Demo image Demo image Demo image Demo image Demo image Demo image Demo image Demo image

In my love poems

  • ಮಂಗಳವಾರ, ಅಕ್ಟೋಬರ್ 17, 2023
  • ಬಿಸಿಲ ಹನಿ
  • ನನ್ನ ಪ್ರೇಮಪದ್ಯಗಳಲ್ಲಿ ಯಾವ ಗಂಡಸನ್ನೂ ಹುಡುಕಬೇಡಿ ನನಗೆ ನನ್ನನ್ನು ಪ್ರೀತಿಸಿಕೊಳ್ಳಲು ಗೊತ್ತಿದೆ ನನ್ನ ಕಣ್ಣ ಹೊಳಪಿನಲ್ಲಿ ಯಾವ ಗಂಡಸಿನ ಚಹರೆಯನ್ನೂ ಹುಡುಕಬೇಡಿ ಕತ್ತಲು ಕುಡಿಯುವ ನಾನು ಬೆಳಕಿನ ಕಿಡಿ ಹೊತ್ತಿರುವೆ ನನ್ನ ಬ್ರಾಂಡೆಡ್ ಬಟ್ಟೆಗಳಿಗೆ ನನ್ನ ಬೆವರಿನ ರಸೀತಿ ಇದೆ ಬಿಯರ್ ಗ್ಲಾಸಿನ ಕೆಳಗೆ ನಾನೇ ತೆತ್ತ ಬಿಲ್ ಇದೆ ಊರೂರು ಸುತ್ತಿದ ಬೀದಿಗಳಲ್ಲಿ ಜೊತೆ ನಡೆದ ಹೆಜ್ಜೆಗಳಿವೆ; ಆ ಹೆಜ್ಜೆಗಳಲ್ಲಿ ಗಂಡಸಿನ ಗುರುತು ಕೆದಕಬೇಡಿ, ಕೆದಕಿದಷ್ಟೂ ನಿಮ್ಮಾಳದ ಸುಪ್ತ ವಾಂಛೆಗಳೇ ಎದ್ದೆದ್ದು ಬರುವವು ಅದುಮಿಟ್ಟ ಬಯಕೆ, ಕೈಗೆಟುಕದ ಜಿದ್ದು ನಿಮ್ಮಷ್ಟೂ ಹೊಟ್ಟೆಕೆಳಗಿನ ನೋವು ಗುಡ್ಡೆಯಾಗುವವು. ಒಂಟಿಹೆಣ್ಣೆಂಬ ಕಣ್ಣಲ್ಲ ನಿಮಗೆ, ಗೊತ್ತಿದೆ; ಮಾತಿನ ಹೆಣ್ಣೆಂಬ ಕಿನಿಸು. ನನ್ನ ಮಾತುಗಳಲ್ಲಿ ಸಂಚು ಹುಡುಕಬೇಡಿ, ಬೆತ್ತಲೆಗಣ್ಣ ಮುಂದೆ ಕನ್ನಡಿ ಇಟ್ಟುಕೊಳ್ಳಿ; ಸಾಕು. ~ ಚೇತನಾ ತೀರ್ಥಹಳ್ಳಿ 2021 In my love poems Don't look for any man I know how to love myself In the twinkle of my eye Don't look for any man's face I who drink darkness carry a spark of light For my branded clothes I have the receipt of my own sweat Under every beer glass, there is a bill that I paid myself. There are some footsteps that walked with me in the streets around the town; Don't search for a man's mark in those footsteps, The more you dig, the more your hidden desires will spring up An unattainable desire and an unreachable revenge Will always haunt you as piles of pain in the lower abdomen. I know Your botheration is not about I am living a single life But it’s about I talk too much Do not look for intrigue in my words, Instead, keep a mirror in front of your naked eyes; that’s enough. From Kannada: Chetana Teerthahalli To English: Uday Itagi

    Today's Top News Bulletins

  • ಗುರುವಾರ, ಸೆಪ್ಟೆಂಬರ್ 07, 2023
  • ಬಿಸಿಲ ಹನಿ

  • "Having raped a woman
    The lechers got her burnt"
    He read this bulletin 
    putting a cigarette on his lips and told his wife-
    "Get me the matchbox
    from my shirt pocket!!”


    "Lovers' naked parade
    is the moral responsibility of police"
    He read this bulletin touching his shoulder
    and told his daughter-
    “Get me my shawl
    and put it on my shoulder
    Then only I feel more courageous."


    “We also have the right to live”
    Tribals protested 
    Having read this line he rubbed his feet against the ground and told his son, 
    "Get me the D.D.T.
    The ants have come in too!”


    "We also have a right to education”
    A Dalit Student made a speech
    He stopped reading halfway, got excited, went running, and said to the housemaid-
    "While cleaning up the library
    Just wipe the floor
    But don't touch the books at all! "

    From Kannada: Wilson Kateel
    To English: Uday Itagi

    It is just a visual poetry of Shakespeare's as well as his wife Anna Hathway's life.

  • ಮಂಗಳವಾರ, ಆಗಸ್ಟ್ 22, 2023
  • ಬಿಸಿಲ ಹನಿ
  • Here is my teacher friend N.Sahitya's review on my play Shakespearana Srimathi.
    Being literature students we have read many of Shakespeare's works and have truly admired him and his work of art. There is always a curiosity to know the other side of the great personalities of everyone in general. Your write-up has showcased Mrs. Shakespeare's perspective towards her husband. With minimum sources, your write-up tries to cover the major feelings of Mrs. Shakespeare which is truly commendable. I understand that it's not that easy to portray the character with such flawlessness. This shows how interested you are and how much pain you might have taken to shape it so beautifully. The ease in the language and the innovative Idea to see the other side of Mr. The Great Shakespeare has added a creative touch to your write-up. Each and every line of yours got wings through Madam Lakshmi's acting. 🙏🌷🙏 Her flawless acting and the grace she portrayed while enacting were very promising and entertaining. The set, sound, background, backdrop, direction, and lighting was perfect and in harmony with the acting. It was a spellbound performance which has surely left all of us to be in the world of Mrs. Shakespeare. Every line lingers in the minds of viewers of the pain and suffering which Mrs. Shakespeare had passed through. Take a bow to the lady who happens to be the protagonist of the play. 🔅🔅🔅 N. Sahitya Lecturer, Dept of English, Sir M.V. P.U.College, Davangere.

    I was drawing pictures

  • ಸೋಮವಾರ, ಜುಲೈ 17, 2023
  • ಬಿಸಿಲ ಹನಿ
  • ಚಿತ್ರ ಬಿಡಿಸುತ್ತಿದ್ದೆ, ‘ಹಾದಿ ಬೀದಿ ಚಿತ್ರ ಬಿಡಿಸುತ್ತೀಯ, ನಮ್ಮದು ಮಾತ್ರ ಬಿಡಿಸಿಲ್ಲ.’ ಕೆಲವರು ದೂರಿದರು. ಅವರು ಕೊಟ್ಟ ಪಟ್ಟಿ, ಪರಿಕರವಿಟ್ಟುಕೊಂಡು ಹೊರಟೆ ಅವರೆದುರು ಕುಳಿತು ಸಿದ್ದಪಡಿಸಿದೆ. ಚಿತ್ರ ನೋಡಿದ ಅವರು ಬೆಚ್ಚಿದರು ಬೊಬ್ಬೆ ಹೊಡೆದರು, ಭೀಕರವಾಗಿದೆಯೆಂದು ಬೈದರು ಬೇಕಂತಲೇ ವಿಕೃತವಾಗಿ ಚಿತ್ರಿಸಿದ್ದೀಯ ಅಂತೆಲ್ಲಾ ನಿಂದಿಸಿದರು ನಾನು ಅವರೆದುರು ಕನ್ನಡಿಯನ್ನಷ್ಟೇ ಇಟ್ಟಿದ್ದೆ. -ಚೇತನಾ ತೀರ್ಥಹಳ್ಳಿ I was sketching images ‘You draw pictures of all the paths and lanes, Only ours is missing.' Some complained. I took the tools and list they provided And settled down their midst. They felt shocked when they saw their portraits, And yelled claiming that it was terrible ‘You have intentionally portrayed it in an abnormal way’ They all fell foul on me. Amidst them I had just placed a mirror That’s it! Kannada Original: Chethana Teerthahalli English Translation: Uday Itagi

    Some questions

  • ಭಾನುವಾರ, ಮೇ 07, 2023
  • ಬಿಸಿಲ ಹನಿ
  • ಕೆಲವು ಪ್ರಶ್ನೆಗಳು Some questions ಈ ಪವಿತ್ರ ಭಾರತದಲ್ಲಿ ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ ಕ್ರೈಸ್ತರಿದ್ದಾರೆ ಸಿಖ್ಖರಿದ್ದಾರೆ ಜೈನರಿದ್ದಾರೆ ಬೌದ್ಧರಿದ್ದಾರೆ ಬ್ರಾಹ್ಮಣರಿದ್ದಾರೆ ಲಿಂಗಾಯತರಿದ್ದಾರೆ ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ ಆದ್ರೆ ನಾನು ಹುಡುಕುತ್ತಿರುವುದು ಮನುಷ್ಯರನ್ನು ದಯಮಾಡಿ ಹೇಳಿ ಅವರೆಲ್ಲಿದ್ದಾರೆ? ಈಗ ದೇಶದ ಉದ್ದಗಲಕ್ಕೂ ಅಸಂಖ್ಯಾತ ಗುಡಿಗಳಿದ್ದಾವೆ ಮಸೀದಿಗಳಿದ್ದಾವೆ ಮಂದಿರಗಳಿದ್ದಾವೆ ಚರ್ಚುಗಳಿದ್ದಾವೆ ಮಠಗಳಿದ್ದಾವೆ ಆದರೆ ನಾನು ಹುಡುಕುತ್ತಿರುವುದು ಅವುಗಳೊಳಗೆ ಇರಬೇಕಾದ ದೇವರನ್ನು ದಯಮಾಡಿ ಹೇಳಿ ಅವನೆಲ್ಲಿದ್ದಾನೆ? ಈ ದೇಶದ ಹಿಂದೂಗಳಿಗೆ ಭಗವದ್ಗೀತೆ ವೇದ ಶಾಸ್ತ್ರ ಪುರಾಣ ಆಗಮಗಳೇ ಮುಸ್ಲಿಮರಿಗೆ ಕುರಾನ್ ಇದೆ ಕ್ರೈಸ್ತರಿಗೆ ಬೈಬಲ್ ಲಿದೆ ಸಿಖ್ಖರಿಗೆ ಗ್ರಂಥ್ ಸಾಹೇಬ್ ಲಿಂಗಾಯತರಿಗೆ ವಚನಗಳಿವೆ ಆದ್ರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ ದಯಮಾಡಿ ಹೇಳಿ ಅದೆಲ್ಲಿದೆ? -ಡಾ.ಜಿ.ಎಸ್. ಶಿವರುದ್ರಪ್ಪ In this holy India There are Hindus and Muslims There are Christians and Sikhs There are Jains and Buddhists There are Brahmins and Lingayaths There are Vokkaligas and untouchables But what I'm looking for is humans Please tell me where are they all? Now across the country There are innumerable borders There are mosques and temples There are Churches and Matths But I'm looking for the God Who is supposed to be inside all of them Please tell me where is he? In this country For the Hindus There is Bhagavad Gita And there are Vedas, Shastras, Puranas and Agamas Muslims have the Koran Christians have the Bible Sikhs have the Grantha Saheb Lingayats have Vachanas But what I'm looking for is love Please tell me where that is. From Kannada: Dr. G.S. Shivarudrappa To English: Uday Itagi

    My play is now in English

  • ಸೋಮವಾರ, ಏಪ್ರಿಲ್ 24, 2023
  • ಬಿಸಿಲ ಹನಿ
  • In prison cells...

  • ಭಾನುವಾರ, ಏಪ್ರಿಲ್ 02, 2023
  • ಬಿಸಿಲ ಹನಿ
  • ಜೈಲಿನ ಕೋಣೆಗಳಲ್ಲಿ... ** ಕೋಣೆ ಒ೦ದು : ಈ ಕೋಣೆಯೊಳಗೆ ಒಂದು ಪುಸ್ತಕವಿತ್ತು. ಕೇಳಿದೆ ನಾನು - "ಏನಿದು ಕೋಣೆಯೊಳಗೆ ಪುಸ್ತಕ? ಯಾರೋ ಕೈದಿ ಓದಿ ಮರೆತು ಹೋಗಿರಬೇಕು..” ಜೈಲಧಿಕಾರಿ ಉತ್ತರಿಸಿದ - "ಇಲ್ಲ.. ಈ ಪುಸ್ತಕ ಬರೆದ ಮಹಾನ್ ಸಾಹಿತಿಗೆ ಆಯ್ಕೆ ಕೊಡಲಾಗಿತ್ತು - ’ಒಂದೋ ನೀನು ಜೈಲಲ್ಲಿರಬೇಕು ಅಥವಾ ನೀನು ಬರೆದ ಈ ಪುಸ್ತಕ’ ಸಾಹಿತಿ ಪುಸ್ತಕವನ್ನು ನಮಗೆ ಒಪ್ಪಿಸಿದ ನಿಮಗೂ ಗೊತ್ತಲ್ವಾ - ಸಾಹಿತಿಗಳು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ” ** ಕೋಣೆ ಎರಡು : ಈ ಕೋಣೆಯೊಳಗೊಂದು ಪಂಜರ ಅದರೊಳಗೊಂದು ಕಾಗೆ! ಕೇಳಿದೆ ನಾನು - “ಅರೆ ಈ ಕಾಗೆಯನ್ಯಾಕೆ ಬಂಧಿಸಿದ್ದೀರಿ? ಯಾರನ್ನಾದರೂ ಕುಕ್ಕಿ ಕುಕ್ಕಿ ಕೊಲೆ ಮಾಡಿತೆ?” ಜೈಲಧಿಕಾರಿ ಉತ್ತರಿಸಿದ - “ಇಲ್ಲ, ನಮ್ಮ ನಾಯಕ ಸುಖದ ನಶೆಯಲ್ಲಿ ತೇಲುತ್ತಿದ್ದಾಗ ತನ್ನ ಒಡೆದು ಹೋದ ಮೊಟ್ಟೆಗಾಗಿ ಈ ಕಾಗೆ ಕರ್ಕಶವಾಗಿ ಕೂಗುತ್ತಿತ್ತು ಅದಕ್ಕಾಗಿ ಬಂಧಿಸಿದ್ದೇವೆ...” ನಿಮಗೀಗ ಅರ್ಥ ಆಗಿರಬಹುದು ಈ ದುರಂತದ ಕಾಲದಲ್ಲೂ ಊರಿನ ಕೋಗಿಲೆಗಳೆಲ್ಲಾ ಏಕೆ ಇಷ್ಟೊಂದು ಮಧುರವಾಗಿ ಹಾಡುತ್ತಿವೆ ಎಂದು! ** ಕೋಣೆ ಮೂರು : ಈ ಕೋಣೆ ಇನ್ನೂ ವಿಚಿತ್ರ! ಒಂದು ವೇಷಭೂಷಣವನ್ನು ಹ್ಯಾಂಗರಿಗೆ ಜೋತು ಹಾಕಲಾಗಿತ್ತು ಕೇಳಿದೆ ನಾನು - “ಏನಿದರ ವಿಷಯ?” ಜೈಲಧಿಕಾರಿ ಉತ್ತರಿಸಿದ - "ನಮ್ಮ ನಾಯಕನ ಭಾಷಣದಲ್ಲಿ ದ್ವೇಷವಿದೆ ಎಂದು ಯಾರೋ ದಾವೆ ಹೂಡಿದ್ದರು. ನಮ್ಮ ಪರ ವಕೀಲ ’ಆ ಭಾಷಣವೆಲ್ಲಾ ಈ ವೇಷದ ಪ್ರಭಾವ. ಆದ್ದರಿಂದ ಈ ವೇಷಕ್ಕಷ್ಟೆ ಶಿಕ್ಷೆಯಾಗಬೇಕು’ ಎಂದು ವಾದಿಸಿ ಗೆದ್ದಿದ್ದರಿಂದ ಈ ವೇಷ ಈಗ ಶಿಕ್ಷೆಯನ್ನು ಅನುಭವಿಸುತ್ತಿದೆ! ** ಕೋಣೆ ನಾಲ್ಕು : ಈ ಕೋಣೆಯ ಗೋಡೆಯ ಮೇಲೆ ಕೆಲವೊಂದು ಅಂಕೆ ಸಂಖ್ಯೆಗಳನ್ನು ಗೀಚಲಾಗಿತ್ತು. ಕುತೂಹಲದಿಂದ ಕೇಳಿದೆ – “ಏನಿದರ ಮರ್ಮ?” ಜೈಲಧಿಕಾರಿ ಉತ್ತರಿಸಿದ - “ಇವು ಬರೀ ಸಂಖ್ಯೆಗಳಲ್ಲ ಸಂವಿಧಾನದ ಕಲಮ್ಮುಗಳು ನಿಮಗೆ ಗೊತ್ತಲ್ಲ.. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧವೆಂದು. ಅದಕ್ಕಾಗಿಯೇ ಜನರ ಕೈಗೆ ಸಿಗದಂತೆ ಕೆಲವು ಕಾನೂನುಗಳನ್ನು ಬಂಧಿಸಿಟ್ಟಿದ್ದೇವೆ!" ** ಕೊನೆಯ ಕೋಣೆ : ಅರೆ ಈ ಕೋಣೆ ಖಾಲಿ! ದಿಗ್ಭ್ರಮೆಯಿಂದ ಕೇಳಿದೆ ನಾನು - "ಈ ಕೋಣೆಯಲ್ಲಿರಬೇಕಿದ್ದ ಅತಿ ಕ್ರೂರಿ ಕೊಲೆಗಡುಕ ಅಪರಾಧಿ ಎಲ್ಲಿ?” ಜೈಲಧಿಕಾರಿ ನಗುತ್ತಾ ಉತ್ತರಿಸಿದ - “ನಿನಗೆ ಗೊತ್ತಿಲ್ವಾ? ಅವನು ಈಗಗಲೇ ಬಿಡುಗಡೆಗೊಂಡು ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿದ್ದಾನೆ.. ನೀನು ಆತನನ್ನು ಜೈಲೊಳಗೆ ಹುಡುಕಿ ಬಂದ ಈ ಹೊತ್ತು ಆತ ಮತಕ್ಕಾಗಿ ನಿನ್ನ ಮನೆಯ ಬಾಗಿಲು ತಟ್ಟುತ್ತಿರಬಹುದು.. *** ವಿಲ್ಸನ್ ಕಟೀಲ್ In prison cells... *** Cell one: A book was lying inside the room I asked - "Why is this book lying over here? Some prisoner must have read and forgotten to take it with him.” The jailer replied – "No. To the great writer who wrote this book A choice was given – You should either be in jail Or this book you wrote” The writer handed over this book to us You know very well ‘Litterateur always likes freedom.’ *** Cell two: Inside this room there is a cage And a crow in it! I asked - “Why did you put this crow over here? Has it murdered someone?” The jailer replied – “No, when our leader was floating in the intoxication of happiness This crow was crowing hoarsely For its cracked egg So it was arrested...” You may have understood now Why are the cuckoos in the town Singing so sweetly even in this bad time! *** Cell three: This cell is still strange! A dress was hung on a hanger I asked - "What’s the news about this dress?" The jailer replied – "There was hatred in our leader's speech And someone had filed a case against him. Our lawyer advocated ‘All that speech is because of the influence of this dress. So it should be punished” Just because he argued and won the case This costume is now being punished. *** Cell four: On the wall of this cell Some numbers were scratched. I curiously asked – "What is the secret of this?" The jailer replied – “These are not just numbers but articles of the constitution. You know that Taking the law into one's hands is a crime. So only we have jailed some laws over here To ensure that they are not reachable for the common people!" *** Last cell: Oh, this room is empty! Bewildered I asked - “Where is the most brutal murderous criminal who was supposed to be in this cell?” The jailer smiled and replied - “You know? He is now released He is currently in the election campaign. The time when you come to find him in the prison He might be knocking on your door for votes.” *** From Kannada: Wilson Kateel To English: Uday Itagi

    Chethana Teerthahalli's Poem in my english Translation

  • ಮಂಗಳವಾರ, ಮಾರ್ಚ್ 14, 2023
  • ಬಿಸಿಲ ಹನಿ
  • ಅಷ್ಟೇನೂ ರಮ್ಯ ಕಲ್ಪನೆಗಳು ಬೇಡ ನಲವತ್ತರ ಹೆಂಗಸರ ಬಗ್ಗೆ ಬಹುಪಾಲು ಬದುಕು ಬಿಸಿಲ ಹಣ್ಣು ಕೆಲವರಿಗೆ. ಕೂದಲಿಗೆ ಕಪ್ಪು ತೀಡುವುದೇ ಕೆಲಸವಲ್ಲ ಎಲ್ಲರಿಗೂ ಕಣ್ಣ ಕಾಡಿಗೆ ಬಸಿದಿಳಿದು ಕೆನ್ನೆ ರಾಡಿ ಸಂಭಾಳಿಸುವ ಸಮಾಧಾನ ಇರೋದಿಲ್ಲ ಎಲ್ಲರಿಗೂ. ಎಐ ಮಾರುಕಟ್ಟೆ ತೆರೆ ತೆರೆದು ತೋರುವಂತೆ ಎಲ್ಲೆಲ್ಲಿಯದೋ ಕರಿ ಮುಚ್ಚಲು, ತೊಡೆ ಮೇಲಿನ, ಹೊಟ್ಟೆ ಮೇಲಿನ ಹೆಬ್ಬಾವು ಹರಿದಂಥ ಗುರುತು ಮುಚ್ಚಲು, ನೆರಿಗೆ ಸಪಾಟು ಮಾಡಲು, ಜೋತು ಬೀಳುತ್ತಿರುವ ಮೊಲೆ ಎತ್ತಿ ಕಟ್ಟಲು ಹಪಹಪಿಸೋದಿಲ್ಲ ಎಲ್ಲರೂ. ನಲವತ್ತರಲ್ಲಿ; ಉಸಿರು ಬಿಗಿಯುವ ಬ್ರಾ ಕಳಚಿ ಬಿಸಾಡಿ ಮಂಚದ ಮೇಲೆ ಅಂಗಾತ ಮಲಗಿ ಫ್ಯಾನಿಗೆ ಮುಖವೊಡ್ಡುವ ಸುಖದ ಮುಂದೆ ಇನಿಯರ ಅಪ್ಪುಗೆ ತೃಣ ಮಾತ್ರ ಬಹಳಷ್ಟು ಜನಕ್ಕೆ. ಬಾಯಿ ಬಿಟ್ಟು ಹೇಳಿಕೊಳ್ಳೋದಿಲ್ಲ, ಅಷ್ಟೇ. ಚೇತನಾ ತರ್ಥಹಳ್ಳಿ One needn’t have too many romantic notions about the women who are in their forties as most of their life for some is already like a ripened fruit Dying the hair is not the job of everyone no one will have the patience to console the sludge of eyes that trickles down the cheeks The AI market seems to open up to cover the blackness everywhere, and also to cover the marks of the python’s movements on the thighs and stomach not that everyone craves to straighten the plates, and tries to hold a falling breast up in bras In the forties; for many before the pleasure of lying down on the couch by keeping the face to the fan and throwing the constricting bra away the hug of a lover is worthless. They just don’t express it that's it. From Kannada: Chetana Tirthahalli To English: Uday Itagi

    ಗಿರೀಶ ಹಂದಲಗೆರೆಯವರ ಹಾಡು ನನ್ನ ಸಬ್ ಟೈಟಲ್ಸನೊಂದಿಗೆ.....

  • ಬುಧವಾರ, ಮಾರ್ಚ್ 08, 2023
  • ಬಿಸಿಲ ಹನಿ
  • ಪ್ರಿಯ ಸ್ನೇಹಿತರೇ,
    ನಿಮ್ಮೊಂದಿಗೆ ನಾನು ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿನ ಹಾಡಿಗಾಗಿ (ತತ್ವಪದಕ್ಕೆ) ನಾನು ಇಂಗ್ಲೀಷ್ ಸಬ್‍ಟೈಟಲ್ಸ್ ನ್ನು ಬರೆದುಕೊಟ್ಟು ಅದಾಗಲೇ ಏಳೆಂಟು ತಿಂಗಳಾಗಿತ್ತು ಮತ್ತು ನಾನದನ್ನು ಮರೆತೂ ಬಿಟ್ಟಿದ್ದೆ. ಆದರೆ ಇವತ್ತು ಆ ಹಾಡನ್ನು ಬರೆದಿರುವ ಕವಿಮಿತ್ರ ಗಿರೀಶ್ ಹಂದಲಗೆರೆಯವರು ಫ಼ೇಸ್ಬುಕ್‍ನಲ್ಲಿ ಅಪ್ಡೇಟ್ ಮಾಡಿದಾಗ ಖುಷಿಯೋ ಖುಷಿ! ಇದನ್ನು ಇವತ್ತು ಕನ್ನಡದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬಿಡುಗಡೆ ಮಾಡಿದ್ದಾರೆ. 
    ಏಳೆಂಟು ತಿಂಗಳ ಹಿಂದೆ ಗಿರೀಶ್ ಅವರು ಫೋನ್ ಮಾಡಿ ನನ್ನ ಹಾಡಿಗೆ ಇಂಗ್ಲೀಷ್ ಸಬ್‍ಟೈಟಲ್ಸ್ ಬರೆದುಕೊಡೋಕಾಗುತ್ತಾ? ಎಂದು ಕೇಳಿಕೊಂಡಾಗ ನಾನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಏಕೆಂದರೆ ಇಂಥ ಸೃಜನಶೀಲ ಕೆಲಸಗಳೇ ನನ್ನನ್ನು ಜೀವಂತವಾಗಿಡೋದು ಮತ್ತು ನನ್ನ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ನನ್ನಲ್ಲಿ ಹೊಸ ಉತ್ಸಾಹವನ್ನು ತುಂಬುವದು. ಕಾವ್ಯ, ನಾಟಕ, ವಿಮರ್ಶೆ, ಸಿನಿಮಾ, ಬರವಣಿಗೆ, ಅನುವಾದ, ಆಕಾಶವಾಣಿ, ಟೀವಿ, ಸಮ್ಮೇಳನಗಳೊಂದಿಗೆ ನನ್ನದು ನಿರಂತರ ಅನುಸಂಧಾನ ನಡೆಯುತ್ತಲೇ ಇರುತ್ತದೆ. ಬಹುಶಃ, ಇವಿಲ್ಲದೆ ಹೋದರೆ ನನ್ನೊಳಗೇ ಒಂದು ಚಡಪಡಿಕೆ ಶುರುವಾಗುತ್ತದೆ. ಹಾಗೆಂದೇ ಆಗಾಗ್ಗೆ ನಾನು ಇಂಥ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿರುತ್ತೇನೆ. 
    ಇಗೋ ನಿಮ್ಮ ಮುಂದೆ ಕನ್ನಡದ ಭರವಸೆಯ ಕವಿ ಗಿರೀಶ್ ಹಂದಲಗೆರೆಯವರ ಈ ಹಾಡು! ಈತ ಈಗಾಗಲೇ ಅನೇಕ ತತ್ವಪದಗಳನ್ನು ಬರೆದಿದ್ದಾನೆ. ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ತತ್ವಜ್ಞಾನ ಈತನಿಗೆ ಅದ್ಹೇಗೆ ಹೊಳೆಯಿತು? ಎಂದು ನನಗೆ ಒಮ್ಮೊಮ್ಮೆ ಅಚ್ಚರಿಯಾಗುತ್ತದೆ. ಇರಲಿ, ಈಗ ಈ ಸುಂದರ ಹಾಡನ್ನು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಮೊಬೈಲ್ ಸ್ಕ್ರೀನ್ಗಿಂತ ನೀವು ಕಂಪ್ಯೂಟರ್ ಸ್ಕ್ರೀನ್ ಮೇಲೆ ನೋಡಿದರೆ ಸಬ್‍ಟೈಟಲ್ಸ್ ಸ್ಪಷ್ಟವಾಗಿ ಕಾಣುವವು ಎಂದು ನನ್ನ ನಂಬಿಕೆ. 
    ಸ್ನೇಹದಿಂದ
    ಉದಯ ಇಟಗಿ
    https://m.youtube.com/watch?v=uriBGkvp1oM&feature=youtu.be

    ನನ್ನ ಚಹಾತೋಟ ಮತ್ತು ನೀಲಿಹಕಕ್ಕಿಯ ಮೇಲೊಂದು ಸಣ್ಣ ವಿಮರ್ಶೆ

  • ಸೋಮವಾರ, ಜನವರಿ 16, 2023
  • ಬಿಸಿಲ ಹನಿ
  • ಭಾರತದ ವರ್ಚಸ್ವಿ ಭಾಷೆಗಳಿಂದ ಕನ್ನಡಕ್ಕೆ ತಕ್ಕಮಟ್ಟಿಗೆ ಅನುವಾದಗಳು ಆಗುತ್ತಿರುತ್ತವೆ. ಆದರೆ, ನಮ್ಮ ಲಕ್ಷ್ಯದ ಅಂಚಿನಲ್ಲಿ ಉಳಿದುಬಿಡುವ ಅನೇಕ ಭಾರತೀಯ ಭಾಷೆಗಳ ಶ್ರೀಮಂತ ಸಾಹಿತ್ಯ ಓದಿಗೆ ದಕ್ಕದೇ ಉಳಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮಾಡಬೇಕಾದ ಕೆಲಸ ತುಂಬಾ ಇದೆ. ಹಾಗಾಗಿ, ಉದಯ ಇಟಗಿ ಅವರು ಅಸ್ಸಾಮಿಯಾ ಭಾಷೆಯಿಂದ ಕನ್ನಡಕ್ಕೆ ತಂದಿರುವ ಕಮಲ್ ಕುಮಾರ್ ತಂತಿ ಅವರ ಕವನ ಸಂಕಲನ ಗಮನಾರ್ಹವಾಗಿದೆ.
    ಸುಮಾರು 62 ಕವನಗಳನ್ನು ಹೊಂದಿರುವ "ನನ್ನ ಚಹಾ ತೋಟ ಮತ್ತು ನೀಲಿ ಹಕ್ಕಿ" ಇಂಗ್ಲೀಷಿನ ಮುಖಾಂತರ ಕನ್ನಡಕ್ಕೆ ಬಂದಿದೆ. ಹಲವಾರು ಅಸಾಮಿಯಾ ಕವಿಗಳು ಲಯಬದ್ಧವಾಗಿ ಭಾಷೆಯನ್ನು ಬಳಸುವುದಿದೆ. ಇಂಗ್ಲೀಷ್ ಅನುವಾದಕರು ಆ ರಿದಂ ಅನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ. ಇಟಗಿ ಅವರ ಅನುವಾದದ ಸೊಗಸು ಎಂದರೆ ಅವರು ತುಂಬಾ ಸ್ಪಷ್ಟತೆ ಇರುವಂತೆ ನೋಡಿಕೊಳ್ಳುತ್ತಾರೆ. ಅನುವಾದಗಳು ಕೆಲವೊಮ್ಮೆ ಅಸಂಗತವಾಗುವ ಸಮಸ್ಯೆ ಇರುತ್ತದೆ. ಇಟಗಿ ಎಲ್ಲ ಕಡೆ ನೇರ ಸಂವಹನಕ್ಕೆ ಒತ್ತು ಕೊಟ್ಟಿರುವುದು ಕಾಣುತ್ತದೆ.
    ಕುವೆಂಪು ಭಾಷಾ ಭಾರತಿ ಪ್ರಕಟಿಸಿರುವ ಈ ಸಂಕಲನ ಕನ್ನಡ ಕಾವ್ಯಾಸಕ್ತರಿಗೆ ಖಂಡಿತ ಖುಷಿ ಕೊಡಬಲ್ಲ ಪುಸ್ತಕ. ಒಂದು ಪುಟ್ಟ ಕವನ ನೋಡಿ:
    "ನಾನು ನಿಮ್ಮ ಒಡನಾಡಿ" 

    ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ
    ಮಂತ್ರ ನಿಮಗೆ ಗೊತ್ತಿದೆ 
    ನಾನು ನಿಮ್ಮ ಒಡನಾಡಿ 
    ಕಾಡಿನ ಇನ್ನೊಂದು ಹೆಸರೇನು? 
    ನಿಮ್ಮ ಹಿತ್ತಲಿನಲ್ಲಿ ನೆರಳಿನ ಸಾಲು 
    ಆತ್ಮೀಯ ಭಿಕ್ಷು, ನಿಮ್ಮ ಮೌನದ ಮನೆ ಎಲ್ಲಿದೆ, 
    ನಿಮ್ಮ ನದಿ ಎಲ್ಲಿದೆ, ನಿಮ್ಮ ಹಿನ್ನೆಲೆ ಸಂಗೀತ ಎಲ್ಲಿದೆ?
    ಒಳಗೆ ಕತ್ತಲ ರಾತ್ರಿ 
    ಹಿಮ-ಚುಂಬಿಸಿದ ಬೆಟ್ಟಗಳು 
    ನಾನು ನಿಮ್ಮನ್ನು ಎಲ್ಲಿಯೂ ನೋಡಲಿಲ್ಲ 
    ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ 
    ಮಂತ್ರ ನಿಮಗೆ ಗೊತ್ತಿದೆ 
    ನಿಮ್ಮ ಇನ್ನೊಂದು ಹೆಸರೇನು?
    ನಾನು ನಿಮ್ಮ ಒಡನಾಡಿ
    **

    If you get me power

  • ಬುಧವಾರ, ಅಕ್ಟೋಬರ್ 26, 2022
  • ಬಿಸಿಲ ಹನಿ
  • ನನಗೂ ಕೊಲೆ ಮಾಡಲು ಬರುತ್ತದೆ ನನ್ನ ಕೈಗೂ ಅಧಿಕಾರ ಕೊಡಿ ಸತ್ತವನು ಹೇಗೆ ಪೂರ್ವಜನ್ಮದ ಕರ್ಮಗಳಿಂದ ಸತ್ತ ಎಂದು ಕತೆ ಕಟ್ಟುವುದು ನನಗೆ ಗೊತ್ತು ಹೊಸ ಕರ್ಮಗಳಿಗೆ ಹೊಸ ಕೊಲೆಗಳನ್ನು ಹೇಗೆ ಮಾಡಿಸುವುದು ಎಂಬುದೂ ನನಗೆ ಗೊತ್ತು ಸತ್ತವನೇಕೆ ಬಡವನಾಗಿರಬೇಕಿತ್ತು ? ಅದು ಅವನ ತಪ್ಪು ಎಂದು ನಾನು ಸಾಧಿಸಬಲ್ಲೆ ಉಳ್ಳವನಾಗಿರದಿದ್ದರೆ ಅವನು ಸಾಯಲಿಕ್ಕೇ ಲಾಯಕ್ಕು ಬಿಡು ಎಂದು ನಾನು ವಾದಿಸಬಲ್ಲೆ ಸತ್ತವನು ದೇಶಕ್ಕೆ ಎಂತಾ ಅಪಾಯಕಾರಿ ಅಂತ ನಾನು ವಿವರಿಸಬಲ್ಲೆ ಆತ ಸತ್ತದ್ದಕ್ಕಾಗಿ ಜನ ಸಂಭ್ರಮಿಸುವಂತೆ ಹಬ್ಬ ಹುಟ್ಟುಹಾಕಬಲ್ಲೆ ಸಾಯಸಿದ ಮೇಲೆ ಇದು ಕೊಲೆಯಲ್ಲ ಇದು ಆಡಳಿತ ಅಂತ ಬ್ರಮೆ ಹುಟ್ಟಿಸಬಲ್ಲೆ ಸಾಯಿಸಲು ಸುಲಭವಾದ ಆಳ್ವಿಕೆಯನ್ನು ಬಲವಾಗಿ ಬೆಳೆಸಬಲ್ಲೆ ನಾನು ಹೇಳಬಲ್ಲೆ ಅವನ ಸೊಕ್ಕು ಅವನನ್ನು ಸಾಯಿಸಿತು ಅವನ ಅಭಿಮಾನ ಅವನನ್ನು ಸಾಯಿಸಿತು ನನ್ನ ಅಭಿವೃದ್ಧಿ ಅವನನ್ನು ಸಾಯಿಸಿದ್ದನ್ನು ನಾನು ಅಪ್ಪಿ ತಪ್ಪಿಯೂ ಹೇಳಲಾರೆ ಸಾಯಿಸುವವರಿಗಾಗಿ ಸಂಬಳ ನೀಡಬಲ್ಲೆ ತುಳಿಯುವವರಿಗಾಗಿ ಹಾವುಗೆಯ ಹೊಲಿಯಬಲ್ಲೆ ಮತ್ತಷ್ಟು ಕತ್ತಿ ಬಾಂಬುಗಳನ್ನು ಉತ್ಪಾದಿಸಬಲ್ಲೆ ಸತ್ತವನಿಗಾಗಿ ಎರಡು ಸಾಲುಗಳ ಕಂಬನಿಯನ್ನೂ ಮಿಡಿಯಬಲ್ಲೆ ನನಗೂ ಕೊಲೆ ಮಾಡಲು ಬರುತ್ತದೆ ನನಗೂ ಅಧಿಕಾರ ಕೊಡಿ. If you get me power I too can kill If you get me power I know how to weave a story About the dead who died because his previous birth karmas I also know how to get new murders done For new karmas Why should the deceased be poor? I can only prove that it was his fault I can argue that If he is not rich, he is worth dying. I can defend that How dangerous the dead person was to the country I can create a festival of celebration for his death After killing I can create an illusion that It is not murder But it is all for the sake of administration I can grow the reign strong that can be used to kill I can tell his pride only killed him And his arrogance only swallowed him I can’t say even for the sake of saying That my development only killed him I can pay salaries for those who kill I can sew sandals for treaders Can produce more swords and bombs I can also express two lined obituary for the deceased I too can kill If you get me power From Kannada: Sriharsha Salimath To English: Uday Itagi

    Please procreate the human beings and send them to my hometown

  • ಗುರುವಾರ, ಅಕ್ಟೋಬರ್ 13, 2022
  • ಬಿಸಿಲ ಹನಿ
  • ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ಹೂವಿನ ಮೇಲೆ ಕೈಇಟ್ಟಾಗೆಲ್ಲಾ ಅಚಾನಕ್ಕಾಗಿ ಗೀರುವ ಮುಳ್ಳುಗಳು ಈಗೀಗ ನೋವನ್ನೀಯುವುದಿಲ್ಲ ನಿತ್ಯ ನರಕ ರ್ಶನ ಪಡೆಯುವ ಖಾಲಿ ಕಣ್ಣುಗಳಿಗೆ ಮುಳ್ಳು, ಹೂವಿನ ವ್ಯತ್ಯಾಸ ಗೊತ್ತಾಗುವುದಾದರೂ ಹೇಗೆ? ನನ್ನೂರಿನ ಬೀದಿಗಳು ಸಂಕೋಲೆ ತೊಡಿಸಿಕೊಂಡು ದಶಕಗಳೇ ಕಳೆಯಿತು ಈಗಿಲ್ಲಿ ಸದ್ದುಗಳಿರುವುದು ರ್ಮಗಳಿಗೆ ಮಾತ್ರ ಕಡ್ಡಿಯಿಂದ ಬೆಂಕಿ ಮತ್ತು ದೀಪ ಎರಡೂ ಹಚ್ಚಬಹುದು ಎನ್ನುವುದೆಲ್ಲಾ ಹಳೆಯ ಕ್ಲೀಷೆ ಇಲ್ಲಿ ತುರುಸಿನ ಸ್ರ್ಧೆಯಿರುವುದು ಬಡ ಅಮ್ಮಂದಿರ ಮಡಿಲು ಬರಿದುಗೊಳಿಸುವುದರಲ್ಲಿ ಮಾತ್ರ ಗದ್ದುಗೆಗೆ ಒಂದಾದರೂ ದಾರಿ ಬೇಡವೇ? ಬುದ್ಧಿವಂತರು, ವಿದ್ಯಾವಂತರುಗಳೆಂಬ ತಲೆಭಾರದ ಕಿರೀಟಗಳೆಲ್ಲಾ ಸಾಕು ದಯವಿಟ್ಟು ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ದೇವಾ ಕನಿಷ್ಠಪಕ್ಷ, ನೆತ್ತರಿನ ಕಮಟು, ಬಣ್ಣ ಮೂಗು, ಕಣ್ಣೊಳಗೆ ಇಳಿಯದಂತೆ ಮಾಡು ಉಸಿರಿರುವಷ್ಟು ಕಾಲ ತಣ್ಣಗೆ ಬದುಕುತ್ತೇನೆ - ಫಾತಿಮಾ ರಲಿಯಾ ಹೆಜ್ಮಾಡಿ Please procreate the human beings and send them to my hometown Unexpectedly every time whenever I put my hand on the flower the scratching thorns will not hurt now The empty eyes which receive eternal hellish radiation daily can’t make out the difference between the thorn and the flower now Decades have passed since the streets of my hometown are shackled now there the sounds of religion only are heard Both fire and lamp can be lit from just a match stick but it is an old cliché now There is a heavy competition only in draining the poor mothers’ lap Don't you want at least one way to the throne? Tired of wearing the crowns of intelligent and educated Oh God, procreate the human beings and send them to my hometown At least, make the rancid blood and colour not to get into the nose and eyes so that I will live cold as long as I have breath From Kannada: Fathima Raliya Hejamady To English: Uday Itagi

    Mamatha Arasikkeri's latest and much appreciated poem in my English Translation...

  • ಶುಕ್ರವಾರ, ಆಗಸ್ಟ್ 05, 2022
  • ಬಿಸಿಲ ಹನಿ
  • I became a flood And they called me fervent I became a tsunami And they called me arrogant I poured in raindrops And they called me perplexed I got dried up And they called me infertile I became a wave And they played with me I became a rivulet And they said “beautiful” Alas, How many barricades To a flowing river! Don’t they know that It only takes a moment for her To wash away those barricades ? From Kannada: Mamatha Arasikere To English: Uday Itagi

    Review on my book Libya Diary by Prof: Channagowda

  • ಬಿಸಿಲ ಹನಿ
  • Book Name: Libya Diary Author: Uday Ittagi Language: Kannada Genre: Travel Document Publication Date: 2018 Media Type: Print (ISBN 9788193901656) Pages: 152 Price: 140 About the Author: Uday Itagi is an English teacher who has cultivated writing as a hobby. Initially, he started writing poems and started posting on his blog, later his experience as a teacher for 8 years in Libya and the political upheavals that took place in Libya inspired him to write the present book. Presently he works as a principal of a college in a small town in the state of Karnataka. Summary: The book is about the author’s experience of his life in Libya and about the events that took place in the background of the Arab spring and the political upheavals and the dethroning of Mohammed Gadaffi which ended in the brutal killing of Gadaffi who was a charismatic leader. Cortical Evaluation: It is an excellent book that records the personal experience of the author besides throwing light on Libyan society. The book records the fate of Libya in the background of the rebellion that took place to overthrow Gadaffi; which was propped up by western imperialistic interests under the guise of ushering in democracy and human rights protection. The book is the result of the author’s observations made in his 8 years of experience as a teacher at an undergraduate level. He has taken pains to interact with several people and made extensive research before putting his thoughts into words, he has objectively tried to look at the achievements and failures of Libyan leader Mohammed Gadaffi. He seems to throw his weight in favor of Gadaffi as against the NATO intervention that happened to overthrow Gadaffi which culminated in the brutal killing of Gadaffi. The author speaks of his anxieties when he took up the job in distant Libya. He talks of disillusionment when he was posted to a village called Ghat a village which is 650 Km away from Sabah one of the five main cities in Libya. The book provides a first-hand glimpse of the life of the Libyan people. Their food habits their obsession with Indian Hindi movies and their impact on young minds and their frank admission that the Hindi movies have inspired them to fall in love. The author also talks of our news channels which at the time of Gadaffi’s fall aired anti Gadafi’s views blatantly without verifying the facts. The fact that every village in Libya invariably had a post office, a bank, and a hospital gives credit to Gadaffi who seems to have been instrumental in fairly modernizing Libya. By Prof: Channagowda

    ಲಕ್ಷ್ಮೀಚಂದ್ರಶೇಖರ್ ಅವರ ಬದ್ಧತೆಗೆ ನಮಸ್ಕಾರ

  • ಭಾನುವಾರ, ಮೇ 22, 2022
  • ಬಿಸಿಲ ಹನಿ
  • ನಿನ್ನೆ ಸಂಜೆ ಜೆ.ಪಿ.ನಗರದ ವ್ಯೋಮ ಸ್ಟುಡಿಯೋಕ್ಕೆ ನಾನು ಮತ್ತು ಬಸವನಗುಡಿಯ ಕಾಲೇಜಿನಲ್ಲಿ ನನ್ನ ಸಹದ್ಯೋಗಿಯಾಗಿದ್ದ ಅಕ್ಕ Sandhya Ganaganur ಇಬ್ಬರೂ 'ಷೇಕ್ಸ್‌ಪಿಯರನ ಶ್ರೀಮತಿ' ನಾಟಕ ನೋಡಲು ಹೋಗಿದ್ದೆವು. ವ್ಯೋಮ ಈ ಮೊದಲು ನೋಡಿರದ ಜಾಗವಾದ್ದರಿಂದ ಬೆಳಿಗ್ಗೆಯೇ ಲಕ್ಷ್ಮೀಚಂದ್ರಶೇಖರ್ ಮೇಡಂಗೆ ಕರೆ ಮಾಡಿ ಲೊಕೇಷನ್ ಕೇಳಿದ್ದೆ. ಅವರು ಸಂತೋಷದಿಂದ ವಿಳಾಸ ತಿಳಿಸಿದರು. ನಾಟಕ ರಚಿಸಿದ ಗೆಳೆಯ Uday Itagi ಕೂಡ ಟಿಕೆಟ್ಗಾಗಿ ಸಂಪರ್ಕಿಸಲು ನಾಟಕದ ನಿರ್ದೇಶಕರಾದ ವಿಶ್ವರಾಜ್ ಪಾಟೀಲ್ ಅವರ ನಂಬರ್ ಕೊಟ್ಟರು. ನಟಿ, ನಿರ್ದೇಶಕ ಮತ್ತು ನಾಟಕಕಾರರೊಂದಿಗೆ ಮಾತಾಡಿ ಆಮೇಲೆ ನಾಟಕ ನೋಡಲು ಹೋಗುತ್ತಿರುವ ಕುರಿತು ನಾನು ಮತ್ತು ಸಂಧ್ಯಾ ಮೇಡಂ ತರಲೆ ಮಾಡಿಕೊಂಡು ನಗುತ್ತಾ ಓಲಾ ಆಟೋದಲ್ಲಿ ವ್ಯೋಮ ತಲುಪಿದೆವು. ಆಟೋ ಇಳಿದು ನೋಡಿದರೆ ನನ್ನ ಪ್ಯಾಂಟಿನ ಹಿಬ್ಬಂದಿ ಪೂರಾ ಒದ್ದೆ! ಆಟೋ ಹತ್ತುವಾಗ ಸೀಟಿನಲ್ಲಿ ನೀರಿರಲಿಲ್ಲ. ಹರಿದ ಸೀಟಿನ ಕುಷನ್ ಒದ್ದೆಯಾಗಿದ್ದರ ಪರಿಣಾಮ. ಐದು ಮುಕ್ಕಾಲಾಗಿದ್ದರಿಂದ ಮನೆಗೆ ಹೋಗಿ ಬಟ್ಟೆ ಬದಲಾಯಿಸಿ ಬರಲು ಸಮಯವಿಲ್ಲ, ನಾಟಕದ ಸಮಯ ಆರಕ್ಕೆ. ಏನಾಗಲ್ಲ ಬಿಡು ಅಂತ ಸಮಾಧಾನ ಮಾಡಿಕೊಂಡು ವ್ಯೋಮದ ಮಹಡಿಯೇರಿದರೆ ಅಲ್ಲಿ ಯಾರೂ ಇರಲಿಲ್ಲ. ಥಿಯೇಟರಿನ ಬಾಗಿಲು ತಳ್ಳಿಕೊಂಡು ಒಳಹೋದಾಗ ನಿರ್ದೇಶಕರು ಬಂದು ಹತ್ತು ನಿಮಿಷವಿರಿ, ಟಿಕೇಟ್ ಕೊಡುತ್ತೇವೆಂದರು. ಹೊರಗಡೆ ಕಾದಿದ್ದಾಯ್ತು. ಆರುಗಂಟೆಗೆ ಟಿಕೇಟು ಕೊಟ್ಟರಾದರೂ ನಮ್ಮಿಬ್ಬರನ್ನು ಬಿಟ್ಟರೆ ಯಾರೂ ಬಂದೇ ಇಲ್ಲ! ನಾಟಕ ಕ್ಯಾನ್ಸಲ್ ಆಗಬಹುದು, ಇಬ್ಬರಿಗೇ ನಾಟಕ ಮಾಡುತ್ತಾರಾ, ಮಾಡಿದರೆ ಹೇಗೂ ಎಂಟಕ್ಕೆ ಮತ್ತೊಂದು ಪ್ರದರ್ಶನವಿದೆಯಲ್ಲಾ ಕಾದು ನೋಡಿದರಾಯ್ತೆಂದು ನಾವಿಬ್ಬರೂ ಮಾತಾಡುತ್ತ ನಿಂತಿರುವಾಗ 'ಒಳಗೆ ಬನ್ನಿ' ಎಂದು ಕರೆದರು. ನಾನು ಸಂಕೋಚದಿಂದ 'ಸರ್ ಇನ್ನೊಂದು ಪ್ರದರ್ಶನಕ್ಕೆ ಕಾಯ್ತೇವೆ, ಜನ ಇಲ್ಲವಲ್ಲ' ಎಂದೆ. ಪರವಾಗಿಲ್ಲ ಕೂತುಕ್ಕೊಳ್ಳಿ ಅಂದವರೆ ನಾಟಕ ಶುರು ಮಾಡೇ ಬಿಟ್ಡರು. ಏಕವ್ಯಕ್ತಿ ಪ್ರದರ್ಶನ. ಲಕ್ಷ್ಮೀಚಂದ್ರಶೇಖರ್ ಅವರು ವೇದಿಕೆ ಪ್ರವೇಶಿಸಿದಾಗ ನಮ್ಮಿಬ್ಪಾತ್ರವೊಂದನ್ನು ವ ವರ್ತಮಾನದಯಾರೂ ಇಲ್ಲವಲ್ಲ, ಕಲಾವಿದೆಗೆ ಹೇಗನ್ನಿಸಬಹುದು?" ಎಂದು ತೀರಾ ಕಸಿವಿಸಿ ಕಾಡಿತು. ಆದರೆ ಲಕ್ಷ್ಮೀ ಮೇಡಂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಎದುರಿಗೆ ಸಾವಿರ ಜನ ಪ್ರೇಕ್ಷಕರಿದ್ದರೆ ಎಂಬ ಭಾವದಲ್ಲೇ ಅದ್ಭುತವಾಗಿ ಷೇಕ್ಸ್‌ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದರು. ಕಲಾವಿದರಿಗೆ ಸಂಖ್ಯೆ ಮುಖ್ಯವಲ್ಲ, ನಾಟಕ ಮಾಡಿ ಮುಗಿಸುವುದಷ್ಟೇ ಮುಖ್ಯವೆಂಬುದನ್ನು ಸಾಬೀತುಪಡಿಸಿದರು. ಅವರ ಅಭಿನಯ ಅದೆಷ್ಟು ಸೊಗಸಿನದೆಂದರೆ ನಾಟಕ ಮುಗಿಯುವವರೆಗೂ ಅಲ್ಲಿರುವುದು ನಾವಿಬ್ಬರೇ ಎಂಬ ಭಾವ ಕಿಂಚಿತ್ತಾದರೂ ನೆನಪಾಗದಂತೆ ಷೇಕ್ಸ್‌ಪಿಯರ್ ಕಾಲಕ್ಕೆ ಹೋಗಿಬಿಟ್ಟಿದ್ದೆವು. ಐದಾರು ಶತಮಾನಗಳ ಹಿಂದಿನ ಕಾಲದ ಪಾತ್ರವೊಂದನ್ನು ವರ್ತಮಾನದಲ್ಲಿ ಕಾಣಿಸುವುದು ಸುಲಭದ ಮಾತಲ್ಲ. ಉದಯ್ ಇಟಗಿಯವರ ಸೃಷ್ಟಿಯಲ್ಲಿ ಅದು ಲೀಲಾಜಾಲವಾಗಿ ಮೂಡಿದೆ. ಈ ಹಿರಿಯ ಕಲಾವಿದೆಗೆ ವಯೋಸಹಜವಾದ ಚಿಕ್ಕಪುಟ್ಟ ತೊಂದರೆಗಳಿರದೆ? ಕಾಲುನೋವು, ಮಂಡಿನೋವು, ಬೆನ್ನುನೋವು? ಯಾವುದೂ ಲಕ್ಷ್ಮೀಚಂದ್ರಶೇಖರ್ ಅವರ ನಟನೆಯಲ್ಲಿ ಕಾಣಿಸದು. ಅವರ ನೆನಪಿನ ಶಕ್ತಿಕೂಡ ಬೆರಗು ಮೂಡಿಸುವಂಥದ್ದು. ಇಡೀ ನಾಟಕವನ್ನು ಒಬ್ಬರೇ ಅಭಿನಯಿಸಿ ತೋರಲು ಎಂಥ ಎನರ್ಜಿ ಬೇಕು! ಜೊತೆಗೆ ವಿಭಿನ್ನ ಸನ್ನಿವೇಶಗಳಿಗೆ ತಕ್ಕ ರಂಗಪರಿಕರಗಳನ್ನು ಬಳಸಿಕೊಳ್ಳುತ್ತಾ, ಸಂದರ್ಭಕ್ಕೆ ತಕ್ಕ ಉಡುಪು ಧರಿಸುತ್ತಾ ಅವರು ಅಭಿನಯಿಸುವುದನ್ನು ನೋಡುವುದೇ ಚಂದ. ಲಕ್ಷ್ಮೀಯವರ ಡೈಲಾಗ್ ಡೆಲಿವರಿ, ಪಂಚಿಂಗ್ ಡೈಲಾಗ್ ಅವರಿಗೇ ಮಾತ್ರ ಸಾಧ್ಯವಾಗುವಂತದ್ದು. ನಾಟಕದ ವಸ್ತು ಅಪರೂಪದ್ದು. ಜಗತ್ತಿನ ಶ್ರೇಷ್ಠ ನಾಟಕಕಾರನೊಬ್ಬನ ಪತ್ನಿಯ ಅಂತರಂಗವನ್ನು ತೆರೆದು ತೋರಲೆಂದೇ ರಚಿಸಿದ ನಾಟಕವಿದು. ಷೇಕ್ಸ್‌ಪಿಯರನನ್ನು ಕೆಳಗಿಳಿಸದೆ, ಅವನ ಹೆಂಡತಿಯನ್ನು ಮೇಲಕ್ಕೆತ್ತುವ ಆ ಮೂಲಕ ಷೇಕ್ಸ್‌ಪಿಯರನ ಶ್ರೀಮತಿಯ ಬಗ್ಗೆ ಇರುವ ಅಪವಾದಗಳಿಂದ ಆಕೆಯನ್ನು ಪಾರುಮಾಡುವ ಪ್ರಯತ್ನದಲ್ಲಿ ಉದಯ್ ಇಟಗಿ ಗೆದ್ದಿದ್ದಾರೆ. ನಾಟಕದುದ್ದಕ್ಕೂ ನಾವು ಓದಿದ ನಾಟಕಗಳಲ್ಲಿದ್ದ ಷೇಕ್ಸ್‌ಪಿಯರನ ಬೊಕ್ಕತಲೆಯ ನಗುಮುಖ ನಮ್ಮನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತದೆ. ಲೋಕದ ಕಣ್ಣಿಗೆ ದೊಡ್ಡವರೆನಿಸಿಕೊಂಡವರ ಸಣ್ಣತನಗಳೆಲ್ಲ ಚೆನ್ನಾಗಿ ಅರ್ಥವಾಗುವುದು ಅವರವರ ಹೆಂಡಂತಿಯರಿಗೆ ತಾನೆ? ಷೇಕ್ಸ್‌ಪಿಯರನ ಶ್ರೀಮತಿ ಕೂಡ ಎಂಟು ವರ್ಷಕ್ಕೆ ತನ್ನಿಂದ ಚಿಕ್ಕವನಾದ ಗಂಡನ ಜೊತೆ ಬಾಳಿದ ನೆನಪುಗಳ ಜೊತೆ, ಲೋಕಕ್ಕೆ ಕಾಣದ ಆತನ ಮುಖವನ್ನು ಪರಿಚಯಿಸುತ್ತಾ ಹೋಗುತ್ತಾಳೆ. ಸಾಹಿತ್ಯದ ಗಂಧಗಾಳಿಯಿಲ್ಲದ ಈ ಹೆಣ್ಣಿಗೆ ಷೇಕ್ಸ್‌ಪಿಯರನ ರೂಪಕ, ಪ್ರತಿಮೆ, ಸಾನೆಟ್, ನೂರಾರು ಪಾತ್ರಗಳಿಗಿಂತ ಮನೆವಾರ್ತೆಯ ಬವಣೆಯನ್ನು ನಿಭಾಯಿಸುವ ಸವಾಲುಗಳು ಮುಖ್ಯ. ಗಂಡನಿಂದ ನಯಾಪೈಸೆ ಹುಟ್ಟದಿರುವಾಗ ಮೂರು ಮಕ್ಕಳ, ಅತ್ತೆ-ಮಾವರ ಆರೈಕೆಗಾಗಿ ಬ್ರೆಡ್, ಚೀಸ್, ವೈನ್ ತಯಾರಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬವನ್ನು ಜತನದಿಂದ ಕಾಯ್ದುಕೊಳ್ಳುವ, ಗಂಡನ ಸಲಿಂಗಕಾಮ,ಕಟ್ಟಿಕೊಬದ್ಧತೆಗಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿನ ರಥವನ್ನೆಳದ ಆಕೆಯ ವ್ಯಕ್ತಿತ್ವವನ್ನು ಲಕ್ಷ್ಮೀಚಂದ್ರಶೇಖರ್ ಅದ್ಭುತವಾಗಿ ಕಟ್ಟಿಕೊಟ್ಟರು. ನಮ್ಮ ಎಷ್ಟೋ ಜನ ಲೇಖಕರ, ಕಲಾವಿದರ ಹೆಂಡತಿಯರ ಬವಣೆ ಕೂಡ ಇದೇ ಬಗೆಯದು. ನನಗಂತೂ ಸೀರೆ ವ್ಯಾಪಾರ ಮಾಡಿ, ಸಂಸಾರವನ್ನು ದಡ ಮುಟ್ಟಿಸಿದ ಇಂದಿರಾ ಲಂಕೇಶ್ ತುಂಬಾ ನೆನಪಿಗೆ ಬಂದರು. ಅವರ 'ಹುಳಿಮಾವಿನಮರ ಮತ್ತು ನಾನು' ಎಂಬ ಆತ್ಮಕಥನದಲ್ಲಿ ಇದೇ ಬಗೆಯ ವಿವರಗಳಿವೆ. ನಾಟಕದ ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಬೆಳಕು, ನಿರ್ದೇಶನಗಳು ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ಯುವಲ್ಲಿ ಪೂರಕವಾಗಿದ್ದವು. ಷೇಕ್ಸ್‌ಪಿಯರನ ಪಕ್ಕದ ಮನೆಯವರು ನಾವು, ನಮ್ಮೊಡನೆ ಷೇಕ್ಸ್‌ಪಿಯರನ ಪತ್ನಿ ತನ್ನ ಕುಟುಂಬದ ಕತೆಯನ್ನು ಬಿಚ್ಚಿಡುತ್ತಿದ್ದಾಳೇನೋ ಎಂಬ ಭಾವ ಮನಸ್ಸನ್ನು ಆವರಿಸಿಬಿಟ್ಟಿತ್ತು. ನಾಟಕ ಮುಗಿದಾಕ್ಷಣ ಮೇಡಂ ಜೊತೆ ಮಾತನಾಡಿದೆವು. ಮೆಚ್ಚುಗೆಯ, ಸಂಕೋಚದ ನುಡಿಗಳನ್ನು ಅಡಿದೆವು. "ಅಯ್ಯೋ ಏನ್ಮಾಡಕ್ಕಾಗುತ್ತೆ, ನಾಟ್ಕಕ್ಕೆ ಜನ ಬರೋದನ್ನೆ ಬಿಟ್ಟಿದ್ದಾರೆ, ಹೋಗ್ಲಿಬಿಡಿ, ನೀವಿಬ್ರಾದ್ರೂ ಬಂದ್ರಲ್ಲ" ಎಂದು ವಿಷಾದದ ನಗೆ ನಕ್ಕರು. ಮನೆಗೆ ಬಂದಮೇಲೂ ಕೇವಲ ಇಬ್ಬರ ಮುಂದೆ ನಾಟಕ ಪ್ರದರ್ಶಿಸಿದ ಈ ಹಿರಿಯ ಕಲಾವಿದೆಯ ಬದ್ಧತೆಯನ್ನು ಕಂಡು ಅಪಾರ ಗೌರವ ಮೂಡಿತು. ಅವರಿಗೊಂದು ದೊಡ್ಡ ನಮಸ್ಕಾರ. ಉದಯ್ ಇಟಗಿ, ವಿಶ್ವರಾಜ್ ಪಾಟೀಲ್ ಅವರಿಗೆ ಅಭಿನಂದನೆಗಳು. -ಡಾ.ಎಚ್.ಎಸ್. ಸತ್ಯನಾರಾಯಣ

    You and me

  • ಬುಧವಾರ, ಏಪ್ರಿಲ್ 27, 2022
  • ಬಿಸಿಲ ಹನಿ
  • You and me I am just a piece of bamboo Only when you touch me with your lips I will be a flute I am just a blank paper Only when you write something on it It will be a poem I am just a stone Only when you chisel me out I will be a sculpture I am just a wire Only when you string me out I will be a rhythm I am just a seed Only when you shower rain on me I will turn into green I am just the sky Only when you spread yourself on it It will turn into colourful feelings I am just a flower Only when you kiss me I will turn into a fruit I am just the earth Only when you become a gravitational power I will make a move I am just a sea Only when you join me I will gain life I am just a lamp Only when you touch me I will give out light I am just water Only when you mix up with it I will be an intoxicating drink I am just a zero Only when you join me I will gain value I am an empty pot Only when you fill yourself in me I will turn into knowledge I am just the way Only when you walk on it My journey will begin From Kannada: Handalagere Girish To English: Uday Itagi ನಾ - ನೀ ನಾ ಕೇವಲ ಬಿದಿರು ನೀ ತುಟಿಯಿಟ್ಟರಷ್ಟೇ ಕೊಳಲು ನಾ ಕೇವಲ ಖಾಲಿ ಹಾಳೆ ನೀ ಗೀಚಿದರಷ್ಟೇ ಕಾವ್ಯ ನಾ ಕೇವಲ ಕಲ್ಲು ನೀ ಮಟ್ಟಿದರಷ್ಟೇ ಶಿಲ್ಪ ನಾ ಕೇವಲ ತಂತಿ ನೀ ಮೀಟಿದರಷ್ಟೇ ಶೃತಿ ನಾ ಕೇವಲ ಬೀಜ ನೀ ಹನಿದರಷ್ಟೇ ಹಸಿರು ನಾ ಕೇವಲ ಬಾನು ನೀ ಮೂಡಿದರಷ್ಟೇ ಬಣ್ಣಭಾವ ನಾ ಕೇವಲ ಹೂ ನೀ ಚುಂಬಿಸಿದರಷ್ಟೇ ಫಲ ನಾ ಕೇವಲ ಭೂಮಿ ನೀ ಗುರುತ್ವವಾದರಷ್ಟೇ ಚಲನೆ ನಾ ಕೇವಲ ಕಡಲು ನೀ ಕೂಡಿದರಷ್ಟೇ ಜೀವ ನಾ ಕೇವಲ ಹಣತೆ ನೀ ಸೋಕಿದರಷ್ಟೇ ಬೆಳಕು ನಾ ಕೇವಲ ನೀರು ನೀ ಬೆರೆತರಷ್ಟೇ ಮಧು ತೀರ್ಥ ನಾ ಕೇವಲ ಸೊನ್ನೆ ನೀ ಸೇರಿದರಷ್ಟೇ ಮೌಲ್ಯ ನಾ ಕೇವಲ ಖಾಲಿ ಕೊಡ ನೀ ತುಂಬಿದರಷ್ಟೇ ಅರಿವು ನಾ ಕೇವಲ ದಾರಿ ನೀ ನಡೆದರಷ್ಟೇ ಪಯಣ - ಹಂದಲಗೆರೆ ಗಿರೀಶ್

    ಶೇಕ್ಸ್‌ಪಿಯರನ ನಿಜ ಬಣ್ಣ ಬಯಲು ಮಾಡಿದ ಶ್ರೀಮತಿ

  • ಭಾನುವಾರ, ಏಪ್ರಿಲ್ 24, 2022
  • ಬಿಸಿಲ ಹನಿ
  • 'ಶೇಕ್ಸ್‌ಪಿಯರನ ಶ್ರೀಮತಿ’- ಆಸಕ್ತಿ ಕೆರಳಿಸಿದ ಸಮರ್ಥ ಪ್ರಯೋಗ. ಇದು ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗವಾಗಿತ್ತು. ಪ್ರಪ್ರಥಮವಾಗಿ ಶೇಕ್ಸ್‌ಪಿಯರನಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್‌ಪಿಯರನಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ್ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್. ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಷೇಕ್ಸ್ ಪಿಯರ್ ನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ನೋಡುಗನ ಊಹೆಯನ್ನೂ ಮೀರಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಷೇಕ್ಸ್ ಪಿಯರ್, ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಮನಂಬುಗುವ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ. ಅವಳಿಗಿಂತ ಎಂಟುವರ್ಷ ಕಿರಿಯನಾದ ಹದಿನೆಂಟರ ಯುವಕ ಷೇಕ್ಸ್ ಪಿಯರ್ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ. ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ. ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು..ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ, ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ. ‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಗಳನ್ನು ಮಾತ್ರ ಹೈಲೈಟ್ ಮಾಡುತ್ತಾರೆಯೇ ವಿನಃ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ. ಷೇಕ್ಸ್ ಪಿಯರ್ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ – ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಷೇಕ್ಸ್ ಪಿಯರನ್ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದೂ ಆಪ್ತವಾಗದ ಗಂಡ ಎಂದೂ ತನ್ನ ಕನಸಿನಲ್ಲೂ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ. ನಾಟಕ ನೋಡಿದ ಮೇಲೆ ಜಗ ಮೆಚ್ಚಿದ ಶೇಕ್ಸ್‌ಪಿಯರನಪ್ರತಿಭೆ- ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್‌ಪಿಯರನಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ. ಶೇಕ್ಸ್‌ಪಿಯರನಹೆಂಡತಿಯಾಗಿ ಹೃದಯಸ್ಪರ್ಶೀ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಪಾಟೀಲರು ಅಭಿನಂದನೀಯರು. ಉತ್ತಮ ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ.ಎನ್) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಒಟ್ಟಾರೆ ನಾಟಕದ ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!! ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?!!! -ವೈ.ಕೆ.ಸಂಧ್ಯಾ ಶರ್ಮ

    ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ

  • ಬುಧವಾರ, ಏಪ್ರಿಲ್ 20, 2022
  • ಬಿಸಿಲ ಹನಿ
  • ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ..।ಗೋರಿಯಿಂದೆದ್ದು ಕುಳಿತು ಅಂತರಂಗ ತೋಡಿಕೊಳ್ಳುವ ಸತಿ…ವಿಶ್ವವಿಖ್ಯಾತ ನಾಟಕಕಾರನ ಜೀವನದ ಪ್ರಮುಖ ಪಾತ್ರಧಾರಿಣಿಯ ನಿಜಬದುಕಿನ ಗತಿಸ್ಥಿತಿ…ಅಂದಿನ ಇಂಗ್ಲಿಷ್ ಸಮಾಜದ ಬಾಳುವೆಯ ಒಟ್ಟಂದದ ರೀತಿನೀತಿ…ಪ್ರಖರ ಬೌದ್ಧಿಕ ,ಭಾವುಕ , ಸಂಫರ್ಷದಲ್ಲಿ,ಮೆಟಾಫರ್ ಗಳ ಗುಂಗಿನಲ್ಲಿ ದಣಿದು , ನಿಷಿದ್ಧ ಸ್ನೇಹಗಳ ಬಂಧನದಲ್ಲಿ ಸ್ಪೂರ್ತಿ ಗೊಂಡ ಮಹಾಕವಿಯ ಮನಸ್ಥಿತಿ.. ಗಂಡನಿಂದ ಸರಳ ಪ್ರೇಮ,ಜೀವನ ನಿರ್ವಹಣೆಯ ಹೊಣೆಯನ್ನು ಬಯಸಿ,ಹಾಗಾಗದಿದ್ದಾಗಲೂ ಕಂಗೆಡದೆ ದುಡಿದು ಘನತೆಯ ಬಾಳು ಕಟ್ಟಿಕೊಂಡ ಛಲಗಾತಿ…ನಾವರಿಯದ ಶೇಕ್ಸಪಿಯರನ್ನು ಯಾವುದೇ ರಾಗ ದ್ವೇಷಗಳಿಲ್ಲದೆ ತಣ್ಣನೆಯ ದನಿಯಲ್ಲಿ ಪ್ರಾಮಾಣಿಕವಾಗಿ ಪದಚಿತ್ತಾರಗಳಲ್ಲಿ ಚಿತ್ರಿಸುವ ಕಲೆಗಾರ್ತಿ… ಅವಳ ಭಾವಗಳನ್ನು ಸ್ಪಷ್ಟವಾಗಿ ಹೇಳುವ ಕಥೆಗಾರ್ತಿ..ಸರಳೆಯಾದ ಶ್ರೀಮತಿ ಮಹಾಕವಿಯ ತಳಮಳ,ಎದೆಗುದಿ.ವಿಕ್ಷಿಪ್ತತೆಯೂ ಇಲ್ಲಿ ಆಪ್ತವೇ ಆಗಿಬಿಡುವ ಕವಿಯ ಬಗೆಗಿನ ಕಡುಪ್ರೀತಿ.।ಓಹ್ ಅಧ್ಭುತ. ನಿಜಕ್ಕೂ ಈ ಪುಟ್ಟಪುಸ್ತಕ ಮಹಾಕವಿಯ ಬದುಕಿನ ನಾವರಿಯದ ಆಯಾಮಗಳನ್ನು ಹೊರೊಮ್ಮಿಸಿದೆ. ಇಂತಹುದೊಂದು ಅಮೂಲ್ಯ ವಸ್ತುವನ್ನು ಅಧ್ಯಯನ ಮಾಡಿ.ಬರಹ ರೂಪಕ್ಕೆ ತಂದು..ಅದರಲ್ಲೂ ರಂಗಪ್ರಯೋಗಕ್ಕೆ ಅಳವಡಿಸುತ್ತಿರುವ ನಿಮ್ಮ ಸಾಹಸ ಯಶಸ್ವಿಯಾಗಲಿೇ ಶ್ರೀಯುತ ಉದಯ ಇಟಗಿಯವರೇ.।ಶುಭಹಾರೈಕೆಗಳು..।
    -ಶುಭದಾ ಎಚ್. ಎನ್.

    ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ.

  • ಗುರುವಾರ, ಏಪ್ರಿಲ್ 14, 2022
  • ಬಿಸಿಲ ಹನಿ
  • ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಸಾಹಿತಿ ಉದಯ ಇಟಗಿಯವರು ಈ ಏಕವ್ಯಕ್ತಿ ರಂಗಪ್ರಯೋದ ನಾಟಕ "ಶೇಕ್ಸ್‌ಪಿಯರ್‌ ನ ಶ್ರೀಮತಿ" ಯನ್ನು ಪ್ರೀತಿಯಿಂದ ಕಳಿಸಿದ್ದಾರೆ.‌ಈ ನಾಟಕ ಬರೆಯಲು ಅನೇಕ ಆಕರಗಳನ್ನು ಆಧರಿಸಿ ಸೊಗಸಾಗಿ ಬರೆದಿದ್ದಾರೆ. ಶೇಕ್ಸ್‌ಪಿಯರ್ ನ ಹೆಂಡತಿ ಆನಿ ಹ್ಯಾಥ್ವೆ ಇವಳ ದಾಂಪತ್ಯದ ಬದುಕು ಹೇಗಿತ್ತು ಎಂಬ ಪ್ರಕರಣವನ್ನು ಶ್ರೀಮತಿಯ ಸ್ವಗತದ ರೂಪದಲ್ಲಿ ಚಿತ್ರಿಸಲಾಗಿದೆ. ಸ್ವಗತ ಈ ನಾಟಕದ ತಂತ್ರ. ಸಾಮಾನ್ಯವಾಗಿ ಖ್ಯಾತನಾಮರ ಹೆಂಡತಿಯ ಬದುಕು ದುಃಖ ನೋವು ದುಮ್ಮಾನ, ಗಂಡನ ತಾತ್ಸಾರ ಅಥವಾ ಸಮಯಾಭಾವದ ಕೊರತೆ, ಗಂಡನ ಅನ್ಯಸ್ತ್ರೀಗಮನ ಇವೆಲ್ಲವೂ ಇದ್ದು ಅವುಗಳನ್ನು ತಾಳ್ಮೆಯಿಂದ ಕೌಶಲ್ಯದಿಂದ ತೂಗಿಸಿಕೊಂಡು ಹೋಗುವ ಚಾಕಚಕ್ಯತೆಯ ಗಟ್ಡಿ ಹೆಣ್ಣು ಮಾತ್ರ ಸಂಸಾರ ಸಾಗರದಲ್ಲಿ ಯಶಸ್ವಿಯಾಗಿ ಈಜಬಲ್ಲಳು.‌ಗಾಂಧಿಜೀಯವರ ಹೆಂಡತಿ ಕಸ್ತೂರಬಾ ಅವರ ದಾಂಪತ್ಯ ಬದುಕು ಸುಖಮಯವಾಗಿತ್ತೆ? ಅಂತೆಯೆ ಶೇಕ್ಸ್‌ಪಿಯರ್ ನ‌ ಹೆಂಡತಿಯ ಬದುಕೂ ಏನು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ.‌ಗಂಡನ ಖ್ಯಾತಿಯ ದೀಪದ ಬೆಳಕಿನ ದೀಪದ ಬುಡದ ಕತ್ತಲಾಗಿಯೆ ಬದುಕನ್ನು ಹೆಂಡತಿ ನವೆಯುತ್ತ ಸವಿಸುತ್ತಾಳೆ. ಶೇಕ್ಸ್‌ಪಿಯರ್ ನ‌ಹೆಂಡತಿ ಸ್ವತಃ‌ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ತನ್ನ ಮೂರು‌ ಮಕ್ಕಳನ್ನೂ ಅತ್ತೆ ಮಾವಂದಿರನ್ನೂ ಸಾಕುತ್ತಾಳೆ. ಶೇಕ್ಸ್‌ಪಿಯರ್ ನ‌ ಬದುಕಿನ ಸಂಕಥನಗಳಲ್ಲಿ ಊಹಾಪೋಹಗಳೇ ಹೆಚ್ಚು. ಅವನು‌ ಹೆನ್ರಿ ರಿಜ್ಲಿಯೊಂದಿಗೆ ಸಲಿಂಗಕಾಮದ ಜೊತೆಗಾರನಾಗಿ,‌ಮುಂದೆ Dark Lady ಪ್ರಿಯಕರನಾಗಿ ಚಿತ್ರಿತಗೊಂಡಿರುವುದು ಶೇಕ್ಸ್‌ಪಿಯರ್ ಬರೆದ ೧೫೪ಕ್ಕೂ ಮಿಕ್ಕಿ ಬರೆದ ಸಾನೆಟ್ಟುಗಳ ಆಧಾರದ ಮೇಲೆ ಊಹಿಸಲ್ಪಟ್ಟ ಸಂಕಥನಗಳು. ಈ ನಾಟಕ ರಂಗ ಪ್ರಯೋಗಕ್ಕೆ ಸಜ್ಜಾಗಿದೆ. ಖ್ಯಾತ ನಟಿ ಪ್ರೊ ಲಕ್ಷ್ಮಿ ಚಂದ್ರಶೇಖರ ಶ್ರೀಮತಿ ಶೇಕ್ಸ್‌ಪಿಯರ್ ನ ಪಾತ್ರದಲ್ಲಿ ಬರಲಿದ್ದಾರೆ. ಈ ನಾಟಕವನ್ನು ಒಂದು ಐದು ಅಂಕಗಳ ನಾಟಕವನ್ನಾಗಿ ಮಾಡಬಹುದಾದ ಎಲ್ಲ ಆಕರಗಳ ಆಧಾರಗಳೂ ಇದ್ದವು. ಶೇಕ್ಸ್‌ಪಿಯರ್, ಅವನ ಹೆಂಡತಿ, ಹೆನ್ರಿ ರಿಜ್ಲಿ, ಅವನ ಮೂರು ಮಕ್ಕಳು, ಹೀಗೆ ವಿಸ್ತೃತವಾಗಿ ಒಂದು ದೊಡ್ಡ ನಾಟಕ ಬರೆಯಬಹುದಿತ್ತು. ಏಕವ್ಯಕ್ತಿ ರಂಗ ಪ್ರದರ್ಶನವು ನುರಿತ ನಟಿಯ ಅಭಿನಯದಿಂದ ಜನರ ಮನಸ್ಸನ್ನು ಸೆಳೆಯಬಹುದು‌. ಈ ಹೊಸ ಪ್ರಯೋಗವನ್ನು ಕನ್ಬಡಕ್ಕೆ ಪರಿಚಯಿಸಿದ ಉದಯ ಇಟಗಿ ಇವರನ್ನು ಅಭಿನಂದಿಸುವೆ.

    ಉದಯ ಇಟಗಿಯವರ "ಶೇಕ್ಸ್ ಪಿಯರ್ ನ ಶ್ರೀಮತಿ"

  • ಸೋಮವಾರ, ಏಪ್ರಿಲ್ 11, 2022
  • ಬಿಸಿಲ ಹನಿ
  • "Mrs. Shakespeare" ಎನ್ನುವ ನಾಟಕ ಇಂಗ್ಲೆಂಡಿನಲ್ಲಿ ಪ್ರದರ್ಶನವಾಗಿದ್ದನ್ನು ಕೇಳಿ, "ರಾಬರ್ಟ್ ನೇ" ಅವರ ಸ್ತ್ರೀವಾದಿ ಕಾದಂಬರಿ ಓದಿ, ಈ ಬಗ್ಗೆ ನಟರಾಜ್ ಹುಳಿಯಾರ್ ಅವರ ಒಂದು ಲೇಖನ ಓದಿ ಹುಟ್ಟಿದ ಈ ಕೃತಿಯು ಈಗ ಓದುಗರ ಮುಂದಿದೆ. ಓದುಗರಿಗೆ ಪರಿಚಿತವಾದ ಶೇಕ್ಸ್ ಪಿಯರ್ ನ ಸಾಲುಗಳಿಂದಲೇ ಆರಂಭವಾಗುವ ಕೃತಿ ಅವುಗಳನ್ನು ಹೇಳುತ್ತಿರುವ ಆನಿ ಹ್ಯಾಥ್ವೇ ಶೇಕ್ಸ್ ಪಿಯರ್ ಳ ಅಂತರಾಳವನ್ನು ತೆರೆದಿಡುತ್ತಾ, ಶೇಕ್ಸ್ ಪಿಯರ್ ಅವಳಿಗೆ ಹೇಗೆ ಅನಿಸಿದ್ದ, ಆರಂಭದಲ್ಲಿ ಹೇಗಿದ್ದ ,ಹೇಗೆ ಜೀವನ ನಡೆಸಿದ್ದ, ಅಂತ್ಯದಲ್ಲಿ ಹೇಗಾದ ಎಂಬ ಎಲ್ಲ ಏರಿಳಿತಗಳನ್ನು ಸಮಗ್ರವಾಗಿ ನೋಡುಗರ ಮುಂದಿಡುವ ಒಂದು ಶ್ಲಾಘನೀಯ ಪ್ರಯತ್ನ ಇಲ್ಲಿದೆ. ಹದಿನೆಂಟರ ಹರೆಯದ ಶೇಕ್ಸ್ ಪಿಯರ್ ತನಗಿಂತ ಎಂಟು ವರ್ಷ ದೊಡ್ಡವಳಾದ ಆನಿ ಹ್ಯಾಥ್ವೇ ಳನ್ನು ಪ್ರೇಮಿಸಿದನಾ? ಇವರ ಮದುವೆಯ ಬಗ್ಗೆ ಇರುವ ಊಹಾಪೋಹಗಳು ಇಲ್ಲಿ ಆನ ಹ್ಯಾಥ್ವೇ ದೃಷ್ಟಿಯಿಂದ ಬರೆಯಲ್ಪಟ್ಟಿವೆ. ಇಲ್ಲಿ ಆನೆ ತನ್ನ ಗಂಡನ ಬಗ್ಗೆ 'ಹೊಂದಿರಬಹುದಾಗಿದ್ದ' ಭಾವನೆಗಳನ್ನು ಕೆಲವೊಮ್ಮೆ ಭಾವುಕಳಾಗಿ ಮತ್ತೆ ಕೆಲವೊಮ್ಮೆ ನಿರ್ಭಾವುಕಳಾಗಿ ಹೇಳುತ್ತಾಳೆ. ಆ ಮೂಲಕ ಕಥೆಯೊಂದನ್ನು ಕಟ್ಟಿಕೊಡುತ್ತಾಳೆ. ಅವಳ ಪ್ರೇಮ-ಕಾಮ, ಈರ್ಷೆ, ಸಿಟ್ಟು ಎಲ್ಲವೂ ಒಂದು ಹದಕ್ಕೆ ತಿರುಗಿದೆ. ಶೇಕ್ಸ್ ಪಿಯರ್ ನ ಬದುಕು ಮತ್ತು ಬರಹವನ್ನು ಅವನ ಸಂಗಾತಿಯ ಕಣ್ಣುಗಳಿಂದ ನೋಡುವುದೇ ಒಂದು ಹೊಸತನ. ಇದು ಸಾಹಿತ್ಯಕ್ಕೆ ಇರುವ ಅನಂತ ಸಾಧ್ಯತೆಗಳ ಪರಿಚಯವೂ ಹೌದು. ಇಲ್ಲಿನ ಆನೆ ಹ್ಯಾಥ್ವೇ ಒಬ್ಬ ದಿಟ್ಟ ಹೆಂಗಸು; 'ಮಹಾನ್' ಶೇಕ್ಸ್ ಪಿಯರನ ಹಂಗನ್ನು ದಾಟಿದವಳು! ಉದಯ ಇಟಗಿಯವರು ಬರೆದ ಈ ನಾಟಕ ನಮ್ಮಿಂದ ಒಂದೇ ಉಸಿರಿಗೆ ಹಾಗೆಯೇ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಓದಿದ ನಂತರ ನಾಟಕದ "ಸ್ವಾದ" ನಮ್ಮೊಳಗೆ ಸದಾ ಉಳಿಯುತ್ತದೆ. ರಂಗ ಪ್ರಯೋಗಕ್ಕೂ ಸಜ್ಜಾಗಿ ನಿಂತಿರುವ ಈ ಕೃತಿ ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎನ್ನುವ ಭರವಸೆಯನ್ನು ಈ ಪಾತ್ರ ಮಾಡುತ್ತಿರುವ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ರವರೂ ವ್ಯಕ್ತಪಡಿಸಿದ್ದಾರೆ.