Who Will Listen?
ಕೇಳುವವರು ಯಾರು?
ಸಾಗರವೇ ಮೇರೆ ಮೀರಿ
ಧರೆಯೇ ಬಿರಿಯುತಿರುವಾಗ
ತಾರೆಗಳ ಹಾಡು ಕೇಳುವವರು ಯಾರು?
ಹರಿದ ಅರಿವೆ ಉಟ್ಟ ಹುಡುಗ
ಇರುಳ ಚಳಿಗೆ ಹೊರಳುವಾಗ
ಚಂದಿರನ ಹಾಡು ಕೇಳುವವರು ಯಾರು?
ಜಾತಿ ಮತದ ಬೆಂಕಿಯಲ್ಲಿ
ಜಗವೇ ಹೊತ್ತು ಉರಿಯುವಾಗ
ನೇಸರನ ಹಾಡು ಕೇಳುವವರು ಯಾರು
ಹಸಿದವರ ಕಣ್ಣಿನಲ್ಲಿ
ಕಂಬನಿಯು ಹರಿಯುವಾಗ
ಕವಿ ಎದೆಯ ಹಾಡು ಕೇಳುವವರು ಯಾರು?
-ಎಂ ಆರ್. ಕಮಲ
Who Will Listen?
When the ocean crosses its limits,
When the earth begins to crack,
Who will listen to the song of the stars?
When a boy clad in ragged clothes,
And trembles in the biting cold of the night,
Who will listen to the song of the moon?
When the world burns
In the fire of caste and creed
Who will listen to the song of the sun?
When tears flow
From the eyes of the hungry,
Who will listen to the poet’s song?
Kannada Original: M. R. Kamala
English Translation: Uday Itagi
We construct
ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟೇ ಕಟ್ಟತೇವ
ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟತೇವ
ನಾವು ಕನಸು ಕಟ್ಟತೇವ
ನಾವು ಮನಸು ಕಟ್ಟತೇವ
ಜಾತಿ ಇಲ್ಲದ
ಭೀತಿ ಇಲ್ಲದ
ಬಾಳ ಕಟ್ಟತೇವ
ಕುಲವೆನ್ನದ
ಮನುಕುಲವ
ನಾವು ಕಟ್ಟುತೇವ
ನಾವು ನಾಡ ಕಟ್ಟುತೇವ
ಗೋಳಿಲ್ಲದ, ಗುಂಡಿಲ್ಲದ
ನಾಡ ಕಟ್ಟುತೇವ
ನೂರು ಮನಸಿನ
ಕೋಟಿ ಕನಸಿನ
ಹಾಡ ಕಟ್ಟುತೇವ
ನಾವು ನಾಡ ಕಟ್ಟತೇವ
ಕ್ರಾಂತಿ ಕೆಂಡದ
ಕುಂಡ ಹೊತ್ತು ನಾವು
ಮುಳ್ಳು ತುಳಿಯತೇವ
ರಕ್ತಕಾಲಿನ ನಮ್ಮ ಪಾಲಿನ
ಹಾಡ ಬರೆಯತೇವ
ನೆಲಕ ಹಾಡ ಬರೆಯತೇವ
ದೇವರಿಲ್ಲದ, ದೈವವಿಲ್ಲದ
ದಾರಿ ತುಳಿಯತೇವ
ನಮ್ಮ ಮನಸಿಂದ
ನಿಮ್ಮ ಮನಸಿಗೆ
ಸೇತು ಕಟ್ಟುತೇವ
ನಾವು ಮಾತು ಕಟ್ಟುತೇವ
ಕನ್ನಡ ಒರಿಜಿನಲ್: ಸತೀಶ್ ಕುಲಕರ್ಣಿ
ಇಂಗ್ಲಿಷ್ ಟ್ರಾನ್ಸ್ಲೇಷನ್: ಉದಯ ಇಟಗಿ We construct
We construct, we construct,
We continuously keep constructing.
We build broken hearts,
We build shattered dreams
We continue to keep building
A life free of social hierarchy,
A life without fear,
We construct
A humanity beyond divisions,
We construct a world,
We construct a nation.
A nation free of suffering,
A land without weapons,
We construct
A chorus of countless hearts,
A vision of innumerable souls
We create
We build a nation.
Carrying the flames of revolution,
Traversing through obstacles,
We march onwards.
With feet stained by blood,
We compose songs
On the very ground we walk on.
Without deities,
Without holy paths,
We forge ahead.
From our hearts to yours,
We construct a bridge.
We craft words.
Kannada Original: Satish Kulkarni
English Translation: Uday Itagi
How Did Gandhi Become a Mahatma?
ಗಾಂಧಿ ಮಹಾತ್ಮನಾಗಿದ್ದು ಹೇಗೆ?
ನಿಮ್ಮ ಗಾಂಧಿ
ನಮಗೂ ಗಾಂಧಿಯೇ!
ನಿಮ್ಮ ಗಾಂಧಿ ನಮ್ಮ ಗಡಾಫಿ ಇಬ್ಬರೂ ಒಂದೇ!
ಹಾಗೆಂದು ದೂರದ ಲಿಬಿಯಾದಲ್ಲಿ
ನಾನು ಕೆಲಸ ಮಾಡುತ್ತಿದ್ದ ಕಾಲೇಜೊಂದರ
ಡೀನ್ ಹೇಳಿದಾಗ
ನನಗೆ ಒಳಗೊಳಗೆ ಹೆಮ್ಮೆ ಮತ್ತು ಅಚ್ಚರಿ!
"ಅದು ಹೇಗೆ?"
ಎಂದು ನಾನು ಪಿಳಿ ಪಿಳಿ
ಕಣ್ಣುಬಿಟ್ಟು ಕೇಳಿದ್ದೆ
ಇಬ್ಬರೂ ನಮ್ಮನ್ನು ವಿದೇಶಿಯರ ದಾಸ್ಯದಿಂದ ಬಿಡಿಸಿಕೊಟ್ಟರು
ನಿಜ ಅರ್ಥದಲ್ಲಿ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟರು
"ಎಲ್ಲಿಯ ಗಡಾಫಿ? ಎಲ್ಲಿಯ ಗಾಂಧಿ?
ಸಾಕು ಸುಮ್ಮನಿರಿ, ಜನ ನಕ್ಕಾರು" ಎಂದು ಹೇಳಿದೆ
"ಇಲ್ಲ ಇಲ್ಲ, ನಿಮ್ಮ ಗಾಂಧಿ ಮತ್ತು ನಮ್ಮ ಗಡಾಫಿ ಇಬ್ಬರೂ ಒಂದೇ !
ಕೆಲವು ಒಳಸತ್ಯಗಳು ಜನರ ಕಣ್ಣಿಗೆ ಕಾಣುವದಿಲ್ಲ ಅಷ್ಟೇ
ಇಬ್ಬರನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು!
ಅದು ಹೇಗೆ ಅವರು ತಮ್ಮ ಅಚಲ ನಿರ್ಧಾರ ಮತ್ತು ಅಹಿಂಸೆಯ ಮೂಲಕ
ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು!
ಎಂಥ ಹೋರಾಟಗಾರರು!
ಎಂಥ ದೇಶಪ್ರೇಮಿಗಳು!
ಇಬ್ಬರೂ ಬಡವರ ಉದ್ದಾರಕ್ಕಾಗಿ ಎಷ್ಟೊಂದು ದುಡಿದರು
ಎಂಥ ಸಂಘಟನೆಯನ್ನು ಕಟ್ಟಿದರು
ದುರಂತವೇನೆಂದರೆ
ನಾವಿಬ್ಬರೂ ಅವರನ್ನು ಬದುಕಲು ಬಿಡಲಿಲ್ಲ
ನಿಮ್ಮ ದೇಶದಲ್ಲಿ ನೀವು ಗಾಂಧಿಯನ್ನು ಕೊಂದಿರಿ
ನಮ್ಮಲ್ಲಿ ನಾವು ಗಡಾಫಿಯನ್ನು
ನಿರ್ದಯೆಯಿಂದ ಕೊಂದು ಹಾಕಿದೆವು
ಎರಡೂ ಈ ಕಾಲದ ವ್ಯಂಗ್ಯಗಳೇ.... "
ಗಾಂಧಿ ಗಡಿಗಡಿಯಾಚೆಯೂ
ಮನೆಮಾತಾಗಿದ್ದ !
ಬಹಳ ದಿನಗಳಿಂದ
ಗಾಂಧಿ ಮಹಾತ್ಮನಾಗಿದ್ದು ಹೇಗೆ ಎಂದು ಯೋಚಿಸುತ್ತಿದ್ದೆ
ಅಲ್ಲಿ ನನಗೆ ಉತ್ತರ ಸಿಕ್ಕಿತ್ತು!
- ಉದಯ ಇಟಗಿ
How Did Gandhi Become a Mahatma?
Your Gandhi,
Our Gandhi too!
Your Gandhi and our Gaddafi are one and the same!
When the dean of a college where I worked in distant Libya said this,
I felt both pride and surprise within me!
“How is that?”
I asked, eyes wide with curiosity.
“Both of them freed us from foreign rule,
Gave us true independence.”
"Where is Gaddafi, and where is Gandhi?
Stop it! People will laugh," I said.
"No, no! Your Gandhi and our Gaddafi are the same!
Some inner truths remain unseen by people.
Both have been misunderstood by many!
See how they won independence—
Through unwavering determination and non-violence!
What great warriors!
What patriots!
How much they worked for the upliftment of the poor!
What strong organizations they built!
The tragedy is that
We did not let them live.
In our country, we killed Gandhi.
In your country, you ruthlessly killed Gaddafi.
Both are ironies of our times..."
Gandhi had become a household name,
Even beyond borders!
For a long time,
I had wondered how Gandhi became a Mahatma.
There, I found my answer!
Kannada Original: Uday Itagi
English Translation: Uday Itagi
Amrapali
*Amrapali*
She was the only one Amrapali...
A seductive courtesan with a mesmerising walk...
So enchanting that
Even the low mentalities of the world
Would envy in disgust
At her beauty...
If she had bewitched
The so called Purushottama,
Be it Rama,
Or Lakshmana,
She would have been branded a demon today.
Her beautiful breasts
Would have been cut by the sword's edge...
Her charming nose disfigured,
And her long locks cut off mercilessly...
But now...
She has bewitched,
And stood firm
Not before a deity,
But before
My Buddha
A true human being...
In the pages of history,
A courtesan
Chose to live as a monk by her own will,
And the true compassion of this Buddha's land
Is not not a mere sinister thing...
*Kannada Original: Manjula Hulikunte*
*English Translation: Uday Itagi*
*ಅಮ್ರಪಾಲಿ*
ಅವಳೊಬ್ಬಳಿದ್ದಳೆಲ್ಲಾ ಅಮ್ರಪಾಲಿ...
ಮೋಹಕ ನಡೆಯ ವೇಶ್ಯೆ...!
ಜಗತ್ತಿನ ಸಣ್ಣತನದ
ಕರುಳೊಮ್ಮೆ ಕಿವುಚಿ
ಅಸೂಹ್ಯೆ ಪಡುವಷ್ಟು ಸೊಗಸುಗಾತಿ..!
ಅವಳು ...
ಪುರುಷೋತ್ತಮ (ಎನಿಸಿಕೊಂಡ)
ಶ್ರೀರಾಮನನ್ನೋ
ಲಕ್ಷ್ಮಣನನ್ನೋ ಮೋಹಿಸಿದ್ದರೆ
ಇಂದು ರಾಕ್ಷಸಿಯಾಗಿಬಿಡುತ್ತಿದ್ದಳು
ಅವಳ ಸುಂದರ ಮೊಲೆ
ಕತ್ತಿಯ ಮೊನಚಿನಲ್ಲಿ ತುಂಡಾಗಿರುತ್ತಿತ್ತು...
ಮೋಹಕ ಮೂಗು ಮೊಂಡಾಗಿ
ನೀಳಕೇಶರಾಶಿಗೂ ಕತ್ತರಿ ಬಿದ್ದಿರುತ್ತಿತ್ತು..
ಸದ್ಯ....
ಅವಳು ಮೋಹಿಸಿದ್ದು,
ಟೊಂಕಕಟ್ಟಿ ನಿಂತಿದ್ದು
ಅಪ್ಪಟ ಮನುಷ್ಯನಾಗಿದ್ದ
ನನ್ನ ಬುದ್ಧನೆದುರು...
ಚರಿತ್ರೆಯ ಪುಟಗಳಲ್ಲಿ ಸೂಳೆಯೊಬ್ಬಳು
ಸನ್ಯಾಸಿಯಾಗಿ ತನ್ನಿಷ್ಟದಂತೆ ಬದುಕಿದ್ದು,
ಈ ಬುದ್ಧಭೂಮಿಯ
ನಿಜದ ಕಾರುಣ್ಯವೆಂದರೆ ಸೂಜಿಗವೇನಲ್ಲ ..
*ಮಂಜುಳಾ ಹುಲಿಕುಂಟೆ*
ಓರಿಯಾ ಕವಿ ಸುಶೀರ್ ಕುಮಾರ್ ಸ್ವೇನ್ ಕವನಗಳು
The Father
The man who walks along
With the load of a mountain
On his back
Is my Father, who looks all
Absorbed, serious, morose and stunned
As though he were
A still sculpture on the temple wall.
It's really difficult to become
A father
Whom the God felt as a bare need
For his creation to move on
As he scratched out
His image with chisels, mallets
And hammers.
All fathers love to bear
The pains of the simmering sand
The burns and scalds of a burning cauldron
But they never open their mouth
Nor do they shed tears.
Father is like a basket full
Of empathy and love,
Who stands like a scarecrow
Amid all wounds and cracks
To scare them away
His head raised high as ever.
All Alone
I have left behind
A slice of love
Deep inside a closed room
Which had clung onto
The last night's
Dense darkness.
But I still preserve the night's
Secret kisses, the nail marks,
Sweats and the aroma of
Dishevelled hair
Which like a river drifts across
My every artery and vein.
I searched for the past
Relationship - soft and tender
All alone
The sandalwood forests
The hollow of the shells
Yet, I could not find her smiles
Or even a wee bit temper.
Tonight
I shall take the night train
To go back to her
To return to her the heaps of thrills
And sensations
All the madness
All the jingles of her anklets.
She might wear a smile on her lips
Pretend to move away
From all my closeness
Yet, she will drive me into the dark room
Again.
The Paper Boat
It's a long time since
I had floated away ನಾನು
The paper boat down the stream
Of the rainwater that fell
From the thatched roof.
I have flung away my childhood
Adolescence, youth, and
Teachers' canemarks
The torn pieces of rough papers
From my schoolbag,
And the sticks that were
Hurled at the mango tree
Laden with fruits
In the midday sun.
Since there was no boatman
I killed a cricket
To take his place
In the heart of the paper boat.
Getting drenched in the truant rain
He went away, laughing, far, too far
Rowing the boat himself
Down the stream of the village street
Beyond our vision,
To the mouth of the water.
The paper boat was lost
In the village vortex
Maybe he fell in the love of water
In the mid-ocean.
Perhaps it will never return
Again like the age that never
Comes back once it passed
Like the clock's hands
On their reverse track.
The peanut pods, the chocolate
Covers, the coconut shells,
Mucks, the petals of palash flowers
Bodies of dead ants
Which my boat carried on its back.
Let it not return any more
I shall go away
To the deep and real sea
And search in its depth
The face of the alphabets
Scratched on the paper boat.
If in the fathomless sea
I happen to bump into my paper boat
I will tell the sea,
"Please give me back my paper boat
Return my chocolate game
If you can, take away all my wealth
My prowess, my ego
My dreams, my love, my hatred
My victories, my defeats
My greed, my profits."
O Sea! I know
You always give back
All that you take
Now please return
My paper boat, my empty hands.
….
Sushir Kumar Swain
ಅಪ್ಪ
ಬೆನ್ನ ಮೇಲೆ ಸದಾ ಬೆಟ್ಟದಷ್ಟು ಭಾರವನ್ನು
ಹೊತ್ತುಕೊಂಡು ನಡೆಯುವ ಮನುಷ್ಯನೇ ನನ್ನ ಅಪ್ಪ!
ದೇವಸ್ಥಾನದ ಗೋಡೆಯ ಮೇಲೆ ಕೆತ್ತಿದ ಶಿಲ್ಪಕಲಾಕೃತಿಯಂತೆ ಸದಾ ತಲ್ಲೀನ, ಗಂಭೀರ, ದಿಗ್ಭ್ರಮೆಗೊಂಡಂತೆ
ಕಾಣುವ ಮನುಷ್ಯನೇ ನನ್ನ ಅಪ್ಪ!!
ಅಪ್ಪನಾಗಿರುವದು ನಿಜವಾಗಿಯೂ ತುಂಬಾ ಕಷ್ಟ
ದೇವರು ಯಾರನ್ನು ಬರಿಯ ಅಗತ್ಯವೆಂದು ಭಾವಿಸಿದನೋ ಹಾಗೂ ಅವನ ಸೃಷ್ಟಿ ಮುಂದುವರಿಯಲು
ಅವನ ಸುತ್ತಿಗೆ, ಉಳಿಯನ್ನು ತೆಗೆದುಕೊಂಡು ಅವನ ಚಿತ್ರವನ್ನು ಕಡೆದಿಟ್ಟನಂತೆ
ಎಲ್ಲಾ ತಂದೆಯಂದಿರು ಕಷ್ಟಸಹಿಷ್ಣಿಗಳು
ತಳಮಳಿಸುವ ಮರಳಗಾಡುಗಳು
ಸುಡುಸುಡುವ ಅಗ್ನಿಕುಂಡಗಳು
ಆದರೆ ಅವರು ಎಂದಿಗೂ ತಮ್ಮ ನೋವುಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವದಿಲ್ಲ
ಕಣ್ಣೀರು ಸುರಿಸುವುದಿಲ್ಲ.
ತಂದೆ ಪರಾನುಭೂತಿ ಮತ್ತು ಪ್ರೀತಿಯ
ಪೂರ್ಣ ಬುಟ್ಟಿಯಿದ್ದಂತೆ,
ಹಾಗೂ ಎಲ್ಲಾ ಗಾಯಗಳು ಮತ್ತು ಬಿರುಕುಗಳ ಮಧ್ಯೆ
ಬೆದರುಬೊಂಬೆಯಂತೆ ನಿಲ್ಲುವವನು
ಎಂದಿನಂತೆ ಅವನು ತನ್ನ ತಲೆಯೆತ್ತಿ ನಿಂತು
ಎಲ್ಲಾ ಕಷ್ಟಗಳನ್ನು ಬೆದರಿಸಿ ಕಳಿಸುತ್ತಾನೆ
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಒಬ್ಬಂಟಿಯಾಗಿ...
ಮುಚ್ಚಿದ ಕೋಣೆಯ ಒಳಗೆ
ಕೊನೆಯ ರಾತ್ರಿಯ
ದಟ್ಟವಾದ ಕತ್ತಲೆಗೆ
ಅಂಟಿಕೊಂಡಿದ್ದ
ಪ್ರೀತಿಯ ತುಣುಕೊಂದನ್ನು
ನಾನು ಹಿಂದೆ ಬಿಟ್ಟುಬಂದಿದ್ದೇನೆ
ಆದರೆ ಆ ರಾತ್ರಿಯಲ್ಲಿ ನಡೆದ ರಹಸ್ಯ ಚುಂಬನಗಳು, ಉಗುರು ಗುರುತುಗಳು,
ಬೆವರ ಹನಿಗಳು,
ಸುಖದ ನರಳಿಕೆಗಳು,
ಕೆದರಿದ ಕೂದಲುಗಳ ಸುವಾಸನೆ
ಹಾಗೂ ನದಿಯಂತೆ ಹರಿದುಹೋದ
ನನ್ನ ಪ್ರತಿ ಅಪಧಮನಿ ಮತ್ತು ರಕ್ತನಾಳಗಳು....
ಎಲ್ಲವೂ ಎಲ್ಲವನ್ನು ನಾನಿನ್ನೂ ಕಾಪಿಟ್ಟುಕೊಂಡಿದ್ದೇನೆ
ನಾನು ಹಿಂದಿನದನ್ನು ಹುಡುಕಿದೆ-
ಸಂಬಂಧ ಮತ್ತದರ ಮೃದುತ್ವ ಹಾಗೂ ಕೋಮಲತೆಯನ್ನು
ನಾನು ಏಕಾಂಗಿಯಾಗಿ
ಶ್ರೀಗಂಧದ ಕಾಡುಗಳನ್ನು
ಟೊಳ್ಳು ಚಿಪ್ಪುಗಳನ್ನು ಕಂಡುಹಿಡಿದೆ
ಆದರೂ ನನಗವಳ ನಗುವನ್ನು ಕಂಡುಹಿಡಿಯಲಾಗಲಿಲ್ಲ
ಹಾಗೂ ಅವಳ ಕೋಪವನ್ನು ಸಹ
ಈ ರಾತ್ರಿ
ನಾನು ರೈಲಿನಲ್ಲಿ ಹೋಗುತ್ತೇನೆ
ಅವಳ ಬಳಿಗೆ ಹಿಂತಿರುಗಲು
ರಾಶಿರಾಶಿ ರೋಚಕತೆಗಳನ್ನು,
ಸಂವೇದನೆಗಳನ್ನು,
ಹುಚ್ಚಾಟಗಳನ್ನು,
ಹಾಗೂ ಕಿಣಿಕಿಣಿಸುವ ಅವಳ ಕಾಲ್ಗೆಜ್ಜೆಗಳ ನಾದವನ್ನು ಹಿಂತಿರುಗಿಸಲು
ಅವಳು ತನ್ನ ತುಟಿಗಳಲ್ಲಿ ನಗು ಧರಿಸಿ
ನನ್ನ ಎಲ್ಲ ಸಾಮಿಪ್ಯದಿಂದ
ದೂರ ಸರಿಯುವಂತೆ ನಟಿಸಬಹುದು
ಆದರೆ ನನಗೆ ಖಾತ್ರಿಯಿದೆ
ಅವಳು ಮತ್ತೆ ನನ್ನನ್ನು ಕತ್ತಲಕೋಣೆಯೊಳಗೆ ತಳ್ಳಿ
ಮುದ್ದಾಡುತ್ತಾಳೆಂದು
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಕಾಗದದ ದೋಣಿ
ಚಪ್ಪರದ ಮೇಲಿಂದ ಸುರಿದ ಮಳೆನೀರಿನ ಹಳ್ಳದಲ್ಲಿ ನಾನು ಕಾಗದದ ದೋಣಿಯನ್ನು ತೇಲಿಬಿಟ್ಟು ಬಹಳ ದಿನಗಳಾಯಿತು
ನಾನು ನನ್ನ ಬಾಲ್ಯ, ಕಿಶೋರತನ, ಯೌವನ, ಛಡಿಯೇಟಿನ ಗುರುತುಗಳು ಹಾಗೂ
ಹರಿದುಹೋದ ಹಾಳೆಗಳೆಲ್ಲವನ್ನೂ
ನನ್ನ ಸ್ಕೂಲು ಬ್ಯಾಗಿನಿಂದ ಕಿತ್ತೆಸೆದಿದ್ದೇನೆ
ಹಾಗೂ ನಡು ಮಧ್ಯಾಹ್ನ
ಹಣ್ಣು ಬಿಟ್ಟ
ಮಾವಿನ ಮರದಡಿ
ಎಸೆದ ಕೋಲುಗಳನ್ನು
ನಾವಿಕನಿರದಿದ್ದರಿಂದ
ಜೀರುಂಡೆಯನ್ನು ಕೊಂದು
ಅವನ ಜಾಗದಲ್ಲಿರಿಸಿದೆ
ಅವನು ಸುರಿವ ಬಿರುಮಳೆಯಲ್ಲಿ ನೆನೆಯುತ್ತಾ,
ನಗುತ್ತಾ ತನ್ನಷ್ಟಕ್ಕೆ ತಾನೇ ಹುಟ್ಟುಹಾಕುತ್ತಾ ದೂರದೂರಕ್ಕೆ ಹೋದನು
ಬೀದಿಯ ಕೊನೆಗೆ
ನಮ್ಮ ದೃಷ್ಟಿಯಿಂದಾಚೆಗೆ ಮತ್ತು ನೀರಿನೊಳಕ್ಕೆ
ನೀರಿನ ಸುಳಿಗೆ ಸಿಕ್ಕು
ಕಾಗದದ ದೋಣಿ ಕಳೆದುಹೋಯಿತು
ಬಹುಶಃ ಅವನು ಸಮುದ್ರಮಧ್ಯದಲ್ಲಿ
ನೀರಿನ ಪ್ರೀತಿಯ ಸುಳಿಗೆ ಸಿಕ್ಕಿರಬೇಕು!
ಬಹುಶಃ, ಅದು ಎಂದಿಗೂ ಹಿಂದಿರಿಗುವದಿಲ್ಲ
ಕಳೆದ ಕಾಲ ಮತ್ತೆ ಮರಳದಂತೆ
ಗಡಿಯಾರದ ಮುಳ್ಳುಗಳು ಮತ್ತೆ
ಹಿಂದೆ ಚಲಿಸದಂತೆ
ಕಡ್ಲೆಕಾಯಿ ಸಿಪ್ಪೆಗಳು, ಚಾಕೋಲೇಟ್ ಕವರ್ ಗಳು,
ತೆಂಗಿನಕಾಯಿ ಚಿಪ್ಪುಗಳು, ಕಪ್ಪೆಜೊಂಡುಗಳು,
ಮುತ್ತುಗದ ಪಕಳೆಗಳು,
ಸತ್ತ ಇರುವೆಗಳ ದೇಹಗಳು
ಹಾಗೂ ಇನ್ನೂ ಏನೇನೋ ಹೊತ್ತು ಸಾಗಿತ್ತು ನನ್ನ ಕಾಗದದ ದೋಣಿ
ಅದು ಮತ್ತೆ ಹಿಂದಿರುಗಿ ಬಾರದಿರಲಿ
ನಾನೇ ಮತ್ತೆ ಸಮುದ್ರದಾಳಕ್ಕಿಳಿದು
ಕಾಗದದ ದೋಣಿಯ ಮೇಲೆ ಬರೆದ
ವರ್ಣಾಕ್ಷರಗಳ ಮುಖವನ್ನು ಕಂಡುಬರುವೆ
ಆಳವರಿಯದ ಆ ಸಮುದ್ರದಲ್ಲಿ ನನ್ನ ಕಾಗದದ ದೋಣಿಯೇನಾದರೂ ಸಿಕ್ಕರೆ
ನಾನು ಆ ಸಮುದ್ರರಾಜನಿಗೆ ಹೇಳುವೆ
"ನನ್ನ ಕಾಗದದ ದೋಣಿಯನ್ನು ನನಗೆ ಹಿಂದಿರುಗಿಸು.
ಬದಲಿಗೆ ನನ್ನ ಸಂಪತ್ತು,
ನನ್ನ ಪರಾಕ್ರಮ, ನನ್ನ ಅಹಂ, ನನ್ನ ಕನಸುಗಳು,
ನನ್ನ ಪ್ರೀತಿ, ನನ್ನ ದ್ವೇಷ, ನನ್ನ ಸೋಲು,
ನನ್ನ ಗೆಲುವು, ನನ್ನ ದುರಾಸೆ, ನನ್ನ ಲಾಭಗಳು
ಎಲ್ಲ ಎಲ್ಲವನ್ನು ತೆಗೆದುಕೋ"
ಓ ಸಮುದ್ರ ರಾಜನೇ!
ನನಗೆ ಗೊತ್ತು
ಕಳೆದುಕೊಂಡಿದ್ದೆಲ್ಲವನ್ನು
ನೀನು ಮತ್ತೆ ಹಿದಿರುಗಿಸುತ್ತಿಯೆಂದು!
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಓರಿಯಾ ಕವಿ ಪ್ರಬಿನಾ ಕಬಿ ಕವನಗಳು
Body
- Prabina Kabi
Everyday,
Before the breaking of dawn
I engage in a battle with my youth,
My desires carnal,
a battle against my restraint
and abstinence too !
Every morning as my eyes open,
I find beside me a body
In which lie interred hunger,
fire and fishy - smelling blood !
By the time I collect my bearing,
The battle lines are already drawn,
The divine conchshell has been blown
and the master archer's bowstring drawn !
In the arena,
Sides have already been taken,
my mortal frame on one side
and on the other side, it is god !
A hissing body ready on one side to sting
and on the other side
the reverberating call of the conchshell,
It is hunger against supplication,
Surrender against creation that be !
And a brief battle rages
On the terrain of my tattered being.
Sometimes invisible arms
subdue visible emotions,
and at other times
spells of magic born from love's charm
Pierce impenetrable devotion.
Thus proceeds the battle , but time flies!
Enemies get older,
Blood spills on the arena in vein .
As the sun sets the battle is done,
But the divine chant fails to cool the vein
and entomb the temper infernal, vain !
While God lies hurt
In the chamber of worship
body triumphs,
it's mark of triumph emblazoned,
and sins get laid in time's vault secure !!
Poem 1
In a narrow space, without even a pencil lead slipping,
between four lines, a small cage, the letter "Sha" is tricky,
how to join it, imagining the head as zero,
it's easy to think, but writing together is childish.
Tests of patience, forgetting, and slipping,
limits crossed in a moment of carelessness,
one box won't suffice, you need many,
write and rewrite what you've written.
Even if you're tired or sleepy,
tomorrow's task is today's responsibility,
in books, children's writing is amusing,
unbeknownst to them, a life story in each letter.
Children's writing varies - clean, crooked, or unclear,
pages fill up quickly,
no fear for tomorrow,
measurement is patience,
the more patience, the higher the marks,
patience is the measure for letters and life.
|| hey! Wounded man! ||
Now, I am in the urge of
Sprinkling water on earth…
’n searching for it in the sky.
..
Myself,
Peeping from the edges of last shoots…
The soul of the deep roots…
..
Myself,
Wailing for unripe fallen fruits
Reading the stories of confined humans
..
Myself,
Hearing the charred anthems
Of, the wounded souls
Myself,
Recalling the fables ..
Of, the persisted sleeping tombs …..
..
How magical is this past!?
It, deprived …
The yield of the black soil..
The rain of the sky..
from the double handfuls ..
Which are waiting in the last branches..
Now, I am gazing at the arboretum
..
Hey… wounded man..!
Silence is not a war
Let us sing your agony like a song…!
The present vacuum… will be filled tomorrow.
Time endorses ..
Someone sails in your footsteps..!
Attainable is not far away….
From your first steps.!
On the edge of the dark…
The raging flag is also fluttering!!
ದೇಹ
ಪ್ರತಿ ದಿನ
ಕೋಳಿ ಕೂಗುವ ಮುನ್ನವೇ
ನನ್ನ ಯೌವನಭರಿತ ದೇಹದೊಂದಿಗೆ ನನ್ನ ಯುದ್ದ ಆರಂಭವಾಗುತ್ತದೆ.
ನನ್ನ ಬಯಕೆಗಳು ಕೆರಳುತ್ತವೆ
ಹಾಗೂ ನನಗಿರುವ ಅಡೆತಡೆಗಳು ಮತ್ತು ಇಂದ್ರೀಯ ನಿಗ್ರಹಗಳ ವಿರುದ್ಧ ನನ್ನ ಯುದ್ಧ ಶುರುವಾಗುತ್ತದೆ!
ಪ್ರತಿ ಮುಂಜಾನೆ
ನಾನು ಕಣ್ಣು ಬಿಟ್ಟಾಗ
ನನ್ನ ಬಳಿ ದೇಹವೊಂದು ಮಲಗಿರುವದು ಕಾಣುತ್ತದೆ
ಆ ದೇಹದಲ್ಲಿ ತಡೆದಿಟ್ಟ ಹಸಿವು, ಬೆಂಕಿಯಂಥ ಬಯಕೆ ಹಾಗೂ ರಕ್ತದ ವಾಸನೆ ಕಾಣಿಸುತ್ತದೆ
ನಾನು ನನ್ನ ಸಮತೋಲನವನ್ನು ಸಾಧಿಸುವ ವೇಳೆಗೆ,
ಯುದ್ಧರೇಖೆಗಳು ಅದಾಗಲೇ ಮೂಡಿರುತ್ತವೆ,
ಹಾಗೂ ದೈವೀ ಶಂಖನಾದವು ಮೊಳಗಿರುತ್ತದೆ
ಮತ್ತು ಮಹಾನ್ ಬಿಲ್ಲುಗಾರನ ಬಿಲ್ಲಿನ ತಂತಿಯನ್ನು ಬಿಗಿಯಲಾಗಿರುತ್ತದೆ!
ಅಖಾಡದಲ್ಲಿ,
ಪಕ್ಷಗಳು ಈಗಾಗಲೇ ಉದ್ಭವವಾಗಿವೆ,
ನನ್ನ ನಶ್ವರ ದೇಹ ಒಂದು ಕಡೆ,
ಇನ್ನೊಂದು ಕಡೆ ದೇವರು!
ಒಂದು ಕಡೆ ಕಚ್ಚಲು ತಯಾರಾದ ಬುಸುಗುಟ್ಟುವ ದೇಹ,
ಮತ್ತೊಂದು ಕಡೆ ಶಂಖನಾದದ ಪ್ರತಿಧ್ವನಿ,
ಇದು ಬಯಕೆಯ ವಿರುದ್ಧದ ಹಸಿವಿನ ಪ್ರಾರ್ಥನೆ,
ಮತ್ತು ಇರಿಯುವ ಆದರೆ ತೂರಲಾಗದ ಭಕ್ತಿ!
ಈ ರೀತಿ ಯುದ್ದ ಸಾಗುತ್ತದೆ
ಆದರೆ ಸಮಯ ಸರಿಯುತ್ತದೆ
ಶತ್ರುಗಳಿಗೆ ವಯಸ್ಸಾಗುತ್ತದೆ
ರಂಗದ ಮೇಲೆ ರಕ್ತ ವೃಥಾ ಸುರಿಯುತ್ತದೆ!
ಸೂರ್ಯನು ಅಸ್ತಮಿಸುತ್ತಿದ್ದಂತೆ ಯುದ್ಧ ಮುಗಿಯುತ್ತದೆ,
ಆದರೆ ದೈವೀ ಜಪವು ಕುದಿಯುತ್ತಿರುವ ರಕ್ತವನ್ನು ಶಾಂತಗೊಳಿಸಲು
ಮತ್ತು ಬೇಸರದಿಂದುದಿಸಿದ ಕೋಪವನ್ನು ಸಮಾಧಿ ಮಾಡಲು ವಿಫಲವಾಗುತ್ತದೆ.
ಗರ್ಭಗುಡಿಯಲ್ಲಿ ದೇವರು ಗಾಯಗೊಂಡಾಗ,
ದೇಹವು ಜಯಶೀಲವಾಗುತ್ತದೆ,
ಜಯದ ಗುರುತು ಮೂಡುತ್ತದೆ,
ಮತ್ತು ಪಾಪಗಳು ಕಾಲಗರ್ಭದಲ್ಲಿ ಹೂತುಹೋಗುತ್ತವೆ!!
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
ಕವಿತೆ 1
ಕಿರಿದಾದ ಜಾಗದಲ್ಲಿ, ಪೆನ್ಸಿಲ್ ಸೀಸವೂ ಜಾರಿಕೊಳ್ಳದೆ,
ನಾಲ್ಕು ಸಾಲುಗಳ ನಡುವೆ, ಒಂದು ಸಣ್ಣ ಗೊಂದಲವುಂಟಾಗಿದೆ
ಈ "ಶ" ಅಕ್ಷರವು ಎಷ್ಟೊಂದು ಕ್ಲಿಷ್ಟವಾಗಿದೆ
ತಲೆಯನ್ನು ಶೂನ್ಯ ಎಂದು ಊಹಿಸಿ ಅದನ್ನು ಹೇಗೆ ಜೋಡಿಸುವುದು,
ಯೋಚಿಸುವುದು ಸುಲಭ,
ಆದರೆ ಒಟ್ಟಿಗೆ ಬರೆಯುವುದು ಎಷ್ಟೊಂದು ಬಾಲಿಶ!.
ತಾಳ್ಮೆಯ ಪರೀಕ್ಷೆಗಳು,
ಒಂದೇ ಒಂದು ಕ್ಷಣದ ಅಜಾಗರೂಕತೆಯ ಕ್ಷಣದಲ್ಲಿ ಮಿತಿಗಳನ್ನುದಾಟಿವೆ
ಒಂದು ಬಾಕ್ಸ್ ಸಾಕಾಗುವುದಿಲ್ಲ, ನಿಮಗೆ ಬಹಳಷ್ಟು ಬೇಕು,
ನೀವು ಬರೆದದ್ದನ್ನು ಬರೆಯಿರಿ ಮತ್ತು ಪುನಃ ಬರೆಯಿರಿ.
ನೀವು ದಣಿದಿದ್ದರೂ ಅಥವಾ ನಿದ್ರಿಸಿದರೂ ಸಹ,
ನಾಳೆಯ ಕೆಲಸ ಇಂದಿನ ಜವಾಬ್ದಾರಿ
ಮಾಡಿ ಮುಗಿಸಬೇಕು
ಪುಸ್ತಕಗಳಲ್ಲಿ, ಮಕ್ಕಳ ಬರವಣಿಗೆ ವಿನೋದಮಯವಾಗಿದೆ,
ಹಾಗೂ ಅವರಿಗೆ ತಿಳಿಯದಂತೆ, ಪ್ರತಿ ಪತ್ರದಲ್ಲಿ ಜೀವನದ ಕಥೆಯಿದೆ
ಮಕ್ಕಳ ಬರವಣಿಗೆಯೇ ಹಾಗೆ- ಒಂದು ಸಾರಿ ಸ್ವಚ್ಛ, ಒಂದು ಸಾರಿ ವಕ್ರ, ಒಂದು ಸಾರಿ ಅಸ್ಪಷ್ಟ,
ಪುಟಗಳು ಬೇಗನೆ ತುಂಬುತ್ತವೆ,
ನಾಳೆಯ ಭಯವಿಲ್ಲ,
ಅಳತೆ ಎಂದರೆ ತಾಳ್ಮೆ,
ಹೆಚ್ಚು ತಾಳ್ಮೆ, ಹೆಚ್ಚಿನ ಅಂಕಗಳು,
ತಾಳ್ಮೆಯು ಅಕ್ಷರಗಳು ಮತ್ತು ಜೀವನದ ಅಳತೆಗೋಲಾಗಿದೆ.
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
ಹೇ, ಗಾಯಗೊಂಡ ಮನುಷ್ಯನೇ!
ಹೇ! ಗಾಯಗೊಂಡ ಮನುಷ್ಯನೇ!
ಈಗ, ನನಗೆ ಭೂಮಿಯ ಮೇಲೆ
ನೀರನ್ನು ಚಿಮುಕಿಸುವ ತುರ್ತಿದೆ
ಅದಕ್ಕಾಗಿ ಆಕಾಶದಲ್ಲಿ ನೀರನ್ನು ಹುಡುಕುತ್ತಿದ್ದೇನೆ.
..
ನಾನು
ಆಳವಾದ ಬೇರುಗಳ ಆತ್ಮವಾದ
ಕೊನೆಯ ಚಿಗುರಿನ ಅಂಚುಗಳಿಂದ ಇಣುಕುತ್ತಿರುವೆ..
ನಾನು,
ಬಂಧಿಯಾದ ಮಾನವರ ಕಥೆಗಳನ್ನು ಓದುತ್ತಾ
ಬಲಿಯದೆ ಉದುರಿದ ಹಣ್ಣುಗಳಿಗಾಗಿ ಅಳುತ್ತಿದ್ದೇನೆ
ನಾನು,
ಗಾಯಗೊಂಡ ಆತ್ಮಗಳ
ಸುಟ್ಟ ಗೀತೆಗಳನ್ನು ಕೇಳುತ್ತಿದ್ದೇನೆ
ನಾನೇ,
ನಿರಂತರ ಮಲಗಿರುವ ಗೋರಿಗಳ
ನೀತಿಕಥೆಗಳನ್ನು ಜ್ನಾಪಿಸಿಕೊಳ್ಳುತ್ತಿರುವೆ
ಈ ಭೂತಕಾಲ ಎಷ್ಟೊಂದು ಮಾಂತ್ರಿಕವಾಗಿದೆ!?
ಇದು ಕಪ್ಪು ಮಣ್ಣಿನ ಇಳುವರಿಯನ್ನು
ಹಾಗೂ ಆಗಸದ ಮಳೆಯನ್ನು
ಎರಡೆರೆಡು ಬಾರಿ ವಂಚಿಸಿದೆ
ಈಗ ನಾನು ಸಸ್ಯೋದ್ಯಾನವನ್ನು ನೋಡುತ್ತಿದ್ದೇನೆ
ಹೇ! ಗಾಯಗೊಂಡ ಮನುಷ್ಯನೇ!
ಮೌನ ಯುದ್ಧವಲ್ಲ
ನಿನ್ನ ಸಂಕಟವನ್ನು ಹಾಡಿನಂತೆ ಹಾಡೋಣ...!
ಪ್ರಸ್ತುತ ನಿರ್ವಾತ... ನಾಳೆ ತುಂಬಲಿದೆ.
ಸಮಯ ಅನುಮೋದಿಸುತ್ತದೆ..
ನಿನ್ನ ಹೆಜ್ಜೆಯಲ್ಲಿ ಯಾರೋ ಸಾಗುತ್ತಾರೆ..!
ಕೈಗೆಟಕುವುದು
ನಿಮ್ಮ ಮೊದಲ ಹೆಜ್ಜೆಗಳಿಂದ ದೂರವೇನಿಲ್ಲ.... !
ಕತ್ತಲೆಯ ಅಂಚಿನಲ್ಲಿ...
ಕೆರಳಿದ ಬಾವುಟವೂ ಕುಣಿಯುತ್ತಿದೆ!!
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
ನೇಪಾಳಿ ಕವಿ ಮನೋಜ್ ಬೊಗಾಟಿ ಕವನಗಳು
God
He exhilarates when I get hurt
Because he owns a pharmaceutical company
When he sees my bare feet he rejoices,
Because he owns a shoe company.
He becomes happy when he sees me naked
Because he owns a clothing company...
The Owners(Master)
manufacture letters,
The sorrow of the Common people
Are written by these letters.
The owners(Master) make
the breathing tube,
the heart, the tongue,
the stomach,
Life, the rhythm of life,
The dream that I See...
The owner
Constructs a Road and makes my feet,
Makes feet and concoct shoes....
Contrive dreams and make Eyes.
The Owner(Master)
Turns
Thirst into Coca cola,
Desires into Multi-Complex,
Hunger into Pizza,
Manufactures Poison to Kill me.
If the cheeks of my beloved is
Caressed,
Beauty cream of a Company
Sticks on my fingers,
the fragrance of Branded perfume comes if smelt,
My Darling, doesn't smell
Natural.
The fingers accustomed
Of touching the forehead of a Sick child,
Are Nowadays
Touching the Obscene Profile Picture of a Celebrity,
Leaving the plough, Renegade mind is pressing the like button
Under the Alarming News of
Prime Minister's U.S Visit.
After all who is binding and making me
To Crawl
Beneath the Master's Boot?
24 hours of Life
A bit is sucked by Social Networking Sites,
A bit by Manufacturing Firms,
A bit by MNCs,
A bit by The Government ,
A bit by Filthy Politics ,
A bit by THE GOD,
A bit by Life itself
Whatever is left out,
Its accounting is left in the hands of a Powerful contractor
And
Is being sent
To any Political Party's Rally And In return
Recieves the ecstacy of Police bullet
On his forehead
You say!
On what topic is your most adorable poet...
Desinging a poem at this moment?
By Tearing my eyes out,
Breaking my heart, Foreskining me, Beheading me, Sucking my blood,
Someone is there
Who is following Ramdev's Pranayama,
And is reducing the Obesity/Cholestrol,
Visiting the temples,
Is living a Sophisticated Life.
Someone is there
Who is the centre of gravity,
Of these things!
Who is designing your life against your will,
Who is mapping your vision against your dreams,
Who is building
Another Earth
To keep all the weaks against your sensibilities.
Which is against your culture,
Against your language, Aginst your consciousness,
They are making heaven and
Are trying to enthuse Fear within you
That
If you do not follow his religion/Sect
Then
Your civilization will declare you as Blasphemists/ defilled/Sinner,
And will go to the hell.
Someone is there
Who is becoming
The master of your Life,
Or Becoming God!
Dear Nietzsche Said...
God is dead,
How can the God be declared Dead?
Manoj Bogati (Nepali)
ಯಾರೋ ನಿಮ್ಮ
ಜೀವನದ ಯಜಮಾನ ಆಗುತ್ತಿದ್ದಾರೆ1
ನನಗೆ ಹುಷಾರು ತಪ್ಪಿದಾಗ ಅವನು ಕುಣಿದು ಕುಪ್ಪಳಿಸುತ್ತಾನೆ
ಏಕೆಂದರೆ ಅವನು ಫಾರ್ಮಾಸೆಟಿಕಲ್ ಕಂಪನಿ ನಡೆಸುತ್ತಾನೆ
ನಾನು ಬರೀಗಾಗಲಲ್ಲಿ ತಿರುಗಾಡುವದನ್ನು ಕಂಡು ಅವನು ಹಿರಿಹಿರಿ ಹಿಗ್ಗುತ್ತಾನೆ
ಏಕೆಂದರೆ ಅವನು ಶೂ ಕಂಪನಿಯನ್ನು ನಡೆಸುತ್ತಾನೆ
ನಾನು ಬೆತ್ತಲೆ ತಿರುಗುವದನ್ನು ನೋಡಿ ಅವನು ಖುಷಿಪಡುತ್ತಾನೆ
ಏಕೆಂದರೆ ಅವನು ಬಟ್ಟೆ ಅಂಗಡಿಯನ್ನು ನಡೆಸುತ್ತಾನೆ
ಬಂಡವಾಳಶಾಹಿಗಳು ಕಾಗದಗಳನ್ನು ತಯಾರಿಸುತ್ತಾರೆ
ಆ ಕಾಗದಗಳ ಮೇಲೆ ಸಾಮಾನ್ಯ ಜನರ ಕಷ್ಟಗಳು ಬರೆಯಲ್ಪಡುತ್ತವೆ
ಬಂಡವಾಳಶಾಹಿಗಳು ಕಣ್ಣು, ಮೂಗು, ಹೃದಯ, ನಾಲಿಗೆ, ಹೊಟ್ಟೆ ಹೀಗೆ ಎಲ್ಲವನ್ನೂ ತಯಾರಿಸುತ್ತಾರೆ
ಅಷ್ಟೇ ಏಕೆ ಜಿವನ, ಜೀವನ ಕ್ರಮವನ್ನು ಸಹ ರೂಪಿಸುತ್ತಾರೆ
ಆದರೆ ನಾನು ಕನಸು ಕಾಣುತ್ತಿರುವದೇ ಬೇರೆ......
ಬಂಡವಾಳಶಾಹಿಗಳು
ರಸ್ತೆ ನಿರ್ಮಿಸುತ್ತಾರೆ ರಸ್ತೆಗನುಗುಣವಾಗಿ ನನ್ನ ಪಾದಗಳನ್ನು ರೂಪಿಸುತ್ತಾರೆ
ಪಾದಕ್ಕನುಗುಣವಾಗಿ ಶೂಗಳನ್ನು ಮಾಡುತ್ತಾರೆ
ಅಷ್ಟೇ ಅಲ್ಲ ಕನಸುಗಳನ್ನು ಸಹ ಅವರೇ ಯೋಜಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಕಂಗಳನ್ನು ಸಹ ಅವರೇ ರೂಪಿಸುತ್ತಾರೆ
ಬಂಡವಾಳಶಾಹಿಗಳು
ಬಾಯಾರಿಕೆಯನ್ನು ಕೊಕೊಕೋಲಾವನ್ನಾಗಿಯೂ
ಬಯಕೆಗಳನ್ನು ಮಲ್ಟಿಕಾಂಪ್ಲೆಕ್ಸ್ ಗಳಾಗಿಯೂ
ಹಸಿವನ್ನು ಪಿಜ್ಜಾಗಳಾಗಿಯೂ
ಪರಿವರ್ತಿಸುತ್ತಾರೆ
ಒಟ್ಟಿನಲ್ಲಿ ತಯಾರಕರು ಹನಿಹನಿಯಾಗಿ ವಿಷವಿಕ್ಕುತ್ತಿದ್ದಾರೆ
ಇನ್ನೊಂದು ತಮಾಷೆ ಕೇಳಿ.......
ಈಗೀಗ ನನ್ನ ಪ್ರೇಯಸಿಗೆ ಮುತ್ತಿಟ್ಟಾಗ
ಅವಳು ಮೆತ್ತಿಕೊಂಡಿರುವ ಬ್ಯೂಟಿ ಕಂಪನಿಯೊಂದರ ಕ್ರೀಮು ನನ್ನ ತುಟಿ, ಬೆರಳುಗಳಿಗೂ ಮೆತ್ತುತ್ತದೆ
ಒಂದುವೇಳೆ ಅವಳನ್ನು ಮೂಸಿದರೆ ಬ್ರ್ಯಾಂಡೆಡ್ ಪರ್ಫ್ಯೂಮ್ ಸುವಾಸನೆ ಬರುತ್ತದೆ
ಒಟ್ಟಿನಲ್ಲಿ ನನ್ನ ಡಾರ್ಲಿಂಗ್ ಸಹಜ ಪರಿಮಳ ಸೂಸುವದನ್ನು ನಿಲ್ಲಿಸಿ ಬಹಳ ದಿನವಾಯಿತು
ಹುಷಾರಿಲ್ಲದ ಮಗುವಿನ
ಹಣೆಯನ್ನು ಮುಟ್ಟಿಮುಟ್ಟಿ ಆರೈಕೆ ಮಾಡುತ್ತಿದ್ದ ಕೈಗಳು
ಈಗೀಗ ಸೆಲೆಬ್ರೆಟಿಯೊಬ್ಬಳ ಅಶ್ಲೀಲ ಪ್ರೊಫೈಲ್ ಪಿಚ್ಚರನ್ನು ಮುಟ್ಟಿಮುಟ್ಟಿ ಖುಷಿಪಡುತ್ತಿವೆ
ಉತ್ತಬೇಕಾಗಿದ್ದ ನೇಗಿಲನ್ನು ಅಲ್ಲಿಯೇ ಬಿಟ್ಟು
ಪ್ರಧಾನ ಮಂತ್ರಿಯ ಯೂ.ಎಸ್. ಭೇಟಿಯ ಚಿತ್ರವೊಂದಕ್ಕೆ ಲೈಕ್ ಬಟನ್ ಒತ್ತುವದರಲ್ಲಿ ಮಗ್ನವಾಗಿವೆ
ಭ್ರಷ್ಟಗೆಟ್ಟ ಮನಸ್ಸುಗಳು
ಹಾಗಾದರೆ ನನ್ನನ್ನು ಯಜಮಾನನ ಬೂಟಿನ ಕೆಳಗೆ ಬಿದ್ದು ಹೊರಳಾಡುವಂತೆ ಮಾಡುತ್ತಿರುವರಾದರೂ ಯಾರು?
೨೪ ಗಂಟೆಯ ಜೀವನ
ಅದರಲ್ಲೊಂದಿಷ್ಟು ಹೊತ್ತು ಸೋಷಿಯಲ್ ನೆಟ್ವರ್ಕಿಂಗ್
ಸೈಟ್ ಗಳ ಜೊತೆ
ಒಂದಿಷ್ಟು ಹೊತ್ತು ಜಾಹಿರಾತುಗಳ ಜೊತೆ
ಒಂದಿಷ್ಟು ಹೊತ್ತು MNC ಗಳ ಜೊತೆ
ಒಂದಿಷ್ಟು ಹೊತ್ತು ಸರಕಾರದ ಜೊತೆ
ಒಂದಿಷ್ಟು ಹೊತ್ತು ಹೊಲಸು ರಾಜಕಾರಣದ ಜೊತೆ
ಒಂದಿಷ್ಟು ಹೊತ್ತು ದೇವರ ಜೊತೆ
ಇಷ್ಟೆಲ್ಲಾ ಕಳೆದು ಹೊತ್ತು ಉಳಿದರೆ ಅದು ನಮ್ಮ ಬದುಕಿನ ಜೊತೆ
ಇನ್ನೂ ಏನಾದರು ಉಳಿದಿದ್ದರೆ
ಅದರ ಅಕೌಂಟ್ಸೆಲ್ಲಾ ಒಬ್ಬ ಪವರಫುಲ್ ಕಾಂಟ್ರ್ಯಾಕ್ಟರ್ ಬಳಿ ಉಳಿದಿರುತ್ತದೆ ಮತ್ತು ಅದನ್ನೆಲ್ಲಾ ಪೊಲಿಟಿಕಲ್ ಪಾರ್ಟಿಯ ರ್ಯಾಲಿಗೆ ಕಳಿಸಲಾಗುತ್ತದೆ
ಇಂಥ ಸಂದರ್ಭದಲ್ಲಿ ನೀವು ಕೇಳುತ್ತೀರಿ
ನಿಮಗೆ ತುಂಬಾ ಇಷ್ಟವಾದ ಕವಿ ಈಗ ಯಾವ ಕವನವನ್ನು ಬರೆಯುತ್ತಿದ್ದಾನೆಂದು?
ನನ್ನ ಕಣ್ಣುಗಳನ್ನು ಕಿತ್ತು
ಹೃದಯವನ್ನು ಒಡೆದು
ನನ್ನ ಸುಂತಿಮಾಡಿ
ತಲೆ ಕತ್ತರಿಸಿ ರಕ್ತಹೀರಲು
ಯಾವನೋ ಒಬ್ಬನಿದ್ದಾನೆ
ಬಾಬಾ ರಾಮದೇವನ ಪ್ರಾಣಾಯಾಮವನ್ನು ಯಾರು ತಾನೆ ಅನುಸರಿಸುತ್ತಿದ್ದಾರೆ
ಮತ್ತು ಯಾರು ತಾನೆ ಒಬೆಸಿಟಿ, ಕೊಲೆಸ್ಟ್ರಾಲನ್ನು ಕಡಿಮೆಮಾಡುತ್ತಿದ್ದಾರೆ
ಎಲ್ಲರೂ ಗುಡಿಗುಂಡಾರಗಳನ್ನು ಸುತ್ತುತ್ತಾ
ನಯನಾಜೂಕಿನ ಬದುಕನ್ನು ಬದುಕುತ್ತಿದ್ದಾರೆ
ಈ ಎಲ್ಲದರ ಗುರುತ್ವಕೇಂದ್ರ ಯಾರು?
ನಿನ್ನ ಇಚ್ಚೆಯ ವಿರುದ್ದ ನಿನ್ನ ಬದುಕನ್ನು ರೂಪಿಸುತ್ತಿರುವರು ಯಾರು?
ನೀನು ಕನಸು ಕಾಣದಂತೆ ನಿನಗೆ ಮಂಪರನ್ನು ಆವರಿಸುತ್ತಿರುವವರು ಯಾರು?
ಇನ್ನೊಂದು ಜಗತ್ತನ್ನು ಸೃಷ್ಟಿಸುತ್ತಿರುವವರು ಯಾರು?
ನಿನ್ನ ಸಂವೇದನೆಗಳನ್ನು
ನಿನ್ನ ಸಂಸ್ಕೃತಿ, , ನಿನ್ನ ಭಾಷೆ, ನಿನ್ನ ಪ್ರಜ್ಞಗಳಿಗೆ ವಿರುದ್ಧವಾಗಿ ದುರ್ಬಲಗೊಳಿಸುತ್ತಿರುವವರು ಯಾರು?
ಅವರು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ
ನಿಮ್ಮೊಳಗೆ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ
ಒಂದು ವೇಳೆ
ನೀವು ಅವರ ಧರ್ಮ/ಪಂಥವನ್ನು ಅನುಸರಿಸದಿದ್ದರೆ
ನಿಮ್ಮ ಸೋ ಕಾಲ್ಡ್ ಸೊಸೈಟಿಯು ನಿಮ್ಮನ್ನು ದೇಶದ್ರೋಹಿ ಎಂದು ಘೋಷಿಸುತ್ತದೆ,
ಮತ್ತು ನೀವು ನರಕಕ್ಕೆ ಹೋಗಬೇಕಾಗುತ್ತದೆ.
ಯಾರೋ ಇದ್ದಾರೆ
ಯಾರೋ ನಿಮ್ಮ ಜೀವನದ ಯಜಮಾನ ಆಗುತ್ತಿದ್ದಾರೆ
ಅಥವಾ ದೇವರಾಗುತ್ತಿದ್ದಾರೆ!
ಆತ್ಮೀಯ ಸ್ನೇಹಿತನೊಬ್ಬ ಹೇಳಿದನು
ದೇವರು ಸತ್ತಿದ್ದಾನೆ ಎಂದು
ಹಾಗಾದರೆ ದೇವರು ಸತ್ತ ಎಂದು ಹೇಗೆ ಘೋಷಿ ಸುವದು?
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
Yes, I’m Black. Or Black. Or, Acoloured
Yes, I’m Black.
Or Black.
Nobody becomes dirty
If touched by some black.
Like, nobody becomes clean
If touched by some white.
Alphabets are also black.
Your name is written by nigger black letters.
The wound that grows on your skin
Doesn’t spare mine.
You are White.
I am Black.
My short nose is as tall as me.
Or, is as tall as your long nose.
My footsteps are as short as my height
But I might walk with you.
I might walk more than you.
Colour doesn’t walk.
You are showing your child the world
By pointing with the fingers of your hand.
I’m not pointing with my toe.
They say that eyes are irritated by white light.
But I never closed my eyes.
I’m farer than colour.
Darker than colour.
The engine of your vehicle might be well.
But then that’ll lead you only to the destination of mine.
You couldn’t follow me yet?
Soil doesn’t have colour.
Water doesn’t have colour.
Fire doesn’t have colour.
Wind doesn’t have colour.
Sound doesn’t have colour.
This is same as
Truth doesn’t have colour.
Religion doesn’t have colour.
Peace doesn’t have colour.
Love doesn’t have colour.
Passivity doesn’t have colour.
Who you are to talk about colour?
What if I am Black?
Yes, I am Black.
Black, or Black.
Or acoloured.
-Manoj Bogati
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ ಅಥವಾ ಬಣ್ಣರಹಿತನಾಗಿದ್ದೇನೆ
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣರಹಿತನಾಗಿದ್ದೇನೆ
ಏನಿವಾಗ?
ಕಪ್ಪನ್ನು ಮುಟ್ಟಿದ ತಕ್ಷಣ
ಯಾರೂ ಕಪ್ಪಾಗುವದಿಲ್ಲ
ಅಥವಾ ಬಿಳಿ ಬಣ್ಣವನ್ನು ಮುಟ್ಟಿದ ತಕ್ಷಣ
ಯಾರೂ ಬೆಳ್ಳಗಾಗುವದಿಲ್ಲ
ವರ್ಣಾಕ್ಷರಗಳು ಸಹ ಕಪ್ಪಾಗಿವೆ
ನಿನ್ನ ಹೆಸರನ್ನು ಸಹ ಕಡುಕಪ್ಪು ಅಕ್ಷರಗಳಲ್ಲಿಯೇ ಬರೆಯಲಾಗುತ್ತದೆ
ನೀನು ಬಿಳಿಯ
ನಾನು ಕರಿಯ
ನೀನು ಬೆಳ್ಲಗಿದ್ದಾಕ್ಷಣ ನಿನ್ನ ಚರ್ಮದ ಮೇಲೆ ಬೆಳೆಯುವ ಕುರು ನಿನ್ನನ್ನು ಸುಮ್ಮನೆ ಬಿಡುವದಿಲ್ಲ
ನನ್ನ ಮೂಗು
ನನ್ನಷ್ಟೇ ಉದ್ದವಾಗಿದೆ
ಅಥವಾ ನಿನ್ನಷ್ಟೇ ಎತ್ತರವಾಗಿದೆ
ನನ್ನ ಹೆಜ್ಜೆಗುರುತುಗಳು ನನ್ನಷ್ಟೇ ಎತ್ತರವಾಗಿವೆ
ಆದರೂ ನಾನು ನಿನ್ನೊಂದಿಗೆ ನಡೆಯಬಲ್ಲೆ
ಅಥವಾ ನಿನಗಿಂತ ಹೆಚ್ಚೇ ನಡೆಯಬಲ್ಲೆ
ನಿನಗೆ ತಿಳಿದಿರಲಿ
ಬಣ್ಣ ನಡೆಯುವದಿಲ್ಲ
ನೀನು ನಿನ್ನ ಮಗುವಿಗೆ ನಿನ್ನ ಬೆರಳಿನಿಂದಲೇ ಈ ಜಗತ್ತನ್ನು ತೋರಿಸುತ್ತಿ
ಮತ್ತಿನ್ನೇನು?
ನಾನು ನನ್ನ ಕಾಲ್ಬೆರಳಿನಿಂದ ತೋರಿಸುತ್ತ್ತೇನೆ ಎಂದುಕೊಂಡೆಯಾ?
ಜನ ಹೇಳುತ್ತಾರೆ ಬಿಳಿ ಬಣ್ಣ ಕಣ್ಣುಕುಕ್ಕಿಸುತ್ತದೆಂದು
ಆದರೆ ನಾನು ಯಾವತ್ತೂ ಕಣ್ಣುಮುಚ್ಚಿಲ್ಲ
ನಾನು ಬಣ್ಣಕ್ಕಿಂತ ಬೆಳ್ಳಗಿದ್ದೇನೆ
ಬಣ್ಣಕ್ಕಿಂತ ಕಪ್ಪಗಿದ್ದೇನೆ
ನಿನ್ನ ಬಳಿ ಒಳ್ಲೆಯ ಕಾರು ಇರಬಹುದು
ಆದರೆ ಕೊನೆಗೆ ಅದು ಕಪ್ಪು ನೆಲದ ಮೇಲೆ ನಡೆಯಲೇಬೇಕು
ಆದರೂ ನೀನು ನನ್ನನ್ನು ಅನುಸರಿಸುವದಿಲ್ಲವೇ?
ಮಣ್ಣಿಗೆ ಬಣ್ಣವಿಲ್ಲ
ನೀರಿಗೆ ಬಣ್ಣವಿಲ್ಲ
ಬೆಂಕಿಗೆ ಬಣ್ಣವಿಲ್ಲ
ಗಾಳಿಗೆ ಬಣ್ಣವಿಲ್ಲ
ಶಬ್ದಕ್ಕೆ ಬಣ್ಣವಿಲ್ಲ
ಅಂತೆಯೇ
ಸತ್ಯಕ್ಕೆ ಬಣ್ಣವಿಲ್ಲ
ಧರ್ಮಕ್ಕೆ ಬಣ್ಣವಿಲ್ಲ
ಶಾಂತಿಗೆ ಬಣ್ಣವಿಲ್ಲ
ಪ್ರೀತಿಗೆ ಬಣ್ಣವಿಲ್ಲ
ಜಡತ್ವಕ್ಕೆ ಬಣ್ಣವಿಲ್ಲ
ಬಣ್ಣಗಳ ಬಗ್ಗೆ ಮಾತನಾಡಲು ನೀನು ಯಾರು?
ನಾನು ಕರ್ರಗಿದ್ದರೆ ಏನಿವಾಗ?
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣವಿಲ್ಲದವನಾಗಿದ್ದೇನೆ
ಏನಿವಾಗ?
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
History
Ancestor bones are discovered
Wherever dug
This is Teeth.
This has chewed down an age.
It has bitten Time to dust and repaired a house-wall.
This is Shin-bone.
A monk in a village invokes for peace
Blowing this with his mouth
During uneasy hours,
A procession passes through the town
Crying slogans
Of “Long Live”
Of “Down With”
While he is still blowing
The news of someone hacking time’s head to death
Is published in the news-magazine
The very next day
And this is spine,
Folk-story
For descendants wearing bamboo-spines
Don’t know what bone is this.
It’s broken so bluntly
Looks like it split
As it fell into the pit of some evil design
This skull
Wearing a fatal cut-mark of a khukuri
Was grounded under
Intellectuals talk of analyzing history threadbare,
I dug up in the patio at the front
Only to uncover my own placental lump
I think I am digger
Who knows no digging!
ಇತಿಹಾಸ
ಅಗೆದ ಕಡೆಗೆಲ್ಲಾ
ಪೂರ್ವಿಕರ ಮೂಳೆಗಳು ಸಿಕ್ಕಿವೆ
ಇದು ಅವರ ಹಲ್ಲು
ವರ್ಷವರ್ಷಗಳವರೆಗೂ ಅಗೆದಿದೆ
ಕಾಲವನ್ನು ಕಡಿದು ಪುಡಿಮಾಡಿ
ಮನೆಯಗೋಡೆಯನ್ನು ರಿಪೇರಿ ಮಾಡಿದೆ
ಇದು ಮೊಣಕಾಲು ಮೂಳೆ
ಇದನ್ನು ಹಳ್ಳಿಯೊಂದರ ಸನ್ಯಾಸಿಯೊಬ್ಬ
ಪ್ರಕ್ಷುಬ್ದ ಸಮಯದಲ್ಲಿ
ತನ್ನ ಬಾಯಲ್ಲಿಟ್ಟುಕೊಂಡು ಊದುತ್ತಾನೆ
ಮೆರವಣಿಗೆಯೊಂದು ಊರತುಂಬಾ ಹೊರಡುತ್ತದೆ
"ಹೆಚ್ಚು ದಿನ ಬದುಕಿರಿ"
"ಕೆಳಗಿಳಿಯಿರಿ"
ಎಂಬ ಘೋಷಣೆಗಳನ್ನು ಕೂಗುತ್ತಾ.
ಅವನಿನ್ನೂ ಊದುತ್ತಿರುವಾಗಲೇ
ಯಾರೋ ಒಬ್ಬರು ಕಾಲನ ತಲೆಯನ್ನು ಕಡಿದು
ಉರುಳಿಸಿದ ಸುದ್ದಿಯೊಂದು ಮಾರನೆಯ ದಿನ ಮುಂಜಾನೆ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ
ಇದು ಬೆನ್ನುಮೂಳೆ
ಜಾನಪಸ ಕಥೆಯೊಂದು ಹೇಳುತ್ತದೆ
ಪೂರ್ವಜರೆಲ್ಲಾ ಬಿದಿರಿನ ಬೆನ್ನುಮೂಳೆಯನ್ನು ಹೊಂದಿದ್ದರೆಂದು
ಇದು ಯಾವ ಮೂಳೆಯೆಂದು ಗೊತ್ತಿಲ್ಲ
ಯಾವುದೋ ದುಷ್ಟಶಕ್ತಿಗೆ ಅಡ್ಡಾದಿಡ್ಡಿಯಾಗಿ ಮುರಿದಿದೆ
ಇದು ತಲೆಬುರುಡೆ
ಇದರ ಮೇಲೆ ಹೊಡೆದ ಗುರುತಿದೆ
ಆಳದಲ್ಲಿ ಹೂತುಕೊಂಡಿತ್ತು
ಬುದ್ಧಿಜೀವಿಗಳು ಇದರ ಇತಿಹಾಸದ ಎಳೆಯನ್ನು ಹುಡುಕಿಹೊರಟಿದ್ದಾರೆ
ನಾನು ತಲೆಬಾಗಿಲಲ್ಲಿರುವ ಒಳಾಂಗಣದಲ್ಲಿ ಅಗೆಯುತ್ತೇನೆ
ಹೊಕ್ಕಳ ಬಳ್ಳಿಯ ಮೂಲವನ್ನು ಹುಡುಕುತ್ತಾ
ನಾನೊಬ್ಬ ಅಗೆಯುವವ
ಆದರೆ ಹೇಗೆ ಅಗೆಯಬೇಕೆಂದು ಗೊತ್ತಿಲ್ಲದವ!
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
If there is a song within you, sing it out
Do not wait for others to declare your words as poetry
They are yours, not theirs!
Write them down.
Do not let someone else Make your shaky path steady,
It is yours, not theirs! Walk it through!
Don't wait for someone to connect your inner light to the stars,
It is yours, not theirs!
Let it shine bright.
If there is a song within you,
Do not wait for someone to tune it,
It is yours, not theirs! Sing it out loud.
*Kannada Original: M. R. Kamala*
*English Translation: Uday Itagi*
ನಿಮ್ಮೊಳಗೆ ಹಾಡುಗಳಿದ್ದರೆ ಹಾಡಿಬಿಡಿ
ನಿಮ್ಮೊಳಗಿನ ಪದಗಳಿಗೆ ಯಾರೋ
ಕವಿತೆಯ ಮುದ್ರೆ ಒತ್ತಲೆಂದು ಕಾಯಬೇಡಿ
ಅದು ನಿಮ್ಮದೇ, ಅವರದಲ್ಲ! ಬರೆದುಬಿಡಿ
ನಿಮ್ಮೊಳಗಿನ ತೂಗುಹಾದಿಯ ಯಾರೋ
ಗಟ್ಟಿ ನಿಲ್ಲಿಸಿ ಬೀಗಲೆಂದು ಬಿಡಬೇಡಿ
ಅದು ನಿಮ್ಮದೇ, ಅವರದಲ್ಲ, ನಡೆದುಬಿಡಿ
ನಿಮ್ಮೊಳಗಿನ ನಕ್ಷತ್ರದುರಿಗೆ ಯಾರೋ
ಬೆಳಕಿನ ಪಟ್ಟ ಕಟ್ಟಲೆಂದು ನಿರೀಕ್ಷಿಸಬೇಡಿ
ಅದು ನಿಮ್ಮದೇ, ಅವರದಲ್ಲ, ಬೆಳಗಿಬಿಡಿ
ನಿಮ್ಮೊಳಗೊಂದು ಹಾಡಿದ್ದರೆ ಯಾರೋ
ರಾಗ ಹಾಕಲೆಂದು ಕಾದು ಕೂರಬೇಡಿ
ಅದು ನಿಮ್ಮದೇ, ಅವರದಲ್ಲ, ಹಾಡಿಬಿಡಿ
Letting go is not out of love or compassion for others
Letting go is not out of love or compassion for others,
but for us to feel lighter.
If we keep holding on,
it might be a bond for them...
but our hands will tire too
Kannada Original: Chethana Teerthahalli
English Translation: Uday Itagi
ಬಿಟ್ಟುಕೊಡುವುದು ಮತ್ತೊಬ್ಬರ ಮೇಲಿನ ಪ್ರೀತಿಯಿಂದಲೋ ಅನುಕಂಪದಿಂದಲೋ ಅಲ್ಲ,
ನಾವು ಹಗುರಾಗಲಿಕ್ಕೆ.
ಹಿಡಿದುಕೊಂಡೇ ಇದ್ದರೆ,
ಅವರಿಗೇನೋ ಬಂಧನ...
ನಮ್ಮ ಕೈಯೂ ಸೋಲುವುದು.
Let’s love simply, my friend
Let’s love simply, my friend.
No excessive drama,
No intense emotions,
No endless promises,
No far-fetched plans,
No gifts given after too much thought –
None of these are necessary.
Clear communication, understanding,
Time that feels entirely ours when we're together,
A warm hug,
An unspoken connection through our eyes,
Mutual compassion – that's all we need.
Life is already complex enough.
Let’s love as simply as we can.
Kannada Original: Kusuma Ayarahalli
English Translation: Uday Itagi
ಸರಳವಾಗಿ ಪ್ರೇಮಿಸೋಣ ಗೆಳೆಯ
ವಿಪರೀತ ನಾಟಕ,
ತೀವ್ರಭಾವುಕತೆ,
ಮುಗಿಯದ ಭರವಸೆ
ಬಲುದೂರದ ಯೋಜನೆಗಳು,
ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು,
ಯಾವುದಂದರೆ ಯಾವುದೂ ಬೇಡ
ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ
ಜೊತೆಗಿರುವಷ್ಟು ಹೊತ್ತೂ
ನಮ್ಮದು ಮಾತ್ರವೆನಿಸುವ ಸಮಯ
ಒಂದು ಗಾಢ ಅಪ್ಪುಗೆ.
ಕಣ್ಣ ಮಾತು. ಪರಸ್ಪರ ಕಾರುಣ್ಯ!
ಸಾಕಿಷ್ಟು.
ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ.
ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ!
- ಕುಸುಮ ಆಯರಹಳ್ಳಿ
(ಈ ಫೊಟೋ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಳೆಂದು ಸುದ್ದಿಯಾಗುತ್ತಿರುವ ಸುಂದರಿ ಮೊನಾಲಿಸಾಳದು. ಎಂತಾ ಕಣ್ಣು! ಒಂದು ಪದ್ಯ ಹುಟ್ಟಿಸಿಬಿಟ್ಟಿತು.)
Oh Uma, is it really so?
Oh Uma, is it really so?
Is what people say true?
They say Shiva wanders far and wide,
Covered his body in ashes from the cremation ground
Devoid of food and clothes,
He roams from village to village
Yet, you too adorn your golden body
With that same ash, they say.
For the mistake of being your mother,
Must I endure this humiliation?
And when Shiva comes calling for you again,
I shall tell him, "Uma is not at home"?
Kannada Original: Dr. G. S. Shivarudrappa
English Translation: Uday Itagi
ಹೌದೇನೇ ಉಮಾ ಹೌದೇನೇ.
ಜನವೆನ್ನುವುದಿದು ನಿಜವೇನೇ ?-
ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ !
ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬುವನಂತೆ !
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ.
ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ? ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ
‘ಮನೆಯೊಳಿಲ್ಲ ಉಮೆ’- ಎನ್ನುವೆನು.
-ಡಾ|| ಜಿ ಎಸ್ ಶಿವರುದ್ರಪ್ಪ
ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲ, ಆನೆ ನಡೆದಿದ್ದೇ ದಾರಿಯಾಗಿದೆ...
(ಇವತ್ತು ಡಿಸೆಂಬರ್ 30. ಇವತ್ತಿಗೆ ಸದ್ದಾಂ ಹುಸೇನ್ ನ್ನು ಗಲ್ಲಿಗೇರಿಸಿ ಸರಿಯಾಗಿ ಹದಿನೆಂಟು ವರ್ಷಗಳು ಕಳೆದವು. ಆ ನೆಪದಲ್ಲಿ ಇದೊಂದು ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.)
ಸುತ್ತಲೂ ಕೈಯಲ್ಲಿ ಗನ್ನುಗಳನ್ನು, ಬಂದೂಕಗಳನ್ನು ಹಿಡಿದು ಆತನನ್ನು ಬೆನ್ನಟ್ಟಿ ಬಂದ ಪುಂಡರು (ಬಂಡುಕೋರರು). ಮಧ್ಯದಲ್ಲಿ ಮನುಷ್ಯ ಸಹಜ ಪ್ರಾಣ ಭೀತಿಯಿಂದ ರಸ್ತೆ ಅಡಿಯ ಕೊಳವೆಯೊಂದರಲ್ಲಿ ಅಡಗಿ ಕುಳಿತ ವ್ಯಕ್ತಿ. ಕೊನೆಗೂ ಆ ಪುಂಡರು ಅವನನ್ನು ಕೊಳವೆಯಿಂದಾಚೆ ದರದರನೆ ಎಳೆದು ತಂದು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಕೆನ್ನೆಗೆ ಬಾರಿಸುತ್ತಾ, ತಲೆಯ ಮೇಲೆ ಮೊಟಕುತ್ತಾ, ಕೆಳಗೆ ಬೀಳಿಸಿ ಒದೆಯುತ್ತಾ ವಿಲಕ್ಷಣ ಖುಷಿ ಪಡುವಾಗ ಕೆಳಗೆ ಬಿದ್ದ ವ್ಯಕ್ತಿ "Please don't beat me. What harm have I done to you?" ಎಂದು ಗೋಗರೆಯುತ್ತಿದ್ದರೂ ಲೆಕ್ಕಿಸದೇ ಆತನಿಗೆ ರಕ್ತ ಬರುವ ಹಾಗೆ ಹೊಡೆಯುತ್ತಲೇ ಇದ್ದ ಮನುಷ್ಯರು ಆ ಸಮಯದಲ್ಲಿ ನಿಜಕ್ಕೂ ರಾಕ್ಷಸ ಅವತಾರವನ್ನು ತಾಳಿದ್ದರು. ಈ ಮಧ್ಯ ಸನ್ನಿಗೊಳಗಾದ ಪುಂಡನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದಾಗ ಮತ್ತೆ ಆ ವ್ಯಕ್ತಿ "Don't kill me." ಎಂದು ಅರಚಿತ್ತಿದ್ದರೂ ಬಿಡದೆ ಮನಬಂದಂತೆ ಗುಂಡಿನ ಮೇಲೆ ಗುಂಡುಗಳನ್ನು ಹಾರಿಸಿ ಅವನ ಪ್ರಾಣವನ್ನು ತೆಗೆಯುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಅವನ ಸಾವನ್ನು ಸಂಭ್ರಮಿಸಿ ಸಂತೋಷಪಟ್ಟರು. ಹೀಗೆ ಹೀನಾಯವಾಗಿ ಕೊಲ್ಲಲ್ಪಟ್ಟ ಆ ವ್ಯಕ್ತಿಯೇ ಮೊಹಮ್ದ ಗಡಾಫಿ. ಅವರು ಅವನ ಸಾವನ್ನು ಸಂಭ್ರಮಿಸಿದರು, ಹೊಸ ನಾಡೊಂದನ್ನು ಕಟ್ಟುತ್ತೇವೆ ಎಂದು ಘೋಷಿಸಿದರು. ಆದರೆ ನಿಜಕ್ಕೂ ಇವರು ಹೊಸ ನಾಡೊಂದನ್ನು ಕಟ್ಟಿದರೆ? ಲಿಬಿಯಾದಲ್ಲಿ ಹೊಸತನವನ್ನು ತಂದರೆ? ಇಲ್ಲವೇ ಇಲ್ಲ! ಬದಲಿಗೆ ಗಡಾಫಿಯ ಹತ್ಯೆಯಾದ ದಿನದಿಂದಲೇ ಲಿಬಿಯಾ ಅಧೋಗತಿಗೆ ಇಳಿಯುತ್ತಾ ಹೋಯಿತು. ನಳನಳಿಸುತ್ತಿದ್ದ ಲಿಬಿಯಾ ಮುರಿದು ಇನ್ನೆಂದೂ ರಿಪೇರಿ ಮಾಡದ ಹಂತ ತಲುಪಿತು. ಕಂಗೊಳಿಸುತ್ತಿದ್ದ ಲಿಬಿಯಾವನ್ನು ಒಡೆದು ಚೂರು ಚೂರು ಮಾಡಿದ ಆ ಮಹಾನ್ ಶಕ್ತಿಗಳಿಗೆ ಧಿಕ್ಕಾರವಿರಲಿ. ಗಡಾಫಿಯ ಉಪ್ಪಿನ ಋಣದ ಅರಿವು ಇವರಿಗೆ ಕಿಂಚಿತ್ತಾದರೂ ಇದ್ದಿದ್ದರೆ ಇವರು ಹೀಗೆ ಮಾಡುತ್ತಿದ್ದರೆ?
ಇಂಥದೇ ಇನ್ನೊಂದು ಸಂದರ್ಭ. ಆದರೆ ಕೊಂಚ ಭಿನ್ನ. ಅದು ಇರಾಕಿನ ಕೋರ್ಟು. ಬೆಳಗಿನ ಆರು ಘಂಟೆಯ ಸಮಯ. ಆವತ್ತು ಸದ್ದಾಂ ಹುಸೇನ್ ಕೇಸಿಗೆ ಸಂಬಂಧಪಟ್ಟ ಕೊನೆಯ ತೀರ್ಪು ಹೊರಬೀಳುವದಿತ್ತು. ಸದ್ದಾಂ ಹುಸೇನ್ ಕಟಕಟೆಯಲ್ಲಿ ಒಂಚೂರು ಅಧೀರನಾಗದೆ ಅಚಲನಾಗಿ ನಿಂತಿದ್ದಾನೆ. ಈಗಾಗಲೇ ಪೂರ್ವ ನಿರ್ಧರಿತಗೊಂಡ ಸದ್ದಾಂ ಹುಸೇನ್ ವಿರುದ್ಧದ ಮರಣ ದಂಡನೆಯ ಅಂತಿಮ ತೀರ್ಪನ್ನು ನ್ಯಾಯಾಧೀಶರು ಓದುತ್ತಿದ್ದಾರೆ. ಆ ತೀರ್ಪು ಏನು ಬರತ್ತದೆ ಎಂದು ಈಗಾಗಲೇ ಮನಗಂಡಿದ್ದ ಸದ್ದಾಂ ಹುಸೇನ್ ಆಕ್ರೋಶದಿಂದ "You American dog! You wretched beast! You will be a slave to Israelis! ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್!" ಎಂದು ಕೂಗುತ್ತಲೇ ಇದ್ದ. ತೀರ್ಪನ್ನು ಓದಿದ ನಂತರ ಆತನನ್ನು ಗಲ್ಲಿಗೇರಿಸುವ ಕೋಣೆಗೆ ಕರೆತರಲಾಗುತ್ತದೆ. ಆಗಲೂ ಸದ್ದಾಂ ಒಂಚೂರು ಹೆದರದೆ ಎಂದಿನ ಅದೇ ಗತ್ತಿನಿಂದ ಸಾವಿನ ಕೋಣೆಗೆ ನಡೆದು ಬರುತ್ತಾನೆ. ನೇಣುಗಂಬದ ಮುಂದೆ ನಿಲ್ಲಿಸಲಾಗುತ್ತದೆ. ಅತ್ತ ಮುಸುಕು ಹಾಕಿಕೊಂಡ ಒಂದಿಬ್ಬರು ಅಮೆರಿಕನ್ ಸೈನಿಕರು. ಇತ್ತ ಒಂದಿಬ್ಬರು ಇರಾಕಿ ಜೈಲು ಅಧಿಕಾರಿಗಳು. ಆ ಮುಸುಕುಧಾರಿಗಳನ್ನು ಗುರುತು ಹಿಡಿದ ಸದ್ದಾಂ ಹುಸೇನ್ ತನ್ನ ವ್ಯಂಗ್ಯದ ಮಾತುಗಳಿಂದ ಅವರನ್ನು ಚುಚ್ಚುತ್ತಾನೆ. ಆಗ ಜೈಲು ಅಧಿಕಾರಿಗಳು ಆತನನ್ನು "ನಿಮ್ಮ ಕೊನೆಯ ಆಸೆ ಏನು?" ಎಂದು ಕೇಳುತ್ತಾರೆ. ಅದಕ್ಕವನು "ನಾನು ಕೈಯಲ್ಲಿ ಹಿಡಿದಿರುವ ಕುರಾನ್ನ್ನು ನನ್ನ ಸ್ನೇಹಿತನ ಮಗನ ಕೈಗೆ ಕೊಡಿ" ಎಂದು ಹೇಳುತ್ತಾನೆ. ಇಷ್ಟರಲ್ಲಿಯೇ ಈತನ ಸ್ನೇಹಿತನನ್ನೂ ಸಹ ಗಲ್ಲಿಗೇರಿಸುವದು ನಿರ್ಧಾರವಾಗಿರುತ್ತದೆ. ಕುಣಿಕೆಯು ಅವನ ಕುತ್ತಿಗೆಗೆ ಬೀಳುವ ಮೊದಲು ಸದ್ದಾಂ ಹೀಗೆಂದು ಕೂಗುತ್ತಲೇ ಇದ್ದ "Long live the nation! Long live the people! Long live the Palestinians!" ಆದರೆ ನಿಜಕ್ಕೂ ಅವನ ಸಾವಿನ ನಂತರ ಇರಾಕ್ ತನ್ನ ಹಿಂದಿನ ವೈಭವವನ್ನು ಮರಳಿಪಡೆಯಿತೇ? ಇಲ್ಲವೇ ಇಲ್ಲ. ಅದು ಕೂಡ ಮುರಿದುಹೋದ ಸಾಮ್ರಾಜ್ಯಗಳ ಸಾಲಿನಲ್ಲಿ ಒಂದಾಗಿ ನಿಂತಿತು.
ಈ ಎರಡು ಘಟನೆಗಳು ಎಂಥವರನ್ನೂ ಮನ ಕಲುಕದೇ ಬಿಡುವದಿಲ್ಲ. ಈ ಎರಡು ಘಟನೆಗಳಿಂದ ಜಗತ್ತಿನ ದೈತ್ಯ ಶಕ್ತಿಗಳು ತಮಗಾಗದವರನ್ನು ಹೇಗೆ ಮುಗಿಸುತ್ತವೆ ಎಂಬುದನ್ನು ಮನದಟ್ಟು ಮಾಡುತ್ತವೆ ಮತ್ತು ಚೆಂದವಾಗಿ ಸಾಗುತ್ತಿದ್ದ ಎರಡು ದೇಶಗಳನ್ನು ಹೇಗೆ ಹಾಳುಗೆಡವಿದರು ಎಂಬುದು ಗೊತ್ತಾಗುತ್ತದೆ. ಜೊತೆಗೆ ಮಾಧ್ಯಮಗಳು ಹೇಗೆ ಒಳಸತ್ಯವನ್ನು ಮರೆಮಾಚಿ ಸುಳ್ಳನ್ನೇ ಸತ್ಯವೆಂದು ನಂಬಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ.
ನಾನು ಲಿಬಿಯಾಕ್ಕೆ ಹೋಗಿದ್ದು 2007 ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ. ಅದಕ್ಕೆ ಸರಿಯಾಗಿ ಹತ್ತು ತಿಂಗಳುಗಳ ಹಿಂದೆಯಷ್ಟೇ ಅಂದರೆ 2006 ರ ಡಿಸೆಂಬರ್ 30 ರಂದು ಇರಾಕಿನಲ್ಲಿ ಸದ್ದಾಂ ಹುಸೇನ್ನ್ನು ಗಲ್ಲಿಗೇರಿಸಿಲಾಗಿತ್ತು. ಅದು ಭಾರಿ ಸುದ್ದಿಯಾಗಿತ್ತು. ಪತ್ರಿಕೆಗಳಲ್ಲೆಲ್ಲಾ ಅವನದೇ ಸುದ್ದಿ. ಟೀವಿ ಮಾಧ್ಯಮಗಳು ಸಹ ಅವನೊಬ್ಬ ಖಳನಾಯಕನೆಂಬಂತೆ ಚಿತ್ರಿಸಿದ್ದವು. ನಾವು ಕೂಡಾ ಅದೇ ಸತ್ಯವೆಂದು ನಂಬಿದ್ದೆವು. ಆದರೆ ನಾನು 2007 ರಲ್ಲಿ ಲಿಬಿಯಾಕ್ಕೆ ಬಂದಿಳಿದಾಗ ನಮ್ಮ ಕಾಲೇಜಿನಲ್ಲಿ ನನ್ನೊಟ್ಟಿಗೆ ನಾಲ್ಕು ಜನ ಇರಾಕಿ ಪ್ರೊಫೆಸರ್ ಗಳು ಕೆಲಸ ಮಾಡುತ್ತಿದ್ದರು. ನಾನವರನ್ನು ಕಂಡೊಡನೆ “Was Saddam Hussein really so cruel? Did he really exploit you? How did you tolerate his atrocities?” ಎಂದೆಲ್ಲಾ ಅವರನ್ನು ಕೇಳಿದಾಗ ಅವರಲ್ಲಿ ಒಂದಿಬ್ಬರು ಸಪ್ಪೆ ಮುಖ ಮಾಡಿದರೆ ಇನ್ನೊಬ್ಬರು ಅತ್ತೇ ಬಿಟ್ಟರು. ನಾನು ಗಾಭರಿ ಬಿದ್ದು ಯಾಕೆ ಏನಾಯಿತೆಂದು ಕೇಳಿದಾಗ ಅವರೆಲ್ಲಾ ಅದು ಅಮೆರಿಕಾ ಹೇಳಿದ ಸುಳ್ಳು ಸುದ್ದಿ, ಇರಾಕಿನಲ್ಲಿದ್ದ ತೈಲ ಸಂಪತ್ತನ್ನು ದೋಚಲು ಅಮೆರಿಕಾ ಏನೆಲ್ಲಾ ಹುನ್ನಾರಗಳನ್ನು ಮಾಡಿತು ಮತ್ತು ಸದ್ದಾಂ ಹುಸೇನ್ ಎಷ್ಟೆಲ್ಲಾ ಒಳ್ಳೆಯವನಾಗಿದ್ದ ಎಂಬುವದನ್ನು ಸೂಚ್ಯವಾಗಿ ಹೇಳಿದ್ದರು. ಇರಾಕಿನ ರಾಜಧಾನಿ ಬಾಗ್ದಾದನ್ನು ಸಿಂಗಾಪೂರಿಗಿಂತ ಮೂರುಪಟ್ಟು ಅಭಿವೃದ್ದಿ ಪಡೆಸಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಲಿಬಿಯಾಕ್ಕೂ ಕೂಡಾ ಆ ಗತಿ ಬರಬಹುದೆಂದು ಹೇಳಿದಾಗ ನಾನವರನ್ನು ನಂಬಿರಲಿಲ್ಲ. ಆದರೆ 2011 ರಲ್ಲಿ ಲಿಬಿಯಾದಲ್ಲಿ ಕ್ರಾಂತಿ ಆರಂಭವಾದಾಗ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿ ಮತ್ತು ಆತನ ಲಿಬಿಯಾದ ಬಗ್ಗೆ ವ್ಯತಿರಿಕ್ತವಾದ ಚಿತ್ರಣಗಳನ್ನು ತೋರಿಸುವಾಗ ಅವರ ಮಾತುಗಳು ವಾಸ್ತವದಲ್ಲಿ ಅರಿವಾಗಿ ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಮಾಡುತ್ತದೆ ಎಂದು ತಿಳಿದು ಭಾರೀ ನೋವಾಗಿತ್ತು.
ಮೌಮರ್ ಗಡಾಫಿ ಮತ್ತು ಸದ್ದಾಂ ಹುಸೇನ್ ಎಂಬಿಬ್ಬರು ನಮ್ಮ ಕಾಲದ ನಿರಂಕುಶವಲ್ಲದ ನಿರಂಕುಶ ಆಡಳಿತಗಾರರಾಗಿದ್ದರೂ ಸದಾ ತಂತಮ್ಮ ದೇಶದ ಏಳ್ಗೆಗಾಗಿ ದುಡಿದವರು. ಸದ್ದಾಂ ಹುಸೆನ್ ಇರಾಕ್ನ ಅಧ್ಯಕ್ಷರಾಗಿದ್ದರೆ ಗಡಾಫಿ ಲಿಬಿಯಾದ ಅನಧಿಕೃತ ಆಡಳಿತಗಾರನಾಗಿದ್ದನು. ಇಬ್ಬರೂ ತಮ್ಮ ಸರ್ಕಾರಗಳು ಮತ್ತು ಮಿಲಿಟರಿಯ ಮೇಲೆ ಕಟ್ಟುನಿಟ್ಟಾದ ನಿಯಂತ್ರಣದ ಮೂಲಕ ಅಧಿಕಾರವನ್ನು ಕ್ರೋಢೀಕರಿಸುವ ಮೂಲಕ ಸರ್ವಾಧಿಕಾರಿ ನಾಯಕರಾಗಿ ಆಳ್ವಿಕೆ ನಡೆಸಿದರು. ಆದರೆ ವಾಸ್ತವದಲ್ಲಿ ಇಬ್ಬರೂ ಸಮಾಜವಾದಿಗಳಾಗಿದ್ದರು. ಜೊತೆಗೆ ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು. ಇಬ್ಬರೂ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಲ್ ಗಡಾಫಿ 1969 ರಲ್ಲಿ ಆಗಿನ ರಾಜ ಇದ್ರಿಸ್ ಅನ್ನು ರಕ್ತರಹಿತ ಕ್ರಾಂತಿಯ ಮೂಲಕ ಪದಚ್ಯುತಗೊಳಿಸಿ ದೇಶದ ಆಳ್ವಿಕೆಯನ್ನು ವಹಿಸಿಕೊಂಡಾಗ ಅವನು ಸೈನ್ಯದಲ್ಲಿ ಕಿರಿಯ ಅಧಿಕಾರಿಯಾಗಿದ್ದನು. ಎಂಟು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರ 1977 ರಿಂದ ರಾಷ್ಟ್ರವನ್ನು ಯಾವುದೇ ಹುದ್ದೆಯಿಲ್ಲದೆ ನಿಯಂತ್ರಿಸುತ್ತಿದ್ದನು. ಅವನು ಲಿಬಿಯಾ ದೇಶವನ್ನು 42 ವರ್ಷಗಳ ಕಾಲ ಸಮರ್ಥವಾಗಿ ಆಳಿ ಇಡೀ ಆಫ್ರಿಕಾ ಖಂಡದಲ್ಲಿ ಮುಂಚೂಣಿಯಲ್ಲಿಟ್ಟಿದ್ದನು. ಲಿಬಿಯಾದಲ್ಲಿ ದೊರೆತ ತೈಲವನ್ನು ತನ್ನ ರಾಷ್ಟ್ರದ ಏಳಿಗೆಗಾಗಿ ಬಳಸಿದನು.
ಆದರೆ ಸದ್ದಾಂ ಹುಸೇನ್ ಮಿಲಿಟರಿ ಮತ್ತು ಪಕ್ಷದ ರಚನೆಗಳ ಮೇಲೆ ಹೆಚ್ಚು ಅವಲಂಬಿಸಿದ್ದ ಬಾತ್ ಪಾರ್ಟಿಯಲ್ಲಿನ ಪಾತ್ರದ ಮೂಲಕ ಅಧಿಕಾರಕ್ಕೆ ಬಂದನು. ಅವನು ಕೂಡಾ ತೈಲದಿಂದ ಬಂದ ಲಾಭವನ್ನು ಜನರ ಉದ್ದಾರಕ್ಕಾಗಿ ಬಳಸಿಕೊಂಡನು. ಇಬ್ಬರೂ ನಾಯಕರು ಬಲವಾದ ವ್ಯಕ್ತಿತ್ವ ಆರಾಧನೆಗಳನ್ನು ಬೆಳೆಸಿದರು, ತಮ್ಮ ರಾಷ್ಟ್ರಗಳಿಗೆ ತಮ್ಮನ್ನು ತಾವು ಅನಿವಾರ್ಯವೆಂದು ಬಿಂಬಿಸಿದರು. ಅವರ ಚಿತ್ರಗಳು ಮತ್ತು ಭಾಷಣಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು ಮತ್ತು ಪ್ರಸಾರ ಮಾಡಲಾಯಿತು .ಇಬ್ಬರೂ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ, ನಿರ್ದಿಷ್ಟವಾಗಿ ಅಮೆರಿಕಾದ ತೀವ್ರ ಟೀಕಾಕಾರರಾಗಿದ್ದರು. ಅವರು ಆಗಾಗ್ಗೆ ತಮ್ಮನ್ನು ಅರಬ್ ರಾಷ್ಟ್ರೀಯತೆಯನ್ನು ಕಾಪಾಡಿಕೊಳ್ಳುವ ಮತ್ತು ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ಬಂದ ನಾಯಕರೆಂದು ಬಿಂಬಿಸಿಕೊಂಡರು.
ಇಬ್ಬರೂ ಆಕ್ರಮಣಕಾರಿ ವಿದೇಶಿ ನೀತಿಗಳಲ್ಲಿ ತೊಡಗಿದ್ದರು. ಗಡಾಫಿ 1965 ರಲ್ಲಿ ಚಾದ್ನಲ್ಲಿ ಅಲ್ಲಿಯ ಚಕ್ರವರ್ತಿಯ ವಿರುದ್ಧ ಅಲ್ಲಿನ ಜನ ದಂಗೆ ಎದ್ದಾಗ ಲಿಬಿಯಾದ ಮೊದಲ ಅರಸ ಇದ್ರಿಸ್ ಬಂಡುಕೊರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವದರ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಚಕ್ರವರ್ತಿಯ ಸಹಾಯಕ್ಕೆ ಫ್ರಾನ್ಸ್ ನಿಲ್ಲುತ್ತದೆ. ಈ ತಿಕ್ಕಾಟ ನಾಲ್ಕು ವರ್ಷಗಳವೆರೆಗೆ ನಡೆಯುತ್ತಲೇ ಇರುತ್ತದೆ. ಇತ್ತ ಲಿಬಿಯಾದಲ್ಲಿ 1969 ರಲ್ಲಿ ಇದ್ರಿಸ್ನನ್ನು ಕಿತ್ತೆಸೆದು ಮೌಮರ್ ಗಡಾಫಿ ಅಧಿಕಾರಕ್ಕೆ ಬರುತ್ತಾನೆ. ಬಂದವನೇ ಚಾದ್ನ ಉತ್ತರ ಭಾಗವನ್ನು ರಷಿಯಾದ ಸಹಾಯದಿಂದ ಆಕ್ರಮಿಸಿಕೊಂಡು ಅಲ್ಲಿ ಲಿಬಿಯಾದ ಮಿಲ್ಟ್ರಿ ಬೇಸ್ನ್ನು ಸ್ಥಾಪಿಸುತ್ತಾನೆ. ಇದಲ್ಲದೆ ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹೋಗುತ್ತಾನೆ. ಅದೇ ರೀತಿ ಸದ್ದಾಂ 1980 ರಲ್ಲಿ ಇರಾನ್ ಮೇಲೆ ಆಕ್ರಮಣ ಮಾಡುವದರ ಮೂಲಕ ಇರಾನ್-ಇರಾಕ್ ಯುದ್ಧಕ್ಕೆ ಕಾರಣನಾಗುತ್ತಾನೆ ಮತ್ತು ನಂತರ 1990 ರಲ್ಲಿ ಕುವೈತ್ ಅನ್ನು ಆಕ್ರಮಿಸಿಕೊಳ್ಳುತ್ತಾನೆ. ಇಬ್ಬರೂ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದರು. ಯಹೂದಿಗಳ ಹುಟ್ಟು ವೈರಿಗಳಾದ ಪ್ಯಾಲೇಸ್ತೇನಿಯನ್ನರಿಗೆ ಇಬ್ಬರೂ ಧನಸಹಾಯ ಮಾಡುವದರ ಮೂಲಕ ಅವರ ಹೋರಾಟವನ್ನು ಬೆಂಬಲಿಸುತ್ತಾರೆ. ಎರಡು ಮೂರು ಬಾರಿ ಸ್ವತಃ ಸದ್ದಾಂ ಹುಸೇನ್ ಮುಸ್ಲಿಂರ ಕಡುವೈರಿಗಳಾದ ಇಸ್ರೇಲಿಗರ ಮೇಲೆ ರಾಕೇಟ್ ಗಳನ್ನು ಕಳಿಸಿ ಸೇಡು ತೀರಿಸಿಕೊಳ್ಳಲು ನೋಡುತ್ತಾನೆ. ಆ ಮೂಲಕ ಪಶ್ಚಿಮದವರ ಕೆಂಗಣ್ಣಿಗೆ ಗುರಿಯಾಗುತ್ತಾನೆ.
ಇಬ್ಬರೂ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ಇಬ್ಬರೂ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಅನೇಕ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿನ ಮಹಿಳೆಯರಿಗಿಂತ ಇಲ್ಲಿನ ಮಹಿಳೆಯರು ಹೆಚ್ಚು ಹಕ್ಕುಗಳನ್ನು ಅನುಭವಿಸಿದರು. ಇಬ್ಬರೂ ತೈಲದಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದರು. ಇಬ್ಬರೂ ಜಾತ್ಯಾತೀತರಾಗಿದ್ದರು. ಇಬ್ಬರೂ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಮತ್ತು ವಸತಿಗೆ ಒತ್ತು ಕೊಟ್ಟವರು. ಇಬ್ಬರ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗ ಸಾಮಾನ್ಯವಾಗಿದ್ದರೂ ಅವರು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಜನಪ್ರಿಯ ಬೆಂಬಲವನ್ನು ಕ್ರೋಢೀಕರಿಸಲು ಸಂಪತ್ತನ್ನು ಮರುಹಂಚಿಕೆ ಮಾಡಿದರು. ಇಬ್ಬರೂ ಮಹತ್ವಾಕಾಂಕ್ಷೆಯ ಶಸ್ತ್ರಾಸ್ತ್ರ ಕಾರ್ಯಕ್ರಮಗಳನ್ನು ಅನುಸರಿಸಿದರು, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು (WMDs) ಅಭಿವೃದ್ಧಿಪಡಿಸುವ ಪ್ರಯತ್ನಗಳು ಸೇರಿದಂತೆ. ಸದ್ದಾಂ ಡಬ್ಲ್ಯುಎಂಡಿಗಳನ್ನು ಹೊಂದಿದ್ದನೆಂದು ಆರೋಪಿಸಲಾಯಿತು, ಇದು 2003 ರ ಇರಾಕ್ ಯುದ್ಧಕ್ಕೆ ನೆಪವಾಯಿತು. ಗಡಾಫಿ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಹೊಂದಿದ್ದನು ಆದರೆ 2003 ರಲ್ಲಿ ಅಂತರರಾಷ್ಟ್ರೀಯ ಒತ್ತಡದಿಂದಾಗಿ ಅದನ್ನು ಕಿತ್ತುಹಾಕಿದನು.
ಇಬ್ಬರೂ ತಮ್ಮ ಆಡಳಿತದಲ್ಲಿ ಧರ್ಮನಿರಪೇಕ್ಷತೆಯನ್ನು ತರಲು ಪ್ರಯತ್ನಿಸಿದರು. ಇಬ್ಬರೂ ಆಡಳಿತದಲ್ಲಿ ಧರ್ಮದ ಪ್ರಭಾವವನ್ನು ಕಡಿಮೆ ಮಾಡಲು ಕಾನೂನು ಮತ್ತು ನೀತಿಗಳನ್ನು ಉತ್ತೇಜಿಸಿದರು. ಇದು ಪ್ರಾದೇಶಿಕವಾಗಿ ಇಸ್ಲಾಮಿಕ್ ಆಡಳಿತಗಳಿಗೆ ವಿರುದ್ಧವಾಗಿತ್ತು ಹಾಗೂ ಅನೇಕ ಮೂಲಭೂತವಾದಿಗನ್ನು ರೊಚ್ಚಿಗೆಬ್ಬಿಸಿತು. ಇಬ್ಬರೂ ಕೃಷಿಗೆ ಒತ್ತು ನೀಡಿ ಭೂಮಿಯನ್ನು ಪುನರ್ವಿತರಣೆಗೆ ಮತ್ತು ರೈತರಿಗೆ ಅನುದಾನ ನೀಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡರು. ಇದು ನೀರಾವರಿ ವ್ಯವಸ್ಥೆಗಳು ಮತ್ತು ಕೃಷಿ ಉಪಕರಣಗಳನ್ನು ಒದಗಿಸಲು ಸಹಾಯ ಮಾಡಿತು. ಗಡಾಫಿ ಲಿಬಿಯಾದಲ್ಲಿ ಮಾನವ ನಿರ್ಮಿತ ನದಿಯೊಂದನ್ನು ನಿರ್ಮಿಸಿ ಅಂಥ ಮರಭೂಮಿಯಲ್ಲಿಯೂ ಸಹ ರೈತರಿಗೆ ನೀರಾವರಿ ಯೋಜನೆಯೊಂದನ್ನು ಕಲ್ಪಿಸಿಕೊಟ್ಟನು. ಇಬ್ಬರೂ ಪ್ಯಾಲೆಸ್ತೇನಿಯನ್ನರ ಪರವಾಗಿದ್ದರು ಮತ್ತು ಅವರಿಗೆ ಮೇಲಿಂದ ಮೇಲೆ ಧನ ಸಹಾಯವನ್ನು ಮಾಡುತ್ತಿದ್ದರು. ಈ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸಿದ್ದಕ್ಕಾಗಿ ಇಬ್ಬರೂ ದುರಂತ ಅಂತ್ಯವನ್ನು ಕಂಡರು. ಯುಎಸ್ ಇರಾಕ್ ಮೇಲೆ ಆಕ್ರಮಣ ಮಾಡಿ ಸದ್ದಾಂನನ್ನು ಜೀವಂತವಾಗಿ ಸೆರೆಹಿಡಿದು ನಂತರ ಅವನನ್ನು ಗಲ್ಲಿಗೇರಿಸಿದರೆ ಅದೇ ಯುಎಸ್ ಗಡಾಫಿಯನ್ನು ಅವನ ಸ್ವಂತ ಜನರಿಂದಲೇ ಅವನನ್ನು ಕ್ರೂರವಾಗಿ ಕೊಲ್ಲಿಸಿ ಅವನ ಅಂತ್ಯಕ್ಕೆ ಸಮಾಪ್ತಿ ಹಾಡಿತು.
ಗಡಾಫಿ ವಿಮೋಚನಾ ಚಳವಳಿಗಳನ್ನು ಬೆಂಬಲಿಸುತ್ತಿದ್ದನು. ಪ್ಯಾಲೈಸ್ತೇನಾ, ಲೈಬೀರಿಯಾ, ಸಿಯೆರಾ ಮತ್ತು ಲಿಯೋನ್ನಂತಹ ದೇಶಗಳಲ್ಲಿ ಬಂಡಾಯ ಚಳುವಳಿಗಳನ್ನು ಪ್ರಾಯೋಜಿಸಿದ ಕೀರ್ತಿಯೂ ಅವನಿಗೆ ಸಲ್ಲುತ್ತದೆ. 80 ರ ದಶಕದಲ್ಲಿ ರೇಗನ್ ಯುಗದಲ್ಲಿ ಲಿಬಿಯಾ ಮತ್ತು ಪಶ್ಚಿಮದ ನಡುವಿನ ಉದ್ವಿಗ್ನತೆಯು ಅದರ ಉತ್ತುಂಗವನ್ನು ತಲುಪಿತು. 90 ರ ದಶಕದಲ್ಲಿ ಪಾನ್ ಆಮ್ ವಿಮಾನ ದುರಂತದ ಕಾರಣಕ್ಕಾಗಿ ಪಶ್ಚಿಮದಿಂದ ಲಿಬಿಯಾ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಯಿತು ಮತ್ತು ನಿಧಾನವಾಗಿ ಅವನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿತು. 2003 ರಲ್ಲಿ ಸದ್ದಾಂ ಸೆರೆಹಿಡಿಯಲ್ಪಟ್ಟಾಗ ಗಡಾಫಿ ತಮ್ಮ ದೇಶದಲ್ಲಿನ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಒಪ್ಪಿಕೊಂಡನು ಮತ್ತು ಯುಎನ್ ಇನ್ಸ್ಪೆಕ್ಟರ್ಗಳು ಬಂದು ಅವುಗಳನ್ನು ಕೆಡವಲು ಅವಕಾಶ ನೀಡುವುದಾಗಿ ವಾಗ್ದಾನ ಮಾಡಿದನು.
ಸದ್ದಾಂ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದನು ಮತ್ತು ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಸುನ್ನಿಗಳನ್ನು ಅಧಿಕಾರದ ಸ್ಥಾನದಲ್ಲಿ ಇರಿಸಿದನು. 1980-1988 ರವರೆಗೆ, ಇರಾಕ್ ಇರಾನ್ನೊಂದಿಗೆ ಯುದ್ಧದಲ್ಲಿತ್ತು. ಸದ್ದಾಂ ಕುರ್ದಿಶ್ ಮತ್ತು ಶಿಯಾ ದಂಗೆಗಳನ್ನು ನಿಗ್ರಹಿಸಬೇಕಾಯಿತು. 1990 ರಲ್ಲಿ ಕುವೈತ್ನ ಆಕ್ರಮಣದಿಂದಾಗಿ ಅವನು ಅಂತರರಾಷ್ಟ್ರೀಯ ಪ್ರಚಾರಕ್ಕೆ ಬಂದನು. ಅಮೆರಿಕಾ ನಾಯಕತ್ವದಲ್ಲಿ 1991 ರ ಗಲ್ಫ್ ಯುದ್ಧವು ಕುವೈಟ್ ಅನ್ನು ಇರಾಕ್ನಿಂದ ಮುಕ್ತಗೊಳಿಸಿತು ಆದರೆ ಇರಾಕ್ನಲ್ಲಿ ಸದ್ದಾಂ ಅಧಿಕಾರದಲ್ಲಿ ಮುಂದುವರಿದನು. ಸದ್ದಾಂ ಇರಾಕ್ನಲ್ಲಿ ಜನಪ್ರಿಯ ನಾಯಕನಾಗಿದ್ದನು. ಆದರೆ 2003 ರಲ್ಲಿ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಕಾರ್ಯಕ್ರಮದಲ್ಲಿ ಇರಾಕ್ ಭಾಗಿಯಾಗಿದೆ ಎಂದು ಶಂಕಿಸಿ US ಇರಾಕ್ ಮೇಲೆ ಆಕ್ರಮಣ ಮಾಡಿ ಅವನನ್ನು ಡಿಸೆಂಬರ್ 2003 ರಲ್ಲಿ ಸೆರೆಹಿಡಿಯಲಾಯಿತು ಮತ್ತು 148 ಶಿಯಾ ಜನರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾದನು. ಅಂತಿಮವಾಗಿ 30 ಡಿಸೆಂಬರ್ 2006 ರಂದು ಸದ್ದಾಂನನ್ನು ಅಮೆರಿಕಾ ಗಲ್ಲಿಗೇರಿಸಿತು.
ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು ಮತ್ತು ಇಬ್ಬರೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಿದ್ದರು ಹಾಗೂ ಇದೇ ಕಾರಣಕ್ಕಾಗಿ ಅವರ ವಿರೋಧವನ್ನು ಕಟ್ಟಿಕೊಂಡು ತಮ್ಮ ಪತನಕ್ಕೆ ತಾವೇ ಕಾರಣರಾದರು. ಇಬ್ಬರೂ ಮಾನವ ಹಕ್ಕು ಉಲ್ಲಂಘನೆಗಳ ಆರೋಪಕ್ಕೆ ಒಳಗಾದರು, ಇಬ್ಬರೂ ತಮ್ಮ ದೇಶಗಳ ತೈಲ ಸಂಪತ್ತನ್ನು ಬಳಸಿಕೊಂಡು ತಮ್ಮ ಆಡಳಿತವನ್ನು ಬಲಪಡಿಸಿದರು. ಗಡಾಫಿ ಲಿಬಿಯಾದ ತೈಲ ಉದ್ಯಮವನ್ನು ರಾಷ್ಟ್ರೀಕರಿಸಿದನು ಹಾಗೂ ಸದ್ದಾಮ್ ಇರಾಕ್ನ ತೈಲ ಆದಾಯವನ್ನು ಸೈನಿಕ ವಿಸ್ತರಣೆ ಮತ್ತು ದೇಶೀಯ ಯೋಜನೆಗಳಿಗೆ ಬಳಸಿದನು. ಅಮೆರಿಕಾದ ವಿಷಯದಲ್ಲಿ ಇಬ್ಬರಿಗೂ ಸೂಕ್ಷ್ಮ ತಿಳುವಳಿಕೆಯಾಗಲಿ ಡಿಪ್ಲೋಮೆಸಿಯಾಗಲಿ ಇರಲಿಲ್ಲ. ಹೀಗಾಗಿ ಈ ಇಬ್ಬರು ತಮ್ಮ ದೇಶದ ಜನರ ಕಣ್ಣಲ್ಲಿ ಮಾತ್ರ ಹೀರೋ ಆಗಿ ಮಿಕ್ಕೆಲ್ಲರ ದೃಷ್ಟಿಯಲ್ಲಿ ವಿಲನ್ ಎಂಬ ಹಣೆಪಟ್ಟಿಯನ್ನು ಹೊತ್ತು ನಿಂತರು.
ಇದೀಗ ಅವರು ಆಳಿದ್ದ ರಾಷ್ಟ್ರಗಳು ಪಾಳುಬಿದ್ದ ರಾಷ್ಟ್ರಗಳಾಗಿವೆ. ಮುರಿದುಹೋದ ನಾಡುಗಳನ್ನಾಗಿ ಪರಿವರ್ತಿಸಿವೆ. ಇರಾಕ್ ಪಂಥೀಯ ಹಿಂಸಾಚಾರಕ್ಕೆ ಇಳಿದಿದೆ ಮತ್ತು ಲಿಬಿಯಾ ರಾಜಕೀಯ ಅರಾಜಕತೆಗೆ ಒಳಗಾಗಿ ನಾಗರಿಕ ಸಂಘರ್ಷದಲ್ಲಿ ಮುಳುಗಿದೆ. ಮತ್ತೀಗ ಹೊಸದಾಗಿ ಆ ಪಟ್ಟಿಗೆ ಮೊನ್ನೆಯಷ್ಟೇ ಆಲ್ ಅಸಾದ್ ನಿಂದ ವಿಮೋಚನೆಗೊಂಡಿದೆ ಎಂದು ಹೇಳಲಾದ ಸಿರಿಯಾ ರಾಷ್ಟ್ರವೂ ಸೇರಿಕೊಂಡಿತು.
ಪಶ್ಚಿಮದ ರಾಷ್ಟ್ರಗಳು ಮಾತ್ರ ಎಂದಿನಂತೆ ತಮ್ಮ ಕಾಯಕವನ್ನು ಮುಂದುವರಿಸಿವೆ, ಅವಕ್ಕೆ ಯಾರ ಅಂಕುಶವೂ ಇಲ್ಲ...
ಅಗಲಿದ ಗೆಳೆಯನಿಗೊಂದು ನುಡಿನಮನ
ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್.ಎಚ್. ಅವರು ದೂರದ ಗುಜರಾತಿನಲ್ಲಿ ನಡೆದ ರಸ್ತೆ ಅಪಘಾತದವೊಂದರಲ್ಲಿ ತೀರಿಕೊಂಡರು ಎಂಬ ಸುದ್ದಿ ತಿಳಿದು ಆಘಾತವಾಗಿದೆ. ಈತ ಮಂಡ್ಯದ ಪಿ. ಇ. ಎಸ್. ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದ. ಸಾಹಿತ್ಯದ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದ. ಮುಂದೆ ಎಮ್.ಎ. ಇಂಗ್ಲೀಷ್ ಮುಗಿಸಿದ ಮೇಲೆ ಆತ ಅಬಕಾರಿ ಇಲಾಖೆಯಲ್ಲಿ ಬಹಳ ಬೇಗನೆ ಉದ್ಯೋಗಕ್ಕೆ ಸೇರಿದ.
ನಾನು ಕೆಲಸ ಅರಸಿಕೊಂಡು ಲಿಬಿಯಾಕ್ಕೆ ಹೋದೆ. ಆಗಿನ್ನೂ ವಾಟ್ಸಾಪ್ ಇರಲಿಲ್ಲವಾದ್ದರಿಂದ ಸಂಪರ್ಕ ತಪ್ಪಿಹೋಯಿತು. ಫೇಸ್ಬುಕ್ ಬಂದ ಮೇಲೆ ಮತ್ತೆ ಸಂಪರ್ಕ ಸಿಕ್ಕಿತು. ೨೦೧೫ ರಲ್ಲಿ ನಾನು ಲಿಬಿಯಾದಿಂದ ವಾಪಾಸಾದ ಮೇಲೆ ಒಂದು ಸಾರಿ ಸಿಕ್ಕಿದ್ದ. ಮಿಕ್ಕ ಸಮಯವೆಲ್ಲಾ ಫೋನಿನಲ್ಲಿಯೇ ಮಾತನಾಡುತ್ತಿದ್ದೆವು. ಅಬಕಾರಿ ಇಲಾಖೆಯಲ್ಲಿ ಸರಿ ಬರಲಿಲ್ಲವೆಂದು ಕೆಲಸಕ್ಕೆ ರಾಜಿನಾಮೆಯನ್ನಿತ್ತು ರವಿ ಕೃಷ್ಣಾರೆಡ್ದಿಯವರ ಕರ್ನಾಟಕ ರಾಜ್ಯ ಸಮಿತಿ ಪಕ್ಷವನ್ನು ಸೇರಿಕೊಳ್ಲುವದರ ಮೂಲಕ ರಾಜಕೀಯದಲ್ಲಿ ಸಕ್ರೀಯನಾದ. ಭ್ರಷ್ಟ ಮತದಾರರ ನಡುವೆಯೇ ಎರಡು ಮೂರು ಸಾರಿ ಚುನಾವಣೆಗೆ ನಿಂತು ಸೋತಿದ್ದ. ನನಗೆ ಮೂರ್ನಾಲ್ಕು ಸಾರಿ "ಉದಯ್, ನೀನು ನಮ್ಮ ಪಕ್ಷವನ್ನು ಸೇರಿಕೊ. ನಿನ್ನಂತವರು ರಾಜಕೀಯಕ್ಕೆ ಬಂದರೆ ಅಗಾಧ ಬದಲಾವಣೆಯನ್ನು ತರಬಹುದು." ಎಂದು ಒತ್ತಾಯಿಸುತ್ತಿದ್ದ. ನಾನು "ರಾಜಕೀಯ ನನ್ನಂತವರಿಗಲ್ಲ ಬಿಡು ಮಾರಾಯ, ಸುಮ್ಮನಿರು" ಎಂದು ನಕ್ಕು ಸುಮ್ಮನಾಗುತ್ತಿದ್ದೆ. ರವಿ ಕೃಷ್ಣಾರೆಡ್ಡಿಯವರಂತೆ ರಾಜಕೀಯದಲ್ಲಿ ಅಗಾಧ ಬದಲಾವಣೆಯನ್ನು ತರಬೇಕೆಂಬ ಕನಸನ್ನು ಹೊತ್ತಿದ್ದ. "ಇಂಥ ಭ್ರಷ್ಟ ವ್ಯವಸ್ಥೆಯಲ್ಲಿ ನಾವೆಲ್ಲಾ ಆರಿಸಿ ಬರಲು ಸಾಧ್ಯವೇ?" ಎಂದು ಕೇಳಿದಾಗ "ಆರಿಸಿ ಬರದಿದ್ದರೂ ಪರ್ವಾಗಿಲ್ಲ, ಮುಂದಿನ ದಿನಗಳಲ್ಲಿ ಜನರಲ್ಲಿ ಒಂದು ಅವೇರ್ನಸ್ ಬರುತ್ತೆ. ಆ ಮೂಲಕ ಕ್ರಮೇಣ ಭ್ರಷ್ಟಾಚಾರವನ್ನು ಮಟ್ಟ ಹಾಕಬಹುದು ಎಂದು ಹೇಳುತವಾಗ ನನಗೆ ಶುದ್ಧ ಹುಂಬನಂತೆ ಕಾಣುತ್ತಿದ್ದ. ಮರುಕ್ಷಣವೇ ಅವನ ಆಶಾವಾದ ನನ್ನನ್ನು ಬೆರಗುಗೊಳಿಸುತ್ತಿತ್ತು. ನನಗೆ ಒಂದೊಂದು ಸಾರಿ ಈತ ಯಾಕಿಷ್ಟೊಂದು impractical ಆಗಿದ್ದಾನೆ ಅಂತಾ ಅನಿಸಿದ್ದರೂ ಅವನ ಉತ್ಸಾಹಕ್ಕೆ ತಣ್ಣೀರೇರಚಲು ಮನಸ್ಸಾಗಿರಲಿಲ್ಲ.
ಅವನ ಕೋರಿಕೆಯ ಮೇರೆಗೆ ಪಕ್ಷಕ್ಕೆ ಸಣ್ಣ ದೇಣಿಗೆಯನ್ನೂ ನೀಡಿದ್ದೆ. ಪಕ್ಷಕ್ಕೆ ನಿಷ್ಟನಾಗಿ ಕೆಲಸ ಮಾಡುತ್ತಿದ್ದ. ರವಿ ಕೃಷ್ನಾರೆಡಿಯವರ ತರ ಹೊಸತನ್ನು ತರಬೇಕೆಂಬ ಛಲವನ್ನು ಹೊತ್ತಿದ್ದ.
ಈಗ ನೋಡಿದರೆ ಅವನು ಸತ್ತ ಸುದ್ದಿ ಬಂದು ನಮ್ಮಲ್ಲೆರನ್ನು ದಿಗ್ಭ್ರಾಂತರನ್ನಾಗಿಸಿದೆ. ಹೋಗಿ ಬಾ ಗೆಳೆಯ. ನಿನ್ನ ಕನಸು ನಿನ್ನ ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಕರ್ತರ ಮೂಲಕವಾದರೂ ಈಡೇರಲಿ.
Can one write a love poem in middle age?
Can one write a poem in middle age?
Ask me,
I would say yes
for love happens only in middle age
Love happens,
When the heart longs
For separation.
Love means
Distance,
Silence,
Solitude,
Freedom unbound by ties.
Love happens
When the lover has no name.
And all this becomes possible,
Only in middle age
When madness loses its vigour!
Chetana Thirthahalli
ನಡು ವಯಸ್ಸಿನಲ್ಲಿ ಪ್ರೇಮಪದ್ಯ ಬರೆಯಬಹುದೇ?
ಕೇಳಿ ನನ್ನನ್ನು,
ಪ್ರೇಮ ಘಟಿಸುವುದೇ ನಡುವಯಸ್ಸಿನಲ್ಲಿ.
ಪ್ರೇಮ ಘಟಿಸುವುದು
ಮಾತು ಸಾಕಾದಾಗ,
ದೇಹ ದಣಿದಾಗ,
ಸ್ಪರ್ಶಕ್ಕೆ ಮೈ ಮರಗಟ್ಟಿದಾಗ,
ಆಯ್ದ ಪೋಣಿಸಿದ ಪದಗಳ ಹಾರ
ಹೇವರಿಕೆ ತರಿಸುವಾಗ;
ಪ್ರೇಮ ಘಟಿಸುವುದು,
ವಿರಹಕ್ಕೆ ಮನಸ್ಸು
ಹಾತೊರೆಯುವಾಗ.
ಪ್ರೇಮವೆಂದರೆ
ದೂರ,
ಮೌನ,
ಏಕಾಂತ,
ಬಂಧ ಬೆಸೆಯದ ಸ್ವಾತಂತ್ರ್ಯ.
ಪ್ರೇಮ ಘಟಿಸುವುದು
ಪ್ರೇಮಿಗೆ ಹೆಸರಿಲ್ಲವಾದಾಗ.
ಮತ್ತು ಇವೆಲ್ಲ ಸಾಧ್ಯವಾಗೋದು,
ಹುಚ್ಚುತನಕ್ಕೆ ಪುರುಸೊತ್ತಾಗದ
ನಡು ವಯಸ್ಸಿನಲ್ಲೇ!
ಚೇತನಾ ತೀರ್ಥಹಳ್ಳಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ತಳಿ1 ವಾರದ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …2 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ8 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee4 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩8 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.