ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
ಅವವೇ ಸಂಗತಿಗಳು ಅವವೇ ವಿಷ್ಯಗಳು
ಎಲ್ಲಕಡೆ ನಡೆಯುತ್ತಿರುತ್ತವೆ
ಅದೇ ಜನ ಅದೇ ಕೆಲಸ
ಅದೇ ರಸ್ತೆ ಅದೇ ನಿಲ್ದಾಣ
ಅದೇ ಓಟ ಅದೇ ಟ್ರಾಫಿಕ್ ಜಾಮ್
ಅದೇ ಗದ್ದಲ ಅದೇ ನೂಕುನುಗ್ಗಲು
ಅದೇ ದಾವಂತ ಅದೇ ನಿಟ್ಟುಸಿರು!
ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
ತಮ್ಮ ಹೆಂಡತಿ-ಮಕ್ಕಳನ್ನು ಮನೆಯಲ್ಲಿ ಬಿಟ್ಟು
ಕೆಲಸಕ್ಕೆ ಹೊರಹೋಗುವ ಗಂಡಸರು
ಸಾಯಂಕಾಲದಷ್ಟೊತ್ತಿಗೆ ಸೋತು ಸುಣ್ಣವಾಗಿ
ಬಾಡಿದ ಮುಖವನ್ಹೊತ್ತು ಮನೆಗೆ ಹಿಂದಿರುಗುತ್ತಾರೆ.
ಆದರೂ ಅವರು ಹೇಳುತ್ತಾರೆ
ಈ ಬದುಕೊಂದು ಕಲೆ
ಇಲ್ಲಿ ಪ್ರತಿಯೊಬ್ಬ ಮನುಷ್ಯನೂ ಕಲೆಗಾರೆನೇ!
ಆದರೆ ಅವರು ಬದುಕನ್ನು ಕಲೆಯಾಗಿಸಿ ಬದುಕುವದಿಲ್ಲ
ಬದಲಿಗೆ ತಮಗೆ ತಿಳಿದಂತೆ ಬದುಕುತ್ತಾರೆ
ಮತ್ತು ತಾವು ಬದುಕುವ ರೀತಿಗೆ
ತಂತಮ್ಮದೇ ವ್ಯಾಖ್ಯಾನವನ್ನು ನೀಡುತ್ತಾರೆ.
ಒಮ್ಮೊಮ್ಮೆ ಸಂಜೆಹೊತ್ತು
ನಾನು ಮನೆಗೆ ಮರಳಿದಾಗ
ಅಕರಾಳವಿಕರಾಳವಾಗಿ
ಮಿಂಚುಗುಡುಗುಗಳಂತೆ ಆರ್ಭಟಿಸುತ್ತಾ
ನನ್ನ ಹೃದಯವನ್ನು ನಾನೇ ಹಿಂಡಿಕೊಳ್ಳುತ್ತೇನೆ.
ತಕ್ಷಣ ಕೆಲವು ಮನುಷ್ಯಾಕೃತಿಗಳು ನೆಲದಿಂದೆದ್ದು
ತಮ್ಮಷ್ಟಕ್ಕೆ ತಾವೇ ಕೇಕೆಹಾಕಿ ಕುಣಿಯತೊಡಗುತ್ತವೆ.
ಮೂಲ ಇಂಗ್ಲೀಷ್: ಕುನ್ವರ್ ನಾರಾಯಣ್
ಭಾವಾನುವಾದ: ಉದಯ್ ಇಟಗಿ
ಲಿಬಿಯಾದ ಚುನಾವಣೆಗಳೂ..........ನೇಪಥ್ಯಕ್ಕೆ ಸರಿದುಹೋದ ಗಡಾಫಿಯೂ.........
ಲಿಬಿಯಾದಲ್ಲಿ ಕ್ರಾಂತಿಯೆದ್ದ ದಿನದಿಂದ ಹಿಡಿದು ಅದು ಮುಗಿದಾದ ಮೇಲೂ ನಾನು ಆಗಾಗ ನನ್ನ ಬ್ಲಾಗಿನಲ್ಲಿ ಗಡಾಫಿ ಬಗ್ಗೆ, ಆತ ಇಲ್ಲಿಯ ಜನಕ್ಕೆ ಕೊಟ್ಟ ಸೌಲತ್ತುಗಳ ಬಗ್ಗೆ, ಇಲ್ಲಿಯ ಕ್ರಾಂತಿಯ ಹಿಂದಿನ ಕೈವಾಡದ ಬಗ್ಗೆ, ಆತನ ದುರಂತ ಸಾವಿನ ಬಗ್ಗೆ, ಇಲ್ಲಿಯವರು ಆತನನ್ನು ಮಿಸ್ ಮಾಡಿಕೊಂಡಿರುವದರ ಬಗ್ಗೆ, ಆತನಿಲ್ಲದ ಲಿಬಿಯಾದ ಬಗ್ಗೆ ಹಾಗೂ ಇಲ್ಲಿನ ಸಣ್ಣಪುಟ್ಟ ಗಲಭೆಗಳ ಬಗ್ಗೆ ಕಾಲಕಾಲಕ್ಕೆ ನಾ ಪ್ರತ್ಯಕ್ಷ ಕಂಡಂತೆ ನಿಮಗೆ ವರದಿ ಮಾಡಿದ್ದೇನೆ. ಈಗ ಅಂಥದೇ ಮತ್ತೊಂದು ವಿಷಯವನ್ನು ಆದರೆ ಈ ಮೇಲಿನ ವಿಷಯಗಳಿಗೆ ತದ್ವಿರುದ್ಧವಾದ ಸುದ್ದಿಯೊಂದನ್ನು ವರದಿ ಮಾಡಲು ಹೊರಟಿದ್ದೇನೆ. ಹೊಸನೀರು ಹರಿದು ಬಂದಂತೆ ಹಳೆನೀರು ಕೊಚ್ಚಿಹೋಗುವದು ಸಹಜ. ಅಂತೆಯೇ ಹಂಗಾಮಿ ಸರಕಾರದ “ದೈತ್ಯ ಶಕ್ತಿ”ಯ ಮುಂದೆ ಹಳೆ ಸರಕಾರದ ರೀತಿ ರಿವಾಜುಗಳು ಮತ್ತು ಬೆಂಬಲಿಗರು ಹೇಗೆ ತೆರೆಮರೆಯ ಹಿಂದೆ ಸರಿಯುತ್ತಿದ್ದಾರೆ ಹಾಗೂ ಮೊನ್ನೆ ಮೊನ್ನೆಯವರೆಗೂ ಗಡಾಫಿಯನ್ನು ಕೊಂಡಾಡುತ್ತಿದ್ದ ಜನ ಈಗ ಹೇಗೆ ಕ್ರಮೇಣ ಅವನನ್ನು ಮರೆತು ಹೊಸ ಬದುಕಿನತ್ತ ಮುಖ ಮಾಡುತ್ತಿದ್ದಾರೆ ಎನ್ನುವದನ್ನು ಹೇಳಲು ಹೊರಟಿದ್ದೇನೆ.

ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಅಂದರೆ ಜುಲೈ ೭ ರಂದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ರಾಜ್ಯ ಸ್ಥಾಪನೆಗಾಗಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆದು ಹೊಸ ಇತಿಹಾಸ ಸೃಷ್ಟಿಸಿದವು. ಮಾತ್ರವಲ್ಲ ಸುಮಾರು ಐವತ್ತು ವರ್ಷಗಳ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆಗೂ ಪಾತ್ರವಾದವು. ಹಾಗೆ ನೋಡಿದರೆ ಇದು ಲಿಬಿಯಾದ ಎರಡನೆ ಚುನಾವಣೆ. ಮೊಟ್ಟ ಮೊದಲನೆಯ ಚುನಾವಣೆ ನಡೆದಿದ್ದು ಫ಼ೆಬ್ರುವರಿ ೧೯, ೧೯೫೨ರಂದು. ಲಿಬಿಯಾ ಆಗಷ್ಟೆ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆಹೊಂದಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಯೂರೋಪಿಯನ್ನರ ದಾಸ್ಯದಿಂದ ಮುಕ್ತಿಹೊಂದಿದ ಆಫ್ರಿಕಾ ಖಂಡದ ಮೊಟ್ಟಮೊದಲ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಗಿನ ದೊರೆ ಮೊದಲನೇ ಇದ್ರಿಸ್ ವಿಶ್ವಸಂಸ್ಥೆಯ ಜೊತೆ ಲಿಬಿಯಾದ ಸಂಧಾನುಕಾರನಾಗಿದ್ದುಕೊಂಡು ಆ ದೇಶಕ್ಕೆ ಸ್ವಾತಂತ್ರ್ಯವನ್ನು (ಡಿಸೆಂಬರ್ ೨೪, ೧೯೫೧ರಂದು) ದಕ್ಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ. ಹೀಗೆ ಪರಕೀಯರಿಂದ ಬಿಡುಗಡೆ ಹೊಂದಿದ ದೇಶಕ್ಕೆ ಹೊಸ ಸರಕಾರವೊಂದನ್ನು ಸ್ಥಾಪಿಸುವ ಹುಕಿಯಿತ್ತು. ಅದು ಪ್ರಜಾಪ್ರಭುತ್ವದ ರೀತಿಯಲ್ಲಿದ್ದರೆ ಸರಿಯೆಂದುಕೊಂಡು ಎಲ್ಲ ಸೇರಿ ದೇಶದ ತುಂಬಾ ಫೆಬ್ರುವರಿ ೧೯, ೧೯೫೨ರಂದು ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದರು. ಇಪ್ಪತ್ತೊಂದರ ಮೇಲ್ಪಟ್ಟ ಎಲ್ಲ ನಾಗರಿಕರಿಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಕೆಲವು ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ರಹಸ್ಯ ಮತದಾನ ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಮತಪೆಟ್ಟಿಗೆಯಲ್ಲಿ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಮತದಾರರು ಯಾರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ ಎನ್ನುವ ಹೇಳಿಕೆಯನ್ನು ಕಮಿಟಿಯ ಮುಂದೆ ಧ್ವನಿಮುದ್ರಿಸಲಾಯಿತು.

೧೯೫೨ರಲ್ಲಿ ನಡೆದ ಚುನಾವಣೆಯ ಒಂದು ಚಿತ್ರ
ಆಗ ಅಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ನನ್ನು ಬೆಂಬಲಿಸುವ ಗುಂಪು. ಇನ್ನೊಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಶಿರ್ ಬೇ ಸಾದವಿಯನ್ನು ಬೆಂಬಲಿಸುವ ಗುಂಪು. ಚುನಾವಣೆಯಲ್ಲಿ ಒಟ್ಟು ೧೪೧ ಅಬ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಹೆಚ್ಚಿನವರು ಸ್ವತಂತ್ರ ಅಬ್ಯರ್ಥಿಗಳು. ಫಲಿತಾಂಶ ಹೊರಬಂದಾಗ ಕಾಗ್ರೆಸ್ ಪಕ್ಷ ಟ್ರಿಪೋಲಿಯಲ್ಲಿ ಗೆದ್ದಿತ್ತು. ಆದರೆ ಬಹಳಷ್ಟು ಸೀಟುಗಳನ್ನು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ಬಾಚಿಕೊಂಡಿದ್ದ. ಅಲ್ಲಿಗೆ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿ ವಿರೋಧ ಪಕ್ಷದ ಪಡೆ ಹೋರಾಟಕ್ಕೆ ಇಳಿಯಿತು. ನೋಡನೋಡುತ್ತಿದ್ದಂತೆ ಹೋರಾಟ ಹಿಂಸೆಗೆ ತಿರುಗಿ ಘಟನೆಯಲ್ಲಿ ಒಂದಿಬ್ಬರು ಸತ್ತು ಸಾಕಷ್ಟು ಜನ ಗಾಯಗೊಂಡರು. ಈ ಘಟನೆ ಇಡಿ ಚುನಾವಣೆ ಪ್ರಕ್ರಿಯೆಯ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿ ಆಗಷ್ಟೆ ಮುಗಿದ ಚುನಾವಣೆಯನ್ನು ರದ್ದುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮುಂದೆ ಲಿಬಿಯಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಒಂದನೇಯ ಇದ್ರಿಸ್ನಿಗೆ ಅಧಿಕಾರವನ್ನು ವಹಿಸುವದರ ಮೂಲಕ ಅವನನ್ನು ಸ್ವತಂತ್ರ ಲಿಬಿಯಾದ ಮೊಟ್ಟಮೊದಲ ಅರಸನನ್ನಾಗಿ ಮಾಡಿದರು. ಆದರೆ 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ಈ ರಾಜಕುಮಾರನನ್ನು ಅರಸೊತ್ತಿಗೆಯಿಂದ ಕಿತ್ತೆಸೆದು ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಒಂದು ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಸಪ್ಟೆಂಬರ್ ೧, ೧೯೬೯ರಂದು ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸ ಮೌಮರ್ ಗಡಾಫಿಯ ಕೈವಶವಾಯಿತು. ಆತ ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕೊನೆಗೆ ಹೇಳಹೆಸರಿಲ್ಲದಂತೆ ನಾಶವಾಗಿಹೋಗಿದ್ದು ಈಗ ಇತಿಹಾಸ.

ಚುನಾವಣೆ ಅಂದ ಮೇಲೆ ಗದ್ದಲ, ಗಲಾಟೆಗಳಿರುವದು ಸರ್ವೇ ಸಾಮಾನ್ಯ. ಇನ್ನು ಲಿಬಿಯಾದ ಚುನುವಾಣೆಯ ಬಗ್ಗೆ ಕೇಳಬೇಕೆ? ಅಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆಯಲ್ಲಿ ಕೊನೆಯಾಗಿ ಎಲ್ಲ ತಣ್ಣಗಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಇಲ್ಲಿ ಗಡಾಫಿಗೆ ಸಾಕಷ್ಟುಜನ ಬೆಂಬಲಿಗರಿರುವದರಿಂದ ಅವರ ಮಧ್ಯ ಮತ್ತು ಹಂಗಾಮಿ ಸರಕಾರ NTC ಯ ಮಧ್ಯ ಆಗಾಗ ಘರ್ಷಣೆಗಳೇರ್ಪಡುತ್ತಿದ್ದವು. ಅವರನ್ನು ಹತ್ತಿಕ್ಕಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಚುನಾವಣೆಯ ಹಿಂದಿನ ದಿನದವರೆಗೂ ಆಗಾಗ ಅಲ್ಲಲ್ಲಿ ಏನಾದರೊಂದು ಕೆಟ್ಟಘಟನೆ ಜರಗುತ್ತಲಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿದ್ದರೂ ಚುನಾವಣೆಗೆ ಸಂಬಂಧಪಟ್ಟಹಾಗೆ ಹೇಳಬೇಕೆಂದರೆ ಗಡಾಫಿ ಬೆಂಬಲಿಗರಿಗೆ ಮತ್ತು ಆತನ ಅಧಿಕಾರದ ಅವಧಿಯಲ್ಲಿದ್ದ ಅಧಿಕಾರಿಗಳಿಗೆ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ ಇದ್ದುದಕ್ಕಾಗಿ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ಇನ್ನು ಬೆಂಗಾಜಿಯ ಪೂರ್ವಭಾಗದ ಜನ ನಮ್ಮದು ದೊಡ್ಡ ಕ್ಷೇತ್ರವಾಗಿದ್ದರಿಂದ ಹೆಚ್ಚು ಟಿಕೇಟುಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದರು. ಅವರು ಕೇಳಿದಷ್ಟು ಟಿಕೇಟುಗಳು ಸಿಗದೆ ಹೋದಾಗ ನೇರವಾಗಿ ಚುನಾವಣಾ ಕಮಿಷನರ್ ಕಛೇರಿಗೆ ದಾಳಿಯಿಟ್ಟು ಅಲ್ಲಿಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಇನ್ನು ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಚುನಾವಣೆ ನಡೆಯಲಿ. ಸಂವಿಧಾನವೇ ಇಲ್ಲದ ಮೆಲೆ ಅದ್ಹೇಗೆ ಚುನಾವಣೆಗಳನ್ನು ನಡೆಸುತ್ತೀರಿ? ಎಂದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಚುನಾವಣೆಯ ಹಿಂದಿನ ದಿವಸ ಪೂರ್ವ ಬೆಂಗಾಜಿಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಇದಲ್ಲದೆ ಬೆಂಗಾಜಿಯ ಮೆಡಿಕಲ್ ಕಾಲೇಜಿನ ಮೇಲೆಯೂ ಸಹ ದಾಳಿ ನಡೆದಿದೆ. ಈ ಎಲ್ಲದರ ಮಧ್ಯ ಸಾಕಷ್ಟು ಬಿಗಿಭದ್ರತೆಗಳ ನಡುವೆ ಹಂಗಾಮಿ ಸರಕಾರ ಚುನಾವಣೆಗಳನ್ನು ಜುಲೈ ೭, ೨೦೧೨ರಂದು ಒಟ್ಟು ೭೨ ಕ್ಷೇತ್ರಗಳಲ್ಲಿ ನಡಿಸಿತು. ಆ ಪೈಕಿ ೧೨೦ ಸ್ವತಂತ್ರ ಅಬ್ಯರ್ಥಿಗಳು ಹಾಗೂ ೮೦ ಬೇರೆಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರು. ಮತದಾನ ನಡೆದಿದ್ದು ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ. ಇದಲ್ಲದೆ ಬಹಳಷ್ಟು ಲಿಬಿಯನ್ ನಾಗರಿಕರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜೋರ್ಡಾನ್, ಬ್ರಿಟನ್ನಲ್ಲಿ ನೆಲಿಸಿದ್ದರಿಂದ ಅಲ್ಲೆಲ್ಲಾ ಮತಗಟ್ಟೆಗಳನ್ನು ಆರಂಭಿಸಿದ್ದರು. ಅವರಿಗೆಲ್ಲಾ ಒಂದು ವಾರದಷ್ಟು ಕಾಲದ ಗಡುವನ್ನು ಕೊಟ್ಟು ಬೆಳಿಗ್ಗೆ ೯ರಿಂದ ಸಂಜೆ ೫ರ ಒಳಗೆ ಒಂದು ವಾರದ ಅವಧಿಯಲ್ಲಿ ಯಾವಾಗಬೇಕಾದರು ಬಂದು ಮತಹಾಕಲು ಅನುಕೂಲಮಾಡಿಕೊಟ್ಟಿದ್ದರು.

ಚುನಾವಣೆ ಸಿದ್ಧತೆಯ ಮುಂಚೆ ತೆಗೆದ ಮತಪೆಟ್ಟಿಗೆಯ ಚಿತ್ರ
ಅಂದು ಸುಮಾರು ಅರ್ಧ ಶತಮಾನದ ನಂತರ ಲಿಬಿಯಾ ಚುನಾವಣೆಯನ್ನು ನಡೆಸಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಬಹಳಷ್ಟು ಜನಕ್ಕೆ ಇದೇ ಮೊದಲ ಚುನಾವಣೆಯಾಗಿತ್ತು. ಮತಗಟ್ಟೆಯ ಒಳಕ್ಕೆ ಹೋಗುವ ಮುನ್ನ ಮತದಾರರನ್ನು ಸಾಕಷ್ಟು ಸೆಕ್ಯೂರಿಟಿ ತಪಾಸಣೆಗೆ ಒಳಪಡಿಸಿ ಒಳಗೆ ಕಳಿಸಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿ ಮತಗಟ್ಟೆಯಲ್ಲಿ ಸಾಕಷ್ಟು ಜನ ಪೋಲಿಷರನ್ನು ನೇಮಿಸಲಾಗಿತ್ತು. ಹೀಗಿದ್ದೂ ಮತದಾನ ಭಯ, ಆತಂಕಗಳ ನಡುವೆಯೇ ಆರಂಭವಾಯಿತು. ಕೆಲವರು ಉತ್ಸಾಹದಿಂದ ಭಾಗವಹಿಸಿದರೆ, ಇನ್ನು ಕೆಲವರು ಅರೆಮನಸ್ಸಿನಿಂದ ಭಾಗವಹಿಸಿದರು. ಮತ್ತೆ ಕೆಲವರು ಮೊಟ್ಟಮೊದಲಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವದಕ್ಕೋಸ್ಕರ ಭಾಗವಹಿಸಿದರು. ಇದೀಗ ಎಣಿಕೆಯೆಲ್ಲಾ ಮುಗಿದು ಫಲಿತಾಂಶ ಹೊರಬಂದಿದ್ದು National Forces Alliance (NFA) ಬಹುಮತಗಳಿಸಿರುವದು ಬಹುತೇಕ ಖಚಿತವಾಗಿದೆ. ಲಿಬಿಯಾ ಪ್ರಜಾಪ್ರಭುತ್ವ ಸರಕಾರ ರಚನೆಗಾಗಿ ಉತ್ಸಾಹದಿಂದ ಮುನ್ನುಗ್ಗುತ್ತಿದೆ.
ಲಿಬಿಯಾದಲ್ಲಿ ಎದ್ದ ಕ್ರಾಂತಿ ತಣ್ಣಗಾದ ಮೇಲೆ ಈಗ್ಗೆ ಆರು ತಿಂಗಳ ಹಿಂದೆ ನಾನು ಮತ್ತೆ ನಮ್ಮ ವಿಶ್ವವಿದ್ಯಾನಿಲಯದ ಕರೆಯ ಮೇರೆಗೆ ನನ್ನ ಕೆಲಸಕ್ಕೆ ಬಂದು ಹಾಜರಾಗಿದ್ದೆ. ಆ ಪ್ರಕಾರ ನಾನಿಲ್ಲಿಗೆ ಬಂದಿಳಿದಾಗ ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ ಹೆಮ್ಮೆ ಈ ಜನರಲ್ಲಿರುತ್ತದೆ, ಹೊಸ ಗಾಳಿ ಬೀಸುತ್ತಿರುತ್ತದೆ. ಹೊಸ ಕನಸುಗಳು, ಹೊಸ ಚಿಂತನೆಗಳಿಗಾಗಿ ಜನರು ತುಡಿಯುತ್ತಿರುತ್ತಾರೆಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಈ ವಿಷಯದ ಕುರಿತಂತೆ ನಾನು ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸುತ್ತಾ ಹೋದೆ. ಆಗ ನನಗೆ ಸಿಕ್ಕ ಚಿತ್ರಣ ಅಚ್ಚರಿಯನ್ನು ಮೂಡಿಸಿತ್ತು. ಅವರು ಹೇಳಿದ್ದು ಹೀಗಿತ್ತು: “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ತಮಗೇ ಸೆಡ್ದು ಹೊಡೆದು ನಿಲ್ಲುತ್ತಾನೆ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರವಾದ ದ್ವೇಷವಿತ್ತು ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಹೀಗಾಗಿ ಅವನನ್ನು ಮುಗಿಸಿದರು. ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಮೇಲಾಗಿ ಗಡಾಫಿ ಇಡಿ ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಒಗ್ಗೂಡಿಸಿ “ಯುನೈಟೆಡ್ ನೇಶನ್ಸ್ ಆಫ್ ಆಫ್ರಿಕಾ” ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದ. ಒಂದುವೇಳೆ ಆಫ್ರಿಕಾ ಖಂಡದ ಎಲ್ಲ ರಾಷ್ಟ್ರಗಳು ಒಗ್ಗೂಡಿದ್ದರೆ ಎಲ್ಲ ರೀತಿಯಿಂದ ಅಮೆರಿಕಾಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ನು ಯಾವ ಭಯವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಟ್ಟಿದ್ದರು. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದ್ದೆ. ಅದಕ್ಕವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ ಮತ್ತು ಮಿತ್ರರಾಷ್ಟ್ರಗಳ ಪಾಲಾಗುತ್ತಿದೆ.” ಎಂದು ಕಣ್ಣೀರಿಟ್ಟಿದ್ದರು. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸಿದ್ದರು. ಅದೇನೆಂದರೆ ಈ ಅಮೆರಿಕನ್ನರಿಗೆ ಮತ್ತು ಮಿತ್ರರಾಷ್ಟ್ರಗಳಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಎಲ್ಲ ರೀತಿಯಿಂದ ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತ್ತಿರಲಿಲ್ಲ ಹಾಗೂ ಅವರ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಅಭಿವೃದ್ಧಿಗೆ ಭಾರಿ ಹಿನ್ನೆಡೆಯುನ್ನುಂಟು ಮಾಡಲಿದ್ದವು. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಟ್ಟಿದ್ದರು.

ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಸ್ವತಂತ್ರ ಅಬ್ಯರ್ಥಿ
ಈಗ ಅದೇ ಜನ ಬೇರೆ ದಾಟಯಲ್ಲಿ ಮಾತನಾಡುತ್ತಿದ್ದಾರೆ. ಹೋದವನು ಹೋದ ಇನ್ನು ಮುಂದಿನ ಬದುಕನ್ನು ನಾವು ಬದುಕಬೆಕಲ್ಲ. ಏನು ಮಾಡುವದು? ಸತ್ತವರಿಗಾಗಿ ಎಷ್ಟು ದಿನ ಅಂತಾ ಅಳುತ್ತಾ ಕೂರೋಕಾಗುತ್ತೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ವ್ಯಕ್ತಿಗಿಂತ ಬದುಕು ಮುಖ್ಯವಾಗುತ್ತದೆ ಎನ್ನುವದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಕೆಲವರು ಗಡಾಫಿಯ ಆಡಳಿತವನ್ನು ನೆನೆಯುತ್ತಾ ಅಂಥದೇ ಇನ್ನೊಂದು ಬರಲಿ ಎಂದು ಆಶಿಸುತ್ತಿದ್ದಾರೆ. ಇನ್ನು ಕೆಲವರು “Shit ಗಡಾಫಿ! ಅವನ ಕಾಲ ಮುಗಿಯಿತು. ಈಗೇನಿದ್ದರೂ ಹೊಸ ಸರಕಾರ, ಹೊಸ ಆಡಳಿತ, ಎಲ್ಲವೂ ಹೊಸತು” ಎಂದು ಹೇಳುತ್ತಾ ಹೊಸತನಕ್ಕೆ ಮುಖಮಾಡುತ್ತಿದ್ದಾರೆ. ನಾನು ಕ್ರಾಂತಿಯೆಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೆ ಬಂದಿಳಿದ ಹೊಸತರಲ್ಲಿ ಇಲ್ಲಿಯ ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರಾಗಿದ್ದರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. ಸರಕಾರ ಜನರ ಮೆಲೆ ಒತ್ತಡದ ತಂತ್ರವನ್ನು ಹೇರುವದರ ಮೂಲಕ ಅವರನ್ನು ತನ್ನತ್ತ ಬಗ್ಗಿಸಿಕೊಂಡಿತ್ತು. ಮೊನ್ನೆ ಕೂಡ ಗಡಾಫಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿರುವ ಇಲ್ಲಿನ (ಘಾಟ್ನ) ಕಾಲೊನಿಯೊಂದಕ್ಕೆ ಎರಡ ತಿಂಗಳ ಕಾಲ ನೀರು ಪೂರೈಸದೆ ಇದ್ದುದರಿಂದ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಂಗಾಮಿ ಸರಕಾರ ಅವರನ್ನು ಹತ್ತಿಕ್ಕಿ ನೀರು ಬಿಡುತ್ತೇವೆ, ನಮ್ಮನ್ನು ಒಪ್ಪಿಕೊಳ್ಳಿ ಎಂದು ಹೆದರಿಸಿತ್ತು. ಇದೀಗ ಅವರು ಹಂಗಾಮಿ ಸರಕಾರಕ್ಕೆ ಜೈ ಹೇಳಿ ಎಲ್ಲವನ್ನೂ ಸುಲಭವಾಗಿಸಿಕೊಂಡಿದ್ದಾರೆ. ಮೊನ್ನೆ ಹಂಗಾಮಿ ಸರಕಾರ ದಕ್ಷಿಣ ಭಾಗದ ಎಲ್ಲ ಸರಕಾರಿ ಕಛೇರಿಗಳಿಗೆ ಗಡಾಫಿಯ ಹೆಸರನ್ನು ಎಲ್ಲೂ ಎತ್ತಕೂಡದು ಹಾಗೆ ಒಂದುವೇಳೆ ಉಪಯೋಗಿಸಿದರೆ ಅಂಥವರನ್ನು ಉಗ್ರವಾಗಿ ಶಿಕ್ಷಿಸಲಾಗುವದು ಎನ್ನುವ ಸುತ್ತೋಲೆಯನ್ನು ಹೊರಡಿಸುವದರ ಮೂಲಕ ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಿದ್ದರು. ಜೊತೆಗೆ ಚುನಾವಣೆಯ ನಂತರ ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನುವ ಭರವಸೆಯನ್ನೂ ನೀಡೀದ್ದಾರೆ.

ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಮತ್ತೊಬ್ಬ ಸ್ವತಂತ್ರ ಅಬ್ಯರ್ಥಿ
ಈಗ ಜನ ಯಾವ ಸರಕಾರ ಬಂದರೇನಂತೆ ನಮಗೆ ಒಳ್ಳೆಯದು ಮಾಡಿದರೆ ಸಾಕು ಎಂದು ನಿಟ್ಟುಸಿರಿಡುತ್ತಿದ್ದಾರೆ. ಅದು ಅವರ ಭಯವೋ? ಪ್ರೀತಿಯೋ? ಅಥವಾ ಬದಲಾವಣೆಯತ್ತ ಹೊಸಹೆಜ್ಜೆಯೋ? ಅಂತೂ ಲಿಬಿಯಾದ ಜನತೆ ಹೊಸತನವನ್ನು ಒಪ್ಪಿಕೊಳ್ಳುತ್ತಾ ಹೊಸದಿಕ್ಕಿನತ್ತ ಹೆಜ್ಜೆಹಾಕುತ್ತಿದ್ದಾರೆ. ಎಲ್ಲರೀತಿಯಿಂದ ಲಿಬಿಯಾಕ್ಕೆ ಹೊಸ ಭವಿಷ್ಯ ಸಿಗುವ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತಿವೆ. ಕಾಲಾಯ ತಸ್ಮೇ ನಮಃ!
-ಉದಯ್ ಇಟಗಿ

ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಅಂದರೆ ಜುಲೈ ೭ ರಂದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ರಾಜ್ಯ ಸ್ಥಾಪನೆಗಾಗಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆದು ಹೊಸ ಇತಿಹಾಸ ಸೃಷ್ಟಿಸಿದವು. ಮಾತ್ರವಲ್ಲ ಸುಮಾರು ಐವತ್ತು ವರ್ಷಗಳ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆಗೂ ಪಾತ್ರವಾದವು. ಹಾಗೆ ನೋಡಿದರೆ ಇದು ಲಿಬಿಯಾದ ಎರಡನೆ ಚುನಾವಣೆ. ಮೊಟ್ಟ ಮೊದಲನೆಯ ಚುನಾವಣೆ ನಡೆದಿದ್ದು ಫ಼ೆಬ್ರುವರಿ ೧೯, ೧೯೫೨ರಂದು. ಲಿಬಿಯಾ ಆಗಷ್ಟೆ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆಹೊಂದಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಯೂರೋಪಿಯನ್ನರ ದಾಸ್ಯದಿಂದ ಮುಕ್ತಿಹೊಂದಿದ ಆಫ್ರಿಕಾ ಖಂಡದ ಮೊಟ್ಟಮೊದಲ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಗಿನ ದೊರೆ ಮೊದಲನೇ ಇದ್ರಿಸ್ ವಿಶ್ವಸಂಸ್ಥೆಯ ಜೊತೆ ಲಿಬಿಯಾದ ಸಂಧಾನುಕಾರನಾಗಿದ್ದುಕೊಂಡು ಆ ದೇಶಕ್ಕೆ ಸ್ವಾತಂತ್ರ್ಯವನ್ನು (ಡಿಸೆಂಬರ್ ೨೪, ೧೯೫೧ರಂದು) ದಕ್ಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ. ಹೀಗೆ ಪರಕೀಯರಿಂದ ಬಿಡುಗಡೆ ಹೊಂದಿದ ದೇಶಕ್ಕೆ ಹೊಸ ಸರಕಾರವೊಂದನ್ನು ಸ್ಥಾಪಿಸುವ ಹುಕಿಯಿತ್ತು. ಅದು ಪ್ರಜಾಪ್ರಭುತ್ವದ ರೀತಿಯಲ್ಲಿದ್ದರೆ ಸರಿಯೆಂದುಕೊಂಡು ಎಲ್ಲ ಸೇರಿ ದೇಶದ ತುಂಬಾ ಫೆಬ್ರುವರಿ ೧೯, ೧೯೫೨ರಂದು ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದರು. ಇಪ್ಪತ್ತೊಂದರ ಮೇಲ್ಪಟ್ಟ ಎಲ್ಲ ನಾಗರಿಕರಿಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಕೆಲವು ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ರಹಸ್ಯ ಮತದಾನ ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಮತಪೆಟ್ಟಿಗೆಯಲ್ಲಿ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಮತದಾರರು ಯಾರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ ಎನ್ನುವ ಹೇಳಿಕೆಯನ್ನು ಕಮಿಟಿಯ ಮುಂದೆ ಧ್ವನಿಮುದ್ರಿಸಲಾಯಿತು.

೧೯೫೨ರಲ್ಲಿ ನಡೆದ ಚುನಾವಣೆಯ ಒಂದು ಚಿತ್ರ
ಆಗ ಅಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ನನ್ನು ಬೆಂಬಲಿಸುವ ಗುಂಪು. ಇನ್ನೊಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಶಿರ್ ಬೇ ಸಾದವಿಯನ್ನು ಬೆಂಬಲಿಸುವ ಗುಂಪು. ಚುನಾವಣೆಯಲ್ಲಿ ಒಟ್ಟು ೧೪೧ ಅಬ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಹೆಚ್ಚಿನವರು ಸ್ವತಂತ್ರ ಅಬ್ಯರ್ಥಿಗಳು. ಫಲಿತಾಂಶ ಹೊರಬಂದಾಗ ಕಾಗ್ರೆಸ್ ಪಕ್ಷ ಟ್ರಿಪೋಲಿಯಲ್ಲಿ ಗೆದ್ದಿತ್ತು. ಆದರೆ ಬಹಳಷ್ಟು ಸೀಟುಗಳನ್ನು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ಬಾಚಿಕೊಂಡಿದ್ದ. ಅಲ್ಲಿಗೆ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿ ವಿರೋಧ ಪಕ್ಷದ ಪಡೆ ಹೋರಾಟಕ್ಕೆ ಇಳಿಯಿತು. ನೋಡನೋಡುತ್ತಿದ್ದಂತೆ ಹೋರಾಟ ಹಿಂಸೆಗೆ ತಿರುಗಿ ಘಟನೆಯಲ್ಲಿ ಒಂದಿಬ್ಬರು ಸತ್ತು ಸಾಕಷ್ಟು ಜನ ಗಾಯಗೊಂಡರು. ಈ ಘಟನೆ ಇಡಿ ಚುನಾವಣೆ ಪ್ರಕ್ರಿಯೆಯ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿ ಆಗಷ್ಟೆ ಮುಗಿದ ಚುನಾವಣೆಯನ್ನು ರದ್ದುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮುಂದೆ ಲಿಬಿಯಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಒಂದನೇಯ ಇದ್ರಿಸ್ನಿಗೆ ಅಧಿಕಾರವನ್ನು ವಹಿಸುವದರ ಮೂಲಕ ಅವನನ್ನು ಸ್ವತಂತ್ರ ಲಿಬಿಯಾದ ಮೊಟ್ಟಮೊದಲ ಅರಸನನ್ನಾಗಿ ಮಾಡಿದರು. ಆದರೆ 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ಈ ರಾಜಕುಮಾರನನ್ನು ಅರಸೊತ್ತಿಗೆಯಿಂದ ಕಿತ್ತೆಸೆದು ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಒಂದು ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಸಪ್ಟೆಂಬರ್ ೧, ೧೯೬೯ರಂದು ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸ ಮೌಮರ್ ಗಡಾಫಿಯ ಕೈವಶವಾಯಿತು. ಆತ ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕೊನೆಗೆ ಹೇಳಹೆಸರಿಲ್ಲದಂತೆ ನಾಶವಾಗಿಹೋಗಿದ್ದು ಈಗ ಇತಿಹಾಸ.

ಚುನಾವಣೆ ಅಂದ ಮೇಲೆ ಗದ್ದಲ, ಗಲಾಟೆಗಳಿರುವದು ಸರ್ವೇ ಸಾಮಾನ್ಯ. ಇನ್ನು ಲಿಬಿಯಾದ ಚುನುವಾಣೆಯ ಬಗ್ಗೆ ಕೇಳಬೇಕೆ? ಅಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆಯಲ್ಲಿ ಕೊನೆಯಾಗಿ ಎಲ್ಲ ತಣ್ಣಗಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಇಲ್ಲಿ ಗಡಾಫಿಗೆ ಸಾಕಷ್ಟುಜನ ಬೆಂಬಲಿಗರಿರುವದರಿಂದ ಅವರ ಮಧ್ಯ ಮತ್ತು ಹಂಗಾಮಿ ಸರಕಾರ NTC ಯ ಮಧ್ಯ ಆಗಾಗ ಘರ್ಷಣೆಗಳೇರ್ಪಡುತ್ತಿದ್ದವು. ಅವರನ್ನು ಹತ್ತಿಕ್ಕಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಚುನಾವಣೆಯ ಹಿಂದಿನ ದಿನದವರೆಗೂ ಆಗಾಗ ಅಲ್ಲಲ್ಲಿ ಏನಾದರೊಂದು ಕೆಟ್ಟಘಟನೆ ಜರಗುತ್ತಲಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿದ್ದರೂ ಚುನಾವಣೆಗೆ ಸಂಬಂಧಪಟ್ಟಹಾಗೆ ಹೇಳಬೇಕೆಂದರೆ ಗಡಾಫಿ ಬೆಂಬಲಿಗರಿಗೆ ಮತ್ತು ಆತನ ಅಧಿಕಾರದ ಅವಧಿಯಲ್ಲಿದ್ದ ಅಧಿಕಾರಿಗಳಿಗೆ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ ಇದ್ದುದಕ್ಕಾಗಿ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ಇನ್ನು ಬೆಂಗಾಜಿಯ ಪೂರ್ವಭಾಗದ ಜನ ನಮ್ಮದು ದೊಡ್ಡ ಕ್ಷೇತ್ರವಾಗಿದ್ದರಿಂದ ಹೆಚ್ಚು ಟಿಕೇಟುಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದರು. ಅವರು ಕೇಳಿದಷ್ಟು ಟಿಕೇಟುಗಳು ಸಿಗದೆ ಹೋದಾಗ ನೇರವಾಗಿ ಚುನಾವಣಾ ಕಮಿಷನರ್ ಕಛೇರಿಗೆ ದಾಳಿಯಿಟ್ಟು ಅಲ್ಲಿಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಇನ್ನು ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಚುನಾವಣೆ ನಡೆಯಲಿ. ಸಂವಿಧಾನವೇ ಇಲ್ಲದ ಮೆಲೆ ಅದ್ಹೇಗೆ ಚುನಾವಣೆಗಳನ್ನು ನಡೆಸುತ್ತೀರಿ? ಎಂದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಚುನಾವಣೆಯ ಹಿಂದಿನ ದಿವಸ ಪೂರ್ವ ಬೆಂಗಾಜಿಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಇದಲ್ಲದೆ ಬೆಂಗಾಜಿಯ ಮೆಡಿಕಲ್ ಕಾಲೇಜಿನ ಮೇಲೆಯೂ ಸಹ ದಾಳಿ ನಡೆದಿದೆ. ಈ ಎಲ್ಲದರ ಮಧ್ಯ ಸಾಕಷ್ಟು ಬಿಗಿಭದ್ರತೆಗಳ ನಡುವೆ ಹಂಗಾಮಿ ಸರಕಾರ ಚುನಾವಣೆಗಳನ್ನು ಜುಲೈ ೭, ೨೦೧೨ರಂದು ಒಟ್ಟು ೭೨ ಕ್ಷೇತ್ರಗಳಲ್ಲಿ ನಡಿಸಿತು. ಆ ಪೈಕಿ ೧೨೦ ಸ್ವತಂತ್ರ ಅಬ್ಯರ್ಥಿಗಳು ಹಾಗೂ ೮೦ ಬೇರೆಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರು. ಮತದಾನ ನಡೆದಿದ್ದು ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ. ಇದಲ್ಲದೆ ಬಹಳಷ್ಟು ಲಿಬಿಯನ್ ನಾಗರಿಕರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜೋರ್ಡಾನ್, ಬ್ರಿಟನ್ನಲ್ಲಿ ನೆಲಿಸಿದ್ದರಿಂದ ಅಲ್ಲೆಲ್ಲಾ ಮತಗಟ್ಟೆಗಳನ್ನು ಆರಂಭಿಸಿದ್ದರು. ಅವರಿಗೆಲ್ಲಾ ಒಂದು ವಾರದಷ್ಟು ಕಾಲದ ಗಡುವನ್ನು ಕೊಟ್ಟು ಬೆಳಿಗ್ಗೆ ೯ರಿಂದ ಸಂಜೆ ೫ರ ಒಳಗೆ ಒಂದು ವಾರದ ಅವಧಿಯಲ್ಲಿ ಯಾವಾಗಬೇಕಾದರು ಬಂದು ಮತಹಾಕಲು ಅನುಕೂಲಮಾಡಿಕೊಟ್ಟಿದ್ದರು.

ಚುನಾವಣೆ ಸಿದ್ಧತೆಯ ಮುಂಚೆ ತೆಗೆದ ಮತಪೆಟ್ಟಿಗೆಯ ಚಿತ್ರ
ಅಂದು ಸುಮಾರು ಅರ್ಧ ಶತಮಾನದ ನಂತರ ಲಿಬಿಯಾ ಚುನಾವಣೆಯನ್ನು ನಡೆಸಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಬಹಳಷ್ಟು ಜನಕ್ಕೆ ಇದೇ ಮೊದಲ ಚುನಾವಣೆಯಾಗಿತ್ತು. ಮತಗಟ್ಟೆಯ ಒಳಕ್ಕೆ ಹೋಗುವ ಮುನ್ನ ಮತದಾರರನ್ನು ಸಾಕಷ್ಟು ಸೆಕ್ಯೂರಿಟಿ ತಪಾಸಣೆಗೆ ಒಳಪಡಿಸಿ ಒಳಗೆ ಕಳಿಸಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿ ಮತಗಟ್ಟೆಯಲ್ಲಿ ಸಾಕಷ್ಟು ಜನ ಪೋಲಿಷರನ್ನು ನೇಮಿಸಲಾಗಿತ್ತು. ಹೀಗಿದ್ದೂ ಮತದಾನ ಭಯ, ಆತಂಕಗಳ ನಡುವೆಯೇ ಆರಂಭವಾಯಿತು. ಕೆಲವರು ಉತ್ಸಾಹದಿಂದ ಭಾಗವಹಿಸಿದರೆ, ಇನ್ನು ಕೆಲವರು ಅರೆಮನಸ್ಸಿನಿಂದ ಭಾಗವಹಿಸಿದರು. ಮತ್ತೆ ಕೆಲವರು ಮೊಟ್ಟಮೊದಲಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವದಕ್ಕೋಸ್ಕರ ಭಾಗವಹಿಸಿದರು. ಇದೀಗ ಎಣಿಕೆಯೆಲ್ಲಾ ಮುಗಿದು ಫಲಿತಾಂಶ ಹೊರಬಂದಿದ್ದು National Forces Alliance (NFA) ಬಹುಮತಗಳಿಸಿರುವದು ಬಹುತೇಕ ಖಚಿತವಾಗಿದೆ. ಲಿಬಿಯಾ ಪ್ರಜಾಪ್ರಭುತ್ವ ಸರಕಾರ ರಚನೆಗಾಗಿ ಉತ್ಸಾಹದಿಂದ ಮುನ್ನುಗ್ಗುತ್ತಿದೆ.

ಲಿಬಿಯಾದಲ್ಲಿ ಎದ್ದ ಕ್ರಾಂತಿ ತಣ್ಣಗಾದ ಮೇಲೆ ಈಗ್ಗೆ ಆರು ತಿಂಗಳ ಹಿಂದೆ ನಾನು ಮತ್ತೆ ನಮ್ಮ ವಿಶ್ವವಿದ್ಯಾನಿಲಯದ ಕರೆಯ ಮೇರೆಗೆ ನನ್ನ ಕೆಲಸಕ್ಕೆ ಬಂದು ಹಾಜರಾಗಿದ್ದೆ. ಆ ಪ್ರಕಾರ ನಾನಿಲ್ಲಿಗೆ ಬಂದಿಳಿದಾಗ ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ ಹೆಮ್ಮೆ ಈ ಜನರಲ್ಲಿರುತ್ತದೆ, ಹೊಸ ಗಾಳಿ ಬೀಸುತ್ತಿರುತ್ತದೆ. ಹೊಸ ಕನಸುಗಳು, ಹೊಸ ಚಿಂತನೆಗಳಿಗಾಗಿ ಜನರು ತುಡಿಯುತ್ತಿರುತ್ತಾರೆಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಈ ವಿಷಯದ ಕುರಿತಂತೆ ನಾನು ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸುತ್ತಾ ಹೋದೆ. ಆಗ ನನಗೆ ಸಿಕ್ಕ ಚಿತ್ರಣ ಅಚ್ಚರಿಯನ್ನು ಮೂಡಿಸಿತ್ತು. ಅವರು ಹೇಳಿದ್ದು ಹೀಗಿತ್ತು: “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ತಮಗೇ ಸೆಡ್ದು ಹೊಡೆದು ನಿಲ್ಲುತ್ತಾನೆ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರವಾದ ದ್ವೇಷವಿತ್ತು ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಹೀಗಾಗಿ ಅವನನ್ನು ಮುಗಿಸಿದರು. ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಮೇಲಾಗಿ ಗಡಾಫಿ ಇಡಿ ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಒಗ್ಗೂಡಿಸಿ “ಯುನೈಟೆಡ್ ನೇಶನ್ಸ್ ಆಫ್ ಆಫ್ರಿಕಾ” ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದ. ಒಂದುವೇಳೆ ಆಫ್ರಿಕಾ ಖಂಡದ ಎಲ್ಲ ರಾಷ್ಟ್ರಗಳು ಒಗ್ಗೂಡಿದ್ದರೆ ಎಲ್ಲ ರೀತಿಯಿಂದ ಅಮೆರಿಕಾಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ನು ಯಾವ ಭಯವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಟ್ಟಿದ್ದರು. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದ್ದೆ. ಅದಕ್ಕವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ ಮತ್ತು ಮಿತ್ರರಾಷ್ಟ್ರಗಳ ಪಾಲಾಗುತ್ತಿದೆ.” ಎಂದು ಕಣ್ಣೀರಿಟ್ಟಿದ್ದರು. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸಿದ್ದರು. ಅದೇನೆಂದರೆ ಈ ಅಮೆರಿಕನ್ನರಿಗೆ ಮತ್ತು ಮಿತ್ರರಾಷ್ಟ್ರಗಳಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಎಲ್ಲ ರೀತಿಯಿಂದ ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತ್ತಿರಲಿಲ್ಲ ಹಾಗೂ ಅವರ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಅಭಿವೃದ್ಧಿಗೆ ಭಾರಿ ಹಿನ್ನೆಡೆಯುನ್ನುಂಟು ಮಾಡಲಿದ್ದವು. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಟ್ಟಿದ್ದರು.

ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಸ್ವತಂತ್ರ ಅಬ್ಯರ್ಥಿ
ಈಗ ಅದೇ ಜನ ಬೇರೆ ದಾಟಯಲ್ಲಿ ಮಾತನಾಡುತ್ತಿದ್ದಾರೆ. ಹೋದವನು ಹೋದ ಇನ್ನು ಮುಂದಿನ ಬದುಕನ್ನು ನಾವು ಬದುಕಬೆಕಲ್ಲ. ಏನು ಮಾಡುವದು? ಸತ್ತವರಿಗಾಗಿ ಎಷ್ಟು ದಿನ ಅಂತಾ ಅಳುತ್ತಾ ಕೂರೋಕಾಗುತ್ತೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ವ್ಯಕ್ತಿಗಿಂತ ಬದುಕು ಮುಖ್ಯವಾಗುತ್ತದೆ ಎನ್ನುವದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಕೆಲವರು ಗಡಾಫಿಯ ಆಡಳಿತವನ್ನು ನೆನೆಯುತ್ತಾ ಅಂಥದೇ ಇನ್ನೊಂದು ಬರಲಿ ಎಂದು ಆಶಿಸುತ್ತಿದ್ದಾರೆ. ಇನ್ನು ಕೆಲವರು “Shit ಗಡಾಫಿ! ಅವನ ಕಾಲ ಮುಗಿಯಿತು. ಈಗೇನಿದ್ದರೂ ಹೊಸ ಸರಕಾರ, ಹೊಸ ಆಡಳಿತ, ಎಲ್ಲವೂ ಹೊಸತು” ಎಂದು ಹೇಳುತ್ತಾ ಹೊಸತನಕ್ಕೆ ಮುಖಮಾಡುತ್ತಿದ್ದಾರೆ. ನಾನು ಕ್ರಾಂತಿಯೆಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೆ ಬಂದಿಳಿದ ಹೊಸತರಲ್ಲಿ ಇಲ್ಲಿಯ ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರಾಗಿದ್ದರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. ಸರಕಾರ ಜನರ ಮೆಲೆ ಒತ್ತಡದ ತಂತ್ರವನ್ನು ಹೇರುವದರ ಮೂಲಕ ಅವರನ್ನು ತನ್ನತ್ತ ಬಗ್ಗಿಸಿಕೊಂಡಿತ್ತು. ಮೊನ್ನೆ ಕೂಡ ಗಡಾಫಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿರುವ ಇಲ್ಲಿನ (ಘಾಟ್ನ) ಕಾಲೊನಿಯೊಂದಕ್ಕೆ ಎರಡ ತಿಂಗಳ ಕಾಲ ನೀರು ಪೂರೈಸದೆ ಇದ್ದುದರಿಂದ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಂಗಾಮಿ ಸರಕಾರ ಅವರನ್ನು ಹತ್ತಿಕ್ಕಿ ನೀರು ಬಿಡುತ್ತೇವೆ, ನಮ್ಮನ್ನು ಒಪ್ಪಿಕೊಳ್ಳಿ ಎಂದು ಹೆದರಿಸಿತ್ತು. ಇದೀಗ ಅವರು ಹಂಗಾಮಿ ಸರಕಾರಕ್ಕೆ ಜೈ ಹೇಳಿ ಎಲ್ಲವನ್ನೂ ಸುಲಭವಾಗಿಸಿಕೊಂಡಿದ್ದಾರೆ. ಮೊನ್ನೆ ಹಂಗಾಮಿ ಸರಕಾರ ದಕ್ಷಿಣ ಭಾಗದ ಎಲ್ಲ ಸರಕಾರಿ ಕಛೇರಿಗಳಿಗೆ ಗಡಾಫಿಯ ಹೆಸರನ್ನು ಎಲ್ಲೂ ಎತ್ತಕೂಡದು ಹಾಗೆ ಒಂದುವೇಳೆ ಉಪಯೋಗಿಸಿದರೆ ಅಂಥವರನ್ನು ಉಗ್ರವಾಗಿ ಶಿಕ್ಷಿಸಲಾಗುವದು ಎನ್ನುವ ಸುತ್ತೋಲೆಯನ್ನು ಹೊರಡಿಸುವದರ ಮೂಲಕ ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಿದ್ದರು. ಜೊತೆಗೆ ಚುನಾವಣೆಯ ನಂತರ ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನುವ ಭರವಸೆಯನ್ನೂ ನೀಡೀದ್ದಾರೆ.

ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಮತ್ತೊಬ್ಬ ಸ್ವತಂತ್ರ ಅಬ್ಯರ್ಥಿ
ಈಗ ಜನ ಯಾವ ಸರಕಾರ ಬಂದರೇನಂತೆ ನಮಗೆ ಒಳ್ಳೆಯದು ಮಾಡಿದರೆ ಸಾಕು ಎಂದು ನಿಟ್ಟುಸಿರಿಡುತ್ತಿದ್ದಾರೆ. ಅದು ಅವರ ಭಯವೋ? ಪ್ರೀತಿಯೋ? ಅಥವಾ ಬದಲಾವಣೆಯತ್ತ ಹೊಸಹೆಜ್ಜೆಯೋ? ಅಂತೂ ಲಿಬಿಯಾದ ಜನತೆ ಹೊಸತನವನ್ನು ಒಪ್ಪಿಕೊಳ್ಳುತ್ತಾ ಹೊಸದಿಕ್ಕಿನತ್ತ ಹೆಜ್ಜೆಹಾಕುತ್ತಿದ್ದಾರೆ. ಎಲ್ಲರೀತಿಯಿಂದ ಲಿಬಿಯಾಕ್ಕೆ ಹೊಸ ಭವಿಷ್ಯ ಸಿಗುವ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತಿವೆ. ಕಾಲಾಯ ತಸ್ಮೇ ನಮಃ!
-ಉದಯ್ ಇಟಗಿ
ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು- A hypocrite is a person who-but who isn't?
“A hypocrite is a person who--but who isn't?” ಹಾಗಂತ ಖ್ಯಾತ ಇಂಗ್ಲೀಷ್ ಲೇಖಕ ಡಾನ್ ಮಾರ್ಕ್ವಿಜ್ ಒಂದು ಕಡೆ ಹೇಳುತ್ತಾನೆ. ಈ ಮಾತು ಪ್ರತಿಯೊಬ್ಬ ಮನುಷ್ಯನ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅಂದರೆ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಆಷಾಡಭೂತಿಗಳೇ! ಸದಾ ನಮ್ಮ ಅನುಕೂಲಕ್ಕೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಒಳಗೊಂದು ಹೊರಗೊಂದರಂತೆ ಬದುಕುವವರು! ಹೀಗಿದ್ದೂ ನಾವು ಆಗಾಗ ಸಭ್ಯರಂತೆ, ಪ್ರಾಮಾಣಿಕರಂತೆ, ಯೋಗ್ಯರಂತೆ ಮುಖವಾಡ ಹಾಕಿಕೊಳ್ಳಲು ಪ್ರಯತ್ನಿಸುತ್ತೆವೆ. ಆದರೆ ಬೇರೆಯವರನ್ನು ಮಾತ್ರ hypocrite ಅಂತ ಕರೆಯುತ್ತಲೇ ಇರುತ್ತೇವೆ.
ಮೊನ್ನೆ ಏನಾಯಿತೆಂದರೆ ಸ್ನೇಹಿತನೊಬ್ಬ ನನ್ನ ಮನೆಗೆ ಬಂದಿದ್ದ. ಬರುವಾಗ ಆತ ಅರೆಬೆತ್ತಲೆ ಮಾಡೆಲ್ಗಳು ಇರುವ ಮಾಡೆಲಿಂಗ್ ಕ್ಯಾಲೆಂಡೆರೊಂದನ್ನು ನನಗೆ ತಂದುಕೊಟ್ಟ. ನಾವಿಬ್ಬರೂ ಕುಳಿತು ಬಿಕನಿ ತೊಟ್ಟ ಆ ಮಾಡೆಲ್ಗಳ ಫೋಟೋಗಳನ್ನೇ ಮತ್ತೆ ಮತ್ತೆ ನೋಡಿ ಖುಶಿಪಟ್ಟೆವು. ಅವರ ವಿವರಗಳನ್ನು ಕುರಿತು ಚರ್ಚಿಸಿದೆವು. ಅವರ ಜೊತೆ ವಿವಿಧ ಭಂಗಿಗಳಲ್ಲಿ ನಿಂತು ಪೋಸು ಕೊಟ್ಟ ಗಂಡು ಮಾಡೆಲ್ಗಳು ಕೂಡ ಇದ್ದರು. ಆಹಾ, ಎಂಥ ಅದೃಷ್ಟವಂತರು ಅವರು! ಎಂತೆಂಥ ಒಳ್ಳೊಳ್ಳೆ ಮಾಡೆಲ್ಗಳ ಜೊತೆ ನಿಂತೊ ಫೋಟೋ ತೆಗೆಸಿಕೊಳ್ಳುವ ಅವಕಾಶ ಲಭಿಸಿದೆ ಅವರಿಗೆಲ್ಲ! ಒಂದು ಕ್ಷಣ ಅವರ ಬಗ್ಗೆ ಈರ್ಷೆ ಕಾಡಿತು.
ಮರುಕ್ಷಣ ಅನಿಸಿತು ನಾವಿಬ್ಬರೂ ಟ್ರೆಡಿಷನಲ್ ಕುಟುಂಬದಿಂದ ಬಂದವರು. ಈ ವಿಷಯದಲ್ಲಿ ಕನ್ಸರ್ವೇಟಿವ್ ಆಗಿ ಥಿಂಕ್ ಮಾಡುವವರು. ಈ ವೃತ್ತಿಯ ಬಗ್ಗೆ ಕಸಿವಿಸಿ ಬೆಳೆಸಿಕೊಂಡವರು. ನಮ್ಮ ಮನೆಯ ಹೆಣ್ಣುಮಕ್ಕಳೇನಾದರು ಈ ಮಾಡೆಲಿಂಗ್ ವೃತ್ತಿಗೆ ಹೋಗುತ್ತೇನೆಂದರೆ ವಿರೋಧಿಸುವವರು. ಕಮ್ಮಿ ಬಟ್ಟೆ ತೊಟ್ಟು ಮೈ ಪ್ರದರ್ಶಿಸುವದು ಎಷ್ಟೊಂದು ಅಸಹ್ಯ? ಎಂದು ಮೂಗು ಮುರಿಯುವವರು. ಆದರೆ ನಾವೀಗ ಇಲ್ಲಿ ಮಾಡುತ್ತಿರುವದೇನು? ಆ ಮಾಡೆಲ್ಗಳ ಫೋಟೋ ನೋಡುತ್ತಾ ಅವರ ವಿಷಯವನ್ನು ಚರ್ಚಿಸುತ್ತಾ ಅದನ್ನು ಪರೋಕ್ಷವಾಗಿ ಪ್ರೋತ್ಶಾಹಿಸುತ್ತಿಲ್ಲವೆ? ಅಂದರೆ ಏನು? ಯಾರದೋ ಮನೆಯ ಹೆಣ್ಣುಮಕ್ಕಳು ಹೇಗಾದರು ಕಾಣಿಸಲಿ; ನಮಗೇನೂ ಅನಿಸುವದಿಲ್ಲ. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಹಾಗೆ ಅಗಬಾರದು. ಇದು ಹಿಪೊಕ್ರಸಿ ಅಲ್ಲದೆ ಮತ್ತೇನು?
ಡಾನ್ ಮಾರ್ಕ್ವಿಜ್ ಹೇಳಿದ್ದು ಸರಿ: A hypocrite is a person who-but who isn't?
ಮೊನ್ನೆ ಏನಾಯಿತೆಂದರೆ ಸ್ನೇಹಿತನೊಬ್ಬ ನನ್ನ ಮನೆಗೆ ಬಂದಿದ್ದ. ಬರುವಾಗ ಆತ ಅರೆಬೆತ್ತಲೆ ಮಾಡೆಲ್ಗಳು ಇರುವ ಮಾಡೆಲಿಂಗ್ ಕ್ಯಾಲೆಂಡೆರೊಂದನ್ನು ನನಗೆ ತಂದುಕೊಟ್ಟ. ನಾವಿಬ್ಬರೂ ಕುಳಿತು ಬಿಕನಿ ತೊಟ್ಟ ಆ ಮಾಡೆಲ್ಗಳ ಫೋಟೋಗಳನ್ನೇ ಮತ್ತೆ ಮತ್ತೆ ನೋಡಿ ಖುಶಿಪಟ್ಟೆವು. ಅವರ ವಿವರಗಳನ್ನು ಕುರಿತು ಚರ್ಚಿಸಿದೆವು. ಅವರ ಜೊತೆ ವಿವಿಧ ಭಂಗಿಗಳಲ್ಲಿ ನಿಂತು ಪೋಸು ಕೊಟ್ಟ ಗಂಡು ಮಾಡೆಲ್ಗಳು ಕೂಡ ಇದ್ದರು. ಆಹಾ, ಎಂಥ ಅದೃಷ್ಟವಂತರು ಅವರು! ಎಂತೆಂಥ ಒಳ್ಳೊಳ್ಳೆ ಮಾಡೆಲ್ಗಳ ಜೊತೆ ನಿಂತೊ ಫೋಟೋ ತೆಗೆಸಿಕೊಳ್ಳುವ ಅವಕಾಶ ಲಭಿಸಿದೆ ಅವರಿಗೆಲ್ಲ! ಒಂದು ಕ್ಷಣ ಅವರ ಬಗ್ಗೆ ಈರ್ಷೆ ಕಾಡಿತು.
ಮರುಕ್ಷಣ ಅನಿಸಿತು ನಾವಿಬ್ಬರೂ ಟ್ರೆಡಿಷನಲ್ ಕುಟುಂಬದಿಂದ ಬಂದವರು. ಈ ವಿಷಯದಲ್ಲಿ ಕನ್ಸರ್ವೇಟಿವ್ ಆಗಿ ಥಿಂಕ್ ಮಾಡುವವರು. ಈ ವೃತ್ತಿಯ ಬಗ್ಗೆ ಕಸಿವಿಸಿ ಬೆಳೆಸಿಕೊಂಡವರು. ನಮ್ಮ ಮನೆಯ ಹೆಣ್ಣುಮಕ್ಕಳೇನಾದರು ಈ ಮಾಡೆಲಿಂಗ್ ವೃತ್ತಿಗೆ ಹೋಗುತ್ತೇನೆಂದರೆ ವಿರೋಧಿಸುವವರು. ಕಮ್ಮಿ ಬಟ್ಟೆ ತೊಟ್ಟು ಮೈ ಪ್ರದರ್ಶಿಸುವದು ಎಷ್ಟೊಂದು ಅಸಹ್ಯ? ಎಂದು ಮೂಗು ಮುರಿಯುವವರು. ಆದರೆ ನಾವೀಗ ಇಲ್ಲಿ ಮಾಡುತ್ತಿರುವದೇನು? ಆ ಮಾಡೆಲ್ಗಳ ಫೋಟೋ ನೋಡುತ್ತಾ ಅವರ ವಿಷಯವನ್ನು ಚರ್ಚಿಸುತ್ತಾ ಅದನ್ನು ಪರೋಕ್ಷವಾಗಿ ಪ್ರೋತ್ಶಾಹಿಸುತ್ತಿಲ್ಲವೆ? ಅಂದರೆ ಏನು? ಯಾರದೋ ಮನೆಯ ಹೆಣ್ಣುಮಕ್ಕಳು ಹೇಗಾದರು ಕಾಣಿಸಲಿ; ನಮಗೇನೂ ಅನಿಸುವದಿಲ್ಲ. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಹಾಗೆ ಅಗಬಾರದು. ಇದು ಹಿಪೊಕ್ರಸಿ ಅಲ್ಲದೆ ಮತ್ತೇನು?
ಡಾನ್ ಮಾರ್ಕ್ವಿಜ್ ಹೇಳಿದ್ದು ಸರಿ: A hypocrite is a person who-but who isn't?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
-
-
-
ನಿನ್ನೆದೆಯ ತಂತಿಯ3 ತಿಂಗಳುಗಳ ಹಿಂದೆ
-
ಮೈಸೂರು- ಚೆನ್ನೈ ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಸಂಚಾರ5 ತಿಂಗಳುಗಳ ಹಿಂದೆ
-
ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?7 ತಿಂಗಳುಗಳ ಹಿಂದೆ
-
ಹಂಪೆಯಲ್ಲಿ ಜಾಂಬವಂತನ ದರ್ಶನ!8 ತಿಂಗಳುಗಳ ಹಿಂದೆ
-
ದೇವರು ಕಾಣೆಯಾಗಿದ್ದಾನೆ..!11 ತಿಂಗಳುಗಳ ಹಿಂದೆ
-
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ1 ವರ್ಷದ ಹಿಂದೆ
-
-
Pic by Hengki Lee2 ವರ್ಷಗಳ ಹಿಂದೆ
-
ದಡ್ಡ - ಬುದ್ದಿವಂತ2 ವರ್ಷಗಳ ಹಿಂದೆ
-
-
ದೂರ ‘ತೀರದ ‘ ಯಾನ!!!2 ವರ್ಷಗಳ ಹಿಂದೆ
-
ಕನಕಧಾರಾ ಸ್ತೋತ್ರ2 ವರ್ಷಗಳ ಹಿಂದೆ
-
ಉಲ್ಲಾಳ್ದಿ3 ವರ್ಷಗಳ ಹಿಂದೆ
-
Resume3 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ!3 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?3 ವರ್ಷಗಳ ಹಿಂದೆ
-
’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?3 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ3 ವರ್ಷಗಳ ಹಿಂದೆ
-
-
-
ಒಂದು ಮಡಚಿಟ್ಟ ಪುಟ : Draft Mail – 54 ವರ್ಷಗಳ ಹಿಂದೆ
-
ಹದಿನೆಂಟನೇ ಶಿಬಿರ ಮುಂದೂಡಿಕೆ4 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ4 ವರ್ಷಗಳ ಹಿಂದೆ
-
-
ಸುಮ್ನೆ ತಮಾಷೆಗೆ -೮5 ವರ್ಷಗಳ ಹಿಂದೆ
-
-
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ5 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ5 ವರ್ಷಗಳ ಹಿಂದೆ
-
ಅನುಸಂಧಾನ-೪6 ವರ್ಷಗಳ ಹಿಂದೆ
-
-
-
ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ7 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:7 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ7 ವರ್ಷಗಳ ಹಿಂದೆ
-
ಕತ್ತಲೆ.................7 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..7 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ7 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!8 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...8 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ8 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ9 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ9 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ9 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?10 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ10 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು10 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ10 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)10 ವರ್ಷಗಳ ಹಿಂದೆ
-
(ಮಹಿಳಾ)ವಾದ:10 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ11 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…11 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ11 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...11 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ11 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್11 ವರ್ಷಗಳ ಹಿಂದೆ
-
ಕಫನ್12 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …12 ವರ್ಷಗಳ ಹಿಂದೆ
-
ನನ್ನ ಜಡೆ12 ವರ್ಷಗಳ ಹಿಂದೆ
-
ಕೇಳಿ-೫12 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು12 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು12 ವರ್ಷಗಳ ಹಿಂದೆ
-
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...12 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧13 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ13 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ13 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು13 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು13 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?13 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !14 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...15 ವರ್ಷಗಳ ಹಿಂದೆ
-
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.