“ಇಂದು ಮಹಿಳಾ ದಿನಾಚಾರಣೆ. ಹಾಗಂದರೇನು?” ಅಂತಾ ನಮ್ಮ ಪಕ್ಕದ ಮನೆಯ ಆರನೇ ಕ್ಲಾಸಿನ ಹುಡುಗನೊಬ್ಬ ನನ್ನ ಕೇಳುತ್ತಾನೆ. ನಾನು “ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಆಚರಿಸುವ ದಿನಾಚಾರಣೆ” ಎಂದು ಹೇಳುತ್ತೇನೆ. ಅವನು ಇದೇನೋ ಪ್ರಜಾಪ್ರಭುತ್ವದ ಡೆಫಿನೇಶನ್ ಇದ್ದಹಾಗೆ ಇದೆಯಲ್ಲಾ ಎಂದು ಪಿಳಿಪಿಳಿ ಕಣ್ಣುಬಿಡುತ್ತಾ ಜೋರಾಗಿ ನಗುತ್ತಾನೆ. ಅವನೊಟ್ಟಿಗೆ ನಾನೂ ನಗುತ್ತೇನೆ. ತಕ್ಷಣ ನನ್ನ ಹೆಂಡತಿ “ನಿಮಗೆ ಗಂಡಸರಿಗೆ ಎಲ್ಲವೂ ತಮಾಷೆಯಾಗಿಯೇ ಕಾಣಿಸುತ್ತದೆ” ಎಂದು ಸಿಡುಕುತ್ತಾಳೆ. ನಾನು “ತಮಾಷೆ ಅಲ್ವೇ. ಬೇಸರ” ಎನ್ನುತ್ತನೆ. “ಬೇಸರನಾ? ಯಾಕೆ?” ಎಂದು ಕೇಳುತ್ತಾಳೆ. ನಾನು ಮೆಲ್ಲಗೆ ತಕರಾರು ತೆಗೆಯುತ್ತೇನೆ; “ಅಲ್ಲಾ, ನಿಮಗೆ ಹೆಂಗಸರಿಗೆ “ಮಹಿಳಾ ದಿನಾಚಾರಣೆ”ಯಿರುವಂತೆ ನಮಗೆ ಗಂಡಸರಿಗೆ “ಪುರುಷ ದಿನಾಚಾರಣೆ” ಅಂತಾ ಯಾಕಿಲ್ಲ? ಏಕೀ ಲಿಂಗ ತಾರತಮ್ಯ?” ಎಂದು ಸದಾ ಲಿಂಗ ತಾರತಮ್ಯತೆಯ ಬಗ್ಗೆ ಮಾತನಾಡುವ ನನ್ನ ಹೆಂಡತಿಯನ್ನು ಕೇಳುತ್ತೇನೆ. ಅವಳೋ “ಎಲ್ಲಾ ದಿನಗಳು ನಿಮ್ಮ ದಿನಗಳಾಗಿರುವದರಿಂದ ಪ್ರತ್ಯೇಕವಾಗಿ ನಿಮಗೆ ಅಂತಾ ಇನ್ನೊಂದು ‘ಪುರುಷ ದಿನಾಚಾರಣೆ’ಯ ಅವಶ್ಯಕತೆಯಿಲ್ಲ” ಎಂದು ಮಹಿಳೆಯರ ಪರವಾಗಿಯೇ ಉತ್ತರ ಕೊಡುತ್ತಾಳೆ. “ಎಷ್ಟೇ ಆಗಲಿ ನೀವು ಮಹಿಳೆಯರು ಶತ ಶತಮಾನಗಳಿಂದ ನಾವು ಶೋಷಣೆಗೊಳಗಾದವರು ಎಂಬ ಸಿದ್ಧ ಮಾದರಿಯ ಕಲ್ಪನೆಯಲ್ಲೇ ಬಂದರಲ್ಲವೆ? ಎಲ್ಲಿ ಬಿಟ್ಟುಕೊಡುತ್ತಿರಿ ನಿಮ್ಮ ಜಾಯಮಾನವನ್ನು?” ಎಂದು ಕಟುಕುತ್ತೇನೆ. ಅದಕ್ಕವಳು “ಸರಿ ಸರಿ. ಈ ಪುರಾಣ ಎಲ್ಲಾ ಬಿಟ್ಟು ಇವತ್ತು ನೀವು ಅಡಿಗೆ ಮಾಡಿ. ನಾನು ರೆಸ್ಟ್ ತಗೊಳ್ಳತೇನೆ. ಇವತ್ತು ಮಹಿಳಾ ದಿನಾಚಾರಣೆಯಲ್ಲವೆ?” ಎನ್ನುತ್ತಾಳೆ. ನಾನು “ಆಯ್ತು.” ಎಂದು ಅಡಿಗೆ ಮನೆಗೆ ಹೋಗಿ ತರಕಾರಿಯನ್ನು ಸಿದ್ಧಮಾಡಿಕೊಂಡು ಹೆಚ್ಚಲು ಕುಳಿತರೆ ನನ್ನವಳು “ಅಯ್ಯೋ! ಹೀಗಾ ಹೆಚ್ಚೋದು? ಹಿಂಗಾದ್ರೆ ನೀವು ಅಡಿಗೆ ಮಾಡಿದಂಗೆ. ಕೊಡಿಲ್ಲಿ. ನಾನು ಮಾಡುತ್ತೆನೆ. ಎಷ್ಟೇ ಆಗಲಿ. ಹೆಂಗಸರು, ಹೆಂಗಸರೇ! ನಿಮಗೆ ಗಂಡಸರಿಗೆ ಮಾಡಿಹಾಕಿದ್ದನ್ನು ತಿನ್ನುವದೊಂದು ಗೊತ್ತು” ಎಂದು ಗೊಣಗುತ್ತಾ ಅವಳೇ ತರಕಾರಿ ಕತ್ತರಿಸುತ್ತಾಳೆ. ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.
ಅದೆಲ್ಲಾ ಇರಲಿ. ನಾನು ಮೊನ್ನೆ ಯುವ ಕವಯಿತ್ರಿಯೊಬ್ಬರ ಪುಸ್ತಕ ಬಿಡುಗಡೆಯ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿ ಆಕೆ ಪ್ರಾಸ್ತವಿಕ ನುಡಿಗಳನ್ನಾಡುತ್ತಾ “ನಾನು ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡೆ. ನಿಮಗೆ ಗೊತ್ತಲ್ಲ ಗಂಡನಿಲ್ಲದ ಹೆಂಡತಿಯನ್ನು ಈ ಸಮಾಜ ಹೇಗೆ ಕಾಣುತ್ತದೆ ಎಂದು? ಪುರುಷ ಪ್ರಧಾನ ಸಮಾಜದ ವಿವಿಧ ರೀತಿಯ ಶೋಷಣೆಗಳನ್ನು ಎದುರಿಸಿ ಬರಬೇಕಾದರೆ ಸಾಕುಸಾಕಾಯಿತು ನನಗೆ. ಈ ಶೋಷಣೆಯನ್ನು ನಿಲ್ಲಿಸಬೇಕಿದೆ. ಹೆಣ್ಣು, ಗಂಡಸಿನ ಸರಿಸಮಾನವಾಗಿ ಬದುಕಬೇಕಿದೆ” ಎಂದು ಅಲವತ್ತುಕೊಳ್ಳುತ್ತಿದ್ದರು. ಆದರೆ ಅ ಶೋಷಣೆಯನ್ನು ಹೋಗಲಾಡಿಸುವದಕ್ಕೆ ತಾವು ಏನು ಮಾಡಿದ್ದಾರೆ? ಯಾವ ರೀತಿಯ ಕೊಡುಗೆಯನ್ನು ನೀಡಿದ್ದಾರೆ? ಎಂಬುದರ ಬಗ್ಗೆ ಅವರು ಏನೂ ಹೇಳಲೇ ಇಲ್ಲ. ಇವತ್ತಿನ ಹೆಣ್ಣುಮಕ್ಕಳು ಎಲ್ಲ ರಂಗದಲ್ಲೂ ಮಿಂಚುತ್ತಿದ್ದಾರೆ. ಬಹಳಷ್ಟು ಕಾನೂನುಗಳು ಸಹ ಅವರ ಪರವಾಗಿವೆ. ಅವುಗಳ ದುರ್ಬಳೆಕೆಯೂ ಆಗುತ್ತಿದೆ. ಆದರೂ ಇದ್ಯಾವುದು ತಮಗೆ ಅರಿವೇ ಇಲ್ಲವೆನ್ನುವಂತೆ ಇಪ್ಪತ್ತೊಂದನೆ ಶತಮಾನದ ಈ `ಯುವ ಕವಯಿತ್ರ' ಮಾತ್ರ ಇನ್ನೂ ಶೋಷಣೆ, ಸಮಾನತೆ ಎಂದು ಬಡಬಡಿಸುತ್ತಲೇ ಇದ್ದುದು ಮಾತ್ರ ನನಗೆ ಆಶ್ಚರ್ಯ ತಂದಿತ್ತು.
ನಾನು ಹಿಂದೊಮ್ಮೆ ನನ್ನ ಸ್ನೇಹಿತನನ್ನು ನೋಡಲು ಆಂಧ್ರಪ್ರದೇಶದ ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನಾವು ಹೊರಗಡೆ ಬೆಂಚಿನ ಮೇಲೆ ವೈದ್ಯರಿಗಾಗಿ ಕಾಯುತ್ತಾ ಕುಳಿತಂತೆ ಒಬ್ಬ ಹೆಣ್ಣುಮಗಳು ತನ್ನ ಗಂಡನನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದದ್ದನ್ನು ನೋಡಿ ನನಗೆ ಅಳುವೇ ಬಂದುಬಿಟ್ಟಿತು. ಆಕೆ ಕ್ಯಾನ್ಸರ್ ಪೀಡಿತ ತನ್ನ ಗಂಡನನ್ನು ಆಸ್ಪತ್ರೆಯೊಳಗೆ ಹೊತ್ತು ತಂದಿದ್ದಳು. ಆಕೆ ಅನಕ್ಷರಸ್ಥೆ. ಹಳ್ಳಿಗಾಡಿನ ಹೆಣ್ಣುಮಗಳು. ಶೋಷಣೆ, ಲಿಂಗತಾರತಮ್ಯ, ಸ್ತ್ರೀವಾದ ಈ ಯಾವ ಪದಗಳನ್ನೂ ಕೇಳದಾಕೆ. ನಾವು ಅವಳನ್ನು ಮಾತನಾಡಿಸಿದಾಗ “ಯಪ್ಪಾ, ಗಂಡಗ ಕ್ಯಾನ್ಸರ್ ಅಂತರೀ. ಅವಂಗ ನಡೆಯಾಕ ಆಗಂಗಿಲ್ಲ. ಅದಕ ಹೊತ್ಗೊಂಡು ಬಂದೆ. ಏನು ಮಾಡೋದು? ಅವಂಗ ನಾನು, ನಾನು ಅವಂಗ ಆಗಬೇಕಲ್ರಿ?” ಎಂದು ಅ ನೋವಿನಲ್ಲೂ ನಗಲು ನೋಡಿದಾಗ ಬಹುಶಃ, ಬದುಕು ಎಂದರೇನು ಎಂದು ಸರಿಯಾಗಿ ಅರ್ಥ ಮಾಡಿಕೊಂಡಾಕಿ ಇರಬೇಕು ಎಂದುಕೊಂಡೆ. ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ಮಹಿಳಾ ದಿನಾಚಾರಣೆ, ಲಿಂಗತಾರತಮ್ಯ, ಶೋಷಣೆ ಇತ್ಯಾದಿ ಇತ್ಯಾದಿ.........
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ನಾಟಕ ನೋಡಲು ಬನ್ನಿ3 ದಿನಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …3 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ9 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee4 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ8 ವರ್ಷಗಳ ಹಿಂದೆ
-
ಅನುಸಂಧಾನ-೩8 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ11 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?16 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- Review on my book Libya Diary by Prof: Channagowda
- We construct
- Who Will Listen?
- It is just a visual poetry of Shakespeare's as well as his wife Anna Hathway's life.
- The Moon at the Window
- ಗೌರಜ್ಜಿಯನ್ನು ನೆನೆಯುತ್ತಾ
- ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲ, ಆನೆ ನಡೆದಿದ್ದೇ ದಾರಿಯಾಗಿದೆ...
- ತಸ್ಲೀಮಾರ ಮೂರು ಅನುವಾದಿತ ಕವನಗಳು
- Time Flies
- ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಕೊನೆಯ ಭಾಗ)
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
6 ಕಾಮೆಂಟ್(ಗಳು):
"ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ."
ಉಳಿದೆಲ್ಲವನ್ನೂ ಸರಿಯಾಗಿ ಹೇಳಿರುವಿರಿ ಈ ಮೇಲೆ ನಮೂದಿಸಿದ ಮಾತೊಂದನ್ನು ಹೊರತುಪಡಿಸಿ... ಮೇಲಿನ ನಿಮ್ಮ ಹೇಳಿಕೆ ಸಂಕುಚಿತ ಅನಿಸಿತು ನನಗೆ.
ಮಾನ್ಯರೇ
ವಿದ್ಯಾವಂತೆಯಾದವರಾರೂ ತಮ್ಮ ಗಂಡನ ಸೇವೆ ಮಾಡಲಾರರು ಎಂಬ ನಿಮ್ಮ ಮೌಡ್ಯಕ್ಕೆ ಏನೆನ್ನಬೇಕೊ ತಿಳಿಯುತ್ತಿಲ್ಲ. ಸಮಾನತೆ, ಶೋಷಣೆ, ಸ್ತ್ರೀವಾದ ಎನ್ನುವಂತಹ ವಾದ ಮಾಡುವವರಿಗೆ ಮನಸ್ಸು ಇರುವುದೇ ಇಲ್ಲ, ಅವರಿಗೆ ಗಂಡ-ಮಕ್ಕಳು-ಸಂಸಾರ ಎಂಬುದು ಬೇಕಾಗಿಯೇ ಇಲ್ಲ ಎಂದು ನಿಮ್ಮಂತಹ ಅನೇಕರು ಭಾವಿಸಿರುತ್ತಾರೆ, ಅದು ನಿಮ್ಮ ಮಿತಿ, ಅದರಾಚೆ ನೀವು ಯೋಚಿಸಲಾರಿರಿ ಎನ್ನುವುದರ ಪ್ರತೀಕವಷ್ಟೆ. ಒಬ್ಬ ಅವಿದ್ಯಾವಂತ, ಗ್ರಾಮೀಣ ಮಹಿಳೆಗೆ ಕೂಡ ಗಂಡ-ಮಕ್ಕಳು-ಸಂಸಾರ ಬೇಕು, ಹಾಗೆಯೇ ಒಬ್ಬ ವಿದ್ಯಾವಂತ, ಪ್ರಗತಿಪರ, ಕಾರ್ಯನಿರತ ಮಹಿಳೆಗೂ ಗಂಡ-ಮಕ್ಕಳು-ಸಂಸಾರ ಬೇಕು. ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ. ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ. ಮನೆ ರಣರಂಗವಾದೀತು...
ಮಾನ್ಯರೇ,
ನೀವ್ಯಾರೋ ನನಗೆ ಗೊತ್ತಿಲ್ಲ. ಆದರೆ ನೀವು ನನಗೊಬ್ಬಳು ಪತ್ನಿ ಮತ್ತು ಒಬ್ಬಳು ಮಗಳು ಇದ್ದಾಳೆ ಎಂದು ಕರಾರುವಕ್ಕಾಗಿ ಹೇಳುತ್ತಿರಬೇಕಾದರೆ ನೀವ್ಯಾರೋ ನನಗೆ ಗೊತ್ತಿರುವವರೇ ಇರಬೇಕು ಅಥವಾ ನನ್ನನ್ನು ಬಲ್ಲವರಾಗಿರಬೇಕು ಅನಿಸುತ್ತದೆ. ಇರಲಿ. ನಿಮ್ಮ ಪ್ರಶ್ನೆಗೆ ವಿವರಣೆಯನ್ನು ಕೊಡುವದಕ್ಕಿಂತ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಅದೇನೆಂದರೆ ಇಲ್ಲಿ ನಮೂದಿತವಾಗಿರುವ ‘ನಾನು’ ಖಂಡಿತ ನಾನಲ್ಲ. ಹೆಸರೇ ಹೇಳುವಂತೆ ಇದು ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳಲ್ಲಿನ ಒಂದು ಪುಟವಷ್ಟೆ. ಆದರೆ ಅದನ್ನು ಸೃಷ್ಟಿಸಿದವನು ನಾನೇ ಆಗಿದ್ದರಿಂದ ನಿಮಗೆ ವಿವರಣೆ ಕೊಡುವ ಅಗತ್ಯವಿದೆ. ನೀವು ನನ್ನ ಲೇಖನವನ್ನು ಸರಿಯಾಗಿ ಓದದೇ ಆವೇಶದಲ್ಲಿ ಪ್ರತಿಕ್ರಿಯಿಸಿದ್ದೀರ ಅನಿಸುತ್ತದೆ. ನಾನು ಇಲ್ಲಿ ಬರೀ ವಿದ್ಯಾವಂತ ಮಹಿಳೆಯ ಬಗ್ಗೆ ಹೇಳಿಲ್ಲ. ಇನ್ನೊಮ್ಮೆ ಸರಿಯಾಗಿ ಓದಿ; ಎಂದಿದೆ. ಅಂದರೆ ವಿದ್ಯಾವಂತೆಯಾಗುವದರ ಜೊತೆಗೆ ಸ್ತ್ರೀವಾದ, ಸಮಾನತೆ, ಶೋಷಣೆಗಳ ಬಗ್ಗೆ ಗೊತ್ತಿರುವವಳು ಗಂಡನ ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಳೇನೋ ಎಂದು ಹೇಳಿದೆ.
ಇಂಗ್ಲೀಷಿನಲ್ಲಿ Ignorance is a bliss ಅಂತಾ ಒಂದು ಗಾದೆ ಮಾತಿದೆ. ಅಂದರೆ ನಿನ್ನ ಅಜ್ಞಾನವೇ ನಿನ್ನ ಖುಷಿಗೆ ಕಾರಣ ಎಂದು. ಜೊತೆಗೆ ವಿದ್ಯೆಯೆನ್ನುವದು ನಮಗೆ ಜ್ಞಾನವನ್ನು ಕೊಡುವದರೊಟ್ಟಿಗೆ ಒಂದಷ್ಟು ಅಹಂಕಾರ, ಗರ್ವವನ್ನು ಸಹ ತಂದುಕೊಡುತ್ತದೆ. ಆ ಮೂಲಕ ಸಮಾಜದಲ್ಲಿ ಒಂದಷ್ಟು ಅಸಮಾನತೆಯನ್ನು ಸಹ ಹುಟ್ಟುಹಾಕುತ್ತದೆ. ಉದಾಹರಣೆಗೆ ಎಷ್ಟೋ ಜನ ವಿದ್ಯಾವಂತರು ಧಿಮಾಕಿನಿಂದ ಮೆರೆಯುತ್ತಾ ಅವಿದ್ಯಾವಂತರನ್ನು ಕಡೆಗಣಿಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು, ವಿದ್ಯಾವಂತಳಾದವಳು ಅದರಲ್ಲೂ ಸ್ತ್ರೀವಾದ, ಸಮಾನತೆ, ಶೋಷಣೆ ಇತ್ಯಾದಿ ಪರಿಕಲ್ಪನೆಗಳ ಬಗ್ಗೆ ಗೊತ್ತಿರುವವಳು ತನ್ನ ಹೃದಯಾಂತರಾಳದಿಂದ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದೇನೆ. ಅಂದರೆ ಅವಳಿಗೆ ನಾನೇಕೆ ಮಾಡಬೆಕು? ಎನ್ನುವ ಅಹಂ ಕಾಡಬಹುದು ಅಥವಾ ಆ ರೀತಿ ಸೇವೆ ಮಾಡುವದನ್ನೇ ಅವಳು ಶೋಷಣೆ ಎಂದು ಭಾವಿಸಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದೆನೆ. ಈ ತರದ ಪರಿಕಲ್ಪನೆಗಳ ಪ್ರಭಾವದಿಂದಲೇ ಅಲ್ವಾ ಇವತ್ತು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಒಡೆದಿದ್ದು?
ನಾನು ಹೇಳಿದ ಸಾಲುಗಳ ಹಿಂದೆ ಒಂದು ನೋವಿದೆ. ಆ ನೋವನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳದೆ ನನ್ನದು ಮೌಢ್ಯ ಹಾಗೆ ಹೀಗೆ ಅಂತೆಲ್ಲಾ ಹೇಳಿದ ನಿಮ್ಮ ಅಜ್ಞಾನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. “ಮನೆಯಲ್ಲಿ ಪ್ರೀತಿ, ವಿಶ್ವಾಸ, ನಂಬುಗೆಗಳು ಇದ್ದಲ್ಲಿ ಸಮಾನತೆ, ಶೋಷಣೆ, ಸ್ತ್ರೀವಾದ ಎಂಬ ಇಂತಹ ಆಲೋಚನೆಗಳು ಹುಟ್ಟುವುದಿಲ್ಲ” ಖಂಡಿತ ನಿಮ್ಮ ಈ ಮಾತುಗಳನ್ನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. “ಅಷ್ಟಕ್ಕೂ ಸಮಾನತೆ, ಸ್ತ್ರೀವಾದ ಎನ್ನುವುದನ್ನು ಮನೆಯೊಳಗೆ ಬಿಟ್ಟುಕೊಂಡು ಆ ಹಿನ್ನೆಲೆಯಲ್ಲಿಯೇ ನಿಮ್ಮ ಪತ್ನಿ ಅಥವಾ ಮಗಳನ್ನು ನೋಡಲು ಹೋಗಬೇಡಿ” ನಿಮಗೆ ನಾನು ಹಾಗಿದ್ದೇನೆ ಅಂತಾ ಯಾರು ಹೇಳಿದರೋ?
ಜಯಲಕ್ಷ್ಮೀ ಮೇಡಮ್,
ಮೇಲಿನ ಉತ್ತರದಲ್ಲಿ ನಾನು ಯಾವ ಅರ್ಥದಲ್ಲಿ ಹೀಗೆ ಹೇಳಿರಬಹುದು ಎಂದು ನಿಮಗೆ ಅರ್ಥವಾಗಬಹುದು.
ನಮಸ್ಕಾರ,
<< ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.>>
- ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಮೂಲತಃ ಪುರುಷರು ಸೋಮಾರಿಗಳು..ಕೆಲಸ (ಮನೆಯ) ಮಾಡಿದರೂ ಅದರಲ್ಲಿ ನಯ ನಾಜೂಕುತನ ಇರುವುದಿಲ್ಲ..ಅದಕ್ಕೆ ನಿಮ್ಮ ಪತ್ನಿ ಗೊಣಗುತ್ತ ತಾವೆ ತರಕಾರಿ ಹಚ್ಚಲು ಕುಳಿತರು . ಬೇಕಿದ್ದರೆ ಕೇಳಿ ನೋಡಿ! :-)
ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು.
ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ. ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು!
ಇನ್ನೊಂದು ವಿಷಯ- ಪುರುಷರ ದಿನವೂ ಇದೆ..ಆದರೆ ಸರಿಯಾಗಿ ನೆನಪಿಲ್ಲ..ಫೇಸ್ ಬುಕ್ಕಿನಲ್ಲಿ ಅ. ಸುರೇಶ್ ಹೆಗ್ಡೆಯರು ಅದರ ಬಗ್ಗೆ ಒಂದು ಸ್ಟೇಟಸ್ ಹಾಕಿದ್ದರು.
-ಶೀಲಾ
ಶೀಲಾ ಮೇಡಂ ನಮಸ್ಕಾರ,
ನಾನು ಇಲ್ಲಿ ಸೆಮೆಸ್ಟರ್ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವದರ ಬಿಜಿಯಲ್ಲಿದ್ದೆ. ಹೀಗಾಗಿ ನಿಮ್ಮ ಕಾಮೆಂಟಿಗೆ ಬೇಗನೆ ಉತ್ತರ ಕೊಡಲಾಗಲಿಲ್ಲ. ಕ್ಷಮಿಸಿ.
“ನೀವು ಹೇಳುವುದು ಖಂಡಿತ ಸರಿಯಾಗಿದೆ. ನಾವು ಹೆಣ್ಣು ಮಕ್ಕಳು ಭಾವುಕರು..ನಮ್ಮ ಪತಿ ಅಥವಾ ಮಕ್ಕಳಿಂದ ಕೆಲಸ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಈಗ ನಾವು ಸಹ ನಮ್ಮ ನಮ್ಮ ಪತಿಯ ಹೆಗಲಿಗೆ ಹೆಗಲು ಕೊಡುತ್ತಾ ಸಂಸಾರತೂಗಲು ಸಹಾಯ ಮಾಡುತ್ತಿದ್ದೇವೆ....ಆಗ ನಾವು ಹೇಳದೆ ಒಂದಿಷ್ಟು ಕೈಗೂಡಿಸಿದರೆ ಆರಾಮ ಸಿಗುತ್ತದೆ ಎಂದು ಮನವು ಹೇಳುತ್ತದೆ..ಅದು ಸಹ ನಾವು ಏನೂ ಹೇಳದೆ ಅವರು ಮಾಡಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ.” ಖಂಡಿತ ನಿಮ್ಮ ಮಾತನ್ನು ಒಪ್ಪುತ್ತೇನೆ ಮತ್ತು ಇಲ್ಲಿ ನಿಮಗೆ ಮನದಟ್ಟು ಮಾಡುವದೇನೆಂದರೆ ಇವತ್ತಿನನ ಬಹಳಷ್ಟು ಗಂದಸರು ಬದಲಾಗಿದ್ದಾರೆ ಹಾಗೂ ಅವರು ಮನೆ ಕೆಲಸದಲ್ಲಿ ಸಹಕರಿಸಲು ಬಯಸುತ್ತಾರೆ. ಆದರೆ ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕಷ್ಟೆ. ಆಯ್ತು ಗಂಡಸರು ನಯ, ನಾಜೂಕು ಇಲ್ಲದವರು. ಒಪ್ಪೋಣ. ಆ ನಯ ನಾಜೂಕತನವನ್ನು ಏಕೆ ನಿರೀಕ್ಷಿಸುತ್ತೀರಿ? ನಿಮ್ಮಂತೆ ಅವರು ಇರಬೇಕೆಂದು ಏಕೆ ಬಯಸುತ್ತೀರಿ? ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದ ಏಕೆ ಅಳೆಯುತ್ತೀರಿ? ನಿಮಗೆ ಕೆಲಸವಾದರೆ ಆಯ್ತಪ್ಪ! ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದೇ ಆಗಿರಲು ಹೇಗೆ ಸಾಧ್ಯ? ಮೊದಲು ಹೆಣ್ಣುಮಕ್ಕಳು, ಗಂಡಸರು ಮನೆಯ ಕೆಲಸದ ವಿಷಯದಲ್ಲಿ ತಮ್ಮಂತೆ ಅಲ್ಲ ಎನ್ನುವದನ್ನು ಅರಿಯಬೇಕಿದೆ. ಜೊತೆಗೆ ತಾವೇ ನಯ ನಾಜೂಕಿನವರು ನಮ್ಮನ್ನು ಬಿಟ್ಟರೆ ಇಲ್ಲ ಎನ್ನುವ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಿದೆ.
“ಶೋಷಣೆ ಅಂತಾ ಗೊಣಗುವುದು ನಮ್ಮ ಜಾಯಮಾನ...ಹೆಚ್ಚಿನ ಕಡೆ ಹೆಣ್ಣಿನಿಂದಲೇ ಅನ್ಯಾಯವಾಗುವುದು.” ಇದು ಸಾರ್ವಕಾಲಿಕ ಸತ್ಯ :-).
<<ಇನ್ನು ಖಂಡಿತವಾಗಿ ವಿದ್ಯಾವಂತರಿಗೆ ಒಂದಿಷ್ಟು ಹಮ್ಮು ಇರುವುದು ಸಹಜ..ಅನಕ್ಷಸ್ತರಿಗೆ ನ್ಯಾಯ ಅನ್ಯಾಯಗಳ ಪರಿವೆಯಿರದಿದುದರಿಂದ ಅವರು ಭಕ್ತಿಯಿಂದ ತಮ್ಮ (ಕೆಲವೊಮ್ಮೆ ಅಯೋಗ್ಯ) ಗಂಡನ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ.” ನಿಮ್ಮ ಮಾತು ನಿಜ. ವಿದ್ಯಾವಂತ ದಂಪತಿಗಳಲ್ಲಿ ಒಂದು ಅಹಂ, ಸ್ವಪ್ರತಿಷ್ಟೆ ಜಾಸ್ತಿ ಇರುತ್ತದೆ. ಈ ಕಾರಣದಿಂದಲೇ ಅವರು ಆಗಾಗ ಒಬ್ಬರಿಂದ ಇನ್ನೊಬ್ಬರು ವಿಮುಖರಾಗುತ್ತಾರೆ. ಏಕೆಂದರೆ ನಾವು ಮೊದಲು ಏನೇ ಮಾಡಿದರೂ ನಮ್ಮ ಸಂಗಾತಿಗೋಸ್ಕರ ಮಾಡುತ್ತಿದ್ದೇವೆ ಎನ್ನುವ ಭಾವ ಖುಶಿ ಕೊಡುತ್ತದೆ. ಅದು ತ್ಯಾಗ ಅನಿಸಿಕೊಳ್ಳುತ್ತದೆ. ಆದರೆ ಬರುಬರುತ್ತಾ ಅದು ಗುಲಾಮಗಿರಿ ಅನಿಸೋಕೆ ಶುರುವಾಗುತ್ತೆ. ಹೀಗಾಗಿ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಸೇವಾ ಮನೋಭಾವದ ಕೊರತೆಯಿರುತ್ತದೆ.
“ಅಪರೂಪವಾಗಿ ವಿದ್ಯಾವಂತರಲ್ಲೂ ಅಂತವರನ್ನು ಕಾಣಬಹುದು” ಇದು ತುಂಬಾ ವಿರಳ.
ಪುರುಷರ ದಿನವೂ ಇದೆ ಅಂತಾ ಹೇಳಿದ್ದೀರಿ. ಮಾಹಿತಿಗಾಗಿ ಹುಡುಕುತ್ತೇನೆ.
ಧನ್ಯವದಗಳು
ಉದಯ್ ಇಟಗಿ
ಕಾಮೆಂಟ್ ಪೋಸ್ಟ್ ಮಾಡಿ