Demo image Demo image Demo image Demo image Demo image Demo image Demo image Demo image

ಪ್ರಜಾವಾಣಿಯಲ್ಲಿ ನನ್ನ ಬ್ಲಾಗ್ ಬಗ್ಗೆ “ಹನಿ ಹನಿ ‘ಬಿಸಿಲ ಹನಿ’”

  • ಮಂಗಳವಾರ, ಆಗಸ್ಟ್ 04, 2015
  • ಬಿಸಿಲ ಹನಿ
  • ಮಳೆಹನಿಗಳನ್ನು ಬಲ್ಲಿರಿ. ಬಿಸಿಲ ಹನಿಗಳನ್ನು ಬಲ್ಲಿರಾ? ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿ ಬಿಸಿಲ ಹನಿಗಳ ಸೃಷ್ಟಿಕರ್ತರು. ಅಂದಹಾಗೆ, ಅವರು ಹೊಲದಲ್ಲಿ ಬೆವರು ಸುರಿಸುತ್ತಿಲ್ಲ. ಬ್ಲಾಗ್ನಲ್ಲಿ ಅಕ್ಷರ ಮಳೆಗರೆಯುತ್ತಿದ್ದಾರೆ. ‘ಬಿಸಿಲ ಹನಿ’ (bisilahani.blogspot.in) ಅವರ ಬ್ಲಾಗ್ಹೆಸರು.
    ಉದಯ್ ಪ್ರಸ್ತುತ ನೆಲೆಸಿರುವುದು ಲಿಬಿಯಾದಲ್ಲಿ. ಅಲ್ಲಿನಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಅವರು ಇಂಗ್ಲೀಷ್ ಅಧ್ಯಾಪಕರು. ಇಂಗ್ಲಿಷ್ನಲ್ಲಿ ಪಾಠ ಹೇಳುತ್ತಿದ್ದರೂ, ಅವರ ಮನಸ್ಸು ಕನ್ನಡಕರ್ನಾಟಕವನ್ನೇ ನೆನೆಯುತ್ತಿದೆ.
    ಓದುಬರವಣಿಗೆಯಲ್ಲಿ ಆಸಕ್ತರಾದ ಅವರು, ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಬ್ಲಾಗ್ಬರವಣಿಗೆಯನ್ನು ಮಾಧ್ಯಮ ಆಗಿಸಿಕೊಂಡಿದ್ದಾರೆ. ಅಂದಹಾಗೆ, ಉದಯ್ಬೇರೆ ಬೇರೆ ಭಾಷೆಗಳ ಕಥೆಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆಲವು ಅನುವಾದಿತ ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆಸಾಹಿತ್ಯದ ಜೊತೆಗೆಪ್ರವಾಸ, ಛಾಯಾಗ್ರಹಣ ಹಾಗೂ ತೋಟಗಾರಿಕೆ ಅವರ ಆಸಕ್ತಿಯ ಕ್ಷೇತ್ರಗಳು.
    ಬಿಸಿಲ ಹನಿಗಳ ವ್ಯವಸಾಯ ಭರವಸೆ ಹುಟ್ಟಿಸುವಂತಿದೆ. ‘ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳುಎನ್ನುವ ಅವರ ಪ್ರಬಂಧವನ್ನು ಓದಿಯೇ ಸವಿಯಬೇಕು. ವೈದೇಹಿ ಅವರನೋಡಬಾರದು ಚೀಲದೊಳಗನುಕವಿತೆಯ ನೆಪದಲ್ಲಿ ಹುಟ್ಟಿದ ಬರಹ, ಭೀಷ್ಮ ಸಹಾನಿ ಅವರ ಅನುವಾದಿತ ಕಥೆ, ಪ್ಯಾಲೆಸ್ತೇನಿಯನ್ ಕವಿಯ ಶಾಂತಿಗೀತೆ, ಹುಳಿ ಮಾವಿನ ಮರದ ನೆನಪುಹೀಗೆ, ಉದಯ್ಬರಹಗಳ ವೈವಿಧ್ಯ ಸೊಗಸಾಗಿದೆ. ‘ಬಿಸಿಲ ಹನಿಗಳಿಗೆ ಮೈಯೊಡ್ಡುವುದು ಹಿತವಾದ ಅನುಭವ
    ಲಿಂಕ್ ಇಲ್ಲಿದೆ:
    http://www.prajavani.net/article/%E0%B2%B9%E0%B2%A8%E0%B2%BF-%E0%B2%B9%E0%B2%A8%E0%B2%BF-%E2%80%98%E0%B2%AC%E0%B2%BF%E0%B2%B8%E0%B2%BF%E0%B2%B2-%E0%B2%B9%E0%B2%A8%E0%B2%BF%E2%80%99