ನಿಮಗೆ ಆಶ್ಚರ್ಯವಾಗಬಹುದು-ನನಗೆ ಹಸಿವೆಯೇ ಎನಿಸುತ್ತಿರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಪಾರ್ಸಲ್ಲಿನಲ್ಲಿದ್ದ ಸಿಹಿತಿಂಡಿಯನ್ನು ತಿಂದು ನನ್ನ ಅಲ್ಪಸ್ವಲ್ಪ ಹಸಿವೆಯನ್ನು ನೀಗಿಸಿಕೊಳ್ಳುತ್ತಿದ್ದೆ. ಮರದಲ್ಲಿ ಸಿಹಿಯಾದ ಹಣ್ಣುಗಳು ಕಾಣಿಸಿದವು. ಆದರೆ ಅವನ್ನು ತಿನ್ನಲು ಹೋಗಲಿಲ್ಲ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಹಣ್ಣುಗಳು ನೋಡಲು ಚನ್ನಾಗಿದ್ದರೂ ಕೆಲವೊಮ್ಮೆ ವಿಷಪೂರಿತವಾಗಿರುತ್ತವೆಂದು ನನಗೆ ಗೊತ್ತಿತ್ತು. ನಾನು ಮುಸ್ಸಂಜೆಯವರೆಗೂ ನಡೆಯುತ್ತಲೇ ಇದ್ದೆ. ಕೊನೆಗೆ ನದಿ ದಂಡೆ ಮೇಲೆ ಒಂದು ನುಣುಪಾದ ಜಾಗ ಸಿಕ್ಕಿತು. ಅಂದು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದೆ.
ಮರುದಿವಸ ಬೆಳಿಗ್ಗೆ ಎದ್ದಾಗ ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ. ದಿನನಿತ್ಯದ ವಾಡಿಕೆಯಂತೆ ಕೋಲಿನಿಂದ ಹುಲ್ಲನ್ನು ಸರಿಸುತ್ತಾ, ನೆಲವನ್ನು ತಡಕಾಡುತ್ತಾ, ಜೇಡರ ಹುಳುಗಳೇನಾದರೂ ಇವೆಯೋ ಎಂಬುದನ್ನು ಪರೀಕ್ಷಿಸುತ್ತಾ ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಒಮ್ಮೊಮ್ಮೆ ನದಿ ದಂಡೆಯ ಮೇಲಿನ ರಸ್ತೆ ದುಸ್ತರವಾದಾಗ ಈಜಿಕೊಂಡು ಹೋಗುತ್ತಿದ್ದೆ. ಹೀಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಬ್ಯಾಗಿನಲ್ಲಿದ್ದ ಸಿಹಿತಿಂಡಿಗಳು ತೂತಿನ ಮೂಲಕ ಬಿದ್ದುಹೋಗಿದ್ದವು. ನನಗೆ ಹಸಿವಿಯೇ ಅನಿಸದಿದ್ದರಿಂದ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ನಡೆಯುತ್ತಾ ಹೋದಂತೆ ಸ್ವಲ್ಪ ದೂರದರಲ್ಲಿಯೇ ನನಗೆ ರಣಹದ್ದುಗಳು ಕಂಡವು. ಬಹುಶಃ, ಅಲ್ಲೆಲ್ಲೋ ಹೆಣಗಳಿರಬೇಕು. ಅವು ವಿಮಾನ ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಮಾಂಸ ತಿನ್ನಲು ಅಲ್ಲಿ ಸೇರಿರಬೇಕು ಎಂದು ನನಗೆ ಕೂಡಲೇ ಗೊತ್ತಾಯಿತು. ಎಲ್ಲಿ ಹೆಣಗಳಿರುತ್ತವೋ ಅಲ್ಲಿ ಸಾಮಾನ್ಯವಾಗಿ ಹದ್ದುಗಳಿರುತ್ತವೆ.
ನಾನಿನ್ನೂ ನಮ್ಮ ವಿಮಾನದ ಭಗ್ನಾವಶೇಷಗಳು ಬಿದ್ದ ಜಾಗದಲ್ಲಿಯೇ ಇದ್ದೆ. ನಾನು ನಡೆದು ಹೋಗುತ್ತಿದ್ದಂತೆ ವಿಮಾನದ ಮೈಕಟ್ಟಿನ ಒಂದು ಭಾಗ ಅಲ್ಲಿ ಬಿದ್ದಿರುವದು ಕಾಣಿಸಿತು. ವಿಮಾನದ ಸಂಖ್ಯೆ ಇನ್ನೂ ಹಾಗೆ ಕಾಣುತ್ತಿತ್ತು. ಸ್ವಲ್ಪ ದೂರದರಲ್ಲಿಯೇ ಮುರಿದು ಬಿದ್ದ ವಿಮಾನದ ಇನ್ನೊಂದು ಭಾಗ ಕಾಣಿಸಿತು. ಅದು ಕ್ಯಾಬಿನ್ನಿನಂತಿದ್ದು ಅದರ ವೈರ್ ಗಳು ತಳಕುಹಾಕಿಕೊಂಡಿದ್ದವು.
ಅಲ್ಲಿ ಪೆಟ್ರೋಲ್ ವಾಸನೆ ಇನ್ನೂ ಹಾಗೆ ಇತ್ತು. ಆದರೆ ಬದುಕುಳಿದವರ ಬಗ್ಗೆ ಯಾವಂದೂ ಕುರುಹುಗಳು ಕಾಣಿಸಲಿಲ್ಲ. ಆ ಅವಶೇಷದ ಬಳಿ ನಾನು ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಾನು ಮುಂದೆ ಸಾಗಲೇಬೇಕಿತ್ತು. ಆದರೂ ನಾನು ನಡೆದು ಹೋಗಬೇಕಾದ ದಾರಿ ನಿಧಾನವಾಗಿ ಸಾಗುತ್ತಿದ್ದರಿಂದ ನನ್ನ ಪಯಣ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ.
ಎರಡನೆಯ ದಿನವಾಗಲಿ, ಮೂರನೆಯ ದಿನವಾಗಲಿ ನನ್ನ ಗಾಯಗಳು ನಂಗೆ ಒಂಚೂರು ನೋವು ಕೊಡಲಿಲ್ಲ. ಬದಲಾಗಿ ಅತಿಯಾದ ಬಿಸಿಲಿನಿಂದ ನನ್ನ ಬೆನ್ನಲ್ಲಿ ಅಸಾಧ್ಯ ಉರಿಯೂತವುಂಟಾಯಿತು. ಏಕೆಂದರೆ ನನ್ನ ಡ್ರೆಸ್ಸಿನ ಹಿಂಭಾಗದಲ್ಲಿ ಕಟ್ಟಿಕೊಳ್ಳುವ ಬೆಲ್ಟಿನ ಗುಂಡಿ ಕಿತ್ತುಹೋಗಿತ್ತು ಹಾಗೂ ನನ್ನ ಬೆನ್ನು ಬಿಸಿಲಿಗೆ ತೆರೆದುಕೊಂಡಿತ್ತು. ಮರಗಳ ಸಂಧಿಯಿಂದ ತೂರಿ ಬರುವ ಸೂರ್ಯನ ಕಿರಣಗಳು ನನ್ನ ಬೆನ್ನನ್ನು ಸುಟ್ಟುಹಾಕಿದ್ದವು. ಪೆರುವಿನ ಕಾಡುಗಳಲ್ಲಿ ಎಷ್ಟು ಕೆಟ್ಟ ಮಳೆ ಇರುತ್ತದ್ ಅಷ್ಟೇ ಕೆಟ್ಟ ಬಿಸಿಲು ಕೂಡ ಇರುತ್ತದೆ. ಹಿತಮಿತವಾದ ಹವಾಮಾನ ಜೀವನಕ್ಕೆ ಒಗ್ಗಿಕೊಂಡ ಯೂರೋಪಿನ ಜನ ಇವೆರೆಡೂ ವೈಪರಿತ್ಯಗಳಿಗೆ ಹೊಂದಿಕೊಳ್ಳಲಾರರು.
ಎರಡನೆಯ ರಾತ್ರಿ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡೆ. ಮಾರನೆಯ ದಿನ ಮತ್ತೆ ನನ್ನ ಪ್ರಯಾಣವನ್ನು ಮುಂದುವರೆಸಿದೆ. ಬೆನ್ನ ಮೇಲೆ ಅಸಾಧ್ಯ ಉರಿಯೂತವಿದ್ದಾಗ್ಯೂ ನಾನು ಸಾಕಷ್ಟು ದೂರವನ್ನು ನಡೆದೆ. ನಾನು ನೀರು ಮತ್ತು ಸಿಹಿತಿಂಡಿಗಳನ್ನು ಬಿಟ್ಟು ಬೇರೇನೂ ತಿನ್ನುತ್ತಿರಲಿಲ್ಲ. ಆದರೂ ನನ್ನಲ್ಲಿ ಶಕ್ತಿ ಇನ್ನೂ ಉಳಿದಿದೆ ಎಂದನಿಸುತ್ತಿತ್ತು. ಮೇಲಿಂದ ಮೇಲೆ ನನಗೆ ಸೊಳ್ಳೆಗಳು, ನೊಣಗಳು ಕಚ್ಚಿ ಹಿಂಸೆಯಿಡುತ್ತಿದ್ದವು. ಅವುಗಳನ್ನು ದೂರವಿಡಲು ಸಾಧ್ಯವಿರಲಿಲ್ಲ. ಅವನ್ನು ಲೆಕ್ಕಿಸದೆ ನಡೆಯಬೇಕಿತ್ತು. ಪ್ರತಿಸಾರಿ ಸೊಳ್ಳೆಗಳು ಕಚ್ಚಿದಾಗ ಅವು ನನ್ನ ಚರ್ಮದ ಕೆಳಗೆ ಮೊಟ್ಟೆಗಳನ್ನಿಡುತ್ತಿದ್ದವು ಹಾಗೂ ತದನಂತರದಲ್ಲಿ ಅವು ಮರಿಗಳಾಗಿ ಹೊರಬರುತ್ತಿದ್ದವು. ಇದನ್ನು ನಾನು ಗಮನಿಸಲೇ ಇಲ್ಲ.
ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನಗಳ ಹಾರಾಟದ ಸದ್ದು ಕೇಳಿಸಿತು. ನಾನು ಖುಶಿಯಿಂದ ವಿಮಾನದ ಸದ್ದು ಬಂದತ್ತ ಕೂಗಿದೆ. ಮತ್ತೆ ಮತ್ತೆ ಕೂಗಿದೆ ಹಾಗೆ ಜೋರಾಗಿ ಕೂಗುತ್ತಾ ಹೋದೆ. ನಂಗೆ ಗೊತ್ತಿತ್ತು ನಾನು ಕೂಗುವದು ಅವರಿಗೆ ಕೇಳಿಸುವದಿಲ್ಲ-ಅದೊಂದು ವ್ಯರ್ಥ ಪ್ರಯತ್ನವೆಂದು. ಆದರೂ ಬಿಡದೆ ಒಂದೇ ಸಮನೆ “ಹಲೋ, ಹೆಲ್ಪ್....ಹೆಲ್ಪ್” ಎಂದು ಕೂಗುತ್ತಾ ಹೋದೆ. ಬಾರಿ ಬಾರಿ ಕೂಗಿದೆ “ಹಲೋ, ಹೆಲ್ಪ್” ಎಂದು. ಊಹೂಂ, ಪ್ರಯೋಜನವಾಗಲಿಲ್ಲ.
ವಿಮಾನಗಳೇನೋ ನನಗೆ ಹತ್ತಿರವಾಗಿಯೇ ಇದ್ದವು. ಆದರೆ ವಿಮಾನ ಚಾಲಕರು ಮರದ ಕೆಳಗಿದ್ದ ನನ್ನನ್ನು ಹೇಗೆ ನೋಡಿಯಾರು? ಅಥವಾ ನನ್ನ ದನಿಯಾದರೂ ಅವರಿಗೆ ಹೇಗೆ ಕೇಳಿಸೀತು? ನಾನಾದರೂ ಆ ಮರಗಳ ಸಂಧಿಯಿಂದ ಅವರನ್ನು ಹೇಗೆ ನೋಡೇನು? ಯಾವುದೊಂದೂ ಸಾಧ್ಯವಿರಲಿಲ್ಲ! ಆದರೂ ಅವರ ಗಮನವನ್ನು ನನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದೆ.
ವಿಮಾನದ ಸದ್ದು ಕ್ರಮೇಣ ಸತ್ತುಹೋಯಿತು. ನಾನು ಪುನಃ ಒಂಟಿಯಾದೆ. ಆದರೆ ದೃತಿಗೆಡಲಿಲ್ಲ. ಸುಮ್ಮನೆ ನಡೆಯುತ್ತಾ ಹೋದೆ. ನಂಗೆ ಹಸಿವೆ ಎನಿಸುತ್ತಿರಲಿಲ್ಲ. ಆಗಾಗ ಮಾತ್ರ ನದಿಯ ಶುಭ್ರ ನೀರನ್ನು ಕುಡಿದು ಮುಂದೆ ಸಾಗುತ್ತಿದ್ದೆ. ಕೈಯಲ್ಲಿ ಭರವಸೆ ಮಾತ್ರ ಇನ್ನೂ ಹಾಗೆಯೇ ಉಳಿದಿತ್ತು.
ನನ್ನ ಬಳಿಯಿದ್ದ ಸಿಹಿತಿಂಡಿಗಳೆಲ್ಲಾ ಇದೀಗ ಖಾಲಿಯಾಗಿದ್ದವು. ತಿನ್ನಲೂ ಏನೂ ಇರಲಿಲ್ಲ. ಆದರೂ ಯೋಚಿಸಲಿಲ್ಲ. ನಾನು ನದಿ ದಂಡೆಯ ಮೇಲೆ ಪ್ರಯಾಸದಿಂದ ಸಾಗುತ್ತಿದ್ದೆ. ಆಗೆಲ್ಲಾ ಮೊಸಳೆಗಳು ನನ್ನತ್ತ ಈಜಿಕೊಂಡು ಬರುತ್ತಿದ್ದವು. ನನಗೆ ತಕ್ಷಣ ಅಲ್ಲಿ ವಿಷಕಾರಿ ಮೀನುಗಳಿರುವದು ನೆನಪಿಗೆ ಬಂತು. ಅವು ಸಾಮಾನ್ಯವಾಗಿ ನದಿ ದಂಡೆ ಮೇಲೆಯೇ ಮಲಗಿರುತ್ತಿದ್ದವು. ನಾನು ಅಕಸ್ಮಾತಾಗಿ ಈ ಮೀನಿನ ಮೇಲೆ ಕಾಲಿಟ್ಟರೆ ನನ್ನ ಕಥೆ ಮುಗಿದಂತೆಯೇ ಸರಿ ಎಂದುಕೊಂಡು ಈಗ ಮತ್ತಷ್ಟು ಹುಶಾರಾಗಿ ನಡೆಯುತ್ತಾ ಹೋದೆ.
ಒಂಬತ್ತನೆಯ ದಿನ ನಡೆಯುತ್ತಾ ಹೋದಂತೆ ಅನತಿ ದೂರದಲ್ಲಿ ಒಂದು ದೋಣಿ ಇರುವದು ಕಾಣಿಸಿತು. ನಾನು ಮೊದಲು ಅದಾಗಲೇ ಯಾರೋ ಬಳಸಿ ಬೀಸಾಡಿದ ಮುರುಕಲು ದೋಣಿಯಾಗಿರಬಹುದೆಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದ ಮೇಲೆ ಗೊತ್ತಾಯಿತು ಅದೊಂದು ಗಟ್ಟಿ ಮರದಿಂದ ಹೊಸದಾಗಿ ಮಾಡಿದ ದೋಣಿಯೆಂದು.
ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
ಕನ್ನಡಕ್ಕೆ: ಉದಯ್ ಇಟಗಿ
ಮಹಾಪತನ

ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ ಪದವಿ ಪಡೆಯುವ ತನಕ ವಿಶ್ವವಿದ್ಯಾನಿಲಯದಲ್ಲಿ ಉಳಿಯಲಿಲ್ಲ. ಈಜಿಪ್ಟಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತಾದ ಗಡಾಫಿ 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಬಾಗವಾಗಿಯೇ ಸೇನೆಗೆ ಸೇರಿದ.

ಗ್ರೀಸ್ ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್ ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.
1969ರಿಂದಲೂ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಕರ್ನಲ್ ಮೌಮರ್ ಗಡಾಫಿ ಲಿಬಿಯಾವನ್ನು ನಲವತ್ತೆರೆಡು ವರ್ಷಗಳ ಕಾಲ ಸಮರ್ಥವಾಗಿ ಆಳಿದವ. ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ, ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು.

1969ರಲ್ಲಿ ಅಧಿಕಾರಕ್ಕೆ ಬಂದ ನಂತರ ಲಿಬಿಯಾ ಅಳವಡಿಸಿಕೊಂಡಿದ್ದ ಸಂವಿಧಾನವನ್ನು ರದ್ದು ಮಾಡಿ ತನ್ನದೇ ಆದ ಹೊಸ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳಿರುವ “ದಿ ಗ್ರೀನ್ ಬುಕ್” ಪ್ರಕಟಿಸಿ ಅದರನುಸಾರ ಆಡಳಿತ ನಡೆಸಿದ. ಗಡಾಫಿಯ ಆಡಳಿತದಲ್ಲಿ ಲಿಬಿಯಾ ಅಪಾರ ಪ್ರಗತಿ ಸಾಧಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಲಿಬಿಯಾ ಮೊದಲ ಸ್ಥಾನದಲ್ಲಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು.

ಲಿಬಿಯಾದ ಕುರಿತಂತೆ ಹೊರಜಗತ್ತಿನಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಐರ್ಲಂಡ್ ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ತಿಯಲ್ಲಿಟ್ಟಿತ್ತು. 1986ರಲ್ಲಿ ಬರಿನ್ ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಲಿಬಿಯಾದ ಮೇಲೆ ಬಾಂಬ್ ದಾಳಿ ನಡೆಸಿತ್ತು. 1988ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಪಾನ್ ಅಮ್ ವಿಮಾನದಲ್ಲಿ ಬಂಬಿಟ್ತ ಅರೋಪವೂ ಲಿಬಿಯಾದ ಮೇಲಿತ್ತು. ಬಹುಕಾಲ ಇದನ್ನು ಗಡಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾವನ್ನು ವಿಶ್ವಸಂಸ್ಥೆ ನಿಷೇಧಕ್ಕೆ ಗುರಿಪಡಿಸಿತ್ತು. 2003ರಲ್ಲಿ ಈ ಅಪರಾಧ ಒಪ್ಪಿಕೊಂಡು ಮೃತರಿಗೆ ಪರಿಹಾರ ಕೊಟ್ಟದ್ದು ಈಗ ಇತಿಹಾಸ.

1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲ ಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಇತರೆ ತೈಲ ರಾಷ್ಟ್ರಗಳಿಗೂ ಸಹ ತನ್ನ ನೀತಿಯನ್ನೇ ಅನುಸರಿಸಿ ಎಂದು ಗಡಾಫಿ ಸಲಹೆಯನ್ನಿತ್ತ. ಪರಿಣಾಮವಾಗಿ ಈ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಲಿಬಿಯಾದಲ್ಲಿ ಹೇರಳ ತೈಲ ಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದ. ಹೀಗಾಗಿ ಲಿಬಿಯಾ ಬಹಳ ಬೇಗನೆ ಜಗತ್ತಿನ ಭೂಪಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಮಿಂಚತೊಡಗಿತು.
ನಾನು ಇವನ್ನೆಲ್ಲಾ ಈತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶಿಲನಾಗಿದ್ದ, ಚಾಣಾಕ್ಷನಾಗಿದ್ದ ಎಂದು ತೋರಿಸಲು ಹೇಳಿದೆ. ಹಾಗಾದರೆ ಇನ್ನು ಲಿಬಿಯಾದ ಅಧ್ಯಕ್ಷನಾಗಿ ಆತ ಲಿಬಿಯನ್ನರಿಗೆ ಮಾಡಿದ್ದೇನು ಎಂಬುದನ್ನು ಹೇಳಿದರೆ ಅಲ್ಲಿ ನಿಜಕ್ಕೂ ಕ್ರಾಂತಿಯೊಂದರ ಅವಶ್ಯಕತೆಯಿತ್ತೆ? ಅದು ಗಡಾಫಿಯ ಹತ್ಯೆಯಲ್ಲಿ ಕೊನೆಯಾಗಬೇಕಿತ್ತೆ? ಖಂಡಿತ ಇದರ ಹಿಂದೆ ಅಮೆರಿಕಾದ ಕೈವಾಡವಿದೆಯಲ್ಲವೆ? ಎಂದು ನಿಮಗನಿಸಿದರೆ ಆಶ್ಚರ್ಯವಿಲ್ಲ. ದೂರದಲ್ಲಿ ಕುಳಿತಕೊಂಡ ನಾವೆಲ್ಲರೂ ಗಡಾಫಿ ಬಗ್ಗೆ ಆತ ಒಬ್ಬ ಕೄರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ ಎಂದು ಇನ್ನೂ ಏನೇನೋ ಆತನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಇವು ಅರ್ಧ ಸತ್ಯ. ಅರ್ಧ ಸುಳ್ಳು. ಹಾಗೆ ನೋಡಿದರೆ ಗಡಾಫಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕೄರಿಯಾಗಿದ್ದನೆ ಹೊರತು ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕೄರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ ಯಾವತ್ತೂ ಆಗಿರಲಿಲ್ಲ. ಇದು ನಾನು ಲಿಬಿಯಾದಲ್ಲಿ ಮೂರೂವರೆ ವರ್ಷ ಇದ್ದು ಕಂಡುಕೊಂಡ ಸತ್ಯ. ಹಾಗೆ ಒಂದು ವೇಳೆ ಆತ ಅಷ್ಟೊಂದು ಕೄರಿಯಾಗಿದ್ದರೆ ಅಥವಾ ಕೆಟ್ಟ ಆಡಳಿತ ನಡೆಸಿದ್ದರೆ ಆತ 42 ವರ್ಷಗಳ ಕಾಲ ಆಳ್ವಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಸರಿಯಾಗಿ ಅಂತರಾಷ್ಟ್ರೀಯ ಚಾನೆಲ್ಗಂಳಾದ ಬಿ.ಬಿ.ಸಿ. ಮತ್ತು ಆಲ್ಜೇಜಿರಾಗಳು ಗಡಾಫಿಯನ್ನು ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ಇದು ಮುಂಚಿನಿಂದಲೂ ಲಿಬಿಯಾದ ತೈಲ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟ ಅಮೆರಿಕನ್ನರಿಗೆ ಲಿಬಿಯಾದ ಮೇಲೆ ಹಿಡಿತ ಸಾಧಿಸಲು ಮತ್ತಷ್ಟು ಅನುಕೂಲವನ್ನು ಮಾಡಿಕೊಟ್ಟಿತು.

ಗಡಾಫಿ ಒಬ್ಬ ತಿಕ್ಕಲು ಸರ್ವಾಧಿಕಾರಿಯಾದರೂ ಆತ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದ. ಇಡಿ ಆಫ್ರಿಕಾ ಖಂಡದಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಲಿಬಿಯಾವನ್ನು ಮುಂಚೂಣಿಯಲ್ಲಿಟ್ಟಿದ್ದ. ನೆರೆ ರಾಷ್ಟ್ರಗಳಾದ ಟ್ಯುನಿಶಿಯಾದಲ್ಲಿ, ಈಜಿಪ್ಟ್ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸಿದ್ದೆವು. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ಒಂದು ವೇಳೆ ಅವರ ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದೆ ಹೋದರೆ ಅವರಿಗೆ ಆಯಾ ಹುದ್ದೆಗೆ ನಿಗದಿಪಡಿಸಿದಷ್ಟು ಸಂಬಳವನ್ನು ಕೆಲಸ ಸಿಗುವವರಿಗೂ ಪ್ರತಿ ತಿಂಗಳು ನೀಡುತ್ತಿದ್ದ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದ. ಜೊತೆಗೆ ಅವರು ಓದು ಮುಗಿಸುವವರೆಗೂ ಅವರ ವಸತಿ ಮತ್ತು ಕಾರಿನ ಖರ್ಚುವೆಚ್ಚವನ್ನು ಅವನೇ ಭರಿಸುತ್ತಿದ್ದ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಿದ್ದ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತಿತ್ತು.
ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36-37 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಬಡ್ಡಿರಹಿತ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ (ಅಸಲನ್ನು) ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಿದ್ದರು. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುತ್ತಿರಲಿಲ್ಲ. ಕಾರುಗಳನ್ನು ಫ್ಯಾಕ್ಟರಿಗಳು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡುತ್ತಿದ್ದ.
ಆತನ ಆಡಳಿತದಲ್ಲಿ ಲಿಬಿಯಾ ದೇಶ ಯಾರಿಂದಲೂ ಒಂದು ಪೈಸೆಯಷ್ಟು ಸಾಲ ತೆಗೆದುಕೊಂಡಿರಲಿಲ್ಲ. ಒಬ್ಬೇ ಒಬ್ಬ ಭಿಕ್ಷುಕನನ್ನು ಅಲ್ಲಿ ಕಾಣುವಂತಿರಲಿಲ್ಲ. ಹಾಗೆ ಒಂದು ವೇಳೆ ಕಂಡರೆ ಅವರು ಲಿಬಿಯಾದ ಭಿಕ್ಷುರಲ್ಲ. ಬದಲಾಗಿ, ಅವರು ಈಜಿಪ್ಟ್ ಅಥವಾ ನೈಜರ್, ನೈಜಿರೀಯಾ ದೇಶದ ಭಿಕ್ಷುಕರಾಗಿರುತ್ತಾರೆ. ಹೆಣ್ಣುಮಕ್ಕಳ ವಿಷಯದಲ್ಲಿ ಕೂಡ ಗಡಾಫಿ ಔದಾರ್ಯವನ್ನು ತೋರಿಸಿದ್ದ. ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿರಲಿಲ್ಲ. ಅವರಿಗೆ ಎಲ್ಲ ರಂಗಗಳಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ದುರಂತವೆಂದರೆ ಜಗತ್ತಿನ ಎಲ್ಲ ಪತ್ರಿಕೆಗಳು, ಟೀವಿ ಚಾನಲ್ ಗಳು ಮತ್ತು ಇತರೆ ಮಾಧ್ಯಮಗಳು ಆತ ಲಿಬಿಯನ್ನರಿಗೆ ಕೊಟ್ಟ ಸೌಲತ್ತುಗಳನ್ನಾಗಲಿ ಅಥವಾ ಆತನ ಇನ್ನೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನಾಗಲಿ ಯಾವತ್ತೂ ಮಾಡಲೇ ಇಲ್ಲ.
ಗಡಾಫಿ ಯಾವತ್ತೂ IMFನಿಂದಾಗಲಿ, ವರ್ಲ್ದ್ ಬ್ಯಾಂಕಿನಿಂದಾಗಲಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಲಿಬಿಯಾವನ್ನು ಆರ್ಥಿಕವಾಗಿ ಆದಷ್ಟೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ, ತೈಲ ಉತ್ಪನ್ನ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡಿದ ಹಣವನ್ನು ಡಾಲರ್ ಗಳಲ್ಲಾಗಲಿ, ಯೂರೋಗಳಾಲ್ಲಗಲಿ ಸ್ವೀಕರಿಸಬೇಡಿ ಬದಲಾಗಿ ಚಿನ್ನದ ರೂಪದಲ್ಲಿ ಸ್ವೀಕರಿಸಿ ಎಂದು ಹೇಳಿದ್ದ. ಆದರೆ ಅಮೆರಿಕಾವೂ ಸೇರಿದಂತೆ ಬೇರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲವನ್ನು ಕೊಳ್ಳುವಷ್ಟು ಚಿನ್ನವಿರಲಿಲ್ಲ. ಒಂದು ವೇಳೆ ಗಡಾಫಿ ಹೇಳಿದಂತೆ ಚಿನ್ನ ಕೊಟ್ಟು ತೈಲವನ್ನು ಕೊಂಡುಕೊಂಡಿದ್ದರೆ ಈ ಎಲ್ಲ ರಾಷ್ಟ್ರಗಳು ದಿವಾಳಿಯೇಳುವ ಸಂಭವವಿತ್ತು. ಇದೇ ಗಡಾಫಿಯ ಹತ್ಯೆಗೆ ಮೂಲ ಕಾರಣವಾಯಿತು. ಇದೆಲ್ಲದಕ್ಕೆ ಅಲ್ಲಿ ಎದ್ದ ಕ್ರಾಂತಿಯೊಂದು ನೆಪವಾಯಿತಷ್ಟೆ. ಸದಾ ತನ್ನ ಹಿತಾಸಕ್ತಿಯ ಬಗ್ಗೆಯೇ ಯೋಚಿಸುತ್ತಲೇ ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಾದ ಪರಮನೀಚತನಕ್ಕೆ ಕೊನೆಯಾದರು ಇದೆಯೇ?

ಏನಾದರಾಗಲಿ 42 ವರ್ಷ ಲಿಬಿಯಾದ ಅವಿಭಾಜ್ಯ ಅಂಗವೇ ಆಗಿದ್ದ ಗಡಾಫೆ ಈಗ ಅಲ್ಲಿಲ್ಲ. ಅವನಿಲ್ಲದ ಲಿಬಿಯಾ ಹೇಗಿರುತ್ತದೆ? ಅವನ ನಂತರದ ದಿನಗಳು ಹೇಗಿರುತ್ತವೆ? ಮುಂದೇನಾಗಬಹುದು? ಲಿಬಿಯಾವನ್ನು ಸಂಕ್ರಮಣ ಕಾಲಘಟ್ಟಕ್ಕೆ ತಂದು ನಿಲ್ಲಿಸುರುವ NTC (National Transition Council) ಲಿಬಿಯಾದ ಜನತೆಗೆ ಗಡಾಫಿ ಕೊಟ್ಟ ಆಡಳಿತವನ್ನೇ ಮುಂದುವರಿಸುತ್ತದೆಯೇ? ಅಥವಾ ಅವನಿಗಿಂತ ಚನ್ನಾಗಿ ನಡೆಸುತ್ತದೆಯೆ? ಅಥವಾ ಇರಾಕಿನಂತೆ, ಅಫಘಾನಿಸ್ತಾದಂತೆ ಲಿಬಿಯಾ ಸಹ ಅಮೆರಿಕಾದ ಕೈಗೊಂಬೆಯಾಗಿ ಉಳಿಯುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಒಟ್ಟಿನಲ್ಲಿ ಗಡಾಫಿಯ ಸಾವನ್ನು ಲಿಬಿಯಾ ದೇಶದ ದುರಂತವೆನ್ನಬೇಕೋ ಅಥವಾ ಕಾಲದ ವ್ಯಂಗ್ಯವೆನ್ನಬೇಕೋ ತಿಳಿಯುತ್ತಿಲ್ಲ.
-ಉದಯ್ ಇಟಗಿ
ಈ ಲೇಖನ ಇವತ್ತಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಇದರ ಲಿಂಕ್ ಇಲ್ಲಿದೆ http://kendasampige.com/article.php?id=4828
ಕಾಡಿಗೆ ಎದುರಾಗಿ ನಿಂತ ಹುಡುಗಿ - ಭಾಗ 1
ನನಗೆ ವಿಮಾನ ಹಾರಾಟವೆಂದರೆ ಬಲು ಇಷ್ಟ. ನಾನು ಈಗಾಗಲೇ ಬಹಳಷ್ಟು ಸಾರಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ನನಗೆ ವಿಮಾನವೆಂದರೆ ಒಂಚೂರು ಹೆದರಿಕೆಯೆನಿಸುತ್ತಿರಲಿಲ್ಲ. ಹೀಗಾಗಿ ಲೀಮಾದಲ್ಲಿ ನಾನು ನನ್ನ ತಾಯಿಯೊಡನೆ ವಿಮಾನದೊಳಕ್ಕೆ ಕುಳಿತಂತೆ ನನಗೆ ನಿರಾತಂಕವೆನಿಸಿತು. ಅದು ಕ್ರಿಸ್ಮಸ್ ಮುನ್ನಾ ದಿನ. ನಾವು ಪುಕಲ್ಪಾದಲ್ಲಿ ಕಾಡಿನಿಂದಾಚೆಯಿರುವ ನನ್ನ ತಂದೆಯನ್ನು ನೋಡಲು ಹೋಗುತ್ತಿದ್ದೆವು. ನಮಗೆ ಈಗಾಗಲೇ ನನ್ನ ತಂದೆ ಹಬ್ಬಕ್ಕಾಗಿ ಕ್ರಿಸ್ಮಸ್ ಗಿಡವನ್ನು ತಯಾರಿಸಿಟ್ಟುಕೊಂಡು ನಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದನೆಂದು ಗೊತ್ತಿತ್ತು.
ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ನಮ್ಮ ವಿಮಾನ ’ಲಾಕ್-ಹೀಡ್ ಎಲೆಕ್ಟ್ರಾ’ 11.15 ಆದರೂ ಇನ್ನೂ ಹೊರಡದೇ ಇದ್ದದ್ದು ನಂಗೆ ಒಂಚೂರು ಬೇಸರ ಮೂಡಿಸಲಿಲ್ಲ. ಏಕೆಂದರೆ ಪೆರುವಿನಲ್ಲಿ ವಿಮಾನಗಳು ಸಮಯಕ್ಕೆ ಸರಿಯಾಗಿ ಹೊರಡುವದು ತುಂಬಾ ಅಪರೂಪವಾಗಿತ್ತು ಮತ್ತು ನನಗದು ಒಗ್ಗಿಹೋಗಿತ್ತು. ವಿಮಾನದಲ್ಲಿ ಒಟ್ಟು 80 ಜನ ಪ್ರಯಾಣಿಕರಿದ್ದರು. ಆದರೆ ನಾನು ಅದ್ಹೇಗೋ 19ನೇ ಸಾಲಿನಲ್ಲಿರುವ ಬಲಬದಿಯ ಕಿಟಕಿ ಪಕ್ಕದ ಆಸನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಎಲ್ಲವೂ ಸಹಜವಾಗಿಯೇ ಇತ್ತು: ವಿಮಾನ ನೆಲದಿಂದ ಮೇಲಕ್ಕೆ ಹಾರುವದು, ಪೆಸಿಫಿಕ್ ಸಾಗರದ ಮೇಲೆ ಸುತ್ತು ಹಾಕುವದು, ನಿಧಾನಕ್ಕೆ ಎತ್ತರ ಹೆಚ್ಚಿಸಿಕೊಳ್ಳುವದು, ಆಂಡೀಸ್ ಪರ್ವತಗಳನ್ನು ದಾಟುವದು, ಮಧ್ಯಾಹ್ನದ ಊಟ ಹಾಗೂ ಗಗನ ಸಖಿಯರ ಮಂದಹಾಸಳು.........ಹೀಗೆ ಎಲ್ಲವೂ ಸುಖಕರವಾಗಿತ್ತು.
ನಾವು ಹಿಮದಿಂದಾವೃತವಾದ ಆಂಡೀಸ್ ಪರ್ವತ ಶಿಖರಗಳನ್ನೂ ಹಾಗೂ ಪೂರ್ವದುದ್ದಕ್ಕೂ ಚಾಚಿಕೊಂಡು ನಿಂತಿರುವ ದಟ್ಟ ಕಾಡುಗಳನ್ನೂ ನೋಡುತ್ತಾ ಕುಳಿತೆವು. ಸ್ವಲ್ಪ ಹೊತ್ತಿನ ನಂತರ ಗಗನ ಸಖಿಯರು ಮಂದಹಾಸ ಬೀರುತ್ತಾ ಊಟದ ತಟ್ಟೆಗಳನ್ನು ಎತ್ತಲು ಬಂದರು. ಅಷ್ಟೊತ್ತಿಗಾಗಲೆ ಕೆಲವು ಪ್ರಯಾಣಿಕರು ನಿದ್ರೆ ಹೋಗಿದ್ದರು.
ಲೀಮಾದಿಂದ ಪುಕಲ್ಪಾದವರಿಗೆ ವಿಮಾನ ಪ್ರಯಾಣದ ಸಮಯ ಕೇವಲ ಒಂದು ಗಂಟೆಯಷ್ಟೆ. ಹೊರಗಡೆ ಯಾವುದೇ ಮಂಜಿನ ಮುಸುಕಗಳಿಲ್ಲದೆ ಎಲ್ಲವೂ ನಿಚ್ಛಳವಾಗಿದ್ದರೆ ಜಗತ್ತಿನಲ್ಲಿಯೇ ಈ ವಿಮಾನ ಹಾರಾಟ ಅತ್ಯಂತ ನಯನ ಮನೋಹರವಾಗಿರುತ್ತದೆ. ಆದರೆ ಹಾರಾಟ ಆರಂಭಿಸಿ ಅರ್ಧ ಗಂಟೆಯೊಳಗೆ ಹೊರಗಿನ ದೃಶ್ಯಗಳೆಲ್ಲವೂ ಮಂಕಾದವು. ಇದ್ದಕ್ಕಿದ್ದಂತೆ ನಾವು ಕುಳಿತ ವಿಮಾನ ಕುಲುಕಾಡತೊಡಗಿತು. ಆ ಕುಲುಕಾಟ ರಭಸವಾಗುತ್ತಿದ್ದಂತೆ ನಮಗೆಲ್ಲರಿಗೂ ಸೀಟು ಬೆಲ್ಟುಗಳನ್ನು ಬಿಗಿದುಕೊಳ್ಳುವಂತೆ ಸೂಚನೆ ನೀಡಲಾಯಿತು. ಆಗಲೂ ಸಹ ನಾನು ಎದೆಗುಂದಲಿಲ್ಲ. ಏಕೆಂದರೆ ಈ ರೀತಿಯ ಹವಾಮಾನ ಪ್ರಕ್ಷುಬ್ಧತೆ ಪರ್ವತಗಳು ಪೂರ್ವ ದಿಕ್ಕಿನೆಡೆಗೆ ಬಾಗಿ ಚಾಚಿಕೊಂಡಿರುವ ಕಡೆಯಲ್ಲೆಲ್ಲಾ ಸರ್ವೇ ಸಾಮಾನ್ಯವೆಂದು ನನಗೆ ಗೊತ್ತಿತ್ತು.
ಇದ್ದಕ್ಕಿದ್ದಂತೆ ನಮ್ಮ ಕಿಟಕಿಗಿ ಅಡ್ದಲಾಗಿ ಮಳೆ ಪಟಪಟನೆ ಬೀಳತೊಡಗಿತು. ಈಗ ನಮ್ಮ ವಿಮಾನ ಲಂಬವಾಗಿ ಚಲಿಸತೊಡಗಿತು. ಮೊಟ್ಟಮೊದಲಬಾರಿಗೆ ವಿಮಾನದಲ್ಲಿದ್ದ ಪ್ರಯಾಣಿಕರು ಒಮ್ಮೆ ಕಿರುಚಿದರು.
ನಾನು ಕಿಟಕಿಯಿಂದಾಚೆ ಮೋಡಗಳಲ್ಲಿ ಮಿಂಚಿ ಮರೆಯಾದ ಕೋಲ್ಮಿಂಚೊಂದನ್ನು ನೋಡಿದೆ. ಅದು ತೀರಾ ಅಪಾಯಕಾರಿ ಎನಿಸುವಷ್ಟರಮಟ್ಟಿಗೆ ನಮ್ಮ ಹತ್ತಿರದಲ್ಲಿ ಹಾದುಹೋಯಿತು. ನಾವು ಪುಕಾಲ್ಪವನ್ನು ಬಹಳ ಸಮಯದ ಹಿಂದೆಯೇ ಸೇರಿರಬೇಕಾಗಿತ್ತು. ಆದರೆ ಇನ್ನೂ ಹೋಗುತ್ತಲೇ ಇದ್ದೆವು. ಮತ್ತೆ ವಿಮಾನದ ಕುಲುಕಾಟ ತೀವ್ರವಾಯಿತು. ಈಗ ಮತ್ತಷ್ಟು ಕಿರಿಚಾಟಗಳು ಕೇಳಿಸಿದವು. ಈ ಸಾರಿ ಅದು ಮೊದಲಿಗಿಂತ ಜೋರಾಗಿತ್ತು. ಹಿಂದೆಯೇ ರ್ಯಾಕಿನಲ್ಲಿಟ್ಟಿದ್ದ ಕೆಲವು ಹ್ಯಾಂಡ್ ಲಗೇಜುಗಳು ಕೆಳಗೆ ಬಿದ್ದವು.
“ಇದೇ ಕೊನೆ” ನನ್ನ ಅಮ್ಮ ಹೇಳಿದಳು. ಅಮ್ಮ, ಒಮ್ಮೆ ಅಮೆರಿಕಾದಲ್ಲೆಲ್ಲೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಬಿರುಗಾಳಿಗೆ ಸಿಕ್ಕು ಭಾರಿ ಹೊಯ್ದಾಟಕ್ಕೆ ಸಿಲುಕಿದ್ದಳು. ಅಂದಿನಿಂದ ಅವಳಿಗೆ ವಿಮಾನ ಹಾರಾಟವೆಂದರೆ ಭಯವಿತ್ತು. ಆದರೆ ಈ ಸಾರಿ ಅವಳಿಗೆ ಗಾಬರಿಯಾಗಿದ್ದು ವಿಮಾನದ ಹೊಯ್ದಾಟದಿಂದಲ್ಲ. ಆದರೆ ಅದಕ್ಕೆ ತಗುಲಿಕೊಂಡಿರುವ ಬೆಂಕಿಯಿಂದ.
ನಾನು ವಿಮಾನದ ಬಲಭಾಗದ ರೆಕ್ಕೆಯಿಂದ ಹೊರಹೊಮ್ಮುವ ಶುಭ್ರ ಹಳದಿ ಬೆಂಕಿಯ ಜ್ವಾಲೆಗಳನ್ನು ನೋಡಿದೆ. ನನ್ನ ಅಮ್ಮನನ್ನೂ ನೋಡಿದೆ. ಅವಳು ಭಯದಿಂದ ನಡಗುತ್ತಿದ್ದಳು. ಅದೇ ವೇಳೆಗೆ ವಿಮಾನ ಒಮ್ಮೆ ಭಯಂಕರವಾಗಿ ಕುಲುಕಿತು. ಅಷ್ಟೆ, ಮರುಕ್ಷಣ ನಾನು ವಿಮಾನದೊಳಗಿಲ್ಲ ಎಂಬ ಅರಿವಾಯಿತು. ನಾನು ವಿಮಾನದ ಹೊರಗೆ ನನ್ನ ಸೀಟಿನಲ್ಲಿ ಕುಳಿತುಕೊಂಡು ತೆರೆದ ಗಾಳಿಯಲ್ಲಿ ಹಾರಾಡುತ್ತಿದ್ದೆ.

ನಂಗಿನ್ನೂ ಚನ್ನಾಗಿ ನೆನಪಿದೆ-ನಾನು ಬಿಗಿಯಾಗಿ ಸೀಟು ಬೆಲ್ಟನ್ನು ಬಿಗಿದುಕೊಂಡಿದ್ದರಿಂದ ನನ್ನ ಹೊಟ್ಟೆ ಒತ್ತಿದಂತಾಗಿ ನನಗೆ ಉಸಿರಾಡಲಾಗುತ್ತಿರಲಿಲ್ಲ. ಜೊತೆಗೆ ನಾನು ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ಕೆಳಗೆ ಬೀಳುತ್ತಿದ್ದನೆಂದು ಅರಿವಾಯಿತು. ಹಾಗೆ ಎತ್ತರದಿಂದ ಗಿರಗಿರನೆ ಕೆಳಗೆ ಬೀಳುವಾಗ ನನ್ನ ಕೆಳಗಿರುವ ಕಾಡಿನ ಮರಗಳು ಕಾಲಿಫ್ಲವರಿನಂತೆ, ಬಹಳಷ್ಟು ಕಾಲಿಫ್ಲವರಿನಂತೆ ವೃತ್ತಾಕಾರವಾಗಿ ಸುತ್ತುತ್ತಿರುವಂತೆ ಭಾಸವಾದವು. ಆಮೇಲೇನಾಯಿತೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ನನಗೆ ಎಚ್ಚರ ತಪ್ಪಿತು.
ಮಾರನೆಯ ದಿನ ಮಳೆಯಿಂದಾಗಿ ನನಗೆ ಎಚ್ಚರವಾಯ್ತು. ಮಳೆ ಬಿರುಸಾಗಿ ಸುರಿಯುತ್ತಿತ್ತು. ಗುಡುಗುಗಳ ಆರ್ಭಟ ಕೇಳಿಸುತ್ತಿತ್ತು. ಬೆಳಕು ಗೋಚರಿಸುತ್ತಿತ್ತು.
ನಾನು ನನ್ನ ಸೀಟಿನ ಕೆಳಗೆ ಮಲಗಿದ್ದೆ. ಆದರೆ ನನ್ನ ಪಕ್ಕದ ಸೀಟು ಖಾಲಿಯಾಗಿತ್ತು. ನನ್ನ ಅಮ್ಮನ ಬಗ್ಗೆ ಯಾವೊಂದು ಕುರುಹು ಇರಲಿಲ್ಲ. ಮಾತ್ರವಲ್ಲ, ನನ್ನ ಅಮ್ಮನ ಎಡಭಾಗಕ್ಕೆ ಕುಳಿತ ವ್ಯಕ್ತಿಯ ಬಗ್ಗೆಯೂ ಸಹ ಯಾವೊಂದು ಕುರುಹು ಕಾಣಿಸಲಿಲ್ಲ. ವಿಮಾನ ಜೋರಾಗಿ ಕುಲುಕಿದಾಗ ಅವನಿನ್ನೂ ನಿದ್ರೆ ಮಾಡುತ್ತಲೇ ಇದ್ದ. ಅಲ್ಲಿ ವಿಮಾನದ ಕುರುಹುಗಳಾಗಲಿ, ಅವಶೇಷಗಳಾಗಲಿ ನನಗೆ ಎಲ್ಲೂ ಕಾಣಿಸಲಿಲ್ಲ. ನಾನು ಒಬ್ಬಂಟಿಯಾಗಿ ಬಿದ್ದಿದ್ದೆ. ನನ್ನೊಟ್ಟಿಗೆ ವಟಗುಟ್ಟುವ ಕಪ್ಪೆಗಳು ಮತ್ತು ಜಿರ್ರಗೂಡುವ ಹುಳುಗಳು ಮಾತ್ರ ಇದ್ದವು.
ನಾನು ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದೆ. ತಕ್ಷಣ ನಾನು ಭೂಮಿಗೆ ತುಸು ಇಳಿಜಾರಾಗಿರುವ ಕಾಡೊಂದರಲ್ಲಿ ಬಿದ್ದಿರುವೆನೆಂದು ಅರಿವಾಯಿತು.
ನಿಮಗೆ ಆಶ್ಚರ್ಯವಾಗಬಹುದು. ನಾನು ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದರೂ ನನಗೆ ಅಷ್ಟಾಗಿ ಬಿದ್ದಿದ್ದೇನೆ ಅನಿಸಿರಲಿಲ್ಲ. ನನ್ನ ಸೀಟು ಬೆಲ್ಟು ಕಿತ್ತು ಹೋಗಿತ್ತು. ಜೊತೆಗೆ ನನ್ನ ಶೂ, ಕನ್ನಡಕ, ಹಾಗೂ ನನ್ನ ಅಮ್ಮ ಉಡುಗೊರೆಯಾಗಿ ಕೊಟ್ಟ ಉಂಗುರ ಎಲ್ಲವೂ ಕಳೆದುಹೋಗಿದ್ದವು. ನಾನು ಹಾಕಿಕೊಂಡಿದ್ದ ’ಹಿಪ್ಪೀ’ ಡ್ರೆಸ್ಸು ಒಂಚೂರು ಹರಿಯದೆ ಹಾಗೆ ಇದ್ದದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ನನ್ನ ಕುತ್ತಿಗೆಯ ಕೆಳಭಾಗದ ಮೂಳೆಯೊಂದು ವಿಚಿತ್ರ ರೀತಿಯಲ್ಲಿ ಹೊರಚಾಚಿಕೊಂಡಿತ್ತು. ಮೊದಮೊದಲು ನಾನದನ್ನು ನನ್ನ ಶರ್ಟಿನ ಕಾಲರ್ ಇರಬಹುದೆಂದುಕೊಂಡೆ. ಆಮೇಲೆ ಅದು ಕುತ್ತಿಗೆಯ ಕೆಳಭಾಗದ ಮೂಳೆಯೆಂದು ಖಾತ್ರಿಯಾಯಿತು. ನನ್ನ ಒಂದು ಕಣ್ಣು ಊದಿಕೊಂಡಿತ್ತು. ತಲೆಯ ಮೇಲೆ ಹೊಡೆತ ಬಿದ್ದಿತ್ತು ಹಾಗೂ ಪಾದದ ಮೇಲೆ ಸಣ್ಣ ಗಾಯವಾಗಿತ್ತು. ಆದರೂ ನಂಗೆ ಒಂಚೂರು ನೋವಿರಲಿಲ್ಲ. ಆದರೆ ಏಳಲು ಹಾಗು ಎದ್ದು ಸುತ್ತಮುತ್ತ ನೋಡಲು ನನ್ನಲ್ಲಿ ಒಂಚೂರು ಚೈತನ್ಯ ಇರಲಿಲ್ಲವಾದ್ದರಿಂದ ನಾನು ಇಡಿ ರಾತ್ರಿಯನ್ನು ಅರೆ ನಿದ್ರೆ, ಅರೆ ಎಚ್ಚರದಲ್ಲಿ ಕಳೆದೆ.
ಮರುದಿವಸ ಬೆಳಿಗ್ಗೆ ಎದ್ದಾಗ ಒಂದು ಕ್ಷಣ ನನ್ನ ತಲೆ ತಿರುಗಿದಂತೆ ಭಾಸವಾಯಿತು. ನನ್ನ ಬಳಿ ಪಾರ್ಸಲ್ಲೊಂದು ಬಿದ್ದಿತ್ತು. ತೆರೆದು ನೋಡಿದೆ ಅದರೊಳಗೆ ಒಂದು ಕೇಕು ಹಾಗೂ ಕೆಲವು ಆಟಿಕೆಗಳಿದ್ದವು. ಆ ಕೇಕು, ಅವತ್ತು ಕ್ರಿಸ್ಮಸ್ ಹಬ್ಬವಿದೆಯೆಂದು ಜ್ಞಾಪಿಸಿತು. ನನಗೆ ನನ್ನ ಅಪ್ಪ ಮತ್ತು ಅವನ ಕ್ರಿಸ್ಮಸ್ ಗಿಡ ನೆನಪಾಯಿತು. ತಕ್ಷಣ ನಾನು ನಿರ್ಧರಿಸಿದೆ; ಬಹುಶಃ ಅಪ್ಪ, ಅದಾಗಲೇ ಅವನ ಹೆಂಡತಿಯನ್ನು ಕಳೆದುಕೊಂಡಾಗಿದೆ. ಇನ್ನು ಉಳಿದಿರುವದು ಮಗಳು. ಆತ ಅವಳನ್ನೂ ಸಹ ಕಳೆದುಕೊಳ್ಳುವಂತಾಗಬಾರದು-ಅದಕ್ಕೋಸ್ಕರವಾದರೂ ನಾನು ಬದುಕಲೇ ಬೇಕು.
ನನ್ನ ಅಪ್ಪ-ಅಮ್ಮ ನನಗೆ ಈ ಮೊದಲೇ ಕಾಡಿನ ಗಂಡಾಂತರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿವಳಿಕೆ ಕೊಟ್ಟಿದ್ದರು; ಉದಾಹರಣೆಗೆ ದೊಡ್ಡ ದೊಡ್ದ ಪ್ರಾಣಿಗಳಾದ ಓಸ್ಲಾಟ್, ಜಾಗೂರ್, ಅಥವಾ ಟೇಪ್ರೀಸ್ ಅಂಥ ಅಪಾಯಕಾರಿಯಲ್ಲ ಆದರೆ ಸಣ್ಣ ಸಣ್ಣ ಹುಳುಹುಪ್ಪಡಿಗಳಾದ ಜೇಡರಹುಳು, ಇರುವೆಗಳು, ನೊಣಗಳು, ಸೊಳ್ಳೆಗಳು ತುಂಬಾ ಅಪಾಯಕಾರಿಯೆಂದು. ಜೊತೆಗೆ ಒಂದು ವೇಳೆ ಕಾಡಿನಲ್ಲಿ ಕಳೆದುಹೋದರೆ ಮೊದಲು ನದಿಯೊಂದನ್ನು ಕಂಡುಹಿಡಿಯಲು ಪ್ರಯತ್ನಪಡಬೇಕು. ಏಕೆಂದರೆ ನದಿಯ ದಂಡೆಗುಂಟ ಮರ ಕಡಿಯುವ ಕೊನಿಬೋ, ಶಿಪಿಬೋ, ಕ್ಯಾಕ್ಟೈಬೋ, ಜನಾಂಗಕ್ಕೆ ಸೇರಿದ ರೆಡ್ ಇಂಡಿಯನ್ನರು ಅಲ್ಲಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಲ್ಲವೇ ಬೇಸಾಯ ಮಾಡಿಕೊಂಡಿರುವ ಬಿಳಿಯರು ಕಾಣಸಿಗುತ್ತಾರೆ. ನದಿಗಳೇ ಅವರ ರಸ್ತೆಗಳು. ಕೊನೆಗೆ ಈ ಎಲ್ಲ ರಸ್ತೆಗಳು ರಿಯೊ ಉಕ್ಯಾಲಿ ಎಂಬ ನದಿಗುಂಟ ಇರುವ ದೊಡ್ಡ ರಸ್ತೆಗೆ ಬಂದು ಸೇರುತ್ತವೆ. ಮುಂದೆ ರಿಯೊ ಉಕ್ಯಾಲಿ ನದಿಯು ಹರಿದುಕೊಂಡು ಬಂದು ದೊಡ್ಡದಾದ ಅಮೇಜಾನ್ ನದಿಯನ್ನು ಸೇರುತ್ತದೆ ಎಂದು ಹೇಳಿದ್ದರು.

ಹೀಗಾಗಿ ಮೊದಲು ನಾನು ನದಿಯೊಂದನ್ನು ಕಂಡುಹಿಡಿಯಲೇಬೇಕಿತ್ತು; ಅದರಲ್ಲೂ ರಿಯೊ ಉಕ್ಯಾಲಿ ನದಿಯನ್ನು. ಏಕೆಂದರೆ ಪುಕಲ್ಪಾ ಇದ್ದದ್ದು ಉಕ್ಯಾಲಿ ನದಿ ದಂಡೆ ಮೇಲೆ. ಅಲ್ಲಿ ನನ್ನ ಅಪ್ಪ ಕಾಯುತ್ತಿದ್ದ-ನಮಗಾಗಿ.
ನಾನು ಆ ಕ್ರಿಸ್ಮಸ್ ಕೇಕು ತಿನ್ನಲು ಹೋಗಲಿಲ್ಲ. ಬರೀ ಒಂದೇ ಒಂದು ತುಂಡು ರುಚಿ ನೋಡಿ ಬಿಟ್ಟೆ. ಅದು ನೆನೆದು ಹಸಿಯಾಗಿದ್ದರಿಂದ ಅಷ್ಟೇನೂ ರುಚಿಯಾಗಿರಲಿಲ್ಲ. ಬದಲಾಗಿ, ಆ ಪಾರ್ಸಲ್ಲಿನಿಂದ ಬೇರೆ ಕೆಲವು ಸಿಹಿತಿಂಡಿಗಳ ಪೊಟ್ಟಣವನ್ನು ಹೊರತೆಗೆದು ತಿಂದೆ. ಅದನ್ನು ಯಾರೋ ಕ್ರಿಸ್ಮಸ್ ಉಡುಗೂರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರೆಂದು ಕಾಣುತ್ತದೆ.
ನನಗೆ ಅಲ್ಲೊಂದು ಕೋಲು ಸಿಕ್ಕಿತು. ಆ ಕೋಲಿನ ಸಹಾಯದಿಂದ ದಾರಿಗಾಗಿ ತಡಕಾಡುತ್ತಾ ಮತ್ತು ಆ ದಾರಿಯಲ್ಲಿ ಯಾವುದೇ ಜೇಡ, ಇರುವೆ, ಹಾವುಗಳಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ ನಡೆಯುತ್ತಾ ಹೊರಟೆ. ಒಂದೆರೆಡು ಹೆಜ್ಜೆ ಕಿತ್ತಿಟ್ಟಿರಲಿಕ್ಕಿಲ್ಲ, ಮತ್ತೆ ತಲೆ ತಿರುಗಿತು. ಮೇಲಿಂದ ಮೇಲೆ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಏಕೆಂದರೆ ಪ್ರತಿ ನಾಲ್ಕು ಹೆಜ್ಜೆಗೆ ಇಡಿ ಭೂಮಿಯೇ ಗಿರಗಿರನೆ ತಿರುಗಿದಂತೆ ಭಾಸವಾಗುತ್ತಿದ್ದುದರಿಂದ ನನಗೆ ಏನನ್ನೂ ಗಮನವಿಟ್ಟು ನೋಡಲು ಸಾಧ್ಯವಾಗುತ್ತಿರಲಿಲ್ಲ.
ಕ್ರಮೇಣ ನನಗೆ ಅತಿ ಹತ್ತಿರದಲ್ಲೆಲ್ಲೋ ನೀರಿನ ಝುಳುಝುಳು ಶಬ್ಧ ಕೇಳಿಸಿತು. ನನ್ನ ಕಿವಿಗಳು ತಟ್ಟನೆ ನಿಮಿರಿದವು- ಈ ಶಬ್ಧ ನದಿಯೊಂದರ ಹರಿವ ಶಬ್ಧದಂತೆ ಇದೆಯೆಲ್ಲಾ ಎಂದು.
ಹೋಗಿ ನೋಡಿದೆ. ಆದರದು ನದಿಯಾಗಿರಲಿಲ್ಲ. ಅಲ್ಲಿ ನದಿಯೊಂದು ಸಣ್ಣ ಹಳ್ಳವಾಗಿ ಮಾರ್ಪಟ್ಟಿತ್ತು ಅಷ್ಟೆ. ಅದರ ನೀರು ತಿಳಿಯಾಗಿದ್ದರಿಂದ ಅಲ್ಲಿ ಒಂದಷ್ಟು ನೀರನ್ನು ಕುಡಿದು ವಿಶ್ರಮಿಸಿದೆ. ಅಲ್ಲಿಂದ ಆ ಹಳ್ಳ ದೊಡ್ದದಾದ ಹಳ್ಳವೊಂದಕ್ಕೆ ದಾರಿ ತೋರಿಸಲಿತ್ತು.
ಪೆರುವಿನ ಕಾಡಿನಲ್ಲಿ ಹರಿಯುವ ನದಿಗಳು ನೇರವಾಗಿ ಒಂದೇ ಸರಳ ರೇಖೆಯಲ್ಲಿ ಹರಿಯುವದಿಲ್ಲ. ಅವು ವಕ್ರ ವಕ್ರವಾಗಿ ಅನೇಕ ತಿರುವುಗಳಲ್ಲಿ ಹರಿಯುತ್ತವಾದ್ದರಿಂದ ನದಿ ದಂಡೆಗುಂಟ ಸುತ್ತು ಹಾಕಿಕೊಂಡು ಮೈಲಿಗಟ್ಟಲೆ ನಡೆದರೂ ಕೊನೆಯಲ್ಲಿ ನೂರು ಗಜದಷ್ಟು ದಾರಿ ಕೂಡ ಸವೆದಿರುವದಿಲ್ಲ.
ಅಲ್ಲಿ ಸೊಳ್ಳೆಗಳಿದ್ದವು. ಭಯಂಕರ ಸೊಳ್ಳೆಗಳು. ಭಾರಿ ಪ್ರಮಾಣದ ಸಂಖ್ಯೆಯಲ್ಲಿದ್ದು ಅಕ್ಷರಶಃ ನರಕವನ್ನು ತೆರೆದಿಟ್ಟಿದ್ದವು. ಇವಲ್ಲದೆ ನದಿಯ ದಂಡೆಯ ಮೇಲೆ ಮೊಸಳೆಗಳು ಮಲಗಿದ್ದವು; ಆಸೆಬುರುಕ ಮೊಸಳೆಗಳು. ಜೊತೆಗೆ ಅಲ್ಲಿ ಚೂಪು ಹಲ್ಲಿನ ಮೀನುಗಳು ಬೇರೆ ಇದ್ದವು. ಅವು ಸದಾ ರಕ್ತ ಒಸರುವ ಗಾಯಗಳಿಗಾಗಿ ಹಾತೊರೆಯುತ್ತಿದ್ದವು. ನನ್ನ ಪಾದದ ಮೇಲೆ ಬೇರೆ ½ ಇಂಚು ಆಳ ಹಾಗೂ 2 ½ ಇಂಚು ಅಗಲದಷ್ಟು ಗಾಯವಾಗಿತ್ತಲ್ಲ? ಹೀಗಾಗಿ ನಾನು ತಕ್ಷಣ ಹುಶಾರಾದೆ.
ಆದಾಗ್ಯೂ ನಾನು ನದಿಯ ಬಳಿಯೇ ಇರಬೇಕಿತ್ತು. ಅದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ನದಿ ದಂಡೆಗಳು ದಟ್ಟವಾಗಿ ಬೆಳೆದಿದ್ದರಿಂದ ಅಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಕೆಲವು ಸಾರಿ ನಾನು ನದಿಯ ಮೂಲಕ ಹಾದುಹೋಗಬೇಕಿತ್ತು. ಏಕೆಂದರೆ ಒಮ್ಮೊಮ್ಮೆ ಒಣಗಿದ ಎಲೆಗಳು ಇಲ್ಲವೇ ಮರದ ಟೊಂಗೆಗಳು ರಾಶಿರಾಶಿಯಾಗಿ ಮುರಿದುಕೊಂಡು ಬಿದ್ದು ನನ್ನ ದಾರಿಯನ್ನು ಮುಚ್ಚಿಹಾಕುತ್ತಿದ್ದವು.
ಹೀಗೆ ನಡೆದುಕೊಂಡು ಹೋಗುತ್ತಿರುವಾಗ ತಕ್ಷಣ ನನಗೆ ಗುಂಯ್ಯಗುಡುವ ನೊಣಗಳ ಸದ್ದು ಕೇಳಿಸಿತು. ಅದರ ಹಿಂದೆಯೇ ವಿಮಾನದ ಮೂರು ಸೀಟುಗಳು ಕಾಣಿಸಿದವು. ಪಕ್ಕದಲ್ಲಿಯೇ ಮೂರು ಹುಡುಗಿಯರ ಹೆಣಗಳು ಬಿದ್ದಿದ್ದವು. ಅವು ಕೊಳೆತು ನಾರುತ್ತಿದ್ದು ಅವುಗಳ ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ನಾನು ಅವುಗಳ ಪಕ್ಕದಲ್ಲಿ ಹಾದುಹೋಗುತ್ತಿದ್ದಂತೆ ಅವುಗಳಲ್ಲಿ ನನ್ನ ಅಮ್ಮನ ಹೆಣ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ.
ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
ಕನ್ನಡಕ್ಕೆ: ಉದಯ್ ಇಟಗಿ
ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ನಮ್ಮ ವಿಮಾನ ’ಲಾಕ್-ಹೀಡ್ ಎಲೆಕ್ಟ್ರಾ’ 11.15 ಆದರೂ ಇನ್ನೂ ಹೊರಡದೇ ಇದ್ದದ್ದು ನಂಗೆ ಒಂಚೂರು ಬೇಸರ ಮೂಡಿಸಲಿಲ್ಲ. ಏಕೆಂದರೆ ಪೆರುವಿನಲ್ಲಿ ವಿಮಾನಗಳು ಸಮಯಕ್ಕೆ ಸರಿಯಾಗಿ ಹೊರಡುವದು ತುಂಬಾ ಅಪರೂಪವಾಗಿತ್ತು ಮತ್ತು ನನಗದು ಒಗ್ಗಿಹೋಗಿತ್ತು. ವಿಮಾನದಲ್ಲಿ ಒಟ್ಟು 80 ಜನ ಪ್ರಯಾಣಿಕರಿದ್ದರು. ಆದರೆ ನಾನು ಅದ್ಹೇಗೋ 19ನೇ ಸಾಲಿನಲ್ಲಿರುವ ಬಲಬದಿಯ ಕಿಟಕಿ ಪಕ್ಕದ ಆಸನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಎಲ್ಲವೂ ಸಹಜವಾಗಿಯೇ ಇತ್ತು: ವಿಮಾನ ನೆಲದಿಂದ ಮೇಲಕ್ಕೆ ಹಾರುವದು, ಪೆಸಿಫಿಕ್ ಸಾಗರದ ಮೇಲೆ ಸುತ್ತು ಹಾಕುವದು, ನಿಧಾನಕ್ಕೆ ಎತ್ತರ ಹೆಚ್ಚಿಸಿಕೊಳ್ಳುವದು, ಆಂಡೀಸ್ ಪರ್ವತಗಳನ್ನು ದಾಟುವದು, ಮಧ್ಯಾಹ್ನದ ಊಟ ಹಾಗೂ ಗಗನ ಸಖಿಯರ ಮಂದಹಾಸಳು.........ಹೀಗೆ ಎಲ್ಲವೂ ಸುಖಕರವಾಗಿತ್ತು.
ನಾವು ಹಿಮದಿಂದಾವೃತವಾದ ಆಂಡೀಸ್ ಪರ್ವತ ಶಿಖರಗಳನ್ನೂ ಹಾಗೂ ಪೂರ್ವದುದ್ದಕ್ಕೂ ಚಾಚಿಕೊಂಡು ನಿಂತಿರುವ ದಟ್ಟ ಕಾಡುಗಳನ್ನೂ ನೋಡುತ್ತಾ ಕುಳಿತೆವು. ಸ್ವಲ್ಪ ಹೊತ್ತಿನ ನಂತರ ಗಗನ ಸಖಿಯರು ಮಂದಹಾಸ ಬೀರುತ್ತಾ ಊಟದ ತಟ್ಟೆಗಳನ್ನು ಎತ್ತಲು ಬಂದರು. ಅಷ್ಟೊತ್ತಿಗಾಗಲೆ ಕೆಲವು ಪ್ರಯಾಣಿಕರು ನಿದ್ರೆ ಹೋಗಿದ್ದರು.
ಲೀಮಾದಿಂದ ಪುಕಲ್ಪಾದವರಿಗೆ ವಿಮಾನ ಪ್ರಯಾಣದ ಸಮಯ ಕೇವಲ ಒಂದು ಗಂಟೆಯಷ್ಟೆ. ಹೊರಗಡೆ ಯಾವುದೇ ಮಂಜಿನ ಮುಸುಕಗಳಿಲ್ಲದೆ ಎಲ್ಲವೂ ನಿಚ್ಛಳವಾಗಿದ್ದರೆ ಜಗತ್ತಿನಲ್ಲಿಯೇ ಈ ವಿಮಾನ ಹಾರಾಟ ಅತ್ಯಂತ ನಯನ ಮನೋಹರವಾಗಿರುತ್ತದೆ. ಆದರೆ ಹಾರಾಟ ಆರಂಭಿಸಿ ಅರ್ಧ ಗಂಟೆಯೊಳಗೆ ಹೊರಗಿನ ದೃಶ್ಯಗಳೆಲ್ಲವೂ ಮಂಕಾದವು. ಇದ್ದಕ್ಕಿದ್ದಂತೆ ನಾವು ಕುಳಿತ ವಿಮಾನ ಕುಲುಕಾಡತೊಡಗಿತು. ಆ ಕುಲುಕಾಟ ರಭಸವಾಗುತ್ತಿದ್ದಂತೆ ನಮಗೆಲ್ಲರಿಗೂ ಸೀಟು ಬೆಲ್ಟುಗಳನ್ನು ಬಿಗಿದುಕೊಳ್ಳುವಂತೆ ಸೂಚನೆ ನೀಡಲಾಯಿತು. ಆಗಲೂ ಸಹ ನಾನು ಎದೆಗುಂದಲಿಲ್ಲ. ಏಕೆಂದರೆ ಈ ರೀತಿಯ ಹವಾಮಾನ ಪ್ರಕ್ಷುಬ್ಧತೆ ಪರ್ವತಗಳು ಪೂರ್ವ ದಿಕ್ಕಿನೆಡೆಗೆ ಬಾಗಿ ಚಾಚಿಕೊಂಡಿರುವ ಕಡೆಯಲ್ಲೆಲ್ಲಾ ಸರ್ವೇ ಸಾಮಾನ್ಯವೆಂದು ನನಗೆ ಗೊತ್ತಿತ್ತು.
ಇದ್ದಕ್ಕಿದ್ದಂತೆ ನಮ್ಮ ಕಿಟಕಿಗಿ ಅಡ್ದಲಾಗಿ ಮಳೆ ಪಟಪಟನೆ ಬೀಳತೊಡಗಿತು. ಈಗ ನಮ್ಮ ವಿಮಾನ ಲಂಬವಾಗಿ ಚಲಿಸತೊಡಗಿತು. ಮೊಟ್ಟಮೊದಲಬಾರಿಗೆ ವಿಮಾನದಲ್ಲಿದ್ದ ಪ್ರಯಾಣಿಕರು ಒಮ್ಮೆ ಕಿರುಚಿದರು.
ನಾನು ಕಿಟಕಿಯಿಂದಾಚೆ ಮೋಡಗಳಲ್ಲಿ ಮಿಂಚಿ ಮರೆಯಾದ ಕೋಲ್ಮಿಂಚೊಂದನ್ನು ನೋಡಿದೆ. ಅದು ತೀರಾ ಅಪಾಯಕಾರಿ ಎನಿಸುವಷ್ಟರಮಟ್ಟಿಗೆ ನಮ್ಮ ಹತ್ತಿರದಲ್ಲಿ ಹಾದುಹೋಯಿತು. ನಾವು ಪುಕಾಲ್ಪವನ್ನು ಬಹಳ ಸಮಯದ ಹಿಂದೆಯೇ ಸೇರಿರಬೇಕಾಗಿತ್ತು. ಆದರೆ ಇನ್ನೂ ಹೋಗುತ್ತಲೇ ಇದ್ದೆವು. ಮತ್ತೆ ವಿಮಾನದ ಕುಲುಕಾಟ ತೀವ್ರವಾಯಿತು. ಈಗ ಮತ್ತಷ್ಟು ಕಿರಿಚಾಟಗಳು ಕೇಳಿಸಿದವು. ಈ ಸಾರಿ ಅದು ಮೊದಲಿಗಿಂತ ಜೋರಾಗಿತ್ತು. ಹಿಂದೆಯೇ ರ್ಯಾಕಿನಲ್ಲಿಟ್ಟಿದ್ದ ಕೆಲವು ಹ್ಯಾಂಡ್ ಲಗೇಜುಗಳು ಕೆಳಗೆ ಬಿದ್ದವು.
“ಇದೇ ಕೊನೆ” ನನ್ನ ಅಮ್ಮ ಹೇಳಿದಳು. ಅಮ್ಮ, ಒಮ್ಮೆ ಅಮೆರಿಕಾದಲ್ಲೆಲ್ಲೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಬಿರುಗಾಳಿಗೆ ಸಿಕ್ಕು ಭಾರಿ ಹೊಯ್ದಾಟಕ್ಕೆ ಸಿಲುಕಿದ್ದಳು. ಅಂದಿನಿಂದ ಅವಳಿಗೆ ವಿಮಾನ ಹಾರಾಟವೆಂದರೆ ಭಯವಿತ್ತು. ಆದರೆ ಈ ಸಾರಿ ಅವಳಿಗೆ ಗಾಬರಿಯಾಗಿದ್ದು ವಿಮಾನದ ಹೊಯ್ದಾಟದಿಂದಲ್ಲ. ಆದರೆ ಅದಕ್ಕೆ ತಗುಲಿಕೊಂಡಿರುವ ಬೆಂಕಿಯಿಂದ.
ನಾನು ವಿಮಾನದ ಬಲಭಾಗದ ರೆಕ್ಕೆಯಿಂದ ಹೊರಹೊಮ್ಮುವ ಶುಭ್ರ ಹಳದಿ ಬೆಂಕಿಯ ಜ್ವಾಲೆಗಳನ್ನು ನೋಡಿದೆ. ನನ್ನ ಅಮ್ಮನನ್ನೂ ನೋಡಿದೆ. ಅವಳು ಭಯದಿಂದ ನಡಗುತ್ತಿದ್ದಳು. ಅದೇ ವೇಳೆಗೆ ವಿಮಾನ ಒಮ್ಮೆ ಭಯಂಕರವಾಗಿ ಕುಲುಕಿತು. ಅಷ್ಟೆ, ಮರುಕ್ಷಣ ನಾನು ವಿಮಾನದೊಳಗಿಲ್ಲ ಎಂಬ ಅರಿವಾಯಿತು. ನಾನು ವಿಮಾನದ ಹೊರಗೆ ನನ್ನ ಸೀಟಿನಲ್ಲಿ ಕುಳಿತುಕೊಂಡು ತೆರೆದ ಗಾಳಿಯಲ್ಲಿ ಹಾರಾಡುತ್ತಿದ್ದೆ.

ನಂಗಿನ್ನೂ ಚನ್ನಾಗಿ ನೆನಪಿದೆ-ನಾನು ಬಿಗಿಯಾಗಿ ಸೀಟು ಬೆಲ್ಟನ್ನು ಬಿಗಿದುಕೊಂಡಿದ್ದರಿಂದ ನನ್ನ ಹೊಟ್ಟೆ ಒತ್ತಿದಂತಾಗಿ ನನಗೆ ಉಸಿರಾಡಲಾಗುತ್ತಿರಲಿಲ್ಲ. ಜೊತೆಗೆ ನಾನು ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ಕೆಳಗೆ ಬೀಳುತ್ತಿದ್ದನೆಂದು ಅರಿವಾಯಿತು. ಹಾಗೆ ಎತ್ತರದಿಂದ ಗಿರಗಿರನೆ ಕೆಳಗೆ ಬೀಳುವಾಗ ನನ್ನ ಕೆಳಗಿರುವ ಕಾಡಿನ ಮರಗಳು ಕಾಲಿಫ್ಲವರಿನಂತೆ, ಬಹಳಷ್ಟು ಕಾಲಿಫ್ಲವರಿನಂತೆ ವೃತ್ತಾಕಾರವಾಗಿ ಸುತ್ತುತ್ತಿರುವಂತೆ ಭಾಸವಾದವು. ಆಮೇಲೇನಾಯಿತೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ನನಗೆ ಎಚ್ಚರ ತಪ್ಪಿತು.
ಮಾರನೆಯ ದಿನ ಮಳೆಯಿಂದಾಗಿ ನನಗೆ ಎಚ್ಚರವಾಯ್ತು. ಮಳೆ ಬಿರುಸಾಗಿ ಸುರಿಯುತ್ತಿತ್ತು. ಗುಡುಗುಗಳ ಆರ್ಭಟ ಕೇಳಿಸುತ್ತಿತ್ತು. ಬೆಳಕು ಗೋಚರಿಸುತ್ತಿತ್ತು.
ನಾನು ನನ್ನ ಸೀಟಿನ ಕೆಳಗೆ ಮಲಗಿದ್ದೆ. ಆದರೆ ನನ್ನ ಪಕ್ಕದ ಸೀಟು ಖಾಲಿಯಾಗಿತ್ತು. ನನ್ನ ಅಮ್ಮನ ಬಗ್ಗೆ ಯಾವೊಂದು ಕುರುಹು ಇರಲಿಲ್ಲ. ಮಾತ್ರವಲ್ಲ, ನನ್ನ ಅಮ್ಮನ ಎಡಭಾಗಕ್ಕೆ ಕುಳಿತ ವ್ಯಕ್ತಿಯ ಬಗ್ಗೆಯೂ ಸಹ ಯಾವೊಂದು ಕುರುಹು ಕಾಣಿಸಲಿಲ್ಲ. ವಿಮಾನ ಜೋರಾಗಿ ಕುಲುಕಿದಾಗ ಅವನಿನ್ನೂ ನಿದ್ರೆ ಮಾಡುತ್ತಲೇ ಇದ್ದ. ಅಲ್ಲಿ ವಿಮಾನದ ಕುರುಹುಗಳಾಗಲಿ, ಅವಶೇಷಗಳಾಗಲಿ ನನಗೆ ಎಲ್ಲೂ ಕಾಣಿಸಲಿಲ್ಲ. ನಾನು ಒಬ್ಬಂಟಿಯಾಗಿ ಬಿದ್ದಿದ್ದೆ. ನನ್ನೊಟ್ಟಿಗೆ ವಟಗುಟ್ಟುವ ಕಪ್ಪೆಗಳು ಮತ್ತು ಜಿರ್ರಗೂಡುವ ಹುಳುಗಳು ಮಾತ್ರ ಇದ್ದವು.
ನಾನು ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದೆ. ತಕ್ಷಣ ನಾನು ಭೂಮಿಗೆ ತುಸು ಇಳಿಜಾರಾಗಿರುವ ಕಾಡೊಂದರಲ್ಲಿ ಬಿದ್ದಿರುವೆನೆಂದು ಅರಿವಾಯಿತು.
ನಿಮಗೆ ಆಶ್ಚರ್ಯವಾಗಬಹುದು. ನಾನು ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದರೂ ನನಗೆ ಅಷ್ಟಾಗಿ ಬಿದ್ದಿದ್ದೇನೆ ಅನಿಸಿರಲಿಲ್ಲ. ನನ್ನ ಸೀಟು ಬೆಲ್ಟು ಕಿತ್ತು ಹೋಗಿತ್ತು. ಜೊತೆಗೆ ನನ್ನ ಶೂ, ಕನ್ನಡಕ, ಹಾಗೂ ನನ್ನ ಅಮ್ಮ ಉಡುಗೊರೆಯಾಗಿ ಕೊಟ್ಟ ಉಂಗುರ ಎಲ್ಲವೂ ಕಳೆದುಹೋಗಿದ್ದವು. ನಾನು ಹಾಕಿಕೊಂಡಿದ್ದ ’ಹಿಪ್ಪೀ’ ಡ್ರೆಸ್ಸು ಒಂಚೂರು ಹರಿಯದೆ ಹಾಗೆ ಇದ್ದದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ನನ್ನ ಕುತ್ತಿಗೆಯ ಕೆಳಭಾಗದ ಮೂಳೆಯೊಂದು ವಿಚಿತ್ರ ರೀತಿಯಲ್ಲಿ ಹೊರಚಾಚಿಕೊಂಡಿತ್ತು. ಮೊದಮೊದಲು ನಾನದನ್ನು ನನ್ನ ಶರ್ಟಿನ ಕಾಲರ್ ಇರಬಹುದೆಂದುಕೊಂಡೆ. ಆಮೇಲೆ ಅದು ಕುತ್ತಿಗೆಯ ಕೆಳಭಾಗದ ಮೂಳೆಯೆಂದು ಖಾತ್ರಿಯಾಯಿತು. ನನ್ನ ಒಂದು ಕಣ್ಣು ಊದಿಕೊಂಡಿತ್ತು. ತಲೆಯ ಮೇಲೆ ಹೊಡೆತ ಬಿದ್ದಿತ್ತು ಹಾಗೂ ಪಾದದ ಮೇಲೆ ಸಣ್ಣ ಗಾಯವಾಗಿತ್ತು. ಆದರೂ ನಂಗೆ ಒಂಚೂರು ನೋವಿರಲಿಲ್ಲ. ಆದರೆ ಏಳಲು ಹಾಗು ಎದ್ದು ಸುತ್ತಮುತ್ತ ನೋಡಲು ನನ್ನಲ್ಲಿ ಒಂಚೂರು ಚೈತನ್ಯ ಇರಲಿಲ್ಲವಾದ್ದರಿಂದ ನಾನು ಇಡಿ ರಾತ್ರಿಯನ್ನು ಅರೆ ನಿದ್ರೆ, ಅರೆ ಎಚ್ಚರದಲ್ಲಿ ಕಳೆದೆ.
ಮರುದಿವಸ ಬೆಳಿಗ್ಗೆ ಎದ್ದಾಗ ಒಂದು ಕ್ಷಣ ನನ್ನ ತಲೆ ತಿರುಗಿದಂತೆ ಭಾಸವಾಯಿತು. ನನ್ನ ಬಳಿ ಪಾರ್ಸಲ್ಲೊಂದು ಬಿದ್ದಿತ್ತು. ತೆರೆದು ನೋಡಿದೆ ಅದರೊಳಗೆ ಒಂದು ಕೇಕು ಹಾಗೂ ಕೆಲವು ಆಟಿಕೆಗಳಿದ್ದವು. ಆ ಕೇಕು, ಅವತ್ತು ಕ್ರಿಸ್ಮಸ್ ಹಬ್ಬವಿದೆಯೆಂದು ಜ್ಞಾಪಿಸಿತು. ನನಗೆ ನನ್ನ ಅಪ್ಪ ಮತ್ತು ಅವನ ಕ್ರಿಸ್ಮಸ್ ಗಿಡ ನೆನಪಾಯಿತು. ತಕ್ಷಣ ನಾನು ನಿರ್ಧರಿಸಿದೆ; ಬಹುಶಃ ಅಪ್ಪ, ಅದಾಗಲೇ ಅವನ ಹೆಂಡತಿಯನ್ನು ಕಳೆದುಕೊಂಡಾಗಿದೆ. ಇನ್ನು ಉಳಿದಿರುವದು ಮಗಳು. ಆತ ಅವಳನ್ನೂ ಸಹ ಕಳೆದುಕೊಳ್ಳುವಂತಾಗಬಾರದು-ಅದಕ್ಕೋಸ್ಕರವಾದರೂ ನಾನು ಬದುಕಲೇ ಬೇಕು.
ನನ್ನ ಅಪ್ಪ-ಅಮ್ಮ ನನಗೆ ಈ ಮೊದಲೇ ಕಾಡಿನ ಗಂಡಾಂತರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿವಳಿಕೆ ಕೊಟ್ಟಿದ್ದರು; ಉದಾಹರಣೆಗೆ ದೊಡ್ಡ ದೊಡ್ದ ಪ್ರಾಣಿಗಳಾದ ಓಸ್ಲಾಟ್, ಜಾಗೂರ್, ಅಥವಾ ಟೇಪ್ರೀಸ್ ಅಂಥ ಅಪಾಯಕಾರಿಯಲ್ಲ ಆದರೆ ಸಣ್ಣ ಸಣ್ಣ ಹುಳುಹುಪ್ಪಡಿಗಳಾದ ಜೇಡರಹುಳು, ಇರುವೆಗಳು, ನೊಣಗಳು, ಸೊಳ್ಳೆಗಳು ತುಂಬಾ ಅಪಾಯಕಾರಿಯೆಂದು. ಜೊತೆಗೆ ಒಂದು ವೇಳೆ ಕಾಡಿನಲ್ಲಿ ಕಳೆದುಹೋದರೆ ಮೊದಲು ನದಿಯೊಂದನ್ನು ಕಂಡುಹಿಡಿಯಲು ಪ್ರಯತ್ನಪಡಬೇಕು. ಏಕೆಂದರೆ ನದಿಯ ದಂಡೆಗುಂಟ ಮರ ಕಡಿಯುವ ಕೊನಿಬೋ, ಶಿಪಿಬೋ, ಕ್ಯಾಕ್ಟೈಬೋ, ಜನಾಂಗಕ್ಕೆ ಸೇರಿದ ರೆಡ್ ಇಂಡಿಯನ್ನರು ಅಲ್ಲಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಲ್ಲವೇ ಬೇಸಾಯ ಮಾಡಿಕೊಂಡಿರುವ ಬಿಳಿಯರು ಕಾಣಸಿಗುತ್ತಾರೆ. ನದಿಗಳೇ ಅವರ ರಸ್ತೆಗಳು. ಕೊನೆಗೆ ಈ ಎಲ್ಲ ರಸ್ತೆಗಳು ರಿಯೊ ಉಕ್ಯಾಲಿ ಎಂಬ ನದಿಗುಂಟ ಇರುವ ದೊಡ್ಡ ರಸ್ತೆಗೆ ಬಂದು ಸೇರುತ್ತವೆ. ಮುಂದೆ ರಿಯೊ ಉಕ್ಯಾಲಿ ನದಿಯು ಹರಿದುಕೊಂಡು ಬಂದು ದೊಡ್ಡದಾದ ಅಮೇಜಾನ್ ನದಿಯನ್ನು ಸೇರುತ್ತದೆ ಎಂದು ಹೇಳಿದ್ದರು.

ಹೀಗಾಗಿ ಮೊದಲು ನಾನು ನದಿಯೊಂದನ್ನು ಕಂಡುಹಿಡಿಯಲೇಬೇಕಿತ್ತು; ಅದರಲ್ಲೂ ರಿಯೊ ಉಕ್ಯಾಲಿ ನದಿಯನ್ನು. ಏಕೆಂದರೆ ಪುಕಲ್ಪಾ ಇದ್ದದ್ದು ಉಕ್ಯಾಲಿ ನದಿ ದಂಡೆ ಮೇಲೆ. ಅಲ್ಲಿ ನನ್ನ ಅಪ್ಪ ಕಾಯುತ್ತಿದ್ದ-ನಮಗಾಗಿ.
ನಾನು ಆ ಕ್ರಿಸ್ಮಸ್ ಕೇಕು ತಿನ್ನಲು ಹೋಗಲಿಲ್ಲ. ಬರೀ ಒಂದೇ ಒಂದು ತುಂಡು ರುಚಿ ನೋಡಿ ಬಿಟ್ಟೆ. ಅದು ನೆನೆದು ಹಸಿಯಾಗಿದ್ದರಿಂದ ಅಷ್ಟೇನೂ ರುಚಿಯಾಗಿರಲಿಲ್ಲ. ಬದಲಾಗಿ, ಆ ಪಾರ್ಸಲ್ಲಿನಿಂದ ಬೇರೆ ಕೆಲವು ಸಿಹಿತಿಂಡಿಗಳ ಪೊಟ್ಟಣವನ್ನು ಹೊರತೆಗೆದು ತಿಂದೆ. ಅದನ್ನು ಯಾರೋ ಕ್ರಿಸ್ಮಸ್ ಉಡುಗೂರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರೆಂದು ಕಾಣುತ್ತದೆ.
ನನಗೆ ಅಲ್ಲೊಂದು ಕೋಲು ಸಿಕ್ಕಿತು. ಆ ಕೋಲಿನ ಸಹಾಯದಿಂದ ದಾರಿಗಾಗಿ ತಡಕಾಡುತ್ತಾ ಮತ್ತು ಆ ದಾರಿಯಲ್ಲಿ ಯಾವುದೇ ಜೇಡ, ಇರುವೆ, ಹಾವುಗಳಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ ನಡೆಯುತ್ತಾ ಹೊರಟೆ. ಒಂದೆರೆಡು ಹೆಜ್ಜೆ ಕಿತ್ತಿಟ್ಟಿರಲಿಕ್ಕಿಲ್ಲ, ಮತ್ತೆ ತಲೆ ತಿರುಗಿತು. ಮೇಲಿಂದ ಮೇಲೆ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಏಕೆಂದರೆ ಪ್ರತಿ ನಾಲ್ಕು ಹೆಜ್ಜೆಗೆ ಇಡಿ ಭೂಮಿಯೇ ಗಿರಗಿರನೆ ತಿರುಗಿದಂತೆ ಭಾಸವಾಗುತ್ತಿದ್ದುದರಿಂದ ನನಗೆ ಏನನ್ನೂ ಗಮನವಿಟ್ಟು ನೋಡಲು ಸಾಧ್ಯವಾಗುತ್ತಿರಲಿಲ್ಲ.
ಕ್ರಮೇಣ ನನಗೆ ಅತಿ ಹತ್ತಿರದಲ್ಲೆಲ್ಲೋ ನೀರಿನ ಝುಳುಝುಳು ಶಬ್ಧ ಕೇಳಿಸಿತು. ನನ್ನ ಕಿವಿಗಳು ತಟ್ಟನೆ ನಿಮಿರಿದವು- ಈ ಶಬ್ಧ ನದಿಯೊಂದರ ಹರಿವ ಶಬ್ಧದಂತೆ ಇದೆಯೆಲ್ಲಾ ಎಂದು.
ಹೋಗಿ ನೋಡಿದೆ. ಆದರದು ನದಿಯಾಗಿರಲಿಲ್ಲ. ಅಲ್ಲಿ ನದಿಯೊಂದು ಸಣ್ಣ ಹಳ್ಳವಾಗಿ ಮಾರ್ಪಟ್ಟಿತ್ತು ಅಷ್ಟೆ. ಅದರ ನೀರು ತಿಳಿಯಾಗಿದ್ದರಿಂದ ಅಲ್ಲಿ ಒಂದಷ್ಟು ನೀರನ್ನು ಕುಡಿದು ವಿಶ್ರಮಿಸಿದೆ. ಅಲ್ಲಿಂದ ಆ ಹಳ್ಳ ದೊಡ್ದದಾದ ಹಳ್ಳವೊಂದಕ್ಕೆ ದಾರಿ ತೋರಿಸಲಿತ್ತು.
ಪೆರುವಿನ ಕಾಡಿನಲ್ಲಿ ಹರಿಯುವ ನದಿಗಳು ನೇರವಾಗಿ ಒಂದೇ ಸರಳ ರೇಖೆಯಲ್ಲಿ ಹರಿಯುವದಿಲ್ಲ. ಅವು ವಕ್ರ ವಕ್ರವಾಗಿ ಅನೇಕ ತಿರುವುಗಳಲ್ಲಿ ಹರಿಯುತ್ತವಾದ್ದರಿಂದ ನದಿ ದಂಡೆಗುಂಟ ಸುತ್ತು ಹಾಕಿಕೊಂಡು ಮೈಲಿಗಟ್ಟಲೆ ನಡೆದರೂ ಕೊನೆಯಲ್ಲಿ ನೂರು ಗಜದಷ್ಟು ದಾರಿ ಕೂಡ ಸವೆದಿರುವದಿಲ್ಲ.
ಅಲ್ಲಿ ಸೊಳ್ಳೆಗಳಿದ್ದವು. ಭಯಂಕರ ಸೊಳ್ಳೆಗಳು. ಭಾರಿ ಪ್ರಮಾಣದ ಸಂಖ್ಯೆಯಲ್ಲಿದ್ದು ಅಕ್ಷರಶಃ ನರಕವನ್ನು ತೆರೆದಿಟ್ಟಿದ್ದವು. ಇವಲ್ಲದೆ ನದಿಯ ದಂಡೆಯ ಮೇಲೆ ಮೊಸಳೆಗಳು ಮಲಗಿದ್ದವು; ಆಸೆಬುರುಕ ಮೊಸಳೆಗಳು. ಜೊತೆಗೆ ಅಲ್ಲಿ ಚೂಪು ಹಲ್ಲಿನ ಮೀನುಗಳು ಬೇರೆ ಇದ್ದವು. ಅವು ಸದಾ ರಕ್ತ ಒಸರುವ ಗಾಯಗಳಿಗಾಗಿ ಹಾತೊರೆಯುತ್ತಿದ್ದವು. ನನ್ನ ಪಾದದ ಮೇಲೆ ಬೇರೆ ½ ಇಂಚು ಆಳ ಹಾಗೂ 2 ½ ಇಂಚು ಅಗಲದಷ್ಟು ಗಾಯವಾಗಿತ್ತಲ್ಲ? ಹೀಗಾಗಿ ನಾನು ತಕ್ಷಣ ಹುಶಾರಾದೆ.
ಆದಾಗ್ಯೂ ನಾನು ನದಿಯ ಬಳಿಯೇ ಇರಬೇಕಿತ್ತು. ಅದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ನದಿ ದಂಡೆಗಳು ದಟ್ಟವಾಗಿ ಬೆಳೆದಿದ್ದರಿಂದ ಅಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಕೆಲವು ಸಾರಿ ನಾನು ನದಿಯ ಮೂಲಕ ಹಾದುಹೋಗಬೇಕಿತ್ತು. ಏಕೆಂದರೆ ಒಮ್ಮೊಮ್ಮೆ ಒಣಗಿದ ಎಲೆಗಳು ಇಲ್ಲವೇ ಮರದ ಟೊಂಗೆಗಳು ರಾಶಿರಾಶಿಯಾಗಿ ಮುರಿದುಕೊಂಡು ಬಿದ್ದು ನನ್ನ ದಾರಿಯನ್ನು ಮುಚ್ಚಿಹಾಕುತ್ತಿದ್ದವು.
ಹೀಗೆ ನಡೆದುಕೊಂಡು ಹೋಗುತ್ತಿರುವಾಗ ತಕ್ಷಣ ನನಗೆ ಗುಂಯ್ಯಗುಡುವ ನೊಣಗಳ ಸದ್ದು ಕೇಳಿಸಿತು. ಅದರ ಹಿಂದೆಯೇ ವಿಮಾನದ ಮೂರು ಸೀಟುಗಳು ಕಾಣಿಸಿದವು. ಪಕ್ಕದಲ್ಲಿಯೇ ಮೂರು ಹುಡುಗಿಯರ ಹೆಣಗಳು ಬಿದ್ದಿದ್ದವು. ಅವು ಕೊಳೆತು ನಾರುತ್ತಿದ್ದು ಅವುಗಳ ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ನಾನು ಅವುಗಳ ಪಕ್ಕದಲ್ಲಿ ಹಾದುಹೋಗುತ್ತಿದ್ದಂತೆ ಅವುಗಳಲ್ಲಿ ನನ್ನ ಅಮ್ಮನ ಹೆಣ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ.
ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
ಕನ್ನಡಕ್ಕೆ: ಉದಯ್ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಪಕ್ಕ ಸಾಹಸಪ್ರಧಾನ ಸಿನಿಮಾ3 ವಾರಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …2 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ8 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee3 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್6 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩7 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ9 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಏಕೋ ಏನೋ ಅಲ್ಲಿ ಒಂದಷ್ಟು ಒಳದನಿಗಳು ಮಾರ್ದನಿಸಲೇ ಇಲ್ಲ!
- ಪ್ರವೇಶನ.......
- ನಿನ್ನ ಪ್ರೀತಿಸುವದೇ ಒಂದು ಹಿಂಸೆ!
- ಉರಿದು ಬಿದ್ದ ಉಲ್ಕೆ-ಕಮಲಾ ದಾಸ್
- ಮರ ಕತ್ತರಿಸುವದು
- ನಾವು ಹುಡುಗರೇ ಹೀಗೆ........
- ಅವ್ವಂದಿರ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ಒಂದಿಷ್ಟು ಪದ್ಯಗಳು
- ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!
- ನಾನೂ ಹಾಫ್ ಸೆಂಚ್ಯುರಿ ಬಾರಿಸಿಬಿಟ್ಟೆ!
- ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.