ ತಿಳಿಹಾಸ್ಯದಲ್ಲಿ ಹೇಳುತ್ತಾರೆ.&lt;br /&gt;&lt;br /&gt;ಇವತ್ತು ಅವರ ಕೈಯಲ್ಲಿ ಕಲಿತವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರೆಲ್ಲಾ ಸೇರಿ ಆಶ್ರಮವನ್ನು ನವೀಕರಿಸಿ ಕೊಟ್ಟಿದ್ದಾರೆ. ಆದರೆ ಈಗ್ಗೆ ಕೆಲವು ವರ್ಷಗಳಿಂದ ಅವರನ್ನು ಅವರಿದ್ದ ಜಾಗದಿಂದ ಒಕ್ಕಲೆಬ್ಬಿಸುವ ಸಂಚು ನಡೆಯಿತು. ಈ ಸಂದರ್ಭದಲ್ಲಿ ಗದುಗಿನ ಪ್ರಸಿದ್ಧ ದಲಾಲಿ ವ್ಯಾಪಾರಿ ದಿವಂಗತ ಮಲ್ಲೇಶಪ್ಪ ಗೌರಿಪೂರವರು ಅವರ ಸಹಾಯಕ್ಕೆ ಬಂದು ಅವರಿರುವ ಜಾಗವನ್ನು ಅವರ ಹೆಸರಿಗೆ ಮಾಡಿಸಿಕೊಟ್ಟರು. ಅವರ ಈ ಸಹಾಯವನ್ನು ಮಾಸ್ತರರು ವಿಶೇಷ ಕೃತಜ್ಞತೆಯಿಂದ ನೆನೆಯುತ್ತಾರೆ.&lt;br /&gt;&lt;br /&gt;33 ವರ್ಷ ಸರ್ಕಾರಿ ಶಿಕ್ಷಕರಾಗಿದ್ದರೂ ಮಾಸ್ತರರು ತಮಗೇ ಅಂತಾ ಆಸ್ತಿ ಮಾಡಿಕೊಳ್ಳಲಿಲ್ಲ, ಹಣ ಗಳಿಸಲಿಲ್ಲ, ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ.  ಮುಂಚಿನಿಂದಲೂ ಏನನ್ನೂ ಅಪೇಕ್ಷಿಸದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡವರು. ಆದರೆ ಇವರ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಅವರಿಗೆ 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇವರು ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ಬಂದಾಗ ಪತ್ರಕರ್ತನೊಬ್ಬ “ಪ್ರಶಸ್ತಿ ಸ್ವೀಕರಿಸುವದಕ್ಕೆ ಗದುಗಿನಿಂದ ಬೆಂಗಳೂರಿಗೆ ಬಂದಿದ್ದೀರಿ. ನಿಮಗೇನನಿಸುತ್ತೆ?” ಅಂತಾ ಕೇಳಿದ್ದ. ಅದಕ್ಕೆ ಮಾಸ್ತರರು “ನಂಗ ಬಾಳ ತ್ರಾಸು ಅನಸಾಕ ಹತೈತ್ರಿ. ಯಾಕಂದ್ರ ಎರಡು ದಿವಸ ಆತು ಮಕ್ಕಳನ್ನ ಅಷ್ಟ ಆಶ್ರಮದಾಗ ಬಿಟ್ಟು ಬಂದಿದೇನ್ರಿ. ಪಾಪ, ಅವರು ಹೆಂಗ ಇರ್ತಾರ ಏನ? ಈ ಕಾರ್ಯಕ್ರಮ ಮುಗಿದ ತಕ್ಷಣ ಇವತ್ತ ರಾತ್ರಿನ ಗದಿಗ್ಗೆ ಬಸ್ ಹತ್ತತೇನ್ರಿ.” ಎಂದಾಗ ಆ ಪತ್ರಕರ್ತ ’ಸಾಮಾನ್ಯವಾಗಿ ಎಲ್ಲರೂ ಈ ಸಂದರ್ಭದಲ್ಲಿ ತಾವು ಮಾಡಿದ್ದನ್ನು ಹಾಡಿ ಹೊಗಳುತ್ತಾ ಪ್ರಶಸ್ತಿ ಬಂದಿದ್ದಕ್ಕೆ ಖುಶಿಯಾಯಿತು. ಹಾಗೆ ಹೀಗೆ” ಅಂತಾ ಹೇಳ್ತಾರೆ ಆದರೆ ಅದರ ಬದಲು ಆ ಸಮಯದಲ್ಲೂ ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದನ್ನು ಕೇಳಿ ಬೆರಗಾಗಿದ್ದ.&lt;br /&gt;&lt;br /&gt;ಇಂಥವರು ನನ್ನ ಗುರುಗಳಾಗಿದ್ದೇ ನನ್ನ ಅದೃಷ್ಟ. ಇವರ ಕೈಲಿ ಮೂರು ವರ್ಷ ವಿದ್ಯಾರ್ಥಿಯಾಗಿ ಕಲಿತಿದ್ದೆನಾದರೂ ಈಗ ಮತ್ತೆ ಅವರೊಂದಿಗೆ ಮಾತನಾಡುವದೇ ಒಂದು ಸೌಭಾಗ್ಯ ಎಂದು ಭಾವಿಸಿ ಮಾತಿಗಿಳಿದೆ. ಮಾತನಾಡುತ್ತಾ ಮಾಸ್ತರರು ಐದು ದಶಕಗಳ ಹಿಂದಿನಿಂದ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಏನೇನು ನಡೆಯಿತು ಎನ್ನುವದನ್ನೆಲ್ಲಾ ಕಟ್ಟಿಕೊಟ್ಟರು. ಮೂರು ಗಂಟೆ ಕಳೆದಿದ್ದೇ ಗೊತ್ತಾಗಲಿಲ್ಲ. ಈ ಮಧ್ಯ ಮಾಸ್ತರರು “ಲೇ ತಮ್ಮಾ, ಸಾಹೇಬರಿಗೆ ಒಂದೆರೆಡು ಚಹಾ ತಗೊಂಬಾರೋ” ಎಂದು ತಮ್ಮ ಶಿಷ್ಯನಿಗೆ ಆಜ್ಞೆಯಿತ್ತರು. ನಾನು ಬೇಡವೆಂದೆ. ಮಾಸ್ತರರು ಕೇಳಲಿಲ್ಲ. ಒತ್ತಾಯ ಮಾಡಿ “ಏಯ್, ತಗೊಂಬಾ ಹೋಗೋ” ಎಂದು ಮತ್ತೊಮ್ಮೆ ಶಿಷ್ಯನಿಗೆ ಹೇಳಿದರು. ಶಿಷ್ಯ ಚಹಾ ತರಲು ರೆಡಿಯಾದ. ನಾನಾಗ “ಒಂದು ಶುಗರ್ ಲೆಸ್ ಇರಲಿ” ಎಂದೆ. ಮಾಸ್ತರರು ಅಚ್ಚರಿಯಿಂದ ನನ್ನತ್ತ ನೋಡಿದರು. ನಾನು “ಹೌದು, ಕಳೆದ ಒಂದು ವರ್ಷದಿಂದ ನಾನು ಡಯಾಬಿಟಿಕ್ ಆಗಿದ್ದೇನೆ” ಎಂದೆ. ಆಗ ಮಾಸ್ತರರು ಕಳಕಳಿಯಿಂದ “ಏಯ್. ಏನ್ರೀ ಇದು? ಇಷ್ಟ ಸಣ್ಣ ವಯಸ್ಸಿಗೆ ಡಯಾಬಿಟಿಸ್ ಬಂದಿದೆಯಾ? ಹುಷಾರ್ರೀ, ಆರೋಗ್ಯದ ಬಗ್ಗೆ ಕಾಳಜಿ ತಗೊಳ್ರೀ. ನೀವಿನ್ನೂ ಬಾಳ ದಿವಸ ಬದುಕಿ ಬಾಳಬೇಕಾದವರು” ಎಂದು ಪ್ರೀತಿಯ ಸಲಹೆಯನ್ನಿತ್ತರು. ನಾನು ಅವರಿಗೆ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿ ಸಂದರ್ಶಿಸತೊಡಗಿದೆ.&lt;br /&gt; &lt;a href="http://4.bp.blogspot.com/-r5sFlrMX9GM/TmS76cP8CkI/AAAAAAAAAaA/y-aR24PHwws/s1600/Photo%2B8.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-r5sFlrMX9GM/TmS76cP8CkI/AAAAAAAAAaA/y-aR24PHwws/s320/Photo%2B8.JPG" border="0" alt=""id="BLOGGER_PHOTO_ID_5648846445319293506" /&gt;&lt;/a&gt;&lt;br /&gt;&lt;br /&gt;&lt;br /&gt;• ನಿಮ್ಮ ದೃಷ್ಟಿಯಲ್ಲಿ ಗುರು ಎಂದರೆ ಯಾರು? ಅವನು ಹೇಗಿರಬೇಕು?&lt;br /&gt;ಅಲ್ರಿ, ಗುರು ಅನ್ನಂವಗ ಅಸ್ಥಿತ್ವ ಬರೋದ ವಿದ್ಯಾರ್ಥಿಗಳಿಂದ! ವಿದ್ಯಾರ್ಥಿಗಳ ಇಲ್ಲದ ಮೇಲೆ ಗುರು ಎಲ್ಲಿರತಾನ? ಹಿಂಗಾಗಿ ಮೊದ್ಲು ಶಿಷ್ಯರು ಹುಟ್ತಾರ. ಆಮೇಲೆ ಗುರುಗಳು ಹುಟ್ತಾರ. ಈ ವಿಷ್ಯಕ್ಕೆ ಎಲ್ಲಾ ಗುರುಗಳು ತಮ್ಮ ಶಿಷ್ಯರ ಬಗ್ಗೆ ಋಣಿಯಾಗಿರಲೇಬೇಕು. ಯಾಕಂದ್ರ ಒಬ್ಬ ಗುರು ದೊಡ್ಡವನಾಗೋದು ಅವನ ಶಿಷ್ಯರಿಂದ. ಅವರು ಮಾಡಿದ ಸಾಧನೆಯಿಂದ. ದ್ರೋಣಾಚಾರ್ಯ ಒಬ್ಬ ಗುರು ಅಂತಾ ಜಗತ್ತಿಗೆ ಗೊತ್ತಾಗಿದ್ದು ಏಕಲವ್ಯನಂಥ ಶಿಷ್ಯನಿಂದ. ಅರಿಸ್ಟಾಟಲ್ ಬೆಳಕಿಗೆ ಬಂದಿದ್ದು ಅವನ ಶಿಷ್ಯ ಸಾಕ್ರೇಟಿಸ್ ನಿಂದ. ಈಗ ನಾನೂ ಒಬ್ಬ ಗುರು ಅಂತಾ ಗೊತ್ತಾಗಿದ್ದು ಕೂಡ ನಿಮ್ಮಂತ ವಿದ್ಯಾರ್ಥಿಗಳಿಂದ. ಹಾಗೆ ನೋಡಿದ್ರ ಗುರುಗಳದು ಹೇಳಿಕೊಳ್ಳುವಂಥ ರೋಲ್ ಏನೂ ಇರಲ್ರಿ. He is just a guide. ಆದರೆ ಸತತ ಪರಿಶ್ರಮದಿಂದ ಒಬ್ಬ ವಿದ್ಯಾರ್ಥಿ ಮುಂದೆ ಬರ್ತಾನಲ್ಲ ಅವನಿಗೆ ನಾವು ಮೊದಲು ಕೃತಜ್ಞತೆ ಸಲ್ಲಿಸಬೇಕು.&lt;br /&gt;&lt;br /&gt;ಗುರು ಆದವನು ಹಿಂಗಿಂಗ ಇರಬೇಕು ಅಂತಾ ಹೇಳಾಕ ನಾನ್ಯಾರ್ರಿ?&lt;br /&gt;&lt;br /&gt;• ಇವತ್ತಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?&lt;br /&gt;&lt;br /&gt;ಈಗೀಗ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಸ್ವಲ್ಪ ಗೌರವ ಕಮ್ಮಿಯಾಗಿದೆ ಅನ್ನೋದು ನಿಜ. ಹಿಂದೆ ವಿದ್ಯಾರ್ಥಿಗಳು ವಿಧೇಯಕರಾಗಿರುತ್ತಿದ್ದರು. ಹೇಳಿದ ಮಾತು ಕೇಳೋರು. ಹೇಳಿದ ಕೆಲಸ ಮಾಡೋರು. ಆದ್ರ ಈಗ ಏನರ ಹೇಳಾಕ ಹೋದ್ರ “ನೀ ಯಾರು ನಂಗ ಹೇಳಾಂವ?” ಅಂತಾ ನಮ್ಮನ್ನ ಕೇಳ್ತಾರ. &lt;br /&gt;ಮೊನ್ನೆ ನಮ್ಮ ಆಶ್ರಮದಾಗ ಒಬ್ಬ ಹುಡುಗ ಊಟದ ತಾಟು ತಿಪ್ಯಾಗ ಒಗದಿದ್ದ. ಕಾಲಾಗ ಹಾಕ್ಕೊಳ್ಳೋ ಬೂಟನ್ನು ಕೋಲ್ಯಾಗ ಇಟ್ಟು ಅದರ ಮ್ಯಾಲೆ ಚಾದರ ಹೊಚ್ಚಿ ಭದ್ರವಾಗಿ ಇಟ್ಟಿದ್ದ. ಇದನ್ನ ನೋಡಿ ನಂಗ ಬಾಳ ಕೆಟ್ಟ ಅನಿಸ್ತು. ಸಿಟ್ಟು ಬಂತು. ಸಿಟ್ಟಿನ್ಯಾಗ ಒಂದು ನಾಲ್ಕ ಹೊಡೆದೆ. ಊಟ ಮಾಡೋ ತಾಟು ತಿಪ್ಯಾಗ ಒಗಿಬ್ಯಾಡ ಅಂತಾ ಹೇಳಿದೆ. ಆಗ ಆ ಹುಡುಗ ನನ್ನ ಮುಂದ ಏನೂ ಮಾತಾಡಲಿಲ್ಲ. ಆದ್ರ ಮಾಳೆ ಮರುದಿವಸ ಎಲ್ಲಾರ ಮುಂದ “ನಮ್ಮ ಅಪ್ಪಗ ಬುದ್ಧಿ ಇಲ್ಲ. ಅಂವಾ ಇಲ್ಲಿ ನನ್ನ ಸಾಲಿ ಕಲಿಯಾಕ ಬಿಟ್ಟಾನ. ಅಣ್ಣಿಗೇರಿ ಮಾಸ್ತರಗ ಬುದ್ಧಿ ಇಲ್ಲ, ಅಂವಾ ಅದನ್ನ ಮಾಡಬ್ಯಾಡ, ಇದನ್ನ ಮಾಡಬ್ಯಾಡ ಅಂತಾ ಹೇಳ್ತಾನ” ಇಂಥದಕ್ಕ ಏನು ಹೇಳೋದು? &lt;br /&gt;&lt;br /&gt;• ಈ ರೀತಿ ವಿಧ್ಯಾರ್ಥಿಗಳು ಆಗೋದಕ್ಕ ಯಾರು ಕಾರಣ? ತಂದೆ-ತಾಯಿಗಳೋ? ಶಿಕ್ಷಕರೋ?&lt;br /&gt;&lt;br /&gt;ಇಬ್ಬರೂ ಅಲ್ರೀ. ಯಾಕಂದ್ರ ಯಾವ ತಂದ–ತಾಯಿನೂ ಮಕ್ಕಳಿಗೆ ಉಡಾಳಾಗು ಅಂತಾ ಹೇಳಲ್ರೀ. ಹಂಗs ಯಾವ ಶಿಕ್ಷಕನೂ ಹೇಳಂಗಿಲ್ರೀ. ನನಗನಿಸ್ತದ ಇವತ್ತಿನ ದುನಿಯಾದಾಗ ಮಕ್ಕಳನ್ನು ಬೆಳಿಸೋದರಲ್ಲಿ ಎಲ್ಲೋ ಏನೋ ಮಿಸ್ ಆಗಾಕಹತೈತಿ. ಅದು ಏನೂ ಅಂತಾ ಇನ್ನೂ ಹುಡಕೋದರಾಗ ಅದೇವಿ.&lt;br /&gt;&lt;br /&gt;• ಹಾಗಾದ್ರೆ ಇವತ್ತಿನ ಶಿಕ್ಷಣ ಪದ್ಧತಿ ಕಾರಣ ಅಂತಿರೇನು? &lt;br /&gt;&lt;br /&gt;ಹಂಗೂ ಅಲ್ರೀ. ಯಾಕಂದ್ರ ಎಲ್ಲಾ ಮಕ್ಕಳು ತಮ್ಮ ಸಾಲ್ಯಾಗ ’ಮಾರಲ್ ಎಜುಕೇಶನ್’ ಅನೋ ಪಿರಿಯಡ್ನ್ಯಾಗ ಮೊದಲಿನಿಂದಲೂ ನೀತಿಕಥೆ ಕಲ್ಕೋತ ಬಂದಿರ್ತಾರ್ರೀ. ಆದ್ರ ನೀತಿಕಥೆಗಳು ಎಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರ್ತವ ಅಂತಾ ಹೇಳಾಕ ಬರಂಗಿಲ್ಲ ನೋಡ್ರಿ. ಹಿಂಗಾಗಿ ನೀತಿಕಥೆಗಳು ನೀತಿಕಥೆಗಳಾಗಿಯೇ ಉಳಿದುಬಿಡ್ತವ. ಎಲ್ಲೋ ಒಂದಿಬ್ಬರು ಇವನ್ನ ಅಳವಡಿಸಿಕೊಂಡು ಒಳ್ಳೆಯವರಾಗ್ತಾರ. &lt;br /&gt;&lt;br /&gt;• ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದಾರಾ? &lt;br /&gt;&lt;br /&gt;ನಾನು ಎಂಟನೇ ಕ್ಲಾಸಿನಲ್ಲಿರಬೇಕಾದ್ರ ಭಯಂಕರ ಜ್ವರ ಬಂದು ನನ್ನ ಸೊಂಟ ಪೂರ್ತಿ ಸ್ವಾದೀನ ಕಳಕೊಂಡು ನಡ್ಯಾಕ ಬರಲಾರದಂಗಾತು. ಸ್ವಲ್ಪ ದಿವಸ ಆದ ಮೇಲೆ ಜ್ವರ ಬಿಟ್ಟಿತು. ಆದ್ರ ಸೊಂಟದ ನೋವು ಇನ್ನೂ ಹಂಗ ಇತ್ತು. ಸಾಲಿಗೆ ಹೋಗಲಾರದಂಗಾತು. ಆಗ ನಮ್ಮ ಮನ್ಯಾಗಿನಿವರು ’ಇವ ಸಾಲಿಗೆ ಹೋಗೋದು ಹತೈತಿ ಅಂತಾ ಹೇಳಿ ಹಿಂಗ ನಾಟ್ಕ ಮಾಡಾಕ ಹತ್ಯಾನ’ ಅಂತಾ ಆಡಿಕೊಂಡ್ರು. ಆಗ ನನಗೆ ರೋಣದ ಹೈಸ್ಕೂಲಿನ ಹೆಡ್ಮಾಸ್ಟರ್ ಜಿ.ವಿ.ಕುಲಕರ್ಣಿಯವರ ಕಡಿಂದ ಬುದ್ಧಿ ಹೇಳಸಲಿಕ್ಕೆ ನಮ್ಮ ಅಪ್ಪ ಮತ್ತು ನನ್ನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಕರಕೊಂಡು ಹೋದ್ರು. ಅವರು ನನ್ನ ಅಪ್ಪನ್ನ ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ನಮ್ಮ ಅಪ್ಪ ನಾನು ಈ ಹುಡುಗನ ತಂದಿರೀ ಅಂದ. ನಮ್ಮ ಮಾಸ್ತರನ್ನು ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ಅವರು ನಾನು ಇವನ ಮಾಸ್ತರು ಅಂದ್ರು. ಅವರು ತಕ್ಷಣ ನನ್ನ ಮುಖವನ್ನು ನೋಡಿ ಕೈ ಬಿಡ್ರಿ ಅವನ್ನ ಅವ ಓದ್ತಾನ. ಓದಿ ಶಾಣ್ಯಾ ಆಗತಾನ. ನಾನು ಅವನ್ನ ಓದಿಸ್ತೇನೆ ಅಂದ್ರು. ತಕ್ಷಣ ನನಗೆ ಆ ವ್ಯಕ್ತಿಯ ಬಗ್ಗೆ ಎಲ್ಲಿಲ್ಲದ ಗೌರವ ಬಂತು. ನನ್ನ, ನನ್ನಪ್ಪ ನಂಬಲಿಲ್ಲ, ನನಗ ಕಲಿಸಿದ ಮಾಸ್ತರು ನಂಬಲಿಲ್ಲ. ಆದ್ರ ಗುರ್ತು ಪರಿಚಯ ಇಲ್ಲದ ಹೊರಗಿನವರು ನಂಬಿದರಲ್ಲಾ ಅಂತಾ ಬಾಳ ಖುಶಿಯಾಯಿತು. What a great man he is! ಅಂತಾ ಅನಿಸ್ತು. ನಾನಾಗ ವಾರಾನ್ನ ತಿಂದು ಓದ್ತಿದ್ದೆ. ವಾರಾನ್ನ ಬಿಡಿಸಿ ಮುಂದ ಅವರು ನನಗೋಸ್ಕರ ಅಂತಾನ ಒಂದು ಬೋರ್ಡಿಂಗ್ ತೆರೆದರು. ಅಲ್ಲಿ ಮೊದಲಿಗೆ ನಾನೂ ಸೇರಿ ಮೂರೇ ಮೂರು ವಿದ್ಯಾರ್ಥಿಗಳಿದ್ದೆವು. ಮುಂದ ಅದು ಬೆಳಕೊಂತ ಹೋತು. ಇವತ್ತು ಅದು ಬಸವೇಶ್ವರ ಬೋರ್ಡಿಂಗ್ ಆಗಿ ಇನ್ನೂ ಐತಿ. ಒಬ್ಬ ಶಿಕ್ಷಕನಲ್ಲಿರಬೇಕಾದ ನಿಜವಾದ ಗುಣ ಅಂದ್ರ ಇದು. ಇಂಥವರನ್ನು ಯಾವತ್ತಾದರೂ ಮರೆಯಲು ಸಾದ್ಯವೆ?&lt;br /&gt;&lt;br /&gt;• ನೀವು ಕಲಿಸುವದರ ಜೊತೆಗೆ ವಿದ್ಯಾರ್ಥಿಗಳಿಂದ ಏನಾದರು ಕಲಿತಿದ್ದಿದೆಯಾ?&lt;br /&gt;&lt;br /&gt;ಖಂಡಿತ ಐತ್ರಿ. ಒಬ್ಬ ಶಿಕ್ಷಕ ಕಲಿಸೋದಕ್ಕಿಂತ ತನ್ನ ವಿದ್ಯಾರ್ಥಿಗಳಿಂದ ಬಾಳ ಕಲಿತಾನ್ರಿ. ನಾನು ಅಂಥಾ ಎರಡು ಪ್ರಸಂಗ ಹೇಳತೇನಿ ಕೇಳ್ರಿ. ನನಗೊಬ್ಬ ಸುರೇಶ್ ಶಾಬಾದಿಮಠ ಅಂತಾ ಹೇಳಿ ಒಬ್ಬ ಸ್ಟೂಡೆಂಟ್ ಇದ್ದ. ಅವನು ಓದೋದರಲ್ಲಿ ಬಾಳ ಮುಂದ ಇದ್ದ ಮತ್ತು ಯಾವಾಗ್ಲೂ ನಂಬರ್ ಹಚ್ಚಿ ಪಾಸ್ ಆಗತಿದ್ದ. ಆದ್ರ ಅವನ ಜತಿ ಓದೋ ಇನ್ನೊಬ್ಬ ಹುಡುಗ ಇವನ್ನ ಓದೋದರಲ್ಲಿ ಹೆಂಗರಾ ಮಾಡಿ ಹಿಂದ ಒಗಿಬೇಕು ಅಂತಾ ಅವನೂ ಬಾಳ ಕಷ್ಟಪಟ್ಟು ಓದ್ತಾ ಇದ್ದ. ಆದ್ರ ಶಾಬಾದಿಮಠನ್ನ ಹಿಂದ ಒಗಿಲಿಕ್ಕೆ ಇವನ ಕೈಲಿಂದ ಆಗ್ತಾನ ಇರಲಿಲ್ಲ. ಇದೇ ಕಾರಣಕ್ಕ ಆ ಹುಡುಗ ಶಾಬಾದಿಮಠನ್ನ ದ್ವೇಷಿಸುತ್ತಿದ್ದ ಮತ್ತು ಆ ವಿಷಯ ಶಾಬಾದಿಮಠನಿಗೂ ಗೊತ್ತಿತ್ತು. ಮುಂದ ನಾವು ಶೈಕ್ಷಣಿಕ ಟೂರ್ ಇಟ್ಟಾಗ ಶಾಬಾದಿಮಠನ ವೈರಿಗೆ ಬರಾಕ ಆಗಲಿಲ್ಲ. ಯಾಕಂದ್ರ ಅವ ಬಾಳ ಬಡವ ಇದ್ದ. ಅದನ್ನು ತಿಳಿದ ಶಾಬಾದಿಮಠ ಖುದ್ದಾಗಿ ತಾನೇ ಕೈಯಿಂದ ರೊಕ್ಕಾ ಹಾಕಿ ಆ ಹುಡುಗನ್ನು ಕರಕೊಂಡು ಬಂದ. ನನಗ ಇದನ್ನು ನೋಡಿ ಬಾಳ ಆಶ್ಚರ್ಯ ಆಯ್ತು. ನಿಮ್ಮ ವೈರಿಗಳನ್ನೂ ಪ್ರೀತಿಸಿ ಎನ್ನುವ ವಿವೇಕಾನಂದರ ಮಾತನ್ನು ಆತ ಪ್ರ್ಯಾಕ್ಟಿಕಲಿ ಮಾಡಿ ತೋರಿಸಿದ್ದ. ನಾವಿನ್ನೂ ವಿವೇಕಾನಂದರ ಆ ಮಾತನ್ನು ಥೆಯರ್ಯಾಟಿಕಲಿ ಪಾಲಿಸ್ತಾ ಇದ್ರ ಅವ ಪ್ರ್ಯಾಕ್ಟಿಕಲಿ ಪಾಲಿಸಿ ತೋರಿಸಿದ್ದ. &lt;br /&gt;&lt;br /&gt;ಇನ್ನೊಬ್ಬಳು ವಿಜಯಲಕ್ಷ್ಮಿ ಅಂಗಡಿ ಅಂತಾ. ಅಕಿ ಗೆಳತಿಯೊಬ್ಬಳು ಹಿರೇಮಠ ಅಂತಾ ಬಾಳ ಬಡವಿ. ವಿಜಯಲಕ್ಷ್ಮಿ ತನ್ನ ಗೆಳತಿ ಪರಿಸ್ಥಿತಿ ನೋಡಿ ತನ್ನ ಅಪ್ಪನಿಗೆ ಹೇಳಿ ಆಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಓದಿಸಿದಳು. ಇಂಥ ಔದಾರ್ಯ ಮೆರೆದ ಆ ಹುಡುಗಿಯನ್ನು ಮರೆಯುವದಾದರೂ ಹೇಗೆ?  ಇಂಥ ಔನತ್ಯ ಎಷ್ಟು ಜನಕ್ಕೆ ಬರುತ್ತದೆ? ಮಾನವೀಯತೆಯ ಮೇಲೆ ನಾವು ಬರೇ ದೊಡ್ಡ ದೊಡ್ಡ ಭಾಷಣ ಬಿಗಿತೇವಿ, ದೊಡ್ಡ ದೊಡ್ಡ ಪುಸ್ತಕ ಬರಿತೇವಿ. ಆದ್ರ ಎಷ್ಟು ಜನ ನಾವು ಈ ಮಾನವೀಯತೆಯನ್ನು ಮೆರೆದಿದ್ದೇವೆ ಹೇಳ್ರಿ ನೋಡೋಣ? ಇದಕ್ಕಿಂತ ಹೆಚ್ಚಿಂದು ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಂದ ಕಲಿಯೋದಾದರು ಏನಿದೆ ಹೇಳ್ರಿ? &lt;br /&gt;ಈ ಮೇಲಿನ ವಿದ್ಯಾರ್ಥಿಗಳಿಬ್ಬರು ಸಾಮಾನ್ಯರು. ದೊಡ್ಡವರು ಮಾಡೋದು ದೊಡ್ಡದಲ್ಲ. ಸಣ್ಣವರು ಮಾಡೋದು ದೊಡ್ಡದಾಗುತ್ತೆ. ದೊಡ್ಡವರು ಮಾಡಿದ್ದನ್ನು ಹೈಲೈಟ್ ಮಾಡೋದು ಬಿಟ್ಟು ಸಣ್ಣವರ ಔದಾರ್ಯವನ್ನು ಹೈಲೈಟ್ ಮಾಡ್ರಿ. ಆಗ ನಮ್ಮ ದೇಶ ಮುಂದಕ ಬರತೈತಿ. &lt;br /&gt;     &lt;br /&gt;• ನೀವು ಬಿ.ಎ. ಬಿ.ಇಡ್ ಅಂತೀರಿ. ಆದರೆ ಅದ್ಹೇಗೆ ಗಣಿತ ಕಲಿಸ್ತೀರಿ?&lt;br /&gt;&lt;br /&gt;ನಾನು ಈ ಆಶ್ರಮ ಶುರು ಮಾಡಿದಾಗ ಎಂಟು ಜನ ಇದ್ದರು. ಆಗ ನಾನು ಬರೀ ಇಂಗ್ಲೀಷ್ ಮತ್ತು ಸಮಾಜ ಹೇಳತಿದ್ದೆ. ಆದ್ರ ನಮ್ಮ ಹುಡುಗರು ಗಣಿತನೂ ಹೇಳು ಅಂದ್ರು. ನಾನು ನನಗ ಗಣಿತ ಬರಂಗಿಲ್ಲ. ಇನ್ನ ನಾ ಹೆಂಗ ನಿಮಗೆ ಹೇಳ್ಲೀ ಅಂದೆ. ಅವರು ಹೆಂಗಾರ ಮಾಡಿ ಹೇಳ್ರಿ ಅಂತಾ ಒತ್ತಾಯ ಮಾಡಾಕ ಶುರು ಮಾಡಿದರು. ಆಗ ನಮ್ಮ ಸಾಲ್ಯಾಗ ಎಸ್.ಪಿ.ಗಾರ್ಗಿ ಅಂತಾ ಒಬ್ಬರು ಗಣಿತ ಮಾಸ್ತರ್ ಇದ್ದರು. ಅವರು ಆಗಲೇ ರಿಟ್ರೈಡ್ ಆಗಿದ್ದರು. ನಾನು ದಿನಾ ಅವರ ಮನಿಗೆ ಹೋಗಿ ಗಣಿತ ಹೇಳಿಸ್ಕೊಂಡು ಬರ್ತಿದ್ದೆ. ಅದನ್ನ ಬಂದು ಹುಡುಗರಿಗೆ ಹೇಳತಿದ್ದೆ. ಹುಡುಗರಿಗೂ ಇಂಟ್ರೆಸ್ಟ್ ಬಂತು. ನಂಗೂ ಇಂಟ್ರೆಸ್ಟ್ ಬಂತು. ಹಿಂಗ ಹೇಳಕೋತ ಹೋದೆ. ಅದ ವರ್ಷsನಾ ನನ್ನ ಕೈಯಾಗ ಕಲಿತ ಒಂದು ಹುಡುಗ S.S.L.C. ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಬಂದ. ನನಗ ಬಾಳ ಖುಶಿ ಆತು. ಮುಂದ 1981ರಾಗ Text Books ಚೇಂಜ್ ಆದವು. ಆಗ ಕಾಲೇಜು ಮಾಥ್ಸ್ ಇಟ್ರು. ನನಗ ಈ ಮ್ಯಾಥ್ಸ್ ಬರ್ತಾನ ಇರಲಿಲ್ಲ. ಆಗ ನನ್ನ ಕೈಯಾಗ ಕಲಿತ ಹುಡುಗನೊಬ್ಬ ಕಾಲೇಜಿನ್ಯಾಗ ಮ್ಯಾಥ್ಸ್ ಲೆಕ್ಚರರ್ ಆಗಿದ್ದ. ಅವನ್ನ ಕರಿಸಿ ನೀನು ಪಾಠ ಮಾಡು ನಾನು ಕೇಳ್ತೀನಿ ಅಂದೆ. ಅವ ಆ ರೀತಿ ಪಾಠ ಮಾಡ್ಕೋತ ಹೋದ. ನಾನು ಕೇಳ್ಕೋತ ಹೋದೆ. ಎಲ್ಲಾ ಕೇಳಕೊಂಡ ಮ್ಯಾಲೆ ನಾನು ಕಲಿಸೋಕ ಶುರು ಮಾಡಿದೆ. ಹಿಂಗ ನಾನೂ ಒಬ್ಬ ಗಣಿತದ ಮಾಸ್ತರ್ ಆದೆ.&lt;br /&gt;&lt;a href="http://3.bp.blogspot.com/-CaOfaxGjbHQ/TmS9uSyb7JI/AAAAAAAAAaI/nLmafcatnyE/s1600/Photo%2B9.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-CaOfaxGjbHQ/TmS9uSyb7JI/AAAAAAAAAaI/nLmafcatnyE/s320/Photo%2B9.JPG" border="0" alt=""id="BLOGGER_PHOTO_ID_5648848435644460178" /&gt;&lt;/a&gt;&lt;br /&gt;&lt;br /&gt;&lt;br /&gt;• ಈ ಸಂದರ್ಭದಲ್ಲಿ ನೀವು ಶಿಕ್ಷಕರಿಗೆ ಏನಾದ್ರೂ ಕಿಮಾತು ಹೇಳ್ತೀರಾ?&lt;br /&gt;&lt;br /&gt;ಅಯ್ಯಯ್ಯೊ! ನಾನು ಕಿವಿಮಾತು ಹೇಳುವಷ್ಟು ದೊಡ್ಡವನಲ್ರಿ. ಆದ್ರ ಒಂದ ಒಂದು ಮಾತು ಏನು ಹೇಳ್ತೀನಿ ಅಂದ್ರ ಪಾಠದ ವಿಷಯದಲ್ಲಿ ನಿಮ್ಮನ್ನು ನಂಬಿಕೊಂಡು ಬಂದ ಮಕ್ಕಳಿಗೆ ಮೋಸ ಮಾಡಬ್ಯಾಡ್ರಿ ಅಷ್ಟ. &lt;br /&gt;&lt;br /&gt;• ನಿಮ್ಮ ನಂತರ ಈ ಆಶ್ರಮದ ಉಸ್ತುವಾರಿ ಯಾರು ವಹಿಸಿಕೊಳ್ಳುತ್ತಾರೆ? ಈ ಪರಂಪರೆ ಹೀಗೆ ಮುಂದುವರಿಯುತ್ತಾ?&lt;br /&gt;&lt;br /&gt;God alone knows! ಮರಿಸ್ವಾಮಿ ಬಿಡಾಕ ನಾ ಏನ್ ಮಠ ಕಟ್ಟೇನೇನ್ರೀ? ನಂಗ ಮೊನ್ನೆ ಒಂದಷ್ಟು ಜನ ಬಂದು ನಿಮ್ಮ ಹಸರಿನ್ಯಾಗ ಒಂದು ಟ್ರಸ್ಟ್ ಮಾಡ್ತೀವಿ ಅಂತಾ ಹೇಳಿದ್ರು. ನಾನು ಬ್ಯಾಡ ಅಂದೆ. ಯಾಕಂದ್ರ ನನ್ನ ಹೆಸರಿನ್ಯಾಗ ಟ್ರಸ್ಟ್ ಮಾಡೋದು, ಸಂಸ್ಥೆ ಕಟ್ಟೋದು ನಂಗ ಇಷ್ಟ ಇಲ್ಲ. ಯಾಕಂದ್ರ ಒಂದು ಟ್ರಸ್ಟ್ ಆಂತಾದ್ರ ಮುಂದ ಅದಕ ಒಬ್ಬ ಪ್ರಸಿಡೆಂಟ್ ಅಂತಾ ಆಗಬೇಕು, ಸೆಕ್ರೇಟರಿ ಅಂತಾ ಆಗಬೇಕು. ಇನ್ನ ಆ ಅಧಿಕಾರಕ್ಕೆ ಜಗಳ ಶುರು ಆಕೈತಿ. ಹಣದ ದುರಪಯೋಗವೂ ಆಗಬಹುದು. ನನ್ನ ಹೆಸರಿನ್ಯಾಗ ಇದೆಲ್ಲಾ ನಡೆಯೋದು ನಂಗೆ ಒಂಚೂರು ಇಷ್ಟ ಇಲ್ಲ. ಹಿಂಗಾಗಿ ನನ್ನ ತರಾನ ಯೋಚ್ನೆ ಮಾಡೋರು ಯಾರದರೂ ಇದನ್ನು ನಡೆಸಿಕೊಂಡು ಹೋದ್ರೂ ಸಂತೋಷ. ಹೋಗದಿದ್ದರೂ ಸಂತೋಷ. (ನಗತೊಡಗಿದರು)&lt;br /&gt;&lt;br /&gt;&lt;br /&gt;ಅಣ್ಣಿಗೇರಿ ಮಾಸ್ತರರೊಂದಿಗೆ ಮಾತನಾಡುವದೆಲ್ಲಾ ಮುಗಿದ ಮೇಲೆ “ಸರ್, ನಿಮ್ಮ ಆಶ್ರಮಕ್ಕೆ ಏನಾದರೂ ಬೇಕಾದ್ರೆ ಹೇಳಿ. ಕೊಡಿಸಿ ಹೋಗ್ತೀನಿ. ಇಲ್ಲ ಅಂದ್ರ ದುಡ್ಡು ಕೊಡ್ತಿನಿ ನಿಮಗ ಹೆಂಗ ಬೇಕೋ ಹಂಗ ಉಪಯೋಗಿಸಿಕೊಳ್ಳಿ” ಎಂದು ಚೆಕ್ ಕೊಡಲು ಹೋದಾಗ ಅತ್ಯಂತ್ರ ವಿನಮ್ರರಾಗಿ ಏನೂ ಬೇಡ ಎಂದು ನಿರಾಕರಿಸಿದರು. ನಾನು ಮತ್ತೆ ಮತ್ತೆ ಒತ್ತಾಯಿಸಿದೆ. ಆದರೆ ಅವರು ಏನೂ ಮಾಡಿದರೂ ತೆಗೆದುಕೊಳ್ಳಲಿಲ್ಲ. ಸರ್, ನಿಮಗೆ ನಿಮ್ಮ ಪಿಂಚಣಿಯೊಂದರಿಂದಲೇ ಇಲ್ಲಿರುವ ಮಕ್ಕಳಿಗೆ ಊಟ ಹಾಕುವದು ಕಷ್ಟವಾಗಬಹುದು. ದಯವಿಟ್ಟು ತೆಗೆದುಕೊಳ್ಳಿ ಎಂದೆ. ಅವರು ಸಧ್ಯ ಈಗ ಎಲ್ಲ ಇದೆ. ಮುಂದೆ ಬೇಕಾದರೆ ಕೇಳುತ್ತೇನೆ ಎಂದರು. ನಾನು ನನ್ನ ಬೆಂಗಳೂರಿನ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟು ಬಂದೆ. &lt;br /&gt;&lt;br /&gt;ಬರುವಾಗ ತಲೆತುಂಬಾ ಮಾಸ್ತರರದೇ ಧ್ಯಾನ. ಎಂಥ ಅದ್ಭುತ ವ್ಯಕ್ತಿತ್ವ! ಎಂಥ ವಿಶಾಲ ಹೃದಯ! ಎಂಥ ಅದ್ಭುತ ಶಿಕ್ಷಕ!  ಇವರ ನಡೆ ನುಡಿ ನಮಗೆಲ್ಲಾ ಮಾದರಿಯಾಗಲಿ, ಸ್ಪೂರ್ತಿಯಾಗಲಿ, ದಾರಿದೀಪವಾಗಲಿ. ಶಿಕ್ಷಕರ ದಿನಾಚಾರಣೆಯಂದು ನಾವು ನಮ್ಮ ಶಿಕ್ಷಕರಿಗೆ ವಿಶ್ ಮಾಡುವದರ ಜೊತೆಗೆ ಇಂಥವರನ್ನು ಹುಡುಕಿ ತೆಗೆದು ಅವರನ್ನು ಸನ್ಮಾನ ಮಾಡಿದರೆ ಆ ಆಚರಣೆಗೊಂದು ಅರ್ಥವಾದರೂ ಸಿಕ್ಕೀತು. ಅಲ್ಲವೇ? &lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;ಈ ಲೇಖನ ಸಪ್ಟಂಬರ್ 5, 2011 ರ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ.  &lt;strong&gt;http://kendasampige.com/article.php?id=4703&lt;/strong&gt;&lt;br /&gt;&lt;br /&gt;ಫೋಟೋಗಳು: ಶಿವರಾಜ್ ಗೌರಿಪೂರು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-2628700298472131680?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/2628700298472131680/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/09/blog-post.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/2628700298472131680'/><link rel='self' type='application/atom+xml' href='http://www.blogger.com/feeds/2802103225554897449/posts/default/2628700298472131680'/><link rel='alternate' type='text/html' href='http://bisilahani.blogspot.com/2011/09/blog-post.html' title='ಶಿಕ್ಷಣದ ಸಂತೆಯಲ್ಲೊಬ್ಬ ಸಂತ'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-i-9oDxZtn-A/Tmm369GPWHI/AAAAAAAAAaY/4RPaByH1FM4/s72-c/P8171732.JPG' height='72' width='72'/><thr:total>4</thr:total></entry><entry><id>tag:blogger.com,1999:blog-2802103225554897449.post-6773506938482179752</id><published>2011-08-21T06:19:00.000+01:00</published><updated>2011-08-21T06:23:52.248+01:00</updated><title type='text'>ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ........</title><content type='html'>ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ&lt;br /&gt;ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.&lt;br /&gt;ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ &lt;br /&gt;ಕಲ್ಪನೆಯ ವಸ್ತುವಾಗಬಹುದು.&lt;br /&gt;ಅಥವಾ ನಿನ್ನ ಕ್ಯಾನ್ವಾುಸ್ ಮೇಲೆ&lt;br /&gt;ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು&lt;br /&gt;ನಿಧಾನವಾಗಿ ಕ್ಯಾನ್ವಾೂಸ್ ತುಂಬಾ ಹರಡಿಕೊಂಡು&lt;br /&gt;ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.&lt;br /&gt;&lt;br /&gt;ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ&lt;br /&gt;ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು. &lt;br /&gt;ಇಲ್ಲವೇ ನಿನ್ನ ಕ್ಯಾನ್ವಾ್ಸ್ ಮೇಲೆ &lt;br /&gt;ನಾನೇ ಬಣ್ಣ ಬಳಿದುಕೊಂಡು &lt;br /&gt;ಒಂದು ಚಿತ್ರವಾಗಿ ಮೂಡಬಹುದು.&lt;br /&gt;ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ&lt;br /&gt;ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.&lt;br /&gt;&lt;br /&gt;ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.&lt;br /&gt;ಬುಗ್ಗೆಯಾಗಿ ಅದರಿಂದ ಉಕ್ಕುವ &lt;br /&gt;ನೊರೆನೊರೆ ನೀರಿನ ಹನಿಗಳನ್ನು &lt;br /&gt;ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.&lt;br /&gt;ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ&lt;br /&gt;ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ&lt;br /&gt;ಏನಾದರಾಗಲಿ, ನಾನು ಮತ್ತೆ ನಿನ್ನೊಂದಿಗಿರುತ್ತೇನೆ.&lt;br /&gt;&lt;br /&gt;&lt;br /&gt;ಈ ದೇಹ ಹೋದರೆ&lt;br /&gt;ಎಲ್ಲವೂ ಹೋದಂತೆ.&lt;br /&gt;ಆದರೆ ಅದರೊಂದಿಗೆ ಹೆಣೆದುಕೊಂಡ&lt;br /&gt;ನೆನಪಿನ ದಾರದುಂಡೆಗಳು&lt;br /&gt;ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.&lt;br /&gt;ನಾನು ಆ ಎಳೆಗಳನ್ನೆ ಹಿಡಿದುಕೊಂಡು&lt;br /&gt;ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.&lt;br /&gt;ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.&lt;br /&gt;ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..&lt;br /&gt;&lt;br /&gt;ಮೂಲ ಪಂಜಾಬಿ; ಅಮೃತಾ ಪ್ರೀತಂ&lt;br /&gt;ಇಂಗ್ಲೀಷಿಗೆ: ನಿರುಪಮಾ ದತ್ತ&lt;br /&gt;ಕನ್ನಡಕ್ಕೆ: ಉದಯ್ ಇಟಗಿ&lt;br /&gt;(ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)&lt;br /&gt;&lt;br /&gt;&lt;br /&gt;&lt;br /&gt; &lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-6773506938482179752?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/6773506938482179752/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/08/blog-post.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/6773506938482179752'/><link rel='self' type='application/atom+xml' href='http://www.blogger.com/feeds/2802103225554897449/posts/default/6773506938482179752'/><link rel='alternate' type='text/html' href='http://bisilahani.blogspot.com/2011/08/blog-post.html' title='ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ........'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>2</thr:total></entry><entry><id>tag:blogger.com,1999:blog-2802103225554897449.post-6303774086404764474</id><published>2011-07-01T07:20:00.001+01:00</published><updated>2011-07-01T07:25:51.873+01:00</updated><title type='text'>ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು - ನನ್ನದಲ್ಲದ ಹೆಸರಿನಲ್ಲಿ ಬರೆಯುವ ಖುಶಿ!</title><content type='html'>&lt;a href="http://4.bp.blogspot.com/-3-T_U1Q_yYQ/Tg1oPnO2NoI/AAAAAAAAAZI/bfHwUWQ9eW8/s1600/diary-important.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 190px;" src="http://4.bp.blogspot.com/-3-T_U1Q_yYQ/Tg1oPnO2NoI/AAAAAAAAAZI/bfHwUWQ9eW8/s320/diary-important.jpg" border="0" alt=""id="BLOGGER_PHOTO_ID_5624266127094199938" /&gt;&lt;/a&gt;&lt;br /&gt;&lt;br /&gt;ಈ ಜಗತ್ತಿನಲ್ಲಿ ಹೆಸರಿಲ್ಲದವರು ಯಾರು ಇದ್ದಾರೆ ಹೇಳಿ? ಎಲ್ಲರಿಗೂ ಏನಾದರೊಂದು ಹೆಸರಿದ್ದೇ ಇರುತ್ತದಲ್ಲವೆ? ಹೀಗಾಗಿ ಎಲ್ಲರಿಗೂ ಇರುವಂತೆ ನಂಗೂ ಒಂದು ಹೆಸರು ಅಂತಾ ಇದೆ. ನಂಗೂ ನನ್ನದೇ ಆದಂತ ಒಂದು ಅಸ್ಥಿತ್ವ, ಊರು-ಕೇರಿ, ದೆಸೆ-ದಿಕ್ಕು ಎಲ್ಲ ಇವೆ. ಜೊತೆಗೆ ಒಂದಿಷ್ಟು ಬಂಧುಗಳು, ಹಿತೈಷಿಗಳು, ಗೆಳೆಯರು, ಶತ್ರುಗಳು ಎಲ್ಲರೂ ಇದ್ದಾರೆ. ಆದರೂ ನಾನೊಬ್ಬ ಅನಾಮೇಧಯ! ಹಾಗಂತ ನನ್ನನ್ನು ನಾನೇ ಕರೆದುಕೊಂಡಿದ್ದೇನೆ. ಹೆಸರಿದ್ದೂ ‘ನಾನೊಬ್ಬ ಅನಾಮೇಧಯ’ ಅಂತಾ ಹೇಳಿಕೊಳ್ಳುವದರಲ್ಲಿನ ನಿಜವಾದ ಖುಶಿ, ಆತ್ಮತೃಪ್ತಿ, ಪ್ರಾಮಾಣಿಕತೆ ಬೇರೆ ಯಾವುದರಲ್ಲೂ ಸಿಗುವದಿಲ್ಲ. ಏಕೆಂದರೆ ನಮ್ಮದಲ್ಲದ ಹೆಸರಿನಲ್ಲಿ ನಾವು ಬರೆದಾಗಲೇ ನಾಚಿಕೆ, ಮಾನ, ಅಪಮಾನಗಳ ಹಂಗನ್ನು ತೊರೆದು ಎಲ್ಲವನ್ನು ಬಿಚ್ಚಿಟ್ಟು ಬೆತ್ತಲಾಗೋಕೆ ಸಾಧ್ಯ. ನಾವು ಬದುಕುತ್ತಾ ಬದುಕುತ್ತಾ  ನಾವಾಗಿ ಬದುಕಲಾಗುವದಿಲ್ಲ. ಅಥವಾ ಪರಿಸ್ಥಿತಿಗಳು ನಮ್ಮನ್ನು ಹಾಗೆ ಬದುಕಲು ಬಿಡುವದಿಲ್ಲ. ನಾವೆಲ್ಲಾ ಬದುಕುವದು ಒಳಗೊಂದು ಹೊರಗೊಂದರಂತೆ! ನಾವು ಎಷ್ಟೇ ನಾವು ನಾವಾಗಿ ಬದುಕುತ್ತೇವೆಂದರೆ ಅದು ಸಾಧ್ಯವಾಗುವದೇ ಇಲ್ಲ. ಒಂದೊಂದು ಸಾರಿ ನಮ್ಮೊಳಗೆ ನಾವೇ ಪ್ರಾಮಾಣಿಕರಾಗಿರುವದು ಕಷ್ಟವಾಗುತ್ತದೆ. ಹೀಗಾಗಿ ಈ ಬರಹದಲ್ಲಾದರೂ ನನ್ನೊಳಗನ್ನು ಒಮ್ಮೆ ಬಿಚ್ಚಿ ಬೆತ್ತಲಾಗಬೇಕು, ನನ್ನ ಸಾಚಾತನವನ್ನು ನಾನೇ ಬಯಲಿಗೆಳೆಯಬೇಕು, ನನ್ನ ಅಂತರಂಗದೊಡನೆ ನಾನೇ ಮುಖಾಮುಖಿಯಾಬೇಕು ಹಾಗೂ ಆ ಮೂಲಕ ನನ್ನನ್ನು ಇನ್ನೊಮ್ಮೆ ನಾನೇನೆಂದು ಕಂಡುಕೊಳ್ಳಬೇಕಾಗಿದೆ. ಹಾಗೆಂದೇ ಈ ಡೈರಿ ಬರೆಯುತ್ತಿದ್ದೇನೆ......&lt;br /&gt;&lt;br /&gt;ಹೀಗೆ ನನ್ನನ್ನು ನಾನು ನಾನಿರುವಂತೆ ನನ್ನ ನಿಜ ನಾಮಧೇಯದಲ್ಲಿ ಬಿಚ್ಚಿಟ್ಟರೆ ನನ್ನ ಹೆಸರಿಗೊಂದು ಕಳಂಕ ಅಂಟಿಕೊಳ್ಳಬಹುದು ಎಂಬ ಆತಂಕ ನನಗಿದೆ. ಅದು ನನಗಿಷ್ಟವಿಲ್ಲ. ಇಷ್ಟವಿಲ್ಲ ಎನ್ನುವದಕ್ಕಿಂತ ಎಲ್ಲವನ್ನೂ ಬಿಚ್ಚಿಟ್ಟು ನಿಮ್ಮ ಮುಂದೆ ಬೆತ್ತಲಾಗುವ ಧೈರ್ಯ ನನಗಿಲ್ಲ. ಅಥವಾ ನನ್ನ ಬಗ್ಗೆ ಎಲ್ಲವನ್ನೂ ತಿಳಿಸಿ ಆಮೇಲಿಂದ ನಿಮ್ಮೊಂದಿಗೆ ಮುಜುಗುರಕ್ಕೀಡಾಗುವ ಪ್ರಸಂಗಗಳನ್ನೆದುರಿಸುವ ತಾಕತ್ತೂ ನನಗಿನ್ನೂ ಬಂದಿಲ್ಲ. ಒಂದು ವೇಳೆ ನಾನು ನನ್ನ ನಿಜವಾದ ಹಸರಿನಲ್ಲಿಯೇ ಬರೆದೆನೆಂದು ಇಟ್ಟುಕೊಳ್ಳಿ. ಆಗ ನನ್ನ ನೇರತನ, ಪ್ರಾಮಾಣಿಕತೆಯನ್ನು ನೀವು ಈಗ ಒಪ್ಪಿಕೊಂಡರೂ ಮುಂದೆ ಎಂದಾದರೂಂದು ದಿನ ಅದನ್ನು ಎತ್ತಿ ಆಡುವ, ಆಡಿಕೊಳ್ಳುವ, ಛೇಡಿಸುವ, ಛೇದಿಸುವ, ಚುಡಾಯಿಸುವ ಇಲ್ಲವೇ ಗೇಲಿ ಮಾಡುವ ಸಂಭವನೀಯತೆ ಇರುತ್ತದಾದ್ದರಿಂದ ನಾನು ನನ್ನದಲ್ಲದ ಹೆಸರಿನಲ್ಲಿ ಬರೆಯುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಬಗ್ಗೆ ಬರೆದುಕೊಳ್ಳಬೇಕಾದರೆ ಸಹಜವಾಗಿ ನನ್ನ ಆಪ್ತವಲಯದವರ, ಬಂಧುಗಳ, ಸ್ನೇಹಿತರ ಬಗ್ಗೆಯೂ ಒಂಚೂರು ಹೇಳಬೇಕಾಗುತ್ತದೆ. ನಾನು ಹೀಗೆ ನೇರಾ ನೇರಾ ಅವರೆಲ್ಲರ ಅಪ್ಪಣೆಯಿಲ್ಲದೆ ಅವರ ಬಗ್ಗೆ ಬರೆದರೆ ಅವರಿಗೆ ಖಂಡಿತ ನೋವಾಗುತ್ತದೆ. ಒಂದು ವೇಳೆ ಅಪ್ಪಣೆ ಸಿಕ್ಕರೂ ತಮ್ಮ ಬಗ್ಗೆ ಕೆಟ್ಟ ಸಂಗತಿಗಳು ದಾಖಲಾಗುವದನ್ನು ಅವರು ಸಹಿಸಲಾರರು. ಏಕೆಂದರೆ ಅವರಿಗೆ ಅವರ ತಪ್ಪು-ಒಪ್ಪುಗಳು, ಅಂಕುಡೊಂಕುಗಳು, ಓರೆಕೋರೆಗಳು ಬಹಿರಂಗವಾಗುವದು ಇಷ್ಟವಾಗುವದಿಲ್ಲ. ಜಗತ್ತು ಇರುವದೇ ಹಾಗೆ! ಜನ ತಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ತಿದ್ದಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಹಾಗೆ ತೋರಿಸ ಹೊರಟರೆ ಖಂಡಿತ ಅವರಿಗದು ಇಷ್ಟವಾಗುವದಿಲ್ಲ. ಇನ್ನು ತಿದ್ದಿಕೊಳ್ಳುವ ಮಾತಂತೂ ದೂರವೇ ಉಳಿಯಿತು. ಇದು ನಾನು ಬುದ್ಧಿ ಬಂದಾಗಿನಿಂದ ಕಂಡುಕೊಂಡ ಸತ್ಯ! ಮೇಲಾಗಿ ನನಗೂ ಅವರ ಬಗ್ಗೆ ಹಾಗೆಲ್ಲಾ ಖುಲ್ಲಂಖುಲ್ಲಾ ಬರೆದು ಅವರಿಗೆ ಮುಜುಗುರವನ್ನಾಗಲಿ, ಕಸಿವಿಸಿಯನ್ನಾಗಲಿ ಉಂಟುಮಾಡಲು ಇಷ್ಟವಿಲ್ಲ. &lt;br /&gt;&lt;br /&gt;ಹೀಗಾಗಿ ನಾನು ಅನಾಮೇಧಯ ಎಂಬ ಹಸರಿನಲ್ಲೇ ನನ್ನ ಡೈರಿಯನ್ನು ಬರೆಯುತ್ತೇನೆ. ಬೇಕಾದರೆ ನೀವು ನಿಮ್ಮ ಗುರುತಿಗೋಸ್ಕರ ನನ್ನನ್ನು ‘ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಎಂಬಾತ ಈಗ ಈ ಡೈರಿಯನ್ನು ಬರೆಯುತ್ತಿದ್ದಾನೆ’ ಎಂದು ಗುರುತಿಸಿಕೊಳ್ಳಿ. ನ್ನನ್ನದೇನೂ ಅಭಂತರವಿಲ್ಲ. ಆದರೆ ನಾನ್ಯಾರಿರಬಹುದು ಎಂದು ತಿಳಿದುಕೊಳ್ಳುವ ಹುಚ್ಚು ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಒಂದು ವೇಳೆ ಹುಡುಕಲು ಪ್ರಯತ್ನಪಟ್ಟರೂ ನಾನು ಹೊರಗೆಲ್ಲಿ ಸಿಗುವದಿಲ್ಲ. ಏಕೆಂದರೆ ನಾನು ನಿಮ್ಮೊಳಗೇ ಅಡಗಿ ಕುಳಿತಿದ್ದೇನೆ. ಇಲ್ಲಿ ನಾನು ಬರೆದುಕೊಳ್ಳುವದು ನನ್ನ ಬಗ್ಗೆಯೇ! ಆದರೆ ಮನುಷ್ಯ ಸದಾ ಒಂಟಿಯಾಗಿರಲು ಸಾಧ್ಯವಿಲ್ಲ ನೋಡಿ. ಹೀಗಾಗಿ ನನ್ನೊಂದಿಗೆ ನನ್ನ ಒಂದಿಷ್ಟು ಗೆಳೆಯರು, ಗೆಳತಿಯರು, ಬಂಧುಗಳು ಹಾಗು ಇತರೆ ಜನರು ಆಗಾಗ್ಗೆ ಈ ಡೈರಿಯಲ್ಲಿ ಬಂದು ಹೋಗುತ್ತಾರೆ. ಆಫ್ಕೋರ್ಸ್, ಅವರಿಗೂ ನನ್ನಂತೆಯೇ ಹೆಸರಿದೆಯಾದರೂ ಅವರನ್ನು ಅವರ ನಿಜದ ಹೆಸರಿನಲ್ಲಿ ಕರೆದು ಅವರ ಹೆಸರುಗಳನ್ನು ಬಹಿರಂಗಪಡಿಸುವದಿಲ್ಲ. ನಿಮಗೆ ಓದುವಾಗ ನಿಮ್ಮ ತಿಳುವಳಿಕಿಗಿರಲಿ ಹಾಗೂ ನಿಮಗೆ ಅರ್ಥಮಾಡಿಕೊಳ್ಳಲು ಯಾವುದೇ ಗೊಂದಲವಾಗಬಾರದೆಂದು ಅವರಿಗೆಲ್ಲಾ  ಸುಳ್ಳು ಸುಳ್ಳು ಹೆಸರುಗಳನ್ನು ನೀಡಿದ್ದೇನೆ.&lt;br /&gt;&lt;br /&gt;ನನಗೆ ಮೊದಲಿನಿಂದಲೂ ಒಂದು ಆಸೆಯಿತ್ತು: ನಾನಿರುವಂತೆ ನನ್ನ ಬಗ್ಗೆ ಬರೆದುಕೊಳ್ಳಬೇಕೆಂದು. ಅದು ಇವತ್ತು ಕೂಡಿ ಬಂದಿದೆ. ಬರೆಯುತ್ತಾ ಬರೆಯುತ್ತಾ ಯಾವುದೇ ಮುಚ್ಚುಮರೆಯಿಲ್ಲದೆ ನನ್ನೊಳಗನ್ನು ಒಮ್ಮೆ ನಿಮ್ಮ ಮುಂದೆ ತೆರೆದಿಡಬೇಕು, ನಿಮ್ಮೊಡನೆ ಒಮ್ಮೆ ಹಂಚಿಕೊಳ್ಳಬೇಕು, ಹಂಚಿ ಹಗುರಾಗಬೇಕು, ನೀವದನ್ನು ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವು ನನ್ನೊಂದಿಗೆ ಗುರುತಿಸಕೊಳ್ಳಬೇಕು ಎಂದು. ಏಕೆಂದರೆ ನಾನು ಎಂಬುದು ಬರಿ ನಾನು ಮಾತ್ರವಲ್ಲ. ಅಲ್ಲಿ ನೀವಿದ್ದೀರಿ. ಅವನಿದ್ದಾನೆ. ಅವಳಿದ್ದಾಳೆ. ಅವರಿದ್ದಾರೆ, ಇವರಿದ್ದಾರೆ. ಇನ್ನೂ ಯಾರ್ಯಾರೋ ಇದ್ದಾರೆ. ಹೀಗಾಗಿ ನನ್ನಲ್ಲಿ ನೀವು ನಿಮ್ಮದೇ ಪ್ರತಿಬಿಂಬವನ್ನು, ನಿಮ್ಮ ಗೆಳೆಯ, ಗೆಳತಿಯರ ಪ್ರತಿಬಿಂಬಗಳನ್ನು ಅಥವಾ ನಿಮಗೆ ಹತ್ತಿರದವರ ಪ್ರತಿಬಿಂಬಗಳನ್ನು ಕಂಡರೆ ಅಚ್ಚರಿಯೇನಿಲ್ಲ. ಅಷ್ಟಕ್ಕೂ ನಾನಿಲ್ಲಿ ಬರೆಯುವದಾದರೂ ಏನನ್ನು? ನನ್ನ ಒಂದಿಷ್ಟು ಕನಸು-ಕನವರಿಕೆಗಳನ್ನು, ನೆನಪು-ನೇವರಿಕೆಗಳನ್ನು, ತವಕ-ತಲ್ಲಣಗಳನ್ನು, ನೋವ-ನಲಿವುಗಳನ್ನು, ಆಸೆ-ನಿರಾಶೆಗಳನ್ನು, ನನ್ನೊಳಗೇ ಹುಟ್ಟಿ ಸಾಯುವ ನನ್ನ ಒಂದಿಷ್ಟು ದ್ವಂದಗಳನ್ನು, ತಳಮಳಗಳನ್ನು, ಬದುಕಿನ ವಿಪರ್ಯಾಸಗಳನ್ನು ಹೀಗೆ ಇನ್ನೂ ಏನೇನೋ..........ಜೊತೆಗೆ ನನ್ನೊಳಗಿನ ಒಂದಷ್ಟು ಪುಳಕವನ್ನು, ಆತ್ಮವಂಚನೆಯನ್ನು, ಈರ್ಷೆಯನ್ನು, ಅಸಹಾಯಕತೆಯನ್ನು ಮತ್ತು ಯಾರೊಂದಿಗೂ ಹಂಚಿಕೊಳ್ಳಲಾಗದೆ ನನ್ನೊಳಗೇ ಬಚ್ಚಿಟ್ಟ  ನನ್ನ ಒಂದಿಷ್ಟು ಪ್ರೇಮ-ಕಾಮಗಳನ್ನು ಹಾಗೂ ಮನುಷ್ಯ ಸಹಜ ದೌರ್ಬಲ್ಯಗಳಾದ ನನ್ನ ಸಿಟ್ಟು, ಆಕ್ರೋಶಗಳನ್ನು.&lt;br /&gt;&lt;br /&gt;ಅಂದಹಾಗೆ ನಾನಿಲ್ಲಿ ಎದ್ದೆ, ಕೂತೆ, ತಿಂದೆ, ತಿರುಗಾಡಿದೆ ಎಂಬಂತಹ ನೀರಸ ವಿಷಯಗಳನ್ನು ಬರೆಯುಲು ಹೋಗುವದಿಲ್ಲ. ನಾ ಕಂಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ನನಗೆ ಬಿಡುವಾದಾಗ ನೇರಾನೇರ ದಾಖಲಿಸುತ್ತಾ ಹೋಗುತ್ತೇನಷ್ಟೆ. ಅದರಲ್ಲಿ ವರ್ತಮಾನ, ಭೂತ, ಭವಿಷತ್ ಕಾಲದ ಸಂಗತಿಗಳೆಲ್ಲಾ ಅಡಗಿರುತ್ತವೆ. ನೀವು ಬೇಕಾದರೆ ನನ್ನನ್ನು ಮೂರ್ಖನೆನ್ನಿ,  ಹುಚ್ಚನೆನ್ನಿ,  ವಿಕ್ಷಿಪ್ತ ಮನಸ್ಸಿನವನೆನ್ನಿ ಏನು ಬೇಕಾದರೂ ಅನ್ನಿ. ಐ ಡೋಂಟ್ ಕೇರ್! &lt;br /&gt;&lt;br /&gt;ಮತ್ತೊಂದು ವಿಷ್ಯ. ಒಬ್ಬ ಮನುಷ್ಯನ ಬದುಕಿನಲ್ಲಿ ಕೆಲವೊಂದಿಷ್ಟ ದಿನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ದಿನಗಳು ಪ್ರಮುಖವಾಗಿರುವದಲ್ಲಿವಾದ್ದರಿಂದ ನಾನು ನನ್ನ ಡೈರಿಯಲ್ಲಿ ದಿನಾಂಕವನ್ನು ನಮೂದಿಸುವ ಗೋಜಿಗೆ ಹೋಗಿಲ್ಲ. ಏನಾದರೊಂದು ಮಹತ್ತರವಾದದ್ದು ನಡೆದ ದಿನವನ್ನು ಮಾತ್ರ ಆ ದಿನಾಂಕ ಸಮೇತ ನಮೂದಿಸುತ್ತೇನೆ. &lt;br /&gt;&lt;br /&gt;ಇನ್ನೊಂದು ವಿಷ್ಯ: ಮನುಷ್ಯರ ಬಗ್ಗೆ ಆಸಕ್ತಿಯಿರಬೇಕೇ ಹೊರತು ಕುತೂಹಲವಿರಬಾರದು. ಇಷ್ಟು ಸಾಕಲ್ಲವೆ? ಸಧ್ಯಕ್ಕೆ ಈ ಡೈರಿಯನ್ನು ಮುಚ್ಚಿಡಿ. ಮತ್ತೆ ಬಿಡುವಾದಾಗ ಮತ್ತೊಂದು ವಿಷಯವನ್ನು ಬರೆದಿಟ್ಟಿರುತ್ತೇನೆ. ಆಗ ಬಂದು ಓದಬಹುದು. ಅಲ್ಲಿಯವರೆಗೆ ಬೈ ಬೈ.......&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-6303774086404764474?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/6303774086404764474/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/07/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/6303774086404764474'/><link rel='self' type='application/atom+xml' href='http://www.blogger.com/feeds/2802103225554897449/posts/default/6303774086404764474'/><link rel='alternate' type='text/html' href='http://bisilahani.blogspot.com/2011/07/blog-post.html' title='ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು - ನನ್ನದಲ್ಲದ ಹೆಸರಿನಲ್ಲಿ ಬರೆಯುವ ಖುಶಿ!'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-3-T_U1Q_yYQ/Tg1oPnO2NoI/AAAAAAAAAZI/bfHwUWQ9eW8/s72-c/diary-important.jpg' height='72' width='72'/><thr:total>1</thr:total></entry><entry><id>tag:blogger.com,1999:blog-2802103225554897449.post-4336182595292591968</id><published>2011-05-29T04:32:00.002+01:00</published><updated>2011-05-29T04:55:43.680+01:00</updated><title type='text'>‘ಪುಟ್ಟಕ್ಕನ ಹೈವೇ’ ನಲ್ಲಿ ಒಂದಷ್ಟು ಹೊತ್ತು..............</title><content type='html'>&lt;a href="http://1.bp.blogspot.com/-NW_k2cdfrc4/TeHDsy4ChlI/AAAAAAAAAY8/VhsdQhUIk1Q/s1600/Puttakkana-Highway1-186x186.jpg"&gt;&lt;img style="float:left; margin:0 10px 10px 0;cursor:pointer; cursor:hand;width: 186px; height: 186px;" src="http://1.bp.blogspot.com/-NW_k2cdfrc4/TeHDsy4ChlI/AAAAAAAAAY8/VhsdQhUIk1Q/s320/Puttakkana-Highway1-186x186.jpg" border="0" alt=""id="BLOGGER_PHOTO_ID_5611981785018828370" /&gt;&lt;/a&gt;&lt;br /&gt;ಮೊಟ್ಟ ಮೊದಲಿಗೆ ನಾನು ಬಿ. ಸುರೇಶ್ ಅವರಿಗೆ ಒಂದು ಹ್ಯಾಟ್ಸಾಫ್ ಹೇಳುತ್ತೇನೆ-ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಟ್ಟಕ್ಕನ ಮೆಡಿಕಲ್ ಕಾಲೇಜು’ ಎನ್ನುವ ಸಣ್ಣಕತೆಯೊಂದನ್ನು ‘ಪುಟ್ಟಕ್ಕನ ಹೈವೇ’ ಎಂಬ ಸುಮಾರು ಎರಡು ಗಂಟೆಗಳಷ್ಟು ಅದ್ಭುತ ಸಿನಿಮಾವೊಂದನ್ನಾಗಿ ಮಾರ್ಪಡಿಸಿದ್ದಕ್ಕೆ. ಬಿ.ಸುರೇಶ್ ಅವರ ಬಹಳಷ್ಟು ಟೀವಿ ಧಾರಾವಾಹಿಗಳು ಹತ್ತರಲ್ಲಿ ಹನ್ನೊಂದಾಗಿ ಹೊರಬರುತ್ತವೆಯಾದರೂ ಅವರು ಆಗೊಮ್ಮೆ ಈಗೊಮ್ಮೆ ತಯಾರಿಸುವ ಸಿನಿಮಾಗಳು ಅತ್ಯದ್ಭುತವಾಗಿರುತ್ತವೆ. ಈ ಹಿಂದೆ ಅವರು ತಯಾರಿಸಿದ ‘ಅರ್ಥ’ ಸಿನಿಮಾ ಕೂಡ ಒಳ್ಳೆಯ ಸಿನಿಮಾವಾಗಿದ್ದು, ಅದು ಮೊದಲ ಅತುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಈ ಸಿನಿಮಾದ ನಾಯಕ ಎಲ್ಲವನ್ನೂ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಹೋಗಿ ಕೊನೆಗೆ ಏನೂ ಅರ್ಥವಾಗದೆ ಕಂಗಾಲಾಗುತ್ತಾನೆ. ಆ ಮೂಲಕ ಸುರೇಶ್ ಅವರು ಇಲ್ಲಿ ಮನುಷ್ಯರು ಹಾಗೂ ಅವರ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲುಹೋದಷ್ಟೂ ಅವರು ಸಂಕೀರ್ಣವಾಗುತ್ತಾ ಹೋಗುತ್ತಾರೆ ಎನ್ನುವ ಸಂದೇಶವನ್ನು ಕೊಡುತ್ತಾರೆ. ಆದರೆ ಈ ಸಾರಿ ಸಣ್ಣಕತೆಯೊಂದನ್ನು ತೆಗೆದುಕೊಂಡು ಅದನ್ನು ಸಮಕಾಲೀನ ಸಮಸ್ಯೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿ ಅದನ್ನೊಂದು ಒಳ್ಳೆ ಸಿನಿಮಾವನ್ನಾಗಿ ತಯಾರಿಸಿದ್ದಾರೆ. ಇದೀಗ ಅದು ಬಿಡುಗಡೆಯಾಗಿದ್ದು ಹಾಗೂ ಈಗಷ್ಟೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಬಿ.ಸುರೇಶ್ ಅವರೇ ಹೇಳುವಂತೆ ಅವರ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು ಹಾಗೂ ರಾಷ್ಟ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದು ಕೇವಲ ಕಾಕತಾಳಿಯ ಮಾತ್ರ.&lt;br /&gt;&lt;br /&gt;‘ಪುಟ್ಟಕ್ಕನ ಹೈವೇ’ ಹೆಸರೇ ಹೇಳುವಂತೆ ಹೈವೇ ಬರುವದಕ್ಕಿಂತ ಮುಂಚೆ ಪುಟ್ಟಕ್ಕನ ಬದುಕಿನ ಆಸು ಪಾಸುಗಳು ಹೇಗಿದ್ದವು ಮತ್ತು ಅವು ಹೈವೇ ಬಂದಮೇಲೆ ಹೇಗಾದವು ಎನ್ನುವದನ್ನು ತುಂಬಾ ಕಲಾತ್ಮಾಕವಾಗಿ ಕಟ್ಟಿಕೊಡುತ್ತದೆ. ಅದನ್ನು ಸುಂದರ ನಿರೂಪಣೆ ಮತ್ತು ಅರ್ಥಗರ್ಭಿತ ದೃಶ್ಯ ರೂಪಕಗಳೊಂದಿಗೆ ಸುರೇಶ್ ಮತ್ತಷ್ಟು ಮೆರಗುಗೊಳಿಸುತ್ತಾರೆ. ಆಧುನಿಕ ಅಭಿವೃದ್ಧಿಯ ನೆಪದಲ್ಲಿ ಏನೊಂದು ಅರಿಯದ ಪುಟ್ಟಕ್ಕ ಮತ್ತು ಅವಳಂಥವರ (ಮುಖ್ಯವಾಗಿ ರೈತರ) ಶೋಷಣೆ ಹೇಗೆ ಆಗುತ್ತದೆ ಎನ್ನುವದನ್ನು ಹೇಳುತ್ತಲೇ ಎಲ್ಲರೂ ಸಮಾನರೇ ಎಂದು ಸಾರುವ ಈ ದೇಶದಲ್ಲಿ ಬಡವರ ಪಾಲಿಗೆ ನ್ಯಾಯ ಎನ್ನುವದು ಯಾವಾಗಲೂ ಹೇಗೆ ಮರಿಚಿಕೆಯಾಗಿ ಉಳಿಯುತ್ತದೆ ಎನ್ನುವದನ್ನು ನೋಡಿದರೆ ನಮ್ಮ ಕರುಳು ಚುರ್ರೆನ್ನುತ್ತದೆ. ಬಡವರ ಶೋಷಣೆ, ಹತಾಶೆ, ನೋವುಗಳು ನಮ್ಮನ್ನು ತಟ್ಟುತ್ತಿದ್ದಂತೆಯೇ ನಮಗೆ ಅವರ ಮೇಲೆ ಅನುಕಂಪ ಬರುವದು ಸಹಜ. ಆದರೆ ಅದರ ಬೆನ್ನ ಹಿಂದೆಯೇ ದಿನಾ ಕಾರು, ಬೈಕಲ್ಲಿ ಓಡಾಡುವವ ನಮ್ಮಂತವರಿಗೆ ಇಂಥದೊಂದು ಹೈವೇ ಬೇಕೆನಿಸುವದು ಅಷ್ಟೇ ಸಹಜ. ಆ ಸಹಜ ಹಂಬಲದ ಹಿಂದೆ ಪುಟ್ಟಕ್ಕನಂತವರ ತ್ಯಾಗ, ಶೋಷಣೆ ಹಾಗೂ ನೋವು ಇರುತ್ತದೆ ಎಂದು ನಮಗೆ ಒಂಚೂರು ಅನಿಸುವದೇ ಇಲ್ಲ. ಅದನ್ನು ನಮಗೆ ಮನದಟ್ಟು ಮಾಡಲೆಂದೇ ನಿರ್ದೇಶಕ ಪುಟ್ಟಕ್ಕನ ಕಥೆಯನ್ನು ಅದ್ಭುತವಾಗಿ ಹೇಳುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಪುಟ್ಟಕ್ಕ ಹೇಳುತ್ತಾಳೆ- ‘ಈ ಬದುಕಿನ್ಯಾಗೆ ಸೋಲಿನ ಮೇಲೆ ಸೋಲು ಬರ್ತವೆ. ಆದರೆ ಹೋರಾಡೋ ಹುಮ್ಮಸ್ಸು ಮಾತ್ರ ಹೋಗೋದೇ ಇಲ್ಲ ನೋಡು.’ ಆದರೆ ಕೊನೆಯಲ್ಲಿ ಅವಳ ಬದುಕಿಗಿಂತ ಅವಳಿರುವ ವ್ಯವಸ್ಥೆ ಅವಳ ಹುಮ್ಮಸ್ಸನ್ನು ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಅವಳು ಮಾತ್ರವಲ್ಲ ಅವಳಂತೆ ಹೋರಾಡುವ ಎಲ್ಲರೂ ಹುಮ್ಮಸ್ಸು ಕಳೆದುಕೊಂಡು ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಇತ್ತ ತನ್ನ ಮೊದಲಿನ ಬದುಕು ಸಿಗದೆ ಅತ್ತ ರಾಜಿಮಾಡಿಕೊಳ್ಳದೆ ದಿಕ್ಕು ತೋಚದವಳಾಗುತ್ತಾಳೆ. &lt;br /&gt;&lt;br /&gt; ‘ಪುಟ್ಟಕ್ಕನ ಹೈವೇ’ ಆರಂಭವಾಗುವದೇ ಅವಳು ಹೈವೇಗುಂಟ ನಡೆದುಕೊಂಡು ಹೋಗುವ ದೃಶ್ಯದೊಂದಿಗೆ. ಹಾಗೆ ನಡೆದುಕೊಂಡು ಹೋಗುತ್ತಲೇ ಅವಳು ಫ್ಲ್ಯಾಶ್ ಬ್ಯಾಕ್ ಗೆ ಜಾರುತ್ತಾಳೆ. ಆ ಹೈವೇ ಬರುವದಕ್ಕಿಂತ ಮುಂಚೆ ಅಲ್ಲಿ ಒಂದಷ್ಟು ಹೊಲ ಮಾಡಿಕೊಂಡು ಅವಳು ತನ್ನ ಗಂಡನೊಟ್ಟಿಗೆ ನೆಮ್ಮದಿಯಿಂದ ಇರುತ್ತಾಳೆ. ಆದರೆ ವಿಧಿಯಾಟವೇನೋ ಗಂಡ ಹೃದಯಾಘಾತದಿಂದ ಸತ್ತುಹೋಗುತ್ತಾನೆ. ಆದರೂ ಅವಳು ಛಲ ಬಿಡದೆ ಅದೇ ಹೊಲದಲ್ಲಿ ಗೇಯ್ಮೆ ಮಾಡಿಕೊಂಡು ತನ್ನ ಮಗಳೊಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಆಮೇಲಿಂದ ಅಲ್ಲೊಂದು ಹೈವೇ ಮಾಡಬೇಕೆಂದು ಸರಕಾರ ತೀರ್ಮಾನಿಸಿದಾಗ ಅವಳು ಮತ್ತು ಇನ್ನಿತರರು ಹೊಲ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ.  ಆಗ ಪ್ರತಿಭಟನೆಗಳು, ಹೋರಾಟಗಳು ಶುರುವಾಗುತ್ತವೆ. ಅದರಲ್ಲಿ ಪುಟ್ಟಕ್ಕನೂ ಭಾಗಿಯಾಗುತ್ತಾಳೆ. ಆದರೆ ದಿನಕಳೆದಂತೆ ಅವಳಿಗೆ ತನಗೆ ಬೆಂಬಲ ಸೂಚಿಸುವವರು ಹಾಗೂ ಸರಕಾರಿ ಅಧಿಕಾರಿಗಳ ಸೋಗಲಾಡಿತನ ಗೊತ್ತಾಗಿ ಮತ್ತಷ್ಟು ಹತಾಶಳಾಗುತ್ತಾಳೆ. ಕೊನೆಯಲ್ಲಿ ತನ್ನ ಮುಂದಿನ ಗತಿಯೇನಾಗುತ್ತದೆ ಎಂದು ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲು ಹೋದಾಗ ಅವಳಿಗೆ ಒಂದು ಸತ್ಯ ಗೊತ್ತಾಗುತ್ತದೆ. ಅದೇನೆಂದರೆ ಅವಳು ಮತ್ತು ಅವಳೂರಿನ  ಒಂದಷ್ಟು ಜನ ಈ ಹಿಂದೆ ಸರಕಾರ ಅವರಿದ್ದ ಜಾಗದಲ್ಲಿ ಒಂದು ಆಣೆಕಟ್ಟು ಕಟ್ಟಬೇಕೆಂದು ಅವರ ಜಮೀನನ್ನು ಕಿತ್ತುಕೊಂಡು ಬೇರೆ ಕಡೆ ಒಂದಷ್ಟು ಜಮೀನನ್ನು ಪರಿಹಾರ ರೂಪವಾಗಿ ನೀಡಿ ಕೈ ತೊಳೆದುಕೊಂದು ಬಿಡುತ್ತದೆ. ಅವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದುಕೊಂಡು ಅಲ್ಲಿ ಹೇಗೋ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮತ್ತು ಅವಳ ಗಂಡ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಇರದಷ್ಟು ಅಮಾಯಕರು. ಈಗ ಸರಕಾರ ಅಲ್ಲಿ ಹೈವೇ ಮಾಡಬೆಕೆಂದು ಏನೋ ಒಂದಿಷ್ಟು ಪರಿಹಾರ ನೀಡಿ ಮತ್ತೆ ಅವರ ಜಮೀನನ್ನು ಕಿತ್ತುಕೊಳ್ಳಲು ನೋಡುತ್ತದೆ. ಆದರೆ ಪುಟ್ಟಕ್ಕನಿಗೆ ಅವಳ ಹೊಲ ಅವಳ ಹೆಸರಲ್ಲಿಲ್ಲ ಎಂಬ ಕಾರಣಕ್ಕಾಗಿ ಅವಳಿಗೆ ಆ ಪರಿಹಾರ ಸಿಗದೆ ಹೋಗುತ್ತದೆ. ಪುಟ್ಟಕ್ಕ ದಿಗ್ಭ್ರಾಂತಳಾಗಿ ಮುಂದೇನು ಮಾಡಬಹುದೆಂದು ಜಿಲ್ಲಾಧಿಕಾರಿಯನ್ನು ಕೇಳುತ್ತಾಳೆ. ಆಕೆ ಪುಟ್ಟಕ್ಕನಿಗೆ “ಈಗ ನಿನ್ನನ್ನು ಉಳಿಸೋದಕ್ಕೆ ಆ ಮುಖ್ಯಮಂತ್ರಿಯಿಂದ ಮಾತ್ರ ಸಾಧ್ಯ. ನೀನು ಅವರನ್ನೇ ಹೋಗಿ ಕಾಣು” ಎಂದು ಹೇಳುತ್ತಾಳೆ. ಆ ಪ್ರಕಾರ ಪುಟ್ಟಕ್ಕ ಬೆಂಗಳೂರಿಗೆ ಹೊರಡಲು ಅನುವಾಗುತ್ತಾಳೆ. ಹೋಗುವ ಮುನ್ನ ತನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು ತನ್ನ ಆಪ್ತ ಗೆಳತಿ ಅಂಬಕ್ಕನ ಸುಪರ್ದಿಗೆ ಒಪ್ಪಿಸಿ “ನಾ ಬರೋಗಂಟ ನನ್ನ ಮಗಳು ನಿನ್ನ ಹತ್ರಾನೆ ಇರ್ಲಿ. ನೀನು ಅವಳನ್ನ ಚನ್ನಾಗಿ ನೋಡಿಕೊಳ್ಳತೀಯಾ ಅನ್ನೋ ನಂಬಿಕೆ ನನಗಿದೆ”  ಎಂದು ಹೇಳಿ ಆ ಭರವಸೆಯಲ್ಲಿ ಬೆಂಗಳೂರಿಗೆ ಹೊರಡುತ್ತಾಳೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ಮನೆಗೆ ಬರುತ್ತಿದ್ದಂತೆ ಸರಕಾರ ಬಿದ್ದುಹೋಗಿ ಎಲ್ಲರೂ ತಂತಮ್ಮ ಖುರ್ಚಿಯನ್ನು ಉಳಿಸಿಕೊಳ್ಳುವದರಲ್ಲಿ ನಿರತರಾಗಿದ್ದಾರೆ ಇನ್ನು ಅವಳ ಸಮಸ್ಯೆಗೆ ಪರಿಹಾರ ಸೂಚಿಸುವವರು ಅಲ್ಲಿ ಯಾರೂ ಇಲ್ಲ ಎನ್ನುವದು ಗೊತ್ತಾಗುತ್ತದೆ. ಮುಖ್ಯಮಂತ್ರಿಯ ಮನೆಯ ಮುಂದೆ ಒಬ್ಬ ಟೀವಿ ಮಾಧ್ಯಮದ ಪ್ರತಿನಿಧಿಯಿದ್ದಾನೆ. ಅವನು ಈಗಾಗಲೇ ಬಿದ್ದ ಸರಕಾರದ ಬಗ್ಗೆ ವರದಿಯನ್ನು ನೀಡಲು ಬಂದಿದ್ದಾನೆ. ಈ ಹಿಂದೆ ಅವನು ಹೈವೇ ಬರುವದಕ್ಕಿಂತ ಮುಂಚೆ ರೈತರ ಹೋರಾಟದ ಸಂದರ್ಭದಲ್ಲಿ ಪುಟ್ಟಕ್ಕನನ್ನು ಸಂದರ್ಶಿಸಿದ್ದರಿಂದ ಆಕೆ ಅವನಿಗೆ ಗೊತ್ತು. ಅವನನ್ನು ನೋಡಿದವಳೆ ಅವನಿಂದೇನಾದರೂ ತನಗೆ ನ್ಯಾಯ ಸಿಗುತ್ತದಾ ಎಂದು ಪುಟ್ಟಕ್ಕ ಅವನ ಹತ್ತಿರ ತನ್ನ ದುಃಖ ತೋಡಿಕೊಳ್ಳುತ್ತಾಳೆ. ಅವನೋ ಯವುದಕ್ಕೂ ಇರಲಿ ತನ್ನ ಟೀವಿಗೆ ಒಂದು ಒಳ್ಳೆ ಶೋ ಆಗುತ್ತದೆಂದು ಹೀಗ್ಙೀಗೆ ಹೇಳು, ಹೀಗ್ಙೀಗೆ ಅಧಿಕಾರಿಗಳ ವಿರುದ್ಧ ಬಯ್ಯಿ ಎಂದು ಹೇಳಿ ಅವಳು ಹೇಳುವದನ್ನೆಲ್ಲಾ ಶೂಟ್ ಮಾಡಿಕೊಂಡು ನೆಟ್ಟಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಪುಟ್ಟಕ್ಕ ಕುಸಿದುಬೀಳುತ್ತಾಳೆ. ಆಮೇಲಿಂದ ಪುಟ್ಟಕ್ಕ ತನ್ನೂರು ಬಿಸಲಳ್ಳಿಗೆ ಬರುವಷ್ಟರಲ್ಲಿ ಊರಲ್ಲಿ ಅದಾಗಲೇ ಹೈವೇ ಬಂದು ಬಹಳಷ್ಟು ಬದಲಾಗಿರುತ್ತದೆ. ತನ್ನ ಹೊಲ ಎಲ್ಲಿ ಎಂದು ಕೇಳುತ್ತಾ ಬರುತ್ತಾಳೆ. ಯಾರೋ ಅವಳ ಗೆಳತಿ ಅಂಬಕ್ಕನ ಮನೆಯನ್ನು ತೋರಿಸುತ್ತಾರೆ. ಪುಟ್ಟಕ್ಕ ಅಂಬಕ್ಕನ ಮನೆಗೆ ಬರುತ್ತಿದ್ದಂತೆಯೇ ಅವಳು ಮತ್ತು ಅವಳ ಗಂಡ ಇಬ್ಬರೂ ಸೇರಿ ಹೈವೇ ಪಕ್ಕದಲ್ಲಿಯೇ ಒಂದು ಡಾಬಾ ತೆರೆದಿದ್ದು ಗೊತ್ತಾಗುತ್ತದೆ. ಪುಟ್ಟಕ್ಕ ವಾಪಾಸು ಬರುವದೇ ಇಲ್ಲ ಎಂದುಕೊಂಡಿದ್ದ ಅಂಬಕ್ಕ ಗೆಳತಿಯನ್ನು ಸಡಗರದಿಂದ ಬರಮಾಡಿಕೊಳ್ಳುತ್ತಾಳೆ. ಪುಟ್ಟಕ್ಕ ಮೊದಲು ತನ್ನ ಮಗಳ ಬಗ್ಗೆ ಕೇಳದೆ ತನ್ನ ಹೊಲ ಎಲ್ಲಿದೆ ಎಂದು ಕೇಳುತ್ತಾಳೆ. ಅದಕ್ಕೆ ಅಂಬಕ್ಕ ಅವಳು ನಿಂತಿರುವ ಜಾಗವೇ ಅವಳ ಹೊಲ ಎಂದು ಹೇಳುತ್ತಾಳೆ. ಆಗ ಅಂಬಕ್ಕನ ಗಂಡ ನಡೆದಿದ್ದಲ್ಲೆವನ್ನು ಹೇಳುತ್ತಾನೆ. ಅವಳು ಬೆಂಗಳೂರಿಗೆ ಹೋದ ಮೇಲೆ ಅವಳ ಹೊಲವನ್ನು ಸರಕಾರದವರು ಆಕ್ರಮಿಸಿಕೊಂಡಿದ್ದು, ಅಲ್ಲಿಂದ ಸರಕಾರ ಬೇಗನೆ ಕಾಮಗಾರಿಯನ್ನು ಆರಂಭಿಸಿದ್ದು, ಹೈವೇ ಅವಳ ಗಂಡನ ಗೋರಿಯ ಮೇಲೆ ಹಾದು ಹೊದದ್ದು  ಹಾಗೂ ಈಗ ಅವನು ಅವಳ ಹೊಲದಲ್ಲಿ ಉಳಿದ ನಾಲ್ಕು ಗುಂಟೆ ಜಾಗವನ್ನು ಸರಕಾರದಿಂದ ಕೊಂಡುಕೊಂಡು ಅಲ್ಲೊಂದ ಡಾಬಾ ಅರಂಭಿಸಿದ್ದು ಎಲ್ಲವನ್ನೂ ಹೇಳುತ್ತಾನೆ. ಪುಟ್ಟಕ್ಕ ಇದೆಲ್ಲವನ್ನು ಕೇಳಿ ಜರ್ಝರಿತಳಾಗುತ್ತಿದ್ದಂತೆ ಅವಳಿಗೆ ಹೈವೇ ಕೆಳಗಿನಿಂದ ತನ್ನ ಮಗಳು ಸೆರಗು ಮತ್ತು ಕೂದಲನ್ನು ಸರಿಪಡಿಸಿಕೊಳ್ಳುತ್ತಾ ಬರುವದು ಕಾಣಿಸುತ್ತದೆ. ಅವಳಿಗೆ ತಕ್ಷಣ ತನ್ನ ಮಗಳು ಸೂಳೆಗಾರಿಕೆಗೆ ಇಳಿದಿದ್ದಾಳೆ ಎಂದು ಗೊತ್ತಾಗಿಹೋಗುತ್ತದೆ. ಅಂಬಕ್ಕ ಅಪರಾಧಿ ಪ್ರಜ್ಞೆಯಿಂದ ನಲುಗಿಹೋಗುತ್ತಾ “ನಿನ್ನ ಮಗಳನ್ನು ನಾನು ನಿಂಗೆ ಕೊಟ್ಟ ಮಾತಿನಂತೆ ನೋಡಿಕೊಳ್ಳಲಾಗಲಿಲ್ಲ ಕ್ಷಮಿಸಿಬಿಡೆ ಪುಟ್ಟಕ್ಕ” ಎಂದು ಅಳುತ್ತಾಳೆ. ಪುಟ್ಟಕ್ಕ ಮಾತ್ರ ಉದಾರತಯಿಂದ ಗೆಳತಿಯನ್ನು ಕ್ಷಮಿಸಿ ತನ್ನ ಮಗಳು ಹಾಗೂ ಗೆಳತಿಯನ್ನು ಕರೆದುಕೊಂಡು ಮಣ್ಣುಹಾದಿಯಲ್ಲಿ ನಡೆಯುತ್ತಾ ಹೋಗುತ್ತಾಳೆ. ಇತ್ತಕಡೆ ಹೈವೇ ಮೇಲೆ ಮುಂದಿನ ಎಲೆಕ್ಷನ್ ಗಾಗಿ ಪ್ರಚಾರ ಭರದಿಂದ ಸಾಗುವದನ್ನು ಕಾಣುತ್ತೇವೆ. ಆ ಪ್ರಚಾರದಲ್ಲಿ ಅಂಬಕ್ಕನ ಗಂಡನೂ ಇರುತ್ತಾನೆ.&lt;br /&gt;&lt;br /&gt;‘ಪುಟ್ಟಕ್ಕನ ಹೈವೇ’ಯಲ್ಲಿ ಸೃಜನಶೀಲ ಮನಸ್ಸೊಂದು ಘಟನೆಯೊಂದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಆ ಕಥೆಯ ಮೂಲಕ ಒಬ್ಬ ನಿರ್ದೇಶಕನಾದವನು ಹೇಗೆ ತನ್ನ ಆತಂಕಗಳನ್ನು ಬಿಚ್ಚಿಬಿಡಬಲ್ಲ ಎನ್ನುವದನ್ನು ಬಿ. ಸುರೇಶ್ ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಸುರೇಶ್ ಅಭಿವೃದ್ಧಿ ಬೇಡ ಎಂದು ಹೇಳುತ್ತಿಲ್ಲ. ಆದರೆ ಅಭಿವೃದ್ಧಿಯ ನೆಪದಲ್ಲಿ ನಡೆಯುವ ಡೊಂಬರಾಟಗಳನ್ನು ಹೇಳುತ್ತಲೇ, ಪುಟ್ಟಕ್ಕನಂತ ಮುಗ್ಧ ಜನರ ಬದುಕು ಹೇಗೆ ಮೂರಾಬಟ್ಟಿಯಾಗುತ್ತದೆ ಎನುವದನ್ನು ಮನದಟ್ಟು ಮಾಡುತ್ತಾರೆ. ಇನ್ನು ಚಿತ್ರದಲ್ಲಿ ಬರುವ ರೂಪಕಗಳು ಅದ್ಭುತವಾಗಿವೆ. ಸಾಲಾಗಿ ಹರಿಯುವ ಇರುವೆಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಗುಳೆ ಹೊರಡುತ್ತಲೇ ಇರಬೇಕಾದ ಮುಗ್ಧ ಜನರನ್ನು, ಬಲೆ ನೇಯುವ ಜೇಡ ಮೇಲಾಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು, ಕಣ್ಣಾಮುಚ್ಚಾಲೆ ಆಡುವ ಮಿಡತೆ ನಮ್ಮ ಅಕ್ಕ ಪಕ್ಕದಲ್ಲೇ ಇರುವ ಮೋಸಗಾರರನ್ನು, ಹಾಗೂ ರಸ್ತೆಯ ಮೇಲೆ ತೆವಳುತ್ತಾ ಸಾಗುವ ಬಸವನಹುಳು ಅಭಿವೃದ್ಧಿಯನ್ನು ಒಪ್ಪಿಕೊಂದು ನಡೆಯುವ ಜನವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತವೆ. ಇನ್ನು ಪಾತ್ರಗಳ ವಿಷಯದ ಬಗ್ಗೆ ಹೆಳುವದಾದರೆ ಶೃತಿ ಪುಟ್ಟಕ್ಕನ ನೋವು ಸಂಕಟ, ತೊಳಲಾಟವೆಲ್ಲವನ್ನು  ಚನ್ನಾಗಿ ಅರ್ಥಮಾಡಿಕೊಂಡೇ ಅಭಿನಯಿಸಿದ್ದಾರೆ. ಪ್ರಕಾಶ್ ರೈ ಶನಿಕೃಷ್ಣನಾಗಿ ನಗು ನಗುತ್ತಲೇ ಪುಟ್ಟಕ್ಕನಂತವರ ನಡ ಮುರಿಯುತ್ತಾನೆ. ಇತ್ತ ಅಭಿವೃದ್ಧಿಯ ಪರವೂ ನಿಲ್ಲದೆ ಅತ್ತ ಸಂಪೂರ್ಣವಾಗಿ ವಿರೋಧಿಸದೇ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾನೆ. ಕೊನೆಗೆ ತನ್ನ ಮೂಲ ಐಡೆಂಟಿಯನ್ನೇ ಕಳೆದುಕೊಂಡು ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುವದರ ಮೂಲಕ ಹೊಸದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುತ್ತಾನೆ. ಪುಟ್ಟಕ್ಕನ ಗೆಳತಿಯ ಪಾತ್ರದಲ್ಲಿ ಅಂಬಕ್ಕನಾಗಿ ವೀಣಾ ಸುಂದರ್ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ.  ಇನ್ನುಳಿದಂತೆ ಶ್ರೀನಿವಾಸ ಪ್ರಭು, ಅಚ್ಯುತಕುಮಾರ್ ತಮ್ಮ ಎಂದಿನ ನಟನೆಯಿಂದ ಗಮನ ಸೆಳೆಯುತ್ತಾರೆ. &lt;br /&gt;&lt;br /&gt;ಚಿತ್ರಕ್ಕೆ ರಾಮಚಂದ್ರರ ಛಾಯಾಗ್ರಹಣ ಹಾಗೂ ಹಂಸಲೆಖ ಅವರ ಸಂಗೀತ ಸಮರ್ಥವಾಗಿ ಒದಗಿಬಂದಿವೆ. ಆದರೆ ಚಿತ್ರದ ಕೊನೆಯಲ್ಲಿ ಪುಟ್ಟಕ್ಕ ಬೆಂಗಳೂರಿಗೆ ಹೋಗಿ ವಾಪಾಸಾಗುವಾಗ ಅವಳು ತನ್ನ ಗಂಟನ್ನು ಕಳೆದುಕೊಳ್ಳುವದು ಹಾಗೂ ಅದರಿಂದಲೇ ಏನೋ ಅವಳು ತನ್ನೂರು ಬಿಸಲಳ್ಳಿಗೆ ವಾಪಾಸಾಗುವಷ್ಟರಲ್ಲಿ ಎರಡು ತಿಂಗಳಾಗಿರುವದು, ಮತ್ತು ಆ ಎರಡು ತಿಂಗಳಲ್ಲೇ ಆ ಊರಿಗೆ ಹೈವೇ ಬಂದು ಸಾಕಷ್ಟು ಬದಲಾವಣೆಯಾಗಿದ್ದು ತೀರ ನಾಟಕೀಯವೆನಿಸುತ್ತದೆ. ಏನೇ ಆಗಲಿ ನಿರ್ದೇಶಕನಾಗಿ ಸುರೇಶ್ ಹೊಸ ಸಾಧ್ಯತೆಗಳಿಗೆ ಹಂಬಲಿಸಿರುವ ಚಿತ್ರವಿದು. ತುಂಬಾ ದಿನದ ಮೇಲೆ ಒಂದು ಒಳ್ಳೆಯ ಸಿನಿಮಾ ನೊಡಿದ ಅನುಭವವಾಗುತ್ತದೆ. ಸುರೇಶ್ ಅವರಿಂದ ಇಂಥ ಚಿತ್ರಗಳು ಮತ್ತಷ್ಟು ಬರಲಿ.&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-4336182595292591968?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/4336182595292591968/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/05/blog-post.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/4336182595292591968'/><link rel='self' type='application/atom+xml' href='http://www.blogger.com/feeds/2802103225554897449/posts/default/4336182595292591968'/><link rel='alternate' type='text/html' href='http://bisilahani.blogspot.com/2011/05/blog-post.html' title='‘ಪುಟ್ಟಕ್ಕನ ಹೈವೇ’ ನಲ್ಲಿ ಒಂದಷ್ಟು ಹೊತ್ತು..............'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-NW_k2cdfrc4/TeHDsy4ChlI/AAAAAAAAAY8/VhsdQhUIk1Q/s72-c/Puttakkana-Highway1-186x186.jpg' height='72' width='72'/><thr:total>2</thr:total></entry><entry><id>tag:blogger.com,1999:blog-2802103225554897449.post-261300737795386643</id><published>2011-04-24T15:24:00.003+01:00</published><updated>2011-04-26T16:13:23.821+01:00</updated><title type='text'>ಹೊರನಾಡ ಕನ್ನಡಿಗರ ಕನ್ನಡ ಅನುಕಂಪದ ಕನ್ನಡವಾಗಬಾರದು</title><content type='html'>ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ‘“ವಿದೇಶದಲ್ಲಿ ಕನ್ನಡ”’ ಎನ್ನುವ ವಿಷಯದ ಮೇಲೆ ಡಾ. ಹಂ. ಪ.ನಾಗರಾಜಯ್ಯನವರು ಒಂದು ಲೇಖನವನ್ನು ಬರೆದು ಕಳಿಸಿ ಎಂದು ನನ್ನ ಕೇಳಿದಾಗ ಸಮಯದಭಾವ ಮತ್ತು  ನನ್ನ ಒಂದಿಷ್ಟು ಸೋಂಬೇರಿತನದಿಂದಾಗಿ ಲೇಖನ ಕಳಿಸಿಕೊಡಲಾಗಲಿಲ್ಲ. ಈಗ ವಿಶ್ವ ಕನ್ನಡ ಸಮ್ಮೇಳನ ಮುಗಿದು ಅದರ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಿದ್ದು ಹಳೆಯ ಮಾತು. ಆದರೆ ಅದರ ಸಂಪಾದಕ ಮಂಡಳಿ ಇದೀಗ ಮತ್ತೆ ಆ ಪುಸ್ತಕವನ್ನು ಪುನರ್ ಪರಿಶೀಲಿಸಿ ಪ್ರಕಟಿಸುವದರಿಂದ ನನಗೆ ಮತ್ತೆ ಲೇಖನ ಬರೆದುಕೊಡಲು ಕೇಳಿದ್ದಾರೆ. ಹೀಗೆ ಕೇಳಿದ ಮೇಲೂ ನಾನು ಬರೆಯದೆ ಸುಮ್ಮನೆ ಕುಳಿತರೆ ಅದು ನನ್ನ ಅಹಂಕಾರವನ್ನು ಹಾಗೂ ನಿರ್ಲಕ್ಷ್ಯತನವನ್ನು ತೋರಿಸುವದರಿಂದ ಈ ಸಾರಿ ತಪ್ಪಿಸಿಕೊಳ್ಳಲು ನನ್ನ ಮನಸ್ಸು ಒಪ್ಪಲಿಲ್ಲ. ಅದರ ಪರಿಣಾಮವೇ ಈ ಲೇಖನ.&lt;br /&gt;&lt;br /&gt;&lt;br /&gt;ಸಂಪಾದಕ ಮಂಡಳಿ ಹೊರನಾಡ ಕನ್ನಡಿಗರಿಗೆ ಮುಖ್ಯವಾಗಿ ಮೂರು ಪ್ರಶ್ನೆಗಳನ್ನು ಕೇಳಿತ್ತು. ಅವು ಯಾವುವೆಂದರೆ- &lt;br /&gt;1. ನೀವು ಕಂಡಂತೆ ವಿದೇಶದಲ್ಲಿ ಕನ್ನಡ ಬೆಳೆದು ಬಂದ ಬಗೆ ಹೇಗೆ?&lt;br /&gt;2. ಒಳನಾಡಿನ ಕನ್ನಡಿಗರಿಗಿಂತ ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯ ಮೆಲೆ ಹೆಚ್ಚು ಪ್ರೀತಿ ಹಾಗೂ ಒಲವಿರುತ್ತದಂತೆ, ಹೌದೆ?&lt;br /&gt;3. ಅಲ್ಲಿಯ ಕನ್ನಡ ಸಂಘಗಳಿಂದ ನಡೆಸುವ ಚಟುವಟಿಕೆಗಳು/ಕಾರ್ಯಕ್ರಮಗಳು ಹೇಗಿರುತ್ತವೆ? ಹಾಗೂ ಅಂಥ ಕಾರ್ಯಕ್ರಮಗಳನ್ನು ನಡೆಸುವಾಗ ಸ್ಥಳೀಯ ಸರಕಾರದಿಂದ ಪ್ರೋತ್ಸಾಹವೇನಾದರೂ ಸಿಗುತ್ತದೆಯೇ? ಅಥವಾ ತೊಂದರೆಗಳೇನಾದರೂ  ಎದುರಾಗುತ್ತವೆಯೇ? &lt;br /&gt; &lt;br /&gt;&lt;br /&gt;ಈ ಮೇಲಿನ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖನ ಸಿದ್ಧಪಡಿಸಿ ಎಂದು ಹೇಳಿತ್ತು. ಆದ ಕಾರಣ ಲೇಖನದಲ್ಲಿ ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ. ಇದೀಗ ಅದು ಪ್ರಿಂಟಾಗಿ ಹೊರಬರಲಿದೆ ಎಂದು ಅದರ ಜವಾಬ್ದಾರಿಯನ್ನು ಹೊತ್ತುಕೊಂಡ ಜಿ. ಎನ್. ಮೋಹನ್ ಸರ್ ಹೇಳಿದ್ದಾರೆ. ಅದೇ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.&lt;br /&gt;&lt;br /&gt;&lt;br /&gt;ವಿದೇಶಿ ಕನ್ನಡಿಗರು ಹಾಗೂ ಅವರ ಕನ್ನಡ ಪ್ರೇಮ ಕುರಿತಂತೆ ಒಂದು ವಿಶೇಷವಾದ ಪ್ರೀತಿ ಹಾಗು ಅಭಿಮಾನದಿಂದ ಮಾತನಾಡುವ ಚಟ ನಮ್ಮಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಏಕೆಂದರೆ ನಮಗೆ ಹತ್ತಿರದಲ್ಲಿರುವವರಿಗಿಂತ ದೂರದಲ್ಲಿರುವವರ ಬಗ್ಗೆಯೇ ಹೆಚ್ಚು ಕುತೂಹಲ ಹಾಗೂ ಆಸಕ್ತಿ. ಹೀಗಾಗಿ ಅವರೇನೇ ಮಾಡಿದರು ಅದು ವಿಶೇಷ ಅನಿಸುತ್ತದೆ ಹಾಗೂ ಸಹಜವಾಗಿ ಬೇರೆಯವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನನಗೆ ಒಂದೊಂದು ಸಾರಿ ಈ ರೀತಿಯ ಮೆಚ್ಚುಗೆ ಉತ್ಪ್ರೇಕ್ಷೆ ಅನಿಸಿಬಿಡುತ್ತದೆ. ಏಕೆಂದರೆ ಒಬ್ಬನು ವಿದೇಶದಲ್ಲಿದ್ದು ತನ್ನ ತಾಯ್ನಾಡಿಗೆ ಮರಳಿ ಬಂದು ಕನ್ನಡದಲ್ಲಿ ಮಾತನಾಡಿದರೆ ‘“ಓ! ಪರ್ವಾಗಿಲ್ರಿ ಅವನಿನ್ನೂ ಕನ್ನಡದಲ್ಲಿಯೇ ಮಾತನಾಡುತ್ತಾನೆ”’ ಎಂದು ಉದ್ಗಾರ ತೆಗೆಯುತ್ತಾರೆ. ಉದಾಹರಣೆಗೆ ಮೊನ್ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೊರನಾಡ ಕನ್ನಡತಿ ಐಶ್ಚರ್ಯ್ ರೈ ತಪ್ಪು ತಪ್ಪು ಕನ್ನಡದಲ್ಲಿ ಮಾತನಾಡಿದಾಗಲೂ ಸಹ ಜನ ಚಪ್ಪಾಳೆ ಹೊಡೆದರು. ಆಕೆಯ ಭಾಷಣಕ್ಕೆ ಚಪ್ಪಾಳೆ ಹೊಡೆದಷ್ಟು ಅನಂತಮೂರ್ತಿಯವರ ಭಾಷಣಕ್ಕಾಗಲಿ, ಶಿವರುದ್ರಪ್ಪನವರ ಭಾಷಣಕ್ಕಾಗಲಿ ಹೊಡೆಯಲಿಲ್ಲ. ಏಕೆಂದರೆ ಆಕೆ ಒಬ್ಬ ಸಿನಿಮಾ ತಾರೆ, ವಿಶ್ವ ಸುಂದರಿ ಎನ್ನುವದರ ಜೊತೆಗೆ ಹೊರನಾಡ ಕನ್ನಡತಿ ಎಂಬ ಕಾರಣವೂ ಇದ್ದಿರಬಹುದಲ್ಲವೆ ಆಕೆಗೆ ವಿಶೇಷ ರಿಯಾಯಿತಿ ತೋರಿಸಲು? ಪರ್ವಾಗಿಲ್ಲ ಇಷ್ಟಾದರು ಕನ್ನಡದಲ್ಲಿ ಮಾತನಾಡಿದಳಲ್ಲ ಎಂದು ಜನ ಅಷ್ಟಕ್ಕೆ ಸಮಾಧಾನಪಟ್ಟುಕೊಂಡರು. ಇನ್ನು ಅಲ್ಲಿಗೆ ಬಂದ ಕೆಲವು ವಿದೇಶಿ ಕನ್ನಡಿಗರು ಸಭೆಯನ್ನು ಉದ್ದೇಶಿಸಿ ಮಾತನಡುವಾಗ ಮಧ್ಯ ಮಧ್ಯ ಒಂದೆರೆಡು ವಾಕ್ಯಗಳನ್ನು ಇಂಗ್ಲೀಷಿನಲ್ಲಿಯೇ ಉದ್ದರಿಸಿದರು. ಆದರೂ ಅವರು ಅಡಿದ್ದೆಲ್ಲವೂ ಚೆಂದವಾಗಿಯೇ ಕಂಡಿತು. ಅದನ್ಯಾರು ಪ್ರತಿಭಟಿಸಲು ಹೋಗಲಿಲ್ಲ. ಏಕೆಂದರೆ ಅವರೆಲ್ಲಾ ಅಷ್ಟಾದರೂ ಕನ್ನಡಕ್ಕೆ ಕಿಂಚಿತ್ತು ಸೇವೆ ಸಲ್ಲಿಸುತ್ತಿದ್ದಾರಲ್ಲ ಎಂದು ಜನ ಭಾವಿಸಿದಂತಿತ್ತು. ಇನ್ನು ವಿದೇಶದಲ್ಲಿದ್ದವನು ಬರಹಗಾರನಾಗಿದ್ದರಂತೂ ಮುಗಿದೇಹೋಯಿತು. ಅವನದು ಕಳಪೆ ಸಾಹಿತ್ಯವಾಗಿದ್ದರೂ ಸರಿಯೇ.  ದೂರದ ದೇಶದಲ್ಲಿದ್ದರೂ ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಕ್ಕರೆ ಹಾಗೂ ಒಲವು ಎಂಬ ಕನಿಕರ ಭಾವಕ್ಕೊಳಗಾಗುತ್ತದೆ. ಮಾತ್ರವಲ್ಲ ಅವರು ಬರೆದಿದ್ದು ‘ಕನ್ನಡದ ಕೈಂಕರ್ಯ’ ಎಂಬ ಅನುಕಂಪದ ಲೇಬಲ್ ನಡಿ ವಿಶೇಷ ಸ್ಥಾನಮಾನ ಗಳಿಸಿಬಿಡುತ್ತದೆ. ನನ್ನ ಪ್ರಕಾರ ಇದೇ ರೀತಿಯ ಬೆಳವಣಿಗೆಗಳು ಮುಂದುವರೆದರೆ ಇಂಥ ಕಳಪೆ ಸಾಹಿತ್ಯವನ್ನೇ ಮುಂದೆ ಎಂದಾದರೂ ಒಂದು ದಿನ ಶ್ರೇಷ್ಟ ಸಾಹಿತ್ಯ ಎಂದು ಪರಿಗಣಿಸುವ ದಿನಗಳು ದೂರವಿಲ್ಲ ಎಂದನಿಸುತ್ತದೆ.&lt;br /&gt;&lt;br /&gt;&lt;br /&gt;ನಾನು ಈ ಮೊದಲೇ ಹೇಳಿದಂತೆ ಹೊರನಾಡ ಕನ್ನಡಿಗರ ಬಗ್ಗೆ ‘ವಿದೇಶದಲ್ಲಿದ್ದರೂ ಕನ್ನಡ ಭಾಷೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಒಲವು ಹಾಗೂ ಕನ್ನಡ ಭಾಷೆಯ ಮೇಲೆ ಎಲ್ಲರಿಗಿಂತ ತುಸು ಹೆಚ್ಚೇ ಅಭಿಮಾನವಿರುತ್ತದೆ’ ಎಂದು ಜನ ವೈಭವಿಕರಿಸಿ ಹೇಳುವದು ವಾಡಿಕೆ. ಆದರೆ ನನ್ನ ಪ್ರಕಾರ ಅದು ಶುದ್ಧ ತಪ್ಪು. ಅದೇನಿದ್ದರೂ ಬರೀ ಹಪಹಪಿಕೆ ಅಷ್ಟೇ. ಒಬ್ಬ ಕನ್ನಡಿಗ ಉದ್ಯೋಗ ನಿಮಿತ್ತ ಹೊರನಾಡಿಗೆ ಹೋದಾಗ ಕನ್ನಡಿಗರಿಲ್ಲದ ನೆಲದಲ್ಲಿ ಆತ ತನ್ನ ಮಾತೃಭಾಷೆಯಾದ ಕನ್ನಡವನ್ನು ಕುರಿತು ಯೋಚಿಸುವದು ಸರ್ವೇಸಾಮಾನ್ಯ. ಏಕೆಂದರೆ ಅಲ್ಲಿ ಕನ್ನಡದಲ್ಲಿ ಮಾತನಾಡುವವರು ಯಾರಾದರೂ ಸಿಗುತ್ತಾರೆಯೇ ಎಂದು ಸದಾ ಹಂಬಲಿಸುತ್ತಿರುತ್ತಾನೆ, ಹಪಹಪಿಸುತ್ತಿರುತ್ತಾನೆ. ಈ ಹಪಹಪಿಕೆಯನ್ನೇ ನಾವು ಅಭಿಮಾನವೆಂದು ತಪ್ಪಾಗಿ ಗ್ರಹಿಸುವದು ಎಷ್ಟರಮಟ್ಟಿಗೆ ಸರಿ? &lt;br /&gt;&lt;br /&gt;&lt;br /&gt;ನಾವು ನಮ್ಮ ಕನ್ನಡ ನೆಲದಿಂದ ಉದ್ಯೋಗ ಅರಸಿ ಹೊರನಾಡಿಗೆ ಹೋದಾಗ ಸಹಜವಾಗಿ ನಮ್ಮ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಒಂದು ಪ್ರೀತಿ ಇದ್ದೇ ಇರುತ್ತದೆ. ಈ ಪ್ರೀತಿಯೇ ನಮ್ಮನ್ನು ನಮ್ಮ ಭಾಷೆಯ ಬಗ್ಗೆ ಸದಾ ಯೋಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ಜೊತೆಗೆ ಕನ್ನಡ ಸಂಘಗಳನ್ನು ಹುಟ್ಟುಹಾಕುವಂತೆ ಪ್ರೇರಣೆ ನೀಡುತ್ತದೆ. ನಾವು ಇಂಥ ಸಂಘಗಳನ್ನು ಹುಟ್ಟುಹಾಕುವ ಮೂಲ ಉದ್ದೇಶ ಅಲ್ಲಿರುವ ಕನ್ನಡಿಗರೆಲ್ಲರನ್ನೂ ಒಂದು ಕಡೆ ಕಲೆ ಹಾಕುವದಕ್ಕೆ. ಬರೀ ಸಂಘವೊಂದಿದ್ದರೆ ಎಲ್ಲರೂ ಒಟ್ಟಾಗಿ ಸೇರಲು ಹೇಗೆ ಸಾಧ್ಯ? ಅಲ್ಲಿ ಏನಾದರೊಂದು ಕಾರ್ಯಕ್ರಮ ನಡೆದರೆ ತಾನೆ ಸಾಧ್ಯವಾಗೋದು? ಹೀಗಾಗಿ ಅಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಇಂಥ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತಾವಾದರೂ ಅವು ಕನ್ನಡ ಭಾಷೆಯ ಬೆಳವಣಿಗೆಗೆ ಒಂಚೂರು ಸಹಾಯ ಮಾಡುವದಿಲ್ಲ ಎನ್ನುವದು ನನ್ನ ಅಭಿಪ್ರಾಯ. ಏಕೆಂದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗುವಂಥ ಯಾವೊಂದೂ ಗಂಭೀರ ಚಿಂತನೆಯೂ ಅಲ್ಲಿ ನಡೆಯುವದಿಲ್ಲ. ಅಕಸ್ಮಾತ್ ಆ ಸಂಘಗಳು ಸಾಹಿತ್ಯಿಕ ಪತ್ರಿಕೆಗಳನ್ನೇನಾದರೂ ಹೊರತರುತ್ತಿದ್ದರೆ ಅವು ಗುಣಮಟ್ಟದಲ್ಲಿ ಅತ್ಯಂತ ಕೆಳದರ್ಜೆಯಿಂದ ಕೂಡಿದ್ದು ಅವುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಲೇಖನಗಳು ಮಾತ್ರ ಚನ್ನಾಗಿರುತ್ತವೆ. ಇನ್ನುಳಿದಂತೆ ಇತರೆ ಪುಟಗಳ ತುಂಬ ಬರೀ ‘ಪುಷ್ಫ ಕವಿ’, ‘ಪೋರಿ ಕವಿ’, ‘ಮತ್ಸ್ಯ ಕವಿ’ ‘ಪತಂಗ ಕವಿ’ಗಳ ಕವನಗಳೇ ರಾರಾಜಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನಾವು ಹುಟ್ಟುಹಾಕಿದ ಕನ್ನಡದ ವೇದಿಕೆಗಳಿಂದ ನಿಜಕ್ಕೂ ಕನ್ನಡ ಭಾಷೆಯ ಬೆಳವಣಿಗೆಯಾಗುತ್ತದೆ ಎನ್ನುವದು ಬರಿ ಭ್ರಮೆ ಅಷ್ಟೇ. &lt;br /&gt;&lt;br /&gt;&lt;br /&gt;ಇನ್ನು ಈ ತರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ನಮ್ಮಲ್ಲಿ ಅಲ್ಲಿಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುವದಿಲ್ಲ. ಹಾಗೆ ನಿರೀಕ್ಷಿಸುವದು ಕೂಡ ತಪ್ಪಾಗುತ್ತದೆ. ಆದರೆ ಇದುವರೆಗೂ ಲಿಬಿಯಾದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಲಿ, ಆತಂಕವಾಗಲಿ ಎದುರಾಗಿಲ್ಲ. ಹಾಗೆ ನೋಡಿದರೆ ಕರ್ನಾಟಕದಲ್ಲಿಯೇ ಇಂಥ ಪ್ರಸಂಗಗಳು ಎದುರಾಗೋದು ಹೆಚ್ಚು. ಉದಾಹರಣೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂದರೆ ಹೆಚ್ಚಾಗಿ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನೆರೆರಾಜ್ಯದವರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈಗ ವಿಶ್ವ ಕನ್ನಡ ಸಮ್ಮೇಳನವನ್ನೇ ನೋಡಿ. ಅದನ್ನು ಬೆಳಗಾವಿಯಲ್ಲಿ ನಡೆಸಕೂಡದೆಂದು ಮರಾಠಿಗರು ಎಷ್ಟೊಂದು ಬೆದರಿಕೆಯನ್ನು ಒಡ್ಡಿದ್ದರು. ಸಮ್ಮೇಳನ ಮುಗಿಯುವವರೆಗೂ ಅವರು ಏನಾದರೂ ತೊಂದರೆ ಮಾಡಿಯಾರು ಎಂಬ ಭಯ, ಆತಂಕವಿದ್ದೇ ಇತ್ತು. ಈ ತರದ ತೊಂದರೆಗಳ್ಯಾವವು ಅಲ್ಲಿ ಜರಗುವದಿಲ್ಲ ಎನ್ನುವದು ಮಾತ್ರ ನೆಮ್ಮದಿಯ ವಿಷಯ.  &lt;br /&gt;&lt;br /&gt;&lt;br /&gt;- ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-261300737795386643?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/261300737795386643/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/04/blog-post.html#comment-form' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/261300737795386643'/><link rel='self' type='application/atom+xml' href='http://www.blogger.com/feeds/2802103225554897449/posts/default/261300737795386643'/><link rel='alternate' type='text/html' href='http://bisilahani.blogspot.com/2011/04/blog-post.html' title='ಹೊರನಾಡ ಕನ್ನಡಿಗರ ಕನ್ನಡ ಅನುಕಂಪದ ಕನ್ನಡವಾಗಬಾರದು'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>6</thr:total></entry><entry><id>tag:blogger.com,1999:blog-2802103225554897449.post-1216438082634451087</id><published>2011-03-12T07:40:00.005+01:00</published><updated>2011-03-17T10:19:21.409+01:00</updated><title type='text'>ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ</title><content type='html'>ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ನಾನು ಕನಸಿನಲ್ಲೂ ಸಹ ಯೋಚಿಸಿರಲಿಲ್ಲ. ನಾನಿರಲಿ, ಬಹುಶಃ ಲಿಬಿಯನ್ನರು ಕೂಡ ಅಂದುಕೊಂಡಿದ್ದರೋ ಇಲ್ವೋ ನಾ ಕಾಣೆ. ಏಕೆಂದರೆ ಅಲ್ಲಿನ ಅಧ್ಯಕ್ಷ ಮೌಮೂರ್ ಗಡಾಫಿ ಅಷ್ಟರ ಮಟ್ಟಿಗೆ ಅವರನ್ನು ನೆಮ್ಮದಿಯಿಂದ ಇಟ್ಟಿದ್ದ ಎಂದು ನನ್ನೊಟ್ಟಿಗೆ ಕೆಲಸ ಮಾಡುವ ಎಷ್ಟೋ ಲಿಬಿಯನ್ನರು ಹೇಳಿದ್ದರು. ಆದರೆ ನಾನು ಇಲ್ಲಿಗೆ ಬಂದು ಎಂಟು ದಿನಗಳ ನಂತರ ಲಿಬಿಯಾದಲ್ಲೂ ದಂಗೆ ಶುರುವಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಬಹುಶಃ, ಇದು ಪಕ್ಕದ ರಾಷ್ಟ್ರ ಈಜಿಪ್ಟಿನಲ್ಲಿ ಆಗಷ್ಟೇ ಉಂಟಾದ ಬದಲಾವಣೆಯ ಪರಿಣಾಮ ವಿರಬೇಕು, ಎರಡು ದಿನ ಕಳೆದ ಮೇಲೆ ಎಲ್ಲ ತಣ್ಣಗಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಇಂಥವರನ್ನು ಹೇಗೆ ಬಗ್ಗು ಬಡಿಯುಬೇಕೆಂದು ಗಡಾಫೆಗೆ ಚನ್ನಾಗಿ ಗೊತ್ತು, ಎಲ್ಲವೂ ಸರಿಹೋಗುತ್ತದೆ ಎಂದುಕೊಂಡಿದ್ದೆ. ಆದರೆ ನೋಡನೋಡುತ್ತಿದ್ದಂತೆಯೇ ಲಿಬಿಯಾದ ಉತ್ತರ ಭಾಗ ಹೊತ್ತಿ ಉರಿಯತೊಡಗಿ ಇಡಿ ಲಿಬಿಯಾದಲ್ಲಿ ಅಂತರ್ಜಾಲ ಮತ್ತು ದೂರಸಂಪರ್ಕ ಕಡಿದು ಹೋಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಭಾರತೀಯರ ಕುಟುಂಬಗಳು ತಮ್ಮವರು ಹೇಗಿದ್ದಾರೋ ಎಂದು ಇಲ್ಲಿ ಪರಿತಪಿಸುತ್ತಿರಬೇಕಾದರೆ ನನ್ನ ಮನೆಯವರು “ಸಧ್ಯ, ನೀನು ಇಲ್ಲೇ ಇದ್ದೀಯಲ್ಲ” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ದಿನಕಳೆದಂತೆ ಆಶ್ಚರ್ಯಕರ ರೀತಿಯಲ್ಲಿ ಅಲ್ಲಿನ ಬೆಳವಣಿಗೆಗಳು ತೀವ್ರತೆಯ ಸ್ವರೂಪ ಪಡೆದುಕೊಂಡು ಲಿಬಿಯಾಕ್ಕೆ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದ್ದರಿಂದ ನಾನು ಇಲ್ಲೇ ಉಳಿಯಬೇಕಾಯಿತು. &lt;br /&gt;&lt;br /&gt;    &lt;br /&gt;ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಾನು ಲಿಬಿಯಾಕ್ಕೆ ಬರುವ ಮುನ್ನ ‘ಅದು ನಿರಂಕುಶವಾದಿ ಮೌಮೂರ್ ಗಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚನ್ನಾಗಿರಲಿಕ್ಕಿಲ್ಲ. ಅಲ್ಲಿಗ್ಯಾಕ್ರೀ ಹೋಗ್ತೀರಿ?’ ಎಂದು ಬಹಳಷ್ಟು ಜನ ಉಪದೇಶ ನೀಡಿದ್ದರು. ಮೇಲಾಗಿ ಅವನೊಬ್ಬ ವಿಕ್ಷಿಪ್ತ ಮನಸ್ಸಿನವ, ಮಹಾನ್ ತಂಟೆಕೋರ, ತರ್ಲೆ, ಹೆಣ್ಣು ಬಾಕ ಎಂದೆಲ್ಲಾ ಕೇಳಿ ತಿಳಿದುಪಟ್ಟಿದ್ದೆ. ಅಷ್ಟೇ ಅಲ್ಲ ಅವನು ವಿಶ್ವದ ಬಲಾಡ್ಯ ರಾಷ್ಟ್ರವಾದ ಅಮೆರಿಕನ್ನರಿಗೇ ಸೆಡ್ಡು ಹೊಡೆದು ನಿಲ್ಲುವಂಥವನು ಎಂದು ಕೂಡ ತಿಳಿದುಕೊಂಡಿದ್ದೆ. ಆದರೆ ಲಿಬಿಯಾಗೆ ಬಂದ ಮೇಲೆ ತಿಳಿಯಿತು; ಈ ಮೇಲಿನ ಸಂಗತಿಗಳಲ್ಲಿ ಬಹಳಷ್ಟು ಉತ್ಪ್ರೇಕ್ಷಿಯಿಂದ ಕೂಡಿದ್ದವೆಂದು. ಅವನು ಅಮೆರಿಕಾದ ವಿಮಾನವೊಂದಕ್ಕೆ ಬಾಂಬ್ ಇಡಿಸಿದ್ದನೆಂಬ ಆರೋಪದ ಮೇಲೆ ಆತ ಅಮೇರಿಕನ್ನರ ವಿರೋಧ ಕಟ್ಟಿಕೊಂಡಿದ್ದು ನಿಜ ಹಾಗೂ ಹಾಗೆ ವಿರೋಧ ಕಟ್ಟಿಕೊಂಡು ಎಷ್ಟೆಲ್ಲ ಪಾಡು ಪಡಬೇಕಾಯಿತು ಎನ್ನುವದೂ ಅಷ್ಟೇ ನಿಜ. ಅವನು ಅದೆಂಥ ಅಮೆರಿಕನ್ನರ ವಿರೋಧಿಯಾಗಿದ್ದನೆಂದರೆ ಅವರನ್ನು ಮಾತ್ರವಲ್ಲದೆ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಹೀಗಾಗಿ ಹಠಾತ್ತಾಗಿ ಇಂಗ್ಲೀಷ್ ಭಾಷೆಯನ್ನೇ ತನ್ನ ದೇಶದ ಜನ ಕಲಿಯಕೂಡದೆಂದು ತಾಕೀತು ಮಾಡಿ ಅದರ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರುವದರ ಮೂಲಕ ಒಂದು ತಲೆಮಾರಿನ ಜನಾಂಗವನ್ನು ಇಂಗ್ಲೀಷ್ ಭಾಷೆಯ ಕಲಿಕೆಯಿಂದ ವಂಚಿತಗೊಳಿಸಿದನಂತೆ. ಆದರೆ ಮುಂದೆ ಲಿಬಿಯಾ ಮತ್ತು ಅಮೇರಿಕಾದ ನಡುವಿನ ಸಂಬಂಧ ಸರಿಹೋದ ಮೇಲೆ ಇಂಗ್ಲೀಷ್ ಭಾಷೆಯ ಮಹತ್ವವನ್ನು ಅರಿತುಕೊಂಡು ಮತ್ತೆ ಅದನ್ನು ಶಾಲಾ, ಕಾಲೇಜುಗಳಲ್ಲಿ ಆರಂಭಿಸಿದನಂತೆ. ಆದರೂ ಅವನು ಈಗಲೂ ಅಮೆರಿಕನ್ನರ ದ್ವೇಷಿ! ಅವನು ಮಾತ್ರವಲ್ಲ ಅಲ್ಲಿಯ ಬಹಳಷ್ಟು ಜನ ಅಮೆರಿಕನ್ನರ ದ್ವೇಷಿಗಳೇ! ಅವನ ಪ್ರಕಾರ ಅಮೆರಿಕಾದವರೆಂದರೆ ಸಂಚು ಹೂಡುವವರು, ಕುತಂತ್ರಿಗಳೆಂದೇ ಲೆಕ್ಕಾಚಾರ. ಈಗಲೂ ಸಹ ಈ ದಂಗೆಯ ಹಿಂದೆ ತನ್ನ ದೇಶದ ತೈಲ ಸಂಪನ್ಮೂಲಗಳನ್ನು ದೋಚಲು ಅಮೆರಿಕನ್ನರು ನಡೆಸಿದ ಸಂಚು ಇರಬಹುದೆ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾನೆ.&lt;br /&gt;&lt;br /&gt;&lt;a href="http://1.bp.blogspot.com/-e1Da7nzKso8/TXsZV0yEmSI/AAAAAAAAAYk/o1hcgCGarNg/s1600/untitled.bmp"&gt;&lt;img style="display:block; margin:0px auto 10px; text-align:center;cursor:pointer; cursor:hand;width: 280px; height: 390px;" src="http://1.bp.blogspot.com/-e1Da7nzKso8/TXsZV0yEmSI/AAAAAAAAAYk/o1hcgCGarNg/s400/untitled.bmp" border="0" alt=""id="BLOGGER_PHOTO_ID_5583084025792469282" /&gt;&lt;/a&gt;&lt;br /&gt;&lt;br /&gt;&lt;br /&gt;ನನಗೆ ಅಷ್ಟೆಲ್ಲ ಜನ ಲಿಬಿಯಾಕ್ಕೆ ಹೋಗಬೇಡವೆಂದು ಕೇಳಿಕೊಂಡರೂ ನಾನು ಲೆಕ್ಕಿಸದೇ ‘ಏನಾದರಾಗಲಿ, ಒಂದು ಸಾರಿ ಈ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ದೇಶದಲ್ಲಿ ಜೀವನ ಹೇಗಿರುತ್ತದೆ ನೋಡಿಯೇ ಬಿಡೋಣ’ ಎಂದುಕೊಂಡು ಒಂದು ತರದ ಭಂಡ ಧೈರ್ಯದ ಮೇಲೆ ಲಿಬಿಯಾಕ್ಕೆ ಹೊರಟು ಬಂದಿದ್ದೆ. ಆದರೆ ನಾನಂದುಕೊಂಡಿದ್ದಕ್ಕಿಂತ ಅಲ್ಲಿಯ ಜೀವನ ವಿಭಿನ್ನವಾಗಿತ್ತು. ನಾನು ಮೊಟ್ಟಮೊದಲಬಾರಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿಯೇ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿ ಬರೆದಿತ್ತು. ಅದು ಹೀಗಿತ್ತು: “Do not call them porters , they are your fellow workers” ಈ ಸಾಲನ್ನು ಓದಿ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಸಮಾನತೆಯ ಸಿದ್ಧಾಂತ ಜಾರಿಯಲ್ಲಿರಲು ಸಾಧ್ಯವೆ? ಎಂದು ನನ್ನಷ್ಟಕ್ಕೆ ನನಗೇ ಆಶ್ಚರ್ಯ ಮತ್ತು ಅನುಮಾನಗಳೆರೆಡೂ ಒಟ್ಟಿಗೆ ಮೂಡಿದ್ದವು. ಆದರೆ ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದನೋ ಆಗ ಅಲ್ಲಿ ಎಲ್ಲರೂ ಸಮಾನರೇ ಎಂಬ ಸತ್ಯದ ಅರಿವಾಗಿತ್ತು. ಒಬ್ಬ ಅಟೆಂಡರ್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರ್ ನ್ನು ಬಳಸಬಹುದು. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಅಸಲಿಗೆ ಇಂಥದೊಂದು ವ್ಯವಸ್ಥೆ ಸೋ ಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದಿದ್ದುನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಅಷ್ಟೇ ಏಕೆ? ನಾನು ಕೆಲಸ ಮಾಡುವ ಜಾಗ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿ. ಅವರು ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಅವರು ಬ್ಯಾಂಕಿಗೆ ಬಂದರೆ ಅವರಿಗೆ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ಕಾಯಬೇಕಿತ್ತು. ಬಹುಶಃ, ಈ ಹಿನ್ನೆಲೆಯಲ್ಲಿಯೇ ಗಡಾಫಿ ಮೊನ್ನೆ “ನಾನು ಯಾವತ್ತೂ ನಿರಂಕುಶವಾದಿಯಂತೆ ನಡೆದುಕೊಂಡಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನರು. ಇದೊಂದು ಸೋಶಿಯಲಿಸ್ಟ್ ಕಂಟ್ರಿ. ನಾನು ಇಲ್ಲಿ ಇರುವದು ಕೇವಲ ನೆಪ ಮಾತ್ರ. ಪ್ರಜೆಗಳೇ ಅಧಿಕಾರ ನಡೆಸುವವರು. ಅವರ ಕೈಯಲ್ಲಿಯೇ ದೇಶವನ್ನು ಇಟ್ಟಿದ್ದೇನೆ.” ಎಂದು ಒತ್ತಿ ಒತ್ತಿ ಹೇಳಿದ್ದು ನಿಜವೆನಿಸುತ್ತದೆ. ಆದರೆ ಅದರ ಮರುಕ್ಷಣವೇ ಇಷ್ಟೆಲ್ಲ ಹೇಳುವವ ತನ್ನ ಅಧಿಕಾರ ಗದ್ದುಗೆಯನ್ನು ಏಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡಲಾರ ಎಂಬ ಅನುಮಾನವೂ ಮೂಡುತ್ತದೆ. ಅಂದರೆ ಈತ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಅತ್ತ ನಿರಂಕುಶವಾದಿಯೂ ಅಲ್ಲದ ಎಡೆಬಿಡಂಗಿಯಾಗಿ ಕಾಣುತ್ತಾನೆ.&lt;br /&gt;&lt;br /&gt;&lt;br /&gt;ನೆರೆ ರಾಷ್ಟ್ರಗಳಾದ ಈಜಿಪ್ಟ್ ಮತ್ತು ತುನಿಶಿಯಾಗಳಲ್ಲಿ ಜನ ದಂಗೆ ಎದ್ದಂತೆ ಇಲ್ಲಿಯೂ ಜನ ದಂಗೆ ಎದ್ದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸುತ್ತೇವೆ. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಅವನದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದಾನೆ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ದುಬೈ ವಿಮಾನ ನಿಲ್ದಾಣಕ್ಕೆ ಸರಿಗಟ್ಟುವಂತಹ ಅಂತರಾಷ್ಟ್ರೀಯ ವಿಮಾನನಿಲ್ದಾಣವೊಂದನ್ನು ಟ್ರೀಪೋಲಿಯಲ್ಲಿ ಕಟ್ಟಿಸುತ್ತಿದ್ದಾನೆ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದಾನೆ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಾನೆ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತದೆ. ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಾರೆ. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುವದಿಲ್ಲ. ಇನ್ನು ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿಲ್ಲ. ಅವರಿಗೆ ಎಲ್ಲದರಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರೇ ಶುದ್ಧ ಸೋಂಬೇರಿಗಳು. ಐದು ಜನರಲ್ಲಿ ಒಬ್ಬ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ. ಇನ್ನುಳಿದವರು ಸದಾ ಕೆಲಸ ಕದಿಯುವವರೇ. ತಕ್ಕ ಮಟ್ಟಿಗೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವಿದೆ. &lt;br /&gt;&lt;br /&gt;&lt;a href="http://2.bp.blogspot.com/-oUlsAMyDd5w/TXsbntBq73I/AAAAAAAAAYs/pew9Exab4k4/s1600/www.reuters.com.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 221px;" src="http://2.bp.blogspot.com/-oUlsAMyDd5w/TXsbntBq73I/AAAAAAAAAYs/pew9Exab4k4/s320/www.reuters.com.jpg" border="0" alt=""id="BLOGGER_PHOTO_ID_5583086531971313522" /&gt;&lt;/a&gt;&lt;br /&gt;&lt;br /&gt;    &lt;br /&gt;ದೇಶದ ಭದ್ರತಾ ವ್ಯವಸ್ಥೆಯಲ್ಲೂ ಕೂಡ ಗಡಾಫಿ ಅಷ್ಟೇ ಕಟ್ಟುನಿಟ್ಟು. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಚೆಕ್ ಪಾಯಿಂಟಿನಲ್ಲಿ ಪೋಲಿಸರು ಟ್ಯಾಕ್ಸಿಯಲ್ಲಿರುವವರ ಗುರುತು ಪತ್ರ ಮುಂತಾದ ವಿವರಗಳನ್ನು ಕೇಳುತ್ತಾರೆ. ಒಂದೊಂದು ಸಾರಿ ಈ ರೀತಿಯ ವಿಪರೀತ ತಪಾಸಣೆಗೊಳಗಾಗುವದು ನಮಗೆ ಕಿರಿಕಿರಿ ಎನಿಸುತ್ತದೆ. ಮೊನ್ನೆ ಅಂದರೆ ನವೆಂಬರ್ ತಿಂಗಳ ಕೊನೆವಾರದಲ್ಲಿ ನಾನಿರುವ ಸ್ಥಳ ಘಾತ್ ನಲ್ಲಿ ಅಲ್ಜೀರಿಯಾದ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಅವರು ಸಹರಾ ಮರಭೂಮಿಯಲ್ಲಿ ಅಲ್ಜೀರಿಯಾದಿಂದ ನಡೆದುಕೊಂಡು ಬಂದು ಘಾತ್ ಮೂಲಕ ನುಸುಳಿ ದೊಡ್ಡ ಪಟ್ಟಣಗಳಾದ ಟ್ರ‍ೀಪೋಲಿ, ಬೆಂಗಾಜಿಯನ್ನು ಸ್ಪೋಟಿಸಲು ಸಂಚು ಹೂಡಿದ್ದರು. ಆದರೆ ಆದೃಷ್ಟವಶಾತ್ ಪೋಲಿಸರ ಕೈಗೆ ಸಿಕ್ಕಿಬಿದ್ದು ಅಲ್ಲಿಯೇ ಕೊಲ್ಲಲ್ಪಟ್ಟರು. ಈ ತರದ ಘಟನೆ ಲಿಬಿಯಾದಲ್ಲಿ ನಡೆದಿದ್ದು ಮೂವತ್ತು ವರ್ಷಗಳ ನಂತರವೇ ಎಂದು ಅಲ್ಲಿಯ ಜನ ಮಾತಾಡಿಕೊಂಡಿದ್ದನ್ನು ಕೇಳಿದರೆ ಅವನ ಭದ್ರತಾ ಸುವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಮನದಟ್ಟಾಗುತ್ತದೆ. ಇದಾದ ನಂತರ ಗಡಾಫಿ ಅಲ್ಲಿಯ ಪೋಲಿಸರನ್ನು ಚನ್ನಾಗಿ ತರಾಟೆಗೆ ತೆಗೆದುಕೊಂಡು ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದ. ಹಾಗಂತ ಅಲ್ಲಿ ಯಾವುದೇ ಕ್ರೈಮ್ ನಡೆಯುತ್ತಿರಲಿಲ್ಲ ಎಂದು ಹೇಳಲಾರೆ. ಸಣ್ಣ ಪುಟ್ಟ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ರಾಜಧಾನಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದ್ದವು. &lt;br /&gt;&lt;br /&gt;&lt;br /&gt;ಹೀಗಾಗಿ ನಾ ಕಂಡಂತೆ ಅಲ್ಲಿನವರು ಗಡಾಫಿಯ ಬಗ್ಗೆ ಅತೃಪ್ತಿಯನ್ನಾಗಲಿ, ಅಸಮಾಧಾನವನ್ನಾಗಲಿ ವ್ಯಕ್ತಪಡಿಸಿದ್ದನ್ನು ನಾನು ಯಾವತ್ತೂ ಕೆಳಿದ್ದಿಲ್ಲ. ಬದಲಾಗಿ ಬಹಳಷ್ಟು ಜನ ಅವನನ್ನು ಹಾಡಿ ಹೊಗಳಿದವರೇ ಹೆಚ್ಚು. ಅಥವಾ ಹಾಗೆ ಹಾಡಿ ಹೊಗಳಲೇಬೇಕೆಂಬ ಅಲಿಖಿತ ನಿಯಮವೇನಾದರೂ ಜಾರಿಯಲ್ಲಿತ್ತೇ ನನಗೆ ಗೊತ್ತಿಲ್ಲ. ನಾನಿರುವದು ಲಿಬಿಯಾದ ದಕ್ಷಿಣ ಭಾಗದಲ್ಲಿ. ಆ ಕಡೆಯೆಲ್ಲಾ ಅವನ ಬೆಂಬಲಿಗರೇ ಹೆಚ್ಚು. ಅಲ್ಲಿ ಯಾವುದೇ ಗಲಾಟೆಗಳು ನಡೆಯುತ್ತಿಲ್ಲ ಎಂದು ನನ್ನ ಭಾರತೀಯ ಸಹೋದ್ಯೋಗಿಗಳು ಹೇಳಿದ್ದಾರೆ. ನಾವಂದುಕೊಂಡಂತೆ ಲಿಬಿಯಾದಿಡಿ ಗಲಭೆಗಳು ಸಂಭವಿಸುತ್ತಿಲ್ಲ. ಟ್ಯಾಕ್ಸಿಗಳು, ಕಾಲೇಜು, ಆಸ್ಪತ್ರೆ, ಬ್ಯಾಂಕ್ ಎಲ್ಲವೂ ಎಂದಿನಂತೆ ಓಡುತ್ತಿವೆ. ಬೆಂಗಾಜಿ, ಟ್ರಿಪೊಲಿ ಕಡೆ ಮಾತ್ರ ಗಲಾಟೆ ಆಗುತ್ತಿರುವದನ್ನು ನಾವು ಟೀವಿಯಲ್ಲಿ ನೋಡಬಹುದು. ಆದರೆ ಅಲ್ಲಿಯ ಜನರ ಆತಂಕವೇನೆಂದರೆ, ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕೆಲಸಗಳು ಈಗ ಸ್ಥಗಿತಗೊಂಡಿವೆ ಎನ್ನುವದು. ಪೆಟ್ರೋಲ್ ಶೇಖರಣೆ ಸದ್ಯಕ್ಕೆ ನಿಂತಿದೆ. ಅಂತರಾಷ್ಟ್ರೀಯ ತೈಲ ಕಂಪನಿಗಳು ಬಾಗಿಲು ಮುಚ್ಚಿವೆ. ಇನ್ನು ನನ್ನ ಲಿಬಿಯನ್ ಸಹೋದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಾ “ನೀವು ದಕ್ಷಿಣದ ಕಡೆಯವರು ಏಕೆ ದಂಗೆ ಎದ್ದಿಲ್ಲ?” ಎಂದು ಕೇಳಿದೆ. ಅದಕ್ಕವರು “ಸಕಲ ಸೌಲತ್ತುಗಳನ್ನು ಕೊಟ್ಟವನ ವಿರುದ್ಧ ನಾವೇಕೆ ದಂಗೆ ಏಳಬೇಕು? ಹಾಗೆ ಒಂದು ವೇಳೆ ನಾವು ದಂಗೆಯೆದ್ದರೆ ಅದು ನಮ್ಮ ಮೂರ್ಖತನವಾಗುತ್ತದೆ. ಹರಾಮಿಕೋರತನವಾಗುತ್ತದೆ” ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಇಡಿ ಈಜಿಪ್ಟಿನ ಜನ ಹೊಸ್ನಿ ಮುಬಾರಕ್ ನ ವಿರುದ್ಧ ಎದ್ದು ನಿಂತಂತೆ ಇಡಿ ಲಿಬಿಯಾದ ಜನ ಮೌಮೂರ್ ಗಡಾಫಿಯ ವಿರುದ್ಧ ಎದ್ದು ನಿಂತಿಲ್ಲ ಎನ್ನುವದು. ಅಂದರೆ ಲಿಬಿಯಾದಲ್ಲಿ ಮುಂದೇನಾಗಬಹುದು ಎಂದು ಈಗಲೇ ಊಹಿಸುವದು ಕಷ್ಟಸಾಧ್ಯ. ಏಕೆಂದರೆ ಮೌಮೂರ್ ಗಡಾಫಿ ಅಷ್ಟು ಸುಲಭವಾಗಿ ತನ್ನ ಅಧಿಕಾರ ಗದ್ದುಗೆಯನ್ನು ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವನು ಮೊನ್ನೆ ಲಿಬಿಯನ್ನರನ್ನು ಉದ್ದೇಶಿಸಿ “ನಿಮಗೆ ಇಷ್ಟೆಲ್ಲಾ ಕೊಟ್ಟರೂ ನಿಷ್ಟೆ ಎನ್ನುವದು ಇಲ್ಲ. ನಾಯಿಗಳೇ ನಿಮಗಿಂತ ಎಷ್ಟೋ ವಾಸಿ” ಎಂದು ಬಯ್ದಿದ್ದನ್ನು ಸ್ಥಳೀಯ ಟೀವಿ ಚಾನಲ್ ವೊಂದು ಪ್ರಸಾರ ಮಾಡಿದೆಯೆಂದು ಅಲ್ಲಿಯ ನನ್ನ ಇಂಡಿಯನ್ ಮಿತ್ರರು ಹೇಳಿದ್ದಾರೆ. ಈ ಮಾತು ಲಿಬಿಯನ್ನರನ್ನ ಮತ್ತಷ್ಟು ಕೆರಳಿಸಿದೆಯಂತೆ. ಗಡಾಫಿ ಕೆಳಗಿಳಿಯುತ್ತಾನೋ? ಅಥವಾ ತನ್ನ ವಿರೋಧಿಗಳನ್ನು ಬಗ್ಗು ಬಡಿದು ಅವನೇ ಮುಂದುವರಿಯುತ್ತಾನೋ? ಕಾದು ನೋಡಬೇಕಾಗಿದೆ. ಆದರೆ ಅಕಸ್ಮಾತ್ ಗಡಾಫಿಯ ಮೇಲೆ ಒತ್ತಡ ಹೆಚ್ಚಾಗಿ ಅವನೇನಾದರು ಕೆಳಗಿಳಿದರೆ ಅದರ ಬಿಸಿ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಲು ಈಗಾಗಲೇ ಆಯಾಯ ದೇಶಗಳಲ್ಲಿ ಸಣ್ಣಗೆ ಆರಂಭವಾಗುತ್ತಿರುವ ಪ್ರತಿಭಟನೆಗಳೇ ಸಾಕ್ಷಿ.&lt;br /&gt;&lt;br /&gt;&lt;br /&gt;ಹಾಗಾದರೆ ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರು ಏನು? ಲಿಬಿಯನ್ನರು ಇಷ್ಟೆಲ್ಲಾ ಸಿಕ್ಕ ಮೇಲು ಇನ್ನೂ ಹೆಚ್ಚಿನದನ್ನು ಅವನಿಂದ ನಿರೀಕ್ಷಿಸಿದ್ದರೆ? ಅಥವಾ ನಮ್ಮ ಕಣ್ಣಿಗೆ ಕಾಣದ ಆಂತರಿಕ ರಾಜಕೀಯ ಕಲಹಗಳೇನಾದರೂ ಇದ್ದವೆ? ಅಥವಾ ಗಡಾಫಿ ಆಳ್ವಿಕೆ ಸಾಕು ಬೆರೆ ಯಾರಾದರು ಆಳಲಿ ಎಂದು ಜನ ಹೊಸತನಕ್ಕೆ ಬಯಸಿದರೆ? ಅಥವಾ ಇಲ್ಲಿನ ಜನರು ಅಧಿಕಾರ, ಸಂಪತ್ತಿನ ಆಸೆಯಿಂದಾಗಿ ಪ್ರತಿಭಟನೆಯೆದ್ದರೆ? ಅಥವಾ ಅಲ್ಲಿಯ ಜನಕ್ಕೆ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯೊಂದು ಬೇಕಾಗಿದೆಯೇ? ಅಥವಾ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹತೋಟಿ ಸಾಧಿಸಲು ಲಿಬಿಯಾದ ವಿರುದ್ಧ ಅಮೆರಿಕಾ ಮತ್ತು ಇಟಲಿ ದೇಶಗಳು ಜಂಟಿಯಾಗಿ ಸಂಚು ನಡೆಸುತ್ತಿವೆಯೇ? ಅಥವಾ ಇದು ಧಾರ್ಮಿಕ ಮೂಲಭಾತವಾದ ಮತ್ತು ನವವಸಾಹತುಶಾಹಿಗಳು ರಚಿಸಿದ ವ್ಯೂಹವೆ? ಅಥವಾ ಅದರ ಹಿಂದೆ ಮತ್ಯಾವುದೋ ಕಾಣದ ಕೈಗಳ ಕೈವಾಡಯಿದೆಯೇ?  ಈ ಎಲ್ಲಾ ಪ್ರಶ್ನೆ, ಊಹೆಗಳಿಗೆ ಕಾಲವೇ ಉತ್ತರ ನೀಡುತ್ತದೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಕಾಯಬೇಕಷ್ಟೇ. &lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;12-3-2011 ರ ಉದಯವಾಣಿಯಲ್ಲಿ ಪ್ರಕಟಿತ. ಅದರ ಲಿಂಕ್ ಇಲ್ಲಿದೆ. &lt;a href="http://74.127.61.106/epaper/PDFList.aspx?Pg=H&amp;Edn=MN&amp;DispDate=3/12/2011"&gt;http://74.127.61.106/epaper/PDFList.aspx?Pg=H&amp;Edn=MN&amp;DispDate=3/12/2011&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-1216438082634451087?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/1216438082634451087/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/03/blog-post.html#comment-form' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/1216438082634451087'/><link rel='self' type='application/atom+xml' href='http://www.blogger.com/feeds/2802103225554897449/posts/default/1216438082634451087'/><link rel='alternate' type='text/html' href='http://bisilahani.blogspot.com/2011/03/blog-post.html' title='ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-e1Da7nzKso8/TXsZV0yEmSI/AAAAAAAAAYk/o1hcgCGarNg/s72-c/untitled.bmp' height='72' width='72'/><thr:total>12</thr:total></entry><entry><id>tag:blogger.com,1999:blog-2802103225554897449.post-8943363790619762693</id><published>2011-01-22T20:24:00.000+01:00</published><updated>2011-01-22T20:28:24.200+01:00</updated><title type='text'>ಕನಸು ನನಸುಗಳ ನಡುವಿನ ನೆನಪು (ಭಾಗ-3)</title><content type='html'>ಈ ನಡುವೆ ನನ್ನ ಪಿ.ಯು.ಸಿ ಪರೀಕ್ಷೆಗೆ ಮತ್ತೆ ಕಟ್ಟಿದ್ದೆನಾದರೂ  ಪರೀಕ್ಷೆ ತೆಗೆದುಕೊಳ್ಳಲು ಹೋಗಲಿಲ್ಲ. ಓದುವ, ಪರೀಕ್ಷೆ ತೆಗೆದುಕೊಳ್ಳುವ ಉತ್ಸಾಹವೇ ಇರಲಿಲ್ಲ. ಓದಿ ಪಾಸ್ ಮಾಡಿದರೆ ಮುಂದೆ ಓದಿಸುವವರು ಯಾರು? ಎಲ್ಲರಿಗೂ ಅವರವರ ಬದುಕು ಭಾರವಾಗಿತ್ತು. ಅಪ್ಪನಿಗೇ ಇಲ್ಲದ ಕಾಳಜಿ ಬೇರೆಯವರಿಗೆ ಎಲ್ಲಿಂದ ಬಂದೀತು? ಇದ್ದೊಬ್ಬ ಅಣ್ಣ ಬಿ.ಎ. ಮಾಡಿ ಟೀಚರ್ಸ್ ಟ್ರೇನಿಂಗ್ ಮುಗಿಸಿ ದೊಡ್ಡಪ್ಪನ ಊರಲ್ಲಿ ಅವರ ಹೊಲಗದ್ದೆಗಳನ್ನು ನೋಡಿಕೊಂಡಿದ್ದನು. ಏಕಾಏಕಿ ಆ ಹಂಗಿನಿಂದ ಹೊರಗೆ ಬಂದು ಆಚೆ ಕಡೆ ಏನಾದರೊಂದು ಕೆಲಸ ಮಾಡುವದು ಆ ಸಮಯದಲ್ಲಿ ಅವನಿಗೂ ಸಾಧ್ಯವಿರಲಿಲ್ಲ. ಮುಂದೆ ಸ್ವಲ್ಪ ದಿನ ನನ್ನ ತಾಯಿ ತವರು ಮನೆ ಸುಲ್ತಾನಪೂರದಲ್ಲಿ, ಸ್ವಲ್ಪ ದಿನ ನನ್ನ ದೊಡ್ಡಮ್ಮನ ಊರು ಕಲಕೋಟಿಯಲ್ಲಿ ಅವರ ಒಕ್ಕಲುತನದ ಕೆಲಸಗಳಲ್ಲಿ ಸಹಾಯಮಾಡುತ್ತಾ ಕಾಲ ಕಳೆದೆ. ಆಗೆಲ್ಲಾ ಅವರಿಗೆ ತುಂಬಾ ಭಾರವಾಗುತ್ತಿದ್ದೇನಲ್ಲ ಎಂದನಿಸಿ ಅತೀವ ಮುಜುಗರವಾಗುತ್ತಿತ್ತು. ಈ ನಡುವೆ ನನ್ನ ಅಕ್ಕ “ನೀನು  ಓದಿ ಪಾಸ್ ಮಾಡಿದರೆ ತಾನೆ ಯಾರಾದರೂ ನಿನ್ನನ್ನು ಓದಿಸಲು ಯೋಚಿಸೋದು. ಮೊದಲು ಓದಿ ಪಾಸ್ ಮಾಡು. ಆಮೇಲೆ ನಾವ್ಯಾರಾದರು ಓದಿಸುತ್ತೇವೆ” ಎಂದು ಒಂದಿಷ್ಟು ಧೈರ್ಯ ಹೇಳಿ ಗದುಗಿಗೆ ಕರೆತಂದಳು. ಅಕ್ಕನ ಸಹಾಯದಿಂದ ಧಾರವಾಡಕ್ಕೆ ಹೋಗಿ ಮತ್ತೆ ಪರೀಕ್ಷೆ ಕಟ್ಟಿ ಬಂದೆ.&lt;br /&gt;&lt;br /&gt;ನನಗೆ ಅಲ್ಲಿಯೂ ಅವರಿಗೆ ಭಾರವಾಗಿರಲು ಇಷ್ಟವಿರಲಿಲ್ಲ. ನನ್ನ ಖರ್ಚಿಗಾಗುವಷ್ಟನ್ನಾದರೂ ನಾನು ಸಂಪಾದಿಸಬೇಕಿತ್ತು. ಹೀಗಾಗಿ ಗೆಳೆಯರಾದ ನೀಲಗುಂದ ಮತ್ತು ಭುಜರಿಯ ಸಹಾಯದಿಂದ ಗದುಗಿನ ಪ್ರತಿಷ್ಠಿತ ಫೋಟೋ ಸ್ಟುಡಿಯೊವೊಂದರಲ್ಲಿ ಕೆಲಸ ಹಿಡಿದೆ. ಸ್ಟುಡಿಯೋದಲ್ಲಿ ದೊಡ್ಡ ದೊಡ್ಡ ಡೆವಲಿಪ್ಪಿಂಗ್ ಮತ್ತು ಪ್ರಿಂಟಿಂಗ್ ಮಶಿನ್ ಗಳಿದ್ದವು. ನನಗೆ ಅವನ್ನು ಮುಟ್ಟಲು ಸಹ  ಭಯವಾಗುತ್ತಿತ್ತು. ಏನೋ ಮಾಡಲು ಹೋಗಿ ಏನಾದರು ಆಗಿಬಿಟ್ಟರೆ? ಏನು ಮಾಡುವದು? ದುಡ್ಡು ಎಲ್ಲಿಂದ ತರುವದು? ಹೀಗಾಗಿ ಪ್ರಿಂಟಿಗ್ ಬಿಟ್ಟು ಡೆವಲಪ್ ಆದ ನೆಗಟಿವ್ ಗಳನ್ನು ಕವರ್ ನಲ್ಲಿ ಸೇರಿಸುವದು, ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಕತ್ತರಿಸಿ ಕೊಡುವದು, ಪ್ರಿಂಟ್ ಹಾಕಿದ ಫೋಟೊಗಳನ್ನು ಡೆಲಿವರಿ ಡೆಸ್ಕಿಗೆ ಕಳಿಸುವದು, ಒಂದೊಂದು ಸಾರಿ ಆರ್ಡರ್ಸ್ ತೆಗೆದುಕೊಳ್ಳುವದು.... ಹೀಗೆ ಒಂದೊಂದಾಗಿ ಫೋಟೋಗ್ರಾಫಿಗೆ ಸಂಬಂಧಪಟ್ಟ ಕೆಲಸಗಳನ್ನು ಕಲಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ನನ್ನೊಳಗೊಬ್ಬ ಫೋಟೊಗ್ರಾಫರ್ ಮೊಳಕೆಯೊಡೆದಿದ್ದ. ಎಷ್ಟೋ ಸಲ ಹೆಗಲಿಗೊಂದು ಕ್ಯಾಮೆರಾ ಏರಿಸಿ ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಓಡಾಡಿ ಫೋಟೊ ತೆಗೆಯುವ ಕನಸನ್ನು ಕಂಡಿದ್ದಿದೆ. ಆದರೆ ತಿಂಗಳಾಗುವಷ್ಟೊತ್ತಿಗೆ ಮಾಲೀಕರು ಒಂದು ತಿಂಗಳ ಸಂಬಳವನ್ನು ಕೈಗಿತ್ತು ಕಾರಣ ಹೇಳದೆ ನಾಳೆಯಿಂದ ಬರಬೇಡ ಎಂದಷ್ಟೆ ಹೇಳಿ ಕಳುಹಿಸಿದರು. ಬಹುಶಃ, ಅವರು ನಾನು ಒಂದು ತಿಂಗಳಲ್ಲಿಯೇ ಎಲ್ಲ ಕೆಲಸವನ್ನು ಕಲಿತುಕೊಳ್ಳುತ್ತೇನೆ ಎಂದು ನಿರೀಕ್ಷಿಸಿದ್ದರೋ ಅಥವಾ ಅವರಿಗೆ ನನ್ನನ್ನು ಕೆಲಸದಿಂದ ತಗೆಯಬೇಕಿತ್ತೋ ಗೊತ್ತಿಲ್ಲ. ಅಂತೂ ಆ ಕೆಲಸಕ್ಕೆ ಇತಿಶ್ರೀ ಹಾಡಿದೆ. ಆ ಮೂಲಕ ನನ್ನೊಳಗೆ ಚಿಗುರೊಡೆದಿದ್ದ ಫೋಟೋಗ್ರಾಫರ್ ಸತ್ತು ಹೋದ. ಒಂದು ಕೆಲಸವನ್ನು ನಾವಾಗಿಯೇ ಬಿಡುವದಕ್ಕೂ ಅದಾಗಿಯೇ ಹೋಗುವದಕ್ಕೂ ತುಂಬಾ ವ್ಯತ್ಯಾಸವಿದೆ; ಮೊದಲನೆಯದು ಈ ಕೆಲಸ ನನ್ನ ಯೋಗ್ಯತೆಗೆ ತಕ್ಕದಾಗಿಲ್ಲ ಎನ್ನುವ ಅರ್ಥವನ್ನು ಕೊಟ್ಟರೆ ಎರಡನೆಯದು ಕಾರಣ ಏನೇ ಇದ್ದರೂ ನಾನು ಆ ಕೆಲಸಕ್ಕೆ ಯೋಗ್ಯನಲ್ಲ ಎನ್ನುವ ಸಂದೇಶವನ್ನು ಕೊಡುತ್ತದೆ. ಕೆಲಸ ಕಳೆದುಕೊಂಡ ಅವಮಾನ ನನ್ನನ್ನು ಮತ್ತಷ್ಟು ಜರ್ಝರಿತನನ್ನಾಗಿ ಮಾಡಿತು.&lt;br /&gt; &lt;br /&gt;ಸರಿ, ಮುಂದೆ ಏನು ಮಾಡುವದು? ಕಲಕೋಟಿಯಲ್ಲಿ ನನಗೆ ಕಲಿಸಿದ್ದ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಗದುಗಿಗೆ ಆಗಷ್ಟೆ ವರ್ಗವಾಗಿ ಬಂದಿದ್ದರು. ಮೊದಲಿನಿಂದಲೂ ಅವರಿಗೆ ನನ್ನ ಜಾಣತನದ ಬಗ್ಗೆ ಗೊತ್ತಿದ್ದರಿಂದ ಅವರು ತಮ್ಮ ಮನೆ ಹತ್ತಿರ ತೀರ ಸಣ್ಣ ಮಕ್ಕಳಿಗೆ ನಾನು ಯಾಕೆ ಟ್ಯೂಶನ್ ಮಾಡಬಾರದು ಎಂಬ ಸಲಹೆ ಕೊಟ್ಟರು. ‘ಪಿ.ಯು.ಸಿ ಫೇಲಾದವನೊಬ್ಬ ಯಾವ ತರದ ಟ್ಯೂಶನ್ ಮಾಡಿಯಾನು?’ ಎಂಬ ನನ್ನ ಆತಂಕವನ್ನು ಅವರ ಮುಂದಿಟ್ಟಾಗ “ನೀನು ಮೊದಲಿನಿಂದಲೂ ಜಾಣ ವಿದ್ಯಾರ್ಥಿ, ನಿನ್ನ ಇಂಗ್ಲೀಷ್ ಮತ್ತು ಗಣಿತ ಚನ್ನಾಗಿದೆ. ದೊಡ್ಡವರಿಗಲ್ಲದಿದ್ದರೂ ಸಣ್ಣ ಮಕ್ಕಳಿಗಿ ಪಾಠ ಹೇಳುವಷ್ಟು ಸಾಮರ್ಥ್ಯ ನಿನ್ನಲ್ಲಿದೆ. ನಿನ್ಯಾಕೆ ಪ್ರಯತ್ನಿಸಬಾರದು?” ಎಂದು ಧೈರ್ಯ ತುಂಬಿದರು. ಆ ಪ್ರಕಾರ ದಿನಾಲೂ ಅಕ್ಕನ ಮನೆಯಿಂದ ಅವರ ಮನೆಗೆ ಹೋಗಿ ಪಾಠ ಹೇಳಿ ಬರುತ್ತಿದ್ದೆ. ಪಾಠ ಮಾಡುತ್ತಾ ಮಾಡುತ್ತಾ ನಾನು ಬರೀ ಚಿಕ್ಕ ಮಕ್ಕಳಿಗೆ ಮಾತ್ರವಲ್ಲ SSLC ಮಕ್ಕಳಿಗೂ ಸಹ ಗಣಿತ ಮತ್ತು ಇಂಗ್ಲೀಷ್ ಹೇಳಿಕೊಡಬಲ್ಲೆ ಎನ್ನುವ ಆತ್ಮವಿಶ್ವಾಸ ಮೂಡಿತ್ತು. ಏಕೆಂದರೆ SSLC ಯಲ್ಲಿ ನಾನು ನನ್ನ ಗುರುಗಳಾದ ಅಣ್ಣಿಗೇರಿ ಮಾಸ್ತರರಿಂದ ಕಲಿತ ಗಣಿತ ಮತ್ತು ಇಂಗ್ಲೀಷ್ ನನ್ನ ತಲೆಯಲ್ಲಿ ಇನ್ನೂ ಹಾಗಾಗೆ ಉಳಿದಿದ್ದವು. ಹಾಗೆ ಮೆಲ್ಲಗೆ ನನ್ನೊಳಗೆ ಹುಟ್ಟಿದ ಶಿಕ್ಷಕನೊಬ್ಬ ಮುಂದೊಂದು ದಿನ ಬೃಹದಾಕಾರವಾಗಿ ನಿಲ್ಲುತ್ತಾನೆಂದು ನಾನೆಣಿಸಿರಲಿಲ್ಲ. ನನ್ನ ಹತ್ತಿರ ಟ್ಯೂಶನ್ ಬರುವ ಮಕ್ಕಳೆಲ್ಲಾ ಒಳ್ಳೆ ಅಂಕಗಳನ್ನು ತೆಗೆದುಕೊಂಡು ಪಾಸಾಗತೊಡಗಿದರು. ಇದರಿಂದ ಹೆಚ್ಚಿನ ಮಕ್ಕಳು ಬರತೊಡಗಿದರು. ನಾನು ನಿರೀಕ್ಷಿಸಿದ್ದಕ್ಕಿಂತ ದುಡ್ಡು ಕೂಡ ಚನ್ನಾಗಿ ಬರತೊಡಗಿತು. ಈಗಾಗಲೇ ಪಿ.ಯು.ಸಿ. ಪರೀಕ್ಷಿಗೆ ಕಟ್ಟಿಬಂದಿದ್ದರಿಂದ ನನ್ನ ಕೆಲಸದ ಜೊತೆಜೊತೆಗೆ ಪರೀಕ್ಷೆಗೆ ತಯಾರಾಗತೊಡಗಿದೆ.  &lt;br /&gt;&lt;br /&gt;ಇದೇ ಸಂದರ್ಭದಲ್ಲಿ ಆಗಷ್ಟೇ ಮದುವೆಯಾಗಿದ್ದ ನನ್ನ ಅಣ್ಣ ಅಂದರೆ ನನ್ನ ದೊಡ್ಡಪ್ಪನ ಮಗ “ನೀನು ಪಿ.ಯು.ಸಿ. ಪಾಸ್ ಮಾಡಿದರೆ ಮುಂದೆ ನಮ್ಮ ಜೊತೆ ಇದ್ದುಕೊಂಡು ಓದಬಹುದು” ಎಂದು ಭರವಸೆ ಕೊಟ್ಟ. ನನಗೋ ಎಲ್ಲಿಲ್ಲದ ಖುಶಿ! ನಾನು ಓದಲಾರದೆ ಹಾಗೆ ಉಳಿದು ಬಿಡುತ್ತೆನೆ ಎಂದುಕೊಂಡವನಿಗೆ ಸ್ವರ್ಗ ಮೂರೇ ಗೇಣು! ಆ ವರ್ಷ 1995. ನನ್ನ ಟ್ಯೂಶನ್ ಕೆಲಸದ ಜೊತೆ ಕಷ್ಟಬಿದ್ದು ಓದಿದೆ. ಈ ವರ್ಷ ಓದಿ ಪಾಸ್ ಮಾಡದೇ ಹೋದರೆ ಸಿಕ್ಕ ಅವಕಾಶ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಹಟಕ್ಕೆ ಬಿದ್ದು ಓದಿದೆ. ಏಪ್ರಿಲ್ ತಿಂಗಳಲ್ಲಿ ಧಾರವಾಡಕ್ಕೆ ಹೋಗಿ ಪರೀಕ್ಷೆ ಬರೆದು ಬಂದೆ. ಪರೀಕ್ಷೆಯಲ್ಲಿ ಪಾಸಾಗುತ್ತೆನೆ ಎಂಬ ಅತ್ಮವಿಶ್ವಾಸವಿತ್ತು. ಅಕಸ್ಮಾತ್ ಫೇಲಾಗಿ ಬಿಟ್ಟರೆ? ಇದ್ದೇ ಇದೆಯಲ್ಲ ಟ್ಯೂಶನ್ ಮಾಡ್ಕೊಂಡು ಹೋಗೋದು ಎಂದು ಟ್ಯೂಶನ್ ನಡೆಸಲು ತಯಾರಿ ಮಾಡಿಕೊಳ್ಳತೊಡಗಿದೆ. ಜೂನ್ ಮೊದಲ ವಾರದಲ್ಲಿ ಪಿ.ಯು.ಸಿ. ಫಲಿತಾಂಶ ಹೊರಬಿತ್ತು. ನನಗೋ ಏನಾಗುತ್ತದೋ ಎಂಬ ಆತಂಕ! ಧಾರವಾಡಕ್ಕೆ ಹೋಗಿ ರಿಸಲ್ಟ್ ನೋಡಿದೆ. ನನ್ನ ಅದೃಷ್ಟಕ್ಕೆ ಪಾಸಾಗಿದ್ದೆ. ಕುಣಿದುಕುಪ್ಪಳಿಸಿಬಿಟ್ಟೆ. ಅದೇ ಖುಶಿಯಲ್ಲಿ ಧಾರವಾಡದ ವಿಜಯಾ ಥೇಟರ್ ನಲ್ಲಿ ಆಗಷ್ಟೆ ಬಿಡುಗಡೆಯಾದ ಉಪೇಂದ್ರನ “ಓಂ” ಸಿನಿಮಾ ನೋಡಿ ಗದುಗಿಗೆ ವಾಪಾಸಾಗಿದ್ದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-8943363790619762693?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/8943363790619762693/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/01/3.html#comment-form' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/8943363790619762693'/><link rel='self' type='application/atom+xml' href='http://www.blogger.com/feeds/2802103225554897449/posts/default/8943363790619762693'/><link rel='alternate' type='text/html' href='http://bisilahani.blogspot.com/2011/01/3.html' title='ಕನಸು ನನಸುಗಳ ನಡುವಿನ ನೆನಪು (ಭಾಗ-3)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>3</thr:total></entry><entry><id>tag:blogger.com,1999:blog-2802103225554897449.post-9215475643809861211</id><published>2011-01-15T22:32:00.003+01:00</published><updated>2011-01-15T22:49:10.804+01:00</updated><title type='text'>ನಾವು ಪ್ರೀತಿಸದೆ ಯಾರನ್ನೂ ದ್ವೇಷಿಸಲಾರೆವು!</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_FiNlrLfTRP0/TTIWKu6oOhI/AAAAAAAAAYI/q4vHqnT8cmk/s1600/colors-of-prayer-heart.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 242px;" src="http://3.bp.blogspot.com/_FiNlrLfTRP0/TTIWKu6oOhI/AAAAAAAAAYI/q4vHqnT8cmk/s320/colors-of-prayer-heart.jpg" border="0" alt=""id="BLOGGER_PHOTO_ID_5562532863404423698" /&gt;&lt;/a&gt;&lt;br /&gt;ನಾವಿಬ್ಬರೂ ಚನ್ನಾಗಿಯೇ ಇರುತ್ತಿದ್ದೆವು; ಕಿಲಕಿಲ ನಗುತ್ತಾ, ರೇಗಿಸುತ್ತಾ, ತಮಾಷೆ ಮಾಡುತ್ತಾ ಜಗತ್ತಿನಲ್ಲಿ ನಾವಿಬ್ಬರೇ ಪ್ರೀತಿಸುತ್ತಿರುವಂತೆ ಒಬ್ಬರಿಗೊಬ್ಬರು ಸದಾ ಅಂಟಿಕೊಂಡೇ ಇರುತ್ತಿದ್ದೆವು. ಆದರೆ ಒಮ್ಮೊಮ್ಮೆ ಶರಂಪರ ಜಗಳಾಡಿ, ಕಿತ್ತಾಡಿಕೊಂಡು, ಮಾತುಬಿಟ್ಟು, ಮೌನವೃತ ಹಿಡಿದು ನಾನೊಂದು ದಿಕ್ಕು ನೀನೊಂದು ದಿಕ್ಕಾಗಿ ಕುಳಿತು ಬಿಡುತ್ತಿದ್ದೆವು. ಅಲ್ಲಿ ನೀನಿರುತ್ತಿದ್ದೆ, ನಾನಿರುತ್ತಿದ್ದೆ. ಅದರೂ ನಾವಿಲ್ಲವಾಗಿರುತ್ತಿದ್ದೆವು. ಅದೇನೋ ಗೊತ್ತಿಲ್ಲ ಒಮ್ಮೊಮ್ಮೆ ಇದ್ದಕ್ಕಿಂದ್ದಂತೆ ಈ ಜಗಳ ಇಬ್ಬರ ಮಧ್ಯ ಧುತ್ತೆಂದು ವಕ್ಕರಿಸಿಬಿಡುತ್ತಿತ್ತು. ಅಸಲಿಗೆ ಅದಕ್ಕೊಂದು ಕಾರಣಾಂತ ಇರುತ್ತಿರಲಿಲ್ಲ. ಒಂದೊಂದು ಸಲ ತಮಾಷೆಯೇ ಜಗಳಕ್ಕೆ ತಿರುಗಿಬಿಡೋದು. ಆಗೆಲ್ಲಾ ಒಬ್ಬರೊನ್ನೊಬ್ಬರು ಆಪಾದಿಸುತ್ತಾ, ಟೀಕಿಸುತ್ತಾ, ಶಪಿಸುತ್ತಾ, ಸಣ್ಣ ಸಣ್ಣ ತಪ್ಪುಗಳನ್ನು ದೊಡ್ಡದಾಗಿಸುತ್ತಾ ಇಬ್ಬರೂ ಒಬ್ಬರೊನ್ನೊಬ್ಬರು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದೆವು. ಈ ದ್ವೇಷದಲ್ಲಿ ನಗು, ಮಾತು, ಎಲ್ಲವೂ ಮರೆತು ಹೋಗುತ್ತಿತ್ತು. ಸದಾ ಜೇನಹನಿಗಳಂತೆ ಸುರಿಯುತ್ತಿದ್ದ  ನಮ್ಮ ಮಾತುಗಳು ವಿಷದ ಮುಳ್ಳುಗಳಾಗಿ ಚುಚ್ಚುತ್ತಿದ್ದವು. ಗಂಡ ಹೆಂಡಿರ ಜಗಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ನಮ್ಮದು ಹಾಸಿಗೆಯಲ್ಲೂ ಭುಸುಗುಟ್ಟಿ ನಾನೊಂದು ಮಗ್ಗಲು, ನೀನೊಂದು ಮಗ್ಗಲಾಗಿ ಮಲಗುತ್ತಿದ್ದೆವು. ಈ ಜಗಳದಲ್ಲಿ ನಾವಿಬ್ಬರೂ ಎಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದೆವೆಂದರೆ ನಾವು ಸುಸಂಸ್ಕೃತರು, ವಿದ್ಯಾವಂತರು ಎಂಬುದನ್ನು ಕೂಡ ಮರೆತು ಬಿಡುತ್ತಿದ್ದೆವು. ಸಭ್ಯತೆ, ನಾಗರಿಕತೆಯ ಮುಸುಕು ಹೊದ್ದ ನಮ್ಮಿಬ್ಬರೊಳಗೆ ಅದೆಂಥ ಅಸಹ್ಯದ ಭಾವಗಳಿರುತ್ತಿದ್ದವು! &lt;br /&gt;    &lt;br /&gt;ಜಗಳದಲ್ಲಿ ವಾಗ್ವುದ್ಧ ಭರ್ಜರಿಯಾಗಿ ನಡೆಯುತ್ತಿತ್ತು. ಮಾತೆಲ್ಲ ಮುಗಿದ ಮೇಲೆ ಮತ್ತೆ ಒಂದಷ್ಟು ದಿವಸ ಮೌನ ಯುದ್ಧ ನಡೆಯುತ್ತಿತ್ತು. ಅದು ಮಾತಿನ ಯುದ್ಧಕ್ಕಿಂತ ಇನ್ನೂ ಭಯಂಕರವಾಗಿರುತ್ತಿತ್ತು. ಅದೂ ಮುಗಿದು ಇನ್ನೇನು ಮತ್ತೆ ಇಬ್ಬರೂ ಒಂದಾಗಬೇಕೆನ್ನುವಷ್ಟರಲ್ಲಿ ನಮ್ಮಿಬ್ಬರ ಅಹಂ ಅಡ್ದಿ ಬರುತ್ತಿತ್ತು. ನಾನು ಮೊದಲು ಮಾತಾಡಲಿಯೆಂದು ನೀನು....... ನೀನು ಮೊದಲು ಮಾತಾಡಲಿಯೆಂದು ನಾನು.......ಹೀಗೆ ನಾವಿಬ್ಬರೂ ನಮ್ಮ ನಮ್ಮ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿ ಹತ್ತಿರವಿದ್ದೂ ದೂರ ದೂರ ಉಳಿಯುತ್ತಿದ್ದೆವು. ನಮ್ಮಿಬ್ಬರ ನಡುವಿನ ಮೌನ  ಮಾತಾಡುವ ಘಳಿಗೆಗಳಿಗಾಗಿ ತವಕಿಸುತ್ತಿತ್ತು. ಸರಿ, ಆ ಮೌನ ಮುರಿಯುವರಾದರೂ ಯಾರು? ನೀವು ಹುಡುಗಿಯರು ಅಷ್ಟು ಬೇಗ ಸೋಲುವದಿಲ್ಲ ಎಂದು ಗೊತ್ತಿದ್ದರಿಂದ ನಾನೇ ಮಾತಾಡಲು ಮುಂದಾಗುತ್ತಿದ್ದೆ. ಆಗೆಲ್ಲಾ ನಾನು “ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ?” ಎಂದು ನನ್ನಷ್ಟಕ್ಕೆ ನಾನೆ ಹಾಡಿಕೊಳ್ಳುತ್ತಾ ನಿನಗೆ ಹತ್ತಿರವಾಗಲು ನೋಡುತ್ತಿದ್ದೆ. ಆದರೆ ನೀನು ಮತ್ತೆ ಕೆಕ್ಕರಿಸಿದ ಕಣ್ಣುಗಳಿಂದ ನನ್ನ ದೂರ ತಳ್ಳುತ್ತಿದ್ದೆ. ಅಸಲಿಗೆ ನಾನು ಆ ಹಾಡನ್ನು ನಮ್ಮಿಬ್ಬರ ನಡುವಿನ ಬಿಗಿಯಾದ ವಾತಾವರಣವನ್ನು ತಿಳಿಗೊಳಿಸಲು ಹಾಡುವದಕ್ಕಿಂತ ಹೆಚ್ಚಾಗಿ ನಿನ್ನನ್ನು ಚುಚ್ಚಲು, ಛೇಡಿಸಲು ಹಾಡುತ್ತಿದ್ದೆ ಎಂದು ನೆನೆಸಿಕೊಂಡರೆ ನನಗೀಗ ನಗು ಬರುತ್ತದೆ. ಇರಲಿ. ಎಲ್ಲದಕ್ಕೂ ಒಂದು ಕೊನೆಯಂತಾ ಇರಲೇಬೇಕಲ್ಲವೆ? ಹಾಗೆಯೇ ನಮ್ಮ ಜಗಳಕ್ಕೂ ಒಂದು ಕೊನೆಯಿರುತ್ತಿತ್ತು. ದಿನಕಳೆದಂತೆ ನಮ್ಮಿಬ್ಬರ ನಡುವೆ ಕಟ್ಟಿಕೊಂಡಿದ್ದ ಚೀನಾ ಗೋಡೆ ಕರಗಿ ಮೊದಲಿನಂತಾಗಿ ಮೆಲ್ಲನೆ ನಾವಿಬ್ಬರೂ ಮತ್ತೆ ಜಮುನೆ ಗಂಗೆಯರಂತೆ ಸಂಗಮಿಸಿ ಹರಿಯುತ್ತಿದ್ದೆವು.   &lt;br /&gt;&lt;br /&gt;ನಮ್ಮಿಬ್ಬರ ಪ್ರೀತಿ ಮತ್ತೆ ಕೂಡಿಕೊಂಡು ತೋಳುಗಳು ತಬ್ಬಿಕೊಂಡ ಹೊತ್ತಿನಲ್ಲಿ ನೀನು ನನ್ನ ಕೇಳುತ್ತಿದ್ದೆ “ಯಾಕೆ ನನ್ನೊಂದಿಗೆ ಇಷ್ಟೊಂದು ಜಗಳವಾಡುತ್ತೀಯಾ? ಯಾಕೆ ನನ್ನ ಮೇಲೆ ಇಷ್ಟೊಂದು ಸಿಡಿಮಿಡಿಗುಟ್ಟುತ್ತೀಯಾ? ಯಾಕೆ ನನ್ನನ್ನು ಇಷ್ಟೊಂದು ದ್ವೇಷಿಸುತ್ತೀಯಾ? ಕಾರಣವೇನು?” ನಾನಾಗ ಮೆಲ್ಲಗೆ “ನಿನ್ನ ಪ್ರೀತಿಸುವದೇ ಈ ಎಲ್ಲ ದ್ವೇಷಕ್ಕೆ ಕಾರಣ.” ಎಂದು ಹೇಳುತ್ತಿದ್ದೆ. ನೀನು ಅರ್ಥವಾಗದೆ ನನ್ನನ್ನು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದೆ. ನಾನು ನಿಧಾನಕ್ಕೆ ಎಲ್ಲವನ್ನೂ ಅರ್ಥಮಾಡಿಸುತ್ತಾ ಹೋಗುತ್ತಿದ್ದೆ.&lt;br /&gt;&lt;br /&gt;ಯಾರು ಹೆಚ್ಚು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಅಲ್ವ ನಮ್ಮ ಜಗಳ? ನಾನು ನಿನ್ನನ್ನು ಹೆಚ್ಚು ಪ್ರಿತಿಸುತ್ತೇನೆ. ಅದಕ್ಕೇ ನಿನ್ನೊಂದಿಗೆ ಈ ಕೋಪ, ತಾಪ, ದ್ವೇಷ ಎಲ್ಲ! ಬರೀ ನಿನ್ನೊಂದಿಗೆ ಮಾತ್ರವಲ್ಲ ನನಗೆ ಹತ್ತಿರವಾದ ಎಲ್ಲರೊಂದಿಗೂ ಇದು ಇದ್ದದ್ದೇ. ಅದೇ ಜೀವನ! ಹಾಗೆ ನೋಡಿದರೆ ಪ್ರೀತಿಯ ಇನ್ನೊಂದು ಮುಖವೇ ದ್ವೇಷ. ಪ್ರೀತಿ ಎಲ್ಲಿರುತ್ತದೋ ಅಲ್ಲಿ ದ್ವೇಷ ಇರಲೇಬೇಕು! ನಾವು ದ್ವೇಷಿಸುವದು ಪರಸ್ಪರ ಪರಿಚಯವಿರುವವರನ್ನೇ, ಅಪರಿಚಿತರನ್ನಲ್ಲ! ನಮ್ಮಿಂದ ಪ್ರೀತಿಸಲ್ಪಟ್ಟ ವ್ಯಕ್ತಿಯೇ ದ್ವೇಷಕ್ಕೆ ತುತ್ತಾಗುವದು. ನಮ್ಮ ದ್ವೇಷಕ್ಕೆ ಬಲಿಯಾಗುವವನು ಪರಿಚಿತ ವ್ಯಕ್ತಿಯೇ! ಪರಿಚಯವು ಗಾಢವಾದಾಗಲೇ ವ್ಯಕ್ತಿಯ ಬಗೆಗೆ ಸಲಿಗೆ ಹೆಚ್ಚಾಗುತ್ತದೆ. ಆ ಸಲಿಗೆ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಆ ಪ್ರೀತಿ ಹೆಚ್ಚಾದಂತೆ ಅವನ ಮೇಲೆ ಅಧಿಕಾರ, ಹಕ್ಕು ಚಲಾಯಿಸಲು ನೋಡುತ್ತೇವೆ. ಆಗಲೇ ಈ ಜಗಳ ಶುರುವಾಗಿ ದ್ವೇಷಕ್ಕೆ ತಿರುಗೋದು. ಆ ದ್ವೇಷ ಜ್ವಾಲಾಗ್ನಿಯಾಗಿ ಉರಿಯೋದು. ಕಾಲ ಸರಿದಂತೆಲ್ಲಾ ಆ ಜ್ವಾಲಾಗ್ನಿ ಉರಿದು ಬೂದಿಯಾಗುತ್ತದೆ. ಕ್ರಮೆಣ ಪ್ರೀತಿಯ  ಫಿನಿಕ್ಸ್ ಹಕ್ಕಿಯೊಂದು ಆ ಬೂದಿಯಿಂದಲೇ ಹುಟ್ಟಿಬರುತ್ತದೆ! ನಾವು ಮತ್ತೆ ಇನ್ನಿಲ್ಲದಂತೆ ಪ್ರೀತಿಸಲು ನೋಡುತ್ತೇವೆ.&lt;br /&gt;    &lt;br /&gt;ಬದುಕೆಂದರೆ ಇದೇ ಅಲ್ಲವೆ?&lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;ಚಿತ್ರಕೃಪೆ: ಅವಧಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-9215475643809861211?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/9215475643809861211/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/01/blog-post.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/9215475643809861211'/><link rel='self' type='application/atom+xml' href='http://www.blogger.com/feeds/2802103225554897449/posts/default/9215475643809861211'/><link rel='alternate' type='text/html' href='http://bisilahani.blogspot.com/2011/01/blog-post.html' title='ನಾವು ಪ್ರೀತಿಸದೆ ಯಾರನ್ನೂ ದ್ವೇಷಿಸಲಾರೆವು!'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_FiNlrLfTRP0/TTIWKu6oOhI/AAAAAAAAAYI/q4vHqnT8cmk/s72-c/colors-of-prayer-heart.jpg' height='72' width='72'/><thr:total>2</thr:total></entry><entry><id>tag:blogger.com,1999:blog-2802103225554897449.post-9079169235032456418</id><published>2011-01-07T16:57:00.000+01:00</published><updated>2011-01-07T17:03:16.409+01:00</updated><title type='text'>ಕನಸು ನನಸುಗಳ ನಡುವಿನ ನೆನಪು ಭಾಗ-2</title><content type='html'>ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಕರೆದುಕೊಂಡು ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ನನಗೆ ಮೊದಲಿನಿಂದಲೂ ಕಥೆ ಕಾದಂಬರಿಗಳ ಹುಚ್ಚು ಇದ್ದುದರಿಂದ “ನಾನು ಆರ್ಟ್ಸ್ ತಗೋತಿನಿ. ನನಗೆ ಸಾಯಿನ್ಸ್ ಅಂದ್ರ ಅಷ್ಟಕ್ಕಷ್ಟ. ದಯವಿಟ್ಟು ಆರ್ಟ್ಸ್ ತಗೊಳ್ಳೋಕೆ ಬಿಡ್ರಿ” ಎಂದು ಗೋಗರೆದರೂ ನಮ್ಮ ಮನೆಯವರು “ಆರ್ಟ್ಸ್ ತಗೊಂಡು ಏನ್ಮಾಡ್ತಿ? ಮಣ್ಣು ತಿಂತಿಯಾ? ಸುಮ್ಕ ಸಾಯಿನ್ಸ್ ತಗೊಂಡು ಉದ್ದಾರ ಆಗು” ಎಂದು ಹೇಳಿದರು. ಅದರ ಹಿಂದೆ ಅವರ ಕಾಳಜಿಯಿತ್ತಾದರೂ ಆ ಕಾಳಜಿ ನನಗೆ ಹಿಂಸೆ ಎನಿಸಿದ್ದಂತೂ ಸತ್ಯ. &lt;br /&gt;&lt;br /&gt;ನನಗೋ ಅತ್ತ ಖಡಾಖಂಡಿತವಾಗಿ ಬೇಡ ಎಂದು ಹೇಳಲಾಗದೆ ಇತ್ತ ಒಪ್ಪಿಕೊಳ್ಳಲಾಗದ ಸಂದಿಗ್ಧತೆ ಹುಟ್ಟಿತು. ಒಟ್ಟಿನಲ್ಲಿ ನನಗೆ ಆ ಸಂದಿಗ್ಧತೆಯಿಂದ ಹೇಗಾದರು ಪಾರಾದರೆ ಸಾಕೆಂದು “ನನಗ ಫಿಜಿಕ್ಸ್, ಕೆಮಿಸ್ಟ್ರಿ ಅಂದ್ರ ಆಗಲ್ಲ. ನಾನು ಅರ್ಟ್ಸೇ ತಗೊಳ್ಳತೀನಿ” ಎಂದು ಬಚಾವಾಗಲು ನೋಡಿದೆ. ಆದರೆ ಅದಾಗಲೇ ಸಾಯಿನ್ಸ್ ತಗೊಂಡು ವೆಟರ್ನರಿ ಡಾಕ್ಟರ್ ಆಗಿದ್ದ ನನ್ನ ದೊಡ್ಡಪ್ಪನ ಮಗ “ನಿನಗೆ ಮ್ಯಾಥ್ಸ್ ನಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ. ಮ್ಯಾಥ್ಸ್ ಬಂದ್ರ ಫಿಜಿಕ್ಸ್, ಕೆಮಿಸ್ಟ್ರಿ ಬಂದಂಗ” ಎಂದು ಅದ್ಯಾವ ತರ್ಕದ ಮೇಲೆ ಈ ಐಡಿಯಾ ಕೊಟ್ಟನೋ ಅಂತೂ ನಾನೂ ಕನ್ವಿನ್ಸ್ ಆಗಿ ಅವರಿಚ್ಛೆಯಂತೆ ನಡೆದುಕೊಂಡಿದ್ದಾಯಿತು. ಮೇಲಾಗಿ ನನಗೆ ಗಣಿತ ಅಚ್ಚುಮೆಚ್ಚಿನ ವಿಷಯವಾಗಿತ್ತು ಹಾಗೂ ನಾನು ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ ಲೆಕ್ಕಗಳನ್ನು ಅಚ್ಚುಕಟ್ಟಾಗಿ ಬಿಡಿಸುತ್ತಿದ್ದೆ. ಈಗಲೂ ಅಷ್ಟೆ ನನಗೆ ಗಣಿತವೆಂದರೆ ಪಂಚಪ್ರಾಣ! ಹೇಗೂ ಗಣಿತವಿರುತ್ತದಲ್ಲ? ಅದರ ಜೊತೆ ಇನ್ನುಳಿದಿದ್ದನ್ನು ಕಷ್ಟಪಟ್ಟು ಓದಿ ಪಾಸ್ ಮಾಡಿದರಾಯಿತು ಎಂದುಕೊಂಡು ಒಂದುತರದ ಹುಂಬತನದ ಮೇಲೆ ಸಾಯಿನ್ಸ್ ತಗೊಂಡಾಯ್ತು. &lt;br /&gt;&lt;br /&gt;ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ನಾನು ಅಟೆಂಡ್ ಮಾಡುತ್ತಿದ್ದುದು ಬರಿ ಮೂರೇ ಮೂರು ಕ್ಲಾಸು; ಕನ್ನಡ,ಇಂಗ್ಲೀಷ್ ಮತ್ತು ಗಣಿತ. ಉಳಿದವುಗಳನ್ನು ಬಲವಂತವಾಗಿ ಕಷ್ಟಪಟ್ಟು ಕೇಳಿಸಿಕೊಂಡರೂ ತಲೆಗೆ ಹೋಗದು. ಇಷ್ಟವೇ ಇಲ್ಲದ ಮೇಲೆ ಹೇಗೆ ತಾನೆ ತಲೆಗೆ ಹೋದೀತು? ನನ್ನ ಕಾಲೇಜಿನ ಅವಧಿಯನ್ನು ಬಹಳಷ್ಟು ಸಾರಿ ಕಾಲೇಜು ಲೈಬ್ರರಿಯಲ್ಲೋ ಇಲ್ಲ ವಿದ್ಯಾವರ್ಧಕ ಸಂಘದ ಲೈಬ್ರರಿಯಲ್ಲೋ ಕಳೆಯುತ್ತಿದ್ದೆ. ಪರಿಣಾಮ, ದ್ವಿತಿಯ ಪಿ.ಯು.ಸಿ.ಯಲ್ಲಿ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳಲ್ಲಿ ಗೋತಾ ಹೊಡೆದೆ. ಇದರಿಂದ ನನ್ನ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡವರಿಗೆ ಬಲವಾದ ಪೆಟ್ಟುಬಿತ್ತು. ನಾನು ಫೇಲಾಗಿದ್ದು ಕೇಳಿ ನಮ್ಮ ಮನೆಯವರೆಲ್ಲರೂ ತುಚ್ಛವಾಗಿ ಕಂಡರು. ನನಗೆ ಆಶ್ರಯ ಕೊಟ್ಟಿದ್ದ ಚಿಕ್ಕಪ್ಪ “ನೀನು ಚನ್ನಾಗಿ ಓದುತ್ತೀಯೆಂದು ಕರೆದುಕೊಂಡುಬಂದೆ. ಇನ್ನು ನಿಂದು ನೀ ನೋಡ್ಕೋ” ಎಂದು ಹೇಳಿ ಕೈ ತೊಳೆದುಕೊಂಡರು. &lt;br /&gt;ಸರಿ, ಮುಂದೆ ಏನು ಮಾಡುವದು? ಎಲ್ಲಿಗೆ ಹೋಗುವದು? ಇನ್ಮುಂದೆ ನನ್ನ ಜವಾಬ್ದಾರಿ ತೆಗೆದುಕೊಳ್ಳೋರು ಯಾರು? ನನ್ನೂರಿಗೆ ಹೋಗುವದೆ? ಮೊದಲಿನಿಂದಲೂ ನನ್ನೂರಿನಲ್ಲಿ ಇದ್ದು ಅಭ್ಯಾಸವಿಲ್ಲದ್ದರಿಂದ ಅಲ್ಲಿಗೆ ಹೋಗಿ ಮಾಡುವದಾದರು ಏನನ್ನು? ಯಾರ ಹತ್ತಿರ ಇರಬೇಕು? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಕಾಡತೊಡಗಿದವು. ಬಣ್ಣಬಣ್ಣದ ಕನಸು ಕಾಣಬೇಕಾದ ಹದಿಹರೆಯದಲ್ಲಿ ಇನ್ನು ಮುಂದೆ ಹೇಗೆ ಬದುಕಬೇಕು ಎನ್ನುವದರ ಕುರಿತು ಸುದೀರ್ಘವಾಗಿ ಆಲೋಚಿಸುತ್ತಿದ್ದೆ. ಅಲ್ಲಿಂದ ನನ್ನ ಬದುಕು ಹಳಿ ತಪ್ಪುತ್ತಲೇ ಹೋಯಿತು.&lt;br /&gt; &lt;br /&gt;ಮುಂದೆ ಒಂದೆರೆಡು ತಿಂಗಳು ದೊಡ್ಡಮ್ಮನ ಊರು ಕಲಕೋಟಿ, ಹಾಗೂ ಅಕ್ಕನ ಬಳಿ ಗದುಗಿನಲ್ಲಿ ಕಳೆದೆ. ಒಂದೊಂದು ಸಾರಿ ನಾನು ಹುಟ್ಟಿ ಏನು ಪ್ರಯೋಜನ ಎಂದು ನನ್ನಷ್ಟಕ್ಕೆ ನಾನೇ ಒಬ್ಬನೇ ಕುಳಿತು ಬಿಕ್ಕುತ್ತಿದ್ದೆ. ಆ ಬಿಕ್ಕುಗಳಿಗೆ ಅಲ್ಲಿ ಆ ಕ್ಷಣದ ಸಾಂತ್ವನ ಮಾತ್ರವಿತ್ತು. ಈ ಸಮಯದಲ್ಲಾದರೂ ಅಪ್ಪನಾದವನು ಮುಂದೆ ಏನು ಮಾಡುತ್ತಿ? ಹೇಗೆ? ಏನು? ಎತ್ತ? ಎಂದು ಕೇಳುವ ವ್ಯವಧಾನವನ್ನು ಒಂಚೂರು ತೋರಲಿಲ್ಲ. ಮುಂಚಿನಿಂದಲೂ ಆತನ ಬಗ್ಗೆ ಗೊತ್ತಿದ್ದರಿಂದ ನಾನು ಕೂಡ ಆತನನ್ನು ‘ಮುಂದೆ ಹೇಗೆ?’ ಎಂದು ಕೇಳುವ ಗೊಡವೆಗೆ ಹೋಗಲಿಲ್ಲ. ಆದರೆ ನನ್ನ ಸಿಟ್ಟು, ಆಕ್ರೋಶಗಳು ಒಳಗೊಳಗೆ ಭುಸಗುಟ್ಟುತ್ತಲೇ ಇದ್ದವು.&lt;br /&gt;ಹೀಗಿರುವಾಗ ನನ್ನ ಸೋದರ ಮಾವ ಲಕ್ಷ್ಮೇಶ್ವರದ ದವಾಖಾನೆಯೊಂದರಲ್ಲಿ ಕೌಂಪೊಂಡರ್ ಕೆಲಸ ಹುಡುಕಿ ಅಲ್ಲಿಗೆ ನನ್ನ ಸೇರಿಸಿದರು. ಅದು ಅವರೂರು ಸುಲ್ತಾನಪೂರಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿತ್ತು. ನನ್ನ ಮಾವ ದಿನಾ ಬಸ್ಸಿಗೆ ಇಲ್ಲಿಂದಾನೆ ಓಡಾಡು ಎಂದರು. ಆ ಪ್ರಕಾರ ದಿನಾ ಬೆಳಿಗ್ಗೆ ಬುತ್ತಿಕಟ್ಟಿಕೊಂಡು ಎಂಟು ಗಂಟಗೆ ಹೋಗಿ ರಾತ್ರಿ ಎಂಟರ ಬಸ್ಸಿಗೆ ಇಲ್ಲವಾದರೆ ಒಮ್ಮೊಮ್ಮೆ ಹತ್ತರ ಬಸ್ಸಿಗೆ ವಾಪಾಸಾಗುತ್ತಿದ್ದೆ. ಅದು ನಾನು ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಡಿದ ಕೆಲಸವಾಗಿತ್ತು. ಆ ದವಾಖಾನೆ ಇಡಿ ಲಕ್ಷ್ಮೇಶ್ವರದಲ್ಲಿಯೇ ಪ್ರಸಿದ್ದಿ ಪಡೆದ ದವಾಖಾನೆಯಾಗಿತ್ತು. ಅಲ್ಲಿ ನನ್ನ ಜೊತೆ ಇನ್ನೊಬ್ಬ ಕೌಂಪೊಂಡರ ಈಗಾಗಲೇ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದ. ಅವನಿಂದ ಡ್ರೆಸ್ಸಿಂಗ್ ಮಾಡುವದು, ಆಪರೇಶನ್ ಥೇಟರ್ ರೆಡಿ ಮಾಡುವದು, ಡಾಕ್ಟರ್ ಗಳಿಗೆ ಸಹಾಯ ಮಾಡುವದು, VRL ಮೂಲಕ ದೂರದ ಊರಿಂದ ಬರುವ ಔಷಧಿಗಳನ್ನು ಆಸ್ಪತ್ರೆಯ ಔಷಧಿ ಅಂಗಡಿಗೆ ತಂದುಹಾಕುವದು ಇವೆ ಮೊದಲಾದ ಕೆಲಸಗಳನ್ನು ಕಲಿತುಕೊಂಡೆ. &lt;br /&gt;&lt;br /&gt;ನಾನು ಮಾಡುವ ಕೆಲಸವನ್ನು ಅತ್ಯಂತ ಖುಶಿಯಿಂದಲೇ ಮಾಡುತ್ತಿದ್ದೆ. ನನಗೆ ಕೌಂಪೊಂಡರ್ ಕೆಲಸ ಕೀಳಾಗಿ ಕಾಣಲಿಲ್ಲ. ಇದು ಬಿಟ್ಟರೆ ಬೇರೆ ಅವಕಾಶಗಳು ಇರಲಿಲ್ಲ. ಪಿ.ಯು.ಸಿ ಫೇಲಾದವನಿಗೆ ಇದಕ್ಕಿಂತ ಬೇರೆ ಯಾವ ಕೆಲಸ ತಾನೆ ಸಿಕ್ಕೀತು? ಮೇಲಾಗಿ ಈ ಕೆಲಸ ಇಲ್ಲದಿದ್ದರೆ ಬೇರೆ ಎಲ್ಲ ರೀತಿಯಿಂದಲೂ ನಾನು ಇನ್ನೊಬ್ಬರ ಮೇಲೆ ಅವಲಂಬನೆಯಾಗಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಏನಾದರಾಗಲಿ ಸ್ವತಂತ್ರವಾಗಿ ಬದುಕಬೇಕು ಎಂದುಕೊಂಡು ಕೆಲಸವನ್ನು ಚನ್ನಾಗಿ ಕಲಿಯತೊಡಗಿದೆ.  ಅವತ್ತು ಶುರುವಾದ ನನ್ನ ಸ್ವಾಲಂಬನೆಯ ಪ್ರಜ್ಞೆ ಮುಂದೆ ನನ್ನಲ್ಲಿ ಬಲಗೊಳ್ಳುತ್ತಲೇ ಹೋಯಿತು. &lt;br /&gt;&lt;br /&gt;ಮೊಟ್ಟಮೊದಲಬಾರಿಗೆ ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಜಗತ್ತಿನೆದುರು ನಿಂತಿದ್ದೆ. ಅಲ್ಲಿ ಕ್ರಮೇಣ ಜಗತ್ತಿನ ಇನ್ನೊಂದು ಮುಖದ ಪರಿಚಯವಾಗತೊಡಗಿತು. ಅಲ್ಲಿಯವರೆಗೂ ಕಥೆ, ಕಾದಂಬರಿಗಳಂತೆ ಜೀವನವಿರುತ್ತದೆ ಎಂದು ಕಲ್ಪಿಸಿಕೊಂಡಿದ್ದವನಿಗೆ ವಾಸ್ತವದ ಕಹಿಸತ್ಯಗಳು ಬೇರೊಂದು ಸತ್ಯವನ್ನು ತೆರೆದಿಟ್ಟಿದ್ದವು. ಮೊಟ್ಟಮೊದಲಬಾರಿಗೆ ಕಲ್ಪನೆಗೂ ವಾಸ್ತವಕ್ಕೂ ಇರುವ ಅಂತರ ತಿಳಿದಿತ್ತು. ನನ್ನಿಂದ ನಾನು ಆಚೆ ನಿಂತು ಜಗತ್ತು ನೋಡಿದ್ದೆ. ಹುಚ್ಚಿಗೆ ಬಿದ್ದು ಕಥೆ, ಕಾದಂಬರಿಗಳನ್ನು ಓದಿ ಖುಶಿಪಡುತ್ತಿದ್ದವನಿಗೆ ವಾಸ್ತವದ ಬದುಕು ಭ್ರಮೆನಿರಸನಗೊಳಿಸಿತ್ತು. “ಕಥೆ, ಕಾದಂಬರಿಯಂತೆ ಜೀವನ ಇರೋದಿಲ್ಲಾ. ಅವನ್ನೋದಿ ಹಾಳಾಗಬೇಡ” ಎಂದು ನಮ್ಮ ಮನೆಯಲ್ಲಿ ದೊಡ್ಡವರು ಆಗಾಗ್ಗೆ ಹೇಳುತ್ತಿದ್ದುದು ಸ್ವಂತ ಅನುಭವಕ್ಕೆ ಬಂದಿತ್ತು. ದವಾಖಾನೆಯಲ್ಲಿ ಕಣ್ಣೆದುರಿಗೆ ನಡೆಯುವ ಮೋಸ, ವಂಚನೆ, ಸುಲಿಗೆಗಳನ್ನು ನೋಡಿ ಅಸಹಾಯಕನಾಗಿದ್ದೆ. ಮನಸ್ಸು ಆದರ್ಶ ಮತ್ತು ವಾಸ್ತವಗಳ ನಡುವೆ ತೂಗುತ್ತಿತ್ತು. ಇಂಥ ಕಡೆ ನಾನು ಕೆಲಸ ಮಾಡಬೇಕೆ? ಎಂಬ ಸಂದಿಗ್ಧತೆಯೂ ಆಗಾಗ ಎದುರಾಗುತ್ತಿತ್ತು. ಆದರೆ ಬೇರೆ ದಾರಿಯೇ ಇರಲಿಲ್ಲ! ಮೆಲ್ಲನೆ ಆದರ್ಶಗಳಿಗಿಂತ ಬದುಕು ದೊಡ್ಡದು ಎನಿಸತೊಡಗಿತು. ವಿಚಿತ್ರವೆಂದರೆ ಸಾಹಿತ್ಯ ಮತ್ತು ವಾಸ್ತವಬದುಕಿನ ನಡುವಿನ ಅಂತರ ತಿಳಿದ ಮೇಲೂ ನಾನು ಸಾಹಿತ್ಯ ಓದುವದನ್ನು ಕೈ ಬಿಡಲಿಲ್ಲ. ಅದು ಕೂಡ ಅಷ್ಟೆ; ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ನಾನು ಸೋತಾಗ, ಹತಾಶಗೊಳಗಾದಾಗ, ಅವಮಾನಕ್ಕೀಡಾದಾಗ, ನೋವನ್ನುಂಡಾಗ..... ಹೀಗೆ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಜೊತೆಗಿದ್ದುಕೊಂಡೇ ನನಗೊಂದಿಷ್ಟು ಸಮಾಧಾನ ಹೇಳಿದೆ. &lt;br /&gt;&lt;br /&gt;ಈ ಎಲ್ಲದರ ಮಧ್ಯ ಒಂದಿಷ್ಟು ಕನಸುಗಳು ಚಿಗುರತೊಡಗಿದ್ದವು. ಅವು ಕೌಂಪೊಂಡರ್ ಆಗುವ ಕನಸುಗಳು. ಅವನ್ನು ನನ್ನ ಕೆಲಸ ಹುಟ್ಟುಹಾಕಿದ್ದೋ ಇಲ್ಲ ಬೇರೆಯವರು ನನ್ನ ಕೌಂಪೊಂಡರ್ ಕೆಲಸ ನೋಡಿ ಅವನ್ನು ಮನದಲ್ಲಿ ಬಿತ್ತಿ ಬೆಳೆದರೋ ಗೊತ್ತಿಲ್ಲ. ಅಂತೂ ಕೌಂಪೊಂಡರ್ ಆಗುವ ಕನಸು ಕಾಣತೊಡಗಿದೆ. ಆಗ ನಮ್ಮ ಮನೆಯವರು “ಕೌಂಪೊಂಡರ್ ಆಗಿ ಒಳ್ಳೆ ಕೆಲಸ ಮಾಡಿದೆ. ಹಾಗೆ ಮುಂದುವರಿ. ನಿನಗೆ ಒಳ್ಳೆ ಭವಿಷ್ಯವಿದೆ. ಕೌಂಪೊಂಡರ್ ಆಗಿ ಕೆಲಸ ಕಲಿತ ಮೇಲೆ ನಾಲ್ಕಾರು ಹಳ್ಳಿ ಸುತ್ತಿ ಪೇಶೆಂಟ್ಸ್ ನೋಡಿ ಬಂದ್ರ ಒಳ್ಳೆ ದುಡ್ದು ಮಾಡಬಹುದು.” ಎಂದೆಲ್ಲಾ ಪ್ರೋತ್ಸಾಹಿಸುವಾಗ ನಾನು ಕೌಂಪೊಂಡರ್ ಆಗಿ ಕಾಸು ಎಣಿಸೋ ಕನಸು ಕಂಡಿದ್ದೇನೆ. ಆದರೆ ಆ ಕನಸು ಒಂದು ತಿಂಗಳು ಮುಗಿಯುವಷ್ಟೊತ್ತಿಗೆ ಮುರುಟಿಬಿತ್ತು. ಏಕೆಂದರೆ ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ನನ್ನ ಸಂಬಳ ಇಷ್ಟಿಷ್ಟೇ ಅಂತ ನಿಗದಿಯಾಗಿರಲಿಲ್ಲ. ಕರುಣೆ ಆಧಾರದ ಮೇಲೆ ಕೆಲಸ ಕೊಡುವವರನ್ನು ಇಷ್ಟಿಷ್ಟೇ ಕೊಡಿ ಅಂತ ಕರಾರುವಕ್ಕಾಗಿ ಹೇಗೆ ಕೇಳೋದು? ತಿಂಗಳ ಕೊನೆಯಲ್ಲಿ ಆ ಡಾಕ್ಟರು ಕೊಟ್ಟಿದ್ದು ಬರೀ 200 ರೂಪಾಯಿ. ಆ ಸಂಬಳ ನಾನು ದಿನಾಲೂ ಹೋಗಿ ಬರುವ ಬಸ್ ಚಾರ್ಜಿಗೂ ಸಾಕಾಗುತ್ತಿರಲಿಲ್ಲವಾದ್ದರಿಂದ ಆ ಕೆಲಸಕ್ಕೆ ಎಳ್ಳು ನೀರು ಬಿಡಬೇಕಾಯಿತು. ಅಲ್ಲಿಂದ ನನ್ನ ಬದುಕು ಮತ್ತಷ್ಟು ಮೂರಾಬಟ್ಟೆಯಾಗುತ್ತಾ ಹೋಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-9079169235032456418?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/9079169235032456418/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2011/01/2.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/9079169235032456418'/><link rel='self' type='application/atom+xml' href='http://www.blogger.com/feeds/2802103225554897449/posts/default/9079169235032456418'/><link rel='alternate' type='text/html' href='http://bisilahani.blogspot.com/2011/01/2.html' title='ಕನಸು ನನಸುಗಳ ನಡುವಿನ ನೆನಪು ಭಾಗ-2'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>4</thr:total></entry><entry><id>tag:blogger.com,1999:blog-2802103225554897449.post-787187697805368575</id><published>2010-12-31T11:43:00.006+01:00</published><updated>2011-01-03T22:06:49.724+01:00</updated><title type='text'>ಕನಸು ನನಸುಗಳ ನಡುವಿನ ನೆನಪು (ಭಾಗ-1)</title><content type='html'>&lt;a href="http://4.bp.blogspot.com/_FiNlrLfTRP0/TR21wo-mDuI/AAAAAAAAAXY/e-MZA8UR3dc/s1600/1234262572.jpeg"&gt;&lt;img style="float:left; margin:0 10px 10px 0;cursor:pointer; cursor:hand;width: 250px; height: 313px;" src="http://4.bp.blogspot.com/_FiNlrLfTRP0/TR21wo-mDuI/AAAAAAAAAXY/e-MZA8UR3dc/s400/1234262572.jpeg" border="0" alt=""id="BLOGGER_PHOTO_ID_5556797362483367650" /&gt;&lt;/a&gt;&lt;br /&gt;ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಒಂದು ಚಳಿಗಾಲದ ಬೆಳ್ಳಂಬೆಳಿಗ್ಗೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿದಾಗ ಬಗಲಲ್ಲೊಂದು ಮಾಸಿದ ಸೂಟ್ಕೇಸ್, ಕೈಯಲ್ಲೊಂದು ಬಿ.ಎ. ಡಿಗ್ರಿ ಸರ್ಟಿಫಿಕೇಟ್, ಕಿಸೆಯಲ್ಲಿ ಅಕ್ಕನಿಂದ ಸಾಲವಾಗಿ ತಂದ ಒಂದು ಸಾವಿರ ರೂಪಾಯಿ, ತಲೆಯಲ್ಲಿ ಅಷ್ಟೂ ವರ್ಷ ಕಲಿತ ಅರೆಬರೆ ಜ್ಞಾನ, ಕಣ್ಣಲ್ಲಿ ಅಸ್ಪಷ್ಟ ಕನಸುಗಳು, ಮನಸ್ಸಲ್ಲಿ ದೃಢ ಸಂಕಲ್ಪ ಹಾಗೂ ಇರಲು ಜೀವದ ಗೆಳೆಯ ಮಂಜುವಿನ ರೂಮಿತ್ತು. ಚಳಿಗೆ ಮೈ, ಮನಸ್ಸುಗಳೆರಡೂ ಒಮ್ಮೆ ಸಣ್ಣಗೆ ನಡುಗಿದವು. ಮುಂದೆ ಹೇಗೋ ಏನೋ ಎಂಬ ಆತಂಕ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿಯುವ ಬಹಳಷ್ಟು ಜನರನ್ನು ಕಾಡುವಂತೆ ನನನ್ನೂ ಆ ಕ್ಷಣಕ್ಕೆ ಕಾಡಿತ್ತು. ಜೀವನದಲ್ಲಿ ಹಂಗು, ಅವಲಂಬನೆ, ಆಸರೆ, ಆರ್ಥಿಕಮುಗ್ಗಟ್ಟುಗಳಿಂದ ಬೇಸತ್ತು ಮೊಟ್ಟ ಮೊದಲಬಾರಿಗೆ ನನ್ನದೇ ನಿರ್ಧಾರದ ಮೇಲೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿದ್ದೆ. ನಾನು ಇಲ್ಲಿ ಯಾವುದಾದರೊಂದು ಕೆಲಸ ಹುಡುಕಿಕೊಂಡು ನನ್ನ ಓದನ್ನು ಮುಂದುವರಿಸುತ್ತಾ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕಿತ್ತು. ಬಂದದ್ದು ಬರಲಿ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎನ್ನುವ ದೃಢ ನಿರ್ಧಾರದೊಂದಿಗೆಯೇ ಬೆಂಗಳೂರಿಗೆ ಕಾಲಿಟ್ಟಿದ್ದೆ. ಆದರೂ ಸಣ್ಣದೊಂದು ಹೆದರಿಕೆ ಮನದ ಮೂಲೆಯಲ್ಲೆಲ್ಲೋ ಆವರಿಸಿತ್ತು. ಏಕೆಂದರೆ ಬೆಂಗಳೂರು ಕೆಲವರಿಗೆ ಬದುಕು ನೀಡಿ ಪೊರೆದಂತೆಯೇ ಕೆಲವರನ್ನು `ನೀನಿಲ್ಲಿ ಬದುಕಲು ಯೋಗ್ಯನಲ್ಲ ಹೋಗು’ ಎಂದು ಹೇಳಿ ಒದ್ದು ಹೊರಹಾಕಿದ್ದಿದೆ; ಅಂತೆಯೇ ನನ್ನನ್ನೂ ಒದ್ದು ಹೊರಗೆ ಹಾಕಿದರೆ? ಎಂಬ ಅಳಕು ನನ್ನಲ್ಲೂ ಇತ್ತು. ನನ್ನಲ್ಲಿ ಗುರಿಯಿತ್ತು ಆದರೆ ನಾನು ಆ ಗುರಿಯನ್ನು ಮುಟ್ಟೇಮುಟ್ಟುತ್ತೇನೆಂದು ಯಾರೂ ಗ್ಯಾರಂಟಿ ಕೊಟ್ಟಿರಲಿಲ್ಲ. ಏಕೆಂದರೆ ನಾ ನಡೆಯುವ ಹಾದಿ ಅದಾಗಲೇ ಯಾರೋ ರೂಪಿಸಿಟ್ಟ ಸಿದ್ಧಹಾದಿಯಾಗಿರಲಿಲ್ಲ. ಅದನ್ನು ಕಷ್ಟಪಟ್ಟು ನಾನೇ ನಿರ್ಮಿಸಿಕೊಳ್ಳಬೇಕಿತ್ತು. ಬದುಕಲ್ಲಿ ಮುನ್ನುಗ್ಗಬೇಕಿತ್ತು, ಒಂದಿಷ್ಟು ನಜ್ಜುಗಜ್ಜಾಗಿ ಜಜ್ಜಿ ಹೋದರೂ ಸರಿಯೇ! ಛಲಬಿಡದ ತ್ರಿವಿಕ್ರಮನಂತೆ ನಾನಂದುಕೊಂಡ ಗುರಿಯನ್ನು ಮುಟ್ಟಿ ಮೇಲೆ ಬರಬೇಕಿತ್ತು. ಆದರದು ನಾನಂದುಕೊಂಡಷ್ಟು ಸುಲಭವಿತ್ತೆ? ಬರೀ B.A. ಮಾಡಿದ ನನ್ನಂಥವನಿಗೆ ಬೆಂಗಳೂರಿನಂಥ ಊರಿನಲ್ಲಿ ಯಾರು ತಾನೆ ಕೆಲಸ ಕೊಟ್ಟಾರು? ನನಗೆ ಇಂತಿಂಥದೇ ಕೆಲಸ ಮಾಡಬೇಕೆಂಬ ಯಾವುದೇ ಇರಾದೆ ಇರಲಿಲ್ಲವಾದರೂ ಎರಡು ಹೊತ್ತಿನ ಹೊಟ್ಟೆ ಹೊರೆದು ಓದಲು ಒಂದಷ್ಟು ಸಮಯ ಸಿಗುವಷ್ಟು ಯಾವುದಾದರೊಂದು ನಿಯತ್ತಿನ ಕೆಲಸ ಇದ್ದರೆ ಸಾಕಿತ್ತು. ಎಲ್ಲದಕ್ಕೂ ನಾನು ತಯಾರಿಗಿಯೇ ಬಂದಿದ್ದೆ! ಬದುಕು ಎಲ್ಲವನ್ನೂ ಕಲಿಸುತ್ತದೆ; ಬದುಕುವದನ್ನು ಕೂಡ!  &lt;br /&gt;&lt;br /&gt;ಎತ್ತಣ ಮುಧೋಳ? ಎತ್ತಣ ಕಲಕೋಟಿ? ಎತ್ತಣ ಗದಗ? ಎತ್ತಣ ಧಾರವಾಡ? ಎತ್ತಣ ಮಂಡ್ಯ? ಎತ್ತಣ ಬೆಂಗಳೂರು? ಎತ್ತಣ ಲಿಬಿಯಾ? ನನ್ನ ಬದುಕು ಎಷ್ಟೊಂದು ಊರುಗಳಲ್ಲಿ ಹಾದುಹೋಯಿತು? ನಾನು ಎಷ್ಟೊಂದು ದೂರ ನಡೆದು ಬಂದು ಬಿಟ್ಟೆ? ಹಾಗೆ ನಡೆಯುತ್ತಲೇ ಎಷ್ಟೊಂದು ಬೆಳೆದುಬಿಟ್ಟೆ? ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸುತ್ತಲೇ ಎಲ್ಲಿಂದ ಎಲ್ಲಿಯವರೆಗೆ ಎಳೆದುತಂದು ಕೈ ಬಿಟ್ಟಿತು! ಈಗ ಅದನ್ನೆಲ್ಲ ನೆನೆಸಿಕೊಂಡರೆ ಎಂಥದೋ ಪುಳಕ, ಎಂಥದೋ ರೋಮಾಂಚನ, ಎಂಥದೋ ಹೆಮ್ಮೆ ಒಮ್ಮೆಲೆ ಉಂಟಾಗುತ್ತವೆ. ಕಣ್ಣಲ್ಲಿ ಆನಂದಭಾಷ್ಪಗಳು ತಾನೆ ತಾನಾಗಿ ಉಕ್ಕುತ್ತವೆ. ಜೊತೆಗೆ ಮನಸ್ಸಲ್ಲಿ ಸಣ್ಣದೊಂದು ಅಹಂಕಾರ ಸದ್ದಿಲ್ಲದೆ ಸರಿದುಹೋಗುತ್ತದೆ. ಆ ಹಾದಿಯಲ್ಲಿ ಏನೆಲ್ಲ ಇತ್ತು!? ಎಷ್ಟೆಲ್ಲ ಎಡರುತೊಡರುಗಳಿದ್ದವು, ಏಳುಬೀಳುಗಳಿದ್ದವು, ನೋವುಗಳಿದ್ದವು, ಅವಮಾನಗಳಿದ್ದವು, ಹೋರಾಟಗಳಿದ್ದವು. ಇವನ್ನೆಲ್ಲ ಹೇಗೆ ಎದುರಿಸಿಬಂದೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನಾನು ಹಾದುಬಂದ ನನ್ನ ಸಾಹಸಗಾಥೆ ನೆನಪಾಗುತ್ತದೆ. ಆ ಕಥೆಯ ಹಿಂದಿನ ನೆನಪುಗಳು ಒಂದೊಂದಾಗಿ ಕಣ್ಣಮುಂದೆ ಬಿಚ್ಚಿಕೊಳ್ಳತೊಡಗುತ್ತವೆ. ನಿಧಾನವಾಗಿ ನಾ ನಡೆದು ಬಂದ ಹಾದಿಯ ಹೆಜ್ಜೆಗುರುತುಗಳು ನನ್ನತ್ತ ಒಮ್ಮೆ ನೋಡಿ ಮುಗುಳುನಗೆ ಬೀರುತ್ತವೆ. ‘ಶಹಭಾಷ್ ಮಗನೆ!’ ಎಂದು ಬೆನ್ನುತಟ್ಟುತ್ತಾ ನನ್ನ ಮುಂದಿನ ಕೆಲಸಗಳಿಗೆ, ಸಾಹಸಗಳಿಗೆ ಒಂದಿಷ್ಟು ಸ್ಪೂರ್ತಿಯನ್ನು ತುಂಬುತ್ತವೆ, ಪ್ರೊತ್ಸಾಹವನ್ನು ಕೊಡುತ್ತವೆ. ಹಾಗೆಂದೇ ಅವುಗಳನ್ನು ಆಗಾಗ್ಗೆ ಮೆಲಕುಹಾಕುತ್ತೇನೆ. ಮೆಲಕುಹಾಕುತ್ತಲೇ ಅವುಗಳನ್ನು ಮತ್ತೆ ಮತ್ತೆ ಕಣ್ಣಮುಂದೆ ಆಡಲುಬಿಟ್ಟು ಮುದಗೊಳ್ಳುತ್ತೇನೆ. ಮುದಗೊಳ್ಳುತ್ತಲೇ “ಓ ಬದುಕೆ, ನೀನಿಷ್ಟೇನಾ?” ಎಂದು ಒಮ್ಮೆ ಬದುಕಿನತ್ತ ನೋಡಿ ಗಹಗಹಿಸಿ ನಗುತ್ತೇನೆ. ತಟ್ಟನೆ “ನಗು ಮಗನೆ ನಗು, ನನಗೆ ಗೊತ್ತು! ನಿನ್ನದು ಅಹಂಕಾರದ ನಗುವಲ್ಲ, ಅದು ಅಭಿಮಾನದ ನಗು!” ಎಂದು ಯಾರೋ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ. ತಿರುಗಿ ನೋಡುತ್ತೇನೆ. ನನ್ನನ್ನು ಹಿಂಡಿಹಿಪ್ಪೆ ಮಾಡಲು ನೋಡಿದ ಮತ್ತದೇ ನನ್ನ ಬದುಕು ನನ್ನ ಪಕ್ಕದಲ್ಲಿ ನಗುತ್ತಾ ನಿಂತಿರುತ್ತದೆ! ಹೆಮ್ಮೆಯಿಂದ ಬೀಗುತ್ತಾ ಅದಕ್ಕೊಂದು ಥ್ಯಾಂಕ್ಸ್ ಹೇಳುತ್ತಿದ್ದಂತೆಯೇ ನಾನು ನಡೆದ ಬಂದ ಹಾದಿ ಒಮ್ಮೆ ನನ್ನ ಕಣ್ಣೆದುರಿಗೆ ಸುಮ್ಮನೆ ಹಾದುಹೋಗುತ್ತದೆ.&lt;br /&gt;&lt;br /&gt;ಬೇಜವಾಬ್ದಾರಿ ಅಪ್ಪನ ಮಗನಾಗಿ ಹುಟ್ಟಿದ ನನ್ನ ಬದಕು ಮೊದಲಿನಿಂದಲೂ ಹರಿದು ಹಂಚಿಹೋದ ಬದುಕು. ನಾನು ಹುಟ್ಟಿದ್ದು ತಾಯಿಯ ತವರು ಮನೆಯಲ್ಲಾದರೂ ನನ್ನ ಮೊದಲ ಮೂರು ವರ್ಷದ ಬಾಲ್ಯ ಕಳೆದಿದ್ದು ನನ್ನೂರು ಮುಧೋಳದಲ್ಲಿ, ಅಪ್ಪ ಅಮ್ಮನ ಗರಡಿಯಲ್ಲಿ. ಅಪ್ಪ ಬೇಜವಾಬ್ದಾರಿಯಾಗಿದ್ದಕ್ಕೆ ಬೇಸತ್ತು ನನ್ನ ಸಂಬಂಧಿಕರು ಇಲ್ಲಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಾರದು ಎಂಬ ಕಾರಣಕ್ಕೆ ಮೂರೂ ಜನ ಮಕ್ಕಳನ್ನು (ನಾನು, ಅಣ್ಣ, ತಂಗಿ) ತಂತಮ್ಮ ಊರಿಗೆ ಕರೆದುಕೊಂಡು ಹೋದರು. ಆ ಪ್ರಕಾರ ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ (ತಂದೆಯ ಅಣ್ಣ- ಹೇಮಣ್ಣ ಕವಲೂರು) ತಮ್ಮೂರು ಅಳವಂಡಿಗೆ ಕರೆದುಕೊಂಡು ಹೋದರೆ, ನನ್ನನ್ನು ನನ್ನ ದೊಡ್ಡಮ್ಮ (ತಾಯಿಯ ಅಕ್ಕ-ಸರೋಜಿನಿ ಪಾಟೀಲ್) ತಮ್ಮೂರು ಕಲಕೋಟಿಗೆ ಕರೆದುಕೊಂಡು ಬಂದರು. ನನ್ನ ತಂಗಿಯನ್ನು ತಾಯಿಯ ತವರು ಮನೆ ಸುಲ್ತಾನಪೂರದವರು ಕರೆದುಕೊಂಡು ಹೋದರು. ಹೀಗಾಗಿ ನಾವು ಮೂರೂ ಜನ ಮಕ್ಕಳು ಬಾಲ್ಯದಿಂದಲೇ ತಂದೆ ತಾಯಿಯರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು. ಮೊದಲಿನಿಂದಲೂ ಅಷ್ಟಾಗಿ ತಂದೆ ತಾಯಿಯರ ಸಂಪರ್ಕವಿಲ್ಲದೆ ಬೆಳೆದಿದ್ದರಿಂದ ನಮ್ಮ ಮತ್ತು ಅವರ ನಡುವೆ ಅಂಥ ಹೇಳಿಕೊಳ್ಳುವಂಥ ಸಂಪರ್ಕ ಯಾವತ್ತಿಗೂ ಏರ್ಪಡಲಿಲ್ಲ. ಹೀಗಾಗಿ ಅವರು ಅಪರೂಪಕ್ಕೊಮ್ಮೆ ನಮ್ಮನ್ನು ನೋಡಲು ಬಂದಾಗ ನಾವು ಅವರನ್ನು ಅಪರಿಚಿತರಂತೆ ನೋಡುತ್ತಿದ್ದೆವು. ಅವರೊಂದಿಗೆ ಮಾತನಾಡಲೂ ಎಂಥದೋ ಮುಜುಗರವಾಗುತ್ತಿತ್ತು. ಹೀಗಿರುವಾಗ ನಮ್ಮನ್ನು ಒಪ್ಪಿ, ಅಪ್ಪಿ ಸಂತೈಸಿದ ಎಷ್ಟೋ ಬಂಧುಗಳು ನಮಗೆ ದಾರಿ ದೀಪವಾದರು ಹಾಗೂ ಅವರೇ ತಂದೆ ತಾಯಿಗಳಾದರು.&lt;br /&gt;&lt;br /&gt;ನಾನು ನನ್ನ ಮೂರನೇ ವರ್ಷದಿಂದಲೇ ಕಲಕೋಟಿಯಲ್ಲಿ ದೊಡ್ಡಮ್ಮ ದೊಡ್ಡಪ್ಪರ ತುಂಬು ಆರೈಕೆಯಲ್ಲಿ ಬೆಳೆಯತೊಡಗಿದೆ. ಅವರು ಒಂದು ಮಗುವಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಧಾರೆಯೆರೆದು ಬೆಳೆಸಿದರು. ದೊಡ್ಡಮ್ಮ ದೊಡ್ಡಪ್ಪನಿಗೆ ಗಂಡುಮಕ್ಕಳಿಲ್ಲದಿದ್ದ ಕಾರಣಕ್ಕೇನೋ ನನ್ನನ್ನು ಅತಿ ಮುದ್ದಿನಿಂದ, ಪ್ರೀತಿಯಿಂದ ಬೆಳೆಸಿದರು. ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ದಪ್ಪ (ಸೋಮನಗೌಡ ಪಾಟಿಲ್) ನಿಗೆ ನಾನು ಬಲು ಇಷ್ಟವಾಗುತ್ತಿದ್ದೆ. ಅವರು ಆಗಾಗ್ಗೆ ನನಗೆ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಹೀಗಾಗಿ ನನಗೆ ಓದುವ ಹುಚ್ಚು ಚಿಕ್ಕಂದಿನಿಂದಲೇ ಶುರುವಾಯಿತು. ಅವರು ನನ್ನನ್ನು ಎಷ್ಟು ಇಷ್ಟಪಡುತ್ತಿದ್ದರೆಂದರೆ ನಾನು ಎರಡನೇ ಕ್ಲಾಸಿನಲ್ಲಿರಬೇಕಾದರೆ ಒಮ್ಮೆ ದೊಡ್ಡಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಅದು ಅವರ ಅಣ್ಣನ ಮಗಳು ಅಮೇರಿಕಕ್ಕೆ ಹೋಗುವ ಸಂದರ್ಭ. ಆಗಲೇ ನಾನು ಬೆಂಗಳೂರಿನ ಏರ್ಪೋರ್ಟಿನಲ್ಲಿ ವಿಮಾನ ಹೇಗಿರುತ್ತದೆ ಎಂದು ಮೊಟ್ಟಮೊದಲಬಾರಿಗೆ ನೋಡಿ ಥ್ರಿಲ್ ಆಗಿದ್ದೆ.  ಅದನ್ನು ನನ್ನ ಸಹಪಾಠಿಗಳ ಹತ್ತಿರ ಆಗಾಗ್ಗೆ “ನಾನು ಬೆಂಗಳೂರಿಗೆ ಹೋಗಿ ವಿಮಾನ ನೋಡಿಬಂದಿದ್ದೇನೆ ಗೊತ್ತಾ?” ಎಂದು ಏನೋ ಮಹತ್ವದನ್ನು ಸಾಧಿಸಿದ ಹಾಗೆ ಹೇಳಿಕೊಂಡು ಓಡಾಡುತ್ತಿದ್ದೆ. ನಾನು ವಿಮಾನ ನೋಡಿ ಬಂದಿದ್ದೇನೆ ಎಂಬ ಕಾರಣಕ್ಕಾಗಿ ನನ್ನ ಇತರೆ ಸಹಪಾಠಿಗಳು ಆ ಹಳ್ಳಿಯ ಶಾಲೆಯಲ್ಲಿ ನನ್ನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ದೊಡ್ಡಪ್ಪ ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ಎಂದೆಲ್ಲಾ ಒಂದು ಸುತ್ತು ಹೊಡಿಸಿದ್ದರು. ಆಗಲೇ ನಾನು ಬೆಂಗಳೂರಿನ ಅಂದ ಚೆಂದಕ್ಕೆ ಮಾರು ಹೋಗಿ ದೊಡ್ಡವನಾದ ಮೇಲೆ ಇಲ್ಲೇ ಇರಬೇಕು ಎಂದು ಬಯಸಿದ್ದೆ. ಆದರೆ ಮುಂದೆ ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸಿ ಕೈಬಿಡುತ್ತಿದ್ದುದರಿಂದ ಬೆಂಗಳೂರಿನಲ್ಲಿ ಇರುವ ಆಸೆಯಿರಲಿ ಅದರತ್ತ ತಲೆ ಹಾಕಿ ಮಲಗುವದನ್ನು ಕೂಡ ಬಿಟ್ಟೆ. ಆದರೆ ಮುಂದೆ ನನ್ನ ಬದುಕಿನ ಆಕಸ್ಮಿಕ ಮತ್ತು ಅನಿವಾರ್ಯತೆಗಳೆರಡೂ ನನ್ನನ್ನು ಇಲ್ಲಿಯವರೆಗೂ ಎಳೆದುತರುತ್ತವೆ ಎಂದು ನಾನೆಣಿಸಿರಲಿಲ್ಲ.&lt;br /&gt;&lt;br /&gt;ಈ ಕಲಕೋಟಿಯಲ್ಲಿರುವಾಗಲೇ ನನಗೆ ಗೌರಜ್ಜಿಯ ಪರಿಚಯವಾದದ್ದು. ಈಕೆ ನಮ್ಮ ಬಂಧು ಬಳಗದವಳಲ್ಲದಿದ್ದರೂ ನಮ್ಮ ದೊಡ್ಡಪ್ಪನ ಹಿರಿಯರು ಆಕೆಯ ಗಂಡನಿಗೆ ಹಿಂದೆ ಯಾವುದೋ ಸಹಾಯ ಮಾಡಿದ್ದರಿಂದ ಅದರ ಋಣ ತೀರಿಸಲೆಂದು ಆ ಮನೆಯನ್ನು ಹದ್ದುಗಣ್ಣಿನಿಂದ ಕಾಯುವದರ ಮೂಲಕ ಸಹಾಯ ಮಾಡುತ್ತಿದ್ದಳು. ಆಕೆ ಹೆಚ್ಚು ಕಡಿಮೆ ಮನೆಯವಳಂತೆ ಆಗಿದ್ದಳು. ಈಕೆಗೆ ರಾಮಾಯಣ ಮಹಾಭಾರತದ ಕಥೆಗಳೆಲ್ಲವೂ ಗೊತ್ತಿದ್ದರಿಂದ ಅವನ್ನು ನಾನು ಪ್ರಾಥಮಿಕ ಶಾಲೆಯನ್ನು ಸೇರುವ ಮೊದಲೇ ಅವಳ ಬೊಚ್ಚ ಬಾಯಿಂದ ಕೇಳಿ ಬೆಕ್ಕಸ ಬೆರಗಾಗುತ್ತಿದ್ದೆ. ಅದಲ್ಲದೆ ದೀಪಾವಳಿ ಮತ್ತು ಗೌರಿ ಹುಣ್ಣಿಮೆಯಂದು ಅವಳು ಹಾಡುತ್ತಿದ್ದ ಸೋಬಾನೆ ಪದಗಳು ನನ್ನ ಸುಪ್ತ ಮನಸ್ಸಿನ ಮೇಲೆಲ್ಲೋ ಪರಿಣಾಮ ಬೀರಿದ್ದರಿಂದ ನಾನು ಮುಂದೆ ಬರಹಗಾರನಾಗಲು ಸಾಕಷ್ಟು ಸಹಾಯವಾದವೆಂದು ಕಾಣುತ್ತದೆ. &lt;br /&gt;&lt;br /&gt;ನಾನು ಕಲಕೋಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನಗೆ ಅದೇ ಊರಿನಲ್ಲಿರುವ ನಮ್ಮ ದೂರದ ಸಂಬಂಧಿಕ ಮಲ್ಲೇಶಪ್ಪ ಸಣ್ಣಕಳ್ಳಿ ಎಂಬವರಿಂದ ಇಂಗ್ಲೀಷ ಪಾಠಾಭ್ಯಾಸ ಶುರುವಾಯಿತು. ಅವರು ವೃತ್ತಿಯಲ್ಲಿ ‘ಗ್ರಾಮ ಸೇವಕ’ ರಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಇಂಗ್ಲೀಷ ಭಾಷೆಯ ಬಗ್ಗೆ ಅಪಾರ ಜ್ಞಾನವಿತ್ತು. ದಿನಾ ಬೆಳಿಗ್ಗೆ ಹಾಗೂ ಸಾಯಂಕಾಲ ಅವರಲ್ಲಿಗೆ ಹೋಗಿ ಇಂಗ್ಲೀಷ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ. ನನಗೆ ಅದೇನೋ ಗೊತ್ತಿಲ್ಲ ನಾನು ಇಂಗ್ಲೀಷ ಭಾಷೆಯನ್ನು ಬಹಳ ಬೇಗ ಬೇಗನೆ ಕಲಿಯತೊಡಗಿದೆ. ನಿಮಗೆ ಅಚ್ಚರಿಯಾಗಬಹುದು ನಾನು ಎರಡನೇ ಕ್ಲಾಸಿನಲ್ಲಿರುವಾಗಲೇ ಮೊದಲನೇ ಭಾಷಾಂತರ ಪಾಠಮಾಲೆಯಲ್ಲಿನ ಶಬ್ಧಗಳನ್ನು ಹಾಗೂ ವಾಕ್ಯ ರಚನೆಗಳನ್ನು ಚನ್ನಾಗಿ ಕಲಿತುಕೊಂಡಿದ್ದೆ. ನಮ್ಮ ಶಾಲೆಯಲ್ಲಿ ಮೂರು ಜನ ಶಿಕ್ಷಕರಿದ್ದದರಿಂದ ಆ ಮೂವರೇ ಏಳು ಕ್ಲಾಸುಗಳನ್ನು ಹಂಚಿಕೊಂಡಿದ್ದರು. ಏಳನೆ ತರಗತಿಗೆ ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಗಳಿಗೇನಾದರು ಇಂಗ್ಲೀಷ ಪಾಠಗಳನ್ನು ಓದಲು ಬಾರದಿದ್ದರೆ ನನ್ನನ್ನು ತಮ್ಮ ತರಗತಿಗೆ ಕರೆಸಿಕೊಂಡು ನನ್ನ ಕಡೆಯಿಂದ ಆ ಪಾಠ ಓದಿಸಿ ಆ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದರು. ನಾನೋ ಹೆಮ್ಮೆಯಿಂದ ಬೀಗುತ್ತಿದ್ದೆ. ನಾನು ಅಷ್ಟರಮಟ್ಟಿಗೆ ಇಂಗ್ಲೀಷನ್ನು ಸರಾಗವಾಗಿ ಓದುವದು ಬರೆಯುವದನ್ನು ಮಾಡುತ್ತಿದ್ದೆ. &lt;br /&gt;&lt;br /&gt;ನಾನು ನಾಲ್ಕನೇ ತರಗತಿಯಲ್ಲಿರುವಾಗಲೆ ನನ್ನ ದೊಡ್ಡಪ್ಪ ಹೃದಯಾಘಾತದಿಂದ ನಿಧನ ಹೊಂದಿ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಆಗ ಇದೇ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕ (ಜಯಶ್ರಿ ಗೌರಿಪೂರ್) ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ಜೊತೆಯಲ್ಲಿರಲಿ ಎಂದು ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋದಳು. ಮನೆಯ ಹತ್ತಿರದಲ್ಲಿಯೇ ಇರುವ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಕ್ಕ ಎಷ್ಟೊಂದು ಕಟ್ಟುನಿಟ್ಟಾಗಿದ್ದಳೆಂದರೆ ನಾನು ಶಾಲೆಯಲ್ಲಿ ಸದಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡದಂತೆ ನೋಡಿಕೊಂಡಳು. ನಾನು ಶಾಲೆಯಿಂದ ಬಂದ ತಕ್ಷಣ ಆ ದಿನ ಶಾಲೆಯಲ್ಲಿ ಯಾವ್ಯಾವ ಪಾಠ ನಡೆಯಿತು ಎಂಬ ವರದಿಯನ್ನು ಒಪ್ಪಿಸಬೇಕಾಗಿತ್ತು. ಬಹುಶಃ, ಅವಳು ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದಕ್ಕೇನೋ ನಾನು ಏಳನೇ ತರಗತಿಯಲ್ಲಿ ಇಡಿ ಶಾಲೆಗೆ ಮೊದಲನೆಯವನಾಗಿ ತೇರ್ಗಡೆ ಹೊಂದಿದೆ. ಅದಕ್ಕೆ 25 ರೂಗಳಷ್ಟು ಬಹುಮಾನವೂ ಬಂತು. ನಂತರ ನಾನು ಎಂಟನೆ ತರಗತಿಯಿಂದ ಮಾಡೆಲ್ ಹೈಸ್ಕೂಲಿಗೆ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲ್)  ಸೇರಿದೆ. ಅಲ್ಲಿಯೂ ಸಹ ಅಕ್ಕ ಹತ್ತನೆ ತರಗತಿಯವರೆಗೂ ವರ್ಷ ವರ್ಷವೂ ಇಡಿ ಕ್ಲಾಸಿಗೆ ಫಸ್ಟ್ ಬರುವಂತೆ ನೋಡಿಕೊಂಡಳು. &lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;ಚಿತ್ರಕೃಪೆ: ಕೆಂಡ ಸಂಪಿಗೆ&lt;br /&gt;(ತಮಗೆಲ್ಲರಿಗೂ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-787187697805368575?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/787187697805368575/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/12/1.html#comment-form' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/787187697805368575'/><link rel='self' type='application/atom+xml' href='http://www.blogger.com/feeds/2802103225554897449/posts/default/787187697805368575'/><link rel='alternate' type='text/html' href='http://bisilahani.blogspot.com/2010/12/1.html' title='ಕನಸು ನನಸುಗಳ ನಡುವಿನ ನೆನಪು (ಭಾಗ-1)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_FiNlrLfTRP0/TR21wo-mDuI/AAAAAAAAAXY/e-MZA8UR3dc/s72-c/1234262572.jpeg' height='72' width='72'/><thr:total>6</thr:total></entry><entry><id>tag:blogger.com,1999:blog-2802103225554897449.post-8708882761905212194</id><published>2010-12-24T20:18:00.004+01:00</published><updated>2010-12-30T12:42:35.326+01:00</updated><title type='text'>ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವದಿಲ್ಲ?</title><content type='html'>“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು. ಜೊತೆಗೆ ಕನ್ನಡಿಗರೊಂದಿಗಿನ ತಮ್ಮ ಒಡನಾಟ ಮತ್ತು ಆಸಕ್ತಿಯಿಂದಾಗಿ ಕನ್ನಡಸಾಹಿತ್ಯದ ಬಗ್ಗೆ ತುಸು ಹೆಚ್ಚೇ ತಿಳಿದುಕೊಂಡಿದ್ದರು. ಹಾಗೆ ತಿಳಿದುಕೊಳ್ಳಲು ಒಂದು ಕಾರಣವೂ ಇತ್ತು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಮೊದಲ ವರ್ಷಕ್ಕೆ ಪಠ್ಯವಾಗಿರುವ “Indian Writing in English” ಎಂಬ ಪತ್ರಿಕೆಗೆ ಕನ್ನಡದ ಖ್ಯಾತ ಲೇಖಕ ಯು.ಆರ್.ಅನ್ಂತಮೂರ್ತಿಯವರ ಇಂಗ್ಲೀಷಿಗೆ ಅನುವಾದಗೊಂಡಿರುವ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ವನ್ನು ಬೋಧಿಸುತ್ತಿದ್ದರು. ಆ ನೆಪದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನೇಕ ಲೇಖಕರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು ಹಾಗೂ ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆಂಬುದು ಆಕೆಗೆ ಚನ್ನಾಗಿ ಗೊತ್ತಿತ್ತು. ಅದೇ ಪ್ರಶ್ನೆಯನ್ನು ‘ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರಲ್ಲವೆ?’ ಎಂದು ಕೇಳಿದರು. ನಾನು ಹೌದೆಂದು ತಲೆಯಾಡಿಸಿ ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಬರೆದವರು ಹಾಗೂ ಬರೆಯುತ್ತಿರುವವರ ದೊಡ್ಡ ಪಟ್ಟಿಯನ್ನೇ ಕೊಟ್ಟೆ. ಅದು ಬಿ. ಎಮ್. ಶ್ರೀ. ಯವರಿಂದ ಶುರುವಾಗಿ ವಿ. ಕೃ. ಗೋಕಾಕ್, ಪೋಲಂಕಿ ರಾಮಮೂರ್ತಿ, ಶಂಕರ್ ಮೊಕಾಶಿ ಪುಣೇಕರ್, ಕೀರ್ತಿನಾಥ ಕುರ್ತಕೋಟಿ, ಅನಂತಮೂರ್ತಿ, ಅಡಿಗ, ಚಂಪಾ, ಶಾಂತಿನಾಥ ದೇಸಾಯಿ, ಸುಮತೀಂದ್ರ ನಾಡಿಗ್, ಲಂಕೇಶ್, ಜಿ.ಎಸ್. ಆಮೂರು, ವೀಣಾ ಶಾಂತೇಶ್ವರ, ಸರೋಜಿನಿ ಶಿಂತ್ರಿ, ರಾಮಚಂದ್ರ ಶರ್ಮ, ಜಿ.ಕೆ. ಗೋವಿದರಾವ್, ಕೆ. ವಿ. ತಿರುಮಲೇಶ್, ಓ.ಎಲ್. ನಾಗಭೂಷಣ ಸ್ವಾಮಿ, ವೇಣುಗೋಪಾಲ ಸೊರಬ, ಚಿ. ನ. ಮಂಗಳ, ಜಿ. ರಾಮಕೃಷ್ಣ, ಡಾ. ಪ್ರಭುಶಂಕರ್, ಸಿ. ನಾಗಣ್ಣ, ಕೆ. ಎಸ್. ಭಗವಾನ್, ರಾಜೇಂದ್ರ ಚೆನ್ನಿ, ಮಾಲತಿ ಪಟ್ಟಣಶೆಟ್ಟಿ, ನಟರಾಜ್ ಹುಳಿಯಾರ್, ವನಮಾಲ ವಿಶ್ವನಾಥ್, ಕೆ.ಟಿ. ಗಟ್ಟಿ, ಕೃಷ್ಣಮೂರ್ತಿ ಚಂದರ್ ವರೆಗೂ ಮುಂದುವರೆದು, ಇತ್ತೀಚಿಗೆ ಬರೆಯುವ ಕನಕರಾಜು. ಬಿ. ಆರನಕಟ್ಟೆ, ಕಲಿಗಣನಾಥ ಗುಡದೂರು, ಎಚ್. ಆರ್. ರಮೇಶ್, ಸುಕನ್ಯಾ ಕನಾರಳ್ಳಿ ಯವರಲ್ಲಿ ಕೊನೆಗೊಳ್ಳುತ್ತದೆ; ಇನ್ನೂ ಸಾಕಷ್ಟು ಜನರಿದ್ದಾರೆ, ಆದರೆ ಇವರೆಲ್ಲ ಹೆಸರು ಮಾಡಿರುವದರಿಂದ ಅವರನ್ನಷ್ಟೇ ಹೆಸರಿಸಲಾಗಿದೆ ಎಂದು ಹೇಳಿದೆ. ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಡಿದ್ದು ಹಾಗೂ ಹೊಸ ಆಯಾಮಗಳನ್ನು ಪಡೆದುಕೊಂಡಿದ್ದು ಈ ಎಲ್ಲ ಲೇಖಕರಿಂದ ಎಂದು ಹೇಳಿದರೆ ತಪ್ಪಾಗುವದಿಲ್ಲ ಎಂದೂ ಸೇರಿಸಿದೆ. ಆಕೆ ಮತ್ತೆ ಮುಂದುವರೆದು ಅವರೇಕೆ ‘ಇಂಗ್ಲೀಷಿನಲ್ಲಿ ಬರೆಯಲಿಲ್ಲ ಅಥವಾ ಬರೆಯುತ್ತಿಲ್ಲ?’ ಎಂದು ಕೇಳಿದರು. ನನಗೆ ಅವರ ಪ್ರಶ್ನೆ ತುಸು ವಿಚಿತ್ರವಾಗಿ ಕಂಡಿತು. ನಾನು ಅದು ಅವರವರ ಇಷ್ಟ ಎಂದೆ. “ಅಲ್ಲ, ಅವರು ನೇರವಾಗಿ ಇಂಗ್ಲೀಷಿನಲ್ಲಿಯೇ ಬರೆಯಬಹುದಿತ್ತಲ್ಲ?” ಎಂದು ಮತ್ತೆ ಕೇಳಿದರು. “ಏಕೆ? ಕನ್ನಡದಲ್ಲಿ ಬರೆಯುವದು ಅವಮಾನವೇನು?” ಎಂದು ನಾನು ಮರು ಪ್ರಶ್ನೆ ಹಾಕಿದೆ. “ಹಾಗಲ್ಲ, ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ನೇರವಾಗಿ ಇಂಗ್ಲೀಷಿನಲ್ಲಿ ಬರೆದಿದ್ದರೆ ಚೆನ್ನಿತ್ತು. ಆಗವರು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆಯುತ್ತಿದ್ದರು.” ಎಂದರು. ನಾನು “ಅದು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಇಂಗ್ಲೀಷ್ ಅವರ ಮಾತೃಭಾಷೆಯಲ್ಲ. ಮಾತೃಭಾಷೆಯಲ್ಲಿ ಬರೆದಿದ್ದು ಮಾತ್ರ ಯಶಸ್ವಿಯಾಗಬಲ್ಲದು” ಎಂದೆ. ಆಕೆ ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟರು. “ಹಾಗೆ ನೋಡಿದರೆ ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಲೇಖಕರ್ಯಾರದು ಇಂಗ್ಲೀಷ್ ಯಾವತ್ತೂ ಮಾತೃಭಾಷೆಯಾಗಿರಲಿಲ್ಲ. ಆದರೂ ಅವರು ಇಂಗ್ಲೀಷಿನಲ್ಲಿಯೇ ಬರೆದು ಯಶಸ್ವಿಯಾಗಲಿಲ್ಲವೇನು? ಖ್ಯಾತಿಯನ್ನು ಪಡೆಯಲಿಲ್ಲವೇನು?” ಎಂದರು. ನಾನು ಒಂದು ಕ್ಷಣ ಸುಮ್ಮನಾದೆ. ಮತ್ತೆ ಅವರೇ ಮುಂದುವರಿದು “ಅವರು ಕೂಡ ನಿಮ್ಮಂತೆಯೇ ಮಾತೃಭಾಷೆಯ ಬಗ್ಗೆ ಯೋಚಿಸಿದ್ದರೆ ಇವತ್ತು ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಲೇಖಕರು ಒಬ್ಬರೂ ಇರುತ್ತಿರಲಿಲ್ಲ. ಆದರೂ ಅವರು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರು? ಬರೆದು ಯಶಸ್ವಿಯಾದರು? ಅಂದರೆ ನೀವು ಇಂಗ್ಲೀಷಿನಲ್ಲಿ ಬರೆಯಲಾರದ್ದಕ್ಕೆ ಮಾತೃಭಾಷೆಯ ಗೋಡೆಯನ್ನು ಅಡ್ಡ ತರುತ್ತಿರುವಿರಿ. ಅದರಲ್ಲಿ ಬರೆದರೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ, ಯಶಸ್ವಿಯಾಗಿರುತ್ತದೆ ಎಂದೆಲ್ಲ ಕುಂಟುನೆಪ ಹೇಳುತ್ತಾ ಜಾರಿಕೊಳ್ಳುತ್ತಿರುವಿರಿ. ಹಾಗೆ ಕುಂಟುನೆಪವೊಡ್ಡುವ ಬದಲು ನಾನು ಇಂಗ್ಲೀಷಿನಲ್ಲಿ ಬರೆಯಲು ಅಸಮರ್ಥನಿದ್ದೇನೆ ಎಂದು ನೇರವಾಗಿ ಒಪ್ಪಿಕೊಳ್ಳಿ. ಇಲ್ಲವೇ ಇಂಗ್ಲೀಷಿನಲ್ಲಿ ಬರೆದು ತೋರಿಸಿ. ಪ್ರಯತ್ನಿಸದೆಯೇ ನೀವು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರೆ ಯಶಸ್ವಿಯಾಗುವದಿಲ್ಲವೆಂದು ಹೇಳುತ್ತೀರಿ?” ಎಂದು ಕೇಳಿದರು. ನನಗೆ ಒಂದು ಕ್ಷಣ ಪೆಚ್ಚೆನಿಸಿದರೂ “ಹೌದಲ್ಲವೆ? ಅವರು ಹೇಳುವದರಲ್ಲಿ ಸತ್ಯವಿದೆಯಲ್ಲವೆ?” ಎನಿಸಿತು. ಭಾರತೀಯ ಇಂಗ್ಲೀಷ್ ಬರಹಗಾರರಾದ ಆರ್. ಕೆ. ನಾರಾಯಣ್, ಮುಲ್ಕ್ರಾಜಾನಂದ, ರಾಜಾರಾವ್, ಸರೋಜಿನಿ ನಾಯ್ದು, ಟ್ಯಾಗೋರ್, ವಿಕ್ರಂ ಶೇಠ್, ತೋರು ದತ್, ನೀರಧ್ ಚೌಧರಿ,  ಕಮಲಾ ದಾಸ್, ಎ.ಕೆ ರಾಮಾನುಜನ್, ಸಲ್ಮಾನ್ ರಶ್ದಿ, ಅನೀತಾ ದೇಸಾಯಿ, ಕಿರಣ್ ದೇಸಾಯಿ, ಅರುಂಧತಿ ರಾಯ್, ಶಶಿ ದೇಶಪಾಂಡೆ ಇನ್ನೂ ಮುಂತಾದವರದ್ಯಾರದು ಮಾತೃಭಾಷೆ ಇಂಗ್ಲೀಷ್ ಆಗಿರಲಿಲ್ಲ. ಅದು ಬೇರೆಯದೇ ಆಗಿತ್ತು. ಆದರೂ ಅವರೆಲ್ಲ ಇಂಗ್ಲೀಷಿನಲ್ಲಿ ಬರೆದು ಯಶಸ್ವಿಯಾದರಲ್ಲವೆ? ಹಾಗಾದಾರೆ ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುತ್ತಿಲ್ಲ? ಎನಿಸಿತು. ಇದುವರೆಗೂ ಅವರಲ್ಲಿ ಕೆಲವರು ಇಂಗ್ಲೀಷಿನಲ್ಲಿ ಒಂದಿಷ್ಟು ಅನುವಾದಗಳನ್ನು ಮಾಡಿದ್ದು ಬಿಟ್ಟರೆ, ಅಥವಾ ತಮ್ಮ ಪಿಎಚ್.ಡಿ ಪ್ರಬಂಧವನ್ನು ಇಂಗ್ಲೀಷಿನಲ್ಲಿ ಬರೆದಿದ್ದು ಬಿಟ್ಟರೆ ಅಥವಾ ಯಾವುದಾದರು ಸೆಮೆನಾರಿಗೆ ಇಂಗ್ಲೀಷಿನಲ್ಲಿ ಒಂದಿಷ್ಟು ಪೇಪರ್ ಪ್ರಸೆಂಟ್ ಮಾಡಿದ್ದು ಬಿಟ್ಟರೆ ಯಾರೊಬ್ಬರು ಹೆಚ್ಚಿಗೆ ಏನನ್ನೂ ಬರೆದಂತೆ ಕಾಣುವದಿಲ್ಲ. ಏಕೆ ಬರೆಯಲಿಲ್ಲ? ವನ್ಸ ಅಗೇನ್ ಅದೇ ಮಾತೃಭಾಷೆಯ ಪ್ರಶ್ನೆ ಏಳುತ್ತದೆ.&lt;br /&gt;&lt;br /&gt;ನನಗೆ ಮೊದಲಿಗೆ ಅವರ ವಾದದಲ್ಲಿ ತಿರುಳಿದೆ ಎನಿಸಿದರೂ ಯೋಚಿಸುತ್ತಾ ಹೋದಂತೆ ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನು ನಿಧಾನಕ್ಕೆ ಅವರಿಗೆ ಹೇಳುತ್ತಾ ಹೋದೆ; ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷ್ ಬರಹಗಾರರಾರೇ ಆಗಿರಬೇಕೆಂದು ನೀವೇಕೆ ಬಯಸುತ್ತೀರಿ? ಅವರು ಇಂಗ್ಲೀಷಿನಲ್ಲಿಯೇ ಬರೆಯಬೇಕೆಂಬ ಅಲಿಖಿತ ನಿಯಮವೇನಾದರು ಇದೆಯೇನು? ನೀವು ಹೇಳುವದು ಹೇಗಿದೆಯೆಂದರೆ ಎಲ್ಲ ಕಂಪ್ಯೂಟರ್ ಇಂಜಿನೀಯರುಗಳು ಬಿಲ್ ಗೇಟ್ಸೇ ಆಗಬೇಕು, ಎಲ್ಲ ಸಿವಿಲ್ ಇಂಜಿನೀಯರುಗಳು ವಿಶ್ವೇಶರಯ್ಯನೇ ಆಗಬೇಕು, ಎಲ್ಲ ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಿಗಳೇ ಆಗಬೇಕು, ಎಲ್ಲ ಉದ್ಯಮಿಗಳು ಅಂಬಾನಿ ತರಾನೆ ಆಗಬೇಕು ಎನ್ನುವಂತಿದೆ. ಹಾಗೆ ಎಲ್ಲರೂ ಆಗಲು ಸಾಧ್ಯವೆ? ಒಂದು ವೇಳೆ ಪ್ರಯತ್ನಿಸಿದರೂ ಅವರಂತೆ ಎಲ್ಲರೂ ಆಗಬಲ್ಲರೆ? ಸಾಧ್ಯವಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಒಬ್ಬರೋ ಇಬ್ಬರೋ ಮಾತ್ರ ಉದಾಹರಣೆಯಾಗಬಲ್ಲರು. ಎಲ್ಲರೂ ಅಲ್ಲ. ಒಬ್ಬ ವ್ಯಕ್ತಿಯ ಯಶಸ್ಸು ಅವನ ಪರಿಶ್ರಮದ ಮೇಲೆ ನಿರ್ಧಾರವಾಗುತ್ತಾದರೂ ಪರಿಶ್ರಮಪಟ್ಟವರೆಲ್ಲ ಯಶಸ್ವಿಯಾಗುತ್ತಾರೆಂದು ಹೇಳಲು ಬರುವದಿಲ್ಲ. &lt;br /&gt;&lt;br /&gt;ಇನ್ನು ಇಂಗ್ಲೀಷ್ ಅಧ್ಯಾಪಕರಾಗಿರುವ ಕನ್ನಡದ ಲೇಖಕರು ಕನ್ನಡವನ್ನೇ ತಮ್ಮ ಅಭಿವ್ಯಕ್ತಿಗೆ ಏಕೆ ಆಯ್ಕೆಮಾಡಿಕೊಂಡರೆಂದು ಕೇಳಿದರೆ ಇಂಗ್ಲೀಷಿಗಿಂತ ಅದರಲ್ಲಿ ಬರೆಯುವದು ಅವರಿಗೆ ಹೆಚ್ಚು ನಿರಾಳವೆನಿಸಬಹುದು. ಅಥವಾ ನೀವು ಹೇಳುವಂತೆ ನೇರವಾಗಿ ಇಂಗ್ಲೀಷಿನಲ್ಲಿ ಬರೆಯಲು ಅವರ ಹ್ಯಾಡಿಕ್ಯಾಪ್ಟ್ ಆಟಿಟ್ಯುಡ್ ಕಾರಣವಾಗಿರಬಹುದು. ಅಂದರೆ ಇಂಗ್ಲೀಷಿನಲ್ಲಿ ತಿಣುಕಾಡಿ ಬರೆಯುವದಕ್ಕಿಂತ ಕನ್ನಡದಲ್ಲೇ ಸಲೀಸಾಗಿ ಬರೆಯಬಹುದಲ್ಲ ಎಂಬ ಧೋರಣೆಯಿರಬಹುದು. ಹಾಗಂತ ಅವರೆಲ್ಲ ಇಂಗ್ಲೀಷಿನಲ್ಲಿ ಅಸಮರ್ಥರಾಗಿದ್ದಾರೆ ಎಂದರ್ಥವಲ್ಲ. ಒಂದು ಭಾಷೆಯನ್ನು ಕಲಿಸುವದಕ್ಕೂ ಹಾಗೂ ಬರಹದ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುವದಕ್ಕೂ ತುಂಬಾ ವ್ಯತ್ಯಾಸವಿದೆ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ಇಂಗ್ಲೀಷ ಅಧ್ಯಾಪಕನಾಗಿದ್ದುಕೊಂಡು ಕನ್ನಡದಲ್ಲಿ ಬರೆಯುವವನು ನಾನೂ ಒಬ್ಬ. ನಾನು ಕನ್ನಡದಲ್ಲಿ ಏಕೆ ಬರೆಯುತ್ತೇನೆಂದರೆ ಅದನ್ನು ನನ್ನ ಮನೆಯ ಭಾಷೆಯಾಗಿ ಬಾಲ್ಯದಿಂದಲೇ ಕಲಿತುಕೊಂಡು ಬಂದಿದ್ದೇನೆ. ಅದು ನನ್ನ ಮೈ ಮನಗಳಲ್ಲಿ ಹಾಸುಹೊಕ್ಕಾಗಿದೆ. ಕನ್ನಡದಲ್ಲಿ ಬರೆದಾಗ ಮಾತ್ರ ನಾನು ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದೇನೆ ಎಂದನಿಸುತ್ತದೆ. ನನ್ನ ಬೇರುಗಳು ಕನ್ನಡದಲ್ಲಿರುವದರಿಂದ ನಾನು ಅದರಲ್ಲಿ ಬರೆಯುವಾಗ ನನ್ನೆಲ್ಲ ಭಾವನೆಗಳನ್ನು ಸಂಪೂರ್ಣವಾಗಿ ಹೊರಹಾಕಬಲ್ಲೆ. ನನ್ನ ಸಂವೇದನೆಗಳೆಲ್ಲ ಅದರಲ್ಲಿಯೇ ಮುಳುಗಿ ತೇಲಾಡಿದ್ದರಿಂದ ನನ್ನ ಬರಹಗಳೆಲ್ಲ ನನ್ನ ಅಂತರಂಗವನ್ನು ಮೀಟಿಕೊಂಡು ಬರಬಲ್ಲವು. ಬಾಲ್ಯದಲ್ಲಿ ಯಾವ ಭಾಷೆ ನಮ್ಮ ಸಂವೇದನೆಯಲ್ಲಿ ಬೆರೆತಿರುತ್ತದೋ ಅದೇ ಭಾಷೆ ಕೊನೆ ತನಕ ಬರುತ್ತದೆ ಮತ್ತು ಅದೊಂದೇ ಭಾಷೆ ನಮ್ಮ ಸಂವೇದನೆಯ, ಅಭಿವ್ಯಕ್ತಿಯ, ಸೃಜನಶೀಲತೆಯ ತಾಯಿ ಬೇರಾಗಿರುತ್ತದೆ. ಈ ಹಿಂದೆ ನನ್ನ ಬ್ಲಾಗ್ ಮಿತ್ರರೊಬ್ಬರು “ಕರ್ನಾಟಕದಲ್ಲಿ ಇಂಗ್ಲೀಷಿನಲ್ಲಿ ಬರೆಯುವವರು ತುಂಬಾ ಕಮ್ಮಿ. ನೀವೇಕೆ ಕನ್ನಡದಲ್ಲಿ ಬರೆಯುವ ಬದಲು ಇಂಗ್ಲೀಷಿನಲ್ಲಿ ಬರೆದು ಆ ಕೊರತೆಯನ್ನು ನೀಗಿಸಬಾರದು?” ಎಂದು ಸಲಹೆಕೊಟ್ಟಿದ್ದರು. ಸರಿ, ಒಮ್ಮೆ ನೋಡಿಯೇಬಿಡೋಣವೆಂದು ನೇರವಾಗಿ ಇಂಗ್ಲೀಷನಲ್ಲಿ ಬರೆಯತೊಡಗಿದರೆ ಅದರಲ್ಲಿ ಜೀವ ಮಾತ್ರವಿದ್ದು ಭಾವದ ಕೊರತೆ ಎದ್ದು ಕಾಣುತ್ತಿತ್ತು. ಹಾಗೂ ಅದರಲ್ಲಿ ಬರೀ ನನ್ನ ಅಕ್ಷರಗಳಿದ್ದವೇ ವಿನಃ ನಾನಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ಬರೆಯಲು ಗಟ್ಟಿಯಾದ ನಿರ್ಧಾರ ಮಾಡಿದೆ. ಇನ್ನು ಭಾರತೀಯ ಇಂಗ್ಲೀಷ್ ಲೇಖಕರ ಬಗ್ಗೆ ಹೇಳುವದಾದರೆ ಬಹುಶಃ ಇಂಗ್ಲೀಷ ವಾತಾವರಣ ಅಥವಾ ಇಂಗ್ಲೀಷಿನಲ್ಲಿ ಬರೆಯಲು ಪೂರಕವಾಗುವ ಅಂಶಗಳು ಅವರಿಗೆ ಬಾಲ್ಯದಿಂದಲೇ ಸಿಕ್ಕಿರಬಹುದು. ಅಥವಾ ಇಂಗ್ಲೀಷಿನಲ್ಲಿ ಬರೆದರೆ ಮಾತ್ರ ಅದನ್ನು ಎಲ್ಲರಿಗೂ ಮುಟ್ಟಿಸಿ ಖ್ಯಾತಿಯನ್ನು ಪಡೆಯಬಹುದೆಂಬ ಒಳ ಆಸೆಯಿಂದ ಅವರು ಅನಿವಾರ್ಯವಾಗಿ ಇಂಗ್ಲೀಷಿನಲ್ಲಿ ಬರೆದಿರಬಹುದು. &lt;br /&gt;&lt;br /&gt;ಸಾಮಾನ್ಯವಾಗಿ ನಾವೆಲ್ಲರೂ ಇಂಗ್ಲೀಷ್ ಭಾಷೆಯನ್ನು ಬರೆಯುವಾಗ/ಮಾತನಾಡುವಾಗ ಮೊದಲು ನಾವು ನಮ್ಮ ಮಾತೃಭಾಷೆಯಲ್ಲಿ ಯೋಚಿಸಿ ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಗೊಳಿಸುತ್ತೇವೆ. ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಒಮ್ಮೆ “ನಾನು ಏನಾದರೂ ಬರೆಯುವದಿದ್ದರೆ ಮೊದಲು ಕನ್ನಡದಲ್ಲಿ ಬರೆಯುತ್ತೇನೆ. ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಿಸುತ್ತೇನೆ. ಆಗಲೇ ನನ್ನೆಲ್ಲ ಭಾವನೆಗಳು ಸ್ಪಷ್ಟವಾಗಿ ಮೂಡಲು ಸಾಧ್ಯ.” ಎಂದು ಹೇಳಿದ್ದರು.  ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡದ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯಲಿಲ್ಲ/ಬರೆಯುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದೆ. &lt;br /&gt;   &lt;br /&gt;ನನ್ನ ಉತ್ತರದಿಂದ ಅವರು ಕನ್ವಿನ್ಸ್ ಆದಂತೆ ಕಾಣಲಿಲ್ಲ. ನಾನೂ ಕೂಡ ಅವರನ್ನು ಹೆಚ್ಚು ಬಲವಂತದಿಂದ ಕನ್ವಿನ್ಸ್ ಮಾಡಲು ಹೋಗಲಿಲ್ಲ.&lt;br /&gt;&lt;br /&gt;-ಉದಯ್ ಇಟಗಿ&lt;br /&gt;(ಇಂದಿಗೆ ನನ್ನ ಬ್ಲಾಗಿಗೆ ಎರಡು ವರ್ಷ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರಿಯಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು)&lt;br /&gt;&lt;br /&gt;ಈ ಲೇಖನವನ್ನು ‘ಅವಧಿ’ ಬಳಗವು ಪ್ರಕಟಿಸಿದೆ. ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದರ ಲಿಂಕ್ ಇಲ್ಲಿದೆ. http://avadhi.wordpress.com/2010/12/30/%E0%B2%87%E0%B2%82%E0%B2%97%E0%B3%8D%E0%B2%B2%E0%B3%80%E0%B2%B7%E0%B3%8D-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AA%E0%B2%95%E0%B2%B0%E0%B3%87%E0%B2%95%E0%B3%86-%E0%B2%87%E0%B2%82%E0%B2%97/#comments&lt;br /&gt;&lt;br /&gt;ಅಂದ ಹಾಗೆ http://ashok567.blogspot.com/  ಬ್ಲಾಗಿನ ಅಶೋಕ ಕುಮಾರ್ ರವರು ಈ ವಾರ “ಉದಯವಾಣಿ” ಯಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ್ದಾರೆ. ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ.&lt;br /&gt;ಅದರ ಲಿಂಕ್ ಗಳು ಇಲ್ಲಿವೆ;&lt;br /&gt;1)  http://www.udayavani.com/news/38929L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html&lt;br /&gt;2) http://74.127.61.106/epaper/PDF/2010-12-27/Man27121006M.pdf&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-8708882761905212194?l=bisilahani.blogspot.com' alt='' /&gt;&lt;/div&gt;</content><link rel='enclosure' type='application/pdf' href='http://74.127.61.106/epaper/PDF/2010-12-27/Man27121006M.pdf' length='0'/><link rel='enclosure' type='' href='http://ashok567.blogspot.com/' length='0'/><link rel='enclosure' type='' href='http://avadhi.wordpress.com/2010/12/30/%E0%B2%87%E0%B2%82%E0%B2%97%E0%B3%8D%E0%B2%B2%E0%B3%80%E0%B2%B7%E0%B3%8D-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AA%E0%B2%95%E0%B2%B0%E0%B3%87%E0%B2%95%E0%B3%86-%E0%B2%87%E0%B2%82%E0%B2%97/#comments' length='0'/><link rel='enclosure' type='text/html' href='http://www.udayavani.com/news/38929L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html' length='0'/><link rel='replies' type='application/atom+xml' href='http://bisilahani.blogspot.com/feeds/8708882761905212194/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/12/blog-post_24.html#comment-form' title='8 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/8708882761905212194'/><link rel='self' type='application/atom+xml' href='http://www.blogger.com/feeds/2802103225554897449/posts/default/8708882761905212194'/><link rel='alternate' type='text/html' href='http://bisilahani.blogspot.com/2010/12/blog-post_24.html' title='ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವದಿಲ್ಲ?'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>8</thr:total></entry><entry><id>tag:blogger.com,1999:blog-2802103225554897449.post-6712854906304304091</id><published>2010-12-11T14:30:00.001+01:00</published><updated>2010-12-11T14:32:59.872+01:00</updated><title type='text'>ಎಲ್ಲ ಬಿಟ್ಟು ಅವಳು ಅವನ ಹಿಂದೆ ಹೋದದ್ದಾದರೂ ಏಕೆ?</title><content type='html'>ನಮ್ಮಲ್ಲಿ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಜನ ಮಾತಾಡಿಕೊಳ್ಳುವದಿಲ್ಲ. ತಲೆಕೆಡಿಸಿಕೊಳ್ಳುವದಿಲ್ಲ. ಅಸಲಿಗೆ ಅದೊಂದು ಸುದ್ದಿಯಾಗುವದಿಲ್ಲ. ಹೋದರೆ ಹೋದ. ಇಲ್ಲೇ ಎಲ್ಲೋ ಹೋಗಿರಬೇಕು. ಇವತ್ತಲ್ಲ ನಾಳೆ ಮತ್ತೆ ಬರುತ್ತಾನೆ ಎಂದು ತುಂಬಾ ಉದಾಸೀನವಾಗಿ ಮಾತಾಡಿ ಜನ ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹೆಚ್ಚೆಂದರೆ ಅವನೆಲ್ಲಿದ್ದಾನೆಂದು ಹುಡುಕಿ, ಅವನಿಗೊಂದಿಷ್ಟು ಬೈದು, ಇನ್ಮೇಲೆ ಹಂಗೆಲ್ಲಾ ಬಿಟ್ಟುಹೋಗಬೇಡ ಅಂತಾ ನಾಲ್ಕು ಬುದ್ದಿ ಮಾತು ಹೇಳಿ ವಾಪಾಸು ಕರೆತರುತ್ತಾರೆ. ಹಾಗೆ ವಾಪಾಸು ಬಂದವನಿಗೆ ಅದ್ದೂರಿ ಸ್ವಾಗತವೂ ಇರುತ್ತೆ. ಆತ ಕ್ಷಮೆಗೆ ಅರ್ಹನು ಹೌದೋ ಅಲ್ವೋ ಆದರೂ ಅವನನ್ನು ಕ್ಷಮಿಸಿ ಸಮಾಜದಲ್ಲಿ ಆತನಿಗೊಂದು ಮೊದಲಿನ ಸ್ಥಾನವನ್ನು ಕಲ್ಪಿಸಿಕೊಡುತ್ತಾರೆ. ಅಂದರೆ ಜನ ಆತನ ವಿಷಯದಲ್ಲಿ ಭಾರಿ ರಿಯಾಯಿತಿ ತೋರಿಸುತ್ತಾರೆ. ಆದರೆ ಹೆಂಡತಿ ಗಂಡನನ್ನು ಬಿಟ್ಟು ಹೋದರೆ? ಶಿವ ಶಿವ ಎಲ್ಲಾದರೂ ಉಂಟೆ? ಜನ ಊಹಿಸಲು ಕೂಡ ಹೆದರಿಕೊಳ್ಳುತ್ತಾರೆ. ಅಕಸ್ಮಾತಾಗಿ ಹೆಂಡತಿಯೊಬ್ಬಳು ಗಂಡನನ್ನು ಬಿಟ್ಟುಹೋದರೆ ಇನ್ನಿಲ್ಲದಂತೆ ಮಾತಾಡಿಕೊಳ್ಳುತ್ತಾರೆ. ಅದನ್ನೊಂದು ಭಾರಿ ಸುದ್ದಿಯನ್ನಾಗಿ ಮಾಡುತ್ತಾರೆ. ಅವಳನ್ನು ಓಡಿಹೋದವಳು, ಹಾದರಗಿತ್ತಿ ಅಂತೆಲ್ಲಾ ಕರೆಯುತ್ತಾರೆ. ತಿಂಗಳುಗಟ್ಟಲೆ ಅವಳ ಬಗ್ಗೆಯೇ ಮಾತಾಡಿ ಮಾತಾಡಿ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ. ಅವಳನ್ನು ಹುಡುಕಿ ವಾಪಾಸು ಕರೆತರುವದಿರಲಿ, ಅವಳ ಬಗ್ಗೆ ಯೋಚಿಸುವದು ಕೂಡ ಅಸಹ್ಯವೆಂದುಕೊಳ್ಳುತ್ತಾರೆ. ಇನ್ನು ಅವಳಾಗಿಯೇ ವಾಪಾಸು ಬಂದರೂ ಮನೆ ಬಾಗಿಲು ತೆರೆಯುವ ಮಾತಂತೂ ದೂರವೇ ಉಳಿಯಿತು. ಏಕೆಂದರೆ ನಮ್ಮಲ್ಲಿ ಅವಳ ವಿಷಯದಲ್ಲಿ ಯಾವುದೇ ಕ್ಷಮೆಯಾಗಲಿ ರಿಯಾಯಿತಿಗಳಾಗಲಿ ಇಲ್ಲ! ಅದು ಸರಿಯೋ? ತಪ್ಪೋ? ಮೊದಲಿನಿಂದಲೂ ನಮ್ಮ ಸಮಾಜ ಅವಳನ್ನು ಬೆಳೆಸಿಕೊಂಡಬಂದ ರೀತಿ ಹಾಗಿದೆ ಮತ್ತು ಈಗಲೂ ಅದೇ ನಿರ್ಬಂಧಗಳಲ್ಲಿ ಅವಳನ್ನು ನೋಡಲು ಬಯಸುತ್ತದೆ. ಹೀಗಿದ್ದೂ ಅವಳು ಗಂಡ, ಮನೆ, ಮಕ್ಕಳನ್ನೆಲ್ಲಾ ಬಿಟ್ಟು ಅವನ ಹಿಂದೆ ಹೋದದ್ದಾದರೂ ಏಕೆ? ಅಸಲಿಗೆ ಗಂಡನನ್ನು ಬಿಟ್ಟುಹೋಗಲು ಕಾರಣಾಂತ ಒಂದು ಇರಬೇಕಲ್ಲವೆ? ಹಾಗಾದರೆ ಆ ಕಾರಣವಾದರೂ ಯಾವುದು? ಎಲ್ಲ ಬಿಟ್ಟು ಅವನ ಹಿಂದೆ ಹೋಗುವದೆಂದರೆ? ಅದೂ ಏನೂ ಇಲ್ಲದ ಲೋಲು ಕಿನ್ನುರಿ ನುಡಿಸುವವನ ಹಿಂದೆ! ಈ ನಿಟ್ಟಿನಲ್ಲಿ ಇದನ್ನೊಂದು ತ್ರಿಕೋನ ಪ್ರೇಮ ಕಥೆಯೆನ್ನಬೇಕೆ? ಹಾದರದ ಕಥೆಯೆನ್ನಬೇಕೆ? ಅಥವಾ ವಿಚಿತ್ರ ಮನೋಲೋಕದ ಹೆಣ್ಣಿನ ಕಥೆಯೆನ್ನಬೇಕೆ? ನಿರ್ಧರಿಸಲು ಸಾಧ್ಯವಾಗುವದಿಲ್ಲ.&lt;br /&gt;&lt;br /&gt;ಅದೆಲ್ಲ ಇರಲಿ. ಒಬ್ಬ ಹೆಂಗಸು ತನ್ನ ಗಂಡನನ್ನು ಏಕೆ ಬಿಟ್ಟುಹೋಗುತ್ತಾಳೆ? ಅಷ್ಟಕ್ಕೂ ಬಿಡಲು ಅಂತಹ ಕಾರಣಗಳೇನಿರುತ್ತವೆ? ಅವನೊಬ್ಬ ಬಡವನಾಗಿರಬೇಕು, ಕುಡುಕನಾಗಿರಬೇಕು, ಬೇಜವಾಬ್ದಾರಿಯವನಾಗಿರಬೇಕು, ಬೇರೆ ಹೆಂಗಸಿನ ಸಹವಾಸ ಮಾಡಿರಬೇಕು, ದುಷ್ಟನಾಗಿರಬೇಕು. ಅಥವಾ ಕೊನೆಗೆ ಇದ್ಯಾವುದು ಅಲ್ಲದಿದ್ದರೆ ಅವನೊಬ್ಬ ಷಂಡನಾಗಿರಬೇಕು. ಇದಕ್ಕಿಂತ ಬೇರೆ ಕಾರಣವಾದರು ಏನಿರುತ್ತೆ? ಅಷ್ಟಕ್ಕೂ ಬಿಟ್ಟು ಹೋಗಲೇಬೇಕೆಂದರೆ ಅದು ಸಾಧ್ಯವಾಗೋದು ವಿದ್ಯಾವಂತ ಅಥವಾ ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರ! ಆದರೆ ವಿದ್ಯಾವಂತೆಯೂ ಅಲ್ಲದ ಉದ್ಯೋಗಸ್ಥೆಯೂ ಅಲ್ಲದ ಹಳ್ಳಿಯ ಹೆಣ್ಣುಮಗಳೊಬ್ಬಳು ಗಂಡನನ್ನು ಬಿಡುವ ಯೋಚನೆಯನ್ನಾದರೂ ಮಾಡುತ್ತಾಳೆಯೆ? ಅವಳಿಗೆ ಏನೇ ಕಷ್ಟವಿದ್ದರೂ ಅವನ್ನೆಲ್ಲಾ ನುಂಗಿಕೊಳ್ಳುತ್ತಾಳೆ. ಇಲ್ಲವೇ ಆ ಸಮಸ್ಯೆಗಳಿಗೆ ಬೇರೆ ಪರಿಹಾರ ಕಂಡುಕೊಳ್ಳುತ್ತಾಳೆ. ಹೀಗೆ ಏಕಾಏಕಿ ಬಿಟ್ಟುಹೋಗುತ್ತಾಳೆಯೆ? ಸಾಧ್ಯಾನೇ ಇಲ್ಲ! ಹಾಗಿದ್ದರೆ ಈ ಹೆಂಗಸು ಎಲ್ಲ ಇದ್ದ ತನ್ನ ಗಂಡನನ್ನು ಬಿಟ್ಟುಹೋಗುವ ನಿರ್ಧಾರ ಮಾಡುವದೇಕೆ? ಅದೂ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ! ಹಾಗೆ ಹೋಗುವಾಗ ಅವಳಿಗೆ ಒಂಚೂರು ಅಪರಾಧಿ ಪ್ರಜ್ಞೆ ಕಾಡಲಿಲ್ಲವೆ? ಸಮಾಜದ ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ಅವಳ ಮನಸ್ಸು ಒಂಚೂರು ಅಳುಕಲಿಲ್ಲವೆ? ಅಂಥ ಧೈರ್ಯ ಆಕೆಗೆ ಬಂದದ್ದಾದರೂ ಎಲ್ಲಿಂದ? ಆ ಸಂದರ್ಭದಲ್ಲಿ ಅವಳ ಮನಸ್ಥಿತಿಯಾದರೂ ಹೇಗಿತ್ತು? ಬೇರೆಲ್ಲ ಹೋಗಲಿ ಕಡೆಪಕ್ಷ ಅವಳ ಮಗನ ಮೇಲಿನ ಪ್ರೀತಿಯಾದರೂ ಅವಳನ್ನು ಹೋಗದಂತೆ ತಡೆಹಿಡಿದು ನಿಲ್ಲಿಸಲಿಲ್ಲವೆ? ಎಲ್ಲವನ್ನೂ ಧಿಕ್ಕರಿಸಿ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗಬೇಕಾದರೆ ಅದರ ಹಿಂದೆಯಿದ್ದ ಶಕ್ತಿಯಾದರೂ ಎಂಥದು? ಅದು ಪ್ರೇಮವೋ? ಕಾಮವೋ? ಮೋಹವೋ? ಅಥವಾ ಬರೀ ಆಕರ್ಷಣೆಯೋ? ಎಲ್ಲ ಬಿಟ್ಟು ಯಾತಕ್ಕಾಗಿ ಅವನ ಹಿಂದೆ ಹೋಗುತ್ತಾಳೆ? ಮತ್ತೆ ಮತ್ತೆ ಕಾಡುವ ಪ್ರಶ್ನೆಗಳು! ಉತ್ತರ ಹುಡುಕಿ ಹೋದಷ್ಟು ಅವಳು ನಿಗೂಢವಾಗಿ ಉಳಿಯುತ್ತಾಳೆ ಮತ್ತು ಹೆಣ್ಣಿನ ಭಾವನಾತ್ಮಕ ಪ್ರಪಂಚಕ್ಕೆ ಒಂದು ಸವಾಲಾಗಿ ನಿಲ್ಲುತ್ತಾಳೆ. &lt;br /&gt;&lt;br /&gt;ಈ ಜಾನಪದ ಗೀತೆ ಮೇಲ್ನೋಟಕ್ಕೆ ಜೋಗಿ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ನಡುವಿನ ಸರಸ ಸಲ್ಲಾಪದಂತೆ ಕಂಡರೂ ಅವಳ ವಿಚಿತ್ರ ಮನೋಲೋಕವನ್ನು ಅನಾವರನಗೊಳಿಸುತ್ತದೆ. ಅವಳು ಅವನ ಹಿಂದೆ ಪ್ರೇಮಕ್ಕಾಗಿ ಹೋಗುತ್ತಾಳೋ? ಕಾಮಕ್ಕಾಗಿ ಹೋಗುತ್ತಾಳೋ? ಅಥವಾ ಅವನ ಮೇಲಿನ ಆಕರ್ಷಣೆಗೋಸ್ಕರ ಹೋಗುತ್ತಾಳೋ? ಯಾತಕ್ಕಾಗಿ ಎಂದು ಕವನ ಸ್ಪಷ್ಟವಾಗಿ ಹೇಳುವದಿಲ್ಲ. ಬರಿ ಅವರಿಬ್ಬರ ನಡುವಿನ ಸರಸ ಸಲ್ಲಾಪವನ್ನಷ್ಟೇ ಕಟ್ಟಿಕೊಡುತ್ತದೆ. ಈ ಹಾಡು ಜೋಗಪ್ಪ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ಸಂಭಾಷಣೆಯ ರೂಪದಲ್ಲಿದೆಯಾದರೂ ಇಡಿ ಹಾಡಿನುದ್ದಕ್ಕೂ ಅವನೇನೋ ಕೇಳುತ್ತಾನೆ. ಅವಳೇನೋ ಹೇಳುತ್ತಾಳೆ. ಅಥವಾ ಅವಳೇನೋ ಕೇಳುತ್ತಾಳೆ. ಅವನೇನೋ ಹೇಳುತ್ತಾನೆ. ಅಂದರೆ ಪರಸ್ಪರರ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುವದಿಲ್ಲ. ಇಬ್ಬರರ ಉತ್ತರಗಳಲ್ಲಿ ಪಲಾಯನವಿದೆ ಅಥವಾ ಹಾರ್ಷ್ ಉತ್ತರ ಕೊಡುವದು ಬೇಡವೆಂದು ಮೊದಲೇ ಯೋಚಿಸಿ ಇಬ್ಬರೂ ಒಬ್ಬರಿಗೊಬ್ಬರು ನೋವಾಗದಂತೆ ಹಿತವಾದ ಉತ್ತರ ಕೊಡುತ್ತಾರೆ. ಆ ಮೂಲಕ ಪರಸ್ಪರ ಆ ಕ್ಷಣದ ಸುಖವನ್ನು ಮಾತ್ರ ಅನುಭವಿಸಲು ನೋಡುತ್ತಾರೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಯೋಚಿಸುವದೇ ಇಲ್ಲ. ಹಾಗೆ ನೋಡಿದರೆ ಕವನದ ಮೊದಲಿನೆರಡು ಸಾಲುಗಳಲ್ಲಿ ಮಾತ್ರ ಅವಳ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತದೆ. ಅವಳು ಅವನ ಹಿಂದೆ ಹೋಗುವಾಗ “ಎಲ್ಲೋ ಜೋಗಪ್ಪ ನಿನ್ನರಮನೆ? ಎಲ್ಲೋ ಜೋಗಪ್ಪ ನಿನ್ನ ತಳಮನೆ?” ಎಂದು ಕೇಳುತ್ತಾಳೆ. ಅದಕ್ಕವನು “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಉತ್ತರ ಕೊಡುತ್ತಾನೆ. ಬಲು ಖಿಲಾಡಿ ಜೋಗಿ ಅವನು! ಅಸಲಿಗೆ ಊರೂರು ತಿರುಗುತ್ತಾ ತನ್ನ ಹೊಟ್ಟೆ ಹೊರೆದುಕೊಳ್ಳುವ ಜೋಗಿಗೆ ಒಂದು ಮನೆಯಾದರೂ ಇರಲು ಸಾಧ್ಯವೆ? ಅವನಿಗೆ ಇವತ್ತು ಈ ಊರು, ನಾಳೆ ಇನ್ನೊಂದು ಊರು. ಅದನ್ನವನು ಬಹಳ ಜಾಣತನದಿಂದ “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ. ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಹೇಳುತ್ತಾನೆ. ಅಥವಾ ತನಗೆ ಮನೆಯೇ ಇಲ್ಲ, ಮನೆಯಿದ್ದರೂ ಅಲ್ಲಿಗೆ ಹೋಗುವ ದಾರಿ ಬಲು ಕಠಿಣವಾದುದು ಎನ್ನುವದನ್ನು ಸೂಚ್ಯವಾಗಿ ಹೇಳುತ್ತಾನೆ. ಅಂದರೆ “ನೀನು ಎಲ್ಲ ಬಿಟ್ಟು ನನ್ನ ಹಿಂದೆ ಬರುತ್ತಿದ್ದೀಯಾ. ನನ್ನ ಬದುಕು ದುಸ್ತರವಾದುದು. ಮುಂದೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಿದ್ದಾನೆ. ಒಂದು ರೀತಿಯಲ್ಲಿ ಅವಳನ್ನು ಮುಂದಿನ ಬದುಕಿಗಾಗಿ ಮಾನಸಿಕವಾಗಿ ತಯಾರಿ ಮಾಡಿಸುತ್ತಾನೆ. ಮುಂದೆ ಅವಳೊಟ್ಟಿಗೆ ಬಾಳ್ವೆ ಮಾಡುತ್ತಾನೋ? ಇಲ್ವೋ? ಆ ಮಾತು ಬೇರೆ. ಅಂತೂ ಅವಳಿಗೆ ಸಮಾಧನಕರ ಉತ್ತರವನ್ನು ಆ ಕ್ಷಣಕ್ಕೆ ಕೊಡುತ್ತಾನೆ. ಅವಳೋ ಅದಾಗಲೇ ಎಲ್ಲ ಬಿಟ್ಟು ಅವನ ಬೆನ್ಹತ್ತಿ ಬಂದಾಗಿದೆ. ಆದರೂ ಅವನ ಮನದಲ್ಲಿನ್ನೂ ಕೆಲವು ಸಂಶಯಗಳಿವೆ. ಅವನ್ನು ಸ್ಪಷ್ಟಪಡಿಸಿಕೊಳ್ಳುವದಕ್ಕೋಸ್ಕರ “ಎಳ್ಳಿನ ಹೊಲವ ಬಿಟ್ಟೆ ಒಳ್ಳೆಯ ಗಂಡನ ಬಿಟ್ಟೆ/ಉದ್ದಿನ ಹೊಲವ ಬಿಟ್ಟೆ ಮುದ್ದಿನ ಮಗನ ಬಿಟ್ಟೆ/ ಕಳ್ಳಾಟ ಜೋಗಿ ಕೂಡ ಬರಬಹುದೆ?” ಎಂದು ಕೇಳುತ್ತಾನೆ. ಅಂದರೆ ಒಳ್ಳೆಯ ಗಂಡ, ಅನುಕೂಲಸ್ಥ ಮನೆ, ಮುದ್ದಿನ ಮಗನನ್ನು ಬಿಟ್ಟು ನನ್ನಂತ ಕಳ್ಳಾಟ ಜೋಗಿ ಕೂಡ ಬರುತ್ತಿದ್ದೀಯಲ್ಲ? ಇಂಥವರನ್ನೇ ಬಿಟ್ಟ ಮೇಲೆ ನಾಳೆ ನನ್ನನ್ನು ಬಿಡುವದಿಲ್ಲ ಎನ್ನುವದಕ್ಕೆ ಏನು ಗ್ಯಾರಂಟಿ? ಎಂದು ಕೇಳುತ್ತಾನೆ. ಅದಕ್ಕವಳು ಸಮಂಜಸವಾದ ಉತ್ತರ ಕೊಡುವದಿಲ್ಲವಾದರೂ “ನಿನ್ನಲ್ಲಿ ನನಗೆ ಮನಸಾದೆ ಜೋಗಿ” ಎಂದಷ್ಟೇ ಹೇಳುತ್ತಾಳೆ. ಅದಕ್ಕೇ ನಾನು ಆರಂಭದಲ್ಲೇ ಹೇಳಿದ್ದು; ಅವನೇನೋ ಕೇಳುತ್ತಾನೆ, ಅವಳೇನೋ ಹೇಳುತ್ತಾಳೆ ಎಂದು. ಈ ಪ್ರಕ್ರಿಯೆ ಕವನದುದ್ದಕ್ಕೂ ಅಲ್ಲಲ್ಲಿ ಕಾಣಿಸುತ್ತದೆ. ಕೊನೆಯಲ್ಲಿ ಅವನು “ಎಲ್ಲಾನೂ ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ?” ಎಂದು ಕೇಳುತ್ತಾನೆ. ಆದರೆ ಅವಳಿಂದ ಬರುವ ಉತ್ತರ ಎಂಥದಾಗಿರುತ್ತದೋ? ಅದೊಂದು ವೇಳೆ ಆತಂಕಕಾರಿ ಉತ್ತರವಾಗಿದ್ದರೆ? ಅದನ್ನವನು ಊಹಿಸಲು ಕೂಡ ತಯಾರಿಲ್ಲ. ಹಾಗಾಗಿ ಅವಳ ಉತ್ತರಕ್ಕೂ ಕಾಯದೆ ತಾನೇ “ನಿನ್ನಲ್ಲಿ ನನಗೆ ಮನಸಾದೆ ನಾರಿ” ಎಂದು ಹೇಳುವದರ ಮೂಲಕ ಆ ಕ್ಷಣದ ಆತಂಕಕ್ಕೆ ತೆರೆಯೆಳೆಯುತ್ತಾನೆ ಮತ್ತು ಅವಳ ಬಾಯಿ ಮುಚ್ಚಿಸುತ್ತಾನೆ. ಹಾಡಿನ ಕೊನೆಯಲ್ಲಿ “ನನ್ನ ತೋಳಲ್ಲಿ ನಿನ್ನ ಕಿನ್ನುರಿ ಮಾಡಿಕೊಂಡು ಚೆಂದಾದ ಪದವ ನುಡಿಸೇನು ನಾರಿ, ಚೆಂದಾದ ಪದವ ನುಡಿಸೇನು” ಎಂದು ಹಾಡುತ್ತಾ ಹೊರಟು ಹೋಗುತ್ತಾನೆ. ಮುಂದೆ ಅವರಿಬ್ಬರು ಹೇಗೆ ಇರುತ್ತಾರೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಕವನ ಮುಂದುವರಿಯುವದೇ ಇಲ್ಲ.     &lt;br /&gt;&lt;br /&gt;ಇಲ್ಲಿ ಅವನ ಹಿಂದೆ ಹೋಗುವ ಅವಳು ಅವನ ಯಾವುದಕ್ಕೆ ಮನಸೋತಿದ್ದಾಳೆ? ಅಸಲಿಗೆ ಜೋಗಿಗೇ ಆ ವಿಷಯ ಸ್ಪಷ್ಟವಾಗಿಲ್ಲ. ಎಲ್ಲಬಿಟ್ಟು ಏನೂ ಇಲ್ಲದ ನನ್ನ ಹಿಂದೆ ಬರಬೇಕಾದರೆ ಅವಳು ಮನಸೋತಿದ್ದು ಯಾವುದಕ್ಕೆ ಎನ್ನುವ ಗೊಂದಲ ಅವನಲ್ಲಿದೆ. ಹಾಗೆಂದೇ “ಚಿಕ್ಕಿನುಂಗರಕ್ಕೆ ಮನಸೋತಳೋ? ನಾರಿ ಬೆಳ್ಳಿನುಂಗರಕ್ಕೆ ಮನಸೋತಳೋ?” ಎಂದು ತನ್ನನ್ನೇ ತಾನು ಕೇಳಿಕೊಳ್ಳುವದರ ಮೂಲಕ ಇರಬಹುದೇನೋ ಎಂದು ಭಾವಿಸುತ್ತಾನೆ. ಆದರೆ ಅವಳು ಉಂಗುರಗಳಿಗೆ ಮನಸೋಲಲು ಸಾಧ್ಯವಿಲ್ಲ. ಏಕೆಂದರೆ ಅವಳ ಗಂಡ ಎಳ್ಳು, ಉದ್ದಿನ ಹೊಲವಿದ್ದವನಾಗಿದ್ದಾನೆ. ಶ್ರೀಮಂತನಲ್ಲದಿದ್ದರೂ ಅಂಥ ಉಂಗುರಗಳನ್ನು ತೆಗೆದುಕೊಡುವಷ್ಟು ಅನುಕೂಲಸ್ಥನಾಗಿದ್ದಾನೆ. ಮೇಲಾಗಿ ಹಾಗೆಲ್ಲ ಚಿನ್ನ, ಬೆಳ್ಳಿಗೆ ಆಸೆಪಟ್ಟು ಒಂದು ಹೆಣ್ಣು ಅದೂ ಒಬ್ಬ ಗೃಹಿಣಿ ಇನ್ನೊಬ್ಬನ ಹಿಂದೆ ಹೋಗಲು ಸಾಧ್ಯವೆ? ಹಾಗಿದ್ದರೆ ಅವಳು ಸೋತಿದ್ದು ಇದಕ್ಕಲ್ಲ. ಮತ್ತಿನ್ಯಾವುದಕ್ಕೆ? ಅವನ ಧ್ವನಿಗೆ? ಅವನ ಧ್ವನಿ ಅವಳನ್ನು ಆಕರ್ಷಿಸುವಷ್ಟು ಮಾದಕವಾಗಿತ್ತೆ? ಒಂದುವೇಳೆ ಹಾಗೇ ಇರಬಹುದೆಂದು ಇಟ್ಟುಕೊಂಡರೆ ಒಬ್ಬ ಹಳ್ಳಿಯ ಹೆಣ್ಣು ಇಷ್ಟೆಲ್ಲ ನಿರ್ಬಂಧಗಳ ನಡುವೆ ಗಂಡ, ಮನೆ, ಮಗ ಎಲ್ಲ ಬಿಟ್ಟು ಕೇವಲ ಪರಪುರುಷನ ಧ್ವನಿಗೆ ಸೋತು ಹೋಗುವದುಂಟೆ? ಸಾಧ್ಯವಿಲ್ಲ. ಹಾಗಿದ್ದರೆ ಇನ್ಯಾವುದಕ್ಕೆ ಹೋಗುತ್ತಾಳೆ? ಅವಳು ಕಿನ್ನುರಿ ನುಡಿಸುವ ಅವನ ಬೆರಳಿನಂದಕ್ಕೆ ಸೋತುಹೋದಳೆ? ಅಂದರೆ ಅವನಿಗೆ ಆಕರ್ಷಕ ಮೈಕಟ್ಟಿತ್ತೆ? ಅದನ್ನು ಮೆಚ್ಚಿಕೊಂಡು ಹೋದಳೆ? ಅವಳಿಗೆ ತನ್ನ ಗಂಡನಿಂದ ಪಡೆದ ಮಗುವೇನೋ ಇತ್ತು. ಆದರೆ ನಿತ್ಯವೂ ಬೇಕಾಗಿರುವ ದೈಹಿಕ ಸುಖವನ್ನು ಅವಳಿಗೆ ಕೊಡುವದರಲ್ಲಿ ಅವನು ವಿಫಲನಾಗಿದ್ದನೆ? ಆ ಕೊರತೆಯನ್ನು ನೀಗಿಸಿಕೊಳ್ಳಲು ಅವನ ಹಿಂದೆ ಹೋಗುತ್ತಾಳಾ? ಹಾಗೆಂದು ಕೂಡ ಹೇಳಲು ಬರುವದಿಲ್ಲ. ಏಕೆಂದರೆ ಒಂದುವೇಳೆ ಅವಳು ಇದೇ ಕಾರಣಕ್ಕೆ ಅವನ ಹಿಂದೆ ಹೋಗುವದಾದರೆ ಅವಳು ಈಗಾಗಲೆ ಅವನೊಂದಿಗೆ ಸಂಪರ್ಕ ಬೆಳೆಸಿ ಇವನೇ ನನ್ನ ದೈಹಿಕ ವಾಂಚೆಗಳನ್ನು ತೀರಿಸಲು ಯೋಗ್ಯನಾದ ಗಂಡು ಎಂದು ನಿರ್ಧರಿಸಬೇಕಾಗಿರುತ್ತದೆ. ಆದರೆ ಒಂದು ಸಾರಿಯೂ ಅವರಿಬ್ಬರ ಮಧ್ಯ ಅದು ಸಂಭವಿಸಯೇ ಇಲ್ಲ ಎಂದು ಅವರಿಬ್ಬರ ನಡುವಿನ ಸಂಭಾಷಣೆಯಿಂದ ಗೊತ್ತಾಗುತ್ತದೆ. ಹಾಗಾದರೆ ಅವಳು ತನ್ನ ಕಾಮತೃಷೆಯನ್ನು ತೀರಿಸಲು ಇವನೇ ಯೋಗ್ಯನಾದ ಗಂಡು ಎಂದು ಹೇಗೆ ನಿರ್ಧರಿಸುತ್ತಾಳೆ? ಇನ್ನು ಇವರಿಬ್ಬರ ನಡುವೆ ಈಗಷ್ಟೆ ಹುಟ್ಟಿದ ಪ್ರೀತಿಯಿದೆ. ಅದು ಎಳಸು ಪ್ರೀತಿ. ಅದು ಪರಸ್ಪರ ಒಬ್ಬರಿಗೊಬ್ಬರು ಮಾತಾಡಿಕೊಳ್ಳುವಾಗ “ನನ್ನಲ್ಲಿ ನಿನಗ ಮನಸಾದೆ” ಎನ್ನುವ ಮಾತಲ್ಲಿ ವ್ಯಕ್ತವಾಗುತ್ತದೆ. ಆ ಎಳಸು ಪ್ರೀತಿಗೆ ಗಂಡ, ಮನೆ, ಮಗನನ್ನು ಬಿಟ್ಟು ಹೋಗಬಹುದೆ? ಅವಳ ದಾಂಪತ್ಯ ಜೀವನದಲ್ಲೇನಾದರೂ ಬಿರುಕುಗಳಿದ್ದವೆ? ಆ ಬಿರುಕುಗಳೇ ಜೋಗಿಯ ಹಿಂದೆ ಹೋಗುವಂತೆ ಮಾಡಿತೆ? ಅಥವಾ ಅವಳಿಗೆ ಅವನ ಮೇಲೆ ಹುಟ್ಟಿದ ಒಂದು ಆಕರ್ಷಣೆಯೇ? ಆ ಆಕರ್ಷಣೆಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರೀತಿಯ ಲೇಪನವನ್ನು ಹಚ್ಚುತ್ತಿದ್ದಾಳೆಯೇ? ಅಥವಾ ಗಂಡನಲ್ಲಿ ಸಿಗದ ಪ್ರೀತಿಯನ್ನು ಅವನಲ್ಲಿ ಹುಡುಕಿ ಹೋದಳೆ? ಕವನ ಇದರ ಬಗ್ಗೆ ಸರಿಯಾಗಿ ಏನನ್ನೂ ಹೇಳುವದಿಲ್ಲ.&lt;br /&gt;&lt;br /&gt;ಹೋದವಳು ಹೋದಳು ತನ್ನ ಗಂಡನಿಗಿಂತ ಎಲ್ಲದರಲ್ಲೂ ಉತ್ತಮವಾಗಿರುವ ಗಂಡಸಿನೊಂದಿಗೆ ಹೋದಳೆ? ಇಲ್ಲ.  ಏನೂ ಇಲ್ಲದ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗುತ್ತಾಳಲ್ಲ? ಅದು ನಮ್ಮನ್ನೆಲ್ಲ ತುಸು ಯೋಚಿಸುವಂತೆ ಮಾಡುವದು! ಯಾವ ಕಾರಣಕ್ಕೆ ಹೋಗುತ್ತಾಳೆ ಎನ್ನುವದು ಕೊನೆವರೆಗೂ ಗೊತ್ತಾಗುವದೇ ಇಲ್ಲ. ಅವಳೇನೋ ಬಿಟ್ಟುಹೋದಳು. ಹಾಗೆ ಬಿಟ್ಟು ಹೋದವಳು ಕಡೆತನಕ ಆ ಜೋಗಿಯೊಂದಿಗೆ ಇರುತ್ತಾಳಾ? ಅವನೊಟ್ಟಿಗೆ ಬಾಳ್ವೆ ಮಾಡುತ್ತಾಳಾ? ಆ ಸಂಬಂಧವನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾಳಾ? ಅಥವಾ ತದನಂತರದಲ್ಲಿ ಅವನ ಬಗ್ಗೆಯೂ ಭ್ರಮೆ ನಿರಸನಕ್ಕೊಳಗಾಗಿ ಮತ್ತೆ ತನ್ನ ಗಂಡನಲ್ಲಿಗೆ ವಾಪಾಸಾಗುತ್ತಾಳೋ? ಇದ್ಯಾವುದು ನಮಗೆ ಗೊತ್ತಾಗುವದಿಲ್ಲ. ಆದರೆ ಹಾಗೆ ಬಿಟ್ಟುಹೋಗುವಾಗ ಅವಳ ಗಂಡನ ಮನಸ್ಥಿತಿ ಹೇಗಿರಬೇಡ? ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಕಂಡವರೆಲ್ಲಾ ಅವನನ್ನು ನೋಡಿ ಕಿಸಕ್ಕೆಂದು ನಗುವಾಗ ಅವನ ಪರಿಸ್ಥಿತಿ ಹೇಗಿರಬೇಡ? ಅಕಸ್ಮಾತ್ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಅವಳು ತನ್ನ ಮುಂದಿನ ಬದುಕನ್ನು ಅದ್ಹೇಗೋ ಕಟ್ಟಿಕೊಂಡುಬಿಡುತ್ತಾಳೆ. ಆ ತಾಕತ್ತು ಅವಳಲ್ಲಿದೆ. ಆದರೆ ಹೆಂಡತಿಯಾದವಳು ಸುಕಾಸುಮ್ಮನೆ ಕಾರಣ ಹೇಳದೆ ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋದರೆ? ಅವನು ಮಾನಸಿಕವಾಗಿ ನೊಂದುಹೋಗುತ್ತಾನೆ. ಬೆಂದುಹೋಗುತ್ತಾನೆ. ಹೊರಗೆ ಅವನು ಎಷ್ಟೇ ಧೀರನಾಗಿ ಶೂರನಾಗಿ ಕಂಡರೂ ಒಳಗೊಳಗೆ ಅವನು ತುಂಬಾ ಜರ್ಝರಿತನಾಗುತ್ತಾನೆ. ಅಧೀರನಾಗಿಹೋಗುತ್ತಾನೆ. ಅಷ್ಟು ದಿವಸ ಕಾಪಡಿಕೊಂಡುಬಂದ ಅವನ ಮರ್ಯಾದೆ, ಪ್ರತಿಷ್ಟೆ, ಎಲ್ಲವೂ ಮಣ್ಣುಪಾಲಾಗಿ ಅವನು ಇದ್ದೂ ಸತ್ತಂತೆ ಬದುಕತ್ತಾನೆ.&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-6712854906304304091?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/6712854906304304091/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/12/blog-post_11.html#comment-form' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/6712854906304304091'/><link rel='self' type='application/atom+xml' href='http://www.blogger.com/feeds/2802103225554897449/posts/default/6712854906304304091'/><link rel='alternate' type='text/html' href='http://bisilahani.blogspot.com/2010/12/blog-post_11.html' title='ಎಲ್ಲ ಬಿಟ್ಟು ಅವಳು ಅವನ ಹಿಂದೆ ಹೋದದ್ದಾದರೂ ಏಕೆ?'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>4</thr:total></entry><entry><id>tag:blogger.com,1999:blog-2802103225554897449.post-717286236124070336</id><published>2010-12-04T15:35:00.000+01:00</published><updated>2010-12-04T15:37:40.000+01:00</updated><title type='text'>ಪ್ರಥಮ ಪುರುಷ ನಿರೂಪಣೆಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತವೆಯೇ?</title><content type='html'>ಚಿನ್ನು, ನಾನು ಮೊನ್ನೆ ಒಂದು ಪತ್ರ ಬರೆದಿದ್ದೆನಲ್ಲ? ಅದೇ ಡೈವೋರ್ಸ್ ಕುರಿತಂತೆ! ‘ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ’ ಅನ್ನೋ ನನ್ನ ಕಳೆದ ಸಾರಿಯ ಬ್ಲಾಗ್ ಪೋಸ್ಟ್. ಅದನ್ನೋದಿದ ನನ್ನ ಬ್ಲಾಗ್ ಫ್ರೆಂಡ್ಸ್, ಒಂದಷ್ಟು ಖಾಸಗಿ ಮಿತ್ರರು, ಹಾಗು ಹೈಸ್ಕೂಲ್ ಗೆಳೆಯರು “It’s very touchy. ತುಂಬಾ ಚನ್ನಾಗಿ ಬರಿದಿದ್ದೀಯ. ನಿರೂಪಣೆ ಕೂಡ ಚನ್ನಾಗಿದೆ. ಹೀಗೆ ಬರೆಯುತ್ತಿರು” ಎಂದು ಮೆಚ್ಚಿಕೊಂಡು ನನಗೆ ಪ್ರತ್ಯೇಕ ಈಮೇಲ್ ಗಳನ್ನು ಕಳಿಸಿದ್ದಾರೆ. ಇವರಂತೆಯೇ ಅದನ್ನು ಓದಿದ ದೂರದ ಮಂಡ್ಯದ ನನ್ನ ಕಾಲೇಜು ಗೆಳತಿಯೊಬ್ಬಳು ಕೂಡ ಒಂದು ಈಮೇಲ್ ಕಳಿಸಿದ್ದಾಳೆ. ಅದು ತುಂಬಾ ತಮಾಷೆಯಾಗಿದೆ. ತಮಾಷೆ ಯಾಕೆ ಅಂದರೆ ಅವಳು ನಮ್ಮಿಬ್ಬರಿಗೂ ಡೈವೋರ್ಸ್ ಆಗಿ ಹೋಗಿದೆಯೆಂದು ಭಾವಿಸಿಬಿಟ್ಟಿದ್ದಾಳೆ. “ಇದೇನು ಮಾರಾಯ? ನಿನ್ನ ಡೈವೋರ್ಸ್ ಯಾವಾಗಾಯ್ತು? ಯಾಕಾಯ್ತು? ಹೆಂಗಾಯ್ತು? ಛೇ, ಹೀಗಾಗಬಾರದಿತ್ತು!” ಎನ್ನುವದು ಅವಳ ಈಮೇಲ್ ನ ಒಟ್ಟು ಸಾರಾಂಶ. ಇದು ನಿನಗೆ ನಗು ತರಿಸುವದಿಲ್ಲವೆ? ತರಿಸದೆ ಏನು? ಎಂಥವರೂ ಬಿದ್ದು ಬಿದ್ದು ನಗುತ್ತಾರೆ. ಮೊದಲಿಗೆ ಇದನ್ನು ಓದಿದಾಗ ನಾನು ಕೂಡ ಬಿದ್ದು ಬಿದ್ದು ನಕ್ಕಿದ್ದೆ. ಆದರೆ ನಿಧಾನಕ್ಕೆ ಕುಳಿತು “ಅವಳಿಗೆ ಈ ತರದ ಆಲೋಚನೆ ಬಂದದ್ದಾದರೂ ಹೇಗೆ?” ಎಂದು ನನ್ನನ್ನು ನಾನೇ ಕೇಳಿಕೊಂಡಾಗ ಉತ್ತರ ಸ್ಪಷ್ಟವಿತ್ತು. ಇಡಿ ಲೇಖನ ಅಥವಾ ಪತ್ರ ಪ್ರಥಮ ಪುರುಷದ ನಿರೂಪಣೆಯಲ್ಲಿತ್ತು. ಅಂದರೆ ನನ್ನದೇ ಕಥೆಯೆಂಬಂತೆ ಇತ್ತು. ಅಂದರೆ ಆತ್ಮಕಥೆಯ ಧಾಟಿಯಲ್ಲಿತ್ತು. ಬಹಳಷ್ಟು ಬರಹಗಾರರು ಈ ತರದ ನಿರೂಪಣೆಯನ್ನು ಬೇಕೆಂತಲೇ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇದು ತುಂಬಾ ಪರಿಣಾಮಕಾರಿಯಾಗಿರುತ್ತದೆ ಹಾಗೂ ಹೇಳಬೇಕಾಗಿದ್ದನ್ನು ಮನ ಮುಟ್ಟುವಂತೆ, ತಟ್ಟುವಂತೆ ಹೇಳಬಹುದಾಗಿರುತ್ತದೆ ಎನ್ನುವದು ಅವರ ವಾದ. ಮೇಲಾಗಿ ಓದುಗರಿಗೂ ಕೂಡ ಇದು ತಮ್ಮದೇ ಕಥೆಯಂತೆ ಭಾಸವಾಗುತ್ತದೆ. ಅದೆಲ್ಲ ಸರಿ. ಆದರೆ ಹಾಗೆ ಬರೆದ ಮಾತ್ರಕ್ಕೆ ಅದು ಅವನ ಖಾಸಗಿ ಜೀವನದ ಸಂಗತಿಯೇ ಎಂದು ತೀರ್ಮಾನಿಸುವದು ಎಷ್ಟರಮಟ್ಟಿಗೆ ಸರಿ? ಹೀಗೆಂದು ಕೇಳುತ್ತಲೆ ಅವಳಿಗೆ ಉತ್ತರವನ್ನು ಈ ಕೆಳಗೆ ನೀಡಿದ್ದೇನೆ. ಅದನ್ನೊಮ್ಮೆ ಓದು. ಓದಿ ನಕ್ಕು ಬಿಡು.&lt;br /&gt;&lt;br /&gt;“ಯಾವುದೇ ಬರಹಗಾರನ ಬರಹಗಳು ಅವನ ಖಾಸಗಿ ಜೀವನದ ಮೇಲೆ ಒಂದಿಷ್ಟು ಬೆಳಕು ಚೆಲ್ಲಿವೆ ಎಂದು ಊಹಿಸಬಹುದು. ಆದರೆ ಚೆಲ್ಲೇಚೆಲ್ಲಿವೆ ಎಂದು ಖಡಾಖಂಡಿತವಾಗಿ ಹೇಳಲು ಬರುವದಿಲ್ಲ. ಒಬ್ಬ ಲೇಖಕನ ಕೃತಿಗಳಲ್ಲಿ ಆತನ ಖಾಸಗಿ ಜೀವನದ ಘಟನೆಗಳು ಅಲ್ಲಲ್ಲಿ ಇಣುಕುವದು ಸಾಮಾನ್ಯ. ಅವನು ಅವುಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾರ. ಹೀಗಾಗಿ ಅವೆಲ್ಲವನ್ನು ಅವನು ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ವ್ಯಕ್ತಪಡಿಸುವದು ಸಹಜ. ಹಾಗಂತ ಇಡಿಯಾಗಿ ಅದು ಅವನದೇ ಜೀವನದಲ್ಲಿ ನಡೆದ ಘಟನೆಯೆಂದು ತೀರ್ಮಾನಿಸಲು ಬರುವದಿಲ್ಲ. ಒಂದುವೇಳೆ ಹಾಗೆ ಕಾಣಿಸಿಕೊಂಡಿದ್ದರೂ ಅದು ಹೌದೋ? ಅಲ್ವೋ? ಎಂಬ ಸತ್ಯ ಬರೆದವನಿಗೆ ಹಾಗೂ ಅವನನ್ನು ಅತ್ಯಂತ ಹತ್ತಿರದಿಂದ ಬಲ್ಲ ಒಂದಿಷ್ಟು ಮಂದಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿರುವದಿಲ್ಲ. ಹಾಗಿದ್ದೂ ನೀವು ಯಾವುದಾದರೂ ಒಂದು ಕಥೆಯನ್ನು ಓದಿದರೆ ಅದು ಬರೆದವನ ಕಥೆಯಿರಬೇಕು ಎಂದು ಅನುಮಾನ ಪಡುವದೇಕೆ?  ಅನುಮಾನಪಟ್ಟು ಸುಮ್ಮನಿದ್ದರೆ ಬೇಜಾರಿಲ್ಲ. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬರೆದವನನ್ನು ನೇರವಾಗಿ ಇದು ನಿಮ್ಮದೇ ಕಥೆಯೇ? ನಿಮ್ಮದೇ ಜೀವನದ ಘಟನೆಯೇ? ಎಂದು ಕೇಳಿ ಅವನನ್ನೇಕೆ ಮುಜುಗರಪಡಿಸುತ್ತೀರಿ? ಅದರಲ್ಲೂ ನಮ್ಮ ಬರಹಗಳು ಪ್ರಥಮ ಪುರುಷದ ನಿರೂಪಣೆಯಲ್ಲಿದ್ದರಂತೂ ಮುಗಿದೇಹೋಯಿತು. ತಕ್ಷಣ ‘ಓ! ಇದು ಇವನದೇ ಕಥೆ’ ಎಂದು ತೀರ್ಮಾನಿಸುವದೇಕೆ? ಈ ಎಲ್ಲ ಹಿನ್ನೆಲೆಯಲ್ಲಿ ಅದು ನನ್ನ ಕಥೆಯಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ! ನಾನದನ್ನು ಪ್ರಥಮ ಪುರುಷದಲ್ಲಿ ಬರೆದಾಕ್ಷಣ ಅದು ನನ್ನದೇ ಕಥೆಯೆಂದು ನೀನ್ಹೇಗೆ ಭಾವಿಸಿದೆ? ಪ್ರಥಮ ಪುರುಷದ ನಿರೂಪಣೆಯಲ್ಲಿ ಬರುವ ಕಥೆಗಳೆಲ್ಲಾ ಆಯಾಯ ಲೇಖಕನ ಖಾಸಗಿ ಜೀವನದ ಕಥೆಗಳೇ? ಹಾಗಾದರೆ ಲಾರೆನ್ಸ್, ಆಸ್ಕರ್ ವೈಲ್ಡ್, ಇನ್ನೂ ಮುಂತಾದ ಲೇಖಕರು ಇದೇ ಧಾಟಿಯಲ್ಲಿ ಬರೆದಿದ್ದಾರಲ್ಲ? ಅವೆಲ್ಲಾ ಅವರ ಖಾಸಗಿ ಜೀವನದ ಕಥೆಗಳೆಂದು ತಿಳಿಯುತ್ತೀಯಾ? ಪ್ರಥಮ ಪುರುಷದ ನಿರೂಪಣೆಯಲ್ಲಿ ಬರೆದ ಒಂದು ಲೇಖನವನ್ನು ಒಬ್ಬ ಸಾಹಿತ್ಯದ ಅಧ್ಯಾಪಕಿಯಾಗಿ ನೀನೇ ಹೀಗೆ ತಪ್ಪಾಗಿ ಅರ್ಥಮಾಡಿಕೊಂಡರೆ ಬೇರೆಯವರ ಪಾಡೇನು? ಒಬ್ಬ ಲೇಖಕನ ಬರಹಗಳಲ್ಲಿ ಅಲ್ಲಲ್ಲಿ ಅವನ ಖಾಸಗಿ ಜೀವನದ ಒಂದಿಷ್ಟು ತುಣುಕುಗಳು ಸಿಗಬಹುದೇನೋ! ಹಾಗಂದ ಮಾತ್ರಕ್ಕೆ ಅದು ಇಡಿಯಾಗಿ ಅವನ ಖಾಸಗಿ ಜೀವನವನ್ನು ಬಿಂಬಿಸುತ್ತದೆ ಎಂದು ಹೇಳಲಾಗುತ್ತದೆಯೇ? ಈ ಜಗತ್ತಿನ ಲೇಖಕರು ಬರೆದಿದ್ದೆಲ್ಲಾ ಅವರ ಸ್ವಂತ ಅನುಭದಿಂದ ಬರೆದಿದ್ದೆ? ಅದೆಲ್ಲಾ ಅವರ ಖಾಸಗಿ ಜೀವನದಲ್ಲಿ ನಡೆದಿದ್ದೆ? ಇನ್ನು ಮೇಲಾದರೂ ಈ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜುಗರವುನ್ನುಂಟು ಮಾಡುವದನ್ನು ನಿಲ್ಲಿಸು. ನಿಮ್ಮಂತ ಓದುಗರು ಇರುವದರಿಂದಲೇ ಈಗೀಗ ಪ್ರಥಮ ಪುರುಷದ ನಿರೂಪಣೆಯಲ್ಲಿ ಬರೆಯುವ ಅನೇಕರು “ಇದು ನನ್ನ ಕಥೆಯಲ್ಲ” ಎಂದು ಕಥೆಯ ಅಥವಾ ಲೇಖನದ ಕೊನೆಯಲ್ಲಿ ಸೂಚಿಸುತ್ತಾರೆ. ಇನ್ನು ಮುಂದೆಯಾದರೂ ದಯವಿಟ್ಟು ಇಂಥದಕ್ಕೆ ಅವಕಾಶ ಮಾಡಿಕೊಡಬೇಡ.”   &lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-717286236124070336?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/717286236124070336/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/12/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/717286236124070336'/><link rel='self' type='application/atom+xml' href='http://www.blogger.com/feeds/2802103225554897449/posts/default/717286236124070336'/><link rel='alternate' type='text/html' href='http://bisilahani.blogspot.com/2010/12/blog-post.html' title='ಪ್ರಥಮ ಪುರುಷ ನಿರೂಪಣೆಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತವೆಯೇ?'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><thr:total>1</thr:total></entry><entry><id>tag:blogger.com,1999:blog-2802103225554897449.post-5201327292935976281</id><published>2010-11-20T21:29:00.002+01:00</published><updated>2010-11-22T14:27:19.504+01:00</updated><title type='text'>ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ!</title><content type='html'>&lt;a href="http://3.bp.blogspot.com/_FiNlrLfTRP0/TOgwtSqzInI/AAAAAAAAAW8/-WPA7adKpSs/s1600/214521998_20b98fc1f8.jpg"&gt;&lt;img style="float:left; margin:0 10px 10px 0;cursor:pointer; cursor:hand;width: 200px; height: 183px;" src="http://3.bp.blogspot.com/_FiNlrLfTRP0/TOgwtSqzInI/AAAAAAAAAW8/-WPA7adKpSs/s400/214521998_20b98fc1f8.jpg" border="0" alt=""id="BLOGGER_PHOTO_ID_5541732896142991986" /&gt;&lt;/a&gt;&lt;br /&gt;ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ಆವರಿಸಿತ್ತು. ತಕ್ಷಣ ನೀನು ಪಕ್ಕದಲ್ಲಿಯೇ ಇದ್ದ ನಿನ್ನಮ್ಮನನ್ನು ತಬ್ಬಿಕೊಂಡು ಗೊಳೋ ಅಂತ ಅಳಲು ಶುರುವಿಟ್ಟೆ. ಅರೆ ಅತ್ತಿದ್ದೇಕೆ? ಪೀಡೆ ತೊಲಗಿತೆಂದು ಖುಶಿಖುಶಿಯಾಗಿರುವದು ಬಿಟ್ಟು! ಇನ್ನು ಇವನ ಜೊತೆ ಏನೇ ಸರ್ಕಸ್ ಮಾಡಿದರೂ ಏಗಲಾರೆನೆಂದು ತಾನೇ ನೀನು ನನಗೆ ಡೈವೋರ್ಸ್ ಕೊಟ್ಟಿದ್ದು? ನಮ್ಮಿಬ್ಬರ ಜಗಳದಲ್ಲಿ ಎಷ್ಟೋ ಸಾರಿ ನೀನು ನನಗೆ “ಹಾಳಾಗಿ ಹೋಗು, ನನ್ನ ಬದುಕನ್ನು ನರಕ ಮಾಡಿಟ್ಟಿ.” ಎಂದು ಆಗಾಗ್ಗೆ ಚುಚ್ಚುತ್ತಿದ್ದವಳು ಈಗ ಸಂತೋಷವಾಗಿರುವದು ಬಿಟ್ಟು ಅತ್ತಿದ್ದೇಕೆ? ಸಂಕಟಪಟ್ಟಿದ್ದೇಕೆ? ನನಗೆ ಗೊತ್ತು ನನ್ನ ಪ್ರಶ್ನೆಗಳಿಗೆ ನಿನ್ನ ಹತ್ತಿರ ಉತ್ತರವಿಲ್ಲವೆಂದು. ಏಕೆಂದರೆ ನನ್ನದೂ ಅದೇ ಕಥೆಯೇ! ನೀನು ಅನುಭವಿಸುತ್ತಿರುವ ಯಾತನೆಯನ್ನೇ ನಾನೂ ಅನುಭವಿಸುತ್ತಿದ್ದೇನೆ. ಈ ಯಾತನೆ ನಿನಗೇಕೆ? ಎಂದು ನೀನು ನನ್ನ ಪ್ರಶ್ನಿಸಿದರೆ ನಾನು ಕೂಡ ಉತ್ತರಿಸಲಾರೆ. ಕೆಲವು ಪ್ರಶ್ನೆಗಳೇ ಹಾಗೆ! ಅವನ್ನು ಉತ್ತರಿಸಲಾಗದು! &lt;br /&gt;&lt;br /&gt;ನಿನ್ನದು ಈ ಅವಸ್ಥೆಯಾದರೆ ನನ್ನದು ಮತ್ತೊಂದು ಅವಸ್ಥೆ! ಅಂದು ನೀನು ಹಾಗೆ ಅಳುತ್ತಿದ್ದುದನ್ನು ನೋಡಿ ನನಗೂ ತಡೆಯಾಗಲಿಲ್ಲ. ನನ್ನ ಕಿಬ್ಬೊಟ್ಟೆಯ ಕೆಳಗೆ ಕಸಿವಿಸಿಯೊಂದು ಛಳ್ಳೆಂದು ಸಿಡಿದು ಇಡಿ ಕರುಳನ್ನು ವ್ಯಾಪಿಸಿಬಿಟ್ಟಿತು. ಮನಸ್ಸು ವಿಲವಿಲ ಅಂತ ಒದ್ದಾಡಿತು. ಹೃದಯ ಕಿವುಸಿದಂತಾಗಿತ್ತು. ನಿಜ ಹೇಳಲೆ? ಅಂದು ನಿನಗಿಂತ ಹೆಚ್ಚಾಗಿ ನನಗೆ ಸಂಕಟವಾಗಿತ್ತು! ಸರಿ, ನೀನೇನೋ ಅತ್ತು ಅತ್ತು ಹಗುರಾಗಿಬಿಟ್ಟೆ. ನನ್ನ ಪಾಡೇನು? ನಾನು ಗಂಡಸು! ಅಳುವ ಹಾಗಿಲ್ಲ. ಏಕೆಂದರೆ ಏನೇ ಆದರೂ ಗಂಡಸು ಅಳಬಾರದೆಂಬ ಅಲಿಖಿತ ನಿಯಮವೊಂದನ್ನು ಈ ಲೋಕ ಅವನಿಗಾಗಿ ರೂಪಿಸಿಟ್ಟಿದೆಯಲ್ಲ? ನೀನೋ ಹೆಣ್ಣು! ನೀನು ಅತ್ತರೆ ಎಲ್ಲರೂ ಕಾರಣ ಕೇಳಿ ಓಡಿ ಬರುವವರೇ! ನಿನ್ನ ಕಣ್ಣೀರಿಗಿಲ್ಲಿ ಬೆಲೆಯಿದೆ. ಅನುಕಂಪವಿದೆ. ಸಾಂತ್ವನವಿದೆ. ಆದರೆ ನನ್ನ ಕಣ್ಣೀರನ್ನು ಕೇಳುವರ್ಯಾರು? ಅದಕ್ಕೆ ಸ್ಪಂದಿಸುವವರ್ಯಾರು? ಅನುಕಂಪಿಸುವವರ್ಯಾರು? ಯಾರೂ ಇಲ್ಲ! ಏಕೆಂದರೆ ನಾನು ಗಂಡಸು! ನಾನು ಅತ್ತರೆ ಇಲ್ಲಿ ಎಲ್ಲರೂ ನನ್ನ ಲೇವಡಿ ಮಾಡುವವರೇ! ಅಪಹಾಸ್ಯ ಮಾಡುವವರೇ! ಕೀಳಾಗಿ ಕಾಣುವವರೇ! ಇಲ್ಲಿ ಹೆಂಗಸಿನ ಕಣ್ಣೀರಿಗಿರುವಷ್ಟು ಬೆಲೆ ಗಂಡಸಿನ ಕಣ್ಣೀರಿಗಿಲ್ಲ! ನಾವು ಗಂಡಸರೇ ಹಾಗೆ! ನಿಮ್ಮಂತೆ ಅತ್ತು ಅತ್ತು ಮನಸ್ಸು ಹಗುರಮಾಡಿಕೊಳ್ಳಲಾರೆವು! ಅಳದೆ ನಮ್ಮ ನೋವನ್ನೆಲ್ಲಾ ಎದೆಯೊಳಗೆ ಬಚ್ಚಿಟ್ಟುಕೊಂಡು ಮೇಲೆ ಮಾತ್ರ ನಗುವಿನ ಮುಖವಾಡ ಹಾಕಿಕೊಂಡು ಮೌನವಾಗಿ ಬಿಕ್ಕಬೇಕು. ಹೀಗಾಗಿ ಲೋಕಕ್ಕೆ  ನಮ್ಮ ಬಿಕ್ಕುಗಳು ಯಾವತ್ತೂ ಕೇಳಿಸುವದೇ ಇಲ್ಲ. ನಮ್ಮ ಕಂಗಳ ಹಿಂದಿರುವ ಕಣ್ಣಿರು ಕಾಣಿಸುವದೇ ಇಲ್ಲ. ಓ ಗಂಡಸೇ, ನೀನೆಷ್ಟೊಂದು ಪಾಪಿ? ಆಗೆಲ್ಲಾ ನಾನು ನೀನಾಗಿದ್ದರೆ ಎಷ್ಟು ಚನ್ನಾಗಿತ್ತು? ಎಂದುಕೊಂಡಿದ್ದೇನೆ.&lt;br /&gt;&lt;br /&gt;ಅಂದಹಾಗೆ ಆವತ್ತು ನನಗೆ ಕಸಿವಿಸಿಯಾಗಿದ್ದು ನೀನು ಅತ್ತಿದ್ದಕ್ಕಲ್ಲ: ಇನ್ನು ನಿನ್ನ ಮುಂದಿನ ಬದುಕು ನೀನು ಹೇಗೆ ಬದುಕುತ್ತಿ? ಎಂಬ ಯೋಚನೆಯಿಂದ. ಇನ್ನೊಂದು ಮದುವೆಯಾಗುತ್ತೀಯಾ? ಒಬ್ಬಳೇ ಹಾಗೇ ಇರುತ್ತೀಯಾ? ಇಲ್ಲವೇ ಇದ್ಯಾವ ಜಂಜಾಟ ಬೇಡೆಂದು ದೂರ ಹೊರಟು ಹೋಗುತ್ತೀಯಾ? ಇಂಥದೇ ನೂರಾರು ಯೋಚನೆಗಳು ಒಂದಾದ ಮೇಲೊಂದರಂತೆ ಬಂದು ಮುತ್ತಿಕ್ಕುತ್ತಿವೆ. ವಿಪರ್ಯಾಸವೆಂದರೆ ಇದೆ ನೋಡು! ನಿನಗೆ ಡೈವೋರ್ಸ್ ಕೊಟ್ಟಿದ್ದೇ ನಿನ್ನಿಂದ ದೂರವಾಗಲೆಂದು; ನಿನ್ನ ಮರೆತು ಹಾಯಾಗಿರಲೆಂದು. ಆದರೆ ನನ್ನ ಮನಸ್ಸು ಮತ್ತೆ ಮತ್ತೆ ನಿನ್ನ ಕುರಿತೇ ಯೋಚಿಸಿತ್ತಿದೆ. ಹಪಹಪಿಸುತ್ತಿದೆ. ಇದೇನಾಶ್ಚರ್ಯ? ಬಿಡುಗಡೆಯಾದರೂ ಬಿಡುಗಡೆಯಾಗುತ್ತಿಲ್ಲ ನಿನ್ನ ಭಾವಬಂಧ!&lt;br /&gt;&lt;br /&gt;ನೀನು ರೂಪವಂತೆ, ಗುಣವಂತೆ, ವಿದ್ಯಾವಂತೆ. ತಿಳುವಳಿಕೆಸ್ಥೆ. ಎಲ್ಲದಕ್ಕೂ ಹೊಂದಿಕೊಂಡುಹೋಗುವವಳು. ಆದರೆ ಅದೇಕೋ ನಿನ್ನ ತಿಳುವಳಿಕೆ, ಹೊಂದಾಣಿಕೆ ನನ್ನೊಂದಿಗೆ ಮಾತ್ರ ವರ್ಕ್ ಔಟ್ ಆಗಲಿಲ್ಲ. ಅಥವಾ ನಾನೇ ನಿನಗೆ ಹೊಂದಿಕೊಂಡುಹೋಗಲಿಲ್ವೋ? ಶತಾಯ ಗತಾಯ ಇಬ್ಬರೂ ಒಬ್ಬರಿಗೊಬ್ಬರು ಸರಿಯಾದ ಜೋಡಿಯಾಗಿರಲು ಪ್ರಯತ್ನಪಟ್ಟರೂ ಅದೇಕೋ ಸಾಧ್ಯವಾಗಲೇ ಇಲ್ಲ. ನಮ್ಮ ಬಿಡುಗಡೆಗೆ ಕಾರಣ ಒಂದಿತ್ತೆ? ಎರಡಿತ್ತೆ? ಅಥವಾ ನೂರಿತ್ತೆ? ಗೊತ್ತಿಲ್ಲ. ಆದರೆ ಎಲ್ಲ ಮುಗಿದ ಮೇಲೆ ಇಂತಿಂಥದೇ ಕಾರಣ ನಮ್ಮ ಬಿಡುಗಡೆಗೆ ಕಾರಣವಾಯಿತು ಎಂದು ಹುಡುಕುವದರಲ್ಲಿ ಯಾವ ಪುರುಷಾರ್ಥವಿದೆ? ಬದುಕು ತೀರ ಹಿಂಸೆ ಅನಿಸತೊಡಗಿದಾಗ ಒಟ್ಟಾಗಿ ಇರುವದರಲ್ಲಿ ಅರ್ಥವಿಲ್ಲವೆಂದುಕೊಂಡು ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದೆವು. ನಾವು ಡೈವೋರ್ಸಿಗೆ ಅಪ್ಲೈ ಮಾಡಿದ ದಿವಸವೇ ನೀನು ನನ್ನನ್ನು, ನನ್ನ ಮನೆಯನ್ನು ಬಿಟ್ಟುಹೋಗಿದ್ದಿ. ಆ ಕ್ಷಣಕ್ಕೆ ಮನಸ್ಸಿಗೆ ನೋವಾಗಿತ್ತಾದರೂ ಹಾಗೆ ಹೋದವಳು ಮನಸ್ಸು ಬದಲಾಯಿಸುತ್ತಿ, ಮತ್ತೆ ವಾಪಾಸು ಬರುತ್ತೀಯೆಂದು ದೂರದ ಆಶಾಕಿರಣವೊಂದು ನನ್ನಲ್ಲಿನ್ನೂ ಉಳಿದಿತ್ತು. ಆದರೆ ಅದೀಗ ಸಂಪೂರ್ಣವಾಗಿ ಕತ್ತರಿಸಿಬಿದ್ದಿದೆ. ನೀನೇನೋ ಈ ಮನೆಯನ್ನು ಬಿಟ್ಟುಹೋದಿ. ಆದರೆ ನೀ ಬಿಟ್ಟುಹೋದ ನೆನಪುಗಳು ಅಷ್ಟು ಬೇಗ ಹೋದಾವೆ? ಅವಿನ್ನೂ ಈ ಮನೆಯ ತುಂಬ ಮನದ ತುಂಬ ಗಸ್ತು ಹೊಡೆಯುತ್ತಲೇ ಇವೆ!&lt;br /&gt; &lt;br /&gt;ನಾನು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಇವತ್ತೇನೋ ಮಿಸ್ ಆಯಿತಲ್ಲ? ಎಂದುಕೊಳ್ಳುತ್ತಿರುವಾಗಲೇ ನೆನಪಾಗುತ್ತದೆ; ನನ್ನ ಕೆನ್ನೆಗೊಂದು ನೀ ಮುತ್ತು ಕೊಟ್ಟು ಎಬ್ಬಿಸುತ್ತಿದ್ದುದು. ನಾನು ಆಫೀಸಿಗೆ ಹೋಗಲು ರೆಡಿಯಾಗಿ ಬರುತ್ತಿದ್ದಂತೆ ತಿಂಡಿಗಾಗಿ ಡೈನಿಂಗ್ ಟೇಬಲ್ ನತ್ತ ನೋಡುತ್ತೇನೆ. ಅಲ್ಲೇನೂ ಕಾಣುವದಿಲ್ಲ. ತಕ್ಷಣ ಸಿಟ್ಟಾಗಿ ನಿನ್ನ ಹೆಸರು ಹಿಡಿದು ಕೂಗಿ ‘ತಿಂಡಿ ಎಲ್ಲಿ?’ ಎಂದು ಕೇಳುತ್ತೇನೆ. ಅರೆ, ಅವಳೇ ಮನೆಬಿಟ್ಟು ಹೋದ ಮೇಲೆ ಅವಳ ತಿಂಡಿ ಎಲ್ಲಿಂದ ಬರಬೇಕು? ಎಂದು ಸುಮ್ಮನಾಗುತ್ತೇನೆ. ಸಾಯಂಕಾಲದ ಹೊತ್ತು ಬಿಸಿ ಬಿಸಿ ಕಾಫಿ ಕುಡಿಯುವಾಗ ಆ ಸಮಯದಲ್ಲಿ ನೀ ಮಾಡಿಕೊಡುತ್ತಿದ್ದ ಮಿರ್ಚಿಗಳು ನೆನಪಾಗಿ ಬಾಯಲ್ಲಿ ನೀರು ತರಿಸುತ್ತವೆ. ಯಾವಾಗಲಾದರೂಮ್ಮೆ ನಾ ಮಳೆಯಲ್ಲಿ ನೆನೆದು ಬಂದಾಗ ನೀನು “ಅಯ್ಯೋ, ಶೀತ ಆಗುತ್ತೆ” ಎಂದು ಓಡಿ ಬಂದು ಟಾವೆಲ್ ನಲ್ಲಿ ನನ್ನ ತಲೆಯನ್ನು ಒರೆಸುತ್ತಾ ಮೈ ಬಿಸಿಯೇರಿಸುತ್ತಿದ್ದುದು ನೆನಪಾಗಿ ಮೈ ಬಿಸಿಯಾಗುತ್ತದೆ. ಸುರಿಯುವ ಮಳೆಯಲ್ಲೇ ಕನಸುಗಳನ್ನು ಕಟ್ಟುತ್ತಾ ನಾವು ಬೈಕ್ ರೈಡಿಂಗ್ ಹೋಗುತ್ತಿದ್ದುದು ಕಣ್ಣಮುಂದೆ ತೇಲಿಬಂದು ಮೈಯಲ್ಲಿ ಸಣ್ಣದೊಂದು ಬಿಸಿ ಛಳಕು ಹುಟ್ಟಿಸುತ್ತದೆ. ನಾನು ಆಫೀಸಿಗೆ ಹೋಗುವಾಗ ಬೆನ್ನು ಹಿಡಿದು “ಆಫಿಸಿಗೆ ಹೋಗಲೇಬೇಕಾ? ಇವತ್ತು ನಿನ್ನ ಬಾಸ್ ಗೆ ಏನೋ ಒಂದು ಸುಳ್ಳು ಹೇಳಿಬಿಡು. ನಾನೂ ರಜೆ ತೆಗೆದುಕೊಳ್ಳುತ್ತೇನೆ. ಎಲ್ಲಾದ್ರೂ ಹೋಗೋಣ?” ಎಂದು ಹಿಂದಿನಿಂದ ತಬ್ಬುತ್ತಿದ್ದುದು ನೆನಪಾಗಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ನಾನು ರಾತ್ರಿ ಹಾಸಿಗೆಗೆ ಉರುಳುತ್ತಿದ್ದಂತೆ ಮೆಲ್ಲನೆ ನಿನ್ನ ವಾಸನೆ ಕಾಡತೊಡಗುತ್ತದೆ. ನಿನ್ನ ಆ ಉದ್ದನೆಯ ಕೂದಲುಗಳು ನನ್ನ ಎದೆಯ ರೋಮಗಳೊಂದಿಗೆ ತಳುಕು ಹಾಕಿಕೊಂಡು ಬಿಡಿಸಿಕೊಳ್ಳುತ್ತಿರುವದು ಕಣ್ಣಮುಂದೆ ಬಂದು ನಿದ್ರೆ ಬಾರದೆ ಒದ್ದಾಡುತ್ತೇನೆ. ಒಂದೇ? ಎರಡೇ? ಎಷ್ಟೊಂದು ನೆನಪುಗಳನ್ನು ಬಿಟ್ಟು ಹೋಗಿರುವೆ? ನಿನ್ನ ಬಗ್ಗೆ ಆಗಿರಬೇಕಾಗಿದ್ದ ಸಾಫ್ಟ್ ಕಾರ್ನರ್ ಈಗ ಹೆಚ್ಚಾಗತೊಡಗುತ್ತಿದೆ. ಏನು ಮಾಡುವದು? ಮದುವೆಯ ವ್ಯವಸ್ಥೆಯೇ ಹಾಗೆ! ಆರಂಭದಲ್ಲಿ ಎಲ್ಲವೂ ಚನ್ನಾಗಿರುತ್ತದೆ. ಎಲ್ಲವೂ ಹೊಂದಾಣಿಕೆಯಾಗುತ್ತದೆ. ಆದರೆ ಬರುಬರುತ್ತಾ ಇಬ್ಬರ ಒಪ್ಪು ತಪ್ಪುಗಳು ದೊಡ್ಡದಾಗಿ ಕಾಣಿಸತೊಡಗುತ್ತವೆ. ಬದುಕು ಅಸಹನೀಯವೆನಿಸಿ ದೊಡ್ಡ ಕಂದರವೇ ನಿರ್ಮಾಣವಾಗಿಬಿಡುತ್ತದೆ. ಇರಲಿ, ಇದರ ಬಗ್ಗೆ ಮುಂದೆ ಯಾವತ್ತಾದರೂ ಬರೆದೇನು! ಏನೇ ಆಗಲಿ ನೀ ಮತ್ತೆ ಮತ್ತೆ ನನ್ನ ಕಣ್ಣಮುಂದೆ ಬರುತ್ತಿ, ನೆನಪಾಗಿ ಕಾಡುತ್ತೀ, ನೀ ನನ್ನ ಬಿಟ್ಟುಹೋದರೂ ನಿನ್ನ ನೆನಪುಗಳು ನನ್ನ ಬಿಡಲೊಲ್ಲವು. ಓ ದೇವರೆ! ಮನೆಯನ್ನು ಸುಲಭವಾಗಿ ಬಿಟ್ಟು ಹೋದವರು ಮನವನ್ನೇಕೆ ಬಿಟ್ಟುಹೋಗುವದಿಲ್ಲ? &lt;br /&gt;&lt;br /&gt;ನನಗನಿಸುತ್ತಿರುವಂತೆಯೇ ನಿನಗೂ ಅನಿಸುತ್ತಿರಬೇಕಲ್ಲವೆ? ಅನಿಸದೆ ಏನು? ಯಕಶ್ಚಿತ್ ಬಸ್ಸಲ್ಲೋ ಟ್ರೇನಲ್ಲೋ ಪರಿಚಯವಾದ ಸಹಪ್ರಯಾಣಿಕನೊಬ್ಬ ಇಳಿದುಹೋದಮೇಲೂ ತುಂಬಾ ಹೊತ್ತು ಕಾಡಬೇಕಾದರೆ ಮೂರ್ನಾಲ್ಕು ವರ್ಷ ನಿನ್ನೊಟ್ಟಿಗೆ ಸಂಸಾರ ಮಾಡಿದವ ನಾನು ನಿನ್ನನ್ನು ಕಾಡದೇ ಇರುತ್ತೇನೆಯೇ? ನನ್ನ ನೆನೆಪಗಳು ನಿನ್ನನ್ನು ಕಿತ್ತು ತಿನ್ನದೆ ಇರುತ್ತೇವೆಯೇ? ನೀನು ನನಗೆ ಇಲ್ಲ ಎಂದು ಸುಳ್ಳು ಹೇಳಬಹುದು. ಆದರೆ ನಿನಗೆ ನೀನು ಸುಳ್ಳು ಹೇಳಿಕೊಳ್ಳಬಲ್ಲೆಯೇ? ಖಂಡಿತ ಇಲ್ಲ!  ಏಕೆಂದರೆ ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ; ಒಂದಲ್ಲ ಒಂದು ರೂಪದಲ್ಲಿ ನಮ್ಮನ್ನು ಕಾಡುತ್ತಲೇ ಇರುತ್ತದೆ!&lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;ತಲೆ ಬರಹ ಕದ್ದಿದ್ದು ಚಾಮರಾಜ ಸವಡಿಯವರಿಂದ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-5201327292935976281?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/5201327292935976281/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/11/blog-post_20.html#comment-form' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/5201327292935976281'/><link rel='self' type='application/atom+xml' href='http://www.blogger.com/feeds/2802103225554897449/posts/default/5201327292935976281'/><link rel='alternate' type='text/html' href='http://bisilahani.blogspot.com/2010/11/blog-post_20.html' title='ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ!'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_FiNlrLfTRP0/TOgwtSqzInI/AAAAAAAAAW8/-WPA7adKpSs/s72-c/214521998_20b98fc1f8.jpg' height='72' width='72'/><thr:total>3</thr:total></entry><entry><id>tag:blogger.com,1999:blog-2802103225554897449.post-4208376640079169351</id><published>2010-11-08T20:16:00.004+01:00</published><updated>2010-12-06T14:52:23.650+01:00</updated><title type='text'>ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಕೊನೆಯ ಭಾಗ)</title><content type='html'>“ಅವನು………? ಅಂದರೆ………?” ನನಗೆ ನಂಬಲಾಗಲಿಲ್ಲ. &lt;br /&gt;“ಅಂದರೆ ಅವನು ನನ್ನ ಗೆಳೆಯ. ಬರಿ ಗೆಳೆಯನಲ್ಲ. ಜೀವದ ಗೆಳೆಯ!”&lt;br /&gt;“ಮತ್ತೆ ಇದು ಹುಡುಗಿ ಮೇಲೆ ಬರೆದಿರೊ ತರ ಇದೆ”&lt;br /&gt;“ಹಾಗೆ ಅನ್ಕೊ...... ಆದರೆ ನಾನದನ್ನು ಬರೆದಿದ್ದು ಅವನ ಮೇಲೆಯೇ, ಅವನು ಈ ವರ್ಣನೆ ಕೇಳಿ ಈ ಕೋಟು ಕೊಟ್ಟ” ಎಂದು ಉಬ್ಬಿದ.&lt;br /&gt;“ಹಾಗಾದರೆ ಅದು ಒಳ್ಳೆ ಸಾನೆಟ್”&lt;br /&gt;“ಯಾಕೆ?” ಕೇಳಿದ ಮಿ. ಶೇಕ್ಷಪೀಯರ್.&lt;br /&gt;“ಯಾಕೆಂದರೆ ಇದು ಒಳ್ಳೇ ಕೋಟು!”&lt;br /&gt;ಚಣ ಬಿಟ್ಟು ಕೇಳಿದೆ: “ಹಾಗಾದರೆ ನಿನ್ನ ಬೀರುವಿನಲ್ಲಿ ಇರುವ ಡ್ರೆಸ್ಸುಗಳೆಲ್ಲ ಸಾನೆಟ್ಟಿನಿಂದಲೇ ಬಂದವೆ?”&lt;br /&gt;ಮಿಸ್ಟರ್ ಸ್ಮೈಲ್ ನಾಚಿ ಕೆಂಪಾಗಿ ನಿಂತ. ಮಹಾನ್ ನಾಚಿಕೆಗಾರ! ಆ ನಾಚಿಕೆಯಲ್ಲಿ ಮುಗ್ಧತೆಯಿತ್ತೋ, ತಪ್ಪು ಮಾಡಿ ಸಿಕ್ಕಿಕೊಂಡವನ ಭಯವಿತ್ತೋ! ಕಡೆಗೂ ತಡೆತಡೆದು ಹೇಳಿದ, “ಸಾನೆಟ್ ಬರೆದಿದ್ದು ಬರೀ ಬಟ್ಟೆಗೋಸ್ಕರ ಅಲ್ಲ, ಆದರೆ ಸಾನೆಟ್ ಬರೆದಾಗೆಲ್ಲ ಒಂದೊಂದು ಕೋಟು ಸಿಕ್ಕಿದ್ದು ನಿಜ!” &lt;br /&gt;“ಓ! ಹಾಗಾದರೆ ನಿನಗೆ ಇಷ್ಟೆಲ್ಲ ದುಡ್ಡು ಕೊಡುವ ಆ ನಿನ್ನ ‘ಅವನು’, ನಿನ್ನ ಸಾಕೋ ಆ ಪೆಟ್ರನ್ನು ಶ್ರೀಮಂತನಿರಬೇಕು” ಅಂದೆ.&lt;br /&gt;“ಪೇಟ್ರನ್ ಅನ್ನಬೇಡ, ನನ್ನ ಹೆನ್ರಿ, ನನ್ನ ಹೆನ್ರಿ ರಿಜ್ಲಿ, ಸೌತಾಂಪ್ಟನ್” ಎಂದ.&lt;br /&gt;&lt;br /&gt;&lt;a href="http://3.bp.blogspot.com/_FiNlrLfTRP0/TNhNu8b96vI/AAAAAAAAAW0/-YUwN4Z5JHA/s1600/images.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 172px; height: 294px;" src="http://3.bp.blogspot.com/_FiNlrLfTRP0/TNhNu8b96vI/AAAAAAAAAW0/-YUwN4Z5JHA/s320/images.jpg" border="0" alt=""id="BLOGGER_PHOTO_ID_5537261210744777458" /&gt;&lt;/a&gt;&lt;br /&gt;                 &lt;blockquote&gt;&lt;strong&gt;ಹೆನ್ರಿ ರಿಜ್ಲಿ -ಶೇಕ್ಷಪೀಯರನ ಗೆಳೆಯ&lt;/strong&gt;&lt;/blockquote&gt;&lt;br /&gt;&lt;br /&gt;“ಓಹ್! ಹೆನ್ರಿ ನಿನ್ನ ಆಶ್ರಯದಾತ!”&lt;br /&gt;“ಪ್ಲೀಸ್, ಯ್ಯಾನಿ, ಅವನು ಬರೀ ಆಶ್ರಯದಾತ ಅಲ್ಲ”&lt;br /&gt;“ಹಾಂ, ಅವನು ಬೇಸಿಗೆಯ ಹಗಲಿನ ಥರ!” ಎಂದು ತಿವಿದೆ.&lt;br /&gt;ಹೀಗಿರುವಾಗ ಒಂದು ದಿನ ಮಿ. ಶೇಕ್ಷಪೀಯರ್ ನನ್ನ ಕಣ್ಣಿಗೆ ಪಟ್ಟಿ ಕಟ್ಟಿ “ಬಾ ತಮಾಷೆ ತೋರಿಸುತ್ತೇನೆ” ಎಂದು ಮನೆಯ ಮಹಡಿಗೆ ಕರಕೊಂಡು ಹೋದ. “ಕಣ್ಣು ಬಿಡು” ಅಂದ. ಕಣ್ಣುಬಿಟ್ಟರೆ ಅಲ್ಲೊಂದು ದೊಡ್ಡ ಹಾಸಿಗೆ. “ಇದೇ ನಮ್ಮ ಪ್ಲೇಹೌಸ್” ಅಂದ, ನನ್ನ ಹುಚ್ಚುಕವಿ.&lt;br /&gt;ನಾನೆಂದೂ ಪ್ಲೇಹೌಸಿಗೆ ಹೋದವಳಲ್ಲ. “ಇಲ್ಲೇನು ಮಾಡುವದು?” ಅಂದರೆ, “ಆಡುವದು” ಅಂದ.&lt;br /&gt;“ಆಮೇಲೇನಾಯಿತು ಗೊತ್ತ?” ಅವನು “ಓ ಮೈ ಲವ್, ಓ ಮೈ ಲೈಫ್” ಅಂದ. ನಾನೂ  “ಓ ಮೈ ಲೈಫ್, ಓ ಮೈ ಲವ್” ಅಂದೆ.&lt;br /&gt;ಇಲ್ಲಿಂದ ಮುಂದೆ ನಡೆದದ್ದನ್ನೆಲ್ಲ ಇದ್ದದ್ದು ಇದ್ದಂತೆ ಹೇಳಿಬಿಡುವೆ. Let me die if I lie.&lt;br /&gt;ಅವತ್ತು ಹಾಸಿಗೆಯ ಮೇಲೆ ಒಂದು ಸಣ್ಣ ಆಟ ಆದಮೇಲೆ ಕೇಳಿದೆ, “ಈ ಹಾಸಿಗೆಗೆ ಎಷ್ಟು ಸಾನೆಟ್ಸ್ ಆಯ್ತು?”&lt;br /&gt;“ಸಾನೆಟ್ಸ್? ನೋ, ನೋ, ಎರಡೇ ಎರಡು ಪದ್ಯಕ್ಕೆ ಈ ಹಾಸಿಗೆ ಸಿಕ್ತು” ಅಂದ ಹೆಮ್ಮೆಯಿಂದ.&lt;br /&gt;“ಅಬ್ಬ! ಹಾಗಾದರೆ ಉದ್ದನೆ ಪದ್ಯಗಳೇ ಇರಬೇಕು!”&lt;br /&gt;ಸರ್ ಸ್ಮೈಲ್ ಎದ್ದ. “ಇರು, ತೋರಿಸ್ತೇನೆ” ಎಂದು ಎರಡು ದಪ್ಪ ರಟ್ಟಿನ ಪುಸ್ತಕ ತಂದ. ಒಂದರ ಮೇಲೆ “Venus and Adonis” ಅಂತ ಬರೆದಿತ್ತು. ಇನ್ನೊಂದರ ಮೇಲೆ “The Rape of Lucrece” ಅಂತ ಇತ್ತು. “ಲೂಕ್ರಿಸ್ ನ ರೇಪ್ ಮಾಡಿದೋರು ಯಾರು? ಗಂಡಸೋ ಹೆಂಗಸೋ?” ಅಂದೆ. “Sextus Tarquinis” ಅಂದ. “ಸೆಕ್ಸ್ಟಸ್! ಹೆಸರೇ ಬೊಂಬಾಟಾಗಿದೆ.” ಅಂದೆ. ಮಿ. ಶೇಕ್ಷಪೀಯರ್ ಮುಖ ಊದಿಸಿಕೊಂಡು “ಆ ಸೆಕ್ಸ್ಟಸ್ ಒಬ್ಬ ವಿಲನ್” ಅಂದ “ಆದರೇನಂತೆ! ಆ ಹೆಸರಿನ ಸೌಂಡೇ ಎಷ್ಟು ಲವ್ಲಿಯಾಗಿದೆ!” ಅಂದೆ.&lt;br /&gt;“ಅದಿರಲಿ, ಆ ಇನ್ನೊಂದು ಪದ್ಯದಲ್ಲಿ ರೇಪ್ ಮಾಡೋರು ಯಾರು? ವೀನಸ್ ನ ಆಡೋನಿಸ್ ರೇಪ್ ಮಾಡ್ತಾನೋ ಅಥವಾ ಆಡೋನಿಸ್ ನ ವೀನಸ್?” ಎಂದೆ. ತಲೆ ಚಚ್ಚಿಕೊಳ್ಳುತ್ತಾ ಶೇಕ್ಷಪೀಯರ್ ಅವನ ಪದ್ಯಗಳ ಕತೆಯೆಲ್ಲ ಹೇಳಿದ. “ಇವೇನು ಪದ್ಯಗಳೋ! ಇದರ ತುಂಬಾ ಲಂಪಟರು, ರೇಪ್ ಮಾಡೋದು, ರೇಪ್ ಮಾಡೋಕೆ ಟ್ರೈ ಮಾಡೋದು, ಓಡಿಹೋಗೋದು.....ಇಷ್ಟೇ” ಅಂದೆ.&lt;br /&gt;ಸುಮ್ಮನೆ ಥಣ್ಣಗೆ ಹಾಸಿಗೆಯ ಮೇಲೊರಗಿ “ಹೆನ್ರಿ ರಿಜ್ಲಿ” ಅಂದೆ. “ಎಸ್?” ಎಂದ ಶೇಕ್ಷಪೀಯರ್.&lt;br /&gt;“ಆ ಎರಡು ಪದ್ಯಕ್ಕೆ ಹೆನ್ರಿ ನಿನಗೆ ಇಷ್ಟು ದೊಡ್ಡ ಹಾಸಿಗೆ ಕೊಟ್ಟನೆ?”&lt;br /&gt;“ಇಲ್ಲ, ಇಲ್ಲ. ಅವನು ದುಡ್ಡು ಕೊಟ್ಟ. ನಾನು ಹಾಸಿಗೆ ಕೊಂಡೆ!” ಎಂದ ಮಳ್ಳನ ಹಾಗೆ.&lt;br /&gt;ಯಾಕೋ ಏನೋ, ಇದ್ದಕ್ಕಿದ್ದಂತೆ ನನ್ನ ಮೂಗು ಹಾಸಿಗೆಯೆನ್ನೆಲ್ಲ ಮೂಸತೊಡಗಿತು! “ಈ ಹಾಸಿಗೇಲಿ......ಈ ಹಾಸಿಗೇಲಿ ‘ಅವನು’ ಮಲಗಿದ್ದನ?” ಅಂತ ಪಿಸುಗುಟ್ಟಿದೆ. ಮಿ. ಶೇಕ್ಷಪೀಯರ್ ಸುಮ್ಮನಿದ್ದ. ಹಾಗೆ ಸುಮ್ಮನಿದ್ದರೆ “ಹೂಂ” ಎಂದನೆಂದೇ ಅರ್ಥ! “ಓ ಜೀಸಸ್” ಅನ್ನುತ್ತಾ, ಮೆಲ್ಲಗೆ “ಅದಕ್ಕೆ.....ಎಷ್ಟು ಕೊಟ್ಟ?” ಅಂದೆ. “ಒಂದು ಸಾವಿರ ಪೌಂಡ್” – ಕೊನೆಗೂ ಶೇಕ್ಷಪೀಯರ್ ಬಾಯಿಬಿಟ್ಟ. &lt;br /&gt;ಆಮೇಲೆ ಪ್ಲೇಹೌಸಿನಲ್ಲಿ ಆಟ ಶುರುವಾಯಿತು. ಎಲ್ಲ ತಿರುವುಮುರುವು. ಒಮ್ಮೆ ನಾನು ಗಂಡಿನ ವೇಷದಲ್ಲಿ, ಅವನು ಹೆಣ್ಣು ವೇಷದಲ್ಲಿ! ಇನ್ನೊಂದು ಆಟದಲ್ಲಿ “ಈ ಹಾಸಿಗೆಯೇ ದ್ವೀಪ” ಅಂದ. ನಾನು ಮಂತ್ರವಾದಿಯ ಮಗಳಂತೆ. ಆ ಮಂತ್ರವಾದಿಯ ಹೆಸರು ಪ್ರಾಸ್ಟರಸ್ ಅಂತೆ. ಶೇಕ್ಷಪೀಯರ್ ತಾನು ಅದೆಂಥದೋ ಕ್ಯಾಲಿಬನ್ ಅಂದ. ಇನ್ನೊಂದು ಆಟದಲ್ಲಾಗಲೇ ನೀನು ಜೂಲಿಯೆಟ್ ಅಂದ. ಹಾಸಿಗೆಯೇ ಗೋರಿಯಂತೆ. ಅದರೊಳಗೆ ನಾನು ಸತ್ತು ಬಿದ್ದಿರಬೇಕಂತೆ! ಆಮೇಲೆ ತಾನು ರೋಮಿಯೋ ಅಂತ ಬಂದು ವಿಷ ಕುಡಿದ. ಇದಾದ ಮೇಲೆ ನಾನು ಎದ್ದು ಚೂರಿಯಿಂದ ಇರಿದುಕೋಬೇಕು! ಇನ್ನೊಂದು ರಾತ್ರಿ ಅದ್ಯಾವನೋ ಡೆನ್ಮಾರ್ಕ್ ರಾಜಕುಮಾರನ ಪ್ರೇಯಸಿಯ ಪಾತ್ರ. ಆ ರಾಜಕುಮಾರನಿಗೆ ಒಂಥರಾ ಹುಚ್ಚು, ಅಥವಾ ಹುಚ್ಚನಂತೆ ನಟಿಸುತ್ತಿದ್ದ, ಅಥವಾ ಹಾಗೆ ನಟಿಸೋಕೆ ಹೋಗಿ ಹುಚ್ಚನಾದನೋ ಏನೋ. ಅಂತೂ ಅದು ನನಗೂ ಗೊತ್ತಾಗಲಿಲ್ಲ, ಶೇಕ್ಷಪೀಯರ್ ನಿಗೂ ಗೊತ್ತಾಗಲಿಲ್ಲ. ಆದರೆ ನಾನಂತೂ ಅವನ ಪ್ರೇಯಸಿಯಂತೆ ಹೂವೆಸೆಯುವಂತೆ ನಟಿಸುತ್ತಾ ಕೊಳಕ್ಕೆ, ಅಂದರೆ ಹಾಸಿಗೆಗೆ, ಬಿದ್ದೆ. ಹಾಂ, ಅವನು ಹೇಳಿದ ಹಾಗೆ ಮುಖ ಅಡಿಯಾಗೇ ಬಿದ್ದೆ, ಅನ್ನಿ!&lt;br /&gt;ಇದಾದ ಮೇಲೆ ಒಂದು ರಾತ್ರಿ “ಆ ಹೆನ್ರಿ ರಿಜ್ಲಿ ನೋಡೊಕೆ ಹೇಗಿದಾನೆ?” ಅಂದೆ.&lt;br /&gt;“ನನ್ನ ಪುಟ್ಟ ಸೂಳೆ! ಅವನೇನು ನಿನ್ನ ಸವತಿ ಅಲ್ಲ” ಅಂದ, ಪ್ರೀತಿಯಿಂದ.&lt;br /&gt;“ಅದೆಲ್ಲ ಇರಲಿ, ಅವನು ನೋಡೋಕೆ ಹೇಗಿದಾನೆ ಹೇಳು, ಪ್ಲೀಸ್” ಅಂದೆ.&lt;br /&gt;ಶೇಕ್ಷಪೀಯರ್ ನಾಚಿದ, ಬೆವೆತ, ಉಗುರು ಕಚ್ಚಿದ, “ಅವನ ಬಗ್ಗೆ ನನ್ನ ಸಾನೆಟ್ಟುಗಳಲ್ಲಿ ಬರೆದಿರೋದನ್ನೆಲ್ಲ ಓದಲೆ?” ಅಂದ, “ಅವೆಲ್ಲ ಬೇಡಯ್ಯ, ಸಾಫ್ ಸೀದಾ ಎರಡೇ ಮಾತಲ್ಲಿ ಹೇಳು” ಅಂದೆ. ಶುರುಮಾಡಿಯೇಬಿಟ್ಟ, “ಇಪ್ಪತ್ತೊಂದು ವಸಂತಗಳ ಕಂಡವನು, ಆ ದೇವತೆ, ಆ ಸ್ಪೂರ್ತಿ, ಆ ಸಂತ, ಸಂಪಿಗೆಗಿಂತ ಮಧುರ ಅವನ ಬಿಸಿಯುಸಿರು......” ಪಾಪ, ಹೀಗೆ ಹಾಡುತ್ತಲೇ ಇದ್ದ, the love-sick fool, my dirty devil!&lt;br /&gt;ಆದರೆ ಆಮೇಲೆ ಯಾರಿಂದಲೋ ಗೊತ್ತಾಯಿತು ಆ ಹೆನ್ರಿ, ಶೇಕ್ಷಪೀಯರನಿಗೆ ಬರಿ ಸಲಿಂಗಿ ಸಂಗಾತಿಯಾಗಿರಲಿಲ್ಲ, ಅವನ ಆತ್ಮ ಸಂಗಾತಿ ಕೂಡ ಆಗಿದ್ದನೆಂದು. ಅವರಿಬ್ಬರಲ್ಲಿ ಎಷ್ಟೊಂದು ಆತ್ಮೀಯತೆ, ಗಾಢತೆಯಿತ್ತೆಂದರೆ ಇಬ್ಬರೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಶೇಕ್ಷಪಿಯರ್ ಕೂಡ ಅವನನ್ನು ಅತ್ಯಂತ ತೀವ್ರವಾಗಿ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ 154  ಸಾನೆಟ್ ಗಳಲ್ಲಿ 126  ಸಾನೆಟ್ ಗಳು ಗೆಳೆತನಕ್ಕೇ ಮೀಸಲಾಗಿರುವದು ಸಾಕ್ಷಿ. ಆ ಹೆನ್ರಿ ಇವನಿಗೆ ಹೇಳಿ ಮಾಡಿಸಿದಂಥ ಜೋಡಿ. ಶೆಕ್ಷಪೀಯರನ ಭಾವನೆಗಳಿಗೆ, ಕನಸುಗಳಿಗೆ, ಅವನು ಅದ್ಭುತವಾಗಿ ಸ್ಪಂದಿಸುತ್ತಿದ್ದನಂತೆ. ಅಷ್ಟೇ ಅಲ್ಲ ಅವ ಶೇಕ್ಷಪೀಯರ್ ಬರೆದಿದದ್ದನ್ನು ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದನಂತೆ ಹಾಗೂ ಇನ್ನೂ ಬರಿಯೆಂದು ಹುರುದುಂಬಿಸುತ್ತಿದ್ದನಂತೆ. ಒಂದು ಲೆಕ್ಕದಲ್ಲಿ ಅವನೇ ಇವನಿಗೆ ಹೆಂಡತಿಯಾಗಿದ್ದರೆ ಚನ್ನಾಗಿತ್ತೇನೋ! ತಪ್ಪಿ ನಾನಾಗಿ ಬಿಟ್ಟೆ. ಪಾಪ ಶೇಕ್ಷಪೀಯರ್! ಮೊದಲೇ ಹೇಳಿದಂಗೆ ನಾನು ಅವನಿಗೆ ಸರಿಯಾದ ಜೋಡಿಯಾಗಲಿಲ್ಲ. ಅವನ ಭಾವನೆಗಳಿಗೆ ನಯವಾಗಿ ನಾಜೂಕಾಗಿ ಯಾವತ್ತೂ ಸ್ಪಂದಿಸಲಿಲ್ಲ. ಬರೀ ಏನಿದ್ದರೂ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದೆ. ಇನ್ನು ಅವನು ಯಾವಾಗಲಾದರೂ ಕವನ ಓದಲು ಬಂದಾಗ ‘ತಲೆನೋವು ಮಾರಾಯ’ ಅಂತ ಹೇಳಿ ನಿರಾಶೆಗೊಳಿಸುತ್ತಿದ್ದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿಯಿರಲಿಲ್ಲ ನಿಜ. ಆದರೆ ಆಸಕ್ತಿ ಬೆಳೆಸಿಕೊಂಡಿದ್ದರೆ, ಅವನನ್ನು ನಯವಾಗಿ ಸಂಭಾಳಿಸಿದ್ದರೆ ನಾನವನಿಗೆ ಒಳ್ಳೆ ಹೆಂಡತಿ ಆಗಬಹುದಿತ್ತೇನೋ  ಅಂತ ಈಗ ಅನಿಸುತ್ತದೆ. ಬಹುಶಃ ಅದೇ ಕಾರಣಕ್ಕೇ ಇರಬೇಕು ಅವನು ನನ್ನಲ್ಲಿ ಕಾಣದಿದ್ದನ್ನು ಅವನ ಗೆಳೆಯನಲ್ಲಿ ಕಂಡುಕೊಂಡ. ನನಗೆ ಅವನಿಷ್ಟದಂತೆ ಬದುಕಲು ಸಾದ್ಯವಿತ್ತೇನೋ ಆದರೆ ನಾನು ಪ್ರಯತ್ನಿಸಲಿಲ್ಲ. ಹೀಗಾಗಿ ಅವನ ಗೆಳೆಯನೇ ಅವನಿಗೆ ಹೆಂಡತಿಯಂತಾದ.   &lt;br /&gt;&lt;br /&gt;ಮತ್ತೆ ನೆನಪಾಗುತ್ತಿದೆ......ನಾನೊಮ್ಮೆ ಅದೇ ಥೇಮ್ಸ್ ನದಿ ದಂಡೆಯ ಮೇಲೆ ಸಂಜೆ ವಿಹಾರಕ್ಕೆಂದು ಅವನ ಜೊತೆ ಹೋದಾಗ ಕುತೂಹಲಕ್ಕೆಂದು ಕೇಳಿದ್ದೆ “ನಿನ್ನ ಗೆಳೆಯ ಬೇಸಿಗೆಯ ಹಗಲಾದರೆ, ನಾನೇನು ಹಾಗಾದರೆ?” ಎಂದು. ಅದಕ್ಕವನು ನಿರ್ಭಿಡೆಯಿಂದ “ನೀನು ಚಳಿಗಾಲದ ಒಂದು ದಿನ” ಎಂದು ಹೇಳಿದ್ದ. ನನಗಾಗ ಅರ್ಥವಾಗದೆ ನಗುತ್ತಾ ಸುಮ್ಮನೆ ತಲೆಯಮೇಲೊಂದು ಮೊಟಕಿದ್ದೆ. ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ. ನಿಜಕ್ಕೂ ನಾನವನ ಮೈ ಮನಗಳ ಬಿಸಿಯೇರಿಸದ “ಚಳಿಗಾಲದ ಒಂದು ದಿನ” ವಾಗಿ ಉಳಿದುಬಿಟ್ಟೆನೆಂದು. ಇರಲಿ. ಇಷ್ಟೆಲ್ಲಾ ಹೇಳಿದ ಮೇಲೆ ನನ್ನೆರೆಡು ಮಕ್ಕಳ ಬಗ್ಗೆ ಹೇಳಲೇಬೇಕು.&lt;br /&gt;&lt;br /&gt;ಸೂಸನ್ ಮತ್ತು ಜುಡಿತ್ ಎಂಬ ಎರಡು ಹೆಣ್ಣುಮಕ್ಕಳು ನನಗೆ. ಸೂಸನ್ ನನ್ನ ಮತ್ತು ಶೇಕ್ಷಪೀಯರನ ಮೊದಲ ಮಿಲನದಲ್ಲಿಯೇ ಹುಟ್ಟಿದಾಕೆ. ಸೂಸನ್ ಜಾಣೆ, ಬುದ್ಧಿವಂತೆ, ಲೋಕಜ್ಞಾನವಿದ್ದಾಕೆ. ವ್ಯವಹಾರದಲ್ಲಿ ತುಂಬಾ ಚುರುಕು. ಅವಳನ್ನು ನೋಡಿದರೆ ಏನೋ ಒಂಥರಾ ಖುಶಿ ನನಗೆ! ಜುಡಿತ್ ನನ್ನ ಕಿರಿಮಗಳು: ಒರಟು, ಒಡ್ಡಿ, ಪೆದ್ದಿ. ಅವಳಕ್ಕನಿಗಿಂತ ಎರಡು ವರ್ಷ ಚಿಕ್ಕವಳು. ಆದರೆ ಇವಳೇ ಅಕ್ಕನಂತೆ ಕಾಣುತ್ತಿದ್ದಳು. ಅವಳಿಗೆ ಬರೆಯುವ ಸಾಮರ್ಥ್ಯವಿದ್ದರೂ ಬರೆಯಲಿಲ್ಲ. ಏಕೆಂದರೆ ಬರೀತಾ ಬರೀತಾನೆ ಅವರಪ್ಪ ಕುಟುಂಬದಿಂದ ಹೊರಗೆ ಉಳಿದುಬಿಟ್ಟ ಎನ್ನುವದು ಅವಳ ಅಭಿಪ್ರಾಯವಾಗಿತ್ತು. ಪಾಪ, ಅವಳಿಗೆ ಜೀವನ ಅಷ್ಟೊಂದು ಸುಖಕರವಾಗಿರಲಿಲ್ಲ. ಮೂವತ್ತೊಂದರವರೆಗೆ ಅವಳು ಮದುವೆಯಾಗಲಿಲ್ಲ. ಆದರೆ ಮದುವೆಯಾದಾಗ ಅವಳ ಆಯ್ಕೆ ಅಷ್ಟು ಸರಿಯಾಗಿರಲಿಲ್ಲ. ಸ್ವಲ್ಪೇ ದಿನದಲ್ಲಿ ಆ ಮದುವೆ ಮುರಿದುಬಿತ್ತು. ಹೀಗಾಯ್ತಲ್ಲಾ ಅಂತಾ ನಮಗೆಲ್ಲಾ ತುಂಬಾ ಬೇಜಾರಾಯಿತು. &lt;br /&gt;&lt;br /&gt;ಮಿ. ಶೇಕ್ಷಪೀಯರ್ ತನ್ನ ಕೊನೆ ದಿಗಳನ್ನು ಕಳೆಯಲು ಸ್ಟ್ರ್ಯಾಟ್ ಫೋರ್ಡಿಗೆ ಬಂದ. ಕೈಯಲ್ಲಿ ಸಾಕಷ್ಟು ಹಣವಿತ್ತು. ಅದು ಅವನು ಬರೆದಿದ್ದುದರಿಂದ ಗಳಿಸಿದ್ದು. ಕುಡಿಯುವದನ್ನು ಹೇಗೋ ಬಿಟ್ಟಿದ್ದ. ಆದರೆ ಊರಿಗೆ ವಾಪಾಸಾದ ಮೇಲೆ ಮತ್ತೆ ಕುಡಿಯತೊಡಗಿದ. ಬಹುಶಃ, ತನ್ನ ಎರಡನೇ ಮಗಳು ಜುಡಿತ್ ಳ ಬಾಳು ಮೂರಾಬಟ್ಟಿಯಾಗಿದ್ದು ಇದಕ್ಕೆ ನೆಪವಾಗಿರಬೇಕು. ನೆಪವಷ್ಟೆ. ಕಾರಣವಲ್ಲ. ಹಾಗಂತ ಅವನ ಆರೋಗ್ಯದಲ್ಲಿ ಹೇಳಿಕೊಳ್ಳುವಂತ ವ್ಯತ್ಯಾಸವೇನೂ ಆಗಿರಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲ ಬಿಟ್ಟುಹೋದ. ನಾವ್ಯಾರು ಅವನು ಇಷ್ಟು ಬೇಗ ಸಾಯುತ್ತಾನೆಂದು ಎಣಿಸಿರಲಿಲ್ಲ. ಆದರೆ ಸಾಯುವ ಮುನ್ನ ತಾನು ಮಾಡಬೇಕಾದ ಜವಾಬ್ದಾರಿಗಳನ್ನೆಲ್ಲ ಮುಗಿಸಿದ್ದ. ಏಪ್ರೀಲ್ 23, 1616 - ಅದು ಅವನ ಐವತ್ತೆರಡನೇ ಹುಟ್ಟುಹಬ್ಬ. ಅಂದೇ ಅವನು ಸತ್ತುಹೋದ. &lt;br /&gt;&lt;br /&gt;Dead Mr. Shakespeare&lt;br /&gt;My bad husband.&lt;br /&gt;The darling.&lt;br /&gt;&lt;br /&gt;ನನ್ನ ತೋಳಲ್ಲಿ ಸಾಯುವ ಮೊದಲು  ಮಿಸ್ಟರ್ ಶೇಕ್ಷಪೀಯರ್ ವಿಲ್ ನಲ್ಲಿ ಕೊನೆಯ ವಾಕ್ಯವೊಂದನ್ನು ಸೇರಿಸಿದ: “I gave unto my wife my second-best bed with the furniture.” ಹಾಗಾದರೆ ಆ ಇನ್ನೊಂದು ಹಾಸಿಗೆಯ, the best bedನ ಕತೆಯಲ್ಲಿ ಬರುವ ಪಾತ್ರ ಯಾವುದು? ಅವನ ಗೆಳೆಯನೇ? ಅಥವಾ ನನಗೂ ನಿಮಗೂ ಗೊತ್ತಿಲ್ಲದ ಇನ್ನೊಂದು ಹೆಣ್ಣಿನದೇ? &lt;br /&gt;&lt;br /&gt;ಉತ್ತರ ಹುಡುಕುತ್ತಿದ್ದೇನೆ............!&lt;br /&gt;&lt;br /&gt;-ಉದಯ್ ಇಟಗಿ&lt;br /&gt;ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು. &lt;br /&gt;ಚಿತ್ರ ಕೃಪೆ: ಅಂತರ್ಜಾಲ&lt;strong&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-4208376640079169351?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/4208376640079169351/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/11/blog-post.html#comment-form' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/4208376640079169351'/><link rel='self' type='application/atom+xml' href='http://www.blogger.com/feeds/2802103225554897449/posts/default/4208376640079169351'/><link rel='alternate' type='text/html' href='http://bisilahani.blogspot.com/2010/11/blog-post.html' title='ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಕೊನೆಯ ಭಾಗ)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_FiNlrLfTRP0/TNhNu8b96vI/AAAAAAAAAW0/-YUwN4Z5JHA/s72-c/images.jpg' height='72' width='72'/><thr:total>3</thr:total></entry><entry><id>tag:blogger.com,1999:blog-2802103225554897449.post-8154001901158555426</id><published>2010-10-26T22:43:00.002+01:00</published><updated>2010-10-26T22:53:05.599+01:00</updated><title type='text'>ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-3)</title><content type='html'>ಶೇಕ್ಷಪೀಯರ್ ತಿಕ್ಕಲಷ್ಟೇ ಅಲ್ಲ ಮಹಾನ್ ಸುಳ್ಳುಗಾರ ಕೂಡ ಆಗಿದ್ದ. ಬಾಯಿ ಬಿಟ್ಟರೆ ಸಾಕು: ಬರೀ ಸುಳ್ಳು, ಕಲ್ಪನೆ, ಭ್ರಮೆ. ನನ್ನ ಗಂಡ ಒಬ್ಬನೆ ಅಲ್ಲ: ಪ್ರಪಂಚದ ಎಲ್ಲ ಕವಿಗಳು, ಲೇಖಕರೆಲ್ಲಾ ಮಹಾನ್ ಸುಳ್ಳುಗಾರರೇ! ಹಾಗೆಂದೇ ಅವರಿಗೆ ದೊಡ್ಡ ದೊಡ್ಡ ಕೃತಿಗಳನ್ನು ರಚಿಸಲು ಸಾಧ್ಯವಾಗೋದು. ಅವೆಲ್ಲಾ ಬರೀ ಕಲ್ಪನೆ, ಭ್ರಮೆ, ಸುಳ್ಳಿನ ಕಂತೆಗಳು ಅಷ್ಟೇ. ಇನ್ನು ಈ ಜನಾನೋ ಮೊದಲೇ ಅರೆಹುಚ್ಚರು. ಕೇಳಬೇಕಲ್ಲ? ಅವನ್ನೆಲ್ಲಾ ಸತ್ಯ ಅನ್ಕೊಂಡು ಮುಗಿಬಿದ್ದು ಓದುತ್ತಾರೆ. ಓದಿ ಓದಿ ಪೂರ್ಣ ಹುಚ್ಚರಾಗುತ್ತಾರೆ. ಅವರು ಏನೋ ಬರೀತಾರೆ. ಇವರೇನೋ ಓದ್ತಾರೆ. ಓದಿದ ಮೇಲೆ ಸುಮ್ಮನಿರದೆ ಇದು ಚನ್ನಾಗಿದೆ, ಇದನ್ನೋದು ಅಂತಾ ಮತ್ತೊಬ್ಬರಿಗೆ ಹೇಳೋದು. ಅವರೂ ಹುಚ್ಚರಾಗೋದಲ್ಲದೆ ಬೇರೆದವರನ್ನೂ ಹುಚ್ಚರನ್ನಾಗಿ ಮಾಡ್ತಾರೆ! ಅದಕ್ಕೆ ನಾನ್ಯಾವತ್ತೂ ಯಾವ ಪುಸ್ತಕಾನೂ ಓದೋಕೆ ಹೋಗಲಿಲ್ಲ ಬೈಬಲ್ ಒಂದನ್ನು ಬಿಟ್ಟು! ಎಲ್ಲೀವರೆಗೂ ಓದೋರು ಇರ್ತಾರೋ ಅಲ್ಲೀವರೆಗೂ ಇವರು ಬರೀತಾನೆ ಇರ್ತಾರೆ. ಬರೆದು ಬರೆದು ಗುಡ್ಡೆ ಹಾಕ್ತಾರೆ. ಕೊನೆಗೆ ಒಂದಿಷ್ಟು ದುಡ್ಡು, ಬಹುಮಾನ ಅಂತಾ ತಗೊಳ್ತಾರೆ. ಅದು ಬಿಟ್ರೆ ಮತ್ಯಾವ ಮೂರು ಕಾಸಿನ ಪ್ರಯೋಜನಾನೂ ಇಲ್ಲ ಅವರಿಂದ! ಸುಳ್ಳುಗಾರರಿಗೆ ತಾನೆ ಈ ಜಗತ್ತಿನಲ್ಲಿ ಗೌರವ, ಮನ್ನಣೆ, ಬಹುಮಾನ ಎಲ್ಲಾ! ಇರಲಿ. ಮಿಸ್ಟರ್ ಶೇಕ್ಷಪೀಯರ್ ನನ್ನೊಂದಿಗೆ ಮಾತನಾಡುವಾಗಲೂ ಕೂಡ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದ. ಒಮ್ಮೆ “ಭಾಳಾ ದೊಡ್ದ ಛಾನ್ಸ್ ಕಣೇ, ಸರ್ ಫ್ರಾನ್ಸಿಸ್ ಜೊತೆ ಸಮುದ್ರಯಾನ ಹೋಗಿದ್ದೆ” ಅಂದ. ಪಾಪ ಅಂಥ ಧೈರ್ಯ ಎಲ್ಲಿಂದ ಬರಬೇಕು ಅಂದುಕೊಂಡೆ. ಹನಿ ರಕ್ತ ಕಂಡರೂ ಗಡ ಗಡ ನಡುಗುವವನು ಅವನು. ಒಂದು ಸಲವಂತೂ ನಾನು ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡದ್ದು ಕಂಡು ಕುಸಿದು ಬಿದ್ದಿದ್ದ. ಇಂಥವನು ಸಮುದ್ರಯಾನ ಹೋದಾನೆ? “ಬೋಹಿಮಿಯಾದಿಂದ ನನ್ನ ಕಡಲಯಾನ ಶುರು” ಅಂದಿದ್ದ. ಬೋಹಿಮಿಯಾದಲ್ಲಿ ಕಡಲತೀರವೇ ಇರಲಿಲ್ಲ! ಅಲ್ಲಿಂದ ಟರ್ಕಿಯ ಅಲಿಪ್ಟೋ ಸೇರುತ್ತೇನೆಂದ. ಅಲ್ಲಿ ಬಂದರೇ ಇರಲಿಲ್ಲ! ಬರೀ ಸುಳ್ಳು! ವಿಲ್ಮ್ ಕೋಟ್ ಅನ್ನೋ ಊರಿಗೆ ಹೋಗಿದ್ದರೆ ಬಿಡ್ ಫೋರ್ಡ್ ಗೆ ಹೋಗಿದ್ದೆ ಅನ್ನುತ್ತಿದ್ದ. ಬಿಡ್ ಫೋರ್ಡ್ ಗೆ ಹೋಗಿದ್ದರೆ ಮತ್ತೆಲ್ಲಿಗೊ ಹೋಗಿದ್ದೆ ಅನ್ನುತ್ತಿದ್ದ. ಅವನು ಮಾತನಾಡುತ್ತಿದ್ದುದೇ ಹಾಗೆ. ಅವನು ಹೇಳುವದನ್ನೆಲ್ಲಾ ನೀವು ನಂಬಿದರೆ ಸಾಕು, ಅದೇ ಅವನಿಗೆ ಖುಷಿ!&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_FiNlrLfTRP0/TMdMv0dIefI/AAAAAAAAAWs/eEHUL5_3TYo/s1600/images.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 144px; height: 196px;" src="http://1.bp.blogspot.com/_FiNlrLfTRP0/TMdMv0dIefI/AAAAAAAAAWs/eEHUL5_3TYo/s320/images.jpg" border="0" alt=""id="BLOGGER_PHOTO_ID_5532475051666340338" /&gt;&lt;/a&gt;&lt;br /&gt;&lt;br /&gt;                                  &lt;strong&gt; ಮಿಸೆಸ್ ಶೇಕ್ಷಪೀಯರ್&lt;/strong&gt;&lt;br /&gt;&lt;br /&gt;&lt;br /&gt;ಈಗ ಮತ್ತೆ ಮೂಲಕಥೆಗೆ ಮರಳೋಣ. ಅದು ಮಿಸ್ಟರ್ ಶೇಕ್ಷಪೀಯರ್ ಬರೆಯುತ್ತಿದ್ದ ರೀತಿ. ಅವನು ಬರೆಯುತ್ತಿದ್ದುದು ಬಾತುಕೋಳಿಯ ಗರಿಯಿಂದ. ಅವನ ಪಕ್ಕದಲ್ಲಿ ಸದಾ ಒಂದು ಮಸಿ ಬಾಟಲಿ ಮತ್ತು ಒಂದಿಷ್ಟು ಖಾಲಿ ಹಾಳೆಗಳು ಇರುತ್ತಿದ್ದವು. ಇವೇ ಅವನ ಸಂಗಾತಿಗಳು. ಅವನಿಗೆ ಯಾವಾಗ ಬರೆಯುವ ಮೂಡು ಬರುತ್ತಿತ್ತೋ ಹೇಳಲಿಕ್ಕೆ ಬರುತ್ತಿರಲಿಲ್ಲ. ಮೂಡು ಬಂದ ಕೂಡಲೇ ಗರಿಯನ್ನು ಮಸಿ ಬಾಟಲಿಯಲ್ಲಿ ಅದ್ದಿ ಹಾಳೆಯ ಮೇಲಿಡುತ್ತಿದ್ದಂತೆ ಪದಗಳು ತಾವೇ ತಾವಾಗಿ ಕುಣಿಯುತ್ತಾ ಸಾಗುತ್ತಿದ್ದವು. ಅವ ಹಾಳೆಯ ಎರಡೂ ಮಗ್ಗಲಿನಲ್ಲಿ ಬರೆಯುತ್ತಿದ್ದ: ಒಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು, ಇನ್ನೊಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು. ಹಾಂ, ಅದು ಅವ ಹಾಗೆ ಬರೆಯುತ್ತಿದ್ದುದು ಎಷ್ಟು ಬರೆದೆನೆಂದು ಲೆಕ್ಕ ಇಡಲಿಕ್ಕೆ. ಪ್ರತಿ ಹಾಳೆಯನ್ನು ನಾಲ್ಕು ಕಾಲಂಗಳಾಗಿ ವಿಂಗಡಿಸುತ್ತಿದ್ದ. ಎಡಗಡೆ ಪಾತ್ರದ ಹೆಸರು. ಬಲಗಡೆ ರಂಗದ ಮೇಲೆ ಬರೋದನ್ನು ಹಾಗೂ ಹೋಗೋದನ್ನು ನಮೂದಿಸುತ್ತಿದ್ದ. ಸಂಭಾಷಣೆಯನ್ನು ಮಧ್ಯದಲ್ಲಿ ಬರೆಯುತ್ತಿದ್ದ. ಬರೆಯಲು ಅವನಿಗೆ ಒಂದು ನಿರ್ಧಿಷ್ಟ ಸಮಯ ಅಂತಾ ಇರಲಿಲ್ಲ. ಒಂದೊಂದು ಸಾರಿ ಮಧ್ಯರಾತ್ರಿಯವರೆಗೂ ಬರೆಯುತ್ತಿದ್ದ. ಬರೆದು ಬರೆದು ಸುಸ್ತಾಗಿ ಹಾಳೆಗಳನ್ನು ಅಲ್ಲೇ ಬಿಟ್ಟು ಹಾಗೆ ಮಲಗಿಬಿಡುತ್ತಿದ್ದ. ಇಲ್ಲವೇ ಒಂದೊಂದು ಸಾರಿ ಮಧ್ಯರಾತ್ರಿಯಲ್ಲಿ ಎದ್ದು ಬರೆಯುತ್ತಿದ್ದ. ಒಮ್ಮೊಮ್ಮೆ ನನ್ನೊಂದಿಗೆ ಮಾತಾಡುತ್ತಿದ್ದಂತೆ ಒಮ್ಮೆಲೆ ಏನೋ ಜ್ಞಾಪಿಸಿಕೊಂಡವನಂತೆ ಎದ್ದುಹೋಗಿ ಬರೆದಿಟ್ಟು ಬರುತ್ತಿದ್ದ. ಆಗೆಲ್ಲಾ ನಾನು ಸಿಡಿಮಿಡಿಗೊಂಡರೆ “ಶ್! ಬರಹ ಸೆಕ್ಸ್ ಇದ್ದಂತೆ. ಸೆಕ್ಸ್ ನ್ನು ಹೇಗೆ ಮೂಡು ಬಂದಾಗ ತೆಗೆದುಕೊಳ್ಳುತ್ತೇವೆಯೋ ಹಾಗೆ ಮೂಡು ಬಂದಾಗ ಬರೆಯುವದನ್ನು ಬರೆದುಬಿಡಬೇಕು. ಹಾಗೆಲ್ಲಾ ಅದನ್ನು ತಡೆಯಬಾರದು” ಎನ್ನುತ್ತಿದ್ದ. “ಅದಕ್ಕೆ ಅಲ್ವಾ ಮಾರಾಯ? ನಿನಗೆ ಮೂಡು ಬಂದಿತೆಂದು ತಡೆಯದೆ ನನ್ನನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದು” ಎಂದು ಛೇಡಿಸುತ್ತಾ ಅವನ ತಲೆಯ ಮೇಲೊಂದು ಮೊಟಕಿದ್ದೆ. ಅವನು ನಗುತ್ತಾ “ಹೇ...ಯೂ ನಾಟಿ” ಎಂದು ನನ್ನ ಕೆನ್ನೆ ಹಿಂಡಿದ್ದ. ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು “ಅಯ್ಯೋ, ದೇವರೆ! ಏನಾಯಿತು ಇವನಿಗೆ?” ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ “ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ.......ಬರೆದುಬಿಡುತ್ತೇನೆ......ಸುಮ್ಮನಿರು” ಎಂದು ಬರೆದಾದ ಮೇಲೆ “ನಾನೊಬ್ಬನೇ ಅಲ್ಲ. ಬರಹಗಾರರೆಲ್ಲಾ ಹೀಗೆ ಬರೆಯೋದು.......” ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ “ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ?” ಎಂದು ಕೇಳಿದ್ದೆ. ಅದಕ್ಕವನು ಏನೂ ಉತ್ತರಿಸಲಿಲ್ಲ! &lt;br /&gt;&lt;br /&gt;&lt;br /&gt;&lt;br /&gt;ಮೊದಲೇ ಹೇಳಿದಂಗೆ ನಾನ್ಯಾವತ್ತೂ ಏನನ್ನೂ ಓದಿದವಳಲ್ಲ ಬೈಬಲ್ ವೊಂದನ್ನು ಬಿಟ್ಟು. ಇನ್ನು ಇವನು ಬರೆದ ನಾಟಕಗಳನ್ನು ಹೇಗೆ ಓದಲಿ? ಒಮ್ಮೊಮ್ಮೆ ಅವನೇ “ಓದೆಂದು” ತಾನು ಬರೆದದ್ದನ್ನು ನನ್ನ ಮುಂದಿಡುತ್ತಿದ್ದ. ಇಲ್ಲವೇ ಬಲವಂತವಾಗಿ ಅವನೇ ಓದಿ ಹೇಳುತ್ತಿದ್ದ. ನಾನು “ಸಾಕು ಮಾರಾಯ, ತಲೆನೋವು” ಅಂತಿದ್ದೆ. ಹಾಗೆ ನೋಡಿದರೆ ನನಗೇನೂ ತಲೆನೋವಿರಲಿಲ್ಲ. ಆದರೆ ಇದ್ಯಾವುದು ನನ್ನ ಕಿವಿಗೆ ಬೇಡವಾಗಿರುತ್ತಿತ್ತು ಅಷ್ಟೆ. ಒಂದೊಂದು ಸಾರಿ ಅನಿಸೋದು; ನಾನು ಶೇಕ್ಷಪೀಯರನಿಗೆ ಸರಿಯಾದ ಜೋಡಿ ಅಲ್ವೇನೋ, ಸಮಾನ ಅಭಿರುಚಿಯ ಹೆಂಡತಿ ಆಗಲಿಲ್ವೇನೋ ಅಂತ. ಪಾಪ, ಶೇಕ್ಷಪೀಯರ್! I pity on him!&lt;br /&gt;&lt;br /&gt;&lt;br /&gt;&lt;br /&gt;ನನಗಿನ್ನೂ ಚನ್ನಾಗಿ ನೆನಪಿದೆ. ಆವತ್ತು ರಾತ್ರಿ ಊಟವಾದ ಮೇಲೆ ನಾನು ಅಡಿಗೆ ಮನೆಯಲ್ಲಿ ಸಾಮಾನುಗಳನ್ನೆಲ್ಲ ಎತ್ತಿಡುತ್ತಿದ್ದೆ. ಅವ ಪಡಸಾಲೆಯಲ್ಲಿ ತಾನು ಬರೆದ ಪ್ರಸಿದ್ಧ ಸಾನೆಟ್ ಅದೇ....“ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? ಛೇ, ಅದು ಸಲ್ಲ. ಅದಕ್ಕಿಂತ ಸುಂದರ ನೀನು!” ಎಂದು ಗುನುಗುನಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ನನಗೆ ಥಟ್ಟನೆ ಇದನ್ನೆಲ್ಲೋ ಕೇಳಿದಂತಿದೆಯಲ್ಲ ಅಂತಾ ಅನಿಸಿತು. ಹಾಂ, ನೆನಪಾಯಿತು ಆವತ್ತು ಲಂಡನ್ ಸೇತುವೆಯ ಮೇಲೆ ಇದನ್ನೆ ತಾನೆ ಅವ ನನಗೆ ಹೇಳಿದ್ದು? ಅಂದರೆ....ಅಂದರೆ ಇದು ನನ್ನ ಕುರಿತು ಬರೆದಿದ್ದು.  ಪರ್ವಾಗಿಲ್ವೆ! ನನ್ನ ಗಂಡ ಮಿಸ್ಟರ್ ಸ್ಮೈಲ್ ನನ್ನ ಮೇಲೂ ಒಂದು ಸಾನೆಟ್ ಬರೆದಿದ್ದಾನೆ. ಶಹಭಾಷ್! ನೋಡಿಯೇ ಬಿಡೋಣ ಹೇಗಿದೆ? ಅಂತಾ ಕುತೂಹಲಕ್ಕೆಂದು ಸುಮ್ಮನೆ ಆಲಿಸುತ್ತಾ ಹೋದೆ. ಅದರಲ್ಲಿ ಅವ ಏನೇನೋ ಹೇಳಿದ್ದ. ಆದರೆ ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು...... ತಪ್ಪಾಗಿದ್ದರೆ ಕ್ಷಮಿಸಿ........ಏಕೆಂದರೆ ನನಗೆ ಕಾವ್ಯದ ಬಗ್ಗೆ ಏನೂ ತಿಳಿಯದು. ಹೂಂ...... ಅವ ಹೇಳಿದ್ದ: ಬೇಸಿಗೆಯ ಹಗಲಿನ ಸೌಂದರ್ಯ ಕೂಡ ಕ್ಷಣಿಕವಾದುದು..... ಏಕೆಂದರೆ ಬೇಸಿಗೆಯ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತ ಒಮ್ಮೊಮ್ಮೆ ಹೆಚ್ಚು ಬಿಸಿಯಾಗುತ್ತಾನೆ...... ಒಮ್ಮೊಮ್ಮೆ ತಣ್ಣಗಾಗುತ್ತಾನೆ....... ಒಮ್ಮೊಮ್ಮೆ ತನ್ನ ಹೊಂಬಣ್ಣ ಕಳೆದುಕೊಂಡು ಕಳೆಗುಂದುತ್ತಾನೆ..... ಅವನಲ್ಲಿ ಏರುಪೇರು ಇರುತ್ತೆ. ಆದರೆ ನಿನ್ನ ಸೌದರ್ಯ ಹಾಗಲ್ಲ....... ಅದಕ್ಕಿಂತ ಹೆಚ್ಚಿನದು...........ಸದಾ ಒಂದೇ ತೆರನಾಗಿರುವಂಥದ್ದು.........ಶಾಶ್ವತವಾಗಿರುವಂಥದ್ದು......... ನಶ್ವರದ ವಸ್ತುಗಳಿಗೆ ನಿನ್ನ ಹೋಲಿಸುವದು ಬೇಡ.......ಹಾಗೆಂದೇ ನಿನ್ನನ್ನು ಹಾಗೂ ನಿನ್ನ ಸೌಂದರ್ಯವನ್ನು ಈ ಕವನದಲ್ಲಿ ಹಿಡಿದಿಡುತ್ತಿದ್ದೇನೆ......ಅದು ನಿನ್ನ ಸೌಂದರ್ಯದಂತೆ ಈ ಕವನವೂ ಕೂಡ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ......ಅಬ್ಬಾ ಏನು ವರ್ಣನೆ? ಏನು ಆ ಪದಗಳ ಜೋಡಣೆ? ಅಬ್ಬಬ್ಬಾ ಹೇಳಲಿಕ್ಕಾಗದು. ಯಾವತ್ತೂ ಯಾವ ಕವನಗಳನ್ನೂ ಓದದ ನನ್ನಂಥವಳಿಗೂ ಕೂಡ ಆ ಸಾನೆಟ್ ಇಷ್ಟವಾಯಿತೆನ್ನಿ. ಅದೇನೋ ಹೇಳ್ತಾರಲ್ಲ......ಕಚಗುಳಿ.....ಕಚಗುಳಿ......ಹಾಂ, ಅದೇ.....ಕಚಗುಳಿ ಇಟ್ಟ ಅನುಭವವಾಯಿತು ನನಗೆ ಅದನ್ನು ಓದಿದ ಮೇಲೆ. ಒಂದು ಕ್ಷಣ ನನ್ನ ಗಂಡನ ಬಗ್ಗೆ ಅಭಿಮಾನ ಮೂಡಿತು. ಆದರೆ ಮರುಕ್ಷಣ ಅನುಮಾನ ಕಾಡಿತು. ಇದು.....ಇದು ನಿಜಕ್ಕೂ ನನ್ನ ಕುರಿತು ಬರೆದಿದ್ದೆ? ಇಲ್ಲ.......ಇಲ್ಲ ಇರಲಿಕ್ಕಿಲ್ಲ......ಏಕೆಂದರೆ ನಾನು ಅವ ಹೇಳುವಷ್ಟು ಸುಂದರವಾಗಿಲ್ಲ.....ಮೇಲಾಗಿ ನಾನು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ಡವಳು...... ಅವನ ಕಣ್ಣಿಗೆ ಹೇಗೆ ತಾನೆ ರೂಪವಂತೆಯಾಗಿ ಕಂಡೇನು? ಹಾಗಾದರೆ ಇನ್ಯಾರು? ಅಂದರೆ..... ಅಂದರೆ ಅವನ ಜೀವನದಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿದಿಯೆ? ಅವನದನ್ನು ನನಗೆ ಗೊತ್ತಿಲ್ಲದಂತೆ ನಿಭಾಯಿಸುತ್ತಿದ್ದಾನೆಯೇ? ಏನಾದರಾಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದುಕೊಂಡು ಕೆಲಸ ಮುಗಿಸಿ ಅವನಿರುವಲ್ಲಿಗೆ ಬಂದೆ. ಕವಿ ಇನ್ನೂ ಅದೇ ಸಾನೆಟ್ ನ್ನು ಗುನುಗುನಿಸುತ್ತಲೇ ಇದ್ದ. ಅರೆ ಕ್ಷಣ ತಡೆದು “ಹೇಳು.... ಆವತ್ತು ಲಂಡನ್ ಸೇತುವೆಯ ಮೇಲೆ ‘ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?’ ಎಂದು ನನ್ನ ಕೇಳಿದೆಯೆಲ್ಲ ಅದೆ ತಾನೆ ಈ ಸಾನೆಟ್? ಆದರೆ ಇದರಲ್ಲಿರುವ ಆ ‘ಬೇಸಿಗೆಯ ಹಗಲು’ ನಾನಲ್ಲ ಅಂತಾ ನನಗೆ ಚನ್ನಾಗಿ ಗೊತ್ತು. ಅದು ಇನ್ಯಾವಳನ್ನೋ ಕುರಿತು ಬರೆದಿದ್ದು. ಹೇಳು ಯಾರವಳು?” ಎಂದು ನೇರವಾಗಿ ಕೇಳಿದೆ. ಕವಿ ಕೆಮ್ಮತೊಡಗಿದ. ಗಾಳಿಯಲ್ಲಿ ತನ್ನೆರೆಡೂ ಕೈ ಬೀಸುತ್ತಾ ಏನೋ ಹೇಳಲು ಹೊರಟ. ಉಸಿರೇ ಹೊರಡುತ್ತಿಲ್ಲ. ಮುಖವೆಲ್ಲ ಕೆಂಪಾಯಿತು. ಕೊನೆಗೂ ಸಾವರಿಸಿಕೊಂಡು ನಾಚುತ್ತಾ ಉಸುರಿದ “ಅದು.......ಅದು.....‘ಅವಳ’ಲ್ಲ. ‘ಅವನು’ ” &lt;br /&gt;&lt;br /&gt;&lt;br /&gt;-ಉದಯ್ ಇಟಗಿ&lt;br /&gt;&lt;br /&gt;ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು. &lt;br /&gt;&lt;br /&gt;ಚಿತ್ರ ಕೃಪೆ: ಅಂತರ್ಜಾಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-8154001901158555426?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/8154001901158555426/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/10/3.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/8154001901158555426'/><link rel='self' type='application/atom+xml' href='http://www.blogger.com/feeds/2802103225554897449/posts/default/8154001901158555426'/><link rel='alternate' type='text/html' href='http://bisilahani.blogspot.com/2010/10/3.html' title='ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-3)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_FiNlrLfTRP0/TMdMv0dIefI/AAAAAAAAAWs/eEHUL5_3TYo/s72-c/images.jpg' height='72' width='72'/><thr:total>1</thr:total></entry><entry><id>tag:blogger.com,1999:blog-2802103225554897449.post-7361028854385387983</id><published>2010-10-21T15:23:00.005+01:00</published><updated>2010-10-22T12:20:44.120+01:00</updated><title type='text'>ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-2)</title><content type='html'>&lt;a href="http://4.bp.blogspot.com/_FiNlrLfTRP0/TMBPjrYjAqI/AAAAAAAAAVs/FXnwTquypGE/s1600/index.jpg"&gt;&lt;img style="float:left; margin:0 10px 10px 0;cursor:pointer; cursor:hand;width: 162px; height: 196px;" src="http://4.bp.blogspot.com/_FiNlrLfTRP0/TMBPjrYjAqI/AAAAAAAAAVs/FXnwTquypGE/s320/index.jpg" border="0" alt=""id="BLOGGER_PHOTO_ID_5530507816770667170" /&gt;&lt;/a&gt;&lt;br /&gt;ಆವತ್ತು ಮಿಸ್ಟರ್ ಶೇಕ್ಷಪೀಯರ್ ಲಂಡನ್ನಿಗೆ ಹೊರಟ ದಿನ. ಅವ ಕೆಲಸ ಹುಡುಕಿ ಹೊರಟಿದ್ದ. ಇದ್ದಬಿದ್ದ ದನದ ವ್ಯಾಪಾರದಲ್ಲಿ ಇವನಪ್ಪ ಕೈ ಸುಟ್ಟುಕೊಂಡು ಬರಿಗೈ ದಾಸನಾಗಿದ್ದ. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಸಹಜವಾಗಿ ಮನೆಯ ಜವಾಬ್ದಾರಿ ನನ್ನ ಗಂಡನ ಮೇಲೂ ಬಿತ್ತು. ಸರಿ, ಲಂಡನ್ನಿಗೆ ಹೊರಟು ನಿಂತ.  ಹೊರಡುವಾಗ ಕಣ್ಣ ತುಂಬ ಭರವಸೆ, ಕನಸು. ಹೋಗುವಾಗ ಹಲ್ಲು ಕಚ್ಚಿ ಹೇಳಿದ: “ಬರೆಯುತ್ತೇನೆ.”  ನಾನು ಪತ್ರ ಬರೆಯುತ್ತಾನೇನೋ ಅಂದುಕೊಂಡೆ! ಆದರೆ ಅವ ಬರೆದಿದ್ದು ಮೂವತ್ತೆಂಟು ನಾಟಕಗಳನ್ನು, ನೂರಾ ಐವತ್ನಾಲ್ಕು ಸುನಿತಗಳನ್ನು ಹಾಗೂ ಎರಡು ಉದ್ದದ ಅಶ್ಲೀಲ ಪದ್ಯಗಳನ್ನು. &lt;br /&gt;&lt;br /&gt;ಅವನು ಹೋಗಿ ಮೂರ್ನಾಲ್ಕು ತಿಂಗಳಾದ ಮೇಲೆ ಲಂಡನ್ನಿನಲ್ಲಿ ಇವನೇನು ಕಡಿಯುತ್ತಾನೆ ನೋಡಿಕೊಂಡು ಬನ್ನಿ ಅಂತಾ ತಮ್ಮಂದಿರನ್ನು ಅಟ್ಟಿದೆ. ಅವರು ಹೋಗಿ ಬಂದು “ಕೆಲಸವಂತೂ ಇದೆ” ಅಂದರು. ಸದಾ ರಂಗಶಾಲೆಯ ಬಾಗಿಲಲ್ಲಿ ನಿಂತಿರುತ್ತಾನೆ; ಕುದರೆಗಳನ್ನು ಕಾಯುತ್ತಾನೆ ಅಂದರು. ಅದರಲ್ಲೇನು ದುಡ್ಡು ಸಿಗುತ್ತೆ ಅಂದುಕೊಂಡೆ. ಇಲ್ಲ, ದಿನೆ ದಿನೆ ಶೇಕ್ಷಪೀಯರನ ವ್ಯಾಪಾರ ಕುದುರುತ್ತಾ ಹೋಯಿತು. ಮುಂದೆ ಸ್ವಲ್ಪೇ ದಿನದಲ್ಲಿ ಅವನ ಕೈ ಕೆಳಗೆ ಹತ್ತಾರು ಜನ ಹುಡುಗರು ಕೆಲಸ ಮಾಡಲು ಶುರು ಮಾಡಿದರು!&lt;br /&gt;&lt;br /&gt;ಮತ್ತೆ ಊರಿಗೆ ಬರುವ ಹೊತ್ತಿಗೆ ಮಿಸ್ಟರ್ ಶೇಕ್ಷಪೀಯರ್ ಗೆ ರಂಗಶಾಲೆಯ ಒಳಕ್ಕೆ ಬಡ್ತಿ ಸಿಕ್ಕಿತ್ತು. “ನಾನೀಗ prompter’s assistant”  ಅಂದ. ಅಥವಾ assistant prompter ಅಂದನೋ? ಸಧ್ಯ, ಕುದರೆ ಕಾಯುವ ಕೆಲಸಕ್ಕಿಂತ ಇದು ವಾಸಿ. “ಏನು ಕೆಲಸ ಅದು?” ಎಂದು ಕೇಳಿದೆ. “ಅದೇ.... ಸ್ಟೇಜಿನ ಹಿಂದೆ ನಿಂತು ನಟರಿಗೆ ಅವರ ಮಾತುಗಳನ್ನು ಹೇಳಿಕೊಡುವದು” ಅಂದ!&lt;br /&gt;&lt;br /&gt;ಇದಾಗಿ ಒಂದು ವರ್ಷಕ್ಕೆ ಅವನಿಂದ ಪತ್ರವೊಂದು ಬಂತು. ಅದರಲ್ಲಿ ಬರೀತಿದೇನಿ ಅಂದ. ಕಾಮಿಡಿ ಅಂದ. ಟ್ರ್ಯಾಜಿಡಿ ಅಂದ. ಹಿಸ್ಟರಿ ಅಂದ. ಟ್ರ್ಯಾಜಿಕ್-ಕಾಮಿಡಿ ಅಂದ. ಕಾಮಿಕ್-ಟ್ರ್ಯಾಜಿಡಿ ಅಂದ. ಇನ್ನೂ ಏನೇನೋ ಅಂದ. ಏನಾದ್ರು ಬರ್ಕೋಂಡು ಸಾಯ್ಲಿ! ಇದರಲ್ಲಾದರು ದುಡ್ಡುಗಿಡ್ಡು ಬರುತ್ತಾ? ಅಂದುಕೊಂಡೆ. ಆದರೆ ಪತ್ರದಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ! ಕೊನೆಯಲ್ಲಿ ಲಂಡನ್ನಿಗೆ ಬಾ ಎಂದು ಬರೆದಿದ್ದ. &lt;br /&gt;&lt;br /&gt;ಒಂದು ಬೇಸಿಗೆಯ ದಿನ ನಾನು ಲಂಡನ್ನಿಗೆ ಹೋದೆ. ನನಗೇಕೋ ಮೊದಲ ನೋಟದಲ್ಲಿಯೇ ಲಂಡನ್ ಬೇಸರ ತರಿಸಿತು. ಅದರ ಥಳಕು ಬಳುಕಿನೊಳಗೆ ನೈಜತೆ ಕಳೆದುಹೋಗಿದೆ ಎನಿಸಿತು. ಸತ್ತ ನಗರದಂತೆ ಭಾಸವಾಯಿತು. ಅಲ್ಲಿ ಬೀಳುತ್ತಿದ್ದ ಹಿಮ ಹಿಮವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿ ತಂಗಾಳಿಯಾಗಿರಲಿಲ್ಲ. ಅಲ್ಲಿ ಮನುಷ್ಯರಿಗಿಂತ ಅವರ ನೆರಳುಗಳೇ ಹೆಚ್ಚು ಸುಳಿದಾಡುತ್ತಿದ್ದವು. ಅವರಿಗೆ ತಲೆಯಿತ್ತೆ ಹೊರತು ಹೃದಯವಿರಲಿಲ್ಲ. ಒಟ್ಟಿನಲ್ಲಿ ಲಂಡನ್, ಲಂಡನ್ ಆಗಿ ಉಳಿದಿರಲಿಲ್ಲ. ಅದೊಂದು ಜೀವಂತ ಸ್ಮಶಾನವಾಗಿತ್ತು. ಅಲ್ಲಿ ಸತ್ತವರು ಮಾತ್ರ ಬದುಕುತ್ತಿದ್ದರು. It was all unreality London! ನನಗೆ ಲಂಡನ್ನಿಗಿಂತ ನಮ್ಮೂರೇ ಚೆಂದ ಎನಿಸಿತು!&lt;br /&gt;&lt;br /&gt;ಹೀಗೆ.. ಒಂದು ಸಂಜೆ ಮಿ. ಶೆಕ್ಷಪೀಯರ್ ನನ್ನ ಜಗತ್ಪ್ರಸಿದ್ಧ ಲಂಡನ್ ಸೇತುವೆಗೆ ಕರೆದೊಯ್ದ. ಕೆಳಗೆ ಥೇಮ್ಸ್ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಆ ಸೇತುವೆಯ ಮೇಲೆ ನಿಂತು “ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? (Shall I compare thee to a summer’s day?)” ಎಂದ. “ನೋ, ಥ್ಯಾಂಕ್ಸ್” ಎಂದೆ. ಆಗ ಅವನ ಮುಖ ನೋಡಬೇಕಿತ್ತು. ಒಮ್ಮೆ ಸುಮ್ಮನೆ ಮುಗುಳ್ನಕ್ಕ. ಮುಗುಳ್ನಗೆಯ ಸರದಾರ; ಮಿಸ್ಟರ್ ಶೇಕ್ಷಪೀಯರ್, ನನ್ನ ಗಂಡ. ನಾನವನನ್ನು “ಸರ್ ಸ್ಮೈಲ್” ಎಂದೇ ಕರೆಯುತ್ತಿದ್ದೆ. ಅವನು ಇನ್ಯಾವುದರಲ್ಲೂ ಹೇಳಿಕೊಳ್ಳುವಂತಿರಲಿಲ್ಲ, ಮುಗುಳ್ನಗುವುದೊಂದನ್ನು ಬಿಟ್ಟು. ಅವನು ಯಾವತ್ತೂ ದೊಡ್ಡದಾಗಿ ನಗುತ್ತಿರಲಿಲ್ಲ. ಬಾಯಿಬಿಟ್ಟರೆ ಎರಡು ಮುರುಕಲು ಕರಿಹಲ್ಲು ಯಾರಿಗಾದರೂ ಕಂಡಾವೆಂಬ ಭಯ! ಆದರೆ ಅವನ ತರಾನೇ ಯಾರಿಗಾದರೂ  ಕರಿಹಲ್ಲಗಳಿದ್ದವರೊಂದಿಗೆ ನಗಲು ಯಾವ ಭಯವೂ ಇರಲಿಲ್ಲ. “ಈ ಮುರುಕಲು ಕರಿಹಲ್ಲುಗಳು ನಿನಗ್ಹೇಗೆ ಬಂದವು?” ಎಂದು ಒಮ್ಮೆ ಕೇಳಿದ್ದೆ. “ನಾನು ಚಿಕ್ಕವನಿದ್ದಾಗ ಸಕ್ಕರೆ ಮಿಠಾಯಿ ತುಂಬಾ ತಿಂತಿದ್ದೆ. ಅದಕ್ಕೆ ಹೀಗಾದವು” ಅಂದ. ಪಾಪ, ಸಿಹಿತಿನಿಸುಗಳೆಂದರೆ ಪಂಚಪ್ರಾಣ ಅವನಿಗೆ! ಬಾಯಿ ಚಪಲ, ಯಾವಾಗಲೂ ಬರಿ ಬಾದಾಮಿ ಕಜ್ಜಾಯ, ಶುಂಠಿ ಬ್ರೆಡ್ಡು, ಇಲ್ಲವೆ ಬಿಸ್ಕಿಟ್ ಗಳನ್ನೇ ತಿಂತಿದ್ದ. ಆದರೆ ಸಕ್ಕರೆ ಮೊದಲಿನಿಂದಲೂ ಅವನ ದೇಹಕ್ಕೆ ಒಗ್ಗಿಬರಲಿಲ್ಲ. ಏಕೆಂದರೆ ಅವನ ರಕ್ತದಲ್ಲಿದ್ದದ್ದು ಬರಿ ಉಪ್ಪು! ಉಪ್ಪು ಮತ್ತು ಸಕ್ಕರೆ ಹೇಗೆ ಒಂದಾದಾವು? Am I right? Yes, I am. Let me die if I lie.  &lt;br /&gt;&lt;br /&gt;ಈ ಮೊದಲೇ ಹೇಳಿದಂಗೆ ಶೇಕ್ಷಪೀಯರ್ ಯಾವತ್ತೂ ಸೀದಾ ಸಾದಾ ಮಾತಾಡುತ್ತಿರಲಿಲ್ಲ. ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇನೋ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ಮನೆಯಲ್ಲೂ ಅಷ್ಟೆ ಅವನು ಮಾತಾಡುತ್ತಿದ್ದೆಲ್ಲ ರೂಪಕಗಳಲ್ಲೇ! ಹುಚ್ಚುಕವಿ, ಅವನು ಬದುಕಿದ್ದೇ ರೂಪಕಗಳ ಜೊತೆ. ನನಗೋ ಒಂದೊಂದು ಸಾರಿ ಅವನೇನು ಹೇಳುತ್ತಿದ್ದಾನೆಂದು ಅರ್ಥವಾಗದೆ ರೋಸಿಹೋಗುತ್ತಿತ್ತು. ಅದೇನದು ಬಿಡಿಸಿ ಹೇಳಬಾರದೆ? ಎಂದು ರೇಗಿದರೆ ಅದು “ಮೆಟಫರ್; ಹಾಗೆಲ್ಲಾ ಬಿಡಿಸಿ ಹೇಳಬಾರದು” ಎನ್ನುತ್ತಲೇ “ಮೆಟಫರ್ ಅಂದ್ರೆ ಏನು ಗೊತ್ತಾ? ಒಂದು ವಸ್ತುವಿನ ಬಗ್ಗೆ ಹೇಳೋದು-ಇದು ಅದಲ್ಲ, ಬೇರೇನೋ ಅನ್ನೋದು! ಬಿಡಿಸಿ ಹೇಳಬೇಕೆಂದರೆ ಅವೆಲ್ಲಾ ದೊಡ್ಡ ದೊಡ್ಡ ಹೊಗಳಿಕೆಯ ಮಾತುಗಳು, ಇಲ್ಲಾ ಬೈಗುಳಗಳು ಅಷ್ಟೆ!” ಎಂದು ಎಲ್ಲವನ್ನೂ ಬಿಡಿಸಿ ಹೇಳಿದ್ದ.&lt;br /&gt;&lt;br /&gt;ಈ ಮೆಟಫರುಗಳ ಜೊತೆಗಿದ್ದ ತಿಕ್ಕಲು ಶೇಕ್ಷಪೀಯರ್ ಜೊತೆ ಬದುಕಿದ್ದ ನನ್ನ ಪಾಡು ಯಾರಿಗೂ ಬೇಡ. ಅವನ ಅಪ್ಪ ಜಾನ್ ಶೇಕ್ಷಪೀಯರ್ ಇನ್ನೂ ತಿಕ್ಕಲು. ಅವನು ಬದುಕಿದ್ದೇ ವೈನ್ ಬಾಟಲಿನಲ್ಲಿ. ಒಂದು ಕ್ರಿಸ್ಮಸ್ ದಿನ ಕುಡಿದು ಕಣ್ಣಿರಿಡುತ್ತಾ ನಮ್ಮನ್ನೆಲ್ಲಾ ಕೇಳಿದ: “ಈ ಕ್ರಿಸ್ಮಸ್ ಗೆ ನನಗೊಂದು ಬಿಳಿಮೋಡದ ತುಂಡು ತಂದು ಕೊಡಿ.” ಇಂಥ ಕ್ರಿಸ್ಮಸ್ ಉಡುಗೊರೆಯನ್ನು ಎಲ್ಲಿಂದ ತರುವದು ಎಂದು ನಾನು ಪಿಳಿಪಿಳಿ ಕಣ್ಣುಬಿಟ್ಟೆ. ಆದರೆ ನನ್ನ ಮಾವನ ಹೆಂಡತಿ ಮೇರಿ ಥಟ್ಟನೆದ್ದು ಹೂದೋಟಕ್ಕೆ ಹೋದಳು. ಅದೇ ಆಗ ಬಿದ್ದ ಮಂಜನ್ನು ಬೊಗಸೆ ತುಂಬ ತಂದಳು. ಮುದುಕ ಜಾನ್ ಶೇಕ್ಷಪೀಯರ್ ಅಳು ನಿಲ್ಲಿಸಿದ. ಆ ‘ಮೋಡದ ತುಂಡಿ’ಗೆ ಮುತ್ತಿಕ್ಕಿ ಮಂಜು ಕರಗುವ ಮುನ್ನ ಮಗುವಿನ ಥರ ನಿದ್ದೆ ಹೋದ. ಇಂಥ ಹುಚ್ಚನ ಮಗ ಈ ಶೇಕ್ಷಪೀಯರ್.    &lt;br /&gt;&lt;br /&gt;ಚಿತ್ರ ಕೃಪೆ: ಅಂತರ್ಜಾಲ&lt;br /&gt;&lt;br /&gt;ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು. &lt;br /&gt;&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-7361028854385387983?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/7361028854385387983/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/10/2.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/7361028854385387983'/><link rel='self' type='application/atom+xml' href='http://www.blogger.com/feeds/2802103225554897449/posts/default/7361028854385387983'/><link rel='alternate' type='text/html' href='http://bisilahani.blogspot.com/2010/10/2.html' title='ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-2)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_FiNlrLfTRP0/TMBPjrYjAqI/AAAAAAAAAVs/FXnwTquypGE/s72-c/index.jpg' height='72' width='72'/><thr:total>2</thr:total></entry><entry><id>tag:blogger.com,1999:blog-2802103225554897449.post-8780142696437035893</id><published>2010-10-19T15:59:00.008+01:00</published><updated>2010-10-22T12:24:34.807+01:00</updated><title type='text'>ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)</title><content type='html'>ನಾನು ಮಿಸೆಸ್ ಶೇಕ್ಷಪೀಯರ್! ಅದೇ..... ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ ಹಾಗೂ ಶ್ರೇಷ್ಠ ಸುನಿತ ಕವಿ ದಿ ಲೇಟ್ ಮಿಸ್ಟರ್ ವಿಲಿಯಂ ಶೇಕ್ಷಪೀಯರನ ಹೆಂಡತಿ ಮಿಸೆಸ್ ಯ್ಯಾನಿ ಹ್ಯಾಥ್ವೇ ಶೇಕ್ಷಪೀಯರ್! ನಾನಿಲ್ಲಿ ಹೇಳ ಹೊರಟಿರುವದು ನನ್ನ ಗಂಡನ ಬಗ್ಗೆ...... ಅಂದರೆ ಶೆಕ್ಷಪೀಯರನ ಬಗ್ಗೆ..... ಜೊತೆಗೆ ಒಂದಿಷ್ಟು ನನ್ನ ಬಗ್ಗೆ.....ನಮ್ಮ ಮದುವೆ ಬಗ್ಗೆ...ಸಂಸಾರದ ಬಗ್ಗೆ.....ಹಾಗೂ ನಾವಿಬ್ಬರು ಜೊತೆಗಿದ್ದಾಗ ಮತ್ತು ಜೊತೆಗಿಲ್ಲದಾಗಿನ ಕಳೆದ ವರ್ಷಗಳ ಬಗ್ಗೆ.....&lt;br /&gt;&lt;br /&gt;&lt;br /&gt;My husband.                                                         &lt;br /&gt;Sweet Mr. Shakespeare,&lt;br /&gt;The dirty devil.                                                               &lt;br /&gt;&lt;br /&gt;&lt;br /&gt;ಶೇಕ್ಷಪೀಯರನನ್ನು ಬೇರೆಯವರು ನೋಡುವದಕ್ಕೂ ಒಬ್ಬ ಹೆಂಡತಿಯಾಗಿ ನಾನು ನೋಡುವದಕ್ಕೂ ತುಂಬಾ ವ್ಯತ್ಯಾಸವಿದೆಯಲ್ಲವೆ? ಹಾಗೆಂದೇ ನಾ ಕಂಡಂತೆ ಶೇಕ್ಷಪೀಯರ್ ಹೇಗೆ ಎಂಬುದನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಒಪ್ಪಿಸಿಕೊಳ್ಳಿ.......&lt;br /&gt;&lt;br /&gt;ನಾನು ಶೇಕ್ಷಪೀಯರನ ಊರಾದ ಸ್ಟ್ರ್ಯಾಟ್ ಫೋರ್ಡಿನಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ಪಕ್ಕದ ಊರಿನವಳು.&lt;br /&gt;&lt;br /&gt;&lt;br /&gt;  &lt;a href="http://1.bp.blogspot.com/_FiNlrLfTRP0/TMFvcZ3Y0oI/AAAAAAAAAV8/H7aiNyKfeKQ/s1600/william_shakespeare_house_stratford_upon_avon.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 222px;" src="http://1.bp.blogspot.com/_FiNlrLfTRP0/TMFvcZ3Y0oI/AAAAAAAAAV8/H7aiNyKfeKQ/s320/william_shakespeare_house_stratford_upon_avon.jpg" border="0" alt=""id="BLOGGER_PHOTO_ID_5530824351157899906" /&gt;&lt;/a&gt;&lt;br /&gt;&lt;br /&gt;             &lt;strong&gt; ಸ್ಯಾರ ಕೃಟ್  ಫೋರ್ಡಿ (Stratford) ನಲ್ಲಿರುವ  ಶೇಕ್ಷಪೀಯರ್ ನ ಮನೆ&lt;/strong&gt;&lt;br /&gt;&lt;br /&gt;ಅವನು ಮೊಲಗಳನ್ನು ಹಿಡಿಯಲೋ, ಬೇಟೆಯಾಡಲೋ, ಅಥವಾ ಹುಡುಗಿಯರನ್ನು ನೋಡಲೋ ದಿನಾಲೂ ನಮ್ಮೂರಿಗೆ ಬರುತ್ತಿದ್ದ. ಹಾಗೆ ಬಂದವನು ಒಂದು ದಿನ ನನ್ನ ನೋಡಿದ.... ನೋಡುತ್ತಲೇ ಹೋದ......ನಾನೇನೂ ಪ್ರತಿಕ್ರಿಯೆಸಲು ಹೋಗಲಿಲ್ಲ..... ಆಮೇಲೇನಾಯಿತೋ, ನೋಡಿ ಹಾಗೆ ಹೊರಟೇ ಹೋದ. ಮಾರನೆ ದಿನ ಮತ್ತೆ ಬಂದ.... ನನ್ನ ನೋಡಿ ಒಂದು ತುಂಟ ನಗೆ ಬೀರಿದ.....ಮೆಲ್ಲಗೆ ಹತ್ತಿರ ಬಂದ...... ಪರಿಚಯ ಮಾಡಿಕೊಂಡ.....ನಾಳೆ ಬರುತ್ತೇನೆ ಎಂದು ಹೇಳಿ ಹೋದ. ಹೇಳಿದಂತೆ ಮಾರನೆ ದಿವಸ ಮತ್ತೆ ಬಂದ. “ಬರುತ್ತೀಯಾ?” ಎಂದು ಕೇಳಿದ. ನಾನು “ಎಲ್ಲಿಗೆ?” ಎಂದೆ. “ಹೀಗೆ ಕಾಡಿಗೆ....” ಎಂದ. “ಅಯ್ಯಯ್ಯಪ್ಪ! ನಮ್ಮ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಅಷ್ಟೆ. ಸುಮ್ಮನೆ ಬಿಡಲ್ಲ.” ಎಂದೆ. “ನಿಮ್ಮ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗುತ್ತೇನೆ. ಬರುತ್ತೀಯಾ?” ಅವನ ಧ್ವನಿಯಲ್ಲಿ ಕೀಟಲೆಯಿತ್ತು. ಆ ಕೀಟಲೆಗೆ ಕರಗಿದೆ. ಬೆನ್ನ ಹಿಂದೆ ಹೋದೆ. ಆವತ್ತು ಕಾಡಿನಲ್ಲಿ ಅತ್ತಿತ್ತ ಸುಮ್ಮನೆ ಅಲೆದೆವು. ಅವನು ನನಗೆ ಗೊತ್ತಿರದ ಎಷ್ಟೋ ಹಕ್ಕಿಗಳನ್ನು, ಗಿಡ, ಮರಗಳನ್ನು ಪರಿಚಯಿಸಿದ. ಮರುದಿವಸ ಮತ್ತೆ ಬಂದ...... ಬಂದಾಗ ಮುಸ್ಸಂಜೆಯಾಗಿತ್ತು. ಮತ್ತೆ ಅದೇ ಕಾಡಿಗೆ ಕರೆದುಕೊಂಡು ಹೋದ. ನನ್ನ ಒಂದು ಹುಲ್ಲು ಹಾಸಿನ ಮೇಲೆ ಕುಳಿಸಿದ..... ಹತ್ತಿರ ಬಂದ.....ಕೈ ಹಿಡಿದ......ಮೆಲ್ಲಗೆ ಮುಖಕ್ಕೆ ಮುತ್ತನಿತ್ತ.....ಉಸಿರು ಬಿಸಿಯಾಗಿತ್ತು......ಕಣ್ಣಲ್ಲಿ ಆಸೆಯಿತ್ತು.....ಹಾಗೆ ಮೆಲ್ಲಗೆ ನನ್ನ ಕೆಳಗೆ ಉರುಳಿಸಿದ......ಮೈ ಮೇಲೇರಿ ಬರತೊಡಗಿದ....ನಾನು ಸರಕ್ಕನೆ ಸರಿದುಕೊಂಡೆ......ಬೇಡ ಬೇಡವೆಂದು ಪ್ರತಿಭಟಿಸಿದೆ. ಆದರೆ ಅವ ಕೇಳಲಿಲ್ಲ.....ಅವನ ಹಿಡಿತ ಬಿಗಿಯಾಗಿತ್ತು.... ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದ....ಅವನನ್ನು ನಂಬಿದೆ....ಹಾಗೆ ಮುಂದಿನ ಹತ್ತು ನಿಮಿಷ ಅವನ ತುಟಿಗಳು ನನ್ನ ಮೈ ಮೇಲೆಲ್ಲಾ ಹರಿದಾಡಿದವು...... ನಾ ಅವನ ತೋಳುಗಳಲ್ಲಿ ಕರಗಿಹೋದೆ. ಸರಿ, ಮುಂದಿನ ತಿಂಗಳು ನಾನು ಮುಟ್ಟಾಗಲಿಲ್ಲ. ನಮ್ಮಿಬ್ಬರ ಮೊದಲ ಮಿಲನದಲ್ಲಿಯೇ ನಾನು ಗರ್ಭ ಧರಿಸಿದ್ದೆ. ವಿಷಯವನ್ನು ಅವನಿಗೆ ತಿಳಿಸಿದೆ. ಮದುವೆಗೆ ಏರ್ಪಾಡು ಮಾಡೆಂದೆ. ಮಹಾನ್ ಖಿಲಾಡಿ ಅವನು! ಮೊದಲು ಖುಶಿಪಟ್ಟ. ಕುಣಿದು ಕುಪ್ಪಳಿಸಿದ. ನಾಳೆ ಬರುತ್ತೇನೆ ಎಂದು ಹೇಳಿಹೋದ. ಆದರೆ ಆಸಾಮಿ ನಾಲ್ಕು ದಿವಸವಾದರೂ ಪತ್ತೆನೇ ಇಲ್ಲ. ಐದನೆಯ ದಿನ ಪ್ರತ್ಯಕ್ಷನಾದ. ನಾನು ‘ಮನೆಯಲ್ಲಿ ಕೇಳಿದಿಯಾ?’ ಎಂದು ಕೇಳಿದೆ. ಊಂ, ಊಹೂಂ ಎಂದೇನೂ ಬಡಬಡಿಸಿದ. ನಾನು ಹಟಬಿಡದೆ ಮತ್ತೆ ಕೇಳಿದೆ. ಮದುವೆ ಈಗಲೇ ಸಾಧ್ಯವಿಲ್ಲ ಎಂದ. ಏನೇನೋ ಸಬೂಬಗಳನ್ನು ಹೇಳಿದ. ತಪ್ಪಿಸಿಕೊಳ್ಳಲು ನೋಡಿದ. ನಾನು ಬಿಡಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆ. ಅವರು ಪಂಚಾಯಿತಿ ಕೂಡಿಸಿದರು. ಪಂಚಾಯಿತಿಯಲ್ಲಿ ಅವನು ನನ್ನ ಮದುವೆಯಾಗಲೇಬೇಕೆಂದು ತೀರ್ಮಾನ ಕೊಟ್ಟರು. ಹತ್ತಿರದ ಚರ್ಚ್ ವೊಂದರಲ್ಲಿ ಪಂಚಾಯಿತಿಯ ಸಮ್ಮುಖದಲ್ಲಿಯೇ ನಮಗಿಬ್ಬರಿಗೂ ಮದುವೆಯಾಯಿತು. ಅದಾಗಲೇ ನನಗೆ ಐದು ತಿಂಗಳು ತುಂಬಿತ್ತು. ಮದುವೆಯಾದಾಗ ನನಗೆ 26. ಅವನಿಗೆ 18. ಅಂದರೆ ವಯಸ್ಸಲ್ಲಿ ನಾನು ಅವನಿಗಿಂತ 8 ವರ್ಷ ದೊಡ್ಡವಳಾಗಿದ್ದೆ. ಅವನಿಗದು ಕಸಿವಿಸಿಯೆನಿಸಿತು. ಮುಜುಗರವೆನಿಸಿತು. ಕೀಳರೆಮೆಯಾಗಿ ಕಾಡತೊಡಗಿತು. ಹಾಗೂ ಅವನದನ್ನು ಯಾವತ್ತೂ ಮರೆಯಲಿಲ್ಲ! ನನಗೂ ಮರೆಯಲು ಬಿಡಲಿಲ್ಲ!&lt;br /&gt;&lt;br /&gt;ನಾನೊಮ್ಮೆ ಕೇಳಿದ್ದೆ ಅವನನ್ನು ನೇರವಾಗಿ “ನಿನಗೆ ನನ್ನ ಬಸಿರು ಮಾಡುವಾಗ ಕಾಣದ ವಯಸ್ಸು ಈಗ ಸಂಸಾರ ನಡೆಸುವಾಗ ಯಾಕೆ ಕಾಣುತ್ತಿದೆ?” ಎಂದು. ಪ್ರಶ್ನೆ ಮುಖಕ್ಕೆ ಹೊಡೆದ ಹಾಗಿತ್ತು. ಆದರವನಿಗೆ ನಾನು ಕೇಳಿದ ರೀತಿ ಇಷ್ಟವಾಗಲಿಲ್ಲ. ನಾನೇನು ಮಾಡಲಿ? ನಾನು ಹೇಳುವ ಕೇಳುವ ರೀತಿಯೇ ಹಾಗಿತ್ತು. ಕಡ್ಡಿ ಮುರಿದ ಹಾಗೆ! ನನಗೋ ನಯನಾಜೂಕಾಗಿ ಹೇಳಲು ಬರುತ್ತಲೇ ಇರಲಿಲ್ಲ. ನಾನದನ್ನು ಕಲಿಯಲೂ ಇಲ್ಲ. ಅವನಿಗದೇಕೋ ನಾನು ಹಾಗೆ ಮಾತನಾಡುವ ರೀತಿ ಇಷ್ಟವಾಗತ್ತಿರಲಿಲ್ಲ. ಅವನೋ ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ನನಗೋ ತಲೆಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಇರಲಿ. ಇದರ ಬಗ್ಗೆ ಆಮೇಲೆ ಹೇಳುತ್ತೇನೆ. ಬಹುಶಃ, ಇದೇ ವಿಷಯ ನಮ್ಮಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು ಅನಿಸುತ್ತೆ. ಅದು ಮುಂದೆ ಹಿಗ್ಗುತ್ತಲೇ ಹೋಯಿತು. ಹೀಗಾಗಿ ಅವನು ಮಾನಸಿಕವಾಗಿ ನನಗೆ ಯಾವತ್ತೂ ಹತ್ತಿರವಾಗಲೇ ಇಲ್ಲ!&lt;br /&gt;&lt;br /&gt;ನಾನು ಉಳ್ಳವರ ಮನೆಯಿಂದ ಬಂದವಳು. ಇವನ ಮನೆನೂ ಹಾಗೆ ಅನ್ಕೊಂಡು ಬಂದೆ. ಆದರೆ ಅದಾಗಲೇ ಇವನಪ್ಪನಿಗೆ ವ್ಯಾಪಾರದಲ್ಲಿ ನಷ್ಟವುಂಟಾಗಿ ದಿವಾಳಿ ಎದ್ದಿದ್ದ. ಜೀವನಕ್ಕೆ ಇರಲಿ ಅಂತಾ ದನದ ವ್ಯಾಪಾರವನ್ನು ಮಾತ್ರ ಇನ್ನೂ ಕೈಯಲ್ಲಿ ಹಾಗೆ ಇಟ್ಕೊಂಡಿದ್ದ. ಹೀಗಾಗಿ ಮನೆ ಮುಂದೆ ಯಾವಗಲೂ ದನಗಳ ಹಿಂಡು ಹಿಂಡು ಸಾಲು. ಅವು ಅಲ್ಲೇ ಸಗಣಿ ಹಾಕುತ್ತಿದ್ದವು. ಆ ಸಗಣಿಯೇ ಮನೆ ಮುಂದೆ ಒಂದು ಗುಡ್ದೆಯಾಗಿ ಸದಾ ಗೊಮ್ಮೆನ್ನುವ ದುರ್ನಾತ ಹರಡುತ್ತಿತ್ತು. ನನಗೋ ಇಸ್ಸಿಸ್ಸಿ....ಎಂದು ಅಸಹ್ಯವಾಗುತ್ತಿತ್ತು. ಏನು ಮಾಡೋದು? ಕಟ್ಕೊಂಡ ಮೇಲೆ ಅನುಭವಿಸಲೇ ಬೇಕಲ್ಲ? ನಾನು ಬಂದ ಹೊಸತರಲ್ಲಿ ಅಂತಾ ಕಾಣುತ್ತೆ- ಹೀಗೆ ಗುಡ್ದೆ ಹಾಕಿ ಗಬ್ಬುನಾತ ಹೊರಡಿಸಿದ್ದಕ್ಕೆ ಮುನಿಸಿಪಾಲ್ಟಿಯವರು ನನ್ನ ಮಾವನಿಗೆ ಒಂದು ಶಿಲ್ಲಾಂಗಿನಷ್ಟು ದಂಡ ಹಾಕಿದ್ದರು. ಅವತ್ತು ಎಲ್ಲರೂ ಬೇಜಾರಿನಲ್ಲಿದ್ದರು. ನಾನು ಮಾತ್ರ ಒಳಗೊಳಗೆ ಖುಶಿಪಟ್ಟಿದ್ದೆ!&lt;br /&gt;&lt;br /&gt;&lt;br /&gt;(ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಆಧಾರಿತ.)&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-8780142696437035893?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/8780142696437035893/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/10/1.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/8780142696437035893'/><link rel='self' type='application/atom+xml' href='http://www.blogger.com/feeds/2802103225554897449/posts/default/8780142696437035893'/><link rel='alternate' type='text/html' href='http://bisilahani.blogspot.com/2010/10/1.html' title='ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_FiNlrLfTRP0/TMFvcZ3Y0oI/AAAAAAAAAV8/H7aiNyKfeKQ/s72-c/william_shakespeare_house_stratford_upon_avon.jpg' height='72' width='72'/><thr:total>5</thr:total></entry><entry><id>tag:blogger.com,1999:blog-2802103225554897449.post-5157668514614149670</id><published>2010-10-09T21:35:00.000+01:00</published><updated>2010-10-09T21:42:11.698+01:00</updated><title type='text'>ಟಿ. ಎನ್. ಸೀತಾರಾಮ್ ಕಥೆ ಕದ್ದಿದ್ದಾರೆಯೆ?</title><content type='html'>&lt;a href="http://3.bp.blogspot.com/_FiNlrLfTRP0/TLDTcK_M6QI/AAAAAAAAAVU/CQEqQAA1Bw4/s1600/1.jpg"&gt;&lt;img style="float:left; margin:0 10px 10px 0;cursor:pointer; cursor:hand;width: 271px; height: 186px;" src="http://3.bp.blogspot.com/_FiNlrLfTRP0/TLDTcK_M6QI/AAAAAAAAAVU/CQEqQAA1Bw4/s400/1.jpg" border="0" alt=""id="BLOGGER_PHOTO_ID_5526149223722838274" /&gt;&lt;/a&gt;&lt;br /&gt;ಕನ್ನಡದ ಮಟ್ಟಿಗೆ ಕಥೆ ಕದಿಯುವದು ಹೊಸದೇನಲ್ಲ. ಕೆಲವು ಲೇಖಕರು ಇಂಗ್ಲೀಷ್ ಸಾಹಿತ್ಯದಿಂದ ನೇರವಾಗಿ ಕಾಪಿ ಹೊಡೆದು ಅದು ತಮ್ಮದೇ ಎಂಬಂತೆ  ಘೋಷಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕಥೆಯ ಮುಖ್ಯ ತಿರುಳನ್ನು ಹಾಗೆ ಇಟ್ಟುಕೊಂಡು ಅಲ್ಪ ಸ್ವಲ್ಪ ಪಾತ್ರ ಬದಲಾವಣೆ ಹಾಗೂ ಚಿತ್ರಣದೊಂದಿಗೆ ತಮ್ಮದೇ ಸ್ವಂತದ್ದೆಂಬಂತೆ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಸಂಗತಿ. ಕನ್ನಡದ ಕೆಲವು ಕಾಂಜಿ ಪಿಂಜಿ ಲೇಖಕರು ಇಂಗ್ಲೀಷ್ ಸಾಹಿತ್ಯವಿರಲಿ ಕನ್ನಡದ ಇತರೆ ಬರಹಗಾರರ ಕಥೆಯನ್ನೋ ಕಾದಂಬರಿಯನ್ನೋ ಕದ್ದು ಸಿಕ್ಕಿ ಬಿದ್ದಿದ್ದುಂಟು. ಅವರೆಲ್ಲ ಹೋಗಲಿ. ಕಳೆದ ವರ್ಷ ನಮ್ಮ ಹೆಸರಾಂತ ಲೇಖಕ ಜೋಗಿಯವರು ಕೂಡ ಇಂಗ್ಲೀಷ್ ಸಾಹಿತ್ಯದ ಮೊಪಾಸನ ‘ದಿ ಆರ್ಟಿಸ್ಟ್’ ಕಥೆಯನ್ನು ಕದ್ದು ಸಿಕ್ಕಿ ಬಿದ್ದಿದ್ದರು. ಅದಲ್ಲದೆ ಅವರ ‘ರಾಯಭಾಗದ ರಹಸ್ಯ ರಾತ್ರಿ’ ಕಥಾಸಂಕಲನದಲ್ಲಿನ ‘ಯಡಕುಮೇರಿಯ ಸುರಂಗದಲ್ಲಿ’ ಎಂಬ ಒಂದು ಕತೆ ಆಂಗ್ಲ ಕತೆಗಾರ ಚಾರ್ಲ್ಸ್ ಡಿಕನ್ಸ್ನ ‘ದಿ ಸಿಗ್ನಲ್ ಮ್ಯಾನ್’ ಕಥೆಯನ್ನು ಹೋಲುತ್ತದೆ.ಹಾಗೆಯೇ ಎ.ಆರ್.ಮಣಿಕಾಂತ್ ಕೆಲವು ಲೇಖನಗಳನ್ನು/ಕಥೆಗಳನ್ನು ಬಹಳಷ್ಟು ಈಮೇಲ್ ಕಥೆಗಳಿಂದ ಭಟ್ಟಿ ಇಳಿಸಿದ್ದಾರೆ. ಆದರೆ ಇವರ್ಯಾರು ಸೌಜನ್ಯಕ್ಕಾದರೂ ಮೂಲವನ್ನು ಪ್ರಸ್ತಾಪಿಸುವ ಇರಾದೆಗೆ ಹೋಗಿಲ್ಲ. ಆದರೆ ಜೋಗಿಯವರು ಮಾತ್ರ ಸಿಕ್ಕಿ ಬಿದ್ದಾಗ “ಮೊಪಾಸಾ ಕತೆಗಳನ್ನು ನಾನೂ ಓದಿದ್ದೇನೆ. ನನ್ನ ಸಂಗ್ರಹದಲ್ಲಿರುವ 189 ಕಥೆಗಳಲ್ಲಿ  ಆ ಕತೆ ಇರಲಿಲ್ಲ. ಹೀಗಾಗಿ ನನಗೆ ಯಾರದ್ದೆಂದು ತಿಳಿಯಲಿಲ್ಲ. ಯಡಕುಮೇರಿಯ ಸುರಂಗದಲ್ಲಿ ಕತೆಗೂ ಸಿಗ್ನಲ್ ಮ್ಯಾನ್ ಕತೆಗೂ ಸಾಮ್ಯ ಇದೆಯೇನೋ. ನಾನು ಆ ಕತೆಯನ್ನು ಓದಿರಲಿಲ್ಲ. ನನ್ನ ಕತೆ ಅದಕ್ಕಿಂತ ಚೆನ್ನಾಗಿದೆ.” ಎಂಬ ಉತ್ತರವನ್ನು ಕೊಟ್ಟು ನಮ್ಮನ್ನು ನಂಬಿಸಲು ಪ್ರಯತ್ನಿಸಿದರು. ಅದು ನಿಜವಿರಬಹುದೇನೋ! ಏಕೆಂದರೆ ಈ ವಿಶಾಲ ಜಗತ್ತಿನಲ್ಲಿ ಇಬ್ಬರ ಕಲ್ಪನೆಗಳು ಒಂದೇ ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳುವದಾದರು ಹೇಗೆ? ಹಾಗೆ ಕಲ್ಪನೆಗಳು ಒಂದಾಗಿ ಕ್ರುತಿಯೊಂದು ಹೊರಬಂದಾಗ ಹೆಚ್ಚು ತೂಕ ಬರುವದು ಮೂಲ ಲೇಖಕನಿಗೆ, ಹಾಗೂ ಎರಡನೆಯವನದು ಏನಿದ್ದರೂ ‘ಕೃತಿಚೌರ್ಯ’ ಎಂದು ಬ್ರ್ಯಾಂಡ್ ಆಗುವದು ಸಹಜ. ಆ ನಿಟ್ಟಿನಲ್ಲಿ ನಮ್ಮ ಕನ್ನಡದ ನಿರ್ದೇಶಕರು ಕಥೆ ಕದಿಯುವದರಲ್ಲಿ ಹೊಸಬರೇನಲ್ಲ. ಬೇರೆ ನಿರ್ದೇಶಕರಿರಲಿ “ಮಾಯಾಮೃಗ”, “ಮನ್ವಂತರ”, “ಮುಕ್ತ” ದಂತಹ  ಧಾರಾವಾಹಿಗಳನ್ನು ಕೊಟ್ಟ ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸೀತಾರಾಮ್ ಕೂಡ ಕಥೆ ಕದಿಯುತ್ತಾರೆಂದರೆ ನಂಬಲಿಕ್ಕೆ ಆಗುತ್ತೆ? ಹೌದೆಂದು ಹೇಳಬೇಕಾಗುತ್ತ! ಏಕೆಂದರೆ ಅವರ ಎರಡನೆ ಚಿತ್ರ “ಮೀರಾ, ಮಾಧವ, ರಾಘವ” ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂಗ್ಲೀಷ್ ಸಾಹಿತ್ಯದ ಹೆನ್ರಿಕ್ ಇಬ್ಸನ್ನನ “ಎ ಡಾಲ್ಸ್ ಹೌಸ್” ಎನ್ನುವ ಜನಪ್ರಿಯ ನಾಟಕದ ಮೂಲಕಥೆಯನ್ನು ಆಧರಿಸಿದೆ. ಇದು ಅಂತಿಂಥ ನಾಟಕವಲ್ಲ! ಇಬ್ಸನ್ನನ ಮಾಸ್ಟರ್ ಪೀಸ್! ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ವಿಮೋಚನೆ ಬಗ್ಗೆ ಮಾತನಾಡಿದ ಹಾಗೂ ಮಹಿಳೆಯರಿಗೆ ವೋಟಿಂಗ್ ಪವರ್ ತಂದುಕೊಡುವದರ ಮೂಲಕ ಭಾರಿ ಸುದ್ದಿಯನ್ನು ಮಾಡಿದ ನಾಟಕ! ಆ ಮೂಲಕಥೆಯನ್ನು ಹಾಗೇ ಇಟ್ಟುಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಸಿತಾರಾಮ್ ಅವರು ಹೇಗೆ ಅತ್ಯಂತ ಜಾಣತನದಿಂದ ಈ ಕಥೆಯನ್ನು ಹೆಣೆದಿದ್ದಾರೆ ನೋಡಿ. ಮೊದಲಿಗೆ ಇಬ್ಸನ್ನನ ನಾಟಕವನ್ನು ಗಮನಿಸೋಣ.&lt;br /&gt;&lt;br /&gt;&lt;br /&gt;ಇಬ್ಸನ್ನನ ನಾಟಕ “ಎ ಡಾಲ್ಸ್ ಹೌಸ್” ನಲ್ಲಿ ಬರುವ ಕಥಾನಾಯಕಿಯ ಹೆಸರು ನೋರಾ ಹೆಲ್ಮರ್. ಅವಳ ಗಂಡ ಟ್ರೊವಾಲ್ಡ್ ಹೆಲ್ಮರ್. ಅವರಿಗೆ ಮೂರು ಜನ ಮಕ್ಕಳು. ಅವನು ಈಗಷ್ಟೆ ಬ್ಯಾಂಕಿನಲ್ಲಿ ಮ್ಯಾನೆಜರ್ ಹುದ್ದೆಗೆ ಬಡ್ತಿ ಪಡೆದಿದ್ದಾನೆ. ಹೀಗಾಗಿ ಅವನಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಆದರೆ ನೋರಾಳಿಗೆ ಒಂದಿಷ್ಟು ಸಾಲವಿದೆ. ಆ ಸಾಲವನ್ನು ಅವಳು ಗುಟ್ಟಾಗಿ ಕೆಲಸ ಮಾಡುತ್ತಾ ತೀರಿಸುತ್ತಿದ್ದಾಳೆ. ಇದರ ಬಗ್ಗೆ ಅವಳ ಗಂಡನಿಗೆ ಏನೇನೂ ಗೊತ್ತಿಲ್ಲ. ಈ ಸಾಲವನ್ನು ಗಂಡನಿಗೆ ಗೊತ್ತಿಲ್ಲದಂತೆ ಅವನಿಗೋಸ್ಕರ ಮಾಡಿದ್ದಳು. ಮದುವೆಯಾದ ಹೊಸತರಲ್ಲಿ ಅವನು ಯಾವುದೋ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾನೆ. ಆಗ ವೈದ್ಯರು ನೋರಾಳಿಗೆ ಅವನಿಗೆ ತುರ್ತಾಗಿ ಇಟಲಿಯಲ್ಲಿ ಚಿಕಿತ್ಸೆ ಕೊಡಿಸದೆ ಹೋದರೆ ಅವನು ಬದುಕುವದಿಲ್ಲ ಎಂದು ಹೇಳುತ್ತಾರೆ. ಇಟಲಿಯಲ್ಲಿ ಟ್ರೀಟ್ಮೆಂಟ್ ಕೊಡಿಸಬೇಕೆಂದರೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರುವದು? ಮೇಲಾಗಿ ಹಣದ ಬಗ್ಗೆ ಯೋಚನೆ ಮಾಡುತ್ತಾ ಕೂಡುವ ಕಾಲವಲ್ಲ ಇದು. ಸರಿಯೆಂದು ಅವಳಪ್ಪನಲ್ಲಿಗೆ ಹೋಗುತ್ತಾಳೆ. ಆದರೆ ಅವಳಪ್ಪನು ಕೂಡ ಖಾಯಿಲೆಯಿಂದ ಹಾಸಿಗೆ ಹಿಡಿದಿರುತ್ತಾನೆ. ಇಂಥ ಸಂದರ್ಭದಲ್ಲಿ ಅವನನ್ನು ದುಡ್ಡು ಕೇಳುವದು ಸರಿಯಲ್ಲ ಎಂದುಕೊಳ್ಳುತ್ತಾಳೆ. ಆದರೆ ಗಂಡನಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕು. ಆಗ ಅನಿವಾರ್ಯವಾಗಿ ಸಾಲ ಕೊಡುವವನಾದ ಕ್ರೊಗ್ಸ್ಟ್ಯಾಡ್ ಎಂಬವನಲ್ಲಿಗೆ ಹೋಗುತ್ತಾಳೆ. ಅವನು ಅವಳ ಗಂಡನ ಬ್ಯಾಂಕಿನಲ್ಲಿಯೇ ಗುಮಾಸ್ತನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನೊಬ್ಬ ಕ್ರಿಮಿನಲ್. ಅಂಥವನನ್ನು ಸಾಲ ಕೊಡೆಂದು ಕೇಳುತ್ತಾಳೆ ಹಾಗೂ ಸಾಲ ತೆಗೆದುಕೊಳ್ಳುವ ವಿಷಯ ಗಂಡನಿಗೆ ಗೊತ್ತಾಗಬಾರದೆಂದು ತಾಕೀತು ಮಾಡುತ್ತಾಳೆ. ಆದರೆ ಚಾಣಾಕ್ಷನಾದ ಕ್ರೊಗ್ಸ್ಟ್ಯಾಡ್ ಈ ದುಡ್ಡಿಗೆ ನಿನ್ನ ಹತ್ತಿರ ಏನು ಸೆಕ್ಯೂರಿಟಿಯಿದೆ ಎಂದು ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಬಾಂಡ್ ಪೇಪರ್ ಮೇಲೆ ಅವಳಪ್ಪನ ಸಹಿ ಹಾಕೆಂದು ಹೇಳುತ್ತಾನೆ. ಅವಳು ಹಿಂದೆ ಮುಂದೆ ನೋಡದೆ ದುಡ್ಡಿನ ತುರ್ತಿಗೆ ಅವಳಪ್ಪನ ಸಹಿಯನ್ನು ಫೋರ್ಜರಿ ಮಾಡುತ್ತಾಳೆ ಹಾಗೂ ಗಂಡನ ಹತ್ತಿರ ಅವಳಪ್ಪ ಕೊಟ್ಟನೆಂದು ಸುಳ್ಳು ಹೇಳುತ್ತಾಳೆ. ಆದರೆ ಮುಂದೆ ಇದೆ ಕ್ರೊಗ್ಸ್ಟ್ಯಾಡ್ ನ ಕೆಲಸ ಹೋಗುವ ಸಂಭವ ಬರುತ್ತದೆ. ಆಗ ಅವನು ನೋರಾಳ ಹತ್ತಿರ ಬಂದು ಅವಳ ಗಂಡನಿಗೆ ಏನಾದರು ಹೇಳಿ ತನ್ನ ಕೆಲಸ ಹೋಗದಂತೆ ನೋಡಿಕೊಳ್ಳಲು ಹೇಳುತ್ತಾನೆ. ನೋರಾ ತನ್ನ ಪ್ರಯತವನ್ನು ಮಾಡುತ್ತಾಳೆ. ಆದರೆ ತುಂಬಾ ಪ್ರಾಮಾಣಿಕನಾದ ಹೆಲ್ಮರ್ ಅವಳ ಮಾತನ್ನು ಕೇಳುವದಿಲ್ಲ. ಆಗ ಕ್ರೊಗ್ಸ್ಟ್ಯಾಡ್ ನೋರಾಳಿಗೆ “ಈ ವಿಷಯದಲ್ಲಿ ನಿನ್ನ ಗಂಡನಿಗೆ ಹೇಳಿ ಮನವೊಲಿಸದೆ ಹೋದರೆ ನಾನು ನಿನ್ನ ಫೋರ್ಜರಿ ವಿಷಯವನ್ನು ನಿನ್ನ ಗಂಡನಿಗೆ ಹೇಳಬೇಕಾಗುತ್ತದೆ” ಎಂದು ಬ್ಲ್ಯಾಕ್ ಮೇಲ್ ಮಾಡ ತೊಡಗುತ್ತಾನೆ. ಇಲ್ಲಿಂದ ನೋರಾ ಸಂಕಷ್ಟಕ್ಕೆ ಸಿಲುಕುತ್ತಾಳೆ.  ಮುಂದೆ ಹೆಲ್ಮರ್, ಕ್ರೊಗ್ಸ್ಟ್ಯಾಡ್ ಒಬ್ಬ ಕ್ರಿಮಿನಲ್ ಎನ್ನುವ ಕಾರಣಕ್ಕೆ ಅವನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಆದರೆ ಸುಮ್ಮನಿರದ ಕ್ರೊಗ್ಸ್ಟ್ಯಾಡ್ ವಿಷಯವನ್ನು ನೇರವಾಗಿ ಹೆಲ್ಮರ್ ನಿಗೆ ಹೇಳಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ತನ್ನ ಕೆಲಸವನ್ನು ಉಳಿಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕಿ “ನನ್ನನ್ನು ಕೆಲಸದಿಂದ ತೆಗೆದು ಹಾಕಿದರೆ ನಿನ್ನ ಹೆಂಡತಿ ಫೋರ್ಜರಿ ಮಾಡಿದ ಪತ್ರ ನನ್ನ ಹತ್ತಿರ ಇದೆ. ಅದನ್ನು ಪೋಲಿಸರಿಗೆ ಕೊಟ್ಟರೆ ಆಗ ಪರಿಣಾಮ ಏನಾಗಬಹುದೆಂದು ಯೋಚಿಸು” ಎಂದು ವಿವರಿಸುವ ಒಂದು ಪತ್ರವನ್ನು ಹೆಲ್ಮರ್ ನ ಲೆಟರ್ ಬಾಕ್ಸ್ ನಲ್ಲಿ ಹಾಕುತ್ತಾನೆ. ಇದನ್ನು ಓದಿದ ಹೆಲ್ಮರ್ ಹೆಂಡತಿ ನೋರಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. “ನೀನು ಒಬ್ಬ ಕ್ರಿಮಿನಲ್. ನಿನ್ನಿಂದಾಗಿ ನನ್ನ ಮಾನ, ಮರ್ಯಾದೆ ಎಲ್ಲಾ ಹಾಳಾಯಿತು. ಇನ್ನು ನಾವಿಬ್ಬರು ಒಟ್ಟಿಗಿರಲು ಹೇಗೆ ಸಾಧ್ಯ?” ಎಂದು ಆಪಾದಿಸುತ್ತಾನೆ. ಇದು ನೋರಾಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಆದರೆ ಮಾರನೆ ದಿವಸ ಕ್ರೊಗ್ಸ್ಟ್ಯಾಡ್ ನಿಂದ “ನನ್ನ ತಪ್ಪಿನ ಅರಿವಾಗಿದೆ. ನಾನೀಗ ಬದಲಾಗಿದ್ದೇನೆ. ನಾನು ಯಾವುದೇ ಪೋಲಿಸ್ ಕಂಪ್ಲೇಟ್ ಕೊಡುವದಿಲ್ಲ ಹಾಗೂ ನೋರಾ ಫೋರ್ಜರಿ ಮಾಡಿದ ಬಾಂಡ್ ಪೇಪರ್ ನ್ನು ವಾಪಾಸು ಕಳಿಸಿದ್ದೇನೆ.” ಎನ್ನುವ ಪತ್ರ ಬರುತ್ತದೆ. ಇದನ್ನು ಓದಿದ ಹೆಲ್ಮರ್ ಕುಣಿದು ಕುಪ್ಪಳಿಸುತ್ತಾನೆ. “ನೋರಾ, ಆದದ್ದನ್ನೆಲ್ಲಾ ಮರೆತುಬಿಡು. ನಾನು ನಿನ್ನನ್ನು ಕ್ಷಮಿಸಿದ್ದೇನೆ”  ಎಂದು ಹೆಲ್ಮರ್ ಹೆಂಡತಿಗೆ ಹೇಳುತ್ತಾನೆ. ಆದರೆ ಈಗಾಗಲೆ ಅವನ ಮಾತಿನಿಂದ ಬಹಳಷ್ಟು ನೊಂದಿರುವ ನೋರಾ ಅವನನ್ನು ತೊರೆದು ಹೋಗಲು ನಿರ್ಧರಿಸುತ್ತಾಳೆ. ಆದರೆ ಹೋಗುವ ಮುನ್ನ ಗಂಡನಿಗೆ “ನಾನು ಎಷ್ಟೆಲ್ಲ ಕಷ್ಟಪಟ್ಟೆ. ನಿನಗೋಸ್ಕರ ತಾನೆ ನಾನು ಸಾಲ ಮಾಡಿದ್ದು. ನಿನ್ನನ್ನು ಉಳಿಸಿಕೊಳ್ಳೊದಕ್ಕೆ ತಾನೆ ನಾನು ಸಾಲ ಮಾಡಿದ್ದು? ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನಾವಿಬ್ರೂ ಬೇರೆ ಬೇರೆ ಅನ್ನೋ ತರ ಮಾತಾಡಿದಿ. ಈಗ ಕಷ್ಟ ಕಳೀತು ಅಂತಾ ಬಾ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ? ನಿನ್ನಂತ ದ್ರೋಹಿಯೊಂದಿಗೆ ಒಟ್ಟಿಗೆ ಇರೋದಕ್ಕಿಂತ ದೂರ ಹೋಗೋದೆ ಮೇಲು. ಗುಡ್ ಬೈ.” ಎಂದು ಹೇಳಿ ಗಂಡನನ್ನು ಹಾಗೂ ಮಕ್ಕಳನ್ನು ಬಿಟ್ಟು ಹೋಗುತ್ತಾಳೆ.  ಪ್ರೇಕ್ಷಕರಿಗೆ ಬಾಗಿಲು ಮುಚ್ಚಿದ ಸದ್ದು ಕೇಳುತ್ತದೆ. &lt;br /&gt;&lt;br /&gt;&lt;br /&gt;ಈ ನಾಟಕ ಮಹಿಳಾ ಪ್ರಧಾನ ನಾಟಕ. ಇಡಿ ಯೋರೋಪಿನಲ್ಲಿ ಸಂಚಲನವನ್ನು ಮೂಡಿಸಿತ್ತು. ಈ ನಾಟಕದ ಆಗಮನದೊಂದಿಗೆ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಡತೊಡಗಿದರು. ಪರಿಣಾಮವಾಗಿ ಮಹಿಳಾ ಸಂಘಟನೆಗಳು, ಸ್ತ್ರೀ ಶಕ್ತಿಗಳು ಹುಟ್ಟಿಕೊಂಡವು.  ಈ ನಾಟಕದ ಮೂಲಕಥೆಯನ್ನು ಆಧಾರವಾಗಿಟ್ಟುಕೊಂಡು ಸೀತಾರಾಮರು ಆ ಕಡೆ ಈ ಕಡೆ ಹಿಗ್ಗಿಸಿ ತಮ್ಮದೇ ಕಥೆಯೆಂಬಂತೆ “ಮೀರಾ, ಮಾಧವ, ರಾಘವ” ದಲ್ಲಿ ಬಿಂಬಿಸಿದ್ದಾರೆ. &lt;br /&gt;&lt;br /&gt;&lt;br /&gt;“ಮೀರಾ, ಮಾಧವ, ರಾಘವ” ದಲ್ಲಿ ರೌಡಿ ರಾಘವ ಕಥಾನಾಯಕಿ ಮೀರಾಳನ್ನು ಮದುವೆ ಆಗೆಂದು ಪೀಡಿಸುತ್ತಿರುತ್ತಾನೆ. ಆದರೆ ಅವಳು ಅವನನ್ನು ನಿರಾಕರಿಸಿ ಲೆಕ್ಚರರ್ ಆಗಿರುವ ಮಾಧವನನ್ನು ಮದುವೆ ಆಗುತ್ತಾಳೆ. ಮಾಧವನಿಗೆ ಮೊದಲಿನಿಂದಲೂ ಐ.ಎ.ಎಸ್ ಮಾಡಬೇಕೆಂಬ ಮಹಾದಾಸೆ ಇರುತ್ತದೆ. ಆದರೆ ದುಡ್ಡಿನ ಅಡಚಣೆಯಿಂದಾಗಿ ಅವನ ಕನಸು ತಟಸ್ಥವಾಗಿರುತ್ತದೆ. ಆದರೆ ಮೀರಾ ತನ್ನ ತೌರು ಮನೆಯ ಆಸ್ತಿಯಲ್ಲಿ ಭಾಗ ಕೇಳಿ ಅದರಿಂದ ಬಂದ ದುಡ್ಡಿನಿಂದ ನಿನ್ನನ್ನು ಐ.ಎ.ಎಸ್ ಮಾಡಿಸುತ್ತೇನೆ ನೀನು ಹೋಗಿ ಬಾ ಎಂದು ಗಂಡನನ್ನು ದೆಹಲಿಗೆ ಕಳಿಸುತ್ತಾಳೆ. ತೌರು ಮನೆಯ ಆಸ್ತಿಯಲ್ಲಿ ಸದ್ಯಕ್ಕೆ ಆಸ್ತಿಯಲ್ಲಿ ಭಾಗ ಸಿಗುವದಿಲ್ಲ ಎಂದು ಗೊತ್ತಾದ ಮೇಲೆ ಇದರಿಂದ ತನ್ನ ಗಂಡನ ಐ.ಎ.ಎಸ್ ಮಾಡುವ ಕನಸು ನುಚ್ಚು ನೂರಾಗುತ್ತದೆ ಅವನನ್ನು ಹೇಗಾದರು ಮಾಡಿ ಐ.ಎ.ಎಸ್ ಮಾಡಿಸಲೇಬೇಕೆಂದು ನಿರ್ಧರಿಸಿ ಸಹಾಯಕ್ಕಾಗಿ ತನ್ನ ಗೆಳತಿ ಕಲ್ಯಾಣಿಯ ತಂದೆ ಬಳಿ ಹೋಗುತ್ತಾಳೆ. ಅವರು ಒಂದು ಫೈನಾನ್ಸ್ ಕಂಪನಿಯಲ್ಲಿ ಮಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಹತ್ತು ಲಕ್ಷದಷ್ಟು ಹಣವನ್ನು ಅವರಿಗೆ ಕೊಡಲು ಪವರ್ ಇಲ್ಲವೆಂದು ಹೇಳಿ ಮೀರಾಳನ್ನು ತನ್ನ ಬಾಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಮೀರಾಳ ದುರಾದೃಷ್ಟಕ್ಕೆ ಆ ಬಾಸ್ ಬೇರೆ ಯಾರೂ ಅಲ್ಲದೆ ಈ ಹಿಂದೆ ಅವಳನ್ನು ಮದುವೆಯಾಗೆಂದು ಪೀಡಿಸುತ್ತಿದ್ದ ರಾಘವನಾಗಿರುತ್ತಾನೆ. ಅವನು ಹತ್ತು ಲಕ್ಷದಷ್ಟು ಹಣವನ್ನು ಕೊಡಲು ಮುಂದಾಗುತ್ತಾನೆ. ಆದರೆ ಅದಕ್ಕೆ ಮೀರಾಳ ಹತ್ತಿರ ಸೆಕ್ಯುರಿಟಿ ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಅವನು ಒಂದು ಬಾಂಡ್ ಪೇಪರ್ ಮೇಲೆ ಅವಳ ಗಂಡನೇ ಅವನಿಂದ ಸಾಲ ತೆಗೆದುಕೊಂಡಿರುವಂತೆ ಅವಳ ಕೈಲಿ ಬರೆಸಿ ಅವಳ ಗಂಡನ ಸಹಿಯನ್ನು ಫೋರ್ಜರಿ ಮಾಡಲು ಹೇಳುತ್ತಾನೆ. ಮತ್ತು ಪಕ್ಕದಲ್ಲಿ ಸಾಕ್ಷಿಯಾಗಿ ಅವಳಿಗೆ ಸಹಿ ಹಾಕಲು ಹೇಳುತ್ತಾನೆ. ಏಕೆಂದರೆ ಅವಳ ಗಂಡ ಹೇಗೂ ಐ.ಎ.ಎಸ್ ಆಫಿಸರ್ ಆಗುವವ. ಮುಂದೆ ಅವನಿಂದಾದರೂ ವಸೂಲಿ ಮಾಡಬಹುದೆಂಬುದು ಅವನ ಮುಂದಾಲೋಚನೆ. ಮೀರಾ ಇಷ್ಟೆಲ್ಲ ಮಾಡಲು ಹಿಂದೆ ಮುಂದೆ ನೋಡುತ್ತಳಾದರೂ ಗಂಡನ ಐ.ಎ.ಎಸ್ ಗೆ ತೊಂದರೆಯಾಗಬಾರದೆಂದು ಗಂಡನ ಸಹಿ ಮಾಡಿ ದುಡ್ಡು ತೆಗೆದುಕೊಂಡು ಬರುತ್ತಾಳೆ. ಆದರೆ ಗಂಡನ ಹತ್ತಿರ ತೌರು ಮನೆಯವರು ದುಡ್ಡು ಕೊಟ್ಟರೆಂದು ಸುಳ್ಳು ಹೇಳುತ್ತಾಳೆ. ನಂತರ ರಾಘವ ದುಡ್ಡಿಗೆ ಬಡ್ಡಿ ಕೊಡೆಂದು ಪೀಡಿಸುತ್ತಾನೆ. ಇಲ್ಲವಾದರೆ ತನ್ನ ಕ್ಲಬ್ಬಿನಲ್ಲಿ ಹಾಡೆಂದು ಕೇಳುತ್ತಾನೆ. ಮೀರಾ ಯಾರಿಗೂ ಗೊತ್ತಿಲ್ಲದಂತೆ ಕ್ಲಬ್ಬಿಗೆ ಹೋಗಿ ಹಾಡಿ ಬರುತ್ತಾಳೆ. ಇತ್ತ ಗಂಡ ಐ.ಎ.ಎಸ್ ಪಾಸ್ ಮಾಡಿ ಹೇಮಗಿರಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಾನೆ. ಮುಂದೆ ಅದೇ ಊರಿನವನಾದ ರಾಘವ ಎಲೆಕ್ಷನ್ ಗೆ ನಾಮಿನೇಶನ್ ಫೈಲ್ ಮಾಡಲು ಹೋಗುತ್ತಾನೆ. ಆದರೆ ಅಷ್ಟರಲ್ಲಿ ಅವನೊಬ್ಬ ದೊಡ್ಡ ಕ್ರಿಮಿನಲ್ ಆಗಿದ್ದರಿಂದ ಅವನ ಮೇಲೆ ಗಡಿಪಾರು ಆಜ್ಞೆಯನ್ನು ಜಿಲ್ಲಾಧಿಕಾರಿ ಮಾಧವ ಹೊರಡಿಸಿರುತ್ತಾನೆ. ಹೀಗಾಗಿ ಅವನಿಗೆ ನಾಮಿನೇಶನ್ ಫೈಲ್ ಮಾಡಲಾಗುವದಿಲ್ಲ. ಆದರೆ ನಾಮಿನೇಶನ್ ಫೈಲ್ ಮಾಡಲು ಇನ್ನೂ ಸಮಯವಿರುವದರಿಂದ ಆ ಆರ್ಡರ್ ನ್ನು ಕ್ಯಾನ್ಸಲ್ ಮಾಡಿಸಲು ಮಾಧವನ ಹೆಂಡತಿ ಮೀರಾಳನ್ನು ಕೇಳುತ್ತಾನೆ. ಆದರೆ ಅವಳು ತನ್ನ ಗಂಡ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದರಿಂದ ಇಂಥದನ್ನು ಮಾಡುವದಿಲ್ಲವೆಂದು ಹೇಳಿದಾಗ ಅವಳು ಫೋರ್ಜರಿ ಮಾಡಿರುವ ವಿಷಯವನ್ನು ಅವಳ ಗಂಡನಿಗೆ ಹೇಳುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಅವಳು ಕೂಡ ಈ ಸಂಕಷ್ಟದಿಂದ ಹೇಗಾದರು ಪಾರಾದರೆ ಸಾಕೆಂದು ಗಂಡನಿಗೆ ಆರ್ಡರ್ ಕ್ಯಾನ್ಸಲ್ ಮಾಡಲು ಹೇಳುತ್ತಾಳೆ. ಆದರೆ ಪ್ರಾಮಾಣಿಕ ಅಧಿಕಾರಿಯಾದ ಅವನು ಕ್ಯಾನ್ಸಲ್ ಮಾಡಲು ನಿರಾಕರಿಸುತ್ತಾನೆ. ಆರ್ಡರ್ ಕ್ಯಾನ್ಸಲ್ ಆಗದೆ ಹೋದಾಗ ಕ್ರೋಧಗೊಂಡ ರಾಘವ ಒಂದು ದಿನ ನೇರವಾಗಿ ಮಾಧವನ ಹತ್ತಿರ ಬಂದು ಅವನ ಹೆಂಡತಿ ಫೋರ್ಜರಿ ಮಾಡಿರುವ ವಿಷಯವನ್ನು ಹೇಳುತ್ತಾನೆ. ಅಲ್ಲಿಂದ ಮುಂದೆ ಮೀರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಗಂಡ ಹೆಂಡತಿಯರ ಮಧ್ಯ ಇದೆ ವಿಷಯಕ್ಕೆ ಜಗಳ ಶುರುವಾಗುತ್ತದೆ. ಸಾಲ ಮಾಡಿದ ಕಾರಣವನ್ನು ಅವಳು ಹೇಳಲೇ ಬೇಕಾಗುತ್ತದೆ. ಆದರೆ ಮಾಧವ ಈ ಫೋರ್ಜರಿ ಪತ್ರ ಪೋಲಿಸ್ ನವರ ಕೈಗೆ ಸಿಕ್ಕರೆ ಇಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ ಇದರಿಂದ ತನ್ನ ಮಾನ ಮರ್ಯಾದೆಯೆಲ್ಲ ಹರಾಜಾಗುತ್ತದೆ ಎಂದು ಹೇಳುತ್ತಾನೆ. ಕೊನೆಗೆ ಹೆಂಡತಿಗೆ ಅವನ ಹತ್ತಿರ ಪ್ರೀತಿಯ ನಾಟಕವಾಡಿ ಆ ಓರಿಜಿನಲ್ ಕಾಪಿಯನ್ನು ತೆಗೆದುಕಂಡು ಬಾ ಎಂದು ಹೇಳುತ್ತಾನೆ. ಅವಳು ಅದೇ ಪ್ರಕಾರ ಮುಚ್ಚಿದ ಖಾಲಿ ಲಕೋಟಿಯನ್ನು ರಾಘವನ ಹತ್ತಿರ ತೆಗೆದುಕೊಂಡು ಇದರಲ್ಲಿ “ನಿನ್ನ ಆರ್ಡರ್ ಕ್ಯಾನ್ಸಲ್ ಮಾಡಿರುವ ಕಾಪಿಯಿದೆ. ನನಗೆ ನನ್ನ ಓರಿಜಿನಲ್ ಕಾಪಿ ಕೊಡು” ಎಂದು ಕೇಳುತ್ತಾಳೆ. ಆದರೆ ಚಾಣಾಕ್ಷನಾದ ರಾಘವ ಓರಿಜಿನಲ್ ಕಾಪಿ ತೋರಿಸುವ ನಾಟಕವಾಡಿ ಅವಳ ಕೈಯಿಂದ ಲಕೋಟಿಯನ್ನು ಕಿತ್ತುಕೊಳ್ಳುತ್ತಾನೆ. ಅದು ಖಾಲಿಯಿರುವದನ್ನು ನೋಡಿ ಓರಿಜಿನಲ್ ಕಾಪಿ ಕೊಡುವದಿಲ್ಲ ಎಂದು ಹೇಳುತ್ತಾನೆ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಮೀರಾ ಪಕ್ಕದಲ್ಲಿಯೇ ಇದ್ದ ಅವನ ಪಿಸ್ತೂಲಿನಿಂದ ಶೂಟ್ ಮಾಡುತ್ತಾಳೆ. ಆಮೇಲೆ ಗಂಡನ ಹತ್ತಿರ ಬಂದು ತಪ್ಪೊಪ್ಪಿಕೊಳ್ಳುತ್ತಾಳೆ.  ಆದರೆ ಗಂಡ ಅವಳನ್ನು ಆ ಕೊಲೆ ಕೇಸಿನಿಂದ ಪಾರು ಮಾಡಬಹುದಾಗಿತ್ತಾದರೂ ಹಾಗೆ ಮಾಡದೆ “ಒಳ್ಳೆ ಲಾಯರ್ ನ್ನ ನೇಮಿಸಿ ಕೇಸ್ ಫೈಟ್ ಮಾಡೋಣ ಶಿಕ್ಷೆಯಾಗುತ್ತೆ. ಅದಾದ ಮೇಲೆ ಬಿಡುಗಡೆನೂ ಆಗುತ್ತೆ. ಆದ್ರೆ ಒಂದು ಮಾತು ಮೀರಾ, ಬಿಡುಗಡೆಯಾದ ಮೇಲೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಯಾಕೆಂದ್ರೆ ಒಬ್ಬ ಕೊಲೆಗಾರ್ತಿ ಡೀಸಿ ಹೆಂಡತಿಯಾಗಿ ಉಳಿಯೋದಕ್ಕೆ ಸಾಧ್ಯನಾ?”  ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಆದರೆ ಸಿನಿಮಾದ ಕೊನೆಯಲ್ಲಿ ರಾಘವ ಬದುಕುಳಿಯುತ್ತಾನೆ. ಆಶ್ಚರ್ಯ ಎಂಬಂತೆ ಅವನು ಬದಲಾಗುತ್ತಾನೆ ಹಾಗೂ ಮೀರಾಳ ಮೇಲೆ ಯಾವುದೇ ಕಂಪ್ಲೇಟ್ ಕೊಡದೆ ಅವಳ ಫೋರ್ಜರಿ ಡಾಕುಮೆಂಟ್ಸ್ ನ್ನು ವಾಪಾಸು ಕೊಡುತ್ತಾನೆ. ಆಗ ಅವಳ ಗಂಡ ಮಾಧವ “ಬಾ, ಇನ್ನೇನು ಕಷ್ಟ ಕಳಿತಲ್ಲ, ಹ್ಯಾಪಿಯಾಗಿ ಸಿಲೆಬ್ರೇಟ್ ಮಾಡೋಣ” ಎಂದು ಹೇಳುತ್ತಾನೆ. ಆದರೆ ಮೀರಾ ಅವನ ವರ್ತನೆಗೆ ಬೇಸರಪಟ್ಟುಕೊಂಡು ಅತ್ಯಂತ ತಿರಸ್ಕಾರದಿಂದ ಅವನನ್ನು ಬಿಟ್ಟು ಹೋಗುತ್ತಾಳೆ. ಹೋಗುವ ಮುನ್ನ ಅವನು ಪರಿ ಪರಿಯಾಗಿ ಕೇಳಿಕೊಂಡರೂ ಅವಳು ಇರದೆ ಹೊರಟು ಹೋಗುತ್ತಾಳೆ. ಆದರೆ ಹೋಗುವ ಮುನ್ನ “ನಾನು ನಿನಗೋಸ್ಕರ ಎಷ್ಟೆಲ್ಲ ಕಷ್ಟಪಟ್ಟೆ. ನಿಮ್ಮ ಐ.ಎ.ಎಸ್ ಕನಸು ನನಸು ಮಾಡಕ್ಕೋಸ್ಕರ ಸಾಲ ಮಾಡಿದೆ. ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನನ್ನನ್ನು ಬಚಾವ್ ಮಾಡಲು ಸಾಧ್ಯವಿದ್ದರೂ ನೀನು ಹಾಗೆ ಮಾಡಲಿಲ್ಲ. ನಿನಗೆ ನಿನ್ನ ಪ್ರೆಸ್ಟಿಜ್ ಮುಖ್ಯ ಆಯ್ತು. ಅಧಿಕಾರ ದೊಡ್ಡದು ಆಯ್ತು. ಪ್ರೀತಿಸೊ ಹೆಂಡತಿ ಜೈಲಿಗೆ ಹೋದ್ರು ಚಿಂತೆ ಇಲ್ಲ, ನಿನಗೆ ನಿನ್ನ ಕೆಲಸಾನೆ ದೊಡ್ಡದು ಅಯ್ತು. ಇದಕ್ಕಿಂತ ದ್ರೋಹ ಬೇಕಾ? ಈಗ ಕಷ್ಟ ಕಳೀತು ಅಂತಾ ಬಾ ಮೀರಾ ಒಟ್ಟಿಗಿರೋಣ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ ಮಾಧವ? ಗುಡ್ ಬೈ.” ಎಂದು ಹೇಳಿ ಹೊರಟು ಹೋಗುತ್ತಾಳೆ. ಅಲ್ಲಿಗೆ ಸೀತಾರಾಮ್ “ಇದು ಕೊನೆಯಲ್ಲ, ಹೊಸ ಬದುಕಿನ ಹೆಜ್ಜೆ” ಎಂದು ತೋರಿಸುವದರ ಮೂಲಕ ಸಿನಿಮಾ ಮುಗಿಸುತ್ತಾರೆ.&lt;br /&gt;&lt;br /&gt;&lt;br /&gt;ಈಗ ಹೇಳಿ ಇವೆರೆಡರ ಕಥೆ ಒಂದೇ ಆಗಿಲ್ಲವೆ? ಇಲ್ಲಿ ಮೀರಾ ನೋರಾಳನ್ನು, ರಾಘವ  ಕ್ರೊಗ್ಸ್ಟ್ಯಾಡ್ ನನ್ನು, ಮಾಧವ ಹೆಲ್ಮರ್ ನನ್ನು ಪ್ರತಿನಿಧಿಸುವದಿಲ್ಲವೆ? ಹಾಗೂ ಘಟನೆಗಳು ಕೂಡ ಹೆಚ್ಚು ಕಮ್ಮಿ ಒಂದೇ ಆಗಿಲ್ಲವೆ? ಈ ಸಣ್ಣ ನಾಟಕವನ್ನು ಸೀತಾರಾಮರು ಒಂದು ಸಿನಿಮಾಕ್ಕೆ ಆಗುವಷ್ಟು ಸರಕನ್ನಾಗಿ ಹಿಗ್ಗಿಸಿಕೊಂಡು ಈ ಚಿತ್ರ ತೆಗೆದಿಲ್ಲವೆ? ಸೀತಾರಾಮರು ನಿರ್ದೇಶಕರಲ್ಲದೆ ಮೂಲತಃ ಲೇಖಕರು ಹೌದು. ಕನ್ನಡಕ್ಕೆ “ಕ್ರೌರ್ಯ” ದಂಥ ಶ್ರೇಷ್ಠ ಕಥೆಯನ್ನು ಹಾಗೂ “ನಮ್ಮೊಳಗೊಬ್ಬ ನಾಜೂಕಯ್ಯ” ದಂಥ ಉತ್ತಮ ನಾಟಕವನ್ನು ಸೀತಾರಾಮರು ಕೊಟ್ಟಿದ್ದಾರೆ. ಅಂಥವರು ಈ ರೀತಿ ಕಥೆ ಕದಿಯುವದು ಸರಿಯೇ?&lt;br /&gt;&lt;br /&gt;&lt;br /&gt;ಈ ಸಿನಿಮಾ ಬಂದಿದ್ದು 2007ರಲ್ಲಿ. ಆದರೆ ಆಗ ಈ ನಕಲಿನ ವಿಷಯ ಕುರಿತಂತೆ ಸುದ್ದಿಯಾಗಿತ್ತೋ ನನಗೆ ಗೊತ್ತಿಲ್ಲ. ಈಗ್ಗೆ ಆರು ತಿಂಗಳಿನ ಹಿಂದೆ ನಾನು ದೂರದ ಲಿಬಿಯಾದಲ್ಲಿ ಕುಳಿತು ಕಸ್ತೂರಿ ಚಾನೆಲ್ಲಿನಲ್ಲಿ ಈ ಸಿನಿಮಾವನ್ನು ನೋಡಿದೆ. ಅರ್ಧ ಸಿನಿಮಾ ನೋಡುತ್ತಿದ್ದಂತೆ ಅರೆ ಇದು ಇಬ್ಸನ್ನನ “ಎ ಡಾಲ್ಸ್ ಹೌಸ್” ನಾಟಕದ ತರಾನೆ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ನೋಡಿಯೇ ಬಿಡೋಣ ಎಂದು ನೋಡಿದರೆ ಅದು ಕೂಡ ಹಾಗೆಯೇ ಇತ್ತು. ಆಮೇಲೆ ಬಹುಶಃ ಟೈಟಲ್ ಕಾರ್ಡಿನಲ್ಲಿ ಮೂಲ ಕಥೆಯನ್ನು ಪ್ರಸ್ತಾಪಿಸರಬೇಕು, ನಾನು ಗಮನಿಸಿರಿಲಿಕ್ಕಿಲ್ಲ ಎಂದುಕೊಂಡು ಸುಮ್ಮನಾದೆ. ಆದರೆ ಈ ಸಾರಿ ಬೆಂಗಳೂರಿಗೆ ಹೋದಾಗ “ಮೀರಾ, ಮಾಧವ, ರಾಘವ” ಸಿ.ಡಿ.ಯನ್ನು ತೆಗೆದುಕೊಂಡು ಬಂದು ಇಲ್ಲಿ ಮತ್ತೊಮ್ಮೆ ನೋಡಿದೆ. ಎಲ್ಲಿಯೂ ಮೂಲಕಥೆಯ ಪ್ರಸ್ತಾಪವಿಲ್ಲ. ಈಗ ಹೇಳಿ ಸೀತಾರಾಮರು ಕಥೆ ಕದ್ದಿದ್ದಾರೆ ಅನಿಸುವದಿಲ್ಲವೆ? ಅಥವಾ 21ನೇ ಶತಮಾನದ ಇವರದು ಹಾಗೂ 19ನೇ ಶತಮಾನದ ಇಬ್ಸನ್ನನ ಕಲ್ಪನೆಗಳು ಒಂದೇ ಆಗಿದ್ದವಾ? ಈ ಪ್ರಶ್ನೆಗಳಿಗೆ ಸೀತಾರಾಮರೇ ಉತ್ತರಿಸಬೇಕು. &lt;br /&gt;&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-5157668514614149670?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/5157668514614149670/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/10/blog-post_09.html#comment-form' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/5157668514614149670'/><link rel='self' type='application/atom+xml' href='http://www.blogger.com/feeds/2802103225554897449/posts/default/5157668514614149670'/><link rel='alternate' type='text/html' href='http://bisilahani.blogspot.com/2010/10/blog-post_09.html' title='ಟಿ. ಎನ್. ಸೀತಾರಾಮ್ ಕಥೆ ಕದ್ದಿದ್ದಾರೆಯೆ?'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_FiNlrLfTRP0/TLDTcK_M6QI/AAAAAAAAAVU/CQEqQAA1Bw4/s72-c/1.jpg' height='72' width='72'/><thr:total>9</thr:total></entry><entry><id>tag:blogger.com,1999:blog-2802103225554897449.post-6915303903978591874</id><published>2010-10-01T16:12:00.003+01:00</published><updated>2010-10-01T16:25:55.374+01:00</updated><title type='text'>ನಿಮ್ಮಿ ಮತ್ತು ರಟ್ಟಿನ ಬಾಕ್ಸು</title><content type='html'>&lt;a href="http://1.bp.blogspot.com/_FiNlrLfTRP0/TKX9UbpcuJI/AAAAAAAAAVM/lvWqeZRfMMM/s1600/empty_box.jpg"&gt;&lt;img style="float:left; margin:0 10px 10px 0;cursor:pointer; cursor:hand;width: 175px; height: 187px;" src="http://1.bp.blogspot.com/_FiNlrLfTRP0/TKX9UbpcuJI/AAAAAAAAAVM/lvWqeZRfMMM/s400/empty_box.jpg" border="0" alt=""id="BLOGGER_PHOTO_ID_5523099045500598418" /&gt;&lt;/a&gt;&lt;br /&gt;ನಾನು ಲಂಕೇಶ್ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ತೊಂಬತ್ತರ ದಶಕದ ಮಧ್ಯಭಾಗದಿಂದ. ಅವು ನನ್ನ ಕಾಲೇಜು ದಿನಗಳು. ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಹದಿ ಹರೆಯದ ಹಳವಂಡಗಳಿಗೆ ಜೋತುಬಿದ್ದ ಕಾಲವದು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಲ್ಲಿ ವಯೋಸಹಜನುಗುಣವಾಗಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು “ತುಂಟಾಟ”. ಜೊತೆಗೆ ನೀಲು ಪದ್ಯಗಳು ಮತ್ತು ನಿಮ್ಮಿ ಕಾಲಂ. ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಲಂಕೇಶರೇ ಮೊದಲಿಗೆ ಅದನ್ನು ಪರಕಾಯ ಪ್ರವೇಶ ಮಾಡಿ ಬರೆದರು. ಆನಂತರ ಪ್ರತಿಭಾ ನಂದಕುಮಾರ್ ಒಂದಷ್ಟು ದಿವಸ ಬರೆದರು. ಮುಂದೆ ಅದನ್ನು ಅನಿತಾ ನಟರಾಜ್ ಹುಳಿಯಾರ್ ಮುಂದುವರೆಸಿಕೊಂಡು ಹೋದರು. ನಿಮ್ಮಿ ಕಾಲಂ ಆ ಕಾಲದ ಹದಿ ಹರೆಯದವರ ಹೃದಯಕ್ಕೆ ಲಗ್ಗೆ ಹಾಕುವದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಏಕೆಂದರೆ ಅದು ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಒಂದಿಷ್ಟು ಅವರ ಜಗಳ, ಮುನಿಸು ಮತ್ತು ಸಲ್ಲಾಪಗಳಿಂದ ರಾರಾಜಿಸುವದರ ಮೂಲಕ ನನ್ನಂತ ಹದಿ ಹರೆಯದವರನ್ನು ಹಿಡಿದಿಟ್ಟಿತ್ತು. ಹೆಚ್ಚು ಕಮ್ಮಿ ನಿಮ್ಮಿ ನನ್ನಂತ ಎಷ್ಟೊ ಹುಡುಗರಿಗೆ ಪ್ರೇಯಸಿಯಾಗಿ ಬಿಟ್ಟಿದ್ದಳು. ಅವಳ ಕಚುಗುಳಿಯಂತ ಬರಹ ನನ್ನನ್ನು ಬಹುವಾಗಿ ತಾಕಿತ್ತು. ಬಹಳಷ್ಟು ಸಾರಿ  ನಿಮ್ಮಿ ಅವಳು ಮತ್ತು ಅವಳ ಪ್ರಿಯಕರ ಅಮರ ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದಿದ್ದರು, ಏನು ಗಿಫ್ಟು ತಂದಿದ್ದರು ಬರಿ ಇಂಥವೇ ವಿಷಯಗಳೊಂದಿಗೆ ಬೋರ್ ಹೊಡೆಸುತ್ತಿದ್ದಳು. ಆದರೆ ಇವೆಲ್ಲವುಗಳ ಮಧ್ಯ ಆಗೊಮ್ಮೆ ಈಗೊಮ್ಮೆ ಮನಸ್ಸನ್ನು ತಾಕುವಂಥ ತುಂಬಾ ಇಂಟರೆಸ್ಟಿಂಗ್ ವಿಷಯಗಳನ್ನು ಸಹ ಬರೆಯುತ್ತಿದ್ದಳು. ಅಂಥವುಗಳಲ್ಲಿ ರಟ್ಟಿನ ಬಾಕ್ಸಿನ ಕತೆಯೊಂದು. ನಿಮ್ಮಿ ಬರೆದ ಆ ಅನುಭವಕಥನವನ್ನು ನಾನು ಓದಿದಂತೆ ಜ್ಞಾಪಿಸಿಕೊಂಡು ಅವಳ ಧಾಟಿಯಲ್ಲಿಯೇ ನಿಮ್ಮ ಮುಂದೆ ಇಡುತ್ತಿದ್ದೇನೆ.&lt;br /&gt;&lt;br /&gt;ಒಂದು ಇಳಿಸಂಜೆ ನಾನು ನನ್ನ ಸ್ಕೂಟಿಯನ್ನು ತೆಗೆದುಕೊಂಡು ಮೈಸೂರಿನ ಚಾಮುಂಡಿ ಬೆಟ್ಟದಿಂದ ವಾಪಾಸಾಗುತ್ತಿದ್ದೆ. ಅವತ್ತು ಸಣ್ಣಗೆ ತುಂತುರು ಮಳೆ ಹುಯ್ಯುತ್ತಿತ್ತು.  ಹಾಗೆ ಹೋಗುವಾಗ ಆ ರಸ್ತೆಯ ಪಕ್ಕದಲ್ಲಿ ಗಾರೆ ಕೆಲಸ ಮಾಡುವ ಹೆಂಗಸೊಬ್ಬಳು ತನ್ನ ಪುಟ್ಟ ಗುಡಿಸಿಲಿನಲ್ಲಿ ಕುಳಿತುಕೊಂಡು ಒಲೆ ಹೊತ್ತಿಸಲು ಹರ ಸಾಹಸ ಮಾಡುತ್ತಿದ್ದಳು ಮತ್ತು ಏನೇನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಳು.  ಅವಳು ಉಟ್ಟಿದ್ದ ಸೀರೆ ಮಾಸಿ ಹೋಗಿ ರವಿಕೆಯ ತೋಳು ಎಡಗೈ ಹತ್ತಿರ ಸ್ವಲ್ಪ ಹರಿದು ಹೋಗಿತ್ತು. ಬಹುಶಃ ಅವಳು ಆಗಷ್ಟೆ ಹೊರಗಿನ ಕೆಲಸ ಮುಗಿಸಿ ಬಂದಿದ್ದರಿಂದ ಅವಳ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಬಡತನ ಅವಳನ್ನು ಹಿಂಡಿ ಹಿಪ್ಪಿ ಮಾಡಿದಂತಿತ್ತು. ಅದೇಕೊ ಅವಳ ಮುಖದಲ್ಲಿನ ಮುಗ್ಧತೆ ಹಾಗು ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುವ ಬಡತನದ ಛಾಯೆ ನನ್ನಲ್ಲಿ ತಟ್ಟನೆ ಒಂದು ಕರುಣಾ ಭಾವವನ್ನು ಮೂಡಿಸಿತು. ಎಂದೂ ಇಂಥ ಬಡತನದ ಬಿಸಿ ಅನುಭವಕ್ಕೆ ತೆರೆದುಕೊಳ್ಳದ ಶ್ರೀಮಂತ ಹುಡುಗಿಯಾದ ನನಗೆ ಏಕೋ ಆ ಹೆಂಗಸಿನ ಹೋರಾಟದ ಬದುಕು ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿತು. ನಾನು ತಕ್ಷಣ ನನ್ನ ಸ್ಕೂಟಿಯನ್ನು ನಿಲ್ಲಿಸಿ ಆ ಹೆಂಗಸು ಹೇಗೆ ಒಲೆ ಹೊತ್ತಿಸಬಹುದು ಎಂದು ದೂರದಿಂದಲೇ ನೋಡುತ್ತಾ ನಿಂತೆ. ಮೊದಲು ಅವಳು ಸೌದೆಯನ್ನು ಇಟ್ಟು, ಸ್ವಲ್ಪ ಸೀಮೆ ಎಣ್ಣೆ ಸುರಿದು,  ಕಡ್ಡಿ ಗೀರಿ ಬೆಂಕಿ ಹೊತ್ತಿಸಲು ನೋಡಿದಳು. ಊಹೂಂ, ಒಲೆ ಹೊತ್ತಿಕೊಳ್ಳಲಿಲ್ಲ. ಬರಿ ಹೊಗೆ ಮಾತ್ರ ಏಳುತ್ತಲೇ ಇತ್ತು. ಪಕ್ಕದಲ್ಲಿಯೇ ಇದ್ದ ರಟ್ಟಿನ ಊದುಗೊಳವೆಯನ್ನು ತೆಗೆದುಕೊಂಡು ಊದೇ ಊದಿದಳು. ಒಲೆ ಹೊತ್ತಲಿಲ್ಲ. ನಂತರ ಎಂದೋ ಆಯ್ದಿಟ್ಟಿದ್ದ ಹಾಳೆಯ ಚೂರುಗಳನ್ನು ಒಲೆಯಲ್ಲಿ ಹಾಕಿ ಹೊತ್ತಿಸಲು ನೋಡಿದಳು. ಈಗ ಬರಿ ಹೊಗೆ ಎದ್ದಿತು. ಆದರೆ ಬೆಂಕಿ ಹೊತ್ತಿಕೊಳ್ಳಲಿಲ್ಲ.  ಆ ಹೊಗೆಗೆ ಅವಳು ಏದುಸಿರು ಬಿಡುತ್ತಾ ಹತ್ತಾರು ಬಾರಿ ಕೆಮ್ಮಿದಳು. ಜೊತೆಗೆ ಅವಳ ಕಣ್ಣು, ಮೂಗಿಂದ ನೀರು ಸುರಿಯಿತು. ಆಮೇಲೆ ಒಣ ಹುಲ್ಲುಕಡಿಗಳನ್ನು ತೆಗೆದುಕೊಂಡು ಒಂದಿಷ್ಟು ಪುರಳೆ ಮಾಡಿ ಬೆಂಕಿ ಹೊತ್ತಿಸಲು ನೋಡಿದಳು. ಬರಿ ಪುರಳೆ ಮಾತ್ರ ಉರಿದು ಮುಖ್ಯವಾದ ಸೌದೆ ಹೊತ್ತಿಕೊಳ್ಳಲಿಲ್ಲ. ಬಹುಶಃ ಮಳೆಯಿಂದಾಗಿ ಸೌದೆಗಳು ಒದ್ದೆಯಾಗಿ ಹಸಿ ಹಸಿಯಾಗಿದ್ದವೆಂದು ಕಾಣುತ್ತದೆ. ಅಷ್ಟರಲ್ಲಿ ಅವಳ ಐದು ವರ್ಷದ ಕಂದಮ್ಮ “ಅಮ್ಮಾ, ಹಸಿವಾಗ್ತಿದೆ. ಬೇಗ ಮುದ್ದೆ ಬೇಯಿಸಮ್ಮ” ಎಂದು ಅವಳ ಸೆರಗನ್ನು ಹಿಡಿದು ಎಳೆದಾಗ ಅವಳ ಕರುಳು ಚುರ್ರು ಎಂದಿರಬೇಕು. ಇನ್ನು ತಡ ಮಾಡದೆ ಗುಡಿಸಿಲಿನಿಂದ ಹೊರ ಬಂದು ಹತ್ತಿರದಲ್ಲಿಯೇ ಇದ್ದ ಕಿರಾಣಿ ಅಂಗಡಿಯೆಡೆಗೆ ನಡೆದಳು. ನಾನು ಇವಳೇನು ಮಾಡಬಹುದೆಂದು ಕುತೂಹಲದಿಂದ ಅವಳನ್ನೇ ಹಿಂಬಾಲಿಸಿದೆ. ಆ ಕಿರಾಣಿ ಅಂಗಡಿಯವನ ಹತ್ತಿರ ಹೋಗಿ “ಬುದ್ಧಿ, ಇವತ್ತು ಸೌದೆಯೆಲ್ಲಾ ನೆಂದು ಹೋಗಿ ಯಾಕೋ ಒಲೆನೇ ಹತ್ಕೊಳ್ತಾ ಇಲ್ಲ. ಅದ್ಕೆ ನಿಮ್ತಾವ ಸಾಮಾನು ತುಂಬೋ ಖಾಲಿ ರಟ್ಟಿನ ಬಾಕ್ಸು ಇದ್ರೆ ಕೊಡ್ತೀರಾ ಬುದ್ಧಿ. ಅದನ್ನೇ ಒಲೆಯೊಳಗಿಟ್ಟು ಹೆಂಗೋ ಉರಿ ಹೊತ್ತಿಸಿ ನನ್ನ ಮಗೀಗೆ ಒಂದಿಷ್ಟು ಮುದ್ದೆ ಬೇಸಿ ಹಾಕ್ತಿನಿ. ಬೋ ಹಸ್ಗೊಂಡಿದೆ” ಎಂದು ಬೇಡಿದಳು. ಅವಳು ಅಷ್ಟು ಕೇಳಿದ್ದೆ ತಡ ಆ ಕಿರಾಣಿ ಅಂಗಡಿಯವ ”ರಟ್ಟಿನ ಬಾಕ್ಸಂತೆ ರಟ್ಟಿನ ಬಾಕ್ಸು. ಎಲ್ಲಿಂದ ತರೋಣಮ್ಮಾ? ಯಾವ ರಟ್ಟಿನ ಬಾಕ್ಸು ಇಲ್ಲ, ಏನೂ ಇಲ್ಲ. ಹೋಗಮ್ಮಾ ಹೋಗು. ಬಂದಬಿಟ್ಲು ದೊಡ್ಡದಾಗಿ ರಟ್ಟಿನ ಬಾಕ್ಸು ಕೇಳ್ಕೊಂಡು” ಎಂದು ಅವಳ ಮೇಲೆ ಹರಿಹಾಯ್ದ.  ಪಾಪ, ಅವಳು ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಸಪ್ಪೆ ಮುಖ ಹಾಕಿಕೊಂಡು ಗುಡಿಸಿಲಿನತ್ತ ಹೆಜ್ಜೆ ಹಾಕಿದಳು. ನನಗೆ ಅವಳ ಅವಸ್ಥೆಯನ್ನು ನೋಡಿ ಮರುಕ ಉಂಟಾಯಿತು. ಹಾಗೆಯೇ ಕಿರಾಣಿ ಅಂಗಡಿಯವನ ಮೇಲೆ ಕೋಪ ಬಂತು. ನಾನೇ ನೋಡುತ್ತಿದ್ದಂತೆ ಅವನ ಬಳಿ ಅಷ್ಟೊಂದು ರಟ್ಟಿನ ಬಾಕ್ಸುಗಳಿದ್ದವು. ಅದರಲ್ಲಿ ಒಂದನ್ನು ಕೊಟ್ಟಿದ್ದರೆ ಅವನ ಗಂಟೇನು ಹೋಗುತ್ತಿತ್ತು? ಎಂದು ಬೇಸರಗೊಳ್ಳುತ್ತಾ ತಡಮಾಡದೆ ಅವನ ಬಳಿ ಹೋಗಿ “ನನಗೆ ಒಂದು ಖಾಲಿ ರಟ್ಟಿನ ಬಾಕ್ಸು ಬೇಕು. ಅತ್ಯವಶ್ಯವಾಗಿ ಬೇಕು. ನಾನದಕ್ಕೆ ದುಡ್ಡು ಕೊಡ್ತೇನೆ” ಎಂದು ಕೇಳಿದೆ. “ಅಯ್ಯೋ, ಒಂದೇನು ಮೇಡಂ, ಅಂಥಾವು ಹತ್ತು ಬೇಕಾದ್ರೆ ತಗೊಂಡು ಹೋಗಿ, ನಾವವನ್ನ ಇಟ್ಕೊಂಡು ಏನ್ ಮಾಡೋದಿದೆ? ಮತ್ತೆ ಖಾಲಿ ಬಾಕ್ಸುಗಳಿಗೆಲ್ಲ  ದುಡ್ಡು ಯಾಕೆ ಮೇಡಂ? ಹಂಗೇ ಸುಮ್ನೆ ತಗೊಂಡು ಹೋಗಿ ಮೇಡಂ” ಎಂದು ನನ್ನ ನೋಡಿ ನಗುತ್ತಾ “ಏಯ್, ಮೇಡಮ್ಮೋರಿಗೆ ಒಂದಿಷ್ಟು ರಟ್ಟಿನ ಬಾಕ್ಸು ಅಂತೆ ಕೊಟ್ಟು ಕಳಿಸೋ” ಎಂದು ತನ್ನ ಕೆಲಸದ ಆಳಿಗೆ ತಾಕೀತು ಮಾಡಿದ. ಅವನು ಆ ಖಾಲಿ ರಟ್ಟಿನ ಬಾಕ್ಸುಗಳನ್ನೆಲ್ಲಾ ಸರಿಯಾಗಿ ಮಡಿಚಿ ಒಂದರ ಮೇಲೆ ಒಂದಿಟ್ಟು ದಾರವನ್ನು ಕಟ್ಟಿ ನನ್ನ ಕೈಗಿತ್ತ.  ನಾನು ಆ ಅಂಗಡಿಯವನಿಗೆ ಥ್ಯಾಂಕ್ಸ್ ಹೇಳಿ ಅವಳ ಗುಡಿಸಿಲಿನತ್ತ ನಡೆದೆ.&lt;br /&gt;&lt;br /&gt;ನಾನು ಅವಳ ಗುಡಿಸಿಲಿನೊಳಕ್ಕೆ ನಡೆದು ಆ ಬಾಕ್ಷುಗಳನ್ನೆಲ್ಲಾ ಅವಳ ಮುಂದೆ ಇಟ್ಟು “ತಗೋ ಇವನ್ನ, ಇನ್ನೂ ಎಂಟು ದಿನಕ್ಕಾಗುವಷ್ಟು ತಂದಿದೇನೆ” ಎಂದು ಹೇಳಿದೆ. ಅವಳು ಕೃತಜ್ಞತಾ ಭಾವದಿಂದ ನನ್ನ ಕೈಯನ್ನು ಹಿಡಿದು “ಮುಂದಿನ ಜನ್ಮಾ ಅಂತಾ ಇದ್ರೆ ನಾನ್ ನಿನ್ ಹೊಟ್ಯಾಗ ಮಗಳಾಗಿ ಉಟ್ಟಿ ನಿನ್ ಉಪಕಾರ ತಿರಿಸ್ತೇನವ್ವಾ” ಎಂದು ಕಣ್ಣೀರಿಟ್ಟಳು. ನಾನು “ಅಳಬೇಡ. ಮಗೂಗೆ ಬೇಗ ಮುದ್ದೆ ಬೇಸಿ ಹಾಕಮ್ಮ” ಎಂದೆ. ಅವಳು ಮುದ್ದೆ ಬೇಯಿಸಿ ಮಗೂಗೆ ಉಣ್ಣಿಸೋವರೆಗೆ ಅವಳ ಹತ್ತಿರ ಇದ್ದು ಆ ದೃಶ್ಯಗಳನ್ನು ಕಣ್ತುಂಬಾ ತುಂಬಿಕೊಂಡು ಮನೆಯತ್ತ ಹೊರಟೆ. ರಾತ್ರಿ ಎಷ್ಟು ಹೊತ್ತಾದರು ನಿದ್ರೆ ಬರಲಿಲ್ಲ. ಏಕೋ ಈ ಘಟನೆ ನನ್ನನ್ನು ಕೊರೆಯುತ್ತಲೇ ಇತ್ತು. ಹಾಗೆ ನೋಡಿದರೆ ರಟ್ಟಿನ ಬಾಕ್ಸುಗಳು ನನಗೆ ಅವಶ್ಯವಾಗಿರಲಿಲ್ಲ. ಅವಶ್ಯವಿದ್ದದ್ದು ಆ ಹೆಂಗಸಿಗೆ. ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಂಗಡಿಯವ ಅವನ್ನು ಅವಳಿಗೆ ಕೊಡದೆ ನನಗೇಕೆ ಕೊಟ್ಟ?  ಅಂದರೆ ನನ್ನ ಯೌವನ, ರೂಪ ನೋಡಿ ಕೊಟ್ಟನೆ? ಅಥವಾ ನಾನು ವಿದ್ಯಾವಂತೆಯೆಂದು ಕೊಟ್ಟನೆ? ಅಥವಾ ನಾನು ಕೇಳಿದ ರೀತಿ ಆಧುನಿಕ ಬದುಕಿನ ನಯ ನಾಜೂಕತೆಯಿಂದ ಕೂಡಿತ್ತೆಂದು ಕೊಟ್ಟನೆ? ಅಥವಾ ಜನರಿಗೆ ಬಡತನ, ಬಡವರ ಗೋಳನ್ನು ಅರ್ಥ ಮಾಡಿಕೊಳ್ಳದಷ್ಟು ವ್ಯವಧಾನ, ತಾಳ್ಮೆ ಹೊರಟು ಹೋಗಿದೆಯೆ? ಅಥವಾ ಇವರೆಲ್ಲಾ ಇದ್ದವರಿಗೆ ಮಾತ್ರ ಸಹಾಯ ಮಾಡುತ್ತಾರಾ? ಉತ್ತರ ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ.&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-6915303903978591874?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/6915303903978591874/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/10/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/6915303903978591874'/><link rel='self' type='application/atom+xml' href='http://www.blogger.com/feeds/2802103225554897449/posts/default/6915303903978591874'/><link rel='alternate' type='text/html' href='http://bisilahani.blogspot.com/2010/10/blog-post.html' title='ನಿಮ್ಮಿ ಮತ್ತು ರಟ್ಟಿನ ಬಾಕ್ಸು'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_FiNlrLfTRP0/TKX9UbpcuJI/AAAAAAAAAVM/lvWqeZRfMMM/s72-c/empty_box.jpg' height='72' width='72'/><thr:total>0</thr:total></entry><entry><id>tag:blogger.com,1999:blog-2802103225554897449.post-693639283027192331</id><published>2010-07-20T10:02:00.001+01:00</published><updated>2010-07-27T12:45:16.265+01:00</updated><title type='text'>ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ......</title><content type='html'>ಪ್ರತಿ ವರ್ಷದಂತೆ ಈ ವರ್ಷವೂ ಒಂದು ತಿಂಗಳ ವಾರ್ಷಿಕ ರಜೆಯ ಮೇಲೆ ಭಾರತಕ್ಕೆ ಬರುತ್ತಿದ್ದೇನೆ. ಕಳೆದ ಫೆಬ್ರುವರಿಯಲ್ಲಿ ಅಮ್ಮನ ಆರೋಗ್ಯ ಸರಿಯಿರಲಿಲ್ಲವಾದ್ದರಿಂದ ಆಕೆಯನ್ನು ನೋಡಲು ಎಂಟು ದಿನದ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದೆನಾದರೂ ಆಗ ನನ್ನ ಬ್ಲಾಗ್ ಗೆಳೆಯರನ್ನು ಭೇಟಿಯಾಗಲು ಆಗಲಿಲ್ಲ. ಬಹಳಷ್ಟು ಸಮಯ ಅಲ್ಲಿ ಇಲ್ಲಿ ಕಳೆದು ಹೋಯಿತು. ಒಂದು ಫೋನ್ ಕೂಡ ಮಾಡಲಿಕ್ಕಾಗಲಿಲ್ಲ. ಮಾಡಿದ್ದರೆ ಗೆಳೆಯರಿಗೆ ಸಿಗಲೇಬೇಕಾಗುತ್ತಿತ್ತು. ಆದರೆ ನಾನಿರುವಷ್ಟು ದಿನಗಳನ್ನು ಹೆಂಡತಿ, ಮಗಳೊಂದಿಗೆ ಹಾಗೂ ಜೀವದ ಗೆಳೆಯ ಮಂಜುವಿನೊಂದಿಗೆ ಕಳೆಯಲು ನಿರ್ಧರಿಸಿದ್ದರಿಂದ ನಿಮಗ್ಯಾರಿಗೂ ಸಿಗಲಿಲ್ಲ ಹಾಗೂ ಫೋನ್ ಮಾಡಲಿಲ್ಲ. ಅದಕ್ಕಾಗಿ ಕ್ಷಮಿಸಿ.&lt;br /&gt;&lt;br /&gt;ನಾನು ನಿಮ್ಮನ್ನು ಭೇಟಿಯಾಗಿ ಅದಾಗಲೇ ಒಂದು ವರ್ಷ ಕಳೆಯಿತಲ್ಲವೆ? ಅಬ್ಬಾ, ಸಮಯ ಎಷ್ಟು ಬೇಗನೆ ಸರ ಸರನೆ ಸರಿದು ಹೋಯಿತು! ಒಂದು ವರ್ಷದಲ್ಲಿ ಎಷ್ಟೊಂದು ಬದಲಾವಣೆಗಳು ನನ್ನ ಬೆಂಗಳೂರಿನಲ್ಲಿ ಹಾಗೂ ನನಗೆ ಬೇಕಾದವರ ಜೀವನದಲ್ಲಿ! ಈ ಬದಲಾದದ್ದನ್ನು, ಬದಲಾದವರನ್ನು ಸ್ವೀಕರಿಸಲು ಸಾಕಷ್ಟು ಮಾನಸಿಕ ತಯಾರಿ ನಡೆಸಿಕೊಂಡೇ ಈಗ ಮತ್ತೆ ಬರುತ್ತಿದ್ದೇನೆ ಬೆಂಗಳೂರಿಗೆ. ಈ ಸಾರಿ ಬಂದಾಗ ಮಾಡಲು ಅಂಥ ಮುಖ್ಯವಾದ ಕೆಲಸವೇನಿಲ್ಲವಾದರೂ ನಾನು, ನನ್ನ ಹೆಂಡತಿ ಹಾಗೂ ಮಗಳು ಸೇರಿ ನಾಲ್ಕು ದಿನದ ಮಟ್ಟಿಗೆ ಸಿಂಗಾಪೂರ್ ಟ್ರಿಪ್ ಹೋಗಬೇಕಿದೆ. ಮಗಳನ್ನು ಒಳ್ಳೆ ಪ್ರೀ ನರ್ಸರಿ ಸ್ಕೂಲಿಗೆ ಹಾಕಬೇಕಿದೆ. ಮನೆ ಕಟ್ಟಲು ಅದರ ಖರ್ಚು ವೆಚ್ಚದ ಬಗ್ಗೆ ವಿಚಾರಿಸಬೇಕಿದೆ. Regional Institute of English Language, Bangalore ಇಲ್ಲಿಂದ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಯಾವದಾದಾರೊಂದು ಒಳ್ಳೆ ಡಿಸ್ಟನ್ಸ್ ಮೋಡ್ ಕೋರ್ಷಿಗೆ ಸೇರಿಕೊಳ್ಳಬೇಕಾಗಿದೆ ಹಾಗೂ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದಿಷ್ಟು ಪುಸ್ತಕಗಳನ್ನು ಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ಒಂದು ಫಾರ್ಮ್ ಹೌಸ್ ತೆಗೆಯಲು ಅದರ ಬಗ್ಗೆ ಮಾಹಿತಿ ಕಲೆಹಾಕಬೇಕಾಗಿದೆ. ಮನೆಗೆ ಹತ್ತಿರದ ರಂಗಶಂಕರದಲ್ಲಿ ಒಂದಿಷ್ಟು ಒಳ್ಳೆ ನಾಟಕಗಳನ್ನು ನೋಡಬೇಕಿದೆ. ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ “ನಾನು ನನ್ನ ಕನಸು” ಸಿನಿಮಾ ವೀಕ್ಷಿಸಬೇಕಿದೆ. ಒಂದಷ್ಟು ಹೊಸ ಭಾವಗೀತೆಗಳ ಹಾಗೂ ಸಿನಿಮಾಗಳ ಸೀಡಿಗಳನ್ನು ಕೊಳ್ಳಬೇಕಿದೆ. ನಾವು ಮೂರು ಜನ (ರಾಘು, ಮಂಜು ಮತ್ತು ನಾನು) ಗೆಳೆಯರು ಕುಳಿತುಕೊಂಡು ಹರಟೆ ಹೊಡೆಯಬೇಕಿದೆ, ಹಳೆಯ ನೆನಪುಗಳನ್ನು ಆಡಲು ಬಿಡಬೇಕಿದೆ. ಮದುವೆನೇ ಆಗುವದಿಲ್ಲ ಎನ್ನುತ್ತಿದ್ದ ಗೆಳೆಯ ಮಂಜು ಮದುವೆಯಾಗಿದ್ದರಿಂದ ಅವನನ್ನು ರೇಗಿಸಬೇಕಿದೆ, ಒಂದಿಷ್ಟು ಕಾಲೆಳೆಯಬೇಕಾಗಿದೆ, ಚನ್ನಾಗಿ ಗೋಳು ಹೊಯ್ದುಕೊಳ್ಳಬೇಕಿದೆ ಹಾಗೂ ಅವನಿಂದ ಒಂದೆರಡು ಲ್ಯಾವಿಶ್ ಪಾರ್ಟಿ ತೆಗೆದುಕೊಳ್ಳಬೇಕಿದೆ. ಹಾಗೆಯೇ ಅವನೊಂದಿಗೆ ಒಂದಿಷ್ಟು ಜಗಳವಾಡುತ್ತಾ ಆತ ಮಾಡಿದ ಕೆಲವು ತಪ್ಪುಗಳಿಗೆ ಆತನನ್ನು ಬಯ್ಯಬೇಕಿದೆ, ತರಾಟೆಗೆ ತೆಗೆದುಕೊಳ್ಳಬೇಕಿದೆ. ಅವನೊಂದಿಗೆ ಆಡದೆ ಉಳಿದ ಮಾತುಗಳು ನನ್ನ ಎದೆಯೊಳಗೆ ಉಳಿದು ಹಿಂಸೆಯ ರೂಪವನ್ನು ತಾಳುವ ಮೊದಲೇ ಅವನ ಮೇಲೆ ಸ್ಪೋಟಿಸಿ ಹಗುರಾಗಬೇಕಿದೆ. ಅವನ ಹುಂಬುತನ, ನಿರ್ಲಕ್ಷತನ, ಉಡಾಫೆತನಕ್ಕೆ ಒಮ್ಮೆ ಆತನೊಂದಿಗೆ ಕುಳಿತು ಅವನ ಮೇಲಿನ ಸಿಟ್ಟು, ರೋಷ, ಕೋಪ, ತಾಪ ಎಲ್ಲವನ್ನೂ ಹೇಳಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾಗುತ್ತಿದ್ದೇನೆ ಎನ್ನುವ ವಿಷಯವನ್ನು ನನ್ನಿಂದ ಏಕೆ ಮುಚ್ಚಿಟ್ಟೆ ಎಂದು ಕೇಳಬೇಕಿದೆ. ಆ ನಿಟ್ಟಿನಲ್ಲಿ ನಿನ್ನ ಮನಸ್ಸಿನಲ್ಲಿ ನನಗೆ ಕೊಟ್ಟಿರುವ ಸ್ಥಾನ ಇಷ್ಟೇನಾ? ಈ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಕೇಳಬೇಕೆನಿಸಲಿಲ್ಲವೆ?” ಎಂದು ಕೇಳುತ್ತಾ ಕಟಕಟೆಯಲ್ಲಿ ನಿಲ್ಲಿಸಬೇಕಿದೆ&lt;br /&gt;&lt;br /&gt;.&lt;a href="http://4.bp.blogspot.com/_FiNlrLfTRP0/TE7GKFOfLrI/AAAAAAAAAU8/yQAA57Ur_nI/s1600/P7260311.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_FiNlrLfTRP0/TE7GKFOfLrI/AAAAAAAAAU8/yQAA57Ur_nI/s320/P7260311.JPG" border="0" alt=""id="BLOGGER_PHOTO_ID_5498550071569886898" /&gt;&lt;/a&gt;&lt;br /&gt;&lt;br /&gt;&lt;br /&gt;ಆತ ಅವನೊಟ್ಟಿಗೆ ಕೆಲಸ ಮಾಡುವ ಹುಡುಗಿಯನ್ನು ಮದುವೆಯಾಗಿದ್ದು ಖಂಡಿತ ನನಗೆ ಬೇಜಾರಿಲ್ಲ. ಅದು ಅವನ ವ್ಯಯಕ್ತಿಕ ವಿಷಯ. ಅವನಿಗಿಷ್ಟವಾದ ಹುಡುಗಿಯನ್ನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಖುಶಿಯಿದೆ. ಆದರೆ ಈ ವಿಷಯವನ್ನು ನನಗೂ ಹೇಳದೆ ಮದುವೆಯಾಗಿದ್ದು ಮಾತ್ರ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಾನು ಮೊನ್ನೆ ಬೆಂಗಳೂರಿಗೆ ಬಂದಾಗ “ಉದಯ್, ಮನೆಯಲ್ಲಿ ಅಮ್ಮನಿಗೆ ಮಾಡಲಾಗುತ್ತಿಲ್ಲವಾದ್ದರಿಂದ ಹಾಗೂ ನನಗೂ ಒಂಟಿತನ ಕಾಡುತ್ತಿರುವದರಿಂದ ಮದುವೆಯಾಗಬೇಕೆಂದುಕೊಂಡಿರುವೆ” ಎಂದು ಹೇಳಿದಾಗ ನನಗೆ ಖುಶಿಯಾಗಿತ್ತು ಪರ್ವಾಗಿಲ್ಲ ಈಗಲಾದರೂ ಮನಸ್ಸು ಬದಲಾಯಿಸಿದನಲ್ಲ ಎಂದು. ಈ ಮೊದಲು ನಾನು ಲಿಬಿಯಾದಿಂದ ಅವನಿಗೆ ಫೋನ್ ಮಾಡಿದಾಗಲೆಲ್ಲಾ ಅವನು ತನ್ನ ಮದುವೆ ಬಗ್ಗೆ ಹಿಂಟ್ ಕೊಟ್ಟಿದ್ದನಾದರೂ ಇಷ್ಟೊಂದು ಸೀರಿಯಸ್ ಆಗಿದ್ದಾನೆಂದುಕೊಂಡಿರಲಿಲ್ಲ. ಏನಾದರಾಗಲಿ ಮದುವೆಯಾಗಲು ನಿರ್ಧರಿಸಿದ್ದಾನಲ್ಲ ಅಷ್ಟೇ ಸಾಕು ಎಂದು ಖುಶಿಪಟ್ಟಿದ್ದೆ. ನಾನು ಆಲ್ ದಿ ಬೆಸ್ಟ್ ಹೇಳುತ್ತಾ “ಹುಡುಗಿ ಹುಡುಕಬೇಕಾ?” ಎಂದು ಕೇಳಿದ್ದೆ. “ಹಾ, ಹೌದು ನಮ್ಮ ಮನೆಯಲ್ಲಿ ಹುಡುಕುತ್ತಿದ್ದಾರೆ” ಎಂದು ಹೇಳಿದ್ದ. ತದನಂತರ ಕೇವಲ ಎರಡೇ ತಿಂಗಳ ಅಂತರದಲ್ಲಿ ಕೆಲವೇ ಕೆಲವು ಬಂಧುಗಳ ಸಮ್ಮುಖದಲ್ಲಿ ಧರ್ಮಸ್ಥಳದಲ್ಲಿ ಸರಳ ವಿವಾಹವಾಗಿದ್ದ. ಆಗೆಲ್ಲಾ ಆತ ನನ್ನನ್ನು ಈಗಷ್ಟೆ ಹೊಸದಾಗಿ ಹುಡುಗಿಯನ್ನು ನೋಡಿ ಮದುವೆಯಾಗುತ್ತಿದ್ದೇನೆ ಎಂದು ನಂಬಿಸಿದ್ದ. ಆದರೆ ಮದುವೆಯಾಗಿ ಎಂಟು ದಿವಸದ ಮೇಲೆ ಇನ್ನೊಬ್ಬ ಗೆಳೆಯ ರಾಘು, ಮಂಜುವಿನ ಮದುವೆ ಫೋಟೋಗಳನ್ನು ಈ ಮೇಲ್ ಮೂಲಕ  ಕಳಿಸಿದಾಗ ಈ ಹುಡುಗಿಯನ್ನು ಎಲ್ಲೋ ನೋಡಿದ್ದೇನಲ್ಲ ಎನಿಸಿ ನನ್ನ ಹಾರ್ಡ್ ಡಿಸ್ಕಿನಲ್ಲಿರುವ “ಮಂಜು ಫೋಟೋಸ್” ಫೋಲ್ಡರಿಗೆ ಹಾಕಬೇಕಾದರೆ ಆತನ ಹಳೆಯ ಫೋಟೊಗಳಲ್ಲಿ ಅಂದರೆ ಆತನ ಯಾವುದೋ ಟ್ರೇನಿಂಗ್ ಫೋಟೋಗಳಲ್ಲಿ ಅಕಸ್ಮಾತಾಗಿ ಈ ಹುಡುಗಿಯ ಫೋಟೋ ಕಣ್ಣಿಗೆ ಬಿತ್ತು. ಅರೆ, ಇವಳೇನಾ ಮಂಜುವಿನ ಹೆಂಡತಿ? ಇರಲಿಕ್ಕಿಲ್ಲ ಎಂದುಕೊಂಡು ಮತ್ತೆ ಮತ್ತೆ zoom ಮಾಡಿ ನೋಡಿದೆ. ಅನುಮಾನವೇ ಇಲ್ಲ. ಅದೇ ಹುಡುಗಿಯೇ! ನನಗೆ ಆಘಾತಕ್ಕಿಂತ ಹೆಚ್ಚಾಗಿ ಅಚ್ಚರಿಯಾಗಿತ್ತು. ನಾನು ಎದೆ ತಟ್ಟಿ ಹೇಳಿಕೊಳ್ಳುವ ಗೆಳೆಯ ತನ್ನ ಜೀವನದ ಅತ್ಯಂತ ಖುಶಿಯ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳಲಾರದೆ ಉಳಿದನೆ? ಹಾಗೆ ಹಂಚಿಕೊಳ್ಳಲಾರದಂತೆ ತಡೆಹಿಡಿದಿದ್ದಾದರೂ ಏನು? ಅಥವಾ ನನ್ನೊಂದಿಗೆ ಹಂಚಿಕೊಳ್ಳುದಷ್ಟು ಅಳುಕು, ಮುಜುಗುರ ಅವನಲ್ಲಿ ಇನ್ನೂ ಇದೆಯಾ? ಹಿಂದೆ ತನಗೆ ತಕ್ಷಣ ಏನಾದರು ಆದರೆ ಅದನ್ನು ಮೊದಲು ಬಂದು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಮಂಜು ಇವನೇನಾ? ತೀರ ಹಿಂದೆ ಬೇಡ, ಮೊನ್ನೆ ಮೊನ್ನೆ ನಾನು ಬೆಂಗಳೂರಿಗೆ ಬಂದಾಗ ಬೇರೆಲ್ಲವನ್ನು ಹಂಚಿಕೊಂಡವನು ಈ ವಿಷಯವನ್ನು ಏಕೆ ಮುಚ್ಚಿಟ್ಟ? ನಾವಾದರೆ ಎಲ್ಲದಕ್ಕೂ ಅವನ ಅಭಿಪ್ರಾಯ ತೆಗೆದುಕೊಳ್ಳುತ್ತೇವೆ. ಆದರೆ ಅವನೇಕೆ ಹೀಗೆ ಮಾಡಿದ? ಈ ವಿಷಯ ನನ್ನ ತಲೆಯಲ್ಲಿ ಕೊರೆಯತೊಡಗಿತ್ತು. ಬೆಂಗಳೂರಿಗೆ ಹೋದ ಮೇಲೆ ಕೇಳೋಣವೆಂದುಕೊಂಡಿದ್ದೆ. ಆದರೆ ತಡೆಯಲಾಗಲಿಲ್ಲ. ತಕ್ಷಣ ಫೋನ್ ಮಾಡಿ ಕೇಳಿಯೇಬಿಟ್ಟೆ. ಆಗವನು ಹಿಂದೆ ಹುಡುಗಿಯೋರ್ವಳನ್ನು ಪ್ರೀತಿಸಿದ್ದು, ಆ ವಿಷಯದಲ್ಲಿ ನನ್ನ ಸಹಾಯ ಕೇಳಿದ್ದು, ಕಾರಣಾಂತರಗಳಿಂದ ಅದು ತಪ್ಪಿ ಹೋದದ್ದು, ಆಮೇಲೆ ಅವಾಗವಾಗ ನಾವು ಅವನನ್ನು ರೇಗಿಸುತ್ತಿದ್ದುದು, ತಮಾಷೆ ಮಾಡುತ್ತಿದ್ದುದು ಎಲ್ಲವನ್ನು ಹೇಳುತ್ತಾ ಈ ಕಾರಣಕ್ಕಾಗಿ ಎಲ್ಲ ಆದ ಮೇಲೆ ಹೇಳಬೇಕೆಂದುಕೊಂಡಿದ್ದೆ ಎಂದು ಹೇಳಿದ. ನಾನೇಕೋ ಅವನು ಕೊಟ್ಟ ಉತ್ತರದಿಂದ ಕನ್ವಿನ್ಸ್ ಆಗಲಿಲ್ಲ. ಅಸಲಿಗೆ ನಾವು ಒಬ್ಬರೊನ್ನಬ್ಬರನ್ನು ಎಷ್ಟು ಸಲ ರೇಗಿಸಿಲ್ಲ! ಅವನ ಕೊಟ್ಟ ಉತ್ತರ ತೀರ ಉಡಾಫೆಯದು ಅನಿಸಿತು. ಈಗ ಆ ವಿಷಯವನ್ನು ಕೆದಕಬೇಕಿದೆ. ಜೀವದ ಗೆಳೆಯ ಎಂಬ ಹಕ್ಕಿನಿಂದ ಕೇಳಬೇಕಾದ್ದನ್ನೆಲ್ಲಾ ಕೇಳಬೇಕಿದೆ ಹೇಳಬೇಕಾದ್ದನ್ನೆಲ್ಲಾ ಹೇಳಬೇಕಿದೆ. ಮೂರು ತಿಂಗಳಿನಿಂದ ಸ್ವಗತವಾಗಿಯೇ ಉಳಿದ ಮನದ ಮಾತುಗಳನ್ನು ಆತನ ಮುಂದೆ ಸಂವಾದಕ್ಕಿಡಬೇಕಿದೆ. ಫಲಿತಾಂಶ ಏನಾಗಬಹುದು? ಗೊತ್ತಿಲ್ಲ.&lt;br /&gt;&lt;br /&gt;ಇನ್ನುಳಿದಂತೆ ಬ್ಲಾಗ್ ಗೆಳೆಯರನ್ನು ಭೇಟಿಯಾಗಬೇಕಿದೆ. ಮಿಡಿಯಾ ಫ್ಲಾವರ್ ಮೋಹನ್ ಸರ್ನ್ನು  ಮೀಟ್ ಮಾಡಬೇಕಿದೆ. ಬ್ಲಾಗ್ ಗೆಳೆಯ ಶಿವು ಹಾಗೂ ಪ್ರಕಾಶ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬೇಕಿದೆ. ನನಗೆ ಬದುಕನಿತ್ತ ಬೆಂಗಳೂರಿನಲ್ಲಿ ಚನ್ನಾಗಿ ಸುತ್ತಾಡಬೇಕಿದೆ. ಎಂದಿನಂತೆ ಯಡಿಯೂರಿನಲ್ಲಿ ನನಗಿಷ್ಟವಾದ ಪಾನಿಪೂರಿ ತಿನ್ನಬೇಕಿದೆ. ಅಮ್ಮನ ಆರೋಗ್ಯ ವಿಚಾರಿಸಬೇಕಿದೆ. ನನ್ನ ಹೈಸ್ಕೂಲ್ ಗೆಳೆಯ ಜಗದೀಶ್ ಅಣ್ಣಿಗೇರಿ ನಾಲ್ಕೈದು ವರ್ಷಗಳಿಂದ ಟಚ್ಲ್ಲೇನ ಇಲ್ಲ. ಆತ ಮೊದಲು ಲಂಡನ್ನಗಲ್ಲಿರುವಾಗ ಆಗಾಗ ಫೋನ್ ಮಾಡುತ್ತಿದ್ದ. ಆನಂತರ ನನ್ನ ಫೋನ್ ನಂಬರ್ ಬದಲಾಯಿತು. ಆಗ ನನ್ನ ಬಳಿ ಈಮೇಲ್ ಇರಲಿಲ್ಲ. ಅವನದನ್ನೂ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯ ಸಂಪರ್ಕವೇ ಇಲ್ಲ. ಈಗ ಬೆಂಗಳೂರಿನಲ್ಲಿಯೇ ಇದ್ದಾನೆಂದು ಕೇಳಿಪಟ್ಟೆ. ಖುಶಿಯಾಯಿತು. ಹುಡುಕುವದು ಅಂಥಾ ಕಷ್ಟವೇನೂ ಆಗುವದಿಲ್ಲ. ಕಾಲೇಜು ಗೆಳೆಯರನ್ನು ನೋಡಿಕೊಂಡು ಬರಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇನ್ನೊಬ್ಬ ಗೆಳೆಯ ರಾಘುವಿನೊಂದಿಗೆ ಒಂದಿಷ್ಟು ಕುಳಿತು ಮಾತನಾಡಬೇಕಿದೆ. ಎಷ್ಟೆಲ್ಲಾ ಇದೆ. ಇವನ್ನೆಲ್ಲಾ ಕೇವಲ ಒಂದೂವರಿ ತಿಂಗಳಲ್ಲಿ ಮಾಡಿ ಮುಗಿಸುತ್ತೇನೆಯೆ? ಗೊತ್ತಿಲ್ಲ.&lt;br /&gt; &lt;br /&gt;ನಾಳೆ ಅಂದರೆ ಜುಲೈ 20ರಂದು ಟ್ರಿಪೋಲಿಯಿಂದ ಹೊರಟು ಜುಲೈ 21ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿರುತ್ತೇನೆ.  ನನ್ನ ಫೋನ್ ನಂಬರ್ - 9844549386. See you soon. Until then bye……..&lt;br /&gt;&lt;br /&gt;-ಉದಯ್ ಇಟಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2802103225554897449-693639283027192331?l=bisilahani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bisilahani.blogspot.com/feeds/693639283027192331/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://bisilahani.blogspot.com/2010/07/blog-post.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/2802103225554897449/posts/default/693639283027192331'/><link rel='self' type='application/atom+xml' href='http://www.blogger.com/feeds/2802103225554897449/posts/default/693639283027192331'/><link rel='alternate' type='text/html' href='http://bisilahani.blogspot.com/2010/07/blog-post.html' title='ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ......'/><author><name>ಬಿಸಿಲ ಹನಿ</name><uri>http://www.blogger.com/profile/10676488826070757159</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_FiNlrLfTRP0/TMMPX9zfiDI/AAAAAAAAAWE/9rO2gu0VhAQ/S220/P7260302.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_FiNlrLfTRP0/TE7GKFOfLrI/AAAAAAAAAU8/yQAA57Ur_nI/s72-c/P7260311.JPG' height='72' width='72'/><thr:total>5</thr:total></entry><entry><id>tag:blogger.com,1999:blog-2802103225554897449.post-7739407915301422621</id><published>2010-06-19T15:45:00.003+01:00</published><updated>2010-06-19T16:01:35.634+01:00</updated><title type='text'>ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?</title><content type='html'>&lt;a href="http://2.bp.blogspot.com/_FiNlrLfTRP0/TBzY-7xUvxI/AAAAAAAAAUg/eVKh4VCzHt8/s1600/pitcure-1.jpg"&gt;&lt;img style="float:left; margin:0 10px 10px 0;cursor:pointer; cursor:hand;width: 200px; height: 154px;" src="http://2.bp.blogspot.com/_FiNlrLfTRP0/TBzY-7xUvxI/AAAAAAAAAUg/eVKh4VCzHt8/s400/pitcure-1.jpg" border="0" alt=""id="BLOGGER_PHOTO_ID_5484497021938482962" /&gt;&lt;/a&gt;&lt;br /&gt;ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ ವಿಶೇಷತೆ ಪಡೆದಷ್ಟು ಅಪ್ಪನ ದಿನ ಅದ್ಯಾಕೋ ಅಷ್ಟೊಂದು ವಿಶೇಷತೆಯನ್ನು ಪಡೆದೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡರೂ ಅಲ್ಲಿ ಅಮ್ಮನಿಗೆ ವಿಶೆಷ ಆದ್ಯತೆ. ಅವಳಿಗೆ ಮೊದಲ ಸ್ಥಾನ. ಅಪ್ಪ ಎಷ್ಟೇ ಮಾಡಿದರೂ ಅವನಿಗೆ ಸದಾ ಎರಡನೆ ಸ್ಥಾನ. ಪುರುಷ ಪ್ರಧಾನ ಸಮಾಜದಲ್ಲೂ ಒಂದು ಕುಟುಂಬ ಕಟ್ಟಿ ಬೆಳೆಸುವಷ್ಟರಲ್ಲಿ ಅಮ್ಮನ ಪಾತ್ರವನ್ನು ಗುರುತಿಸುವಷ್ಟು ಅಪ್ಪನ ಪಾತ್ರವನ್ನು ಗುರುತಿಸುವದರಲ್ಲಿ ಏನೋ ಒಂದು ತರದ ಉದಾಸೀನ. ಅಮ್ಮ ಸರಿಯಿದ್ದರೆ ಸಾಕು. ಅಪ್ಪ ಹೇಗಿದ್ದರೇನು? ಎನ್ನುವ ಉಢಾಪೆ. ಅಚ್ಚರಿಯೆಂದರೆ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ಯಾಕೆ ವೈಭವಿಕೃತಗೊಂಡಿಲ್ಲವೆಂದು?&lt;br /&gt;&lt;br /&gt;ಒಂದು ಕುಟುಂಬವನ್ನು ಕಟ್ಟಿ ಬೆಳೆಸುವದರಲ್ಲಿ, ಸಾಕಿ ಸಲುಹುವದರಲ್ಲಿ ಅಮ್ಮನ ಪಾತ್ರದ ಮುಂದೆ ಅಪ್ಪನದು ಗೌಣ ಅನಿಸಿಬಿಡುತ್ತದೆ. ಯಾಕೆ? ಅಂತೆಯೇ ನೀವು ಯಾವುದೇ ಸಾಹಿತ್ಯ ತೆಗೆದುಕೊಂಡರೂ ಅಲ್ಲಿ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡೇ ಇಲ್ಲ. ಯಾಕೆ? ಲೇಖಕರು, ಕವಿಗಳು ತಾಯ್ತನವನ್ನು ಹಾಡಿ ಹೊಗಳಿದಷ್ಟು ತಂದೆತನವನ್ನು ಹಾಡಿಹೊಗಳಲೇ ಇಲ್ಲ! ಯಾಕೆ? ಕಾನೂನು 
