Father
ಅಪ್ಪ
ಅಜ್ಜ ನೆಗೆದು ಬೀಳುವ ಮೊದಲೇ
ಅವ್ವನ್ನು ಮದುವೆಯಾಗಿ
ಇದ್ದ ಹೊಲ ಗದ್ದೆಗಳಲ್ಲಿ
ಮೈ ಕೈ ಕೆಸರು ಮಾಡಿಕೊಳ್ಳದೆ
ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
ಗಡದ್ದಾಗಿ ತಿಂದು ತೇಗಿ
ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
ತಾನು ಮಾತ್ರ ಇಸ್ಪೀಟಾಡುತ್ತ
ಹೆಸರಿಗೆ ಮಾತ್ರ ಮನೆ ಯಜಮಾನನಾದ.
ದುಡಿಯಲು ಗೊತ್ತಿರದ ಷಂಡ
ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
ಅವರಿವರ(ಬಂಧುಗಳ) ಮನೆಯಲ್ಲಿ ಬಿಟ್ಟು
ತಾನು ಮಾತ್ರ ತನ್ನದೇ ಗೂಡಿನಲ್ಲಿ
ಹಚ್ಚಗೆ ತಿಂದು ಬೆಚ್ಚಗೆ ಮಲಗಿ
ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
ಅವಳನ್ನೂ ತನ್ನ ಜೊತೆಯಲ್ಲಿ  ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.
ಅಪ್ಪ ಏನೂ ಕಿಸಿಯದಿದ್ದರೂ
ಅವ್ವನ ಮೇಲೆ ಸದಾ ಇವನ ರುದ್ರನರ್ತನ
ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
ಸದಾ ಇವನ ಸೇವೆಗೆ ನಿಂತಳು.
ಹೊತ್ಹೊತ್ತಿಗೆ ಚಾ ಕುಡಿದು
ಬುಸ್ಸ್ ಬುಸ್ಸ್ ಎಂದು ಚುಟ್ಟಾ ಸೇದಿ
ಗೊರಗೊರ ಕೆಮ್ಮಿ
ಮೈಯೆಲ್ಲ ಗೂರಿ ಬಂದವರ ತರ
ಪರಾ ಪರಾ ಕೆರೆದು
ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
ಸತ್ಹಾಂಗ ಮಾಡಿ
ಒಮ್ಮಿಂದೊಮ್ಮೆಲೆ ಮೇಲೆದ್ದು ಗುಟುರು
ಹಾಕುವ ಮುದಿ ಗೂಳಿ ಇವನು.
ಅವರಿವರ ಹಂಗಿನರಮನೆಗಳಲ್ಲಿ ಬೆಳೆಯುತ್ತಾ
ಮಕ್ಕಳೆಲ್ಲ ಕಷ್ಟಬಿದ್ದು ಓದಿ ಕೈಗೆ ಬಂದ ಮೇಲೆ
ಅರವತ್ತರ ಅರಳು ಮರಳೆಂಬಂತೆ
ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
ಅಲ್ಲಿ ದುಡಿದಿದ್ದೆಷ್ಟೋ
ಆ ಖರ್ಚು ಈ ಖರ್ಚೆಂದು
ಮಕ್ಕಳ ಹತ್ತಿರ ಕಾಸು ಪೀಕುತ್ತ
ಅsssಬ್ಬ ಎಂದು ಡೇಗು ಹೊಡೆದು
ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು ಮುಂದುವರಿದೇ ಇದೆ!
ಇದೀಗ ಯಾರಾದರು
"ಎಲ್ಲಿ ನಿನ್ನ ಮಕ್ಕಳು?"ಎಂದು ಕೇಳಿದರೆ
ಮೈ ಕುಣಿಸಿ ಎದೆಯುಬ್ಬಿಸಿ
"ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
ನಾವೂ ಅಷ್ಟೇ ಯಾರಾದರು ನಮ್ಮನ್ನು
"ಯಾರು ನೀವು?" ಎಂದು ಕೇಳಿದರೆ
"ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ!
ಇದೀಗ ಅಪ್ಪನೂ ಇಲ್ಲ 
ಅವನ ನೆನಪುಗಳಂತೂ ಮೊದಲೇ ಇಲ್ಲ!
ಆದರೂ “ನಾವು ಮಲ್ಲೇಶಪ್ಪನ ಮಕ್ಕಳು” 
ಎಂದು ಗುರುತಿಸಲ್ಪಡುವದು ಮುಂದುವರಿದೇ ಇದೆ.
-ಉದಯ ಇಟಗಿ	
Father
Even before grandfather passed away,
He married our mother—
Never once touching the soil of the fields,
Never once dirtying his hands with toil.
He gulped down hot rotis she made,
Wiped his mouth, belched in ease,
Laid every burden on her head,
While he played cards in idle pride—
A “head of the house” only in name.
A man who never learned to work
Yet fathered three children—
And called himself a man.
Unable even to raise the children he bore,
He left them with relatives,
While he lived comfortably in his own den,
Eating well, sleeping warm,
Snatching mother’s love from us too,
And dragging her with him
Into the cold of our neglect.
Though father gave nothing,
He would always unleash his wrath on mother.
Terrified by his tantrums,
She would silently swallow her pain,
Boiling within.
She toiled both in the fields and at home,
Always at his service.
Sipping tea on time,
A hiss, a smoke, a hacking cough—
His body riddled with blisters,
He grumbled, groaned, collapsed in spells,
Staged sickness to seek sympathy,
Only to rise,
Burp,
And resume his lazy throne.
We children grew up
In the homes of others—relatives—
Enduring hardship, studying hard,
Making something of ourselves.
And like a thorny bush flowering in its sixties,
Or a sinner suddenly finding wisdom,
He once tried to become a “hero”
By working in the fields.
Who knows how much he really worked—
Yet always demanding money from us,
For this and that expense,
Letting out long sighs,
Rubbing his stomach for sympathy—
All that never changed.
Now, if someone asks him,
“Where are your children?”
He puffs up proudly,
Points at us and says, “These are mine.”
And we, if asked, “Who are you?”
Simply say,
“We are Malleshappa’s children.”
Now Father is no more.
His memories?
They never really were.
And still we continue to be identified
As “Malleshappa’s children.”
Kannada Original: Uday Itagi
English Translation: Uday Itagi
A Road's Lineage
ಒಂದು ರಸ್ತೆಯ ವಂಶಾವಳಿ!
ಇಕ್ಕೆಲ:
ನಿನ್ನೆಯ ಅನ್ನದ ಚೀಲ
ಮತ್ತು
ವಿಘಟನೆಯಾಗುತ್ತಿರುವ 
ಕುನ್ನಿಯ ಬುರುಡೆ,ಬಾಲ!
ಅಭಿವೃದ್ಧಿಯ ಕರಣಗಳು ಕಾರಣಕೊಟ್ಟು 
ಮಂಜೂರು ಮಾಡಿಸಿಕೊಟ್ಟ
ಉದ್ದರಸ್ತೆ, ಗಿಡ್ಡ ರಸ್ತೆ , ಕೆಲವು ಅಡ್ಡರಸ್ತೆ
ಮತ್ತೆ ಕೆಲವು ಫಲಕಗಳಿಗೆ ಮಾತ್ರವಾದ
ಮುಖ್ಯರಸ್ತೆಯ ಮುಖಾ-ಅಮುಖ!
ಮಹಾನಗರದ ನದಿ ಸಾಗರಗಳಲಿ
ಮಹಡಿಗಳ ಹಡಗುಕಟ್ಟಿ 
ಒಂದೊಂದರಲಿ ನಮ್ಮತನವ ಬಾಡಿಗೆಬಿಟ್ಟು
ಬೇವೂರು ಸೇರಿದೆವು 
ಸಾವಿಲ್ಲದ ಹುಟ್ಟು ಕೊಟ್ಟು
ಇದ್ದವರು ಇದ್ದಾರೆ ಇದ್ದಹಾಗೆ
ಇರಲಿ
ಬಿದ್ದವರ ನಕಾಶೆಯಲ್ಲಿ
ರಸ್ತೆಗಿರಲಿ
ಫುಟಪಾತಿನ ಕಡ್ಡಿಗೂ ಇಲ್ಲ ಜಾಗ
ನಾವಾಗೆ ದಾರಿ ಬರೆದುಕೊಳ್ಳಲು
ಮೂಡಿಸುತ್ತಿಲ್ಲ ಕದ್ದಿರುವ ಪೆನ್ನು!
ಸತ್ತವರ ಸುಡುವ ಕಾಡಿಗೆ ದಾರಿಯಿದೆ
ಬದುಕಿದವರ ಸಾಯಿಸಲು ದಾರಿ ಮಾಡಲಾಗಿದೆ
ಒಂದು ರಸ್ತೆ ಇನ್ನೊಂದು ರಸ್ತೆ ಹಡೆಯಲು
ಬಿದ್ದ ಮಕ್ಕಳಿಗೆ ಕಲಿಸಲಾಗಿದೆ 
ಮೈಥುನದ ಸಾವು ಮತ್ತೆ ಚಳಿ
ಎಲ್ಲಿವರೆಗೆ ಹಬ್ಬುವುದೋ ಈ ಕಬಂಧ ವಂಶಾವಳಿ!
ಗಮ್ಯದ ಮಕ್ಕಳು ಸತ್ತ ದಿವಸ :
ರಸ್ತೆಗಳೇ ಇರುವುದಿಲ್ಲವೇನೊ ನನ್ನೂರಲ್ಲಿ
ಗುಳೆ ಹೋಗದೆ ಸಾಯಬೋದು ಸಲೀಸಾಗಿ 
ಮುಂದೆ ಹುಟ್ಟಿಕೊಳ್ಳಲಿರುವ ಹೊಸಾ ರಸ್ತೆ!
~ ವೆಂಕಟೇಶ ಪಿ. ಮರಕಂದಿನ್ನಿ	 
A Road’s Lineage
On the diverge:
Yesterday’s bag of rice
And
A crumbling skull and tail of a dog!
In the name of development,
With many reasons given,
Was sanctioned
A long road, a short road, a few bylanes,
And for some signboards alone—
A face-and-faceless main road!
Into the rivers and seas of a metropolis,
We built ships of storeys
And in each we rented out
Our sense of self
And merged into an unknown crowd,
Giving birth without dying
Those who exist,will continue to exist—
Let them be as they are
But in the maps of those who fell,
There isn’t even space for
A twig on the footpath,
To draw our own way forward—
The pen that was stolen
Refuses to respond!
There’s a road to the forest
Where the dead are cremated.
And roads are laid
To kill the living!
To pit one road against another,
We are taught—
Children who have fallen—
The death of lust, and the cold.
How far will this grotesque lineage spread?
The day the destination's children die:
Perhaps there’ll be no roads left in my town.
One could die gracefully without stumbling—
And a new road
Will be born ahead!
Kannada Original: Venkatesh P. Marakandinni
English Translation: Uday Itagi
ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
(ಪ್ರಸಿದ್ಧ ಕ್ರಾಂತಿಕಾರಿ ನೇಪಾಳಿ ಭಾಷೆಯ ಕವಿ ಮನೋಜ್ ಬೊಗಾಟಿಯವರೊಂದಿಗೆ ಒಂದು ಮಾತುಕತೆ)
1. ಹಲೋ ಮಿಸ್ಟರ್ ಬೊಗಾಟಿ, ನಿಮ್ಮ ವ್ಯಯಕ್ತಿಕ ಮತ್ತು ವೃತ್ತಿಪರ ಹಿನ್ನೆಲೆ ಬಗ್ಗೆ ಏನಾದರೂ ಹೇಳಬಲ್ಲಿರಾ?
ವೈಯಕ್ತಿಕ ಹಿನ್ನೆಲೆ: 
ನಾನು ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ನೇಪಾಳಿ ಮಾತನಾಡುವ ಗೂರ್ಖಾ. ನಾನು ಜುಲೈ 16, 1979 ರಂದು ಡಾರ್ಜಿಲಿಂಗ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದೆ, ಅಲ್ಲಿ ಮಲೇರಿಯಾ ಔಷಧವನ್ನು ತಯಾರಿಸಲು ಬಳಸುವ ಔಷಧೀಯ ಸಸ್ಯವಾದ ಸಿಂಚೋನಾವನ್ನು ಬೆಳೆಸಲಾಗುತ್ತದೆ. ನಿರುದ್ಯೋಗಿ ಮತ್ತು ಕೆಳವರ್ಗದ ಕುಟುಂಬದಲ್ಲಿ ಜನಿಸಿದ ಕಾರಣ, ಆರ್ಥಿಕ ತೊಂದರೆಗಳಿದ್ದವು, ಹಾಗಾಗಿ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ನಾನು ಮಾಧ್ಯಮಿಕ ಶಾಲೆಯಲ್ಲಿ ಮಾತ್ರ ಉತ್ತೀರ್ಣನಾಗಿದ್ದೆ. ನನಗೆ ಮೂವರು ತಂಗಿಯರಿದ್ದಾರೆ. ನನ್ನ ತಂದೆಗೆ ಕ್ಷಯರೋಗ ಇತ್ತು. ಅವರು ತೀರಿಕೊಂಡರು. ಹಾಗಾಗಿ ಸಂಸಾರ ನಡೆಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಆದ್ದರಿಂದ, ನನ್ನ ಬಾಲ್ಯವು ತುಂಬಾ ಸವಾಲಿನದ್ದಾಗಿತ್ತು. ಜೀವನ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ಸಮಯ ಕಲಿಸಿದೆ. ನನ್ನ ಮನೆ ಭಾರತ ಮತ್ತು ಭೂತಾನ್ ಗಡಿಯಲ್ಲಿದೆ. 1990 ರಲ್ಲಿ, ನೇಪಾಳಿ ಮಾತನಾಡುವವರನ್ನು ಭೂತಾನ್ನಿಂದ ಹೊರಹಾಕಲಾಯಿತು. ನಾನು 1996 ರಲ್ಲಿ ಈ ಬಗ್ಗೆ ನನ್ನ ಮೊದಲ ಕವನವನ್ನು ಬರೆದಿದ್ದೇನೆ ಮತ್ತು ಅಲ್ಲಿಂದ ನನ್ನ ಕವನದ ಬರವಣಿಗೆ ಪ್ರಾರಂಭವಾಯಿತು.
ವೃತ್ತಿಪರ ಹಿನ್ನೆಲೆ: 
ನಾನು ಡಾರ್ಜಿಲಿಂಗ್ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನೇಪಾಳಿ ಭಾಷೆಯ ಅನೇಕ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ಈಗಲೂ ಮಾಡುತ್ತಿದ್ದೇನೆ. ಪ್ರಸ್ತುತ, ನಾನು ಸಾಮಾಜಿಕ ವೇದಿಕೆಗಳಲ್ಲಿ ನನ್ನ ಸ್ವಂತ ಡಿಜಿಟಲ್ ಪತ್ರಿಕೆಯೊಂದನ್ನು ನಡೆಸುತ್ತಿದ್ದೇನೆ. 2017 ರಿಂದ, ನಾನು ಖಬರ್ ಮ್ಯಾಗಜೀನ್ ಎಂಬ ಮಾಧ್ಯಮ ಸಂಸ್ಥೆಯನ್ನು ನಡೆಸುತ್ತಿದ್ದೇನೆ. ಜೊತೆಗೆ ನನ್ನ ಬರವಣಿಗೆ ಮುಂದುವರಿಸಿದ್ದೇನೆ. ನಾನು ಆರು ಕವನ ಸಂಕಲನಗಳನ್ನು, ಒಂದು ಸಣ್ಣ ಕಥಾ ಸಂಕಲನವನ್ನು, ಒಂದು ಪ್ರಬಂಧ ಸಂಕಲನವನ್ನು ಹೊರತಂದಿದ್ದೇನೆ ಮತ್ತು ಒಂದು ಕಾದಂಬರಿಯನ್ನು ಸಹ ಅನುವಾದಿಸಿದ್ದೇನೆ. 2012 ರಲ್ಲಿ, "ಗೌಕ ರಂಗರು' (ಗಾಯಗಳ ಬಣ್ಣಗಳು.) ಎಂಬ ದೀರ್ಘ ಕವನವನ್ನು ಬರೆದೆ. ಅದಕ್ಕೆ ನಾನು ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಸಹ ಪಡೆದಿದ್ದೇನೆ. ಅಲ್ಲಿಂದಾಚೆ ನನ್ನ ಬರವಣಿಗೆ ಮತ್ತು ಪತ್ರಿಕೋದ್ಯಮವು ಒಟ್ಟೊಟ್ಟಿಗೆ ಸಾಗುತ್ತಿದೆ. 
2. ಕವಿ/ಲೇಖಕರಾಗಲು ನಿಮ್ಮನ್ನು ಪ್ರಭಾವಿಸಿದ ಅಂಶಗಳು ಯಾವುವು? 
ನಾನು ಸಾಹಿತ್ಯದ ಬಗ್ಗೆ ಜ್ಞಾನವನ್ನು ಪಡೆದ ನಂತರ, ನಾನು ಹಲವಾರು ಸಾಹಿತ್ಯಿಕ ನಿಯತಕಾಲಿಕೆಗಳನ್ನು ಹುಡುಕಿ ಓದಿದೆ ಮತ್ತು ಅನೇಕ ಕವಿಗಳು ಮತ್ತು ಬರಹಗಾರರ ಕೃತಿಗಳನ್ನು ಓದಿದೆ. ಅವುಗಳನ್ನು ಓದುವಾಗ, ಕವಿಗಳು ಅಥವಾ ಬರಹಗಾರರು ತಮ್ಮ ಆಲೋಚನೆಗಳನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಬಹುದು ಎಂದು ನಾನು ಅರಿತುಕೊಂಡೆ. ಮೊದಲಿನಿಂದಲೂ ನನ್ನ ಬಗ್ಗೆ ಮತ್ತು ಸಮಾಜದ ಬಗ್ಗೆ ಬರೆಯುತ್ತಿದ್ದೇನೆ. ನನ್ನಂತಹ-ಕೆಳವರ್ಗದವರು ವಾಸಿಸುವ ಸಮಾಜಕ್ಕೆ ನನ್ನ ಅನುಭವಗಳನ್ನು ತಿಳಿಸುತ್ತಿದ್ದೆ. ಬಹುಶಃ ನಾನು ಬರೆದ ಕವಿತೆಗಳಲ್ಲಿ ನನ್ನ ಓದುಗರು ತಮ್ಮದೇ ಆದ ನೋವನ್ನು ಕಂಡುಕೊಂಡಿದ್ದಾರೆ. ಎಲ್ಲರೂ ಮಾತಿನ ಮೂಲಕ ಕಲಾತ್ಮಕವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ನಾನು ಅವರ ನೋವಿನ ಭಾಷೆಯಲ್ಲಿ ಬರೆದಿದ್ದೇನೆ. ನನ್ನ ಬರವಣಿಗೆ ನನ್ನ ಸಮಾಜವನ್ನು ಪ್ರತಿಬಿಂಬಿಸಿದ್ದು ಹೀಗೆ. ನಾನು ಅನುಭವಿಸಿದ ಕೆಳವರ್ಗದ ಸಮಾಜ ಮತ್ತು ಅದರ ನೋವು ನನ್ನನ್ನು ಬರಹಗಾರ ಮತ್ತು ಕವಿಯನ್ನಾಗಿ ಮಾಡಿದೆ.
3. ಮನೋಜ್ ಬೊಗಾಟಿಯವರೇ ನಿಮ್ಮ ಮೊದಲ ಸಾಹಿತ್ಯ ಓದುವಿಕೆ ಯಾವುದಾಗಿತ್ತು?
ಶಾಲಾ ಪಠ್ಯಕ್ರಮದ ಹೊರತಾಗಿ ಸಾಹಿತ್ಯದ ಪುಸ್ತಕಗಳು ಸಿಗದ ಜಾಗದಲ್ಲಿ ನಾನು ಹುಟ್ಟಿದ್ದೇನೆ. ಪಠ್ಯಪುಸ್ತಕಗಳಲ್ಲಿನ ಕವಿತೆಗಳನ್ನು ಓದಿ ಕವನ ಬರೆಯುವುದನ್ನು ಕಲಿತೆ. ಆ ಸಮಯದಲ್ಲಿ, ಎರಡು ನೇಪಾಳಿ ದಿನಪತ್ರಿಕೆಗಳಲ್ಲಿ ಪ್ರಕಟವಾದವು. ಆ ಪತ್ರಿಕೆಗಳಲ್ಲಿ ಮುದ್ರಿತವಾಗಿದ್ದ ಕವನಗಳು, ಕಥೆಗಳನ್ನು ಓದಿಯೇ ಕವನ ಬರೆಯುವ ಯೋಚನೆ ಬಂದಿತು. ಅಕ್ಟೋಬರ್ 10, 1996 ರಂದು "ಆಜ್ ಭೋಲಿ" ಎಂಬ ದಿನಪತ್ರಿಕೆಯಲ್ಲಿ "ಸಪನ (ಕನಸು)" ಎಂಬ ಶೀರ್ಷಿಕೆಯ ಕಥೆ ಪ್ರಕಟವಾಯಿತು, ಅದು ನನ್ನ ಮೊದಲ ಪ್ರಕಟಿತ ಕೃತಿ, ಅದರಲ್ಲಿ ನಾನು ನಿರುದ್ಯೋಗಿ ಮತ್ತು ಕೆಳವರ್ಗದ ನೋವಿನ ಬಗ್ಗೆ ಬರೆದಿದ್ದೇನೆ. ಅಕ್ಟೋಬರ್ 16, 1996 ರಂದು ನನ್ನ ಮೊದಲ ಕವನ 'ಘರ್ ಫರ್ಕನಲೈ' (ಮನೆಗೆ ಮರಳಲು) ಕವನ ಪ್ರಕಟವಾಯಿತು.
4. ಬರವಣಿಗೆಯು ನಿಮಗೆ ಶಕ್ತಿಯನ್ನು ನೀಡುತ್ತದೆಯೋ? ಅಥವಾ ದಣಿವನ್ನೋ? 
ಕಾವ್ಯ ಮನುಷ್ಯರ ಕಲಾತ್ಮಕ ಭಾಷೆ. ಪ್ರಪಂಚದಾದ್ಯಂತ ಜನರು ಈ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಪ್ರಕೃತಿ ಕೂಡ ಕಾವ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ. ಕಾವ್ಯವು ಮನುಷ್ಯರು ಇನ್ನೂ ಸಂವೇದನಾಶೀಲರಾಗಿದ್ದಾರೆ ಹಾಗೂ ಜೀವಂತವಾಗಿದ್ದಾರೆಂಬುದಕ್ಕೆ ಪುರಾವೆಯನ್ನು ನೀಡುತ್ತದೆ, ಆದ್ದರಿಂದ ನಾನು ಕವನ ಬರೆಯಲು ಇಷ್ಟಪಡುತ್ತೇನೆ.
ನಾನು ಸಮಯ ಕಳೆಯಲು ಅಥವಾ ಸ್ವಯಂ ಖುಷಿಗಾಗಿ ಏನನ್ನೂ ಬರೆಯುವುದಿಲ್ಲ. ನಾನೊಬ್ಬ ಜವಾಬ್ದಾರಿಯುತ ಬರಹಗಾರ. ಕವಿತೆ, ಕಥೆ, ಪ್ರಬಂಧ ಅಥವಾ ಲೇಖನವೇ ಆಗಿರಲಿ, ನನ್ನ ಆಂತರಿಕ ಪ್ರಜ್ಞೆಯು  ನನ್ನನ್ನು ಒತ್ತಾಯಿಸಿದಾಗ ಮಾತ್ರ ನಾನು ಬರೆಯುತ್ತೇನೆ. ನನ್ನ ಬರವಣಿಗೆಗೆ ಯಾವಾಗಲೂ ಒಂದು ಉದ್ದೇಶವಿದೆ. ನಾನು ಉದ್ದೇಶಪೂರ್ವಕವಾಗಿ ಬರೆಯುತ್ತೇನೆ. ಬರವಣಿಗೆ ನನಗೆ ಚೈತನ್ಯ ನೀಡುತ್ತದೆ, ಆ ಶಕ್ತಿಯನ್ನು ಓದುಗರೂ ಸ್ವೀಕರಿಸಬೇಕು ಎಂಬ ಅರಿವಿನಿಂದ ಬರೆಯುತ್ತೇನೆ. ಬರವಣಿಗೆಯು ನಿಜವಾದ ಬರಹಗಾರನನ್ನು ಎಂದಿಗೂ ಆಯಾಸಗೊಳಿಸುವುದಿಲ್ಲ.
5. ಬೊಗಾಟಿಯವರೇ ನಿಮ್ಮ ಪ್ರಕಾರ ಕಾವ್ಯ ಎಂದರೇನು? ನೀವು ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? 
ಕಾವ್ಯವು ಮಾನವನ ಅವ್ಯಕ್ತ ಪ್ರಜ್ಞೆಯ ಭಾಷೆಯಾಗಿದೆ. ಒಂದು ಒಳ್ಳೆಯ ಕವನವನ್ನು ಓದಿದಾಗ ಬದುಕು ಮತ್ತು ಸಮಾಜವನ್ನು ನೋಡುವ ಹಲವು ಆಯಾಮಗಳು ಸಿಗುತ್ತವೆ. ಕಾವ್ಯವು ಪ್ರಬುದ್ಧನಾಗಲು ಕಲಿಸುತ್ತದೆ. ಕಾವ್ಯ ಮನುಷ್ಯನಾಗುವುದನ್ನು ಕಲಿಸುತ್ತದೆ. ಕವಿತೆ ನಿಮ್ಮ ಮುಖ ಕಾಣುವ ಕನ್ನಡಿಯಿದ್ದಂತೆ. ಅಲ್ಲಿ ಬರೀ ನಿಮ್ಮ ಮುಖವನ್ನು ಮಾತ್ರ ನೋಡುವುದಿಲ್ಲ, ಆದರೊಂದಿಗೆ ನಿಮ್ಮ ಮುಖದ ಒಟ್ಟು ಸೌಂದರ್ಯವೂ ಕಾಣಿಸುತ್ತದೆ. ಕಾವ್ಯವಿಲ್ಲದಿದ್ದರೆ ಬದುಕಿಗೆ ಲಯವಿಲ್ಲ. ಪ್ರಪಂಚಕ್ಕೆ ಲಯವಿಲ್ಲ. ಕಾವ್ಯವಿಲ್ಲದಿದ್ದರೆ ಮನುಷ್ಯರ ಇರುವಿಕೆಯ ಅನುಭವವಾಗುವುದಿಲ್ಲ. ಕಾವ್ಯವು ಜೀವನದ ಶಿಸ್ತು ಇದ್ದಂತೆ. ಕೆಲವರು ಅದನ್ನು ವ್ಯಕ್ತಪಡಿಸುತ್ತಾರೆ ಮತ್ತು ಅನುಸರಿಸುತ್ತಾರೆ, ಇನ್ನು ಕೆಲವರು ಅದನ್ನು ವ್ಯಕ್ತಪಡಿಸದೇ ಅನುಸರಿಸುತ್ತಾರೆ. ಅದನ್ನು ವ್ಯಕ್ತಪಡಿಸಬಲ್ಲವರು ಕವಿಗಳು ಆಗಿರಬಹುದು, ಆಗದವರು ಓದುಗರು ಆಗಿರಬಹುದು.
6. ನಿಮ್ಮ ಕವಿತೆಗಳು ಯಾವಾಗಲೂ ಚಾವಟಿಯೇಟಿನಷ್ಟೇ ಪ್ರಭಾವಶಾಲಿಯಾಗಿರುತ್ತವೆ ಮತ್ತು ನೀವು ಯಾರಿಗೂ ಭಯಪಡುವುದಿಲ್ಲ ಹಾಗೂ ನಿಮ್ಮ ಕವಿತೆಗಳ ಮೂಲಕ ನೀವು ಯಾರನ್ನಾದರೂ ಎದುರುಹಾಕಿಕೊಳ್ಳಬಲ್ಲಿರಿ. ನೀವು ಇದನ್ನು ಹೇಗೆ ನಿರ್ವಹಿಸುತ್ತೀರಿ? 
ಕಾವ್ಯ ಸದಾ ಮನುಷ್ಯರ ವಕ್ತಾರನಂತೆ ಕೆಲಸ ಮಾಡುತ್ತದೆ. ಒಂದು ವೇಳೆ ನೀವು ನಿಜವಾದ ಕವಿಯಾಗಿದ್ದರೆ ಸಮಾಜದ ಅನೇಕ ವೈರುಧ್ಯಗಳು ಮತ್ತು ಓರೆಕೋರೆಗಳ ಬಗ್ಗೆ ಮಾತನಾಡಲು ಹಿಂಜರಿಯುವದಿಲ್ಲ. ಆ ವೈರುಧ್ಯಗಳ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಬದುಕಿನ ಸುರಕ್ಷತೆಯ ಬಗ್ಗೆ ಯೋಚಿಸಲಾರಿರಿ. ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು. ಭಯಭೀತ ಕವಿ ಸಮಾಜಕ್ಕೆ ಭಯಭೀತರಾಗಲು ಕಲಿಸುತ್ತಾನೆ ಹಾಗೂ ನಿಮ್ಮ ಜೀವನವನ್ನು ಸಮಾಜದೊಂದಿಗೆ ರಾಜಿ ಮಾಡಿಕೊಳ್ಳಲು ಕಲಿಸುತ್ತಾನೆ. ಮನುಷ್ಯರಾಗಿ ಎಲ್ಲರೂ ಸಮಾನರು, ಆದರೆ ಸಮಾಜದಲ್ಲಿ ಜನರನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಸಣ್ಣ ವರ್ಗಗಳನ್ನು ದೊಡ್ಡ ವರ್ಗಗಳು ಆಳುತ್ತವೆ. ಅಧಿಕಾರವು ಜನರನ್ನು ವರ್ಗೀಕರಿಸುವ ಸಮಾಜವಾಗಿದೆ. ಆದರೆ ನಿಜವಾದ ಕಾವ್ಯವು ಈ ಸಂಪ್ರದಾಯವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಎಲ್ಲರೂ ಸಮಾನರು ಎಂದು ಕಾವ್ಯ ಹೇಳುತ್ತದೆ. ಆದ್ದರಿಂದ, ಕಾವ್ಯವು ಮೊದಲು ಜನರನ್ನು ವರ್ಗೀಕರಿಸುವ ಅಭ್ಯಾಸದ ವಿರುದ್ಧ ಹೋರಾಡುತ್ತದೆ. ನಾನೂ ಅದೇ ರೀತಿಯಲ್ಲಿ ಹೋರಾಡುತ್ತೇನೆ. ಯೋಧರ ಭಾಷೆಯು ಬರೀ ಪ್ರೇಮಿಗಳು ಪ್ರೀತಿಸುವ ಭಾಷೆಯಷ್ಟೇ ಆಗಿರದೆ ಅದು ಕ್ರಾಂತಿಕಾರಿ ಭಾಷೆಯೂ ಆಗಬೇಕು. ಅದಕ್ಕೇ ನನ್ನದು ಕ್ರಾಂತಿಕಾರಿ ಧ್ವನಿ ಮತ್ತು ಆ ಧ್ವನಿ ಯಾವಾಗಲೂ ಬದ್ಧವಾಗಿರುತ್ತದೆ. ಕಾವ್ಯವನ್ನು ಬದುಕಿನ ಶಿಸ್ತಾಗಿ ಮಾಡಿಕೊಂಡ ನಂತರ, ನಾನು ಯಾವುದೇ ಕೆಲಸ ಮಾಡಿದರೂ, ಅದು ಪತ್ರಿಕೋದ್ಯಮವಾಗಿರಲಿ ಅಥವಾ ಕವನ ಬರೆಯುವುದಾಗಿರಲಿ, ಆ ಶಿಸ್ತು ನನ್ನನ್ನು ನನ್ನ ಬೇರುಗಳಿಗೆ ಸಂಪರ್ಕಿಸುತ್ತದೆ. ಕಾವ್ಯವು ಈ ಎಲ್ಲ ವಿಷಯಗಳನ್ನು ನಿರ್ವಹಿಸುವದರಲ್ಲಿ ಸಂದೇಹವಿಲ್ಲ.
7. ಕವಿಯಾಗಿ ನೀವು ಸ್ವೀಕರಿಸಿದ ಅತ್ಯಂತ ವಿಮರ್ಶಾತ್ಮಕ ಟೀಕೆ ಯಾವುದು ಹಾಗೂ ಇದುವರೆಗೆ ನೀವು ಸ್ವೀಕರಿಸಿದ ಅತ್ಯುತ್ತಮ ಮೆಚ್ಚುಗೆ ಯಾವುದು?
ನನ್ನ ಟೀಕಾಕಾರರು ನಾನು ಎಲ್ಲದಕ್ಕೂ ರಾಜಕೀಯವನ್ನು ಚುಚ್ಚುತ್ತೇನೆ ಎಂದು ಹೇಳುತ್ತಾರೆ. ನಾನು ರಾಜಕೀಯದ ಹೊರತಾಗಿ ಇತರ ವಿಷಯಗಳ ಬಗ್ಗೆಯೂ ಬರೆಯಬಹುದು ಎಂದು ಅವರು ಹೇಳುತ್ತಾರೆ. ಸ್ವಲ್ಪ ಮಟ್ಟಿಗೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಅಭಿಮಾನಿಗಳು ಹೇಳುವಂತೆ ನಾನು ಸಾಮಾನ್ಯ ಜನರ ಭಾಷೆಗೆ ಕಲಾತ್ಮಕ ಧ್ವನಿಯನ್ನು ನೀಡುವಲ್ಲಿ ಪರಿಣತಿ ಹೊಂದಿದ್ದೇನೆ. ಆದರೆ ನಾನು ಹೊಗಳಿಕೆಗಿಂತ ಟೀಕೆಯನ್ನು ಹೆಚ್ಚು ಗೌರವಿಸುತ್ತೇನೆ.
8. ನಿಮ್ಮ ವಿರುದ್ಧ ಹದಿನೇಳು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಈ ಪ್ರಕರಣಗಳಲ್ಲಿ ನಿಮ್ಮ ಮೇಲೆ ಯಾವ ಆರೋಪವಿದೆ?
ಪಶ್ಚಿಮ ಬಂಗಾಳ ಸರ್ಕಾರ ಮತ್ತು ಡಾರ್ಜಿಲಿಂಗ್ ಪ್ರಾದೇಶಿಕ ಆಡಳಿತ ನನ್ನ ವಿರುದ್ಧ 17-ಪ್ರಕರಣಗಳನ್ನು ದಾಖಲಿಸಿದೆ. ತೀಸ್ತಾ ನದಿಗೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆ ಆಣೆಕಟ್ಟು ನದಿಯನ್ನು ನದಿಯಾಗದಂತೆ ತಡೆದಿದೆ. ಪ್ರಕೃತಿಯನ್ನು ಶೋಷಣೆ ಮಾಡಲಾಗಿದೆ. ಈ ಮಧ್ಯೆ, ಅಣೆಕಟ್ಟು ಒಡೆದು, ತೀಸ್ತಾ ನದಿಯ ದಡದಲ್ಲಿ ವಾಸಿಸುವ ನಮ್ಮ ಜನರ ಮನೆಗಳನ್ನು ತನ್ನೊಂದಿಗೆ ಕೊಂಡೊಯ್ಯಿತು. ಆದರೆ ಸರ್ಕಾರಗಳು ಅವರಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ. ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿದ್ದೇನೆ. ನಾನು ವರದಿ ಮಾಡಲು ಕ್ಷೇತ್ರಕ್ಕೆ ಹೋದಾಗ, ಸರ್ಕಾರದ ಅಸೂಕ್ಷ್ಮತೆ ಮತ್ತು ಷಡ್ಯಂತ್ರಗಳನ್ನು ಸತ್ಯಗಳ ಸಮೇತ ಬಹಿರಂಗಪಡಿಸಿದಾಗ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಅದರ ನಂತರ ನನ್ನ ಧ್ವನಿಯನ್ನು ಹತ್ತಿಕ್ಕಲು ನಿರಂತರವಾಗಿ ನನ್ನ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಧಿಕಾರದ ಶೋಷಣೆ ಮತ್ತು ಷಡ್ಯಂತ್ರವನ್ನು ಜನರ ಮುಂದೆ ಬಹಿರಂಗಪಡಿಸಬಾರದು ಎಂದು ಅವರು ಹೇಳುತ್ತಾರೆ. ಆದರೆ ಸಮಾಜದ ಒಳಿತಿಗೋಸ್ಕರ ನಾನು ಆ ಕೆಲಸವನ್ನು ಕಾವ್ಯ ಅಥವಾ ಪತ್ರಿಕೋದ್ಯಮವದ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ನಾನು ಯಾರೊಂದಿಗೂ ರಾಜಿ ಮಾಡಿಕೊಳ್ಳಲಾರೆ. ಹಾಗಾಗಿ ನನ್ನ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಕೇಸುಗಳನ್ನು ಹಾಕಲಾಗುತ್ತಿದೆ.
9. ಕಾವ್ಯವನ್ನು ಎಂದಿಗೂ ಮಾರಾಟ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ವಿಷಯದಲ್ಲಿ ಇದು ಎಷ್ಟು ಸತ್ಯ?
ಕಾವ್ಯದ ಮೂಲ ಧ್ವನಿ ಮಾರಾಟಕ್ಕಿಲ್ಲ. ಪುಸ್ತಕಗಳಿಗೆ ಸಂಬಂಧಿಸಿದಂತೆ, ನೀವು ಪುಸ್ತಕವನ್ನು ಪ್ರಕಟಿಸಲು ಹೂಡಿಕೆ ಮಾಡಬೇಕು ಮತ್ತು ಓದುಗರನ್ನು ತಲುಪಲು ನಿಮಗೆ ಮಾರುಕಟ್ಟೆ ಬೇಕು. ನಾನು ನನ್ನ ಕಾವ್ಯದ ಘನತೆಯನ್ನು ಮಾರುವುದಿಲ್ಲ. ಆದರೆ ನಾನು ಕವನ ಪುಸ್ತಕಗಳನ್ನು ಮಾರಾಟ ಮಾಡುತ್ತೇನೆ. ಒಬ್ಬ ಕವಿ ಕಾವ್ಯದ ಮೂಲಕ ಏನನ್ನಾದರೂ ನೀಡುತ್ತಿದ್ದರೆ ಅದರ ಬೆಲೆಯನ್ನು ಓದುಗನೂ ತೆರಬೇಕಾಗುತ್ತದೆ.
10. ನಿಮ್ಮ ಕವಿತೆಗಳು ಸಮಾಜವನ್ನು ಬದಲಾಯಿಸಬಹುದು ಎಂದು ನೀವು ಭಾವಿಸುತ್ತೀರಾ? ಹಾಗಿದ್ದಲ್ಲಿ, ಹೇಗೆ? 
ಕಾವ್ಯವು ಸಮಾಜವನ್ನು ತಕ್ಷಣವೇ ಬದಲಾಯಿಸುವುದಿಲ್ಲ, ಆದರೆ ಅದು ವಿಷಯಗಳನ್ನು ನೋಡುವ ದೃಷ್ಟಿಕೋನವನ್ನು ನೀಡುತ್ತದೆ. ಈ ಸಮಾಜವು ಮನುಷ್ಯನಾಗಿ ಬದುಕಲು ಯೋಗ್ಯವಾಗಿದೆಯೇ ಎಂದು ಅರ್ಥಮಾಡಿಕೊಳ್ಳಲು ಕಲಿಸುತ್ತದೆ. ಕಾವ್ಯವು ಒಳ್ಳೆಯ ವ್ಯಕ್ತಿಗಳು ಮತ್ತು ಉತ್ತಮ ಸಮಾಜದ ಸೃಷ್ಟಿಗೆ ಪ್ರೇರಣೆ ನೀಡುತ್ತದೆ. ಇದು ಕ್ರಮೇಣ ಪ್ರಜ್ಞೆಯ ಮಟ್ಟವನ್ನು ಅಭಿವೃದ್ಧಿಪಡಿಸುತ್ತದೆ. ಸಮಾಜವನ್ನು ಬದಲಾಯಿಸಲು, ಸಮಾಜ ಎಂದರೇನು ಎಂದು ತಿಳಿದುಕೊಳ್ಳುವುದು ಅವಶ್ಯಕ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ಕಾವ್ಯವು ಸಹಾಯ ಮಾಡುತ್ತದೆ. ಅದು ನಿಮ್ಮನ್ನು ಬೆಳಗಿಸುತ್ತದೆ. ನಂತರ, ಕ್ರಮೇಣ, ಕಾವ್ಯವು ಮಾನವರಿಗೆ ಸೂಕ್ತವಾದ ಸಮಾಜವನ್ನು ನಿರ್ಮಿಸಲು ಕಲಿಸುತ್ತದೆ.
11. ನಿಮ್ಮನ್ನು ವ್ಯಕ್ತಪಡಿಸಲು ನೀವು ಸಾಹಿತ್ಯದ ಇತರೆ ಯಾವ ಪ್ರಾಕಾರಗಳನ್ನು ಬಳಸುತ್ತೀರಿ? ಮತ್ತು ನೀವು ಇಲ್ಲಿಯವರೆಗೆ ಯಾವ ಯಾವ ಪುಸ್ತಕಗಳನ್ನು ಪ್ರಕಟಿಸಿದ್ದೀರಿ? ಅವುಗಳಲ್ಲಿ ಕೆಲವನ್ನು ನೀವು ಉಲ್ಲೇಖಿಸಬಹುದೇ? 
ನಾನು ಪ್ರಧಾನವಾಗಿ ಕವಿ, ಆದರೆ ಎಲ್ಲವನ್ನೂ ಕಾವ್ಯದ ಮೂಲಕ ಹೇಳಬೇಕು ಎಂಬ ನಿಯಮವಿಲ್ಲ. ಅದಕ್ಕೇ ನಾನು ಪ್ರಬಂಧಗಳನ್ನೂ ಬರೆಯುತ್ತೇನೆ. ಇತ್ತೀಚೆಗೆ, ನನ್ನ ಪುಸ್ತಕಗಳಲ್ಲಿ ಒಂದಾದ "ಸಂಬೇಡಿ ಪ್ರಶ್ನೆ (ಸಂವೇದನಾಶೀಲ ಪ್ರಶ್ನೆಗಳು)” ಎಂಬ ಪ್ರಬಂಧ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದಲ್ಲಿ ನಾನು ಗೂರ್ಖಾ ಸಮಾಜ, ರಾಜಕೀಯ, ಶಿಕ್ಷಣ, ಕಲೆ ಮತ್ತು ಗೂರ್ಖಾ ಐಡೆಂಟಿಟಿ ಚಳುವಳಿಯನ್ನು ವಿಶ್ಲೇಷಿಸಿದ್ದೇನೆ. ನನ್ನ ಮೊದಲ ಕವನ ಸಂಕಲನ "ಬಿಂಬ ಗೋಷ್ಠಿ (ಪ್ರತಿಮೆಗಳ ಗೋಷ್ಠಿ)" ಯ ಮೂಲಕ ನಾನು ಸಮಯ ಮತ್ತು ಜೀವನದ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದೇನೆ. ನನ್ನ ಎರಡನೇ ಕವನ ಸಂಕಲನ "ಗೌಕ ರಂಗಾರು (ಗಾಯಗಳ ಬಣ್ಣಗಳು)" ಮೂಲಕ, ನಾನು ಯುವ ಜನರ ಕನಸುಗಳನ್ನು ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ಚಳುವಳಿಯೊಂದಿಗೆ ಜೋಡಿಸಿದ್ದೇನೆ. ನನ್ನ ಮೂರನೆಯ ಪುಸ್ತಕ "ಪಾಸಿನ ಕೋ ಚಲ (ಬೆವರಿನ ಚರ್ಮ)" ದ ಮೂಲಕ ರೈತರ ಅಸ್ಮಿತೆ, ಮಣ್ಣು ಮತ್ತು ದೇಶದ ನಡುವಿನ ವೈರುಧ್ಯಗಳನ್ನು ಪ್ರತಿಬಿಂಬಿಸಿದ್ದೇನೆ. ಇನ್ನೊಂದು ಪುಸ್ತಕ "ಅಕ್ಂಖಾ ಬಹಿರಾ (ಕಣ್ಣಿನ ಹೊರಗೆ)". ಇದರಲ್ಲಿ ಜನರನ್ನು ಹೇಗೆ ಯಂತ್ರಗಳನ್ನಾಗಿ ಮಾಡಲಾಗುತ್ತಿದೆ ಎಂದು ನಾನು ತಿಳಿಸಿದ್ದೇನೆ. "ಕಾಫೆರೆ ಅಮೇರಿಕಾ (ಹೇಡಿ ಅಮೆರಿಕಾ)” ಎಂಬ ಕವನ ಸಂಕಲನದಲ್ಲಿ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಾ ಅದು ಹೇಗೆ ಎಲ್ಲರನ್ನೂ ತುಳಿಯಲು ನೋಡುತ್ತಿದೆ ಎನ್ನುವದನ್ನು ಹೇಳಿದ್ದೇನೆ. ನಾನು ಗೂರ್ಖಾಗಳು ಮತ್ತು ಅವರ ದೇಶ, ಶಕ್ತಿ ಮತ್ತು ಜನರು, ಪ್ರಕೃತಿ ಮತ್ತು ನಿಗಮಗಳು, ಸಾಮಾನ್ಯ ಜನರು ಮತ್ತು ಕ್ರಮಾನುಗತತೆ ಬಗ್ಗೆ ಕವಿತೆಗಳನ್ನು ಬರೆದಿದ್ದೇನೆ. "ಲೈಫ್: ಎ ಬಟರ್ಫ್ಲೈ" ಎಂಬ ಸಣ್ಣ ಕಥಾ ಸಂಕಲನದಲ್ಲಿ, ಹಾರುವ ಜನರ ರೆಕ್ಕೆಗಳನ್ನು ಯಾರು ಕತ್ತರಿಸುತ್ತಾರೆ ಮತ್ತು ಹೇಗೆ ಎಂದು ನಾನು ವಿವರಿಸಿದ್ದೇನೆ. 
12. ನಿಮ್ಮ ಕವನ ಸಂಗ್ರಹದಿಂದ ಆಯ್ದ ನಿಮಗೆ ಇಷ್ಟವಾದ ಒಂದಿಷ್ಟು ಸಾಲುಗಳನ್ನು ಇಲ್ಲಿ ಉದ್ದರಿಸಬಹುದೆ? 
ಅನೇಕ ನೆಚ್ಚಿನ ಸಾಲುಗಳಿವೆ. ಉದಾಹರಣೆಗೆ:
• "ಹಲ್ಲುಗಳು ಹೊಡೆಯಲ್ಪಟ್ಟ ಮೊಳೆಗಳಂತೆ ಕಾಣುತ್ತವೆ, ಅವು ನಾಲಿಗೆಯನ್ನು ಕಾಪಾಡುತ್ತಿವೆಯೇ? ಅಥವಾ ಅದನ್ನು ಬಂಧಿಸಿಟ್ಟಿವೆಯೇ? ಗೊತ್ತಾಗುವದಿಲ್ಲ" 
• "ನಿಮ್ಮ ಅನ್ನದಲ್ಲಿ ಕಲ್ಲು ಸಿಕ್ಕರೆ ಕೋಪಗೊಳ್ಳಬೇಡಿ, ಎಲ್ಲವನ್ನೂ ಅಗಿಯುವವರಿಗೆ ಮಾತ್ರ ಇಂತಹವುಗಳು ಸಿಗುತ್ತವೆ."
• "ಇಲ್ಲಿ, ಪುಸ್ತಕಗಳನ್ನು ಸುಟ್ಟ ನಂತರ ಆಹಾರವನ್ನು ಬೇಯಿಸಲಾಗುತ್ತದೆ, ಇಲ್ಲಿ, ಪೆನ್ಸಿಲ್ ಸುಟ್ಟ ನಂತರ ಸಾರನ್ನು ತಯಾರಿಸಲಾಗುತ್ತದೆ. ದಾರ್ಶನಿಕನ ಪ್ರಭಾವಶಾಲಿ ಮಾತು ಪುಸ್ತಕದ ಬದಲಿಗೆ ತಟ್ಟೆಯನ್ನು ಒದಗಿಸುತ್ತದೆ; ಕವಿಯ ಕಾಲಾತೀತ ಸಾಲೊಂದು ಪೆನ್ಸಿಲ್ ಬದಲಿಗೆ ಚಮಚವನ್ನು ತರುತ್ತದೆ. ಇದು ಶಾಲೆಯಲ್ಲ; ಇದು ಅಡುಗೆಮನೆ."
ನಾನೇ ಇಷ್ಟಪಡುವ ಇಂತಹ ಹಲವು ಸಾಲುಗಳಿವೆ.
13. ಭಾವನೆಗಳನ್ನು ಬಲವಾಗಿ ಅನುಭವಿಸದಿದ್ದರೆ ಯಾರಾದರೂ ಬರಹಗಾರರಾಗಬಹುದು ಎಂದು ನೀವು ಭಾವಿಸುತ್ತೀರಾ? ವಿವರಿಸಿ.
ಒಮ್ಮೆ ಅರ್ನೆಸ್ಟ್ ಹೆಮಿಂಗ್ವೇ ಅವರನ್ನು ಕೇಳಲಾಯಿತು, "ನಾನು ನಿಮ್ಮಂತೆ ಬರಹಗಾರನಾಗಲು ಬಯಸುತ್ತೇನೆ; ನನಗೆ ಕೆಲವು ಸಲಹೆಗಳನ್ನು ನೀಡಿ." ಹೆಮಿಂಗ್ವೇ ಉತ್ತರಿಸಿದರು, "ನಿಮಗೆ ನೋವುಗಳಿವೆಯೇ? ನೋವುಗಳಿಲ್ಲದವರು, ನೋವನ್ನು ಅನುಭವಿಸಲಾರದವರು ಬರೆಯಲಾರರು. ಹೆಮಿಂಗ್ವೇ ಭಾವನೆಗಳ ಬಗ್ಗೆ ಮಾತನಾಡುತ್ತಿದ್ದರು. ಆ ಭಾವನೆಗಳನ್ನು ತೀವ್ರವಾಗಿ ಅನುಭವಿಸಲು ಸಾಧ್ಯವಾಗದವರು ಬರಹಗಾರರಾಗಲು ಸಾಧ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿ "ನಕಲಿ ಸಂವೇದನಾಶೀಲ ಬರಹಗಾರರು" ಸೇರಿದಂತೆ ಅನೇಕ ಬರಹಗಾರರಿದ್ದಾರೆ. ಬರವಣಿಗೆಯನ್ನು ಕಲಿಸುವ ಶಾಲೆಗಳೂ ಇವೆ. ಆದರೆ ಅವರು ಬರಹಗಾರರಾಗುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವವರೆಗೂ ಯಾರೂ ಬರಹಗಾರರಾಗಲು ಸಾಧ್ಯವಿಲ್ಲ. ಬರಹಗಾರ ಒಂದು ಕಣ್ಣು ಇದ್ದಂತೆ. ಯಾರ ಕಣ್ಣುಗಳು ಕೆಟ್ಟವೋ ಅವರು ಏನನ್ನೂ ನೋಡುವುದಿಲ್ಲ. ಏನನ್ನೂ ನೋಡದ ಬರಹಗಾರರು ಹೇಗೆ ಬರೆಯುತ್ತಾರೆ? ಅಂಥವರು ಸಮಾಜವನ್ನು ದಾರಿ ತಪ್ಪಿಸುತ್ತಾರೆ.
14. ನಿಮ್ಮ ಕಿರಿಯ ಉದಯೋನ್ಮುಖ ಕವಿಗಳಿಗೆ ಕೆಲವು ಸಲಹೆಗಳನ್ನು ನೀಡುವದಾದರೆ ಏನನ್ನು ನೀಡುತ್ತೀರಿ? 
ಕವನ ಬರೆಯುವುದು ಹವ್ಯಾಸವಲ್ಲ; ಇದು ಒಂದು ಜವಾಬ್ದಾರಿ. ಕಾವ್ಯವು ಒಂದು ಕಲೆ, ಕಲೆಯ ಉದ್ದೇಶವು ಜೀವನಕ್ಕಾಗಿ ಇರಬೇಕು. ಯಾರಾದರೂ ಕವಿತೆ ಬರೆಯುತ್ತಿದ್ದರೆ ಅವರು ಮೊದಲು ನೂರು ಕವಿತೆಗಳನ್ನು ಓದಿರಬೇಕು. ಮೊದಮೊದಲು ಯಾರ ಕವನವನ್ನೂ ಓದದೆ ನಾನು ಕವಿತೆಗಳನ್ನು ಬರೆಯುತ್ತಿದ್ದೆ. ಆದರೆ ನಾನು ಇತರರ ಕವಿತೆಗಳನ್ನು ಓದಲು ಪ್ರಾರಂಭಿಸಿದಾಗ, ನಾನು ಗಟ್ಟಿ ಕವಿತೆ ಎಂದರೆನು ಅದನ್ನು ತೀವ್ರವಾಗಿ ಅನುಭವಿಸಿ ಹೇಗೆ ಬರೆಯಬೇಕು ಎಂಬುದನ್ನು ಕಲಿತಿದ್ದೇನೆ. ನಿಮಗೆ ಏನನ್ನೂ ಕಲಿಸದ ಕವಿತೆ, ನಿನ್ನನ್ನು ಮುಟ್ಟದ ಕವಿತೆ ಯಶಸ್ವಿಯಾಗುವುದಿಲ್ಲ. ಆದ್ದರಿಂದಲೇ ಹೊಸ ಕವಿಗಳು ಜಗತ್ತಿನ ಗಟ್ಟಿ ಕವಿತೆಗಳನ್ನು ಓದಬೇಕು. ಹಿರಿಯ ಕವಿಗಳೊಂದಿಗೆ ಮಾತನಾಡಬೇಕು, ಕಾವ್ಯದ ಬಗ್ಗೆ ಪುಸ್ತಕಗಳನ್ನು ಓದಬೇಕು. 
15. ನಿಮ್ಮ ಪುಸ್ತಕ ವಿಮರ್ಶೆಗಳನ್ನು ನೀವು ಓದುತ್ತೀರಾ? ಕೆಟ್ಟ ಅಥವಾ ಒಳ್ಳೆಯದನ್ನು ನೀವು ಹೇಗೆ ಎದುರಿಸುತ್ತೀರಿ?
ಹೌದು, ನನ್ನ ಪುಸ್ತಕ ವಿಮರ್ಶೆಗಳನ್ನು ಓದುತ್ತೇನೆ. ಉತ್ತಮ ವಿಮರ್ಶೆಗಳು ಬರಹಗಾರರಿಗೆ ಮಾರ್ಗದರ್ಶನ ನೀಡುತ್ತವೆ. ಕೆಟ್ಟ ವಿಮರ್ಶೆಗಳು ಬರಹಗಾರನನ್ನು ಕೊಲ್ಲಬಹುದು. ಕೆಲಸವು ಪ್ರಬಲವಾಗಿದ್ದು ಅದಕ್ಕೆ ವಿಮರ್ಶೆಯೇ ಇಲ್ಲದಿದ್ದರೆ, ಅದು ಕೆಲಸವನ್ನು ಕೊಲ್ಲಬಹುದು. ವಿಮರ್ಶೆಯು ಪ್ರಬಲವಾಗಿದ್ದು ಮತ್ತು ಅದಕ್ಕೆ ತಕ್ಕಂತೆ ಕೃತಿಯು ಇಲ್ಲದಿದ್ದರೆ ಬರುಬರುತ್ತಾ ಆ ಬರಹಗಾರ ಸತ್ವವಿಲ್ಲದೆ ಸತ್ತೇ ಹೋಗಬಹುದು. ವಿಮರ್ಶೆ ಬರಹಗಾರನಿಗೆ ಗಟ್ಟಿಯಾಗಿ ಬರೆಯಲು ಶಕ್ತಿಯನ್ನು ನೀಡುತ್ತದೆ. ನಾನು ಇತರರ ಪುಸ್ತಕಗಳನ್ನು ಪರಿಶೀಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಬರಹಗಾರರು ಕೇವಲ ಹೊಗಳಿಕೆಯನ್ನು ಬಯಸುತ್ತಾರೆ ಮತ್ತು ಟೀಕೆಗಳನ್ನು ಸಹಿಸುವುದಿಲ್ಲ. ಹೊಗಳಿಕೆ ಸಾಯಿಸುತ್ತದೆ, ಟೀಕೆ ನಿಮ್ಮನ್ನು ಬದುಕಿಸುತ್ತದೆ ಎಂಬುದು ನನ್ನ ನಂಬಿಕೆ. ಪ್ರಶಂಸೆ ತುಂಬಿದ ವಿಮರ್ಶೆಗಳು ನನಗೆ ಇಷ್ಟವಿಲ್ಲ.
16. ಸಾಹಿತ್ಯಿಕ ಯಶಸ್ಸು ನಿಮಗೆ ಹೇಗೆ ಕಾಣುತ್ತದೆ?
ಒಬ್ಬ ಬರಹಗಾರ ಓದುಗರಿಗೆ ತಿಳುವಳಿಕೆಯನ್ನು ನೀಡಿದಾಗ, ಅವರನ್ನು ಯೋಚಿಸುವಂತೆ ಮಾಡಿದಾಗ, ಅವರಿಗೆ ಏನನ್ನಾದರು ಕಲಿಸಿದಾಗ, ಅವರು ಪ್ರಬುದ್ಧರಾಗಲು ಸಹಾಯ ಮಾಡಿದಾಗ ಮಾತ್ರ ಅವನೊಬ್ಬ ಯಶಸ್ವಿ ಬರಹಗಾರನಾಗುತ್ತಾನೆ. ಆದರೆ ಯಶಸ್ವಿ ಬರಹಗಾರರು ಅಹಂಕಾರಿಯಾಗುವುದನ್ನು ನಾನು ಗಮನಿಸಿದ್ದೇನೆ. ಕಡಿಮೆ ಯಶಸ್ಸಿನ ಬರಹಗಾರರ ಕಡೆಗೆ ಅವರ ನಡವಳಿಕೆಯು ಉತ್ತಮವಾಗಿಲ್ಲ. ಶ್ರೇಣಿಗಳನ್ನು ಸೃಷ್ಟಿಸಿ ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುವ ಯಶಸ್ವಿ ಬರಹಗಾರರನ್ನು ನಾನು ಇಷ್ಟಪಡುವುದಿಲ್ಲ. ಕೃತಿಗಳನ್ನು ಬಡವರು, ಶ್ರೀಮಂತರು, ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರೂ ಸಮಾನವಾಗಿ ಓದುತ್ತಾರೆ. ಆ ಕೃತಿಗಳ ಬರಹಗಾರರು ಅವರ ನಡವಳಿಕೆಯಲ್ಲಿ ಜನರನ್ನು ವರ್ಗೀಕರಿಸಿದರೆ, ಅವರು ನನಗೆ ಯಶಸ್ವಿ ಬರಹಗಾರರು ಎನಿಸುವದಿಲ್ಲ. ನಾನು ಯಶಸ್ವಿ ಬರಹಗಾರನಾಗಲು ಬಯಸುವುದಿಲ್ಲ; ನಾನು ಬರೆಯಲು ಬಯಸುತ್ತೇನೆ, ಮತ್ತು ಬರೆಯುತ್ತಲೇ ಇರುತ್ತೇನೆ. 
17. ನೀವು ನೇಪಾಳದ ಗೂರ್ಖಾ ಸಮುದಾಯಕ್ಕೆ ಸೇರಿದವರು, ಆದರೆ ಪ್ರಸ್ತುತ ಭಾರತದ ಡಾರ್ಜಿಲಿಂಗ್ನಲ್ಲಿ ವಾಸಿಸುತ್ತಿದ್ದೀರಿ. ನಿಮ್ಮ ಮೂಲದ ಸ್ಥಳದೊಂದಿಗೆ ನಿಮ್ಮ ಗುರುತನ್ನು ಸಮನ್ವಯಗೊಳಿಸುವ ಸವಾಲನ್ನು ನೀವು ಹೇಗೆ ಎದುರಿಸುತ್ತೀರಿ? ಈ ಹೋರಾಟವನ್ನು ನಿಮ್ಮ ಕಾವ್ಯದಲ್ಲಿ ಅನ್ವೇಷಿಸಿದ್ದೀರಾ?
ನಾನು ನೇಪಾಳಿ-ಮಾತನಾಡುವ ಕವಿ, ಭಾರತದ ಪಶ್ಚಿಮ ಬಂಗಾಳದ ಗುಡ್ಡಗಾಡು ಜಿಲ್ಲೆಯ ಡಾರ್ಜಿಲಿಂಗ್ನ ನಿವಾಸಿ. ನಾನು ನೇಪಾಳಿ-ಮಾತನಾಡುವ ಗೂರ್ಖಾ ಕವಿ ಎಂದು ಗುರುತಿಸಿದಾಗ, ನಾನು ನೇಪಾಳದ ಕವಿ ಎಂದು ಹಲವರು ಊಹಿಸುತ್ತಾರೆ. (ನಗುತ್ತಾ...) ನೀವೂ ಆ ಊಹೆ ಮಾಡಿದ್ದೀರಿ. ಇದು ನಿಮ್ಮ ತಪ್ಪು ಅಲ್ಲ.
ನಾನು ಗೂರ್ಖಾ; ನೇಪಾಳಿ ನನ್ನ ಮಾತೃಭಾಷೆ. ನಾನು ಭಾರತದ ಪ್ರಜೆ. ನೇಪಾಳ ಅಲ್ಲ. ಭಾರತ ಪ್ರತ್ಯೇಕ ದೇಶ, ನೇಪಾಳ ಪ್ರತ್ಯೇಕ ದೇಶ. ಭಾರತದಲ್ಲಿ ನೆಲೆಸಿರುವ ವಿವಿಧ ಭಾಷಿಕ ಸಮುದಾಯಗಳಲ್ಲಿ ನಾನೂ ಒಬ್ಬ, ನೇಪಾಳಿ ಮಾತನಾಡುವ ಗೂರ್ಖಾ. ನಾನು ಇಲ್ಲಿ ಗೂರ್ಖಾಗಳ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ.
ಗೂರ್ಖಾಗಳನ್ನು ಪ್ರಾಥಮಿಕವಾಗಿ ಯೋಧರು ಎಂದು ಕರೆಯಲಾಗುತ್ತದೆ. ಈ ಗುರುತು ಬ್ರಿಟಿಷರು ಮತ್ತು ನಮ್ಮ ದೇಶದ ಮುಖ್ಯವಾಹಿನಿಯ ಚಿಂತನೆಯ ಉತ್ಪನ್ನವಾಗಿದೆ. ಅವರು ನಮಗೆ ''ಧೈರ್ಯಶಾಲಿ' ಎಂದು ಹಣೆಪಟ್ಟಿ ಕಟ್ಟಿದರು, ನಾವು 'ಬಂದೂಕುಗಳ ಬದಲಿಗೆ ಖುಕುರಿಗಳೊಂದಿಗೆ ಹೋರಾಡುತ್ತೇವೆ. ಹಾಗಾಗಿ ನಮ್ಮನ್ನು ಯುದ್ಧಗಳಿಗೆ ತಳ್ಳಿದರು. ನಮ್ಮ ಪೂರ್ವಜರು ಸೌಮ್ಯವಾಗಿದ್ದರು, ಆದ್ದರಿಂದ ಅವರು ಬಂದ ಆದೇಶಗಳನ್ನು ಅನುಸರಿಸಿದರು.
ಸ್ಯಾಮ್ ಬಹದ್ದೂರ್ ಎಂದೂ ಕರೆಯಲ್ಪಡುವ ಫೀಲ್ಡ್ ಮಾರ್ಷಲ್ ಮಾಣೆಕ್ಷಾ ಅವರು ಒಮ್ಮೆ ಹೇಳಿದ್ದರು: 'ಒಬ್ಬ ವ್ಯಕ್ತಿಗೆ ಸಾಯುವ ಭಯವಿಲ್ಲದಿದ್ದರೆ, ಅವನು ಸುಳ್ಳು ಹೇಳುತ್ತಾನೆ, ಅಥವಾ ಅವನು ಗೂರ್ಖಾ ಆಗಿರುತ್ತಾನೆ. 
ಆದರೆ, ನಿಮ್ಮಂತೆಯೇ ಗೂರ್ಖಾಗಳಿಗೂ ಭಯವಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಪ್ರಾಚೀನ ಕಾಲದಿಂದಲೂ ಗೂರ್ಖಾಗಳು ತಮ್ಮ ಶೌರ್ಯ, ಈ ದೇಶದ ಸ್ವಾತಂತ್ರ್ಯ ಮತ್ತು ಅದರ ಗಡಿಗಳ ರಕ್ಷಣೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.ಆದರೆ, ವಿಪರ್ಯಾಸವೆಂದರೆ ಆ ದೇಶದಲ್ಲಿಯೇ ಗೂರ್ಖಾಗಳಿಗೆ ಯಾವುದೇ ಗುರುತು ಇಲ್ಲ. ನಮ್ಮ ಮುಖ್ಯವಾಹಿನಿಯಲ್ಲಿ ಗೂರ್ಖಾಗಳಿಗೆ ಸ್ಥಾನವಿಲ್ಲ.
ಸುಮಾರು 15 ಮಿಲಿಯನ್ ಗೂರ್ಖಾಗಳು ಈ ದೇಶದಲ್ಲಿ ವಾಸಿಸುತ್ತಿದ್ದಾರೆ, ಆದರೆ ಅವರ ಗುರುತು ಏನು ಎಂದು ಯಾರಿಗೂ ತಿಳಿದಿಲ್ಲ. ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯು ಸಹ ಗೂರ್ಖಾಗಳನ್ನು ಉದ್ದೇಶಿಸಿಯೇ ಇಲ್ಲ.
ದಕ್ಷಿಣ ಭಾರತದಲ್ಲಿ ತಯಾರಾದ 'ಗೂರ್ಖಾ' ಎಂಬ ಚಲನಚಿತ್ರವೂ ಗೂರ್ಖಾಗಳನ್ನು ಧೈರ್ಯಶಾಲಿ ಮತ್ತು ರಕ್ಷಕರೆಂದು ಬಿಂಬಿಸುತ್ತದೆ. ಆದರೆ ಈ ದೇಶದಲ್ಲಿ ರಕ್ಷಕರೆಂದು ಹೆಸರಾದವರು ತಾವೇ ಅಭದ್ರವಾಗಿರುವುದು ಅಷ್ಟೇ ಸತ್ಯ.
ಪಶ್ಚಿಮ ಬಂಗಾಳದ ನಾಗರಿಕರು ಬಾಂಗ್ಲಾದೇಶವನ್ನು ವಿದೇಶಿ ಎಂದು ಪರಿಗಣಿಸುವಂತೆ ನಾವು ನಮ್ಮ ನೆರೆಯ ನೇಪಾಳವನ್ನು ವಿದೇಶಿ ಎಂದು ಪರಿಗಣಿಸುತ್ತೇವೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಎರಡೂ ಬಂಗಾಳಿ ಮಾತನಾಡುತ್ತವೆ. ಆದರೆ ಪಶ್ಚಿಮ ಬಂಗಾಳದ ನಾಗರಿಕರು ಬಾಂಗ್ಲಾದೇಶಿಗಳಲ್ಲ. ಹಾಗೆಯೇ, ನಾವು ಪಶ್ಚಿಮ ಬಂಗಾಳದಲ್ಲಿ ನೇಪಾಳಿ ಮಾತನಾಡುತ್ತೇವೆ ಮತ್ತು ನೇಪಾಳದಲ್ಲಿ ನೇಪಾಳಿ ಮಾತನಾಡುತ್ತಾರೆ. ಆದರೆ ನಾವು ನೇಪಾಳದ ಪ್ರಜೆಗಳಲ್ಲ.
ಆದ್ದರಿಂದ, ಈ ಒಕ್ಕೂಟ ದೇಶದಲ್ಲಿ, ನಾವು, ಗೂರ್ಖಾಗಳು ಸಹ ಪ್ರತ್ಯೇಕ ಗುರುತನ್ನು ಹೊಂದಿರಬೇಕು. ಈ ಬೇಡಿಕೆಯೊಂದಿಗೆ 1980 ರ ದಶಕದಿಂದಲೂ ನಾವು ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಆದರೆ ಇಂದಿಗೂ ನಮಗೆ ನ್ಯಾಯ ಸಿಕ್ಕಿಲ್ಲ.
ಹಾಗಾಗಿಯೇ ನೇಪಾಳಿ ಸಾಹಿತ್ಯದ ಮುಖ್ಯ ಧ್ವನಿಯು ಗುರುತಿನ ಪ್ರಶ್ನೆಯೊಂದಿಗೆ ತೀವ್ರ ಸಂಬಂಧವನ್ನು ಹೊಂದಿದೆ. ನನ್ನ ಕವಿತೆಗಳ ಮುಖ್ಯ ವಿಷಯವು ಗೂರ್ಖಾ ಗುರುತಿನ ಸಮಸ್ಯೆಗೆ ಸಂಬಂಧಿಸಿದೆ.
1815 ರ ಮೊದಲು, ನಾವು ನೇಪಾಳದ ಪ್ರಜೆಗಳಾಗಿದ್ದೇವೆ, ಆದರೆ ಬ್ರಿಟಿಷ್ ಭಾರತವು ನೇಪಾಳದಿಂದ ಹೆಚ್ಚಿನ ಭೂಪ್ರದೇಶವನ್ನು ತೆಗೆದುಕೊಂಡಿತು. ಇತಿಹಾಸದ ಪ್ರಕಾರ, ಶಿಮ್ಲಾ, ಮಸ್ಸೂರಿ, ನೈನಿತಾಲ್, ಅಲ್ಮೋರಾ, ರಾನಿಖೇತ್, ಡೆಹ್ರಾಡೂನ್, ಸಿಕ್ಕಿಂ, ಡಾರ್ಜಿಲಿಂಗ್, ಜಲ್ಪೈಗುರಿ ಮತ್ತು ಬಿಹಾರದ ಕೆಲವು ಭಾಗಗಳು, ಈ ಎಲ್ಲಾ ಪ್ರದೇಶಗಳನ್ನು ನಮ್ಮಿಂದ ತೆಗೆದುಕೊಳ್ಳಲಾಗಿದೆ. ಅಂದಿನಿಂದ ನಾವು ಭಾರತದಲ್ಲಿ ಇದ್ದೇವೆ.
ದೇಶವು ಸ್ವತಂತ್ರವಾದ ನಂತರ, ಎಲ್ಲಾ ಪ್ರದೇಶಗಳಿಗೆ ಸಂವಿಧಾನದಲ್ಲಿ ಸ್ಥಾನ ನೀಡಲಾಯಿತು, ಆದರೆ ನಮ್ಮನ್ನು ಪಶ್ಚಿಮ ಬಂಗಾಳದಲ್ಲಿ 'ಅಬ್ಸಾರ್ಬ್ಡ್ ಏರಿಯಾಸ್ ಆಕ್ಟ್-1954' ಅಡಿಯಲ್ಲಿ ಇರಿಸಲಾಯಿತು. ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಮಾಜವು ಬಂಗಾಳಿ ಮೂಲದೊಂದಿಗೆ ಯಾವುದೇ ಹೊಂದಾಣಿಕೆಯನ್ನು ಹೊಂದಿಲ್ಲ. ಹಿಂದೆ ನಮ್ಮ ದೊರೆಗಳು ಬ್ರಿಟಿಷರು, ಈಗ ಅದು ಬಂಗಾಳ. ಆಡಳಿತಗಾರರು ಬದಲಾಗಿದ್ದಾರೆ, ಆದರೆ ನಾವು ಬದಲಾಗಿಲ್ಲ.
ನಮ್ಮ ಜನರಿಗೆ ಯಾವುದೇ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಿಲ್ಲ. ಡಿಎಂ ಬಂಗಾಳದಿಂದ ಬರುತ್ತಾರೆ, ಎಸ್ಪಿ, ವೈದ್ಯರು, ಎಲ್ಲರೂ ಬಂಗಾಳದಿಂದ ಬಂದವರು. ನಾವು ಅವರ ಆಳ್ವಿಕೆಯಲ್ಲಿದ್ದೇವೆ. ನಾವು ನಮ್ಮವರೇ ಆಳಬೇಕು ಎಂದು ಬಯಸುತ್ತೇವೆ. ಆದರೆ ಸರ್ಕಾರಗಳು ನಮ್ಮ ಮಾತು ಕೇಳುವುದಿಲ್ಲ. ಆದ್ದರಿಂದಲೇ ನನ್ನ ಕವಿತೆಗಳು ಭಾಷಾ ಪ್ರಾಬಲ್ಯ, ಸಾಂಸ್ಕೃತಿಕ ಪ್ರಾಬಲ್ಯ, ರಾಜಕೀಯ ಪ್ರಾಬಲ್ಯ ಮತ್ತು ಆಡಳಿತದ ಪ್ರಾಬಲ್ಯದಿಂದ ಉದ್ಭವಿಸುವ ಮನೋವಿಜ್ಞಾನವನ್ನು ವ್ಯಕ್ತಪಡಿಸುತ್ತಿವೆ.
ನಿಮ್ಮ ಭಾಷೆ ಅಂಚಿನಲ್ಲಿರುವಾಗ, ಅದು ಸಭ್ಯವಾಗಿರುವುದಿಲ್ಲ, ಬದಲಿಗೆ ಆಕ್ರಮಣಕಾರಿಯಾಗಿರುತ್ತದೆ. ನಿಮ್ಮ ಸಮಾಜವು ಅಂಚಿನಲ್ಲಿರುವಾಗ, ಅದು ಸಭ್ಯವಾಗಿರುವುದಿಲ್ಲ, ಬದಲಿಗೆ ಉದ್ರೇಕಗೊಳ್ಳುತ್ತಿರುತ್ತದೆ. ಇದರಿಂದಾಗಿಯೇ ನನ್ನ ಕವಿತೆಗಳ ಸ್ವರೂಪ ಆಕ್ರಮಣಕಾರಿ ಮತ್ತು ಉದ್ರೇಕಕಾರಿಯಾಗಿರುತ್ತವೆ. 
ಗೂರ್ಖಾಲ್ಯಾಂಡ್ಗಾಗಿ ಎರಡು ಪ್ರಮುಖ ಚಳುವಳಿಗಳು ನಡೆದವು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ಅನೇಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಚಳವಳಿಯನ್ನು ಹತ್ತಿಕ್ಕಿದವು. ನಮ್ಮ ಕವಿತೆಗಳು ಈ ಅಧಿಕಾರದ ದಬ್ಬಾಳಿಕೆಯನ್ನು ವಿರೋಧಿಸುತ್ತವೆ. ದೇಶದಲ್ಲಿ ಗೂರ್ಖಾಗಳ ಗುರುತನ್ನು ಖಾತ್ರಿಪಡಿಸಬೇಕು ಎಂಬುದು ನಮ್ಮ ಬಯಕೆ.
18. ಕೊನೆಯದಾಗಿ ಒಂದು ಪ್ರಶ್ನೆ. ಈಗ ನೇಪಾಳದಲ್ಲಿ ನೇಪಾಳಿಗರ ಮತ್ತು ನಿಮ್ಮ ಗೂರ್ಖಾ ಸಮುದಾಯದವರ ಒಟ್ಟಾರೆ ಜೀವನ ಸ್ಥಿತಿ ಹೇಗಿದೆ?
ಬ್ರಿಟಿಷರು 18ನೇ ಶತಮಾನದಲ್ಲಿ ಡಾರ್ಜಿಲಿಂಗ್ಗೆ ಬಂದರು. ಅವರು ಬರುವ ಮೊದಲು ಸ್ಥಳೀಯರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬ್ರಿಟಿಷರು ಬಂದ ನಂತರ ಅವರು ಚಹಾ ಕೃಷಿಯನ್ನು ಪ್ರಾರಂಭಿಸಿದರು. ನಂತರ ಸ್ಥಳೀಯರು ಕಾರ್ಮಿಕರಾಗಿ ಪರಿವರ್ತನೆಗೊಂಡರು. 200ಕ್ಕೂ ಹೆಚ್ಚು ವರ್ಷಗಳಿಂದ ಕೂಲಿ ಕಾರ್ಮಿಕರಾಗಿದ್ದರೂ ಸ್ಥಳೀಯರು ಇಂದಿಗೂ ಬಡವರೇ.
ಪ್ರಸ್ತುತ ಕೂಲಿ ಕಾರ್ಮಿಕರ ದಿನದ ಕೂಲಿ 250 ರೂ. ಕನಿಷ್ಠ ಕೂಲಿಯೂ ಜಾರಿಯಾಗಿಲ್ಲ. ಆದರೆ, ಒಂದು ಕಿಲೋಗ್ರಾಂ ಚಹಾದ ಬೆಲೆ 50,000 ರೂಪಾಯಿಗಳು. ಇದು ಕಾರ್ಮಿಕರ ಶೋಷಣೆಯ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಚಹಾವು ಪಶ್ಚಿಮ ಬಂಗಾಳದ ಮುಖ್ಯ ಆದಾಯದ 30-ಪ್ರತಿಶತವನ್ನು ನೀಡುತ್ತದೆ. ಡಾರ್ಜಿಲಿಂಗ್ನ ಆರ್ಥಿಕತೆಯು ಚಹಾ, ಮರ ಮತ್ತು ಪ್ರವಾಸೋದ್ಯಮದಿಂದ ಸುಸ್ಥಿರವಾಗಿದೆ. ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ರಚನೆಯಾದರೆ ಈ ರಾಜ್ಯ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ. ಆದರೆ ಡಾರ್ಜಿಲಿಂಗ್ ಗಡಿ ಪ್ರದೇಶವಾಗಿದ್ದು, ಚೀನಾ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ಸಮೀಪದಲ್ಲಿದೆ. ಹೀಗಾಗಿ ಗಡಿ ಭಾಗದಲ್ಲಿ ಅಶಾಂತಿ ಉಂಟಾಗುವುದು ಸರ್ಕಾರಕ್ಕೆ ಬೇಕಾಗಿಲ್ಲ, ಹಾಗಾಗಿ ನಮ್ಮ ಎಲ್ಲ ಚಲನವಲನಗಳನ್ನು ಹತ್ತಿಕ್ಕಲಾಗಿದೆ.
ಗೂರ್ಖಾಗಳನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ಇರಿಸಿದರೆ, ಅವರು ತಮ್ಮ ಅಸ್ಮಿತೆಗಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿದಿದೆ. ಆದ್ದರಿಂದ, ಆರ್ಥಿಕ ಶೋಷಣೆ ಹೇರಳವಾಗಿದೆ. ಇದರಿಂದ ವಿದ್ಯಾವಂತ ಯುವಕರು ವಲಸಿಗರಾಗುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಕೇವಲ ಆರ್ಥಿಕ ಶೋಷಣೆಯನ್ನು ನಡೆಸುತ್ತಿಲ್ಲ, ಆದರೆ ಭಾಷಾ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯನ್ನೂ ನಡೆಸುತ್ತಿದೆ. ಆದ್ದರಿಂದ ಗೂರ್ಖಾಗಳ ಜೀವನಮಟ್ಟ ಬಿಕ್ಕಟ್ಟಿನಲ್ಲಿದೆ.
ನನಗೆ ಈಗ ಗೊತ್ತಾಯಿತು. ನಿಮ್ಮ ಕವನಗಳು ಯಾಕೆ ಸದಾ ಆರ್ಭಟಿಸುತ್ತಿರುತ್ತವೆ ಹಾಗೂ ಬೆಂಕಿಕೆಂಡಗಳನ್ನೇ ಉಗುಳಿತ್ತಿರುತ್ತವೆ ಎಂದು. ಬೊಗಾಟಿಯವರೇ, ಇಷ್ಟೊತ್ತು ನಿಮ್ಮೊಂದಿಗೆ ಮಾತನಾಡಿದ್ದು ತುಂಬಾ ಖುಷಿ ಕೊಟ್ಟಿತು. ನಿಮ್ಮ ಕನಸುಗಳು ಆಶೋತ್ತರಗಳೆಲ್ಲವೂ ಈಡೇರಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
***
One should not be afraid to speak in favour of humanity (A conversation with renowned revolutionary Nepali language poet Mr. Manoj Bogati)
 
1.	Hello, Mr Bogati. can you tell me something about your childhood and both personal and professional backgrounds?
Personal Background: 
I am a Nepali-speaking Gorkha from the Darjeeling district of West Bengal state. I was born on July 16, 1979, in a small village in Darjeeling where cinchona, a medicinal plant used to make malaria medicine, is cultivated. Due to being born into an unemployed and lower-class family, there were financial difficulties, so I couldn't get much education. I only passed secondary school. I have three younger sisters. My father had tuberculosis. He passed away. So, the responsibility of running the household fell on me. Therefore, my childhood was very challenging. Time taught me to understand life and society. My house is on the border of India and Bhutan. In 1990, Nepali speakers were expelled from Bhutan. I wrote my first poem about this in 1996, and that's where my poetry writing began.
Professional Background: 
I work as a journalist in Darjeeling. I have worked and am still working in many Nepali daily newspapers in the Nepali language. Currently, I run my own digital media on social platforms. Since 2017, I have been operating a media house called Khabar Magazine. My writing continues alongside. I have published six poetry collections, a short story collection, an essay collection, and translated a novel. In 2012, I received the Sahitya Akademi Yuva Puraskar for my long poem "Ghauka rangharu (Wounds' Colors.) Writing and journalism go hand in hand.
2.	What are the factors that influenced you to become a poet/writer?  
Since I gained knowledge about literature, I searched and read various literary magazines and read the works of many poets and writers. While reading them, I realized that poets or writers can express their thoughts through writing. From the beginning, I have been writing about myself and society. I was conveying my experiences to the society where people like me—the lower class—live. Perhaps my readers found their own pain in the poems I wrote. Not everyone can express themselves artistically through words, so I wrote in the language of their pain. This is how my writing reflected my society. The lower-class society and its pain, which I experienced, made me a writer and poet.
3.	What was your first literary reading, Mr. Bogati?
I was born in a place where literary books other than school syllabi were not available. I learned to write poetry by reading poems in textbooks. At that time, two Nepali daily newspapers were published. I got the idea to write poetry by reading the poems and stories printed in those newspapers. On October 10, 1996, a story titled " Sapana (Dream) was published in the daily newspaper "Aaj Bholi." That was my first published work, in which I wrote about the pain of being unemployed and from a lower class. On October 16, 1996, my first poem, Ghar Farkanalai (To Return Home,) was published in the daily newspaper "Sagarmatha." That was my first published poem.
4.	Does writing energize or exhaust you? 
Poetry is the artistic language of human beings. People all over the world understand this language. Nature also understands the language of poetry. Poetry gives proof of being alive, of being sentient, to humans, so I like to write poetry.
I don't write anything for time-passing or self-indulgence. I'm a writer with a sense of responsibility. I only write when my inner consciousness urges me to, whether it's a poem, story, essay, or article. There's always a purpose to my writing. I write purposefully. Writing energizes me, and I write with the awareness that readers should also receive that energy. Writing never tires a true writer.
5.	Mr. Bogati, what is poetry? How would you define it?  
Poetry is the language of the unexpressed consciousness of humans. When I read poetry, I find many dimensions of looking at life and society. Poetry teaches one to be enlightened. Poetry teaches one to be human. Poetry is a mirror where your face is seen. Not only the face is seen, but also the entire aesthetics that the face carries. If there is no poetry, there is no rhythm of life. There is no rhythm of the world. If there is no poetry, the presence of humans is not felt. Poetry is the discipline of life. It's just that some express and follow it, and some follow it without expressing it. Those who can express it may have become poets, and those who cannot may have become readers.
6.	Your poems are always as impactful as a whip and you are unafraid and able to confront anyone through your poems.  How do you manage it? 
Poetry is the spokesperson of humans. When you recognize the contradictions of society, if you are a poet, you first seek the safety of life amidst those contradictions. One should not be afraid to speak in favour of humans. A fearful poet teaches society to be fearful and teaches life and society to be compromising. Everyone is equal as humans, but in society, people are divided into classes. The smaller classes have to be governed by the larger classes. Power is a society that classifies people, but poetry does not accept this tradition. Poetry says everyone is equal. Therefore, poetry first fights against the practice of classifying people. I fight in the same way. The language of warriors is not as loving as that of lovers; it is revolutionary like that of warriors. That's why the voice of my poetry is a committed voice. After making poetry a discipline of living, whatever work I do, whether it is journalism or poetry writing, that discipline keeps me connected to my roots. Poetry manages all these things.
7.	What has been the toughest criticism you have received as a poet? What has been the best   compliment that you have ever received?
My critics say I inject politics into everything. They say I could write about other things besides politics. To some extent, I accept that. My admirers say I'm skilled at giving an artistic voice to the language of ordinary people, and to some extent, I accept that too. But I respect criticism more than praise.
8.	You are reportedly have eleven cases filed against yourself. What for are you charged with these cases?
The West Bengal government and the Darjeeling regional administration have filed 17 cases against me. Numerous dams have been built on the Teesta River. The dam has prevented the river from being a river. Nature has been exploited. In the meantime, a dam broke, and it swept away the houses of our people living on the banks of the Teesta River, taking many people with it, but the governments did not provide them with any compensation. I continuously raised my voice about this. When I went to the field to report, exposing the government's insensitivity and intentions with facts, I was subjected to a deadly attack. After that, suo moto cases are being filed against me continuously to suppress my voice. They want me not to expose the exploitation and conspiracy of the power to the people, but whether it is poetry or journalism, I am doing both only for the society. I cannot compromise. That's why police cases are being filed to suppress my voice.
9.	It is said that poetry can never be sold out. How far is it true in your case?
The original voice of poetry is not for sale. As for books, you have to invest to publish a book, and you need a market to reach readers. I don't sell my poetic pride, but I sell poetry books. If a poet is giving something through poetry, then the reader must also pay its price.
10.	 Do you think that your poems can change the society? If so, how? 
Poetry does not change society immediately, but it gives a perspective to see things. It teaches one to understand whether this society is worthy of living as a human being. Poetry inspires the creation of good people and a good society. It gradually develops the level of consciousness. To change society, it is necessary to know what society is, and poetry helps to understand that society. It enlightens you. Then, gradually, poetry teaches to build a society suitable for humans.
11.	What other forms of literature do you use to express yourself? And how nay books have you published so far? Can you mention a few of them? 
I am primarily a poet, but there is no rule that everything must be said through poetry. That's why I also write essays. Recently, one of my books, an essay collection called Sambedi prashna (Sensible Questions,) has been released. In this book, I have analyzed the Gorkha society, politics, education, art, and the Gorkha identity movement. My first poetry collection is "Bimba gosthi (Symbolic Discourse)" Through this, I have analyzed the relationship between time and life. My second poetry book is "Ghauka Rangharu (Wounds' Colors.)" Through this, I have connected the dreams of young people with the movement for a separate state of Gorkhaland. My third book is "Pasina Ko chala (Skin of Sweat.)" In this, I have reflected on the identity of farmers, the contradictions between soil and country. Another book is "Aknkha Bahira (Outside the Eyes.)" In this, I have contemplated how people are being made into machines. In the book "Kafere America," I have written poems about Gorkhas and the country, power and people, nature and corporations, common people and hierarchy. In the short story collection "Life: A Butterfly," I have considered who cuts the wings of people who fly and how. I write in the genre that I find easy to express myself.
  12. What are your favourite lines from your collection of poetry?
       There are many favourite lines. For example:
•	"The teeth look like nails hammered in, are they guarding the tongue, or have they imprisoned it?"
•	"Don't get angry when a stone is found in your rice, such things happen to those who chew everything."
•	"Here, food is cooked after books are burned, here; lentils are cooked after pencils are burned. A strong sentence from a philosopher carries a plate instead of a book; a timeless line from a poet carries a spoon instead of a pencil. This isn't a school; it's a kitchen."
       There are many such lines that I myself love.
   13.  Do you think someone could be a writer if they do not feel emotions strongly? Explain
Ernest Hemingway was asked, "I want to become a writer like you; give me some tips." Hemingway replied, "Do you have wounds?" Those who don't have wounds, who haven't experienced pain, cannot write. Hemingway was talking about emotions. Those who can't strongly feel those emotions can't become writers. There are many writers in the market now, including "fake conscious" writers. There are also schools that teach writing. But until they understand the purpose of being a writer, they can't become writers. A writer is an eye. Those whose eyes are bad can't see anything. Writers who can't see anything mislead society.
14. Share some advice for budding poets. What advice would you give to your younger ones?
Writing poetry is not a hobby; it's a responsibility. Poetry is an art, and the purpose of art should be for life. If someone is writing a poem, they should have read a hundred poems. Initially, I didn't read anyone's poetry, but I wrote poems. But when I started reading others' poems, I learned about strong poetry. A poem that doesn't teach you anything, a poem that doesn't touch you, is not successful. That's why new poets should read the world's strong poems, talk to senior poets, read books about poetry. They can ask good poets for book and poem recommendations.
15. Do you read your book reviews? How do you deal with bad or good ones?
I read my book reviews. Good reviews guide the writer. Bad reviews can kill the writer. If the work is strong and the review isn't, it can kill the work. If the review is strong and the work isn't, it energizes the writer to write strongly. I myself review other people's books. These days, most writers only want praise and don't tolerate criticism. My belief is that praise kills, criticism keeps you alive. I don't like praise-filled reviews.
16.  What does literary success look like to you?
A writer becomes successful when their work excites the reader. A writer becomes successful when their work makes the reader think, teaches them something. A writer becomes successful when their work helps the reader become more enlightened. But I've noticed that successful writers become arrogant. Their behavior towards less successful writers isn't good. I don't like successful writers who create hierarchies and show off their status. Works are read equally by everyone, rich and poor, big and small. If the writer of those works categorizes people in their behavior, then they're not successful writers to me. I don't want to be a successful writer; I just want to write. Keep writing
17.	You belong to the Gorkha community in Nepal, but currently reside in Darjeeling, India. How do you deal with the challenge of reconciling your identity with your place of origin? Have you explored this struggle in your poetry?
I am a Nepali-speaking poet, a resident of Darjeeling, a hilly district in West Bengal, India. When I'm identified as a Nepali-speaking Gorkha poet, many assume I'm a poet from Nepal. You also made that assumption. It's not your fault.
I am a Gorkha; Nepali is my mother tongue. I am a citizen of India, not Nepal. India is a separate country, and Nepal is a separate country.
I am one of the various linguistic communities residing in India, the Gorkhas who speak Nepali. I would like to tell you a little about the Gorkhas here.
Gorkhas are primarily known as warriors. This identity is a product of the British and our country's mainstream thinking. They labeled us 'brave,' saying we 'fight with khukuris instead of guns,' and pushed us into wars. Our ancestors were simple, so they followed whatever orders came.
Field Marshal Manekshaw, also known as Sam Bahadur, once said, 'If a person isn't afraid of dying, then either he's lying, or he's a Gorkha.'
But, let me tell you that Gorkhas also feel fear, just like you do.
Gorkhas have given their bravery, their blood, and their contribution to this country's freedom and the defense of its borders since ancient times.
But, ironically, Gorkhas have no identity in that very country. There is no place for Gorkhas in our mainstream.
About 15 million Gorkhas live in this country, but no one knows what their identity is.
Our country's federal system has never addressed the Gorkhas.
Even a film called 'Gorkha' made in South India portrays Gorkhas as brave and protectors. But the truth is that those who are known as protectors in this country are themselves insecure.
We consider our neighboring country Nepal as foreign, just as citizens of West Bengal consider Bangladesh as foreign. Both West Bengal and Bangladesh speak Bengali, but citizens of West Bengal are not Bangladeshi. Similarly, we speak Nepali in West Bengal, and Nepali is also spoken in Nepal. But we are not citizens of Nepal.
Therefore, in this federal country, we, the Gorkhas, should also have a separate identity. We have been demanding a separate state of Gorkhaland since the 1980s with this demand. But we have not received justice to this day.
This is why the core voice of Nepali literature is linked to the question of identity. The main theme of my poems is related to the issue of Gorkha identity.
Before 1815, we were citizens of Nepal, but British India took a large part of the territory from Nepal. According to history, Shimla, Mussoorie, Nainital, Almora, Ranikhet, Dehradun, Sikkim, Darjeeling, Jalpaiguri, and some parts of Bihar, all these areas were taken from us. Since then, we have been in India.
After the country became independent, all territories were given a place in the constitution, but we were placed under the 'Absorbed Areas Act-1954' in West Bengal.
Our language, culture, and society have no match with the Bengali origin. Previously, our rulers were the British, now it's Bengal.
The rulers have changed, we have not changed.
Our people are not given a place in any administrative body. The DM comes from Bengal, the SP, doctors, all come from Bengal. We are ruled by them. We want to be ruled by our own people, but the governments do not listen to us.
This is why my poems have been expressing the psychology arising from linguistic dominance, cultural dominance, political dominance, and administrative dominance.
When your language is marginalized, it is not polite, but rather aggressive.
When your society is marginalized, it is not polite, but rather agitated. This is why the nature of my poems has become aggressive and agitated.
There were two major movements for Gorkhaland, but the state and central governments fired on many of our protestors and suppressed the movement. Our poems resist this oppression of power. Our desire is that the identity of Gorkhas in the country should be ensured."
  18. What is the overall state of living for Nepalis, and specifically the Gorkha community?
The British came to Darjeeling in the 18th century. Before they came, the locals made a living by farming. After the British came, they started tea cultivation. Then the locals were transformed into laborers. Even though they have been laborers for more than 200 years, the locals are still poor.
Currently, the daily wage of a laborer is 250 rupees. The minimum wage has not even been implemented. However, the price of one kilogram of tea is 500,000 rupees. This clearly shows the extent of labor exploitation. This tea contributes 30 percent of the main revenue of West Bengal. Darjeeling's economy is sustained by Tea, Timber, and Tourism. If a separate state of Gorkhaland is formed, this state will be the richest state. But Darjeeling is a border area, with China, Bangladesh, Bhutan, and Nepal nearby. Therefore, the government does not want unrest in the border area, so all our movements have been suppressed.
The government knows that if the Gorkhas are kept in economic crisis, they cannot fight for their identity. Therefore, economic exploitation is abundant. As a result, educated youths are becoming migrants. The West Bengal government is not only carrying out economic exploitation, but also linguistic, cultural, and political exploitation.
Therefore, the living standard of the Gorkhas is in crisis.
(Interview conducted for the April 2025 issue of the magazine Akshara Sangatha.)
***
Who Will Listen?
ಕೇಳುವವರು ಯಾರು? 
ಸಾಗರವೇ ಮೇರೆ ಮೀರಿ 
ಧರೆಯೇ ಬಿರಿಯುತಿರುವಾಗ
ತಾರೆಗಳ ಹಾಡು ಕೇಳುವವರು ಯಾರು? 
ಹರಿದ ಅರಿವೆ ಉಟ್ಟ ಹುಡುಗ 
ಇರುಳ ಚಳಿಗೆ ಹೊರಳುವಾಗ 
ಚಂದಿರನ ಹಾಡು ಕೇಳುವವರು ಯಾರು?
ಜಾತಿ ಮತದ ಬೆಂಕಿಯಲ್ಲಿ 
ಜಗವೇ ಹೊತ್ತು ಉರಿಯುವಾಗ 
ನೇಸರನ ಹಾಡು ಕೇಳುವವರು ಯಾರು
ಹಸಿದವರ ಕಣ್ಣಿನಲ್ಲಿ 
ಕಂಬನಿಯು ಹರಿಯುವಾಗ 
ಕವಿ ಎದೆಯ ಹಾಡು ಕೇಳುವವರು ಯಾರು?
-ಎಂ ಆರ್. ಕಮಲ
	Who Will Listen?
When the ocean crosses its limits,
When the earth begins to crack,
Who will listen to the song of the stars?
When a boy clad in ragged clothes,
And trembles in the biting cold of the night,
Who will listen to the song of the moon?
When the world burns
In the fire of caste and creed
Who will listen to the song of the sun?
When tears flow
From the eyes of the hungry,
Who will listen to the poet’s song?
Kannada Original: M. R. Kamala
English Translation: Uday Itagi
We construct
ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟೇ ಕಟ್ಟತೇವ 
ಒಡೆದ ಮನಸುಗಳ
ಕಂಡ ಕನಸುಗಳ 
ಕಟ್ಟೇ ಕಟ್ಟತೇವ
ನಾವು ಕನಸು ಕಟ್ಟತೇವ 
ನಾವು ಮನಸು ಕಟ್ಟತೇವ
ಜಾತಿ ಇಲ್ಲದ 
ಭೀತಿ ಇಲ್ಲದ 
ಬಾಳ ಕಟ್ಟತೇವ 
ಕುಲವೆನ್ನದ 
ಮನುಕುಲವ 
ನಾವು ಕಟ್ಟುತೇವ 
ನಾವು ನಾಡ ಕಟ್ಟುತೇವ 
ಗೋಳಿಲ್ಲದ, ಗುಂಡಿಲ್ಲದ 
ನಾಡ ಕಟ್ಟುತೇವ 
ನೂರು ಮನಸಿನ 
ಕೋಟಿ ಕನಸಿನ 
ಹಾಡ ಕಟ್ಟುತೇವ 
ನಾವು ನಾಡ ಕಟ್ಟತೇವ 
ಕ್ರಾಂತಿ ಕೆಂಡದ 
ಕುಂಡ ಹೊತ್ತು ನಾವು 
ಮುಳ್ಳು ತುಳಿಯತೇವ
ರಕ್ತಕಾಲಿನ ನಮ್ಮ ಪಾಲಿನ 
ಹಾಡ ಬರೆಯತೇವ 
ನೆಲಕ ಹಾಡ ಬರೆಯತೇವ 
ದೇವರಿಲ್ಲದ, ದೈವವಿಲ್ಲದ 
ದಾರಿ ತುಳಿಯತೇವ 
ನಮ್ಮ ಮನಸಿಂದ 
ನಿಮ್ಮ ಮನಸಿಗೆ 
ಸೇತು ಕಟ್ಟುತೇವ 
ನಾವು ಮಾತು ಕಟ್ಟುತೇವ 
ಕನ್ನಡ ಒರಿಜಿನಲ್: ಸತೀಶ್ ಕುಲಕರ್ಣಿ 
ಇಂಗ್ಲಿಷ್ ಟ್ರಾನ್ಸ್ಲೇಷನ್: ಉದಯ ಇಟಗಿ	We construct
We construct, we construct,
We continuously keep constructing.
We build broken hearts,
We build shattered dreams
We continue to keep building
A life free of social hierarchy,
A life without fear,
We construct
A humanity beyond divisions,
We construct a world,
We construct a nation.
A nation free of suffering,
A land without weapons,
We construct
A chorus of countless hearts,
A vision of innumerable souls
We create
We build a nation.
Carrying the flames of revolution,
Traversing through obstacles,
We march onwards.
With feet stained by blood,
We compose songs
On the very ground we walk on.
Without deities,
Without holy paths,
We forge ahead.
From our hearts to yours,
We construct a bridge.
We craft words.
Kannada Original: Satish Kulkarni
English Translation: Uday Itagi
How Did Gandhi Become a Mahatma?
ಗಾಂಧಿ ಮಹಾತ್ಮನಾಗಿದ್ದು ಹೇಗೆ? 
  
ನಿಮ್ಮ ಗಾಂಧಿ 
ನಮಗೂ ಗಾಂಧಿಯೇ! 
ನಿಮ್ಮ ಗಾಂಧಿ ನಮ್ಮ ಗಡಾಫಿ ಇಬ್ಬರೂ ಒಂದೇ!
ಹಾಗೆಂದು ದೂರದ ಲಿಬಿಯಾದಲ್ಲಿ 
ನಾನು ಕೆಲಸ ಮಾಡುತ್ತಿದ್ದ ಕಾಲೇಜೊಂದರ 
ಡೀನ್ ಹೇಳಿದಾಗ 
ನನಗೆ ಒಳಗೊಳಗೆ ಹೆಮ್ಮೆ ಮತ್ತು ಅಚ್ಚರಿ! 
  
"ಅದು ಹೇಗೆ?" 
ಎಂದು ನಾನು ಪಿಳಿ ಪಿಳಿ 
ಕಣ್ಣುಬಿಟ್ಟು ಕೇಳಿದ್ದೆ 
ಇಬ್ಬರೂ ನಮ್ಮನ್ನು ವಿದೇಶಿಯರ ದಾಸ್ಯದಿಂದ ಬಿಡಿಸಿಕೊಟ್ಟರು 
ನಿಜ ಅರ್ಥದಲ್ಲಿ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟರು 
  
"ಎಲ್ಲಿಯ ಗಡಾಫಿ? ಎಲ್ಲಿಯ ಗಾಂಧಿ? 
ಸಾಕು ಸುಮ್ಮನಿರಿ, ಜನ ನಕ್ಕಾರು" ಎಂದು ಹೇಳಿದೆ 
"ಇಲ್ಲ ಇಲ್ಲ, ನಿಮ್ಮ ಗಾಂಧಿ ಮತ್ತು ನಮ್ಮ ಗಡಾಫಿ ಇಬ್ಬರೂ ಒಂದೇ !
ಕೆಲವು ಒಳಸತ್ಯಗಳು ಜನರ ಕಣ್ಣಿಗೆ ಕಾಣುವದಿಲ್ಲ ಅಷ್ಟೇ
ಇಬ್ಬರನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು!
ಅದು ಹೇಗೆ ಅವರು ತಮ್ಮ ಅಚಲ ನಿರ್ಧಾರ ಮತ್ತು ಅಹಿಂಸೆಯ ಮೂಲಕ 
ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು! 
ಎಂಥ ಹೋರಾಟಗಾರರು! 
ಎಂಥ ದೇಶಪ್ರೇಮಿಗಳು! 
ಇಬ್ಬರೂ ಬಡವರ ಉದ್ದಾರಕ್ಕಾಗಿ ಎಷ್ಟೊಂದು ದುಡಿದರು 
ಎಂಥ ಸಂಘಟನೆಯನ್ನು ಕಟ್ಟಿದರು 
ದುರಂತವೇನೆಂದರೆ 
ನಾವಿಬ್ಬರೂ ಅವರನ್ನು ಬದುಕಲು ಬಿಡಲಿಲ್ಲ 
ನಿಮ್ಮ ದೇಶದಲ್ಲಿ ನೀವು ಗಾಂಧಿಯನ್ನು ಕೊಂದಿರಿ 
ನಮ್ಮಲ್ಲಿ ನಾವು ಗಡಾಫಿಯನ್ನು 
ನಿರ್ದಯೆಯಿಂದ ಕೊಂದು ಹಾಕಿದೆವು 
ಎರಡೂ ಈ ಕಾಲದ ವ್ಯಂಗ್ಯಗಳೇ.... "
ಗಾಂಧಿ ಗಡಿಗಡಿಯಾಚೆಯೂ 
ಮನೆಮಾತಾಗಿದ್ದ ! 
  
ಬಹಳ ದಿನಗಳಿಂದ 
ಗಾಂಧಿ ಮಹಾತ್ಮನಾಗಿದ್ದು ಹೇಗೆ ಎಂದು ಯೋಚಿಸುತ್ತಿದ್ದೆ 
ಅಲ್ಲಿ ನನಗೆ ಉತ್ತರ ಸಿಕ್ಕಿತ್ತು!
- ಉದಯ ಇಟಗಿ	
How Did Gandhi Become a Mahatma?
Your Gandhi,
Our Gandhi too!
Your Gandhi and our Gaddafi are one and the same!
When the dean of a college where I worked in distant Libya said this,
I felt both pride and surprise within me!
“How is that?”
I asked, eyes wide with curiosity.
“Both of them freed us from foreign rule,
Gave us true independence.”
"Where is Gaddafi, and where is Gandhi?
Stop it! People will laugh," I said.
"No, no! Your Gandhi and our Gaddafi are the same!
Some inner truths remain unseen by people.
Both have been misunderstood by many!
See how they won independence—
Through unwavering determination and non-violence!
What great warriors!
What patriots!
How much they worked for the upliftment of the poor!
What strong organizations they built!
The tragedy is that
We did not let them live.
In our country, we killed Gandhi.
In your country, you ruthlessly killed Gaddafi.
Both are ironies of our times..."
Gandhi had become a household name,
Even beyond borders!
For a long time,
I had wondered how Gandhi became a Mahatma.
There, I found my answer!
Kannada Original: Uday Itagi
English Translation: Uday Itagi
Amrapali
*Amrapali*
She was the only one Amrapali...
A seductive courtesan with a mesmerising walk...
So enchanting that 
Even the low mentalities of the world
Would envy in disgust
At her beauty...
If she had bewitched
The so called Purushottama,
Be it Rama,
Or Lakshmana,
She would have been branded a demon today.
Her beautiful breasts
Would have been cut by the sword's edge...
Her charming nose disfigured,
And her long locks cut off mercilessly...
But now...
She has bewitched,
And stood firm 
Not before a deity,
But before 
My Buddha
A true human being...
In the pages of history,
A courtesan
Chose to live as a monk by her own will,
And the true compassion of this Buddha's land
Is not not a mere sinister thing...
*Kannada Original: Manjula Hulikunte*
*English Translation: Uday Itagi*
*ಅಮ್ರಪಾಲಿ*
ಅವಳೊಬ್ಬಳಿದ್ದಳೆಲ್ಲಾ ಅಮ್ರಪಾಲಿ... 
ಮೋಹಕ ನಡೆಯ ವೇಶ್ಯೆ...!
ಜಗತ್ತಿನ ಸಣ್ಣತನದ 
ಕರುಳೊಮ್ಮೆ ಕಿವುಚಿ 
ಅಸೂಹ್ಯೆ ಪಡುವಷ್ಟು ಸೊಗಸುಗಾತಿ..!
ಅವಳು ...
ಪುರುಷೋತ್ತಮ (ಎನಿಸಿಕೊಂಡ) 
ಶ್ರೀರಾಮನನ್ನೋ 
ಲಕ್ಷ್ಮಣನನ್ನೋ ಮೋಹಿಸಿದ್ದರೆ 
ಇಂದು ರಾಕ್ಷಸಿಯಾಗಿಬಿಡುತ್ತಿದ್ದಳು
ಅವಳ ಸುಂದರ ಮೊಲೆ 
ಕತ್ತಿಯ ಮೊನಚಿನಲ್ಲಿ ತುಂಡಾಗಿರುತ್ತಿತ್ತು...
ಮೋಹಕ ಮೂಗು ಮೊಂಡಾಗಿ 
ನೀಳಕೇಶರಾಶಿಗೂ ಕತ್ತರಿ ಬಿದ್ದಿರುತ್ತಿತ್ತು..
ಸದ್ಯ....
ಅವಳು ಮೋಹಿಸಿದ್ದು, 
ಟೊಂಕಕಟ್ಟಿ ನಿಂತಿದ್ದು
ಅಪ್ಪಟ ಮನುಷ್ಯನಾಗಿದ್ದ
ನನ್ನ ಬುದ್ಧನೆದುರು...
ಚರಿತ್ರೆಯ ಪುಟಗಳಲ್ಲಿ ಸೂಳೆಯೊಬ್ಬಳು 
ಸನ್ಯಾಸಿಯಾಗಿ ತನ್ನಿಷ್ಟದಂತೆ ಬದುಕಿದ್ದು, 
ಈ ಬುದ್ಧಭೂಮಿಯ 
ನಿಜದ ಕಾರುಣ್ಯವೆಂದರೆ ಸೂಜಿಗವೇನಲ್ಲ ..
*ಮಂಜುಳಾ ಹುಲಿಕುಂಟೆ*
ಓರಿಯಾ ಕವಿ ಸುಶೀರ್ ಕುಮಾರ್ ಸ್ವೇನ್ ಕವನಗಳು
 The Father 
  
The man who walks along 
With the load of a mountain 
On his back 
Is my Father, who looks all 
Absorbed, serious, morose and stunned 
As though he were 
A still sculpture on the temple wall. 
  
It's really difficult to become 
A father 
Whom the God felt as a bare need 
For his creation to move on 
As he scratched out 
His image with chisels, mallets 
And hammers. 
  
All fathers love to bear 
The pains of the simmering sand 
The burns and scalds of a burning cauldron 
But they never open their mouth 
Nor do they shed tears. 
  
Father is like a basket full 
Of empathy and love, 
Who stands like a scarecrow 
Amid all wounds and cracks 
To scare them away 
His head raised high as ever. 
  
  
All Alone 
  
I have left behind 
A slice of love  
Deep inside a closed room 
Which had clung onto 
The last night's 
Dense darkness. 
  
But I still preserve the night's 
Secret kisses, the nail marks, 
Sweats and the aroma of 
Dishevelled hair 
Which like a river drifts across 
My every artery and vein. 
  
I searched for the past 
Relationship - soft and tender 
All alone 
The sandalwood forests 
The hollow of the shells 
Yet, I could not find her smiles 
Or even a wee bit temper. 
  
Tonight 
I shall take the night train 
To go back to her 
To return to her the heaps of thrills 
And sensations 
All the madness 
All the jingles of her anklets. 
  
She might wear a smile on her lips 
Pretend to move away 
From all my closeness 
Yet, she will drive me into the dark room 
Again. 
  
The Paper Boat 
  
It's a long time since 
I had floated away ನಾನು 
The paper boat down the stream 
Of the rainwater that fell 
From the thatched roof. 
I have flung away my childhood 
Adolescence, youth, and  
Teachers' canemarks 
The torn pieces of rough papers 
From my schoolbag, 
  
And the sticks that were 
Hurled at the mango tree 
Laden with fruits 
In the midday sun. 
  
Since there was no boatman 
I killed a cricket 
To take his place 
In the heart of the paper boat. 
  
Getting drenched in the truant rain 
He went away, laughing, far, too far 
Rowing the boat himself 
Down the stream of the village street 
Beyond our vision, 
To the mouth of the water. 
  
The paper boat was lost 
In the village vortex 
Maybe he fell in the love of water 
In the mid-ocean. 
  
Perhaps it will never return 
Again like the age that never 
Comes back once it passed 
Like the clock's hands 
On their reverse track. 
  
The peanut pods, the chocolate 
Covers, the coconut shells, 
Mucks, the petals of palash flowers 
Bodies of dead ants 
Which my boat carried on its back. 
  
Let it not return any more 
I shall go away 
To the deep and real sea 
And search in its depth 
The face of the alphabets 
Scratched on the paper boat. 
  
If in the fathomless sea 
I happen to bump into my paper boat 
I will tell the sea, 
"Please give me back my paper boat 
Return my chocolate game 
If you can, take away all my wealth 
My prowess, my ego 
My dreams, my love, my hatred 
My victories, my defeats 
My greed, my profits." 
  
O Sea! I know 
You always give back 
All that you take 
Now please return 
My paper boat, my empty hands. 
…. 
Sushir Kumar Swain  
  	  ಅಪ್ಪ
ಬೆನ್ನ ಮೇಲೆ ಸದಾ ಬೆಟ್ಟದಷ್ಟು ಭಾರವನ್ನು
ಹೊತ್ತುಕೊಂಡು ನಡೆಯುವ ಮನುಷ್ಯನೇ ನನ್ನ ಅಪ್ಪ!
ದೇವಸ್ಥಾನದ ಗೋಡೆಯ ಮೇಲೆ ಕೆತ್ತಿದ ಶಿಲ್ಪಕಲಾಕೃತಿಯಂತೆ ಸದಾ ತಲ್ಲೀನ, ಗಂಭೀರ, ದಿಗ್ಭ್ರಮೆಗೊಂಡಂತೆ
ಕಾಣುವ ಮನುಷ್ಯನೇ ನನ್ನ ಅಪ್ಪ!!
ಅಪ್ಪನಾಗಿರುವದು ನಿಜವಾಗಿಯೂ ತುಂಬಾ ಕಷ್ಟ
ದೇವರು ಯಾರನ್ನು ಬರಿಯ ಅಗತ್ಯವೆಂದು ಭಾವಿಸಿದನೋ ಹಾಗೂ ಅವನ ಸೃಷ್ಟಿ ಮುಂದುವರಿಯಲು 
ಅವನ ಸುತ್ತಿಗೆ, ಉಳಿಯನ್ನು ತೆಗೆದುಕೊಂಡು ಅವನ ಚಿತ್ರವನ್ನು ಕಡೆದಿಟ್ಟನಂತೆ
ಎಲ್ಲಾ ತಂದೆಯಂದಿರು ಕಷ್ಟಸಹಿಷ್ಣಿಗಳು 
ತಳಮಳಿಸುವ ಮರಳಗಾಡುಗಳು 
ಸುಡುಸುಡುವ ಅಗ್ನಿಕುಂಡಗಳು 
ಆದರೆ ಅವರು ಎಂದಿಗೂ ತಮ್ಮ ನೋವುಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವದಿಲ್ಲ 
ಕಣ್ಣೀರು ಸುರಿಸುವುದಿಲ್ಲ. 
ತಂದೆ ಪರಾನುಭೂತಿ ಮತ್ತು ಪ್ರೀತಿಯ
ಪೂರ್ಣ ಬುಟ್ಟಿಯಿದ್ದಂತೆ, 
ಹಾಗೂ ಎಲ್ಲಾ ಗಾಯಗಳು ಮತ್ತು ಬಿರುಕುಗಳ ಮಧ್ಯೆ 
ಬೆದರುಬೊಂಬೆಯಂತೆ ನಿಲ್ಲುವವನು 
ಎಂದಿನಂತೆ ಅವನು ತನ್ನ ತಲೆಯೆತ್ತಿ ನಿಂತು
ಎಲ್ಲಾ ಕಷ್ಟಗಳನ್ನು ಬೆದರಿಸಿ ಕಳಿಸುತ್ತಾನೆ 
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಒಬ್ಬಂಟಿಯಾಗಿ... 
ಮುಚ್ಚಿದ ಕೋಣೆಯ ಒಳಗೆ 
ಕೊನೆಯ ರಾತ್ರಿಯ 
ದಟ್ಟವಾದ ಕತ್ತಲೆಗೆ
ಅಂಟಿಕೊಂಡಿದ್ದ 
ಪ್ರೀತಿಯ ತುಣುಕೊಂದನ್ನು
ನಾನು ಹಿಂದೆ ಬಿಟ್ಟುಬಂದಿದ್ದೇನೆ 
ಆದರೆ ಆ ರಾತ್ರಿಯಲ್ಲಿ ನಡೆದ ರಹಸ್ಯ ಚುಂಬನಗಳು, ಉಗುರು ಗುರುತುಗಳು,
ಬೆವರ ಹನಿಗಳು,
ಸುಖದ ನರಳಿಕೆಗಳು, 
ಕೆದರಿದ ಕೂದಲುಗಳ ಸುವಾಸನೆ
ಹಾಗೂ ನದಿಯಂತೆ ಹರಿದುಹೋದ 
ನನ್ನ ಪ್ರತಿ ಅಪಧಮನಿ ಮತ್ತು ರಕ್ತನಾಳಗಳು....
ಎಲ್ಲವೂ ಎಲ್ಲವನ್ನು ನಾನಿನ್ನೂ ಕಾಪಿಟ್ಟುಕೊಂಡಿದ್ದೇನೆ
ನಾನು ಹಿಂದಿನದನ್ನು ಹುಡುಕಿದೆ- 
ಸಂಬಂಧ ಮತ್ತದರ ಮೃದುತ್ವ ಹಾಗೂ ಕೋಮಲತೆಯನ್ನು 
ನಾನು ಏಕಾಂಗಿಯಾಗಿ 
ಶ್ರೀಗಂಧದ ಕಾಡುಗಳನ್ನು 
ಟೊಳ್ಳು ಚಿಪ್ಪುಗಳನ್ನು ಕಂಡುಹಿಡಿದೆ 
ಆದರೂ ನನಗವಳ ನಗುವನ್ನು ಕಂಡುಹಿಡಿಯಲಾಗಲಿಲ್ಲ 
ಹಾಗೂ ಅವಳ ಕೋಪವನ್ನು ಸಹ 
ಈ ರಾತ್ರಿ 
ನಾನು ರೈಲಿನಲ್ಲಿ ಹೋಗುತ್ತೇನೆ 
ಅವಳ ಬಳಿಗೆ ಹಿಂತಿರುಗಲು 
ರಾಶಿರಾಶಿ ರೋಚಕತೆಗಳನ್ನು,
ಸಂವೇದನೆಗಳನ್ನು,
ಹುಚ್ಚಾಟಗಳನ್ನು,
ಹಾಗೂ ಕಿಣಿಕಿಣಿಸುವ ಅವಳ ಕಾಲ್ಗೆಜ್ಜೆಗಳ ನಾದವನ್ನು ಹಿಂತಿರುಗಿಸಲು
ಅವಳು ತನ್ನ ತುಟಿಗಳಲ್ಲಿ ನಗು ಧರಿಸಿ 
ನನ್ನ ಎಲ್ಲ ಸಾಮಿಪ್ಯದಿಂದ
ದೂರ ಸರಿಯುವಂತೆ ನಟಿಸಬಹುದು 
ಆದರೆ ನನಗೆ ಖಾತ್ರಿಯಿದೆ
ಅವಳು ಮತ್ತೆ ನನ್ನನ್ನು ಕತ್ತಲಕೋಣೆಯೊಳಗೆ ತಳ್ಳಿ
ಮುದ್ದಾಡುತ್ತಾಳೆಂದು
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಕಾಗದದ ದೋಣಿ
ಚಪ್ಪರದ ಮೇಲಿಂದ ಸುರಿದ ಮಳೆನೀರಿನ ಹಳ್ಳದಲ್ಲಿ ನಾನು ಕಾಗದದ ದೋಣಿಯನ್ನು ತೇಲಿಬಿಟ್ಟು ಬಹಳ ದಿನಗಳಾಯಿತು
ನಾನು ನನ್ನ ಬಾಲ್ಯ, ಕಿಶೋರತನ, ಯೌವನ, ಛಡಿಯೇಟಿನ ಗುರುತುಗಳು ಹಾಗೂ
ಹರಿದುಹೋದ ಹಾಳೆಗಳೆಲ್ಲವನ್ನೂ 
ನನ್ನ ಸ್ಕೂಲು ಬ್ಯಾಗಿನಿಂದ ಕಿತ್ತೆಸೆದಿದ್ದೇನೆ
ಹಾಗೂ ನಡು ಮಧ್ಯಾಹ್ನ 
ಹಣ್ಣು ಬಿಟ್ಟ 
ಮಾವಿನ ಮರದಡಿ
ಎಸೆದ ಕೋಲುಗಳನ್ನು 
ನಾವಿಕನಿರದಿದ್ದರಿಂದ 
ಜೀರುಂಡೆಯನ್ನು ಕೊಂದು
ಅವನ ಜಾಗದಲ್ಲಿರಿಸಿದೆ
ಅವನು ಸುರಿವ ಬಿರುಮಳೆಯಲ್ಲಿ ನೆನೆಯುತ್ತಾ,
ನಗುತ್ತಾ ತನ್ನಷ್ಟಕ್ಕೆ ತಾನೇ ಹುಟ್ಟುಹಾಕುತ್ತಾ ದೂರದೂರಕ್ಕೆ ಹೋದನು
ಬೀದಿಯ ಕೊನೆಗೆ
ನಮ್ಮ ದೃಷ್ಟಿಯಿಂದಾಚೆಗೆ ಮತ್ತು ನೀರಿನೊಳಕ್ಕೆ
ನೀರಿನ ಸುಳಿಗೆ ಸಿಕ್ಕು 
ಕಾಗದದ ದೋಣಿ ಕಳೆದುಹೋಯಿತು
ಬಹುಶಃ ಅವನು ಸಮುದ್ರಮಧ್ಯದಲ್ಲಿ 
ನೀರಿನ ಪ್ರೀತಿಯ ಸುಳಿಗೆ ಸಿಕ್ಕಿರಬೇಕು!
ಬಹುಶಃ, ಅದು ಎಂದಿಗೂ ಹಿಂದಿರಿಗುವದಿಲ್ಲ
ಕಳೆದ ಕಾಲ ಮತ್ತೆ ಮರಳದಂತೆ
ಗಡಿಯಾರದ ಮುಳ್ಳುಗಳು ಮತ್ತೆ 
ಹಿಂದೆ ಚಲಿಸದಂತೆ
ಕಡ್ಲೆಕಾಯಿ ಸಿಪ್ಪೆಗಳು, ಚಾಕೋಲೇಟ್ ಕವರ್ ಗಳು,
ತೆಂಗಿನಕಾಯಿ ಚಿಪ್ಪುಗಳು, ಕಪ್ಪೆಜೊಂಡುಗಳು,
ಮುತ್ತುಗದ ಪಕಳೆಗಳು,
ಸತ್ತ ಇರುವೆಗಳ ದೇಹಗಳು
ಹಾಗೂ ಇನ್ನೂ ಏನೇನೋ ಹೊತ್ತು ಸಾಗಿತ್ತು ನನ್ನ ಕಾಗದದ ದೋಣಿ
ಅದು ಮತ್ತೆ ಹಿಂದಿರುಗಿ ಬಾರದಿರಲಿ
ನಾನೇ ಮತ್ತೆ ಸಮುದ್ರದಾಳಕ್ಕಿಳಿದು 
ಕಾಗದದ ದೋಣಿಯ ಮೇಲೆ ಬರೆದ 
ವರ್ಣಾಕ್ಷರಗಳ ಮುಖವನ್ನು ಕಂಡುಬರುವೆ
ಆಳವರಿಯದ ಆ ಸಮುದ್ರದಲ್ಲಿ ನನ್ನ ಕಾಗದದ ದೋಣಿಯೇನಾದರೂ ಸಿಕ್ಕರೆ
ನಾನು ಆ ಸಮುದ್ರರಾಜನಿಗೆ ಹೇಳುವೆ
"ನನ್ನ ಕಾಗದದ ದೋಣಿಯನ್ನು ನನಗೆ ಹಿಂದಿರುಗಿಸು. 
ಬದಲಿಗೆ ನನ್ನ ಸಂಪತ್ತು, 
ನನ್ನ ಪರಾಕ್ರಮ, ನನ್ನ ಅಹಂ, ನನ್ನ ಕನಸುಗಳು,
ನನ್ನ ಪ್ರೀತಿ, ನನ್ನ ದ್ವೇಷ, ನನ್ನ ಸೋಲು,
ನನ್ನ ಗೆಲುವು, ನನ್ನ ದುರಾಸೆ, ನನ್ನ ಲಾಭಗಳು
ಎಲ್ಲ ಎಲ್ಲವನ್ನು ತೆಗೆದುಕೋ"
ಓ ಸಮುದ್ರ ರಾಜನೇ!
ನನಗೆ ಗೊತ್ತು
ಕಳೆದುಕೊಂಡಿದ್ದೆಲ್ಲವನ್ನು 
ನೀನು ಮತ್ತೆ ಹಿದಿರುಗಿಸುತ್ತಿಯೆಂದು! 
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಓರಿಯಾ ಕವಿ ಪ್ರಬಿನಾ ಕಬಿ ಕವನಗಳು
Body 
 - Prabina Kabi
Everyday,
Before the breaking of dawn
I engage in a battle with my youth,
My desires carnal,
a battle against my restraint
and abstinence too !
Every morning as my eyes open,
I find beside me a body
In which lie interred hunger,
fire and fishy - smelling blood !
By the time I collect my bearing,
The battle lines are already drawn,
The divine conchshell has been blown
and the master archer's bowstring drawn !
In the arena,
Sides have already been taken,
my mortal frame on one side
and on the other side, it is god !
A hissing body ready on one side to sting
and on the other side
the reverberating call of the conchshell,
It is hunger against supplication,
Surrender against creation that be !
And a brief battle rages
On the terrain of my tattered being.
Sometimes invisible arms
subdue visible emotions,
and at other times
spells of magic born from love's charm
Pierce impenetrable devotion.
Thus proceeds the battle , but time flies!
Enemies get older,
Blood spills on the arena in vein .
As the sun sets the battle is done,
But the divine chant fails to cool the vein
and entomb the temper infernal, vain !
While God lies hurt
In the chamber of worship
body triumphs,
it's mark of triumph emblazoned,
and sins get laid in time's vault secure !! 
  
  
  
  
Poem 1  
In a narrow space, without even a pencil lead slipping,
between four lines, a small cage, the letter "Sha" is tricky,
how to join it, imagining the head as zero,
it's easy to think, but writing together is childish.
Tests of patience, forgetting, and slipping,
limits crossed in a moment of carelessness,
one box won't suffice, you need many,
write and rewrite what you've written.
Even if you're tired or sleepy,
tomorrow's task is today's responsibility,
in books, children's writing is amusing,
unbeknownst to them, a life story in each letter.
Children's writing varies - clean, crooked, or unclear,
pages fill up quickly,
no fear for tomorrow,
measurement is patience,
the more patience, the higher the marks,
patience is the measure for letters and life. 
  
  
  
  
||  hey!  Wounded man! ||
Now,  I am  in  the  urge of
Sprinkling   water on  earth…
’n  searching for it  in the sky.
..
Myself,
Peeping  from  the edges of   last  shoots…
The soul of  the deep roots…
..
 Myself,
Wailing for   unripe fallen fruits      
 Reading the stories of  confined humans
..
 Myself,
Hearing the charred anthems
Of, the  wounded souls  
Myself,
Recalling the fables ..
Of,  the  persisted sleeping tombs …..
..
How magical is this past!?
It, deprived …
The  yield of the black soil..
The rain of the sky..
from the double handfuls  ..
Which are  waiting in the last branches..
Now, I am gazing at the  arboretum
..
Hey… wounded  man..!
Silence is not  a  war
Let us sing your  agony  like a song…!
 The present   vacuum… will be filled tomorrow.
Time  endorses  ..
Someone  sails  in your footsteps..!
 Attainable  is  not far away….
From  your  first steps.!
On the edge of the dark…
The raging flag is also fluttering!! 
  
  
  	ದೇಹ 
ಪ್ರತಿ ದಿನ 
ಕೋಳಿ ಕೂಗುವ ಮುನ್ನವೇ 
ನನ್ನ ಯೌವನಭರಿತ ದೇಹದೊಂದಿಗೆ ನನ್ನ ಯುದ್ದ ಆರಂಭವಾಗುತ್ತದೆ. 
ನನ್ನ ಬಯಕೆಗಳು ಕೆರಳುತ್ತವೆ 
ಹಾಗೂ ನನಗಿರುವ ಅಡೆತಡೆಗಳು ಮತ್ತು ಇಂದ್ರೀಯ ನಿಗ್ರಹಗಳ ವಿರುದ್ಧ ನನ್ನ ಯುದ್ಧ ಶುರುವಾಗುತ್ತದೆ! 
  
ಪ್ರತಿ ಮುಂಜಾನೆ 
ನಾನು ಕಣ್ಣು ಬಿಟ್ಟಾಗ 
ನನ್ನ ಬಳಿ ದೇಹವೊಂದು ಮಲಗಿರುವದು ಕಾಣುತ್ತದೆ 
ಆ ದೇಹದಲ್ಲಿ ತಡೆದಿಟ್ಟ ಹಸಿವು, ಬೆಂಕಿಯಂಥ ಬಯಕೆ ಹಾಗೂ ರಕ್ತದ ವಾಸನೆ ಕಾಣಿಸುತ್ತದೆ 
  
ನಾನು ನನ್ನ ಸಮತೋಲನವನ್ನು ಸಾಧಿಸುವ ವೇಳೆಗೆ,
ಯುದ್ಧರೇಖೆಗಳು ಅದಾಗಲೇ ಮೂಡಿರುತ್ತವೆ,
ಹಾಗೂ ದೈವೀ ಶಂಖನಾದವು ಮೊಳಗಿರುತ್ತದೆ
ಮತ್ತು ಮಹಾನ್ ಬಿಲ್ಲುಗಾರನ ಬಿಲ್ಲಿನ ತಂತಿಯನ್ನು ಬಿಗಿಯಲಾಗಿರುತ್ತದೆ! 
  
ಅಖಾಡದಲ್ಲಿ,
ಪಕ್ಷಗಳು ಈಗಾಗಲೇ ಉದ್ಭವವಾಗಿವೆ,
ನನ್ನ ನಶ್ವರ ದೇಹ ಒಂದು ಕಡೆ,
ಇನ್ನೊಂದು ಕಡೆ ದೇವರು!
ಒಂದು ಕಡೆ ಕಚ್ಚಲು ತಯಾರಾದ ಬುಸುಗುಟ್ಟುವ ದೇಹ,
ಮತ್ತೊಂದು ಕಡೆ ಶಂಖನಾದದ ಪ್ರತಿಧ್ವನಿ,
ಇದು ಬಯಕೆಯ ವಿರುದ್ಧದ ಹಸಿವಿನ ಪ್ರಾರ್ಥನೆ,
ಮತ್ತು ಇರಿಯುವ ಆದರೆ ತೂರಲಾಗದ ಭಕ್ತಿ! 
  
ಈ ರೀತಿ ಯುದ್ದ ಸಾಗುತ್ತದೆ 
ಆದರೆ ಸಮಯ ಸರಿಯುತ್ತದೆ 
ಶತ್ರುಗಳಿಗೆ ವಯಸ್ಸಾಗುತ್ತದೆ 
ರಂಗದ ಮೇಲೆ ರಕ್ತ ವೃಥಾ ಸುರಿಯುತ್ತದೆ! 
ಸೂರ್ಯನು ಅಸ್ತಮಿಸುತ್ತಿದ್ದಂತೆ ಯುದ್ಧ ಮುಗಿಯುತ್ತದೆ,
ಆದರೆ ದೈವೀ ಜಪವು ಕುದಿಯುತ್ತಿರುವ ರಕ್ತವನ್ನು ಶಾಂತಗೊಳಿಸಲು
ಮತ್ತು ಬೇಸರದಿಂದುದಿಸಿದ ಕೋಪವನ್ನು ಸಮಾಧಿ ಮಾಡಲು ವಿಫಲವಾಗುತ್ತದೆ. 
ಗರ್ಭಗುಡಿಯಲ್ಲಿ ದೇವರು ಗಾಯಗೊಂಡಾಗ,
ದೇಹವು ಜಯಶೀಲವಾಗುತ್ತದೆ,
ಜಯದ ಗುರುತು ಮೂಡುತ್ತದೆ,
ಮತ್ತು ಪಾಪಗಳು ಕಾಲಗರ್ಭದಲ್ಲಿ ಹೂತುಹೋಗುತ್ತವೆ!! 
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
  
 ಕವಿತೆ 1  
ಕಿರಿದಾದ ಜಾಗದಲ್ಲಿ, ಪೆನ್ಸಿಲ್ ಸೀಸವೂ ಜಾರಿಕೊಳ್ಳದೆ, 
ನಾಲ್ಕು ಸಾಲುಗಳ ನಡುವೆ, ಒಂದು ಸಣ್ಣ ಗೊಂದಲವುಂಟಾಗಿದೆ
ಈ "ಶ" ಅಕ್ಷರವು ಎಷ್ಟೊಂದು ಕ್ಲಿಷ್ಟವಾಗಿದೆ 
ತಲೆಯನ್ನು ಶೂನ್ಯ ಎಂದು ಊಹಿಸಿ ಅದನ್ನು ಹೇಗೆ ಜೋಡಿಸುವುದು, 
ಯೋಚಿಸುವುದು ಸುಲಭ, 
ಆದರೆ ಒಟ್ಟಿಗೆ ಬರೆಯುವುದು ಎಷ್ಟೊಂದು ಬಾಲಿಶ!. 
  
ತಾಳ್ಮೆಯ ಪರೀಕ್ಷೆಗಳು, 
ಒಂದೇ ಒಂದು ಕ್ಷಣದ ಅಜಾಗರೂಕತೆಯ ಕ್ಷಣದಲ್ಲಿ ಮಿತಿಗಳನ್ನುದಾಟಿವೆ 
ಒಂದು ಬಾಕ್ಸ್ ಸಾಕಾಗುವುದಿಲ್ಲ, ನಿಮಗೆ ಬಹಳಷ್ಟು ಬೇಕು, 
ನೀವು ಬರೆದದ್ದನ್ನು ಬರೆಯಿರಿ ಮತ್ತು ಪುನಃ ಬರೆಯಿರಿ. 
  
ನೀವು ದಣಿದಿದ್ದರೂ ಅಥವಾ ನಿದ್ರಿಸಿದರೂ ಸಹ, 
ನಾಳೆಯ ಕೆಲಸ ಇಂದಿನ ಜವಾಬ್ದಾರಿ 
ಮಾಡಿ ಮುಗಿಸಬೇಕು
ಪುಸ್ತಕಗಳಲ್ಲಿ, ಮಕ್ಕಳ ಬರವಣಿಗೆ ವಿನೋದಮಯವಾಗಿದೆ, 
ಹಾಗೂ ಅವರಿಗೆ ತಿಳಿಯದಂತೆ, ಪ್ರತಿ ಪತ್ರದಲ್ಲಿ ಜೀವನದ ಕಥೆಯಿದೆ 
  
ಮಕ್ಕಳ ಬರವಣಿಗೆಯೇ ಹಾಗೆ- ಒಂದು ಸಾರಿ ಸ್ವಚ್ಛ, ಒಂದು ಸಾರಿ ವಕ್ರ, ಒಂದು ಸಾರಿ ಅಸ್ಪಷ್ಟ, 
ಪುಟಗಳು ಬೇಗನೆ ತುಂಬುತ್ತವೆ, 
ನಾಳೆಯ ಭಯವಿಲ್ಲ, 
ಅಳತೆ ಎಂದರೆ ತಾಳ್ಮೆ, 
ಹೆಚ್ಚು ತಾಳ್ಮೆ, ಹೆಚ್ಚಿನ ಅಂಕಗಳು, 
ತಾಳ್ಮೆಯು ಅಕ್ಷರಗಳು ಮತ್ತು ಜೀವನದ ಅಳತೆಗೋಲಾಗಿದೆ. 
  
ಒರಿಯಾ ಮೂಲ: ಪ್ರಬಿನಾ ಕಬಿ 
ಕನ್ನದಕ್ಕೆ: ಉದಯ ಇಟಗಿ 
 
 ಹೇ, ಗಾಯಗೊಂಡ ಮನುಷ್ಯನೇ! 
 ಹೇ!  ಗಾಯಗೊಂಡ ಮನುಷ್ಯನೇ!  
ಈಗ, ನನಗೆ ಭೂಮಿಯ ಮೇಲೆ 
ನೀರನ್ನು ಚಿಮುಕಿಸುವ ತುರ್ತಿದೆ 
ಅದಕ್ಕಾಗಿ ಆಕಾಶದಲ್ಲಿ ನೀರನ್ನು ಹುಡುಕುತ್ತಿದ್ದೇನೆ. 
.. 
ನಾನು 
ಆಳವಾದ ಬೇರುಗಳ ಆತ್ಮವಾದ 
ಕೊನೆಯ ಚಿಗುರಿನ ಅಂಚುಗಳಿಂದ ಇಣುಕುತ್ತಿರುವೆ.. 
  
ನಾನು, 
ಬಂಧಿಯಾದ ಮಾನವರ ಕಥೆಗಳನ್ನು ಓದುತ್ತಾ 
ಬಲಿಯದೆ ಉದುರಿದ ಹಣ್ಣುಗಳಿಗಾಗಿ ಅಳುತ್ತಿದ್ದೇನೆ 
      
  
ನಾನು, 
ಗಾಯಗೊಂಡ ಆತ್ಮಗಳ
ಸುಟ್ಟ ಗೀತೆಗಳನ್ನು ಕೇಳುತ್ತಿದ್ದೇನೆ 
  
  
ನಾನೇ, 
ನಿರಂತರ ಮಲಗಿರುವ ಗೋರಿಗಳ
ನೀತಿಕಥೆಗಳನ್ನು ಜ್ನಾಪಿಸಿಕೊಳ್ಳುತ್ತಿರುವೆ 
ಈ ಭೂತಕಾಲ ಎಷ್ಟೊಂದು ಮಾಂತ್ರಿಕವಾಗಿದೆ!? 
ಇದು ಕಪ್ಪು ಮಣ್ಣಿನ ಇಳುವರಿಯನ್ನು
ಹಾಗೂ ಆಗಸದ ಮಳೆಯನ್ನು 
ಎರಡೆರೆಡು ಬಾರಿ ವಂಚಿಸಿದೆ
ಈಗ ನಾನು ಸಸ್ಯೋದ್ಯಾನವನ್ನು ನೋಡುತ್ತಿದ್ದೇನೆ 
ಹೇ!  ಗಾಯಗೊಂಡ ಮನುಷ್ಯನೇ!  
ಮೌನ ಯುದ್ಧವಲ್ಲ 
ನಿನ್ನ ಸಂಕಟವನ್ನು ಹಾಡಿನಂತೆ ಹಾಡೋಣ...! 
ಪ್ರಸ್ತುತ ನಿರ್ವಾತ... ನಾಳೆ ತುಂಬಲಿದೆ. 
ಸಮಯ ಅನುಮೋದಿಸುತ್ತದೆ.. 
ನಿನ್ನ ಹೆಜ್ಜೆಯಲ್ಲಿ ಯಾರೋ ಸಾಗುತ್ತಾರೆ..! 
ಕೈಗೆಟಕುವುದು 
ನಿಮ್ಮ ಮೊದಲ ಹೆಜ್ಜೆಗಳಿಂದ ದೂರವೇನಿಲ್ಲ.... ! 
ಕತ್ತಲೆಯ ಅಂಚಿನಲ್ಲಿ... 
ಕೆರಳಿದ ಬಾವುಟವೂ ಕುಣಿಯುತ್ತಿದೆ!! 
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
 
  
  
  
  
  
  
  
  
  
 
ನೇಪಾಳಿ ಕವಿ ಮನೋಜ್ ಬೊಗಾಟಿ ಕವನಗಳು
God 
He exhilarates when I get hurt 
Because he owns a pharmaceutical company 
When he sees my bare feet he rejoices, 
Because he owns a shoe company. 
He becomes happy when he sees me naked 
Because he owns a clothing company... 
  
The Owners(Master) 
 manufacture letters, 
The sorrow of the Common people 
Are written by these letters. 
The owners(Master) make 
the breathing tube, 
the heart, the tongue, 
the stomach, 
Life, the rhythm of life, 
The dream that I See... 
  
The  owner 
Constructs a Road  and makes my feet, 
Makes feet and concoct shoes.... 
Contrive dreams and make Eyes. 
  
The Owner(Master) 
Turns 
Thirst into Coca cola, 
Desires into Multi-Complex, 
Hunger into Pizza, 
Manufactures Poison to Kill me. 
  
If the cheeks of my beloved is 
Caressed, 
Beauty cream of a Company 
Sticks on my fingers, 
the fragrance of Branded perfume comes if smelt, 
My Darling, doesn't smell 
Natural. 
  
The fingers accustomed 
Of touching the forehead of a Sick child, 
Are Nowadays 
Touching the Obscene Profile Picture of a Celebrity, 
Leaving the plough, Renegade mind is pressing the like button 
Under the Alarming News of 
Prime Minister's U.S Visit. 
  
After all who is binding and making me 
To Crawl 
Beneath the Master's Boot? 
  
24 hours of Life 
A bit is sucked by Social Networking Sites, 
A bit by Manufacturing Firms, 
A bit by MNCs, 
A bit by The Government , 
A bit by Filthy Politics , 
A bit by THE GOD, 
A bit by Life itself 
  
Whatever is left out, 
Its accounting is left in the hands of a Powerful   contractor 
And 
Is being sent 
To any Political Party's Rally And In return 
Recieves the ecstacy of Police bullet 
On his forehead 
You say! 
On what topic is your most adorable poet... 
Desinging a poem  at this moment? 
  
By Tearing my eyes out, 
Breaking my heart, Foreskining me, Beheading me, Sucking my blood, 
Someone is there 
  
Who is following Ramdev's Pranayama, 
And is reducing the Obesity/Cholestrol, 
Visiting the temples, 
Is living a Sophisticated Life. 
Someone is there 
Who is the centre of gravity, 
Of these things! 
Who is designing your life against your will, 
Who is mapping your vision against your dreams, 
Who is building 
Another Earth 
To  keep all the weaks against your sensibilities. 
Which is against your culture, 
Against your language, Aginst your consciousness, 
They are making heaven and 
Are trying to enthuse Fear within you 
That 
If you do not follow his religion/Sect 
Then 
Your civilization will declare  you as Blasphemists/ defilled/Sinner, 
And will go to the hell. 
  
Someone is there 
Who is becoming 
The master of your Life, 
Or Becoming God! 
  
Dear Nietzsche Said... 
God is dead, 
How can the God be declared Dead? 
  
Manoj Bogati (Nepali) 
  
  	ಯಾರೋ ನಿಮ್ಮ 
ಜೀವನದ ಯಜಮಾನ ಆಗುತ್ತಿದ್ದಾರೆ1  
ನನಗೆ ಹುಷಾರು ತಪ್ಪಿದಾಗ ಅವನು ಕುಣಿದು ಕುಪ್ಪಳಿಸುತ್ತಾನೆ
ಏಕೆಂದರೆ ಅವನು ಫಾರ್ಮಾಸೆಟಿಕಲ್ ಕಂಪನಿ ನಡೆಸುತ್ತಾನೆ
ನಾನು ಬರೀಗಾಗಲಲ್ಲಿ ತಿರುಗಾಡುವದನ್ನು ಕಂಡು ಅವನು ಹಿರಿಹಿರಿ ಹಿಗ್ಗುತ್ತಾನೆ
ಏಕೆಂದರೆ ಅವನು ಶೂ ಕಂಪನಿಯನ್ನು ನಡೆಸುತ್ತಾನೆ
ನಾನು ಬೆತ್ತಲೆ ತಿರುಗುವದನ್ನು ನೋಡಿ ಅವನು ಖುಷಿಪಡುತ್ತಾನೆ
ಏಕೆಂದರೆ ಅವನು  ಬಟ್ಟೆ ಅಂಗಡಿಯನ್ನು ನಡೆಸುತ್ತಾನೆ
ಬಂಡವಾಳಶಾಹಿಗಳು ಕಾಗದಗಳನ್ನು ತಯಾರಿಸುತ್ತಾರೆ
ಆ ಕಾಗದಗಳ ಮೇಲೆ ಸಾಮಾನ್ಯ ಜನರ ಕಷ್ಟಗಳು ಬರೆಯಲ್ಪಡುತ್ತವೆ
ಬಂಡವಾಳಶಾಹಿಗಳು ಕಣ್ಣು, ಮೂಗು, ಹೃದಯ, ನಾಲಿಗೆ, ಹೊಟ್ಟೆ ಹೀಗೆ ಎಲ್ಲವನ್ನೂ ತಯಾರಿಸುತ್ತಾರೆ
ಅಷ್ಟೇ ಏಕೆ ಜಿವನ, ಜೀವನ ಕ್ರಮವನ್ನು ಸಹ ರೂಪಿಸುತ್ತಾರೆ
ಆದರೆ ನಾನು ಕನಸು ಕಾಣುತ್ತಿರುವದೇ ಬೇರೆ......
ಬಂಡವಾಳಶಾಹಿಗಳು 
ರಸ್ತೆ ನಿರ್ಮಿಸುತ್ತಾರೆ ರಸ್ತೆಗನುಗುಣವಾಗಿ ನನ್ನ ಪಾದಗಳನ್ನು ರೂಪಿಸುತ್ತಾರೆ 
ಪಾದಕ್ಕನುಗುಣವಾಗಿ ಶೂಗಳನ್ನು ಮಾಡುತ್ತಾರೆ
ಅಷ್ಟೇ ಅಲ್ಲ ಕನಸುಗಳನ್ನು ಸಹ ಅವರೇ ಯೋಜಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಕಂಗಳನ್ನು ಸಹ ಅವರೇ ರೂಪಿಸುತ್ತಾರೆ
ಬಂಡವಾಳಶಾಹಿಗಳು 
ಬಾಯಾರಿಕೆಯನ್ನು ಕೊಕೊಕೋಲಾವನ್ನಾಗಿಯೂ
ಬಯಕೆಗಳನ್ನು ಮಲ್ಟಿಕಾಂಪ್ಲೆಕ್ಸ್ ಗಳಾಗಿಯೂ 
ಹಸಿವನ್ನು ಪಿಜ್ಜಾಗಳಾಗಿಯೂ
ಪರಿವರ್ತಿಸುತ್ತಾರೆ
ಒಟ್ಟಿನಲ್ಲಿ ತಯಾರಕರು ಹನಿಹನಿಯಾಗಿ ವಿಷವಿಕ್ಕುತ್ತಿದ್ದಾರೆ
ಇನ್ನೊಂದು ತಮಾಷೆ ಕೇಳಿ.......
ಈಗೀಗ ನನ್ನ ಪ್ರೇಯಸಿಗೆ ಮುತ್ತಿಟ್ಟಾಗ 
ಅವಳು ಮೆತ್ತಿಕೊಂಡಿರುವ ಬ್ಯೂಟಿ ಕಂಪನಿಯೊಂದರ ಕ್ರೀಮು ನನ್ನ ತುಟಿ, ಬೆರಳುಗಳಿಗೂ ಮೆತ್ತುತ್ತದೆ
ಒಂದುವೇಳೆ ಅವಳನ್ನು ಮೂಸಿದರೆ ಬ್ರ್ಯಾಂಡೆಡ್ ಪರ್ಫ್ಯೂಮ್ ಸುವಾಸನೆ ಬರುತ್ತದೆ
ಒಟ್ಟಿನಲ್ಲಿ ನನ್ನ ಡಾರ್ಲಿಂಗ್ ಸಹಜ ಪರಿಮಳ ಸೂಸುವದನ್ನು  ನಿಲ್ಲಿಸಿ ಬಹಳ ದಿನವಾಯಿತು
ಹುಷಾರಿಲ್ಲದ ಮಗುವಿನ 
ಹಣೆಯನ್ನು ಮುಟ್ಟಿಮುಟ್ಟಿ ಆರೈಕೆ ಮಾಡುತ್ತಿದ್ದ ಕೈಗಳು
ಈಗೀಗ ಸೆಲೆಬ್ರೆಟಿಯೊಬ್ಬಳ ಅಶ್ಲೀಲ ಪ್ರೊಫೈಲ್ ಪಿಚ್ಚರನ್ನು ಮುಟ್ಟಿಮುಟ್ಟಿ ಖುಷಿಪಡುತ್ತಿವೆ 
ಉತ್ತಬೇಕಾಗಿದ್ದ ನೇಗಿಲನ್ನು ಅಲ್ಲಿಯೇ ಬಿಟ್ಟು
ಪ್ರಧಾನ ಮಂತ್ರಿಯ ಯೂ.ಎಸ್. ಭೇಟಿಯ ಚಿತ್ರವೊಂದಕ್ಕೆ ಲೈಕ್ ಬಟನ್ ಒತ್ತುವದರಲ್ಲಿ ಮಗ್ನವಾಗಿವೆ 
ಭ್ರಷ್ಟಗೆಟ್ಟ ಮನಸ್ಸುಗಳು
ಹಾಗಾದರೆ ನನ್ನನ್ನು ಯಜಮಾನನ ಬೂಟಿನ ಕೆಳಗೆ ಬಿದ್ದು ಹೊರಳಾಡುವಂತೆ ಮಾಡುತ್ತಿರುವರಾದರೂ ಯಾರು? 
೨೪ ಗಂಟೆಯ ಜೀವನ
ಅದರಲ್ಲೊಂದಿಷ್ಟು ಹೊತ್ತು ಸೋಷಿಯಲ್ ನೆಟ್ವರ್ಕಿಂಗ್ 
ಸೈಟ್ ಗಳ ಜೊತೆ
ಒಂದಿಷ್ಟು ಹೊತ್ತು ಜಾಹಿರಾತುಗಳ ಜೊತೆ
ಒಂದಿಷ್ಟು ಹೊತ್ತು MNC ಗಳ ಜೊತೆ 
ಒಂದಿಷ್ಟು ಹೊತ್ತು ಸರಕಾರದ ಜೊತೆ
ಒಂದಿಷ್ಟು ಹೊತ್ತು ಹೊಲಸು ರಾಜಕಾರಣದ ಜೊತೆ
ಒಂದಿಷ್ಟು ಹೊತ್ತು ದೇವರ ಜೊತೆ
ಇಷ್ಟೆಲ್ಲಾ ಕಳೆದು ಹೊತ್ತು ಉಳಿದರೆ ಅದು ನಮ್ಮ  ಬದುಕಿನ ಜೊತೆ
ಇನ್ನೂ ಏನಾದರು ಉಳಿದಿದ್ದರೆ 
ಅದರ ಅಕೌಂಟ್ಸೆಲ್ಲಾ ಒಬ್ಬ ಪವರಫುಲ್ ಕಾಂಟ್ರ್ಯಾಕ್ಟರ್ ಬಳಿ ಉಳಿದಿರುತ್ತದೆ ಮತ್ತು ಅದನ್ನೆಲ್ಲಾ ಪೊಲಿಟಿಕಲ್ ಪಾರ್ಟಿಯ ರ್ಯಾಲಿಗೆ ಕಳಿಸಲಾಗುತ್ತದೆ 
ಇಂಥ ಸಂದರ್ಭದಲ್ಲಿ ನೀವು ಕೇಳುತ್ತೀರಿ
ನಿಮಗೆ ತುಂಬಾ ಇಷ್ಟವಾದ ಕವಿ ಈಗ ಯಾವ ಕವನವನ್ನು  ಬರೆಯುತ್ತಿದ್ದಾನೆಂದು? 
ನನ್ನ ಕಣ್ಣುಗಳನ್ನು ಕಿತ್ತು
ಹೃದಯವನ್ನು ಒಡೆದು 
ನನ್ನ ಸುಂತಿಮಾಡಿ
ತಲೆ ಕತ್ತರಿಸಿ ರಕ್ತಹೀರಲು
ಯಾವನೋ ಒಬ್ಬನಿದ್ದಾನೆ
ಬಾಬಾ ರಾಮದೇವನ ಪ್ರಾಣಾಯಾಮವನ್ನು ಯಾರು ತಾನೆ ಅನುಸರಿಸುತ್ತಿದ್ದಾರೆ 
ಮತ್ತು ಯಾರು ತಾನೆ ಒಬೆಸಿಟಿ, ಕೊಲೆಸ್ಟ್ರಾಲನ್ನು ಕಡಿಮೆಮಾಡುತ್ತಿದ್ದಾರೆ
ಎಲ್ಲರೂ ಗುಡಿಗುಂಡಾರಗಳನ್ನು ಸುತ್ತುತ್ತಾ 
ನಯನಾಜೂಕಿನ ಬದುಕನ್ನು ಬದುಕುತ್ತಿದ್ದಾರೆ
ಈ ಎಲ್ಲದರ ಗುರುತ್ವಕೇಂದ್ರ ಯಾರು? 
ನಿನ್ನ ಇಚ್ಚೆಯ ವಿರುದ್ದ ನಿನ್ನ ಬದುಕನ್ನು ರೂಪಿಸುತ್ತಿರುವರು ಯಾರು? 
ನೀನು ಕನಸು ಕಾಣದಂತೆ ನಿನಗೆ ಮಂಪರನ್ನು ಆವರಿಸುತ್ತಿರುವವರು ಯಾರು?
ಇನ್ನೊಂದು ಜಗತ್ತನ್ನು ಸೃಷ್ಟಿಸುತ್ತಿರುವವರು ಯಾರು?
ನಿನ್ನ ಸಂವೇದನೆಗಳನ್ನು 
ನಿನ್ನ ಸಂಸ್ಕೃತಿ, , ನಿನ್ನ ಭಾಷೆ, ನಿನ್ನ ಪ್ರಜ್ಞಗಳಿಗೆ ವಿರುದ್ಧವಾಗಿ ದುರ್ಬಲಗೊಳಿಸುತ್ತಿರುವವರು ಯಾರು? 
ಅವರು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ 
ನಿಮ್ಮೊಳಗೆ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ 
ಒಂದು ವೇಳೆ
ನೀವು ಅವರ ಧರ್ಮ/ಪಂಥವನ್ನು ಅನುಸರಿಸದಿದ್ದರೆ 
ನಿಮ್ಮ ಸೋ ಕಾಲ್ಡ್ ಸೊಸೈಟಿಯು ನಿಮ್ಮನ್ನು ದೇಶದ್ರೋಹಿ ಎಂದು ಘೋಷಿಸುತ್ತದೆ, 
ಮತ್ತು ನೀವು ನರಕಕ್ಕೆ ಹೋಗಬೇಕಾಗುತ್ತದೆ. 
ಯಾರೋ ಇದ್ದಾರೆ 
ಯಾರೋ ನಿಮ್ಮ ಜೀವನದ ಯಜಮಾನ ಆಗುತ್ತಿದ್ದಾರೆ
ಅಥವಾ ದೇವರಾಗುತ್ತಿದ್ದಾರೆ! 
ಆತ್ಮೀಯ ಸ್ನೇಹಿತನೊಬ್ಬ ಹೇಳಿದನು
ದೇವರು ಸತ್ತಿದ್ದಾನೆ ಎಂದು
ಹಾಗಾದರೆ ದೇವರು ಸತ್ತ ಎಂದು ಹೇಗೆ ಘೋಷಿ ಸುವದು?
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
Yes, I’m Black. Or Black. Or, Acoloured 
Yes, I’m Black. 
Or Black. 
  
Nobody becomes dirty 
If touched by some black. 
Like, nobody becomes clean 
If touched by some white. 
  
Alphabets are also black. 
Your name is written by nigger black letters. 
  
The wound that grows on your skin 
Doesn’t spare mine. 
  
You are White. 
I am Black. 
  
My short nose is as tall as me. 
Or, is as tall as your long nose. 
  
My footsteps are as short as my height 
But I might walk with you. 
I might walk more than you. 
  
Colour doesn’t walk. 
  
You are showing your child the world 
By pointing with the fingers of your hand. 
I’m not pointing with my toe. 
  
They say that eyes are irritated by white light. 
But I never closed my eyes. 
  
I’m farer than colour. 
Darker than colour. 
  
The engine of your vehicle might be well. 
But then that’ll lead you only to the destination of mine. 
  
You couldn’t follow me yet? 
  
Soil doesn’t have colour. 
Water doesn’t have colour. 
Fire doesn’t have colour. 
Wind doesn’t have colour. 
Sound doesn’t have colour. 
  
This is same as 
  
Truth doesn’t have colour. 
Religion doesn’t have colour. 
Peace doesn’t have colour. 
Love doesn’t have colour. 
Passivity doesn’t have colour. 
  
Who you are to talk about colour? 
  
What if I am Black? 
Yes, I am Black. 
Black, or Black. 
Or acoloured. 
-Manoj Bogati
  
  
  	ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ ಅಥವಾ ಬಣ್ಣರಹಿತನಾಗಿದ್ದೇನೆ
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣರಹಿತನಾಗಿದ್ದೇನೆ
ಏನಿವಾಗ?
ಕಪ್ಪನ್ನು ಮುಟ್ಟಿದ ತಕ್ಷಣ 
ಯಾರೂ ಕಪ್ಪಾಗುವದಿಲ್ಲ
ಅಥವಾ ಬಿಳಿ ಬಣ್ಣವನ್ನು ಮುಟ್ಟಿದ ತಕ್ಷಣ 
ಯಾರೂ ಬೆಳ್ಳಗಾಗುವದಿಲ್ಲ
ವರ್ಣಾಕ್ಷರಗಳು ಸಹ ಕಪ್ಪಾಗಿವೆ
ನಿನ್ನ ಹೆಸರನ್ನು ಸಹ ಕಡುಕಪ್ಪು ಅಕ್ಷರಗಳಲ್ಲಿಯೇ ಬರೆಯಲಾಗುತ್ತದೆ
ನೀನು ಬಿಳಿಯ
ನಾನು ಕರಿಯ
ನೀನು ಬೆಳ್ಲಗಿದ್ದಾಕ್ಷಣ ನಿನ್ನ ಚರ್ಮದ ಮೇಲೆ ಬೆಳೆಯುವ ಕುರು ನಿನ್ನನ್ನು ಸುಮ್ಮನೆ ಬಿಡುವದಿಲ್ಲ
ನನ್ನ ಮೂಗು 
ನನ್ನಷ್ಟೇ ಉದ್ದವಾಗಿದೆ
ಅಥವಾ ನಿನ್ನಷ್ಟೇ ಎತ್ತರವಾಗಿದೆ
ನನ್ನ ಹೆಜ್ಜೆಗುರುತುಗಳು ನನ್ನಷ್ಟೇ ಎತ್ತರವಾಗಿವೆ
ಆದರೂ ನಾನು ನಿನ್ನೊಂದಿಗೆ ನಡೆಯಬಲ್ಲೆ
ಅಥವಾ ನಿನಗಿಂತ ಹೆಚ್ಚೇ ನಡೆಯಬಲ್ಲೆ
ನಿನಗೆ ತಿಳಿದಿರಲಿ
ಬಣ್ಣ ನಡೆಯುವದಿಲ್ಲ
ನೀನು ನಿನ್ನ ಮಗುವಿಗೆ ನಿನ್ನ ಬೆರಳಿನಿಂದಲೇ ಈ ಜಗತ್ತನ್ನು ತೋರಿಸುತ್ತಿ
ಮತ್ತಿನ್ನೇನು?
ನಾನು ನನ್ನ ಕಾಲ್ಬೆರಳಿನಿಂದ ತೋರಿಸುತ್ತ್ತೇನೆ ಎಂದುಕೊಂಡೆಯಾ? 
ಜನ ಹೇಳುತ್ತಾರೆ ಬಿಳಿ ಬಣ್ಣ ಕಣ್ಣುಕುಕ್ಕಿಸುತ್ತದೆಂದು 
ಆದರೆ ನಾನು ಯಾವತ್ತೂ ಕಣ್ಣುಮುಚ್ಚಿಲ್ಲ
ನಾನು ಬಣ್ಣಕ್ಕಿಂತ ಬೆಳ್ಳಗಿದ್ದೇನೆ
ಬಣ್ಣಕ್ಕಿಂತ ಕಪ್ಪಗಿದ್ದೇನೆ
ನಿನ್ನ ಬಳಿ ಒಳ್ಲೆಯ ಕಾರು ಇರಬಹುದು
ಆದರೆ ಕೊನೆಗೆ ಅದು ಕಪ್ಪು ನೆಲದ ಮೇಲೆ ನಡೆಯಲೇಬೇಕು
ಆದರೂ ನೀನು ನನ್ನನ್ನು ಅನುಸರಿಸುವದಿಲ್ಲವೇ? 
ಮಣ್ಣಿಗೆ ಬಣ್ಣವಿಲ್ಲ
ನೀರಿಗೆ ಬಣ್ಣವಿಲ್ಲ
ಬೆಂಕಿಗೆ ಬಣ್ಣವಿಲ್ಲ
ಗಾಳಿಗೆ ಬಣ್ಣವಿಲ್ಲ
ಶಬ್ದಕ್ಕೆ ಬಣ್ಣವಿಲ್ಲ
ಅಂತೆಯೇ
ಸತ್ಯಕ್ಕೆ ಬಣ್ಣವಿಲ್ಲ
ಧರ್ಮಕ್ಕೆ ಬಣ್ಣವಿಲ್ಲ
ಶಾಂತಿಗೆ ಬಣ್ಣವಿಲ್ಲ
ಪ್ರೀತಿಗೆ ಬಣ್ಣವಿಲ್ಲ
ಜಡತ್ವಕ್ಕೆ ಬಣ್ಣವಿಲ್ಲ
ಬಣ್ಣಗಳ ಬಗ್ಗೆ ಮಾತನಾಡಲು ನೀನು ಯಾರು? 
ನಾನು ಕರ್ರಗಿದ್ದರೆ ಏನಿವಾಗ? 
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣವಿಲ್ಲದವನಾಗಿದ್ದೇನೆ
ಏನಿವಾಗ?
ಮೂಲ ನೇಪಾಳಿ:  ಮನೋಜ್ ಬೊಗಾಟಿ
ಕನ್ನಡಕ್ಕೆ:  ಉದಯ ಇಟಗಿ
History 
Ancestor bones are discovered 
Wherever dug 
This is Teeth. 
This has chewed down an age. 
It has bitten Time to dust and repaired a house-wall. 
This is Shin-bone. 
A monk in a village invokes for peace 
Blowing this with his mouth 
During uneasy hours, 
A procession passes through the town 
Crying slogans 
Of “Long Live” 
Of “Down With” 
While he is still blowing 
The news of someone hacking time’s head to death 
Is published in the news-magazine 
The very next day 
And this is spine, 
Folk-story 
For descendants wearing bamboo-spines 
Don’t know what bone is this. 
It’s broken so bluntly 
Looks like it split 
As it fell into the pit of some evil design 
This skull 
Wearing a fatal cut-mark of a khukuri 
Was grounded under 
Intellectuals talk of analyzing history threadbare, 
I dug up in the patio at the front 
Only to uncover my own placental lump 
I think I am digger 
Who knows no digging! 
  	  ಇತಿಹಾಸ
ಅಗೆದ ಕಡೆಗೆಲ್ಲಾ
ಪೂರ್ವಿಕರ ಮೂಳೆಗಳು ಸಿಕ್ಕಿವೆ
ಇದು ಅವರ ಹಲ್ಲು
ವರ್ಷವರ್ಷಗಳವರೆಗೂ ಅಗೆದಿದೆ
ಕಾಲವನ್ನು ಕಡಿದು ಪುಡಿಮಾಡಿ
ಮನೆಯಗೋಡೆಯನ್ನು ರಿಪೇರಿ ಮಾಡಿದೆ
ಇದು ಮೊಣಕಾಲು ಮೂಳೆ
ಇದನ್ನು ಹಳ್ಳಿಯೊಂದರ ಸನ್ಯಾಸಿಯೊಬ್ಬ 
ಪ್ರಕ್ಷುಬ್ದ ಸಮಯದಲ್ಲಿ
ತನ್ನ ಬಾಯಲ್ಲಿಟ್ಟುಕೊಂಡು ಊದುತ್ತಾನೆ
ಮೆರವಣಿಗೆಯೊಂದು ಊರತುಂಬಾ ಹೊರಡುತ್ತದೆ
"ಹೆಚ್ಚು ದಿನ ಬದುಕಿರಿ"
"ಕೆಳಗಿಳಿಯಿರಿ" 
ಎಂಬ ಘೋಷಣೆಗಳನ್ನು ಕೂಗುತ್ತಾ. 
ಅವನಿನ್ನೂ ಊದುತ್ತಿರುವಾಗಲೇ
ಯಾರೋ ಒಬ್ಬರು ಕಾಲನ ತಲೆಯನ್ನು ಕಡಿದು
ಉರುಳಿಸಿದ ಸುದ್ದಿಯೊಂದು ಮಾರನೆಯ ದಿನ ಮುಂಜಾನೆ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ
ಇದು ಬೆನ್ನುಮೂಳೆ
ಜಾನಪಸ ಕಥೆಯೊಂದು ಹೇಳುತ್ತದೆ
ಪೂರ್ವಜರೆಲ್ಲಾ ಬಿದಿರಿನ ಬೆನ್ನುಮೂಳೆಯನ್ನು ಹೊಂದಿದ್ದರೆಂದು
ಇದು ಯಾವ ಮೂಳೆಯೆಂದು ಗೊತ್ತಿಲ್ಲ
ಯಾವುದೋ ದುಷ್ಟಶಕ್ತಿಗೆ ಅಡ್ಡಾದಿಡ್ಡಿಯಾಗಿ ಮುರಿದಿದೆ
ಇದು ತಲೆಬುರುಡೆ
ಇದರ ಮೇಲೆ ಹೊಡೆದ ಗುರುತಿದೆ
ಆಳದಲ್ಲಿ ಹೂತುಕೊಂಡಿತ್ತು
ಬುದ್ಧಿಜೀವಿಗಳು ಇದರ ಇತಿಹಾಸದ ಎಳೆಯನ್ನು ಹುಡುಕಿಹೊರಟಿದ್ದಾರೆ
ನಾನು ತಲೆಬಾಗಿಲಲ್ಲಿರುವ ಒಳಾಂಗಣದಲ್ಲಿ ಅಗೆಯುತ್ತೇನೆ
ಹೊಕ್ಕಳ ಬಳ್ಳಿಯ ಮೂಲವನ್ನು ಹುಡುಕುತ್ತಾ
ನಾನೊಬ್ಬ  ಅಗೆಯುವವ 
ಆದರೆ ಹೇಗೆ ಅಗೆಯಬೇಕೆಂದು ಗೊತ್ತಿಲ್ಲದವ!
ಮೂಲ ನೇಪಾಳಿ:  ಮನೋಜ್ ಬೊಗಾಟಿ
ಕನ್ನಡಕ್ಕೆ:  ಉದಯ ಇಟಗಿ
If there is a song within you, sing it out
Do not wait for others to declare your words as poetry
They are yours, not theirs!
Write them down.
Do not let someone else Make your shaky path steady,
It is yours, not theirs! Walk it through!
Don't wait for someone to connect your inner light to the stars,
It is yours, not theirs!
Let it shine bright.
If there is a song within you,
Do not wait for someone to tune it,
It is yours, not theirs! Sing it out loud.
*Kannada Original: M. R. Kamala*
*English Translation: Uday Itagi*
ನಿಮ್ಮೊಳಗೆ ಹಾಡುಗಳಿದ್ದರೆ ಹಾಡಿಬಿಡಿ 
ನಿಮ್ಮೊಳಗಿನ ಪದಗಳಿಗೆ ಯಾರೋ 
ಕವಿತೆಯ ಮುದ್ರೆ ಒತ್ತಲೆಂದು ಕಾಯಬೇಡಿ 
ಅದು ನಿಮ್ಮದೇ, ಅವರದಲ್ಲ! ಬರೆದುಬಿಡಿ  
ನಿಮ್ಮೊಳಗಿನ ತೂಗುಹಾದಿಯ ಯಾರೋ  
ಗಟ್ಟಿ ನಿಲ್ಲಿಸಿ ಬೀಗಲೆಂದು ಬಿಡಬೇಡಿ 
ಅದು ನಿಮ್ಮದೇ, ಅವರದಲ್ಲ, ನಡೆದುಬಿಡಿ 
ನಿಮ್ಮೊಳಗಿನ ನಕ್ಷತ್ರದುರಿಗೆ ಯಾರೋ 
ಬೆಳಕಿನ ಪಟ್ಟ  ಕಟ್ಟಲೆಂದು  ನಿರೀಕ್ಷಿಸಬೇಡಿ 
ಅದು ನಿಮ್ಮದೇ, ಅವರದಲ್ಲ, ಬೆಳಗಿಬಿಡಿ    
ನಿಮ್ಮೊಳಗೊಂದು ಹಾಡಿದ್ದರೆ ಯಾರೋ 
ರಾಗ ಹಾಕಲೆಂದು ಕಾದು ಕೂರಬೇಡಿ 
ಅದು ನಿಮ್ಮದೇ, ಅವರದಲ್ಲ, ಹಾಡಿಬಿಡಿ
Letting go is not out of love or compassion for others
Letting go is not out of love or compassion for others, 
but for us to feel lighter.
If we keep holding on,
it might be a bond for them...
but our hands will tire too
Kannada Original: Chethana Teerthahalli
English Translation: Uday Itagi
ಬಿಟ್ಟುಕೊಡುವುದು ಮತ್ತೊಬ್ಬರ ಮೇಲಿನ ಪ್ರೀತಿಯಿಂದಲೋ ಅನುಕಂಪದಿಂದಲೋ ಅಲ್ಲ, 
ನಾವು ಹಗುರಾಗಲಿಕ್ಕೆ. 
ಹಿಡಿದುಕೊಂಡೇ ಇದ್ದರೆ, 
ಅವರಿಗೇನೋ ಬಂಧನ...
ನಮ್ಮ ಕೈಯೂ ಸೋಲುವುದು.
Let’s love simply, my friend
Let’s love simply, my friend.
No excessive drama,
No intense emotions,
No endless promises,
No far-fetched plans,
No gifts given after too much thought –
None of these are necessary.
Clear communication, understanding,
Time that feels entirely ours when we're together,
A warm hug,
An unspoken connection through our eyes,
Mutual compassion – that's all we need.
Life is already complex enough.
Let’s love as simply as we can.
Kannada Original: Kusuma Ayarahalli
English Translation: Uday Itagi
ಸರಳವಾಗಿ ಪ್ರೇಮಿಸೋಣ ಗೆಳೆಯ
ವಿಪರೀತ ನಾಟಕ,  
ತೀವ್ರಭಾವುಕತೆ,  
ಮುಗಿಯದ ಭರವಸೆ
ಬಲುದೂರದ ಯೋಜನೆಗಳು,
ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, 
ಯಾವುದಂದರೆ ಯಾವುದೂ ಬೇಡ
ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ
ಜೊತೆಗಿರುವಷ್ಟು ಹೊತ್ತೂ 
ನಮ್ಮದು ಮಾತ್ರವೆನಿಸುವ ಸಮಯ
ಒಂದು ಗಾಢ ಅಪ್ಪುಗೆ. 
ಕಣ್ಣ ಮಾತು. ಪರಸ್ಪರ ಕಾರುಣ್ಯ! 
ಸಾಕಿಷ್ಟು. 
ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ.
ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ!
- ಕುಸುಮ ಆಯರಹಳ್ಳಿ
(ಈ ಫೊಟೋ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಳೆಂದು ಸುದ್ದಿಯಾಗುತ್ತಿರುವ ಸುಂದರಿ ಮೊನಾಲಿಸಾಳದು. ಎಂತಾ ಕಣ್ಣು!  ಒಂದು ಪದ್ಯ ಹುಟ್ಟಿಸಿಬಿಟ್ಟಿತು.)
Oh Uma, is it really so?
Oh Uma, is it really so?
Is what people say true?
They say Shiva wanders far and wide,
Covered his body  in ashes from the cremation ground
Devoid of food and clothes,
He roams from village to village
Yet, you too adorn your golden body
With that same ash, they say.
For the mistake of being your mother,
Must I endure this humiliation?
And when Shiva comes calling for you again,
I shall tell him, "Uma is not at home"?
Kannada Original: Dr. G. S. Shivarudrappa
English Translation: Uday Itagi 
ಹೌದೇನೇ ಉಮಾ ಹೌದೇನೇ.
ಜನವೆನ್ನುವುದಿದು ನಿಜವೇನೇ ?-
ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ !
ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬುವನಂತೆ !
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ.
ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ? ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ
‘ಮನೆಯೊಳಿಲ್ಲ ಉಮೆ’- ಎನ್ನುವೆನು.
-ಡಾ|| ಜಿ ಎಸ್ ಶಿವರುದ್ರಪ್ಪ 	
ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲ, ಆನೆ ನಡೆದಿದ್ದೇ ದಾರಿಯಾಗಿದೆ...
(ಇವತ್ತು ಡಿಸೆಂಬರ್ 30. ಇವತ್ತಿಗೆ  ಸದ್ದಾಂ ಹುಸೇನ್ ನ್ನು ಗಲ್ಲಿಗೇರಿಸಿ ಸರಿಯಾಗಿ ಹದಿನೆಂಟು ವರ್ಷಗಳು ಕಳೆದವು.  ಆ ನೆಪದಲ್ಲಿ ಇದೊಂದು ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.)
ಸುತ್ತಲೂ ಕೈಯಲ್ಲಿ ಗನ್ನುಗಳನ್ನು, ಬಂದೂಕಗಳನ್ನು ಹಿಡಿದು ಆತನನ್ನು ಬೆನ್ನಟ್ಟಿ ಬಂದ ಪುಂಡರು (ಬಂಡುಕೋರರು). ಮಧ್ಯದಲ್ಲಿ ಮನುಷ್ಯ ಸಹಜ ಪ್ರಾಣ ಭೀತಿಯಿಂದ ರಸ್ತೆ ಅಡಿಯ ಕೊಳವೆಯೊಂದರಲ್ಲಿ ಅಡಗಿ ಕುಳಿತ ವ್ಯಕ್ತಿ. ಕೊನೆಗೂ ಆ ಪುಂಡರು  ಅವನನ್ನು ಕೊಳವೆಯಿಂದಾಚೆ ದರದರನೆ ಎಳೆದು ತಂದು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಕೆನ್ನೆಗೆ ಬಾರಿಸುತ್ತಾ, ತಲೆಯ ಮೇಲೆ ಮೊಟಕುತ್ತಾ, ಕೆಳಗೆ ಬೀಳಿಸಿ ಒದೆಯುತ್ತಾ ವಿಲಕ್ಷಣ ಖುಷಿ ಪಡುವಾಗ ಕೆಳಗೆ ಬಿದ್ದ ವ್ಯಕ್ತಿ "Please don't beat me. What harm have I done to you?" ಎಂದು ಗೋಗರೆಯುತ್ತಿದ್ದರೂ ಲೆಕ್ಕಿಸದೇ ಆತನಿಗೆ ರಕ್ತ ಬರುವ ಹಾಗೆ ಹೊಡೆಯುತ್ತಲೇ ಇದ್ದ ಮನುಷ್ಯರು ಆ ಸಮಯದಲ್ಲಿ ನಿಜಕ್ಕೂ ರಾಕ್ಷಸ ಅವತಾರವನ್ನು ತಾಳಿದ್ದರು. ಈ ಮಧ್ಯ ಸನ್ನಿಗೊಳಗಾದ ಪುಂಡನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದಾಗ ಮತ್ತೆ ಆ ವ್ಯಕ್ತಿ "Don't kill me." ಎಂದು ಅರಚಿತ್ತಿದ್ದರೂ ಬಿಡದೆ ಮನಬಂದಂತೆ ಗುಂಡಿನ ಮೇಲೆ ಗುಂಡುಗಳನ್ನು ಹಾರಿಸಿ ಅವನ ಪ್ರಾಣವನ್ನು ತೆಗೆಯುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಅವನ ಸಾವನ್ನು ಸಂಭ್ರಮಿಸಿ ಸಂತೋಷಪಟ್ಟರು. ಹೀಗೆ ಹೀನಾಯವಾಗಿ ಕೊಲ್ಲಲ್ಪಟ್ಟ ಆ ವ್ಯಕ್ತಿಯೇ ಮೊಹಮ್ದ ಗಡಾಫಿ. ಅವರು ಅವನ ಸಾವನ್ನು ಸಂಭ್ರಮಿಸಿದರು, ಹೊಸ ನಾಡೊಂದನ್ನು ಕಟ್ಟುತ್ತೇವೆ ಎಂದು ಘೋಷಿಸಿದರು. ಆದರೆ ನಿಜಕ್ಕೂ ಇವರು ಹೊಸ ನಾಡೊಂದನ್ನು ಕಟ್ಟಿದರೆ? ಲಿಬಿಯಾದಲ್ಲಿ ಹೊಸತನವನ್ನು ತಂದರೆ? ಇಲ್ಲವೇ ಇಲ್ಲ! ಬದಲಿಗೆ ಗಡಾಫಿಯ ಹತ್ಯೆಯಾದ ದಿನದಿಂದಲೇ ಲಿಬಿಯಾ ಅಧೋಗತಿಗೆ ಇಳಿಯುತ್ತಾ ಹೋಯಿತು. ನಳನಳಿಸುತ್ತಿದ್ದ ಲಿಬಿಯಾ ಮುರಿದು ಇನ್ನೆಂದೂ ರಿಪೇರಿ ಮಾಡದ ಹಂತ ತಲುಪಿತು. ಕಂಗೊಳಿಸುತ್ತಿದ್ದ ಲಿಬಿಯಾವನ್ನು ಒಡೆದು ಚೂರು ಚೂರು ಮಾಡಿದ ಆ ಮಹಾನ್ ಶಕ್ತಿಗಳಿಗೆ ಧಿಕ್ಕಾರವಿರಲಿ. ಗಡಾಫಿಯ ಉಪ್ಪಿನ ಋಣದ ಅರಿವು ಇವರಿಗೆ ಕಿಂಚಿತ್ತಾದರೂ ಇದ್ದಿದ್ದರೆ ಇವರು ಹೀಗೆ ಮಾಡುತ್ತಿದ್ದರೆ? 
ಇಂಥದೇ ಇನ್ನೊಂದು ಸಂದರ್ಭ. ಆದರೆ ಕೊಂಚ ಭಿನ್ನ. ಅದು ಇರಾಕಿನ ಕೋರ್ಟು. ಬೆಳಗಿನ ಆರು ಘಂಟೆಯ ಸಮಯ. ಆವತ್ತು ಸದ್ದಾಂ ಹುಸೇನ್ ಕೇಸಿಗೆ ಸಂಬಂಧಪಟ್ಟ ಕೊನೆಯ ತೀರ್ಪು ಹೊರಬೀಳುವದಿತ್ತು. ಸದ್ದಾಂ ಹುಸೇನ್ ಕಟಕಟೆಯಲ್ಲಿ ಒಂಚೂರು ಅಧೀರನಾಗದೆ ಅಚಲನಾಗಿ ನಿಂತಿದ್ದಾನೆ. ಈಗಾಗಲೇ ಪೂರ್ವ ನಿರ್ಧರಿತಗೊಂಡ ಸದ್ದಾಂ ಹುಸೇನ್ ವಿರುದ್ಧದ ಮರಣ ದಂಡನೆಯ ಅಂತಿಮ ತೀರ್ಪನ್ನು ನ್ಯಾಯಾಧೀಶರು ಓದುತ್ತಿದ್ದಾರೆ. ಆ ತೀರ್ಪು ಏನು ಬರತ್ತದೆ ಎಂದು ಈಗಾಗಲೇ ಮನಗಂಡಿದ್ದ ಸದ್ದಾಂ ಹುಸೇನ್ ಆಕ್ರೋಶದಿಂದ "You American dog! You wretched beast! You will be a slave to Israelis! ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್!" ಎಂದು ಕೂಗುತ್ತಲೇ ಇದ್ದ. ತೀರ್ಪನ್ನು ಓದಿದ ನಂತರ ಆತನನ್ನು ಗಲ್ಲಿಗೇರಿಸುವ ಕೋಣೆಗೆ ಕರೆತರಲಾಗುತ್ತದೆ. ಆಗಲೂ ಸದ್ದಾಂ ಒಂಚೂರು ಹೆದರದೆ ಎಂದಿನ ಅದೇ ಗತ್ತಿನಿಂದ ಸಾವಿನ ಕೋಣೆಗೆ ನಡೆದು ಬರುತ್ತಾನೆ. ನೇಣುಗಂಬದ ಮುಂದೆ ನಿಲ್ಲಿಸಲಾಗುತ್ತದೆ. ಅತ್ತ ಮುಸುಕು ಹಾಕಿಕೊಂಡ ಒಂದಿಬ್ಬರು ಅಮೆರಿಕನ್ ಸೈನಿಕರು. ಇತ್ತ ಒಂದಿಬ್ಬರು ಇರಾಕಿ ಜೈಲು ಅಧಿಕಾರಿಗಳು. ಆ ಮುಸುಕುಧಾರಿಗಳನ್ನು ಗುರುತು ಹಿಡಿದ ಸದ್ದಾಂ ಹುಸೇನ್ ತನ್ನ ವ್ಯಂಗ್ಯದ ಮಾತುಗಳಿಂದ ಅವರನ್ನು ಚುಚ್ಚುತ್ತಾನೆ. ಆಗ ಜೈಲು ಅಧಿಕಾರಿಗಳು ಆತನನ್ನು "ನಿಮ್ಮ ಕೊನೆಯ ಆಸೆ ಏನು?" ಎಂದು ಕೇಳುತ್ತಾರೆ. ಅದಕ್ಕವನು "ನಾನು ಕೈಯಲ್ಲಿ ಹಿಡಿದಿರುವ ಕುರಾನ್ನ್ನು ನನ್ನ ಸ್ನೇಹಿತನ ಮಗನ ಕೈಗೆ ಕೊಡಿ" ಎಂದು ಹೇಳುತ್ತಾನೆ. ಇಷ್ಟರಲ್ಲಿಯೇ ಈತನ ಸ್ನೇಹಿತನನ್ನೂ ಸಹ ಗಲ್ಲಿಗೇರಿಸುವದು ನಿರ್ಧಾರವಾಗಿರುತ್ತದೆ. ಕುಣಿಕೆಯು ಅವನ ಕುತ್ತಿಗೆಗೆ ಬೀಳುವ ಮೊದಲು ಸದ್ದಾಂ ಹೀಗೆಂದು ಕೂಗುತ್ತಲೇ ಇದ್ದ "Long live the nation! Long live the people! Long live the Palestinians!" ಆದರೆ ನಿಜಕ್ಕೂ ಅವನ ಸಾವಿನ ನಂತರ ಇರಾಕ್ ತನ್ನ ಹಿಂದಿನ ವೈಭವವನ್ನು ಮರಳಿಪಡೆಯಿತೇ? ಇಲ್ಲವೇ ಇಲ್ಲ. ಅದು ಕೂಡ ಮುರಿದುಹೋದ ಸಾಮ್ರಾಜ್ಯಗಳ ಸಾಲಿನಲ್ಲಿ ಒಂದಾಗಿ ನಿಂತಿತು. 
  
ಈ ಎರಡು ಘಟನೆಗಳು ಎಂಥವರನ್ನೂ ಮನ ಕಲುಕದೇ ಬಿಡುವದಿಲ್ಲ. ಈ ಎರಡು ಘಟನೆಗಳಿಂದ ಜಗತ್ತಿನ ದೈತ್ಯ ಶಕ್ತಿಗಳು ತಮಗಾಗದವರನ್ನು ಹೇಗೆ ಮುಗಿಸುತ್ತವೆ ಎಂಬುದನ್ನು ಮನದಟ್ಟು ಮಾಡುತ್ತವೆ ಮತ್ತು ಚೆಂದವಾಗಿ ಸಾಗುತ್ತಿದ್ದ ಎರಡು ದೇಶಗಳನ್ನು ಹೇಗೆ ಹಾಳುಗೆಡವಿದರು ಎಂಬುದು ಗೊತ್ತಾಗುತ್ತದೆ. ಜೊತೆಗೆ ಮಾಧ್ಯಮಗಳು ಹೇಗೆ ಒಳಸತ್ಯವನ್ನು ಮರೆಮಾಚಿ ಸುಳ್ಳನ್ನೇ ಸತ್ಯವೆಂದು ನಂಬಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ. 
ನಾನು ಲಿಬಿಯಾಕ್ಕೆ ಹೋಗಿದ್ದು 2007 ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ. ಅದಕ್ಕೆ ಸರಿಯಾಗಿ ಹತ್ತು ತಿಂಗಳುಗಳ ಹಿಂದೆಯಷ್ಟೇ ಅಂದರೆ 2006 ರ ಡಿಸೆಂಬರ್ 30 ರಂದು ಇರಾಕಿನಲ್ಲಿ ಸದ್ದಾಂ ಹುಸೇನ್ನ್ನು ಗಲ್ಲಿಗೇರಿಸಿಲಾಗಿತ್ತು. ಅದು ಭಾರಿ ಸುದ್ದಿಯಾಗಿತ್ತು. ಪತ್ರಿಕೆಗಳಲ್ಲೆಲ್ಲಾ ಅವನದೇ ಸುದ್ದಿ. ಟೀವಿ ಮಾಧ್ಯಮಗಳು ಸಹ ಅವನೊಬ್ಬ ಖಳನಾಯಕನೆಂಬಂತೆ ಚಿತ್ರಿಸಿದ್ದವು. ನಾವು ಕೂಡಾ ಅದೇ ಸತ್ಯವೆಂದು ನಂಬಿದ್ದೆವು. ಆದರೆ ನಾನು 2007 ರಲ್ಲಿ ಲಿಬಿಯಾಕ್ಕೆ ಬಂದಿಳಿದಾಗ ನಮ್ಮ ಕಾಲೇಜಿನಲ್ಲಿ ನನ್ನೊಟ್ಟಿಗೆ ನಾಲ್ಕು ಜನ ಇರಾಕಿ ಪ್ರೊಫೆಸರ್ ಗಳು ಕೆಲಸ ಮಾಡುತ್ತಿದ್ದರು. ನಾನವರನ್ನು ಕಂಡೊಡನೆ “Was Saddam Hussein really so cruel? Did he really exploit you? How did you tolerate his atrocities?” ಎಂದೆಲ್ಲಾ ಅವರನ್ನು ಕೇಳಿದಾಗ ಅವರಲ್ಲಿ ಒಂದಿಬ್ಬರು ಸಪ್ಪೆ ಮುಖ ಮಾಡಿದರೆ ಇನ್ನೊಬ್ಬರು ಅತ್ತೇ ಬಿಟ್ಟರು. ನಾನು ಗಾಭರಿ ಬಿದ್ದು ಯಾಕೆ ಏನಾಯಿತೆಂದು ಕೇಳಿದಾಗ ಅವರೆಲ್ಲಾ ಅದು ಅಮೆರಿಕಾ ಹೇಳಿದ ಸುಳ್ಳು ಸುದ್ದಿ, ಇರಾಕಿನಲ್ಲಿದ್ದ ತೈಲ ಸಂಪತ್ತನ್ನು ದೋಚಲು ಅಮೆರಿಕಾ ಏನೆಲ್ಲಾ ಹುನ್ನಾರಗಳನ್ನು ಮಾಡಿತು ಮತ್ತು ಸದ್ದಾಂ ಹುಸೇನ್ ಎಷ್ಟೆಲ್ಲಾ ಒಳ್ಳೆಯವನಾಗಿದ್ದ ಎಂಬುವದನ್ನು ಸೂಚ್ಯವಾಗಿ ಹೇಳಿದ್ದರು. ಇರಾಕಿನ ರಾಜಧಾನಿ ಬಾಗ್ದಾದನ್ನು ಸಿಂಗಾಪೂರಿಗಿಂತ ಮೂರುಪಟ್ಟು ಅಭಿವೃದ್ದಿ ಪಡೆಸಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಲಿಬಿಯಾಕ್ಕೂ ಕೂಡಾ ಆ ಗತಿ ಬರಬಹುದೆಂದು ಹೇಳಿದಾಗ ನಾನವರನ್ನು ನಂಬಿರಲಿಲ್ಲ. ಆದರೆ 2011 ರಲ್ಲಿ ಲಿಬಿಯಾದಲ್ಲಿ ಕ್ರಾಂತಿ ಆರಂಭವಾದಾಗ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿ ಮತ್ತು ಆತನ ಲಿಬಿಯಾದ ಬಗ್ಗೆ ವ್ಯತಿರಿಕ್ತವಾದ ಚಿತ್ರಣಗಳನ್ನು ತೋರಿಸುವಾಗ ಅವರ ಮಾತುಗಳು ವಾಸ್ತವದಲ್ಲಿ ಅರಿವಾಗಿ ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಮಾಡುತ್ತದೆ ಎಂದು ತಿಳಿದು ಭಾರೀ ನೋವಾಗಿತ್ತು.  
ಮೌಮರ್ ಗಡಾಫಿ ಮತ್ತು ಸದ್ದಾಂ ಹುಸೇನ್ ಎಂಬಿಬ್ಬರು ನಮ್ಮ ಕಾಲದ ನಿರಂಕುಶವಲ್ಲದ ನಿರಂಕುಶ ಆಡಳಿತಗಾರರಾಗಿದ್ದರೂ ಸದಾ ತಂತಮ್ಮ ದೇಶದ ಏಳ್ಗೆಗಾಗಿ ದುಡಿದವರು. ಸದ್ದಾಂ ಹುಸೆನ್ ಇರಾಕ್ನ ಅಧ್ಯಕ್ಷರಾಗಿದ್ದರೆ ಗಡಾಫಿ ಲಿಬಿಯಾದ ಅನಧಿಕೃತ ಆಡಳಿತಗಾರನಾಗಿದ್ದನು. ಇಬ್ಬರೂ ತಮ್ಮ ಸರ್ಕಾರಗಳು ಮತ್ತು ಮಿಲಿಟರಿಯ ಮೇಲೆ ಕಟ್ಟುನಿಟ್ಟಾದ ನಿಯಂತ್ರಣದ ಮೂಲಕ ಅಧಿಕಾರವನ್ನು ಕ್ರೋಢೀಕರಿಸುವ ಮೂಲಕ ಸರ್ವಾಧಿಕಾರಿ ನಾಯಕರಾಗಿ ಆಳ್ವಿಕೆ ನಡೆಸಿದರು. ಆದರೆ ವಾಸ್ತವದಲ್ಲಿ  ಇಬ್ಬರೂ ಸಮಾಜವಾದಿಗಳಾಗಿದ್ದರು.  ಜೊತೆಗೆ ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು.  ಇಬ್ಬರೂ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಲ್ ಗಡಾಫಿ 1969 ರಲ್ಲಿ ಆಗಿನ ರಾಜ ಇದ್ರಿಸ್ ಅನ್ನು ರಕ್ತರಹಿತ ಕ್ರಾಂತಿಯ ಮೂಲಕ ಪದಚ್ಯುತಗೊಳಿಸಿ ದೇಶದ ಆಳ್ವಿಕೆಯನ್ನು ವಹಿಸಿಕೊಂಡಾಗ ಅವನು ಸೈನ್ಯದಲ್ಲಿ ಕಿರಿಯ ಅಧಿಕಾರಿಯಾಗಿದ್ದನು. ಎಂಟು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರ 1977 ರಿಂದ ರಾಷ್ಟ್ರವನ್ನು ಯಾವುದೇ ಹುದ್ದೆಯಿಲ್ಲದೆ ನಿಯಂತ್ರಿಸುತ್ತಿದ್ದನು. ಅವನು ಲಿಬಿಯಾ ದೇಶವನ್ನು 42 ವರ್ಷಗಳ ಕಾಲ ಸಮರ್ಥವಾಗಿ ಆಳಿ ಇಡೀ ಆಫ್ರಿಕಾ ಖಂಡದಲ್ಲಿ ಮುಂಚೂಣಿಯಲ್ಲಿಟ್ಟಿದ್ದನು. ಲಿಬಿಯಾದಲ್ಲಿ ದೊರೆತ ತೈಲವನ್ನು ತನ್ನ ರಾಷ್ಟ್ರದ ಏಳಿಗೆಗಾಗಿ ಬಳಸಿದನು. 
ಆದರೆ ಸದ್ದಾಂ ಹುಸೇನ್ ಮಿಲಿಟರಿ ಮತ್ತು ಪಕ್ಷದ ರಚನೆಗಳ ಮೇಲೆ ಹೆಚ್ಚು ಅವಲಂಬಿಸಿದ್ದ ಬಾತ್ ಪಾರ್ಟಿಯಲ್ಲಿನ ಪಾತ್ರದ ಮೂಲಕ ಅಧಿಕಾರಕ್ಕೆ ಬಂದನು. ಅವನು ಕೂಡಾ ತೈಲದಿಂದ ಬಂದ ಲಾಭವನ್ನು ಜನರ ಉದ್ದಾರಕ್ಕಾಗಿ ಬಳಸಿಕೊಂಡನು. ಇಬ್ಬರೂ ನಾಯಕರು ಬಲವಾದ ವ್ಯಕ್ತಿತ್ವ ಆರಾಧನೆಗಳನ್ನು ಬೆಳೆಸಿದರು, ತಮ್ಮ ರಾಷ್ಟ್ರಗಳಿಗೆ ತಮ್ಮನ್ನು ತಾವು ಅನಿವಾರ್ಯವೆಂದು ಬಿಂಬಿಸಿದರು. ಅವರ ಚಿತ್ರಗಳು ಮತ್ತು ಭಾಷಣಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು ಮತ್ತು ಪ್ರಸಾರ ಮಾಡಲಾಯಿತು .ಇಬ್ಬರೂ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ, ನಿರ್ದಿಷ್ಟವಾಗಿ ಅಮೆರಿಕಾದ ತೀವ್ರ ಟೀಕಾಕಾರರಾಗಿದ್ದರು. ಅವರು ಆಗಾಗ್ಗೆ ತಮ್ಮನ್ನು ಅರಬ್ ರಾಷ್ಟ್ರೀಯತೆಯನ್ನು ಕಾಪಾಡಿಕೊಳ್ಳುವ ಮತ್ತು ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ಬಂದ ನಾಯಕರೆಂದು ಬಿಂಬಿಸಿಕೊಂಡರು.
ಇಬ್ಬರೂ ಆಕ್ರಮಣಕಾರಿ ವಿದೇಶಿ ನೀತಿಗಳಲ್ಲಿ ತೊಡಗಿದ್ದರು.  ಗಡಾಫಿ 1965 ರಲ್ಲಿ ಚಾದ್ನಲ್ಲಿ ಅಲ್ಲಿಯ ಚಕ್ರವರ್ತಿಯ ವಿರುದ್ಧ ಅಲ್ಲಿನ ಜನ ದಂಗೆ ಎದ್ದಾಗ ಲಿಬಿಯಾದ ಮೊದಲ ಅರಸ ಇದ್ರಿಸ್ ಬಂಡುಕೊರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವದರ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಚಕ್ರವರ್ತಿಯ ಸಹಾಯಕ್ಕೆ ಫ್ರಾನ್ಸ್ ನಿಲ್ಲುತ್ತದೆ. ಈ ತಿಕ್ಕಾಟ ನಾಲ್ಕು ವರ್ಷಗಳವೆರೆಗೆ ನಡೆಯುತ್ತಲೇ ಇರುತ್ತದೆ. ಇತ್ತ ಲಿಬಿಯಾದಲ್ಲಿ 1969 ರಲ್ಲಿ ಇದ್ರಿಸ್ನನ್ನು ಕಿತ್ತೆಸೆದು ಮೌಮರ್ ಗಡಾಫಿ ಅಧಿಕಾರಕ್ಕೆ ಬರುತ್ತಾನೆ. ಬಂದವನೇ ಚಾದ್ನ ಉತ್ತರ ಭಾಗವನ್ನು ರಷಿಯಾದ ಸಹಾಯದಿಂದ ಆಕ್ರಮಿಸಿಕೊಂಡು ಅಲ್ಲಿ ಲಿಬಿಯಾದ ಮಿಲ್ಟ್ರಿ ಬೇಸ್ನ್ನು ಸ್ಥಾಪಿಸುತ್ತಾನೆ. ಇದಲ್ಲದೆ ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹೋಗುತ್ತಾನೆ. ಅದೇ ರೀತಿ ಸದ್ದಾಂ 1980 ರಲ್ಲಿ ಇರಾನ್ ಮೇಲೆ ಆಕ್ರಮಣ ಮಾಡುವದರ ಮೂಲಕ ಇರಾನ್-ಇರಾಕ್ ಯುದ್ಧಕ್ಕೆ ಕಾರಣನಾಗುತ್ತಾನೆ ಮತ್ತು ನಂತರ 1990 ರಲ್ಲಿ ಕುವೈತ್ ಅನ್ನು ಆಕ್ರಮಿಸಿಕೊಳ್ಳುತ್ತಾನೆ. ಇಬ್ಬರೂ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದರು. ಯಹೂದಿಗಳ ಹುಟ್ಟು ವೈರಿಗಳಾದ ಪ್ಯಾಲೇಸ್ತೇನಿಯನ್ನರಿಗೆ ಇಬ್ಬರೂ ಧನಸಹಾಯ ಮಾಡುವದರ ಮೂಲಕ ಅವರ ಹೋರಾಟವನ್ನು ಬೆಂಬಲಿಸುತ್ತಾರೆ. ಎರಡು ಮೂರು ಬಾರಿ ಸ್ವತಃ ಸದ್ದಾಂ ಹುಸೇನ್ ಮುಸ್ಲಿಂರ ಕಡುವೈರಿಗಳಾದ ಇಸ್ರೇಲಿಗರ ಮೇಲೆ ರಾಕೇಟ್ ಗಳನ್ನು ಕಳಿಸಿ ಸೇಡು ತೀರಿಸಿಕೊಳ್ಳಲು ನೋಡುತ್ತಾನೆ. ಆ ಮೂಲಕ ಪಶ್ಚಿಮದವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. 
ಇಬ್ಬರೂ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ಇಬ್ಬರೂ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಅನೇಕ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿನ ಮಹಿಳೆಯರಿಗಿಂತ ಇಲ್ಲಿನ ಮಹಿಳೆಯರು ಹೆಚ್ಚು ಹಕ್ಕುಗಳನ್ನು ಅನುಭವಿಸಿದರು. ಇಬ್ಬರೂ ತೈಲದಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದರು.  ಇಬ್ಬರೂ ಜಾತ್ಯಾತೀತರಾಗಿದ್ದರು. ಇಬ್ಬರೂ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಮತ್ತು ವಸತಿಗೆ ಒತ್ತು ಕೊಟ್ಟವರು. ಇಬ್ಬರ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗ ಸಾಮಾನ್ಯವಾಗಿದ್ದರೂ ಅವರು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಜನಪ್ರಿಯ ಬೆಂಬಲವನ್ನು ಕ್ರೋಢೀಕರಿಸಲು ಸಂಪತ್ತನ್ನು ಮರುಹಂಚಿಕೆ ಮಾಡಿದರು. ಇಬ್ಬರೂ ಮಹತ್ವಾಕಾಂಕ್ಷೆಯ ಶಸ್ತ್ರಾಸ್ತ್ರ ಕಾರ್ಯಕ್ರಮಗಳನ್ನು ಅನುಸರಿಸಿದರು, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು (WMDs) ಅಭಿವೃದ್ಧಿಪಡಿಸುವ ಪ್ರಯತ್ನಗಳು ಸೇರಿದಂತೆ. ಸದ್ದಾಂ ಡಬ್ಲ್ಯುಎಂಡಿಗಳನ್ನು ಹೊಂದಿದ್ದನೆಂದು ಆರೋಪಿಸಲಾಯಿತು, ಇದು 2003 ರ ಇರಾಕ್ ಯುದ್ಧಕ್ಕೆ ನೆಪವಾಯಿತು. ಗಡಾಫಿ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಹೊಂದಿದ್ದನು ಆದರೆ 2003 ರಲ್ಲಿ ಅಂತರರಾಷ್ಟ್ರೀಯ ಒತ್ತಡದಿಂದಾಗಿ ಅದನ್ನು ಕಿತ್ತುಹಾಕಿದನು.
ಇಬ್ಬರೂ ತಮ್ಮ  ಆಡಳಿತದಲ್ಲಿ  ಧರ್ಮನಿರಪೇಕ್ಷತೆಯನ್ನು ತರಲು ಪ್ರಯತ್ನಿಸಿದರು.  ಇಬ್ಬರೂ ಆಡಳಿತದಲ್ಲಿ ಧರ್ಮದ ಪ್ರಭಾವವನ್ನು ಕಡಿಮೆ ಮಾಡಲು ಕಾನೂನು ಮತ್ತು ನೀತಿಗಳನ್ನು ಉತ್ತೇಜಿಸಿದರು. ಇದು ಪ್ರಾದೇಶಿಕವಾಗಿ ಇಸ್ಲಾಮಿಕ್ ಆಡಳಿತಗಳಿಗೆ ವಿರುದ್ಧವಾಗಿತ್ತು ಹಾಗೂ ಅನೇಕ ಮೂಲಭೂತವಾದಿಗನ್ನು ರೊಚ್ಚಿಗೆಬ್ಬಿಸಿತು.  ಇಬ್ಬರೂ ಕೃಷಿಗೆ ಒತ್ತು ನೀಡಿ ಭೂಮಿಯನ್ನು ಪುನರ್ವಿತರಣೆಗೆ ಮತ್ತು ರೈತರಿಗೆ ಅನುದಾನ ನೀಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡರು. ಇದು ನೀರಾವರಿ ವ್ಯವಸ್ಥೆಗಳು ಮತ್ತು ಕೃಷಿ ಉಪಕರಣಗಳನ್ನು ಒದಗಿಸಲು ಸಹಾಯ ಮಾಡಿತು. ಗಡಾಫಿ ಲಿಬಿಯಾದಲ್ಲಿ ಮಾನವ ನಿರ್ಮಿತ ನದಿಯೊಂದನ್ನು ನಿರ್ಮಿಸಿ ಅಂಥ ಮರಭೂಮಿಯಲ್ಲಿಯೂ ಸಹ ರೈತರಿಗೆ ನೀರಾವರಿ ಯೋಜನೆಯೊಂದನ್ನು ಕಲ್ಪಿಸಿಕೊಟ್ಟನು.  ಇಬ್ಬರೂ ಪ್ಯಾಲೆಸ್ತೇನಿಯನ್ನರ ಪರವಾಗಿದ್ದರು ಮತ್ತು ಅವರಿಗೆ ಮೇಲಿಂದ ಮೇಲೆ ಧನ ಸಹಾಯವನ್ನು ಮಾಡುತ್ತಿದ್ದರು.  ಈ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸಿದ್ದಕ್ಕಾಗಿ ಇಬ್ಬರೂ ದುರಂತ ಅಂತ್ಯವನ್ನು ಕಂಡರು. ಯುಎಸ್ ಇರಾಕ್ ಮೇಲೆ ಆಕ್ರಮಣ ಮಾಡಿ ಸದ್ದಾಂನನ್ನು ಜೀವಂತವಾಗಿ ಸೆರೆಹಿಡಿದು ನಂತರ ಅವನನ್ನು ಗಲ್ಲಿಗೇರಿಸಿದರೆ ಅದೇ ಯುಎಸ್ ಗಡಾಫಿಯನ್ನು ಅವನ ಸ್ವಂತ ಜನರಿಂದಲೇ ಅವನನ್ನು ಕ್ರೂರವಾಗಿ ಕೊಲ್ಲಿಸಿ ಅವನ ಅಂತ್ಯಕ್ಕೆ ಸಮಾಪ್ತಿ ಹಾಡಿತು. 
ಗಡಾಫಿ ವಿಮೋಚನಾ ಚಳವಳಿಗಳನ್ನು ಬೆಂಬಲಿಸುತ್ತಿದ್ದನು. ಪ್ಯಾಲೈಸ್ತೇನಾ, ಲೈಬೀರಿಯಾ,  ಸಿಯೆರಾ ಮತ್ತು ಲಿಯೋನ್ನಂತಹ ದೇಶಗಳಲ್ಲಿ ಬಂಡಾಯ ಚಳುವಳಿಗಳನ್ನು ಪ್ರಾಯೋಜಿಸಿದ ಕೀರ್ತಿಯೂ ಅವನಿಗೆ ಸಲ್ಲುತ್ತದೆ. 80 ರ ದಶಕದಲ್ಲಿ ರೇಗನ್ ಯುಗದಲ್ಲಿ ಲಿಬಿಯಾ ಮತ್ತು ಪಶ್ಚಿಮದ ನಡುವಿನ ಉದ್ವಿಗ್ನತೆಯು ಅದರ ಉತ್ತುಂಗವನ್ನು ತಲುಪಿತು. 90 ರ ದಶಕದಲ್ಲಿ ಪಾನ್ ಆಮ್ ವಿಮಾನ ದುರಂತದ ಕಾರಣಕ್ಕಾಗಿ ಪಶ್ಚಿಮದಿಂದ ಲಿಬಿಯಾ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಯಿತು ಮತ್ತು ನಿಧಾನವಾಗಿ ಅವನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿತು. 2003 ರಲ್ಲಿ ಸದ್ದಾಂ ಸೆರೆಹಿಡಿಯಲ್ಪಟ್ಟಾಗ ಗಡಾಫಿ ತಮ್ಮ ದೇಶದಲ್ಲಿನ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಒಪ್ಪಿಕೊಂಡನು ಮತ್ತು ಯುಎನ್ ಇನ್ಸ್ಪೆಕ್ಟರ್ಗಳು ಬಂದು ಅವುಗಳನ್ನು ಕೆಡವಲು ಅವಕಾಶ ನೀಡುವುದಾಗಿ ವಾಗ್ದಾನ ಮಾಡಿದನು. 
ಸದ್ದಾಂ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದನು ಮತ್ತು ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಸುನ್ನಿಗಳನ್ನು ಅಧಿಕಾರದ ಸ್ಥಾನದಲ್ಲಿ ಇರಿಸಿದನು. 1980-1988 ರವರೆಗೆ, ಇರಾಕ್ ಇರಾನ್ನೊಂದಿಗೆ ಯುದ್ಧದಲ್ಲಿತ್ತು. ಸದ್ದಾಂ ಕುರ್ದಿಶ್ ಮತ್ತು ಶಿಯಾ ದಂಗೆಗಳನ್ನು ನಿಗ್ರಹಿಸಬೇಕಾಯಿತು. 1990 ರಲ್ಲಿ ಕುವೈತ್ನ ಆಕ್ರಮಣದಿಂದಾಗಿ ಅವನು ಅಂತರರಾಷ್ಟ್ರೀಯ ಪ್ರಚಾರಕ್ಕೆ ಬಂದನು. ಅಮೆರಿಕಾ ನಾಯಕತ್ವದಲ್ಲಿ 1991 ರ ಗಲ್ಫ್ ಯುದ್ಧವು ಕುವೈಟ್ ಅನ್ನು ಇರಾಕ್ನಿಂದ ಮುಕ್ತಗೊಳಿಸಿತು ಆದರೆ ಇರಾಕ್ನಲ್ಲಿ ಸದ್ದಾಂ ಅಧಿಕಾರದಲ್ಲಿ ಮುಂದುವರಿದನು. ಸದ್ದಾಂ ಇರಾಕ್ನಲ್ಲಿ ಜನಪ್ರಿಯ ನಾಯಕನಾಗಿದ್ದನು. ಆದರೆ 2003 ರಲ್ಲಿ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಕಾರ್ಯಕ್ರಮದಲ್ಲಿ ಇರಾಕ್ ಭಾಗಿಯಾಗಿದೆ ಎಂದು ಶಂಕಿಸಿ US ಇರಾಕ್ ಮೇಲೆ ಆಕ್ರಮಣ ಮಾಡಿ ಅವನನ್ನು ಡಿಸೆಂಬರ್ 2003 ರಲ್ಲಿ ಸೆರೆಹಿಡಿಯಲಾಯಿತು ಮತ್ತು 148 ಶಿಯಾ ಜನರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾದನು. ಅಂತಿಮವಾಗಿ 30 ಡಿಸೆಂಬರ್ 2006 ರಂದು ಸದ್ದಾಂನನ್ನು  ಅಮೆರಿಕಾ ಗಲ್ಲಿಗೇರಿಸಿತು. 
 ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು ಮತ್ತು ಇಬ್ಬರೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಿದ್ದರು ಹಾಗೂ ಇದೇ ಕಾರಣಕ್ಕಾಗಿ ಅವರ ವಿರೋಧವನ್ನು ಕಟ್ಟಿಕೊಂಡು ತಮ್ಮ ಪತನಕ್ಕೆ ತಾವೇ ಕಾರಣರಾದರು. ಇಬ್ಬರೂ ಮಾನವ ಹಕ್ಕು ಉಲ್ಲಂಘನೆಗಳ ಆರೋಪಕ್ಕೆ ಒಳಗಾದರು, ಇಬ್ಬರೂ ತಮ್ಮ ದೇಶಗಳ ತೈಲ ಸಂಪತ್ತನ್ನು ಬಳಸಿಕೊಂಡು ತಮ್ಮ ಆಡಳಿತವನ್ನು ಬಲಪಡಿಸಿದರು. ಗಡಾಫಿ ಲಿಬಿಯಾದ ತೈಲ ಉದ್ಯಮವನ್ನು ರಾಷ್ಟ್ರೀಕರಿಸಿದನು ಹಾಗೂ ಸದ್ದಾಮ್ ಇರಾಕ್ನ ತೈಲ ಆದಾಯವನ್ನು ಸೈನಿಕ ವಿಸ್ತರಣೆ ಮತ್ತು ದೇಶೀಯ ಯೋಜನೆಗಳಿಗೆ ಬಳಸಿದನು. ಅಮೆರಿಕಾದ ವಿಷಯದಲ್ಲಿ ಇಬ್ಬರಿಗೂ ಸೂಕ್ಷ್ಮ ತಿಳುವಳಿಕೆಯಾಗಲಿ ಡಿಪ್ಲೋಮೆಸಿಯಾಗಲಿ ಇರಲಿಲ್ಲ.  ಹೀಗಾಗಿ ಈ ಇಬ್ಬರು ತಮ್ಮ ದೇಶದ ಜನರ ಕಣ್ಣಲ್ಲಿ ಮಾತ್ರ ಹೀರೋ ಆಗಿ ಮಿಕ್ಕೆಲ್ಲರ ದೃಷ್ಟಿಯಲ್ಲಿ ವಿಲನ್ ಎಂಬ ಹಣೆಪಟ್ಟಿಯನ್ನು ಹೊತ್ತು ನಿಂತರು. 
ಇದೀಗ ಅವರು ಆಳಿದ್ದ ರಾಷ್ಟ್ರಗಳು ಪಾಳುಬಿದ್ದ ರಾಷ್ಟ್ರಗಳಾಗಿವೆ. ಮುರಿದುಹೋದ ನಾಡುಗಳನ್ನಾಗಿ ಪರಿವರ್ತಿಸಿವೆ. ಇರಾಕ್ ಪಂಥೀಯ ಹಿಂಸಾಚಾರಕ್ಕೆ ಇಳಿದಿದೆ ಮತ್ತು ಲಿಬಿಯಾ ರಾಜಕೀಯ ಅರಾಜಕತೆಗೆ ಒಳಗಾಗಿ ನಾಗರಿಕ ಸಂಘರ್ಷದಲ್ಲಿ ಮುಳುಗಿದೆ.  ಮತ್ತೀಗ ಹೊಸದಾಗಿ ಆ ಪಟ್ಟಿಗೆ ಮೊನ್ನೆಯಷ್ಟೇ ಆಲ್ ಅಸಾದ್ ನಿಂದ ವಿಮೋಚನೆಗೊಂಡಿದೆ ಎಂದು ಹೇಳಲಾದ ಸಿರಿಯಾ ರಾಷ್ಟ್ರವೂ ಸೇರಿಕೊಂಡಿತು.  
ಪಶ್ಚಿಮದ ರಾಷ್ಟ್ರಗಳು ಮಾತ್ರ ಎಂದಿನಂತೆ ತಮ್ಮ ಕಾಯಕವನ್ನು ಮುಂದುವರಿಸಿವೆ, ಅವಕ್ಕೆ ಯಾರ ಅಂಕುಶವೂ ಇಲ್ಲ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
 - ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
 
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
 
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
- 
 - 
ಸಿನಿಮಾ ಮತ್ತು ಸಮಾಜ1 ವಾರದ ಹಿಂದೆ
 - 
“ಕಾಂತಾರ ಚಾಪ್ಟರ್ ೧” ಸಿನಿಮಾ ಕುರಿತು…4 ವಾರಗಳ ಹಿಂದೆ
 - 
 - 
 - 
ತರಚೀ ಪುಷ್ಪೋಪಾಖ್ಯಾನ4 ತಿಂಗಳುಗಳ ಹಿಂದೆ
 - 
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …10 ತಿಂಗಳುಗಳ ಹಿಂದೆ
 - 
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ1 ವರ್ಷದ ಹಿಂದೆ
 - 
 - 
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
 - 
Pic by Hengki Lee4 ವರ್ಷಗಳ ಹಿಂದೆ
 - 
 - 
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
 - 
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
 - 
ದ್ವಿಪದಿಗಳು6 ವರ್ಷಗಳ ಹಿಂದೆ
 - 
ಹೊಸ ದಿನ6 ವರ್ಷಗಳ ಹಿಂದೆ
 - 
The story of telling a story!6 ವರ್ಷಗಳ ಹಿಂದೆ
 - 
 - 
 - 
ಆಸೆ....!!!6 ವರ್ಷಗಳ ಹಿಂದೆ
 - 
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 27 ವರ್ಷಗಳ ಹಿಂದೆ
 - 
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!7 ವರ್ಷಗಳ ಹಿಂದೆ
 - 
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ7 ವರ್ಷಗಳ ಹಿಂದೆ
 - 
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?7 ವರ್ಷಗಳ ಹಿಂದೆ
 - 
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!7 ವರ್ಷಗಳ ಹಿಂದೆ
 - 
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
 - 
ಮಾಯೆ8 ವರ್ಷಗಳ ಹಿಂದೆ
 - 
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ8 ವರ್ಷಗಳ ಹಿಂದೆ
 - 
ಅನುಸಂಧಾನ-೩8 ವರ್ಷಗಳ ಹಿಂದೆ
 - 
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
 - 
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
 - 
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
 - 
 - 
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
 - 
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
 - 
 - 
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
 - 
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
 - 
ಕತ್ತಲೆ.................10 ವರ್ಷಗಳ ಹಿಂದೆ
 - 
ಮಳಿ ಬರದ ಚಿತ್ರಗಳು..10 ವರ್ಷಗಳ ಹಿಂದೆ
 - 
ಆಟೋ ಮಹಾತ್ಮೆ10 ವರ್ಷಗಳ ಹಿಂದೆ
 - 
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
 - 
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
 - 
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
 - 
 - 
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...11 ವರ್ಷಗಳ ಹಿಂದೆ
 - 
ಗಾಜಿನ ಲೋಟದಲ್ಲಿ ರಸ್ನಾ11 ವರ್ಷಗಳ ಹಿಂದೆ
 - 
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
 - 
 - 
ಮೇಲೂರಿನ ಅಪ್ಪಟ ಕನ್ನಡ ಪ್ರೇಮ12 ವರ್ಷಗಳ ಹಿಂದೆ
 - 
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
 - 
ತೀರ....12 ವರ್ಷಗಳ ಹಿಂದೆ
 - 
ಜೀವನ ಮತ್ತು ತೂಕ12 ವರ್ಷಗಳ ಹಿಂದೆ
 - 
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
 - 
 - 
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
 - 
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
 - 
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
 - 
 - 
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)13 ವರ್ಷಗಳ ಹಿಂದೆ
 - 
(ಮಹಿಳಾ)ವಾದ:13 ವರ್ಷಗಳ ಹಿಂದೆ
 - 
 - 
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
 - 
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
 - 
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
 - 
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
 - 
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ14 ವರ್ಷಗಳ ಹಿಂದೆ
 - 
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್14 ವರ್ಷಗಳ ಹಿಂದೆ
 - 
ಕಫನ್14 ವರ್ಷಗಳ ಹಿಂದೆ
 - 
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
 - 
ನನ್ನ ಜಡೆ14 ವರ್ಷಗಳ ಹಿಂದೆ
 - 
ಕೇಳಿ-೫15 ವರ್ಷಗಳ ಹಿಂದೆ
 - 
ಹೊವಿನಂತ ಹುಡುಗ ನಾನು ತುಂಬ ಮೃದು15 ವರ್ಷಗಳ ಹಿಂದೆ
 - 
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು15 ವರ್ಷಗಳ ಹಿಂದೆ
 - 
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
 - 
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
 - 
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ16 ವರ್ಷಗಳ ಹಿಂದೆ
 - 
 - 
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
 - 
 - 
ಕೆಲವು ಪ್ರಶ್ನೆಗಳು16 ವರ್ಷಗಳ ಹಿಂದೆ
 - 
ಏನ ಹೇಳಲಿ ನಾನು?16 ವರ್ಷಗಳ ಹಿಂದೆ
 - 
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
 - 
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
 - 
 
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಶ್ವೇತಾ ಹೊಸಬಾಳೆ ಶೇಕ್ಸಪಿಯರನ ಶ್ರೀಮತಿ ಕುರಿತು
 - “ಲಿಬಿಯಾ ಡೈರಿ” ಪುಸ್ತಕದ ಒಂದು ಸಂವಾದ ಕಾರ್ಯಕ್ರಮ
 - ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವದಿಲ್ಲ?
 - ನನ್ನ ಏಕವ್ಯಕ್ತಿ ನಾಟಕ 'ಶೇಕ್ಸ್ ಪಿಯರನ ಶ್ರೀಮತಿ' ಕುರಿತು ಮಮತಾ ಅರಸೀಕೆರೆಯವರ ವಿಮರ್ಶೆ
 - ನೆರಳು ಕೊಟ್ಟವರನ್ನು ನೆನೆಯುತ್ತಾ....................
 - Father
 - ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ
 - You are just not a ‘sex’
 - ಶೇಕ್ಷಪೀಯರನ ತಂಗಿ
 - ಮಂಜುವಿಗೆ
 
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.





