In my love poems
ನನ್ನ ಪ್ರೇಮಪದ್ಯಗಳಲ್ಲಿ
ಯಾವ ಗಂಡಸನ್ನೂ ಹುಡುಕಬೇಡಿ
ನನಗೆ ನನ್ನನ್ನು ಪ್ರೀತಿಸಿಕೊಳ್ಳಲು ಗೊತ್ತಿದೆ
ನನ್ನ ಕಣ್ಣ ಹೊಳಪಿನಲ್ಲಿ
ಯಾವ ಗಂಡಸಿನ ಚಹರೆಯನ್ನೂ ಹುಡುಕಬೇಡಿ
ಕತ್ತಲು ಕುಡಿಯುವ ನಾನು ಬೆಳಕಿನ ಕಿಡಿ ಹೊತ್ತಿರುವೆ
ನನ್ನ ಬ್ರಾಂಡೆಡ್ ಬಟ್ಟೆಗಳಿಗೆ
ನನ್ನ ಬೆವರಿನ ರಸೀತಿ ಇದೆ
ಬಿಯರ್ ಗ್ಲಾಸಿನ ಕೆಳಗೆ ನಾನೇ ತೆತ್ತ ಬಿಲ್ ಇದೆ
ಊರೂರು ಸುತ್ತಿದ ಬೀದಿಗಳಲ್ಲಿ ಜೊತೆ ನಡೆದ ಹೆಜ್ಜೆಗಳಿವೆ;
ಆ ಹೆಜ್ಜೆಗಳಲ್ಲಿ ಗಂಡಸಿನ ಗುರುತು ಕೆದಕಬೇಡಿ,
ಕೆದಕಿದಷ್ಟೂ ನಿಮ್ಮಾಳದ ಸುಪ್ತ ವಾಂಛೆಗಳೇ
ಎದ್ದೆದ್ದು ಬರುವವು
ಅದುಮಿಟ್ಟ ಬಯಕೆ, ಕೈಗೆಟುಕದ ಜಿದ್ದು
ನಿಮ್ಮಷ್ಟೂ ಹೊಟ್ಟೆಕೆಳಗಿನ ನೋವು ಗುಡ್ಡೆಯಾಗುವವು.
ಒಂಟಿಹೆಣ್ಣೆಂಬ ಕಣ್ಣಲ್ಲ ನಿಮಗೆ,
ಗೊತ್ತಿದೆ;
ಮಾತಿನ ಹೆಣ್ಣೆಂಬ ಕಿನಿಸು.
ನನ್ನ ಮಾತುಗಳಲ್ಲಿ ಸಂಚು ಹುಡುಕಬೇಡಿ,
ಬೆತ್ತಲೆಗಣ್ಣ ಮುಂದೆ ಕನ್ನಡಿ ಇಟ್ಟುಕೊಳ್ಳಿ;
ಸಾಕು.
~ ಚೇತನಾ ತೀರ್ಥಹಳ್ಳಿ 2021
In my love poems
Don't look for any man
I know how to love myself
In the twinkle of my eye
Don't look for any man's face
I who drink darkness carry a spark of light
For my branded clothes
I have the receipt of my own sweat
Under every beer glass, there is a bill that I paid myself.
There are some footsteps that walked with me in the streets around the town;
Don't search for a man's mark in those footsteps,
The more you dig, the more your hidden desires will spring up
An unattainable desire and an unreachable revenge
Will always haunt you as piles of pain in the lower abdomen.
I know
Your botheration is not about
I am living a single life
But it’s about
I talk too much
Do not look for intrigue in my words,
Instead, keep a mirror in front of your naked eyes; that’s enough.
From Kannada: Chetana Teerthahalli
To English: Uday Itagi
Today's Top News Bulletins
"Having raped a woman
The lechers got her burnt"
He read this bulletin
putting a cigarette on his lips and told his wife-
"Get me the matchbox
from my shirt pocket!!”
"Lovers' naked parade
is the moral responsibility of police"
He read this bulletin touching his shoulder
and told his daughter-
“Get me my shawl
and put it on my shoulder
Then only I feel more courageous."
“We also have the right to live”
Tribals protested
Having read this line he rubbed his feet against the ground and told his son,
"Get me the D.D.T.
The ants have come in too!”
"We also have a right to education”
A Dalit Student made a speech
He stopped reading halfway, got excited, went running, and said to the housemaid-
"While cleaning up the library
Just wipe the floor
But don't touch the books at all! "
From Kannada: Wilson Kateel
To English: Uday Itagi
It is just a visual poetry of Shakespeare's as well as his wife Anna Hathway's life.
Here is my teacher friend N.Sahitya's review on my play Shakespearana Srimathi.
Being literature students we have read many of Shakespeare's works and have truly admired him and his work of art.
There is always a curiosity to know the other side of the great personalities of everyone in general.
Your write-up has showcased Mrs. Shakespeare's perspective towards her husband.
With minimum sources, your write-up tries to cover the major feelings of Mrs. Shakespeare which is truly commendable. I understand that it's not that easy to portray the character with such flawlessness. This shows how interested you are and how much pain you might have taken to shape it so beautifully.
The ease in the language and the innovative Idea to see the other side of Mr. The Great Shakespeare has added a creative touch to your write-up.
Each and every line of yours got wings through Madam Lakshmi's acting. 🙏🌷🙏
Her flawless acting and the grace she portrayed while enacting were very promising and entertaining. The set, sound, background, backdrop, direction, and lighting was perfect and in harmony with the acting. It was a spellbound performance which has surely left all of us to be in the world of Mrs. Shakespeare. Every line lingers in the minds of viewers of the pain and suffering which Mrs. Shakespeare had passed through. Take a bow to the lady who happens to be the protagonist of the play.
🔅🔅🔅
N. Sahitya
Lecturer, Dept of English,
Sir M.V. P.U.College,
Davangere.
I was drawing pictures
ಚಿತ್ರ ಬಿಡಿಸುತ್ತಿದ್ದೆ,
‘ಹಾದಿ ಬೀದಿ ಚಿತ್ರ ಬಿಡಿಸುತ್ತೀಯ,
ನಮ್ಮದು ಮಾತ್ರ ಬಿಡಿಸಿಲ್ಲ.’ ಕೆಲವರು ದೂರಿದರು.
ಅವರು ಕೊಟ್ಟ ಪಟ್ಟಿ, ಪರಿಕರವಿಟ್ಟುಕೊಂಡು ಹೊರಟೆ
ಅವರೆದುರು ಕುಳಿತು ಸಿದ್ದಪಡಿಸಿದೆ.
ಚಿತ್ರ ನೋಡಿದ ಅವರು ಬೆಚ್ಚಿದರು
ಬೊಬ್ಬೆ ಹೊಡೆದರು,
ಭೀಕರವಾಗಿದೆಯೆಂದು ಬೈದರು
ಬೇಕಂತಲೇ ವಿಕೃತವಾಗಿ ಚಿತ್ರಿಸಿದ್ದೀಯ
ಅಂತೆಲ್ಲಾ ನಿಂದಿಸಿದರು
ನಾನು ಅವರೆದುರು
ಕನ್ನಡಿಯನ್ನಷ್ಟೇ ಇಟ್ಟಿದ್ದೆ.
-ಚೇತನಾ ತೀರ್ಥಹಳ್ಳಿ
I was sketching images
‘You draw pictures of all the paths and lanes,
Only ours is missing.' Some complained.
I took the tools and list they provided
And settled down their midst.
They felt shocked when they saw their portraits,
And yelled claiming that it was terrible
‘You have intentionally portrayed it in an abnormal way’
They all fell foul on me.
Amidst them
I had just placed a mirror
That’s it!
Kannada Original: Chethana Teerthahalli
English Translation: Uday Itagi
Some questions
ಕೆಲವು ಪ್ರಶ್ನೆಗಳು
Some questions
ಈ ಪವಿತ್ರ ಭಾರತದಲ್ಲಿ
ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ
ಕ್ರೈಸ್ತರಿದ್ದಾರೆ ಸಿಖ್ಖರಿದ್ದಾರೆ
ಜೈನರಿದ್ದಾರೆ ಬೌದ್ಧರಿದ್ದಾರೆ
ಬ್ರಾಹ್ಮಣರಿದ್ದಾರೆ ಲಿಂಗಾಯತರಿದ್ದಾರೆ
ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ
ಆದ್ರೆ ನಾನು ಹುಡುಕುತ್ತಿರುವುದು ಮನುಷ್ಯರನ್ನು
ದಯಮಾಡಿ ಹೇಳಿ ಅವರೆಲ್ಲಿದ್ದಾರೆ?
ಈಗ ದೇಶದ ಉದ್ದಗಲಕ್ಕೂ
ಅಸಂಖ್ಯಾತ ಗುಡಿಗಳಿದ್ದಾವೆ
ಮಸೀದಿಗಳಿದ್ದಾವೆ ಮಂದಿರಗಳಿದ್ದಾವೆ
ಚರ್ಚುಗಳಿದ್ದಾವೆ ಮಠಗಳಿದ್ದಾವೆ
ಆದರೆ ನಾನು ಹುಡುಕುತ್ತಿರುವುದು
ಅವುಗಳೊಳಗೆ ಇರಬೇಕಾದ ದೇವರನ್ನು
ದಯಮಾಡಿ ಹೇಳಿ ಅವನೆಲ್ಲಿದ್ದಾನೆ?
ಈ ದೇಶದ ಹಿಂದೂಗಳಿಗೆ
ಭಗವದ್ಗೀತೆ ವೇದ ಶಾಸ್ತ್ರ ಪುರಾಣ ಆಗಮಗಳೇ
ಮುಸ್ಲಿಮರಿಗೆ ಕುರಾನ್ ಇದೆ
ಕ್ರೈಸ್ತರಿಗೆ ಬೈಬಲ್ ಲಿದೆ
ಸಿಖ್ಖರಿಗೆ ಗ್ರಂಥ್ ಸಾಹೇಬ್
ಲಿಂಗಾಯತರಿಗೆ ವಚನಗಳಿವೆ
ಆದ್ರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ
ದಯಮಾಡಿ ಹೇಳಿ ಅದೆಲ್ಲಿದೆ?
-ಡಾ.ಜಿ.ಎಸ್. ಶಿವರುದ್ರಪ್ಪ
In this holy India
There are Hindus and Muslims
There are Christians and Sikhs
There are Jains and Buddhists
There are Brahmins and Lingayaths
There are Vokkaligas and untouchables
But what I'm looking for is humans
Please tell me where are they all?
Now across the country
There are innumerable borders
There are mosques and temples
There are Churches and Matths
But I'm looking for the God
Who is supposed to be inside all of them
Please tell me where is he?
In this country
For the Hindus
There is Bhagavad Gita
And there are Vedas, Shastras,
Puranas and Agamas
Muslims have the Koran
Christians have the Bible
Sikhs have the Grantha Saheb
Lingayats have Vachanas
But what I'm looking for is love
Please tell me where that is.
From Kannada: Dr. G.S. Shivarudrappa
To English: Uday Itagi
In prison cells...
ಜೈಲಿನ ಕೋಣೆಗಳಲ್ಲಿ...
**
ಕೋಣೆ ಒ೦ದು :
ಈ ಕೋಣೆಯೊಳಗೆ ಒಂದು ಪುಸ್ತಕವಿತ್ತು.
ಕೇಳಿದೆ ನಾನು -
"ಏನಿದು ಕೋಣೆಯೊಳಗೆ ಪುಸ್ತಕ?
ಯಾರೋ ಕೈದಿ ಓದಿ ಮರೆತು ಹೋಗಿರಬೇಕು..”
ಜೈಲಧಿಕಾರಿ ಉತ್ತರಿಸಿದ -
"ಇಲ್ಲ.. ಈ ಪುಸ್ತಕ ಬರೆದ ಮಹಾನ್ ಸಾಹಿತಿಗೆ
ಆಯ್ಕೆ ಕೊಡಲಾಗಿತ್ತು -
’ಒಂದೋ ನೀನು ಜೈಲಲ್ಲಿರಬೇಕು
ಅಥವಾ ನೀನು ಬರೆದ ಈ ಪುಸ್ತಕ’
ಸಾಹಿತಿ ಪುಸ್ತಕವನ್ನು ನಮಗೆ ಒಪ್ಪಿಸಿದ
ನಿಮಗೂ ಗೊತ್ತಲ್ವಾ -
ಸಾಹಿತಿಗಳು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ”
**
ಕೋಣೆ ಎರಡು :
ಈ ಕೋಣೆಯೊಳಗೊಂದು ಪಂಜರ
ಅದರೊಳಗೊಂದು ಕಾಗೆ!
ಕೇಳಿದೆ ನಾನು -
“ಅರೆ ಈ ಕಾಗೆಯನ್ಯಾಕೆ ಬಂಧಿಸಿದ್ದೀರಿ?
ಯಾರನ್ನಾದರೂ ಕುಕ್ಕಿ ಕುಕ್ಕಿ ಕೊಲೆ ಮಾಡಿತೆ?”
ಜೈಲಧಿಕಾರಿ ಉತ್ತರಿಸಿದ -
“ಇಲ್ಲ, ನಮ್ಮ ನಾಯಕ ಸುಖದ ನಶೆಯಲ್ಲಿ ತೇಲುತ್ತಿದ್ದಾಗ
ತನ್ನ ಒಡೆದು ಹೋದ ಮೊಟ್ಟೆಗಾಗಿ
ಈ ಕಾಗೆ ಕರ್ಕಶವಾಗಿ ಕೂಗುತ್ತಿತ್ತು
ಅದಕ್ಕಾಗಿ ಬಂಧಿಸಿದ್ದೇವೆ...”
ನಿಮಗೀಗ ಅರ್ಥ ಆಗಿರಬಹುದು
ಈ ದುರಂತದ ಕಾಲದಲ್ಲೂ
ಊರಿನ ಕೋಗಿಲೆಗಳೆಲ್ಲಾ
ಏಕೆ ಇಷ್ಟೊಂದು ಮಧುರವಾಗಿ ಹಾಡುತ್ತಿವೆ ಎಂದು!
**
ಕೋಣೆ ಮೂರು :
ಈ ಕೋಣೆ ಇನ್ನೂ ವಿಚಿತ್ರ!
ಒಂದು ವೇಷಭೂಷಣವನ್ನು
ಹ್ಯಾಂಗರಿಗೆ ಜೋತು ಹಾಕಲಾಗಿತ್ತು
ಕೇಳಿದೆ ನಾನು -
“ಏನಿದರ ವಿಷಯ?”
ಜೈಲಧಿಕಾರಿ ಉತ್ತರಿಸಿದ -
"ನಮ್ಮ ನಾಯಕನ ಭಾಷಣದಲ್ಲಿ ದ್ವೇಷವಿದೆ
ಎಂದು ಯಾರೋ ದಾವೆ ಹೂಡಿದ್ದರು.
ನಮ್ಮ ಪರ ವಕೀಲ
’ಆ ಭಾಷಣವೆಲ್ಲಾ ಈ ವೇಷದ ಪ್ರಭಾವ.
ಆದ್ದರಿಂದ ಈ ವೇಷಕ್ಕಷ್ಟೆ ಶಿಕ್ಷೆಯಾಗಬೇಕು’
ಎಂದು ವಾದಿಸಿ ಗೆದ್ದಿದ್ದರಿಂದ
ಈ ವೇಷ ಈಗ ಶಿಕ್ಷೆಯನ್ನು ಅನುಭವಿಸುತ್ತಿದೆ!
**
ಕೋಣೆ ನಾಲ್ಕು :
ಈ ಕೋಣೆಯ ಗೋಡೆಯ ಮೇಲೆ
ಕೆಲವೊಂದು ಅಂಕೆ ಸಂಖ್ಯೆಗಳನ್ನು ಗೀಚಲಾಗಿತ್ತು.
ಕುತೂಹಲದಿಂದ ಕೇಳಿದೆ –
“ಏನಿದರ ಮರ್ಮ?”
ಜೈಲಧಿಕಾರಿ ಉತ್ತರಿಸಿದ -
“ಇವು ಬರೀ ಸಂಖ್ಯೆಗಳಲ್ಲ ಸಂವಿಧಾನದ ಕಲಮ್ಮುಗಳು
ನಿಮಗೆ ಗೊತ್ತಲ್ಲ..
ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧವೆಂದು.
ಅದಕ್ಕಾಗಿಯೇ ಜನರ ಕೈಗೆ ಸಿಗದಂತೆ
ಕೆಲವು ಕಾನೂನುಗಳನ್ನು ಬಂಧಿಸಿಟ್ಟಿದ್ದೇವೆ!"
**
ಕೊನೆಯ ಕೋಣೆ :
ಅರೆ ಈ ಕೋಣೆ ಖಾಲಿ!
ದಿಗ್ಭ್ರಮೆಯಿಂದ ಕೇಳಿದೆ ನಾನು -
"ಈ ಕೋಣೆಯಲ್ಲಿರಬೇಕಿದ್ದ
ಅತಿ ಕ್ರೂರಿ ಕೊಲೆಗಡುಕ ಅಪರಾಧಿ ಎಲ್ಲಿ?”
ಜೈಲಧಿಕಾರಿ ನಗುತ್ತಾ ಉತ್ತರಿಸಿದ -
“ನಿನಗೆ ಗೊತ್ತಿಲ್ವಾ?
ಅವನು ಈಗಗಲೇ ಬಿಡುಗಡೆಗೊಂಡು
ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿದ್ದಾನೆ..
ನೀನು ಆತನನ್ನು ಜೈಲೊಳಗೆ ಹುಡುಕಿ ಬಂದ ಈ ಹೊತ್ತು
ಆತ ಮತಕ್ಕಾಗಿ ನಿನ್ನ ಮನೆಯ ಬಾಗಿಲು ತಟ್ಟುತ್ತಿರಬಹುದು..
***
ವಿಲ್ಸನ್ ಕಟೀಲ್
In prison cells...
***
Cell one:
A book was lying inside the room
I asked -
"Why is this book lying over here?
Some prisoner must have read and forgotten to take it with him.”
The jailer replied –
"No. To the great writer who wrote this book
A choice was given –
You should either be in jail
Or this book you wrote”
The writer handed over this book to us
You know very well
‘Litterateur always likes freedom.’
***
Cell two:
Inside this room there is a cage
And a crow in it!
I asked -
“Why did you put this crow over here?
Has it murdered someone?”
The jailer replied –
“No, when our leader was floating in the intoxication of happiness
This crow was crowing hoarsely
For its cracked egg
So it was arrested...”
You may have understood now
Why are the cuckoos in the town
Singing so sweetly even in this bad time!
***
Cell three:
This cell is still strange!
A dress was hung on a hanger
I asked -
"What’s the news about this dress?"
The jailer replied –
"There was hatred in our leader's speech
And someone had filed a case against him.
Our lawyer advocated
‘All that speech is because of the influence of this dress. So it should be punished”
Just because he argued and won the case
This costume is now being punished.
***
Cell four:
On the wall of this cell
Some numbers were scratched.
I curiously asked –
"What is the secret of this?"
The jailer replied –
“These are not just numbers but articles of the constitution.
You know that
Taking the law into one's hands is a crime.
So only we have jailed some laws over here
To ensure that they are not reachable for the common people!"
***
Last cell:
Oh, this room is empty!
Bewildered I asked -
“Where is the most brutal murderous criminal who was supposed to be in this cell?”
The jailer smiled and replied -
“You know?
He is now released
He is currently in the election campaign.
The time when you come to find him in the prison
He might be knocking on your door for votes.”
***
From Kannada: Wilson Kateel
To English: Uday Itagi
Chethana Teerthahalli's Poem in my english Translation
ಅಷ್ಟೇನೂ ರಮ್ಯ ಕಲ್ಪನೆಗಳು ಬೇಡ
ನಲವತ್ತರ ಹೆಂಗಸರ ಬಗ್ಗೆ
ಬಹುಪಾಲು ಬದುಕು
ಬಿಸಿಲ ಹಣ್ಣು
ಕೆಲವರಿಗೆ.
ಕೂದಲಿಗೆ ಕಪ್ಪು
ತೀಡುವುದೇ ಕೆಲಸವಲ್ಲ ಎಲ್ಲರಿಗೂ
ಕಣ್ಣ ಕಾಡಿಗೆ ಬಸಿದಿಳಿದು
ಕೆನ್ನೆ ರಾಡಿ ಸಂಭಾಳಿಸುವ ಸಮಾಧಾನ
ಇರೋದಿಲ್ಲ ಎಲ್ಲರಿಗೂ.
ಎಐ ಮಾರುಕಟ್ಟೆ ತೆರೆ ತೆರೆದು ತೋರುವಂತೆ
ಎಲ್ಲೆಲ್ಲಿಯದೋ ಕರಿ ಮುಚ್ಚಲು,
ತೊಡೆ ಮೇಲಿನ, ಹೊಟ್ಟೆ ಮೇಲಿನ
ಹೆಬ್ಬಾವು ಹರಿದಂಥ ಗುರುತು ಮುಚ್ಚಲು,
ನೆರಿಗೆ ಸಪಾಟು ಮಾಡಲು,
ಜೋತು ಬೀಳುತ್ತಿರುವ ಮೊಲೆ
ಎತ್ತಿ ಕಟ್ಟಲು
ಹಪಹಪಿಸೋದಿಲ್ಲ ಎಲ್ಲರೂ.
ನಲವತ್ತರಲ್ಲಿ;
ಉಸಿರು ಬಿಗಿಯುವ ಬ್ರಾ ಕಳಚಿ ಬಿಸಾಡಿ
ಮಂಚದ ಮೇಲೆ ಅಂಗಾತ ಮಲಗಿ
ಫ್ಯಾನಿಗೆ ಮುಖವೊಡ್ಡುವ ಸುಖದ ಮುಂದೆ
ಇನಿಯರ ಅಪ್ಪುಗೆ ತೃಣ ಮಾತ್ರ
ಬಹಳಷ್ಟು ಜನಕ್ಕೆ.
ಬಾಯಿ ಬಿಟ್ಟು
ಹೇಳಿಕೊಳ್ಳೋದಿಲ್ಲ,
ಅಷ್ಟೇ.
ಚೇತನಾ ತರ್ಥಹಳ್ಳಿ
One needn’t have too many romantic notions
about the women who are in their forties
as most of their life
for some
is already like a ripened fruit
Dying the hair
is not the job of everyone
no one will have the patience
to console
the sludge of eyes
that trickles down the cheeks
The AI market seems to open up
to cover the blackness everywhere,
and also to cover the marks of the python’s movements on the thighs and stomach
not that everyone craves
to straighten the plates,
and tries to hold a falling breast up
in bras
In the forties;
for many
before
the pleasure of
lying down on the couch
by keeping the face to the fan
and throwing the constricting bra away
the hug of a lover is worthless.
They just don’t express it
that's it.
From Kannada: Chetana Tirthahalli
To English: Uday Itagi
ಗಿರೀಶ ಹಂದಲಗೆರೆಯವರ ಹಾಡು ನನ್ನ ಸಬ್ ಟೈಟಲ್ಸನೊಂದಿಗೆ.....
ಪ್ರಿಯ ಸ್ನೇಹಿತರೇ,
ನಿಮ್ಮೊಂದಿಗೆ ನಾನು ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿನ ಹಾಡಿಗಾಗಿ (ತತ್ವಪದಕ್ಕೆ) ನಾನು ಇಂಗ್ಲೀಷ್ ಸಬ್ಟೈಟಲ್ಸ್ ನ್ನು ಬರೆದುಕೊಟ್ಟು ಅದಾಗಲೇ ಏಳೆಂಟು ತಿಂಗಳಾಗಿತ್ತು ಮತ್ತು ನಾನದನ್ನು ಮರೆತೂ ಬಿಟ್ಟಿದ್ದೆ. ಆದರೆ ಇವತ್ತು ಆ ಹಾಡನ್ನು ಬರೆದಿರುವ ಕವಿಮಿತ್ರ ಗಿರೀಶ್ ಹಂದಲಗೆರೆಯವರು ಫ಼ೇಸ್ಬುಕ್ನಲ್ಲಿ ಅಪ್ಡೇಟ್ ಮಾಡಿದಾಗ ಖುಷಿಯೋ ಖುಷಿ! ಇದನ್ನು ಇವತ್ತು ಕನ್ನಡದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬಿಡುಗಡೆ ಮಾಡಿದ್ದಾರೆ.
ಏಳೆಂಟು ತಿಂಗಳ ಹಿಂದೆ ಗಿರೀಶ್ ಅವರು ಫೋನ್ ಮಾಡಿ ನನ್ನ ಹಾಡಿಗೆ ಇಂಗ್ಲೀಷ್ ಸಬ್ಟೈಟಲ್ಸ್ ಬರೆದುಕೊಡೋಕಾಗುತ್ತಾ? ಎಂದು ಕೇಳಿಕೊಂಡಾಗ ನಾನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಏಕೆಂದರೆ ಇಂಥ ಸೃಜನಶೀಲ ಕೆಲಸಗಳೇ ನನ್ನನ್ನು ಜೀವಂತವಾಗಿಡೋದು ಮತ್ತು ನನ್ನ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ನನ್ನಲ್ಲಿ ಹೊಸ ಉತ್ಸಾಹವನ್ನು ತುಂಬುವದು. ಕಾವ್ಯ, ನಾಟಕ, ವಿಮರ್ಶೆ, ಸಿನಿಮಾ, ಬರವಣಿಗೆ, ಅನುವಾದ, ಆಕಾಶವಾಣಿ, ಟೀವಿ, ಸಮ್ಮೇಳನಗಳೊಂದಿಗೆ ನನ್ನದು ನಿರಂತರ ಅನುಸಂಧಾನ ನಡೆಯುತ್ತಲೇ ಇರುತ್ತದೆ. ಬಹುಶಃ, ಇವಿಲ್ಲದೆ ಹೋದರೆ ನನ್ನೊಳಗೇ ಒಂದು ಚಡಪಡಿಕೆ ಶುರುವಾಗುತ್ತದೆ. ಹಾಗೆಂದೇ ಆಗಾಗ್ಗೆ ನಾನು ಇಂಥ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿರುತ್ತೇನೆ.
ಇಗೋ ನಿಮ್ಮ ಮುಂದೆ ಕನ್ನಡದ ಭರವಸೆಯ ಕವಿ ಗಿರೀಶ್ ಹಂದಲಗೆರೆಯವರ ಈ ಹಾಡು! ಈತ ಈಗಾಗಲೇ ಅನೇಕ ತತ್ವಪದಗಳನ್ನು ಬರೆದಿದ್ದಾನೆ. ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ತತ್ವಜ್ಞಾನ ಈತನಿಗೆ ಅದ್ಹೇಗೆ ಹೊಳೆಯಿತು? ಎಂದು ನನಗೆ ಒಮ್ಮೊಮ್ಮೆ ಅಚ್ಚರಿಯಾಗುತ್ತದೆ. ಇರಲಿ, ಈಗ ಈ ಸುಂದರ ಹಾಡನ್ನು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಮೊಬೈಲ್ ಸ್ಕ್ರೀನ್ಗಿಂತ ನೀವು ಕಂಪ್ಯೂಟರ್ ಸ್ಕ್ರೀನ್ ಮೇಲೆ ನೋಡಿದರೆ ಸಬ್ಟೈಟಲ್ಸ್ ಸ್ಪಷ್ಟವಾಗಿ ಕಾಣುವವು ಎಂದು ನನ್ನ ನಂಬಿಕೆ.
ಸ್ನೇಹದಿಂದ
ಉದಯ ಇಟಗಿ
https://m.youtube.com/watch?v=uriBGkvp1oM&feature=youtu.be
ನನ್ನ ಚಹಾತೋಟ ಮತ್ತು ನೀಲಿಹಕಕ್ಕಿಯ ಮೇಲೊಂದು ಸಣ್ಣ ವಿಮರ್ಶೆ
ಭಾರತದ ವರ್ಚಸ್ವಿ ಭಾಷೆಗಳಿಂದ ಕನ್ನಡಕ್ಕೆ ತಕ್ಕಮಟ್ಟಿಗೆ ಅನುವಾದಗಳು ಆಗುತ್ತಿರುತ್ತವೆ. ಆದರೆ, ನಮ್ಮ ಲಕ್ಷ್ಯದ ಅಂಚಿನಲ್ಲಿ ಉಳಿದುಬಿಡುವ ಅನೇಕ ಭಾರತೀಯ ಭಾಷೆಗಳ ಶ್ರೀಮಂತ ಸಾಹಿತ್ಯ ಓದಿಗೆ ದಕ್ಕದೇ ಉಳಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮಾಡಬೇಕಾದ ಕೆಲಸ ತುಂಬಾ ಇದೆ. ಹಾಗಾಗಿ, ಉದಯ ಇಟಗಿ ಅವರು ಅಸ್ಸಾಮಿಯಾ ಭಾಷೆಯಿಂದ ಕನ್ನಡಕ್ಕೆ ತಂದಿರುವ ಕಮಲ್ ಕುಮಾರ್ ತಂತಿ ಅವರ ಕವನ ಸಂಕಲನ ಗಮನಾರ್ಹವಾಗಿದೆ.
ಸುಮಾರು 62 ಕವನಗಳನ್ನು ಹೊಂದಿರುವ "ನನ್ನ ಚಹಾ ತೋಟ ಮತ್ತು ನೀಲಿ ಹಕ್ಕಿ" ಇಂಗ್ಲೀಷಿನ ಮುಖಾಂತರ ಕನ್ನಡಕ್ಕೆ ಬಂದಿದೆ. ಹಲವಾರು ಅಸಾಮಿಯಾ ಕವಿಗಳು ಲಯಬದ್ಧವಾಗಿ ಭಾಷೆಯನ್ನು ಬಳಸುವುದಿದೆ. ಇಂಗ್ಲೀಷ್ ಅನುವಾದಕರು ಆ ರಿದಂ ಅನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ. ಇಟಗಿ ಅವರ ಅನುವಾದದ ಸೊಗಸು ಎಂದರೆ ಅವರು ತುಂಬಾ ಸ್ಪಷ್ಟತೆ ಇರುವಂತೆ ನೋಡಿಕೊಳ್ಳುತ್ತಾರೆ. ಅನುವಾದಗಳು ಕೆಲವೊಮ್ಮೆ ಅಸಂಗತವಾಗುವ ಸಮಸ್ಯೆ ಇರುತ್ತದೆ. ಇಟಗಿ ಎಲ್ಲ ಕಡೆ ನೇರ ಸಂವಹನಕ್ಕೆ ಒತ್ತು ಕೊಟ್ಟಿರುವುದು ಕಾಣುತ್ತದೆ.
ಕುವೆಂಪು ಭಾಷಾ ಭಾರತಿ ಪ್ರಕಟಿಸಿರುವ ಈ ಸಂಕಲನ ಕನ್ನಡ ಕಾವ್ಯಾಸಕ್ತರಿಗೆ ಖಂಡಿತ ಖುಷಿ ಕೊಡಬಲ್ಲ ಪುಸ್ತಕ. ಒಂದು ಪುಟ್ಟ ಕವನ ನೋಡಿ:
"ನಾನು ನಿಮ್ಮ ಒಡನಾಡಿ"
ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ
ಮಂತ್ರ ನಿಮಗೆ ಗೊತ್ತಿದೆ
ನಾನು ನಿಮ್ಮ ಒಡನಾಡಿ
ಕಾಡಿನ ಇನ್ನೊಂದು ಹೆಸರೇನು?
ನಿಮ್ಮ ಹಿತ್ತಲಿನಲ್ಲಿ ನೆರಳಿನ ಸಾಲು
ಆತ್ಮೀಯ ಭಿಕ್ಷು, ನಿಮ್ಮ ಮೌನದ ಮನೆ ಎಲ್ಲಿದೆ,
ನಿಮ್ಮ ನದಿ ಎಲ್ಲಿದೆ, ನಿಮ್ಮ ಹಿನ್ನೆಲೆ ಸಂಗೀತ ಎಲ್ಲಿದೆ?
ಒಳಗೆ ಕತ್ತಲ ರಾತ್ರಿ
ಹಿಮ-ಚುಂಬಿಸಿದ ಬೆಟ್ಟಗಳು
ನಾನು ನಿಮ್ಮನ್ನು ಎಲ್ಲಿಯೂ ನೋಡಲಿಲ್ಲ
ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ
ಮಂತ್ರ ನಿಮಗೆ ಗೊತ್ತಿದೆ
ನಿಮ್ಮ ಇನ್ನೊಂದು ಹೆಸರೇನು?
ನಾನು ನಿಮ್ಮ ಒಡನಾಡಿ
**
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಪಕ್ಕ ಸಾಹಸಪ್ರಧಾನ ಸಿನಿಮಾ3 ವಾರಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …2 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ8 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee3 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್6 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩7 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ9 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಏಕೋ ಏನೋ ಅಲ್ಲಿ ಒಂದಷ್ಟು ಒಳದನಿಗಳು ಮಾರ್ದನಿಸಲೇ ಇಲ್ಲ!
- ಪ್ರವೇಶನ.......
- ನಿನ್ನ ಪ್ರೀತಿಸುವದೇ ಒಂದು ಹಿಂಸೆ!
- ಉರಿದು ಬಿದ್ದ ಉಲ್ಕೆ-ಕಮಲಾ ದಾಸ್
- ಮರ ಕತ್ತರಿಸುವದು
- ನಾವು ಹುಡುಗರೇ ಹೀಗೆ........
- ಅವ್ವಂದಿರ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ಒಂದಿಷ್ಟು ಪದ್ಯಗಳು
- ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!
- ನಾನೂ ಹಾಫ್ ಸೆಂಚ್ಯುರಿ ಬಾರಿಸಿಬಿಟ್ಟೆ!
- ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.