ಆತ್ಮೀಯರೆ,
ನೀವು ನಂಬಲಿಕ್ಕಿಲ್ಲ. ಅತ್ತ ಕಳೆದ ಭಾನುವಾರ ತಸ್ಲೀಮಾ ಅವರ (ಪ್ರಚೋದನಾಕಾರಿ) ಲೇಖನವೊಂದು ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಕರ್ನಾಟಕವು ಕೋಮು ಗಲಭೆಯಿಂದ ಹೊತ್ತಿ ಉರಿಯುತ್ತಿದ್ದರೆ, ಇತ್ತ ನಾನು ಇದ್ಯಾವುದರ ಪರಿವೇ ಇಲ್ಲದೆ ತಣ್ಣಗೆ ಕುಳಿತು ಕಾಕತಾಳೀಯವೆಂಬಂತೆ ಅವರ ಕವನಗಳನ್ನು ಬೆನ್ನಟ್ಟಿಹೋಗಿದ್ದೆ. ಅದರಲ್ಲಿ ಒಂದನ್ನು ಆಯ್ದು ಅನುವಾದಿಸಿ ನನ್ನ ಬ್ಲಾಗಿನಲ್ಲೂ ಹಾಕಿದ್ದೆ. ನನ್ನ ದಿನನಿತ್ಯದ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಂಜೆ ಕನ್ನಡ ಟೀವಿ ಹಾಕಿದಾಗಲೆ ನನಗೆ ಈ ವಿಷಯ ಗೊತ್ತಾಗಿದ್ದು! ಆದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತಾ ನನ್ನ ಅನುವಾದದ ಹಿಂದೆ ಯಾರನ್ನೂ ನೋಯಿಸುವ ಉದ್ದೇಶವಾಗಲಿ, ಅಥವಾ ಇನ್ಯಾವುದೇ ದುರುದ್ದೇಶವಾಗಲಿ ಇಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.
ತಸ್ಲೀಮಾರ ಕವನಗಳೇ ಹಾಗೆ! ಗುಂಡೇಟಿನಿಂದ ಹೊಡೆದ ಹಾಗಿರುತ್ತವೆ! ಅಬ್ಬರಿಸುತ್ತವೆ, ಸ್ತ್ರೀವಾದದ ಪರಕಾಷ್ಠೆಯನ್ನು ಮುಟ್ಟುತ್ತವೆ. ಆದರೂ ಅವರ ಕವನಗಳಲ್ಲಿನ ನೋವು, ವಿಷಾದ, ವ್ಯಂಗ್ಯ, ನೇರಾನೇರ ನುಡಿ ಎಲ್ಲವೂ ಕ್ಷಣಾರ್ಧದಲ್ಲಿ ನಮ್ಮನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಡುತ್ತವೆ. ತಸ್ಲೀಮಾಳನ್ನು ಯಾವುದೇ ಪೂರ್ವಗ್ರಹಗಳಿಲ್ಲದೆ ತಸ್ಲೀಮಾಳಂತೆ ಓದಿದರೆ ಮಾತ್ರ ನಮಗೆ ಆಪ್ತಳಾಗುತ್ತಾಳೆ, ಹತ್ತಿರವಾಗುತ್ತಾಳೆ. ಹಾಗೆಂದೇ ಅವಳ ಕವನಗಳನ್ನು ಅನುವಾದಿಸಿದ ಮಾತ್ರಕ್ಕೆ ನಾನು ಅವಳನ್ನು ಬೆಂಬಲಿಸುತ್ತಿದ್ದೇನೆಂದು ಅರ್ಥವಲ್ಲ. ನನಗಿಷ್ಟವಾದ ಅವಳ ಮೂರು ಕವನಗಳು ನಿಮಗೂ ಇಷ್ಟವಾಗಬಹುದೆಂದುಕೊಂಡು ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ.
ಆಕ್ರಮಣ
ಈ ಜನರು ಎಷ್ಟು ವಿಚಿತ್ರವೆಂದರೆ
ನೀನು ಕುಳಿತುಕೊಂಡರೆ “ಬೇಡ, ಕುಳಿತುಕೊಳ್ಳಬೇಡ” ಎನ್ನುತ್ತಾರೆ
ನಿಂತರೆ ಅದಕ್ಕೂ ಒಂದು ಹೇಳುತ್ತಾರೆ “ನಿಂತಿದ್ದೇಕೆ? ಓಡಾಡುವದಕ್ಕಾಗುವದಿಲ್ಲವೆ?”
ಓಡಾಡಿದರೆ “ಯಾವಾಗಲೂ ಓಡಾಡಲು ನಾಚಿಕೆಯಾಗುವದಿಲ್ಲವೆ? ಕುಳಿತುಕೋ” ಎನ್ನುತ್ತಾರೆ
ತುಂಬಾ ಹೊತ್ತು ಮಲಗಿದರೆ ಅವರು ಹೇಳುತ್ತಾರೆ ’ಸದಾ ಏನು ಮಲಗಿರುತ್ತಿ, ಎದ್ದೇಳು”
ನೀನು ಮಲಗದೇ ಹೋದರೆ ಅದಕ್ಕೂ ಒಂದು ಹೇಳುತ್ತಾರೆ “ವಿಶ್ರಾಂತಿಯೇ ಇಲ್ಲ, ಮಲಗು”
ಹೀಗೆ ನನ್ನ ದಿನಗಳನ್ನು ಬರಿ ಕುಳಿತುಕೊಳ್ಳುವದು ಮತ್ತು ಎದ್ದುನಿಲ್ಲುವದರಲ್ಲಿಯೇ ಕಳೆಯುತ್ತಿದ್ದೇನೆ
ನಾನು ಈಗಿಂದೀಗಲೇ ಸಾಯಬೇಕೆಂದರೆ ಅವರು ಹೇಳುತ್ತಾರೆ
“’ಏಕೆ ಸಾಯುತ್ತಿ? ನೀನಿನ್ನೂ ಬದುಕಿ ಬಾಳಬೇಕಾದವಳು. ಬದುಕಿಬಿಡು”
ನಾನು ಬದುಕುವದನ್ನು ನೋಡಿ ಮತ್ತೆ ಅವರೇ ಹೇಳುತ್ತಾರೆ
”ನಾಚಿಕೆಯಾಗುವದಿಲ್ಲವೆ ನಿನಗೆ? ಇನ್ನೂ ಬದುಕಿದ್ದೀಯಲ್ಲ? ಸತ್ತುಬಿಡು”
ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
ಕನ್ನಡಕ್ಕೆ: ಉದಯ್ ಇಟಗಿ
ಪರಿಚಯಸ್ಥ
ನಾನಂದುಕೊಂಡಷ್ಟು ಅವನು ಗಂಡಸಾಗಿಲ್ಲ
ಅರ್ಧ ನಪುಂಸಕ
ಅರ್ಧ ಗಂಡಸು
ಬದುಕು ಸವೆಯುತ್ತಾ ಹೋಗುತ್ತದೆ
ನಾನು ಅದೇ ಗಂಡಸಿನೊಟ್ಟಿಗೆ
ಕುಳಿತುಕೊಳ್ಳುತ್ತೇನೆ, ಮಲಗುತ್ತೇನೆ
ಆದರೆ ನಿಜವಾಗಿ ಅವನೇನೆಂಬುದು ಗೊತ್ತೇ ಆಗುವದಿಲ್ಲ
ನಾನು ಬಹಳ ದಿವಸಗಳಿಂದ ನೋಡಿದ ಮನುಷ್ಯ
‘ಅವನು’ ಅವನಲ್ಲ
ನಿಜ ಹೇಳಬೇಕೆಂದರೆ ನನಗೆ ಗೊತ್ತಿರುವ ಮನುಷ್ಯ
ಇವನಲ್ಲವೇ ಅಲ್ಲ!
ನಾನಂದುಕೊಂಡಷ್ಟು ಅವನು ಮನುಷ್ಯನಾಗಿಲ್ಲ
ಅರ್ಧ ಮೃಗ
ಅರ್ಧ ಮನುಷ್ಯ
ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
ಕನ್ನಡಕ್ಕೆ: ಉದಯ್ ಇಟಗಿ
ಸ್ವಿಟರ್ಜ್ರ್ಲ್ಯಾಂ ಡಿನ ಹುಡುಗಿ
ರಾತ್ರಿಯ ಔತಣಕೂಟವೊಂದರಲ್ಲಿ
ಎಲ್ಲರ ಕೈಯಲ್ಲೊಂದು ಶ್ಯಾಂಪೇನ್
ಇಲ್ಲವೇ ಬಿಳಿ ಮಧ್ಯದ ಗ್ಲಾಸು.
ಎಲ್ಲರೂ ಸಾಲು ಸಾಲಾಗಿ ನಿಂತಿದ್ದರು
ಮೊದಲಿಗೆ ದೊಡ್ದವರು ನನ್ನ ಕೈ ಕುಲುಕಿ ಅಭಿನಂದಿಸಲು ಬಂದರು,
ಕೆಲವರು ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಂದರು,
ಕೆಲವರು ನಾನ್ಹೇಗೆ ಆ ನರವಾನರರ ಗುಹೆಯಿಂದ
ಜೀವಂತವಾಗಿ ಹೊರಬಂದೆ ಎಂದು ಕೇಳಲು ಬಂದರು,
ಕೆಲವರು ನನ್ನ ಆಟೋಗ್ರಾಫ್ ಪಡೆಯಲು ಬಂದರು,
ಕೆಲವರು ನನ್ನ ನೋಡಿ ಕಣ್ಣರಳಿಸಿ ಮೆಚ್ಚುಗೆ ಸೂಚಿಸಲು ಬಂದರು,
ಕೆಲವರು ಮುತ್ತನ್ನಿಡಲು ಬಂದರು,
ಕೆಲವರು ಹೂಗುಚ್ಛಗಳನ್ನು ಕೊಡಲು ಬಂದರು.
ಇವರೆಲ್ಲರ ಮಧ್ಯ ಬಂಗಾರಗೂದಲಿನ ಹುಡುಗಿಯೊಬ್ಬಳು ಬಂದಳು
ನನ್ನ ಕೈ ಕುಲುಕಲಲ್ಲ, ಅಥವಾ ನನ್ನ ಕಣ್ಣೀರ ಕಥೆಗಳನ್ನು ಕೇಳಲಲ್ಲ
‘ನಾನು ನಿಮ್ಮೊಂದಿಗೆ ಸ್ವಲ್ಪ ಹೊತ್ತು ಅಳಲು ಬಂದಿದ್ದೇನೆ ಅಷ್ಟೇ’ ಎಂದು ಹೇಳಿದಳು
ಅವಳು ಅಷ್ಟು ಹೇಳಿದ್ದೇ ತಡ ಇಡಿ ಬ್ರಹ್ಮಪುತ್ರೆ ನನ್ನ ಕಣ್ಣೊಳಗಿಂದ ಉಕ್ಕಿ ಹರಿದಳು
ಹೃದಯ ಬಿರಿಯುವಂತೆ ಅತ್ತು ಬಿಟ್ಟೆ!
ನಾನು ಪೂರ್ವದವಳು
ಅವಳು ಪಶ್ಚಿಮದವಳು
ಆದರೂ ನಾವಿಬ್ಬರು ಸಮಾನ ದುಃಖಿಗಳು
ನಾನು ಕರಿಯಳು, ಅವಳು ಕೆಂಬಣ್ಣದವಳು
ಆದರೆ ನಮ್ಮಿಬ್ಬರ ನೋವುಗಳು ಸರಿಸಮನಾಗಿ ನೀಲಿಗಟ್ಟಿದ್ದವು.
ನಾವಿಬ್ಬರು ಅಳುವ ಮುನ್ನ ನಮ್ಮಿಬ್ಬರ ನೋವಿನ ಕಥೆಗಳನ್ನು
ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕಾಗಿರಲಿಲ್ಲ.
ಏಕೆಂದರೆ ಅವೇನೆಂದು ನಮ್ಮಿಬ್ಬರಿಗೂ ಚನ್ನಾಗಿ ಗೊತ್ತಿದ್ದವು!
ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
ಕನ್ನಡಕ್ಕೆ: ಉದಯ್ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಪಕ್ಕ ಸಾಹಸಪ್ರಧಾನ ಸಿನಿಮಾ3 ವಾರಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …2 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ8 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee3 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್6 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩7 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ9 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಏಕೋ ಏನೋ ಅಲ್ಲಿ ಒಂದಷ್ಟು ಒಳದನಿಗಳು ಮಾರ್ದನಿಸಲೇ ಇಲ್ಲ!
- ಪ್ರವೇಶನ.......
- ನಿನ್ನ ಪ್ರೀತಿಸುವದೇ ಒಂದು ಹಿಂಸೆ!
- ಉರಿದು ಬಿದ್ದ ಉಲ್ಕೆ-ಕಮಲಾ ದಾಸ್
- ಮರ ಕತ್ತರಿಸುವದು
- ನಾವು ಹುಡುಗರೇ ಹೀಗೆ........
- ಅವ್ವಂದಿರ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ಒಂದಿಷ್ಟು ಪದ್ಯಗಳು
- ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!
- ನಾನೂ ಹಾಫ್ ಸೆಂಚ್ಯುರಿ ಬಾರಿಸಿಬಿಟ್ಟೆ!
- ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
7 ಕಾಮೆಂಟ್(ಗಳು):
ಉದಯ್ ತಸ್ಲೀಮಾ ಒಂದು ಭಾವವ್ಯಕ್ತತೆಯ ಮಾಧ್ಯಮ..ಅದನ್ನು ನೀವು ಹೇಳಿದಂತೆ ಓದಬೇಕು ನೋಡಬಾರದು...ಮೆಲುಕು ಹಾಕಬೇಕು...ವಾಂತಿ ಮಾಡಬಾರದು...ಚನ್ನಾಗಿವೆ ನಿಮ್ಮ ಪ್ರಯತ್ನಗಳು.
ಉದಯ,
ನಿಮ್ಮ ಅನುವಾದದಲ್ಲಿಯ ಭಾವನೆಗಳು ಮನಸ್ಸನ್ನು ಮುಟ್ಟುವಂತೆ ಬಂದಿವೆ. ಕರ್ನಾಟಕದಲ್ಲಿ
ಗಲಭೆ ನಡೆದ ಈ ಸಮಯದಲ್ಲಿ ತಸ್ಲೀಮಾರ ಕವನಗಳನ್ನು ನೀವು ನೀಡಿದ್ದು ಅತ್ಯಂತ ಪ್ರಾಸಂಗಿಕವಾಗಿದೆ.
ಉದಯ್ ನೀವು ಪ್ರಾರಂಬದ ೆರಡನೇ ಪ್ಯಾರದಲ್ಲಿ ಹೇಳಿರುವ ಮಾತುಗಳು ಸತ್ಯಕ್ಕೆ ಎಷ್ಟು ಹತ್ತಿರವಾದವುಗಳು ಎಂದು ಈ ಮೂರು ಕವನಗಳನ್ನು ಓದುತ್ತಿದ್ದ ಹಾಗೇ ಗೋಚರಿಸುತ್ತದೆ. ಒಳ್ಳೆಯ ಆಯ್ಕೆ ಮತ್ತು ಅನುವಾದ.
ಹೌದು ಕರ್ನಾಟಕ (ಶಿವಮೊಗ್ಗ ಹಾಸನ) ಭಾಗಶಃ ಹೊತ್ತಿ ಉರಿಯಿತು. ನಾನೂ ಕನ್ನಡಪ್ರಭದ ಾ ಲೇಖನ ೋದಿದ್ದೆ. ಆಗ ನನಗೇನೂ ಅನ್ನಿಸಿರಲೇ ಇಲ್ಲ. ಬೆಳಿಗ್ಗೆ ನೋಡಿದರೆ ಗೋಲಿಬಾರ್.
ಆಶ್ಚರ್ಯವೆಂದರೆ ನಾನು ಆ ಲೇಖನವನ್ನೇ ಬರೆದಿಲ್ಲ ಎಂದು ತಸ್ಲೀಮಾ ಹೇಳಿಕೆಯಿತ್ತಿದ್ದಾರೆ! ಯಾವುದು ಸತ್ಯ. ಯಾರು ಈ ಅನುವಾದಕಿ? ಅನುವಾದಕ್ಕೆ ಮೂಲ ಲೇಖಕರ ಒಪ್ಪಿಗೆ ಪಡೆಯಲಾಗಿತ್ತೆ? ಎಲ್ಲವೂ ಕಲಸುಮೇಲೋಗರ.
tumba chennagide kavanada saalugaLu
ಉದಯ ಸರ್,
ಹೊರಪ್ರಪಂಚದಲ್ಲಿ ಏನಾದರೂ ಅದನ್ನು ತಲೆಗೆ ಹಚ್ಚಿಕೊಳ್ಳದೇ ಮುಕ್ತ ಮನಸ್ಸಿನಿಂದ ತಸ್ಲೀಮಳನ್ನು ಓದಿದಾಗ ಆಗುವ ಅನುಭವವೇ ಬೇರೆ. ನಿಮ್ಮ ಅನುವಾದಿತ ಪದ್ಯಗಳು ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬಂದು ಆಕೆಯ ಮನಸ್ಸಿನ ಭಾವನೆಗಳು[ನೇರವಾದ ಹೆಣ್ಣಿನ ಭಾವನೆಗಳು]ತಿಳಿಯುತ್ತಿವೆ. ಇನ್ನಷ್ಟು ಬರೆಯಿರಿ..
ಉದಯ್ ಅವರೇ,
ನಾನು ತಸ್ಲೀಮಾರ ಲಜ್ಜಾ ಓದಿದ್ದೇನೆ, ಅವರ ಬರವಣಿಗೆಯಲ್ಲಿ ಯಾರನ್ನೋ ದೂರಬೇಕೆಂಬ ಉದ್ದೇಶಕ್ಕಿಂತ ಸತ್ಯವನ್ನು ಹೇಳುವ ಬಯಕೆ ನಿಚ್ಚಳವಾಗಿ ಕಾಣುತ್ತದೆ. ತಸ್ಲೀಮಾ ಬಹಳ ದಿಟ್ಟೆ. ಕವನಗಳು ತುಂಬ ಖುಶಿಕೊಟ್ಟಿತು, ಅನುವಾದಿಸಿ ನಮಗೂ ಓದಲು ಅನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ಹೆಣ್ಣಿನ ಯಾತನೆಗಳನ್ನು, ನೋವುಗಳನ್ನು ಬಹು ಸೂಕ್ಷ್ಮವಾಗಿ ಆದರೆ ಸಮರ್ಥವಾಗಿ ತಿಳಿಸಿದ್ದಾರೆ ತಸ್ಲೀಮಾ. ಅನುವಾದಗಳಿಗೆ ತುಂಬಾ ಧನ್ಯವಾದಗಳು. ಅವರ ಬರಹವನ್ನೋದಿ ಎಂತಹವರಿಗೂ ಎಲ್ಲೋ ನೋವಾದ ಅನುಭವವಾಗುವುದು.
ಕಾಮೆಂಟ್ ಪೋಸ್ಟ್ ಮಾಡಿ