ಮೊನ್ನೆ ನಮ್ಮ ಕಾಲೇಜಿನಲ್ಲೊಂದು ಬಹುಭಾಷಾ ಕವಿಗೋಷ್ಠಿ ನಡೆಯಿತು. ಹೆಸರಿಗಷ್ಟೇ ವಿವಿಧ ಭಾಷಾ ಕವಿಗೋಷ್ಠಿ. ಆದರೆ ಆ ಗೋಷ್ಠಿಯಲ್ಲಿ ಬಹಳಷ್ಟು ಜನ ಅರೇಬಿ ಭಾಷೆಯ ಕವಿಗಳೇ ತುಂಬಿಕೊಂಡಿದ್ದರು. ಇನ್ನುಳಿದಂತೆ ಆಫ್ರಿಕಾ ಖಂಡದ ಇತರೆ ಭಾಷೆಗಳಾದ ಹೌಸಾ, ಟರ್ಗಿ, ಫ್ರಾನ್ಸಾ (ಫ್ರೆಂಚ್), ತಿಗರಿ, ಯುರೊಬು, ಇಗ್ಬೊ, ಇಬಿಬೋ, ಭಾಷೆಯ ಕವಿಗಳು ಅಲ್ಲಿದ್ದರು. ಇವರೆಲ್ಲರ ಜೊತೆಗೆ ಇಟಲಿಯಿಂದ ಕವಯಿತ್ರಿಯೊಬ್ಬಳು ಇಟ್ಯಾಲಿಯನ್ ಭಾಷೆಯನ್ನು ಪ್ರತಿನಿಧಿಸಿ ಬಂದಿದ್ದಳು. ಆಕೆ ಇಡಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದಳು. ಮುಖ್ಯ ಆಕರ್ಷಣೆ ಯಾಕೆಂದರೆ ಅಲ್ಲಿದ್ದ ಬಹಳಷ್ಟು ಕಪ್ಪು ಜನರ ಮಧ್ಯ ಇವಳೊಬ್ಬಳು ಬಿಳಿ ಚರ್ಮದವಳಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಾಣುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಮೊಣಕಾಲಿನವರೆಗಷ್ಟೇ ಇರುವ ಮಿನಿ ಸ್ಕರ್ಟೊಂದನ್ನು ಧರಿಸಿ ಕಾಲು ಮೇಲೆ ಕಾಲು ಹಾಕಿಕೊಂಡು ಎಲ್ಲರ ಮುಂದೆ ಬಿಡುಬೀಸಾಗಿ ಕುಳಿತಿದ್ದಳು. ಒಂದರ್ಥದಲ್ಲಿ ಅಲ್ಲಿರುವ ಎಲ್ಲ ’ಮುಚ್ಚಮ್ಮ’ಗಳ ಮಧ್ಯ ಇವಳೊಬ್ಬಳು ಮಾತ್ರ ‘ಅರ್ಧ ಬಿಚ್ಚಮ್ಮ’ಳಾಗಿ ಕಾಣಿಸುತ್ತಿದ್ದಳು. ಹಾಗಾಗಿಯೋ ಏನೋ ಎಲ್ಲರ ಗಮನ ಅವಳ ಮೇಲೆಯೇ ಇತ್ತು. ಅಷ್ಟೇ ಅಲ್ಲ ತೆಳ್ಳಗೆ, ಬೆಳ್ಳಗೆ ಇರುವ ತನ್ನ ಆಕರ್ಷಕ ಮೈಮಾಟದಿಂದ ತುಸು ಹೆಚ್ಚೇ ಎನಿಸುವಷ್ಟು ‘ಸೆಕ್ಷಿ’ಯಾಗಿ ಕಾಣುತ್ತಿದ್ದಳು. ಎಲ್ಲರೂ ಅವಳನ್ನೇ ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದರು. ತನ್ನ ಸರದಿ ಬಂದಾಗ ಎಲ್ಲರ ಮುಂದೆ ಬಿಡುಬೀಸಾಗಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತೇ ತನ್ನ ಇಟ್ಯಾಲಿಯನ್ ಕವನವನ್ನು ಓದಿದಳು. ಓದಿಯಾದ ಮೇಲೆ ವೇದಿಕೆಯ ಪಕ್ಕಕ್ಕೆ ಹೋಗಿ ಎಲ್ಲರಿಗೂ ಕಾಣುವಂತೆ ಸಿಗರೇಟೊಂದನ್ನು ಸೇದಿ ಮತ್ತೆ ವಾಪಾಸ್ ಬಂದು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಳು. ಅಲ್ಲಿದ್ದ ಕೆಲವು ಗಂಡಸರು ಅವಳ ಈ ನಿರ್ಭಿಡೆಯ ವರ್ತನೆಯನ್ನು ಕಂಡು ಇದೇನಿದು ಅರಬ್ಬರ ನಾಡಿನಲ್ಲಿ ಈ ರೀತಿಯ ಬಿಚ್ಚು ಪ್ರದರ್ಶನ? ಎಂದು ಮೂಗು ಮುರಿದರು. ಆದರೆ ಅದನ್ನು ಆಕೆಗೆ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ. ತಮಾಷೆಯೆಂದರೆ ಮೊದಲು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ ಜನರೇ ಆಮೇಲಾಮೇಲೆ ಅವಳ ಮೊಣಕಾಲುಗಳನ್ನೇ ನೋಡುತ್ತಾ ಅವಳೊಟ್ಟಿಗೆ ರತಿಸುಖ ಅನುಭವಿಸಿದಷ್ಟೇ ಆನಂದಪಡುತ್ತಾ ಕುಳಿತುಬಿಟ್ಟರು. ಕೆಲವು ಪಡ್ಡೆ ಹುಡುಗರಂತೂ ಅವರವರೇ ಕಣ್ಣಲ್ಲಿ ಅದೇನೇನೇನೋ ಪೋಲಿಪೋಲಿಯಾಗಿ ಹೇಳಿಕೊಂಡು ಕಿಸಿಕಿಸಿಯೆಂದು ನಕ್ಕರು. ಇನ್ನು ಹುಡುಗಿಯರಂತೂ ತಾವು ಕನಸಿನಲ್ಲಿ ಕೂಡ ಈ ರೀತಿಯ ದಿರಿಸನ್ನು ಧರಿಸುವದು ಅಪರಾಧ ಎಂಬಂತೆ ಕುಳಿತಿದ್ದರು. ಮತ್ತೆ ಕೆಲ ಹುಡುಗಿಯರು ಅವಳಿಗಿರುವ ಸ್ವಾತಂತ್ರ್ಯದ ಕಾಲುಭಾಗದಷ್ಟಾದರೂ ನಮಗೆ ಸಿಕ್ಕಿದ್ದರೆ? ಎಂದು ಅವಳ ಜಾಗದಲ್ಲಿ ತಮ್ಮನ್ನು ಊಹಿಸಿಕೊಳ್ಳುತ್ತಾ ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಸರಿ. ಅಪರೂಪಕ್ಕೆಂಬಂತೆ ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆ ಕಾರ್ಯಕ್ರಮ ನಡೆದಿದೆ, ನೆನಪಿಗಿರಲಿ ಎಂದುಕೊಂಡು ನಾವೆಲ್ಲಾ ಈ ಕಾರ್ಯಕ್ರಮದ ಫೋಟೊವೊಂದನ್ನು ತೆಗೆದುಕೊಳ್ಳಲು ಕ್ಯಾಮರಾ ಹಿಡಿದು ಹೋದರೆ ಅಲ್ಲಿದ್ದ ಕೆಲವು ಮಡಿವಂತ ಜನ ನಮ್ಮನ್ನು ತಡೆದರು. ಫೋಟೊ ತೆಗೆಯುವದು ಬೇಡ ಎಂದರು. ಕಾರಣ ಕೇಳಿದರೆ ವೇದಿಕೆಯ ಮೇಲೆ ಏಳೆಂಟು ಜನ ಅರೇಬಿ ಹೆಂಗಸರು ಕುಳಿತಿದ್ದಾರೆ ಹಾಗೆಲ್ಲಾ ಅವರ ಫೋಟೊ ತೆಗೆಯುವದು ಚನ್ನಾಗಿರಲ್ಲ ಎಂದು ಹೇಳಿದರು. ಹೋಗಲಿ ಇಟ್ಯಾಲಿಯನ್ ಕವಯತ್ರಿಯದಾದರೂ ಒಂದು ಫೋಟೋ ತೆಗೆದುಕೊಳ್ಳುತ್ತೇವೆ. ಅದಕ್ಕಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದೆವು. ಊಹೂಂ, ಅದಕ್ಕೂ ಅಸ್ತು ಎನ್ನಲಿಲ್ಲ. ಅ ಅವಕಾಶ ಇದ್ದಿದ್ದು ಕಾರ್ಯಕ್ರಮದ ಸಂಘಟಿಕರು ಆಯೋಜಿಸಿದ್ದ ಕ್ಯಾಮರಾಮನ್ ಒಬ್ಬನಿಗೆ ಮಾತ್ರ. ಅವ ಮಾತ್ರ ತನಗೆ ಸಿಕ್ಕ ಈ ಅವಕಾಶ ಮತ್ತು ಸ್ವಾತಂತ್ರ್ಯಗಳೆರೆಡನ್ನು ತುಸು ಹೆಚ್ಚೇ ಬಳಸಿಕೊಂಡ. ಅದೇನು? ಹಿಂದೆಯೆಲ್ಲಾ ನಾವು ನಮ್ಮ ಕಾಲೇಜಿನ ಓಪನ್ ವೀಕ್ ಸೆಲೆಬ್ರೇಶನ್ ಸಮಯದಲ್ಲಿ ಹುಡುಗಿಯರು ಹಾಡು ಹಾಡುತ್ತಿರಬೇಕಾದರೆ, ಇಲ್ಲವೇ ಬೇರೆ ಮನರಂಜನಾ (ನೃತ್ಯವೊಂದನ್ನು ಹೊರತುಪಡಿಸಿ) ಕಾರ್ಯಕ್ರಮ ನೀಡುತ್ತಿರಬೇಕಾದರೆ ಧಾರಾಳವಾಗಿ ಫೋಟೊ ತೆಗೆಯುತ್ತಿದ್ದೆವು. ಆಗ ಯಾರೂ ಏನೂ ಅನ್ನದವರು ಈಗೇನು ಇಷ್ಟೊಂದು ವಿರೋಧ ನಿಮ್ಮದು? ಎಂದು ಕೇಳಿದರೆ ಕಾರ್ಯಕ್ರಮದ ಸಂಘಟಿಕರು ಹೊರಗಿನವರು ಯಾರೋ ಆಗಿದ್ದು ಅಲ್ಲಿ ನಮ್ಮ ಕಾಲೇಜಿನವರು ಕಾರ್ಯಕ್ರಮ ನಡೆಸಲು ಸ್ಥಳ ಮಾತ್ರ ಕೊಟ್ಟಿದ್ದರಿಂದ ಅವರಿಗೆ ಈ ವಿಷಯದಲ್ಲಿ ತಲೆಹಾಕಲು ಹೆಚ್ಚು ಸ್ವಾತಂತ್ರ್ಯವಿರಲಿಲ್ಲ ಎನ್ನುವ ಉತ್ತರ ಬಂತು.
ಸರಿ. ಕವಿಗೋಷ್ಠಿ ಮುಗಿಯಿತು. ಮುಗಿದಾದ ಮೇಲೆ ಎಲ್ಲರೂ ಕವಿಗಳ ಮತ್ತು ಕವಯಿತ್ರಿಯರ ಕೈ ಕುಲುಕಿದ್ದೇ ಕುಲುಕಿದ್ದು. ಅದರಲ್ಲೂ ಆ ಇಟ್ಯಾಲಿಯನ್ ಕವಯಿತ್ರಿಯ ಕೈನ್ನು “ಮಜಬೂತ್, ಮಜಬೂತ್” ಎಂದು ಹೇಳುತ್ತಾ ತುಸು ಹೆಚ್ಚೇ ಕುಲಕಿದರು. ಅವರು ಹಾಗೆ ಕೈ ಕುಲುಕಿ “ಮಜಬೂತ್” (ಚನ್ನಾಗಿತ್ತು) ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದು ಅವಳ ಸೌಂದರ್ಯಕ್ಕೋ? ಅಥವಾ ಕವನಕ್ಕೋ? ಗೊತ್ತಾಗಲಿಲ್ಲ. ಬಹುಶಃ, ಅದು ಅವಳ ಸೌಂದರ್ಯದ ಬಗ್ಗೆಯೇ ಇರಬೇಕು. ಯಾಕೆಂದರೆ ಈ ಲಿಬಿಯನ್ನರಿಗೆ ಅದೂ ಘಾತ್ ಪ್ರಾಂತ್ಯದಲ್ಲಿರುವ ಜನರಿಗೆ ಇಂಗ್ಲೀಷ್, ಅರೇಬಿ, ಫ್ರಾನ್ಸಾ, ಹೌಸಾ, ಟರ್ಗಿ ಬಿಟ್ಟರೆ ಇಟ್ಯಾಲಿಯನ್ ಭಾಷೆ ಬರುವದು ನಾ ಕಾಣೆ. ಆಕೆ ಹೊರಡೋಣವೇಂದು ಸಭಾಂಗಣವನ್ನು ಬಿಟ್ಟು ಹೊರಗೆ ಬರುತ್ತಿದ್ದಂತೆ ಅವಳೊಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದ ಕೆಲವು ಗಂಡಸರು ಹಲ್ಲು ಗಿಂಜುತ್ತಾ “ನಿಮ್ಮೊಂದಿಗೆ ಒಂದು ಫೋಟೋ ಪ್ಲೀಸ್!” ಎಂದು ಆಕೆಯನ್ನು ಮುತ್ತಿದರು. ಆಕೆ ತಕ್ಷಣ “ಅದೇನು, ನಿಮ್ಮ ಹೆಣ್ಣುಮಕ್ಕಳ ಫೋಟೋವನ್ನು ಮಾತ್ರ ಯಾರೂ ತೆಗೆದುಕೊಳ್ಳಬಾರದು? ನೀವು ಮಾತ್ರ ಬೇರೆ ಹೆಣ್ಣುಮಕ್ಕಳ ಫೋಟೋವನ್ನು ತೆಗೆದುಕೊಳ್ಳಬಹುದೇ? ಇದ್ಯಾವ ನ್ಯಾಯ?” ಎಂದು ಇಂಗ್ಲೀಷಿನಲ್ಲಿ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಡಬಡನೆ ಕಾರು ಹತ್ತಿ ಹೋಗಿಯೇಬಿಟ್ಟಳು. ಆಕೆ ಕೇಳಿದ ಧಾಟಿ ಹೇಗಿತ್ತೆಂದರೆ ನೀವು ಮಾತ್ರ ಬೇರೆ ಮನೆಯವರ ಹೆಣ್ಣುಮಕ್ಕಳನ್ನು ಹಾಳುಮಾಡಬಹುದು. ಆದರೆ ನಿಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಸುರಕ್ಷಿತವಾಗಿರಬೇಕಾ? ಇದ್ಯಾವ ಸೀಮೆಯ ನ್ಯಾಯ? ಎಂದು ಕೇಳಿದಂತಿತ್ತು.
ಅಂದಹಾಗೆ ಕವಿಗೋಷ್ಠಿಯ ವಿಷಯ “ಸ್ವಾತಂತ್ರ್ಯ”. ಲಿಬಿಯಾ ಈಗ ‘ಫ್ರೀ ಲಿಬಿಯಾ’ ಆದ ಹಿನ್ನೆಲೆಯಲ್ಲಿ ಈ ಕವಿಗೋಷ್ಠಿಯನ್ನು ಅಳವಾಡಿಸಲಾಗಿತ್ತೆಂದು ನಮಗೆ ಆಮೇಲೆ ಗೊತ್ತಾಯಿತು. ಅದೇನೆ ಇರಲಿ. ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಹಾಗೆ ಅಲ್ಲಿಯ ಕವಿಗಳು ತಂತಮ್ಮ ಭಾಷೆಯಲ್ಲಿ ಕವಿತೆಗಳನ್ನು ಓದಿದರು. ನಾನಂತೂ ಹೌಸಾ, ಟರ್ಗಿ, ಫ್ರಾನ್ಸಾ, ಅರೇಬಿ ಭಾಷೆಗಳು ಬರುವ ನನ್ನ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೇ ಕುಳಿಸಿಕೊಂಡಿದ್ದೆ ಅನುವಾದದ ಸಹಾಯಕ್ಕಾಗಿ. ಅವರು ಕವನ ಓದಿ ಮುಗಿಸಿದ ತಕ್ಷಣ ಅವ ನನಗೆ ಅದರ ಸಾರಾಂಶವನ್ನಷ್ಟೇ ಬಡಬಡನೆ ಇಂಗ್ಲೀಷಿಗೆ ಅನುವಾದಿಸಿ ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದ. ಒಬ್ಬ ಅರೇಬಿ ಕವಿ “ನಾವು ಸ್ವಾತಂತ್ರ್ಯ ಬಂದಿದೆ ಎಂದು ಹೆಳುತ್ತಿದ್ದೇವಲ್ಲವೆ? ಆದರೆ ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವೆಯೇ?” ಎಂದು ಕೇಳಿದ. ಇನ್ನೊಬ್ಬ ಕವಿ “ಸ್ವಾತಂತ್ರ್ಯ ಸಿಕ್ಕಿತೆಂದು ನಾವು ಸಂಭ್ರಮಪಡುವ ಖುಷಿಯಲ್ಲಿ ನಿಧಾನವಾಗಿ ನಮಗೆ ಗೊತ್ತಿಲ್ಲದಂತೆ ಬೇರೆ ಇನ್ಯಾರಿಗೋ ಗುಲಾಮರಾಗಿ ಕೆಲಸ ಮಾಡುವಂತಾಗಬಾರದು” ಎಂದು ಕರೆ ಕೊಟ್ಟ. ಮತ್ತೊಬ್ಬ ಕವಿ “ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸ್ವಾತಂತ್ರ್ಯ ಅನ್ನುವದು ಇದೆಯಾ? ಅದೇನಿದ್ದರೂ ಭ್ರಮೆ ಅಷ್ಟೆ. ಯಾಕೆಂದರೆ ಹುಟ್ಟುವಾಗಷ್ಟೆ ಅವನು ಸ್ವತಂತ್ರ. ಆಮೇಲೇನಿದ್ದರೂ ಅವನು ಒಂದಲ್ಲ ಒಂದು ಕಡೆ ಬಂಧಿಯಾಗಿರುತ್ತಾನೆ” ಎಂದು ಹೇಳಿದ. ಇದು ನನಗೆ ಪ್ರಖ್ಯಾತ ಫ್ರೆಂಚ್ ರಾಜಕೀಯ ತಜ್ಞ ರೂಸೋ ಹೇಳಿದ “A man is born to free. But everywhere else he is in chains” ಎನ್ನುವ ಮಾತನ್ನು ನೆನಪಿಸಿತು. ಟರ್ಗಿ ಕವಿಯೊಬ್ಬ “ಪ್ರಕೃತಿಯಲ್ಲಿನ ಹೂ, ಹಕ್ಕಿಗಳಿರುವಷ್ಟು ಸ್ವಾತಂತ್ರ್ಯ ನಮಗೇಕಿಲ್ಲ?” ಎಂದು ಪ್ರಶ್ನೆಸಿದ. ಫ್ರೆಂಚ್ ಭಾಷೆಯಲ್ಲಿ ಕವನ ಓದಿದ ಸ್ಥಳೀಯ ಕವಿಯೊಬ್ಬ “ನಮ್ಮೊಳಗೆ ನಾವೇ ಗುಲಾಮರಾಗಿರುವಾಗ ಹೊರಗಿನ ಸ್ವಾತಂತ್ರ್ಯ ತಗೊಂಡು ಏನ್ಮಾಡೋದು?” ಎಂದು ಪ್ರಶ್ನಿಸಿದ. ನಾನು ಮೊದಲು “ನಮ್ಮೊಳಗೆ ನಾವೇ ಗುಲಾಮರಾಗಿರುವದು” ಎಂದರೇನೆಂದು ಅರ್ಥವಾಗದೆ ತಲೆಕೆರೆದುಕೊಂಡೆ. ಆಮೇಲೆ ಓ, ಬಹುಶ: ಅದರ ಅರ್ಥ ಹೀಗಿರಬಹುದು, ಹಾಗಿರಬಹುದು ಎಂದು ನನ್ನಷ್ಟಕ್ಕೆ ನಾನೇ ಏನೇನೋ ಅರ್ಥೈಸಿಕೊಂಡು ಸಮಾಧಾನಪಟ್ಟೆ. ಇವರೆಲ್ಲರಿಗಿಂತ “ಹೌಸಾ” ಭಾಷೆಯಲ್ಲಿ ಓದಿದ ಕವಯಿತ್ರಿಯ ಕವನವೊಂದು ಮಾತ್ರ ಅಲ್ಲಿದ್ದ ಎಲ್ಲರ ಗಮನವನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಆಕೆ “ಇವತ್ತು ನಾವು ಹೆಣ್ಣುಮಕ್ಕಳು ಸ್ವಾಂತಂತ್ರ್ಯದ ಹೆಸರಿನಲ್ಲಿ ಕುಟಂಬವನ್ನು ಕಡೆಗಣಿಸುತ್ತಾ ವಿಚ್ಛೇಧನಕ್ಕೆ ಮೊರೆಹೋಗುತ್ತಿದ್ದೇವೆ. ಗಂಡನನ್ನು ಬಿಟ್ಟರೆ ಸ್ವಾತಂತ್ರ್ಯ ಎಂದುಕೊಂಡಿದ್ದೇವೆ. ಆದರೆ ಗಂಡ ಇರುವದರಿಂದಲೇ ನಮಗೆ ಸಮಾಜದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ, ಗೌರವವಿದೆ ಎನ್ನುವ ಸತ್ಯವನ್ನು ಅರಿಯುವಲ್ಲಿ ಸೋಲುತ್ತಿದ್ದೇವೆ.” ಎಂದು ಇವತ್ತು ಆಫ್ರಿಕಾದ ದೇಶಗಳಲ್ಲಿ ಸಹ ಹೆಚ್ಚುತ್ತಿರುವ ವಿಚ್ಛೇಧನಗಳ ಹಿನ್ನೆಲೆಯಲ್ಲಿ ಅಲ್ಲಿರುವ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳಿದ್ದಳು. ಈ ಮಾತಿಗೆ (ಕವನಕ್ಕೆ) ಅಲ್ಲಿದ್ದ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರೇ ಚಪ್ಪಾಳೆ ಹೊಡೆದಿದ್ದು ಮಾತ್ರ ವಿಶೇಷವಾಗಿ ಕಾಣಿಸಿತು.
ಇನ್ನುಳಿದವರು ಅದೇನು ಹೇಳಿದರೆಂದು ನನಗೆ ಮಾತ್ರ ಅಲ್ಲ ಅಲ್ಲಿದ್ದ ಬೇರೆಯವರಿಗೂ ಅರ್ಥವಾಗಲಿಲ್ಲ. ಏಕೆಂದರೆ ಅವರಿಗೆ ಆ ಭಾಷೆಗಳು ಅರ್ಥವಾದರೆ ತಾನೆ ಏನು ಹೇಳಿದರೆಂದು ಗೊತ್ತಾಗುವದು? ಈ ತೆರದ ವಿವಿಧ ಭಾಷಾ ಕವಿಗೋಷ್ಠಿಯನ್ನು ಯಾಕಾದರು ಹಮ್ಮಿಕೊಳ್ಳುತ್ತಾರೋ? ಹಮ್ಮಿಕೊಂಡರೂ ಅಲ್ಲಿ ಓದುವ ವಿವಿಧ ಭಾಷೆಯ ಕವನಗಳನ್ನು ಮೊದಲೇ ಇಂಗ್ಲೀಷಿಗೋ ಅಥವಾ ಸ್ಥಳೀಯ ಭಾಷೆಗೋ ಅನುವಾದಿಸಿ ಮೂಲ ಭಾಷೆಯ ಕವಿಗಳು ಓದಿದ ನಂತರ ಅದರ ಅನುವಾದವನ್ನು ಸ್ಥಳೀಯ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲಿ ಓದಿದರೆ ಆ ಕಾರ್ಯಕ್ರಮಕ್ಕೊಂದು ಅರ್ಥವಾದರೂ ಬರುತ್ತದೆ, ಅದರ ಮೂಲ ಉದ್ದೇಶವಾದರೂ ಈಡೇರುತ್ತದೆ. ಅದು ಬಿಟ್ಟು ಬರೀ ಅವರವರದೇ ಭಾಷೆಯಲ್ಲಿ ಓದಿಸಿದರೆ ಅವು ಬೇರೆಯವರಿಗೆ ಅರ್ಥವಾಗುವದಾದರೂ ಹೇಗೆ ಮತ್ತು ಅದರ ಉದ್ದೇಶ ಈಡೇರುವದಾದರೂ ಹೇಗೆ?
ಅಂದಹಾಗೆ ಈ ಕವಿಗೋಷ್ಠಿಯನ್ನು ಹೋಗಿ ಹೋಗಿ ಇಂಥ ಸಣ್ಣ ಹಳ್ಳಿಯಲ್ಲಿ ಯಾಕಿಟ್ಟರು? ಟ್ರಿಪೋಲಿಯಲ್ಲೋ, ಬೆಂಗಾಜಿಯಲ್ಲೋ, ಸೆಭಾದಲ್ಲೋ ಏರ್ಪಡಿಸಿದ್ದರೆ ಚನ್ನಾಗಿತ್ತು ಎಂದು ಕೆಲವರು ಲೊಚಗುಟ್ಟಿದರು. ಇನ್ನು ಕೆಲವರು ಇವತ್ತು ಸಾಹಿತ್ಯ ಪ್ರಜ್ಞೆ ಎನ್ನುವದು ಏನಾದರು ಉಳಿದಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ. ಹೀಗಾಗಿ ಇಲ್ಲಿ ನಡೆಸಿದ್ದೇ ಚೆನ್ನ ಆಯ್ತು ಎಂದರು.
-ಉದಯ್ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಕೃಷಿ ಕಾರ್ಯಾಗಾರ4 ದಿನಗಳ ಹಿಂದೆ
-
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …4 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ10 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee4 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ8 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ8 ವರ್ಷಗಳ ಹಿಂದೆ
-
ಅನುಸಂಧಾನ-೩8 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ10 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...11 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ11 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:13 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್14 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು15 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?16 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
- ಗಡಾಫಿ ಮಾಡಿದ ಒಂದಷ್ಟು ತಪ್ಪುಗಳು ಭಾಗ-1
- ಇದು ಉಮಾಶ್ರೀ!!
- ಪಾದ್ರಿ
- ನೆರಳು ಕೊಟ್ಟವರನ್ನು ನೆನೆಯುತ್ತಾ....................
- ಗಡಾಫಿ ಮಾಡಿದ ಒಂದಿಷ್ಟು ತಪ್ಪುಗಳು-ಕೊನೆಯ ಭಾಗ
- 10x8 ಕೋಣೆ
- ಶಿಕ್ಷಣದ ಸಂತೆಯಲ್ಲೊಬ್ಬ ಸಂತ
- ಪ್ರಜಾವಾಣಿಯಲ್ಲಿ ನನ್ನ ಬ್ಲಾಗ್ ಬಗ್ಗೆ “ಹನಿ ಹನಿ ‘ಬಿಸಿಲ ಹನಿ’”
- ನೀ ತೊರೆದ ಘಳಿಗೆಯಲಿ........
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ