ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ.................! ಆದರೆ ನನ್ನ ಅಪ್ಪ ಇದ್ಯಾವುದನ್ನು ನನಗೆ ಕೊಡಲಿಲ್ಲ. ದುಡಿಯದ, ಬೇಜವಬ್ದಾರಿ ನನ್ನ ಅಪ್ಪ ಹಚ್ಚನೆಯ ಬದುಕನ್ನು ಕಟ್ಟಿ ಕೊಡುವದನ್ನಾಗಲಿ ಅಥವಾ ಬೆಚ್ಚನೆಯ ಪ್ರೀತಿಯನ್ನು ಹೊದಿಸುವ ಪ್ರಯತ್ನವನ್ನಾಗಲಿ ಮಾಡಲೇ ಇಲ್ಲ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಜಗತ್ತಿನಾದ್ಯಾಂತ ಎಲ್ಲ ಮಕ್ಕಳಿಗೆ ಅಪ್ಪ ಪ್ರೀತಿಯ ನೆನಪಾಗಿ ಉಕ್ಕಿದರೆ ನನಗೆ ಬಿಕ್ಕಾಗಿ ಕಾಡುತ್ತಾನೆ. ಆದರೂ ಅವನನ್ನು ಅಪ್ಪ ಅಲ್ಲ ಎಂದು ಹೇಳಲಾದೀತೆ? ಅಥವಾ ಅಪ್ಪ ಇದ್ಯಾವುದನ್ನೂ ನನಗೆ ಕೊಡದೇ ಇದ್ದ ಕಾರಣಕ್ಕೆನೇ ನಾನು ಇಷ್ಟೊಂದು ಗಟ್ಟಿಯಾಗಿ ಬೆಳೆದೆನೇ? ನನಗೆ ಗೊತ್ತಿಲ್ಲ!
ಅಪ್ಪ ಕೆಟ್ಟವನೋ, ಕೄರನೋ, ಬೇಜವಾಬ್ದಾರಿಯುತನೋ ಯಾವತ್ತಿದ್ದರೂ ಅಪ್ಪ ಅಪ್ಪನೇ! ಅವನನ್ನು ಬಿಟ್ಟುಕೊಡಲಾಗದು. ಏಕೆಂದರೆ ಈ ಸಮಾಜದಲ್ಲಿ ಅವನಿಂದಲೇ ನಮಗೊಂದು ಐಡಿಂಟಿಟಿ ಸಿಕ್ಕಿದ್ದು! ಅವನಿಂದಲೇ ನಮ್ಮ ಹುಟ್ಟಿಗೊಂದು ಮರ್ಯಾದೆ ದೊರಕಿದ್ದು! ಅವನೇ ಗೊತ್ತಿಲ್ಲದೆ ಹುಟ್ಟಿದ್ದರೆ ನಮಗೆ ಕಾಸು ಕಿಮ್ಮತ್ತು ಬೆಲೆಯೂ ಇರುತ್ತಿರಲಿಲ್ಲ ಅಲ್ಲವೆ?
ಹಾಗಾಗಿ ಅಪ್ಪನೆಡೆಗೆ ಪ್ರೀತಿಯೋ, ಗೌರವವೋ, ಅನಾದರವೋ, ದ್ವೇಷವೋ, ತಿರಸ್ಕಾರವೋ, ಸಂಘರ್ಷವೋ ಏನೇ ಇದ್ದರೂ ಅವನನ್ನು ಅಪ್ಪ ಎಂದು ಒಪ್ಪಿ ನಡೆಯುವ ಅನಿವಾರ್ಯತೆ ಮತ್ತು ಸಾಮಾಜಿಕ ಬದ್ಧತೆ ಇದ್ದೇ ಇದೆ. ಆ ಕಾರಣಕ್ಕೆನೇ ಅವನು ನಮಗೆ ನಮ್ಮೆಲ್ಲ ದ್ವೇಷಗಳ ನಡುವೆಯೂ ಆಪ್ತವಾಗುತ್ತಾನೆ. ಅವನನ್ನೇ ಮತ್ತೆ ಮತ್ತೆ ಅಪ್ಪ ಎಂದು ಹೇಳುತ್ತಾ ಒಪ್ಪಿ ನಡೆಯುತ್ತೇವೆ. ಏಕೆಂದರೆ ಅಪ್ಪನನ್ನು ಆಯ್ಕೆ ಮಾಡಿಕೊಳ್ಳಲಾಗದು.
ನಾಳಿದ್ದು ಭಾನುವಾರ ಅಪ್ಪಂದಿರ ದಿನ. ಆ ವಿಶೇಷ ದಿನಕ್ಕಾಗಿ ನನ್ನ ಅಪ್ಪನನ್ನು ನಾ ಕಂಡಂತೆ, ಅವನಿರುವಂತೆ ಅತ್ಯಂತ ನಿರ್ಭಿಡೆಯಿಂದ ಕವನದಲ್ಲಿ ಹಿಡಿದಿಟ್ಟಿದ್ದೇನೆ. ಈ ಹಿಂದೆ ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲಾಗಿತ್ತು. ಆದರೆ ಅಪ್ಪಂದಿರ ವಿಶೇಷ ದಿನಕ್ಕಾಗಿ ಇದನ್ನು ಪುನರ್ ಪ್ರಕಟಿಸಲಾಗುತ್ತಿದೆ. ಸಹೃದಯವರಾದ ನೀವು ಹೇಗೆ ಸ್ಪಂದಿಸುವಿರೆಂದು ಕಾಯ್ದು ನೋಡುವೆ.
ಅಜ್ಜ ನೆಗೆದು ಬೀಳುವ ಮೊದಲೇ
ಅವ್ವನ್ನು ಮದುವೆಯಾಗಿ
ಇದ್ದ ಹೊಲ ಗದ್ದೆಗಳಲ್ಲಿ
ಮೈ ಕೈ ಕೆಸರು ಮಾಡಿಕೊಳ್ಲದೆ
ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
ಗಡದ್ದಾಗಿ ತಿಂದು ತೇಗಿ
ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
ತಾನು ಮಾತ್ರ ಇಸ್ಪೀಟಾಡುತ್ತ
ಹೆಸರಿಗೆ ಮಾತ್ರ ಮನೆ ಯಜಮಾನನಾದ.
ದುಡಿಯಲು ಗೊತ್ತಿರದ ಷಂಡ
ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
ಅವರಿವರ(ಬಂಧುಗಳ) ಮನೆಯಲ್ಲಿ ಬಿಟ್ಟು
ತಾನು ಮಾತ್ರ ತನ್ನದೇ ಗೂಡಿನಲ್ಲಿ
ಹಚ್ಚಗೆ ತಿಂದು ಬೆಚ್ಚಗೆ ಮಲಗಿ
ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.
ಅಪ್ಪ ಏನೂ ಕಿಸಿಯದಿದ್ದರೂ
ಅವ್ವನ ಮೇಲೆ ಸದಾ ಇವನ ರುದ್ರನರ್ತನ
ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
ಸದಾ ಇವನ ಸೇವೆಗೆ ನಿಂತಳು.
ಹೊತ್ಹೊತ್ತಿಗೆ ಚಾ ಕುಡಿದು
ಬುಸ್ಸ್ ಬುಸ್ಸ್ ಎಂದು ಚುಟ್ಟ ಸೇದಿ
ಗೊರ ಗೊರ ಕೆಮ್ಮಿ
ಮೈಯೆಲ್ಲ ಗೂರಿ ಬಂದವರ ತರ
ಪರಾ ಪರಾ ಕೆರೆದು
ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
ಸತ್ಹಾಂಗ ಮಾಡಿ
ಒಮ್ಮಿಂದೊಮ್ಮೆಲೆ ಮೇಲೆದ್ದು ಗುಟುರು
ಹಾಕುವ ಮುದಿ ಗೂಳಿ ಇವನು.
ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
ಮಕ್ಕಳೆಲ್ಲ ಕಷ್ಟಬಿದ್ದು ಓದಿ ಕೈಗೆ ಬಂದ ಮೇಲೆ
ಅರವತ್ತರ ಅರಳು ಮರಳೆಂಬಂತೆ
ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
ಅಲ್ಲಿ ದುಡಿದಿದ್ದೆಷ್ಟೋ
ಆ ಖರ್ಚು ಈ ಖರ್ಚೆಂದು
ಮಕ್ಕಳ ಹತ್ತಿರ ಕಾಸು ಪೀಕುತ್ತ
ಅsssಬ್ಬ ಎಂದು ಡೇಗು ಹೊಡೆದು
ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು ಮುಂದುವರಿದೇ ಇದೆ!
ಇದೀಗ ಯಾರಾದರು
"ಎಲ್ಲಿ ನಿನ್ನ ಮಕ್ಕಳು?"ಎಂದು ಕೇಳಿದರೆ
ಮೈ ಕುಣಿಸಿ ಎದೆಯುಬ್ಬಿಸಿ
"ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
ನಾವೂ ಅಷ್ಟೇ ಯಾರಾದರು ನಮ್ಮನ್ನು
"ಯಾರು ನೀವು?" ಎಂದು ಕೇಳಿದರೆ
"ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ!
-ಉದಯ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಅರ್ಬುದನ ಡೈರಿ – ಹೊಸ ಪುಸ್ತಕ2 ವಾರಗಳ ಹಿಂದೆ
-
ದಾವಣಗೆರೆಯಲ್ಲಿ ಸಿಟಿ ಬಸ್ ಹಿಡಿದು...2 ತಿಂಗಳುಗಳ ಹಿಂದೆ
-
Hello world!4 ತಿಂಗಳುಗಳ ಹಿಂದೆ
-
ಮಾತು ಮರೆತವರೇ ಜಗತ್ತನ್ನಾಳುತ್ತಾರೆ7 ತಿಂಗಳುಗಳ ಹಿಂದೆ
-
Sawanna @167 ತಿಂಗಳುಗಳ ಹಿಂದೆ
-
-
-
ತರಚೀ ಪುಷ್ಪೋಪಾಖ್ಯಾನ11 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ1 ವರ್ಷದ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು6 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?6 ವರ್ಷಗಳ ಹಿಂದೆ
-
ದ್ವಿಪದಿಗಳು6 ವರ್ಷಗಳ ಹಿಂದೆ
-
ಹೊಸ ದಿನ6 ವರ್ಷಗಳ ಹಿಂದೆ
-
The story of telling a story!6 ವರ್ಷಗಳ ಹಿಂದೆ
-
-
-
ಆಸೆ....!!!7 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 27 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!7 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ7 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?8 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!8 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್8 ವರ್ಷಗಳ ಹಿಂದೆ
-
ಮಾಯೆ9 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ9 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!9 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ9 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು9 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!10 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:10 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
-
ಕತ್ತಲೆ.................10 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..11 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ11 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ11 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು11 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!11 ವರ್ಷಗಳ ಹಿಂದೆ
-
-
ಗಾಜಿನ ಲೋಟದಲ್ಲಿ ರಸ್ನಾ12 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ12 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ12 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
-
ತೀರ....12 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ13 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?13 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ13 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು13 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)13 ವರ್ಷಗಳ ಹಿಂದೆ
-
(ಮಹಿಳಾ)ವಾದ:14 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ14 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…14 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ14 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್15 ವರ್ಷಗಳ ಹಿಂದೆ
-
ಕಫನ್15 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …15 ವರ್ಷಗಳ ಹಿಂದೆ
-
ನನ್ನ ಜಡೆ15 ವರ್ಷಗಳ ಹಿಂದೆ
-
ಕೇಳಿ-೫15 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು15 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು16 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧16 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ16 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ16 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು17 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?17 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !17 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಒಂದು ಕಾಲದಲ್ಲಿ....
- ಸಹವಾಸ ದೋಷ
- 5. The Story of Libya’s Fall
- ಮೇ-2020 ತಿಂಗಳ ’ಮಯೂರ ಮಾಸಪತ್ರಿಕೆಯಲ್ಲಿ ನನ್ನ ಅನುವಾದಿತ ಕಥೆ
- ನನ್ನ 'ಲಿಬಿಯಾ ಡೈರಿ" ಕುರಿತು ಪುಸ್ತಕ ಬ್ರಹ್ಮದಲ್ಲಿ
- ಇವತ್ತಿನ ರೂವಾರಿ.ಕಾಂನಲ್ಲಿ ನನ್ನ ನಾಟಕ ಶೇಕ್ಸ್ಪಿಯರ್ ನ ಶ್ರೀಮತಿ ಕುರಿತು ಪಾರ್ವತಿ ಐತಾಳ್ ಅವರು ಬರೆದಿರುವ ವಿಮರ್ಶ
- 3. Muammar Gaddafi and His "Green Book"
- ಹುಚ್ಚರು
- Father
- ಕನಸು ನನಸುಗಳ ನಡುವಿನ ನೆನಪು ಭಾಗ-2
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
24 ಕಾಮೆಂಟ್(ಗಳು):
ಉದಯ್....
ಅಪ್ಪನ ಇನ್ನೊಂದು ಮುಖದ ಪರಿಚಯ...
ಯಾರೂ ಜ್ಞಾಪಕ ಮಾಡಿಕೊಳ್ಳಲೂ ಬಯಸದ ಈ ಮುಖ...
ಒಂದು ಸ್ತರದ ಧ್ವನಿಯಾಗಿ...
ಇಂಥಹ ಮುಖ..
ನೆನಪಿಸಿದ್ದಕ್ಕೆ ಅಭಿನಂದನೆ ಹೇಳಲೇ...?
ವಾಸ್ತವದ ಜಗತ್ತಿನ
ಕಹಿಸತ್ಯದ ನೆನಪು ಬೇಡ ಅನ್ನುತ್ತದೆ ಒಳ ಮನಸ್ಸು...
http://ittigecement.blogspot.com/2008/12/blog-post_26.html
(ಮಿಲತೀ..ಹೇ..ಜಿಂದಗೀ...ಮೇ..ಮೊಹಬ್ಬತ್..... ಕಭಿ. .ಕಭೀ.)
ನನ್ನ ಬ್ಲಾಗಿನ ಈ ಲೇಖನ ದಯವಿಟ್ಟು ಓದಿ...
ಧನ್ಯವಾದಗಳು...
ಉದಯ್ ಸರ್,
ಅಪ್ಪನ ಬಗೆಗೆ ನಿಮ್ಮ ಆನುಭವವನ್ನು ಓದಿ ಮನಸ್ಸಿಗೆ ಬೇಸರವಾಯಿತು...
ಕವನವೂ ಕೂಡ ಅಷ್ಟೇ ನೇರವಾಗಿದೆಯಲ್ಲಾ....
ನಿಮ್ಮ ತಂದೆಯಿಂದ ಸಿಕ್ಕ ಬದುಕಿನ ಅನುಭವ ನಿಮಗೆ ಜೀವನಾನುಭವವನ್ನು ಮತ್ತು ಅದಕ್ಕೆ ತದ್ವಿರುದ್ದವಾಗಿ ನಿಮ್ಮ ಮಗಳಿಗೆ ರೋಲ್ ಮಾಡೆಲ್ ಆಗಿ ಬಾಳುವುದನ್ನು ಕಲಿತಿದ್ದೀರಿ..
ಈ ದಿನ ನೀವು ಈ ರೀತಿ ನಿಮ್ಮ ಅಪ್ಪನ ಆನುಭವವನ್ನು ಹಂಚಿಕೊಳ್ಳುವುದು ನಿಮಗೆ ಅನಿವಾರ್ಯವೆನಿಸಿರಬಹುದು. ವಾಸ್ತವವನ್ನು ಹೀಗೆ ಹೇಳಿಕೊಳ್ಳುವುದರಿಂದ ಮನಸ್ಸಿಗೆ ಹಗುರಾಗಬಹುದು...ಎಂಬ ಭಾವನೆ ನನ್ನದು...ಇದಕ್ಕಿಂತ ಹೆಚ್ಚಿಗೆ ಹೇಳಲಾರೆ...
ಧನ್ಯವಾದಗಳು.
ಉದಯ್ ಸರ್,
ಅಪ್ಪನ ಬಗೆಗೆ ನಿಮ್ಮ ಆನುಭವವನ್ನು ಓದಿ ಮನಸ್ಸಿಗೆ ಬೇಸರವಾಯಿತು...
ಕವನವೂ ಕೂಡ ಅಷ್ಟೇ ನೇರವಾಗಿದೆಯಲ್ಲಾ....
ನಿಮ್ಮ ತಂದೆಯಿಂದ ಸಿಕ್ಕ ಬದುಕಿನ ಅನುಭವ ನಿಮಗೆ ಜೀವನಾನುಭವವನ್ನು ಮತ್ತು ಅದಕ್ಕೆ ತದ್ವಿರುದ್ದವಾಗಿ ನಿಮ್ಮ ಮಗಳಿಗೆ ರೋಲ್ ಮಾಡೆಲ್ ಆಗಿ ಬಾಳುವುದನ್ನು ಕಲಿತಿದ್ದೀರಿ..
ಈ ದಿನ ನೀವು ಈ ರೀತಿ ನಿಮ್ಮ ಅಪ್ಪನ ಆನುಭವವನ್ನು ಹಂಚಿಕೊಳ್ಳುವುದು ನಿಮಗೆ ಅನಿವಾರ್ಯವೆನಿಸಿರಬಹುದು. ವಾಸ್ತವವನ್ನು ಹೀಗೆ ಹೇಳಿಕೊಳ್ಳುವುದರಿಂದ ಮನಸ್ಸಿಗೆ ಹಗುರಾಗಬಹುದು...ಎಂಬ ಭಾವನೆ ನನ್ನದು...ಇದಕ್ಕಿಂತ ಹೆಚ್ಚಿಗೆ ಹೇಳಲಾರೆ...
ಧನ್ಯವಾದಗಳು.
ಪ್ರಕಾಶ್ ಅವರೆ,
ನೀವು ಕೊಟ್ಟಿರುವ ಲಿಂಕನ್ನು ಓದಿದೆ. ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾದುದು. ನೀವು ಚಿಕ್ಕ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡು ಚಿಕ್ಕಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದಿರಿ. ನಾನು ಅಪ್ಪ ಬೇಜವಾಬ್ದಾರಿಯಾಗಿದ್ದರಿಂದ ಚಿಕ್ಕಂದಿನಿಂದಲೆ ಅವನಿಂದ ದೂರವಾಗಿ ದೊಡ್ದಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದೆ. ಇಬ್ಬರಲ್ಲೂ ಒಂದೇ ಸಾಮ್ಯತೆಯಿದೆ. ಆ ಕಾರಣಕ್ಕೆನೇ ನಾವು ಇಷ್ಟೊಂದು ಗಟ್ಟಿಯಾಗಿ ಬೆಳೆದೆವಾ? ಗೊತ್ತಿಲ್ಲ! ಚಂದ್ರಕಾಂತವರು ಹೇಳುವಂತೆ ನಮ್ಮನ್ನು ನೋವುಗಳು ರೂಪಿಸಿದಷ್ಟು ನಲಿವುಗಳು ರೂಪಿಸುವದಿಲ್ಲ. ಎಷ್ಟೊಂದು ಸತ್ಯದ ಮಾತು! ಈ ಲಿಂಕನ್ನು ಇಲ್ಲಿ ಕೊಟ್ಟು ಒಳ್ಳೆಯದು ಮಾಡಿದಿರಿ. ಬಹುಶಃ ನಾವಿಬ್ಬರು ಸಮಾನ ದುಃಖಿಗಳಾಗಿದ್ದರಿಂದ ಇನ್ನಷ್ಟು ಹತ್ತಿರವಾದೆವನಿಸುತ್ತಿದೆ.
ಉದಯ್ ಅವರೆ...
‘ತಂದೆ’ ಎಂದರೆ ‘ಸರ್ವಸ್ವ’ ಎಂದುಕೊಂಡೇ ಅವರೆದೆಗೆ ಆನಿಕೊಂಡೇ , ಅವರ ಪ್ರೀತಿಯ ಸತ್ವದಲ್ಲಿ ಅವರಿಗಿಂತ ಉದ್ದಕ್ಕೆ ಬೆಳೆದೆ. ಪ್ರತಿನಿತ್ಯವೂ ನನಗೆ ಅಪ್ಪನ ದಿನವೇ. ಇವತ್ತಿಗೂ ಅಪ್ಪನ ಪ್ರೀತಿಯಿರದೇ ಬದುಕೇ ಇಲ್ಲ ಎನ್ನುವ ಮಟ್ಟಕ್ಕೆ.
ಅಂಥ ಚೆಂದದ ‘ಅಪ್ಪ’ ಎನ್ನುವ ಸಂಬಂಧ ಹೀಗೂ ಬರಿಯ ಪದವಾಗಿ ಬಳಕೆಯಾಗಬಲ್ಲುದು, ಅದೂ ಸಹ ಒಬ್ಬ ತಂದೆಯಿಂದಾಗಿಯೇ ಎಂಬುದನ್ನು ಓದಿದಾಗ ಬಹಳ ಬೇಸರವಾಗುತ್ತಿದೆ. ನಿಮ್ಮ ಬೇಸರಕ್ಕೆ ಸಾಂತ್ವನವಾಗಿ ನಮ್ಮ ಯಾವ ಸಾಲುಗಳೂ ನಿಲ್ಲಲಾರವು. ಅವು ನಿಮ್ಮ ಅಳಲುಗಳಾಗಿ ಹೀಗೆ ಹೊರಚೆಲ್ಲಿ ನಿಮಗಿಷ್ಟು ಸಮಾಧಾನ ಸಿಗಲಿ.
ಮುಂದೆ ಎಲ್ಲವೂ ಇನ್ನಷ್ಟು ಒಳಿತಾಗಲಿ.
ಉದಯ್.....
ನನಗೆ ಬಂದ ಆತ್ಮೀಯ ಪ್ರತಿಕ್ರಿಯೆಗಳಲ್ಲಿ ಇದೂ ಒಂದು....
ಚಂದ್ರಕಾಂತರವರ ಪ್ರತಿಕ್ರಿಯೆಗಳೇ ಹಾಗೆ...
ಅನುಭವದ ಮಾತುಗಳು...
ಕೆಲವೊಮ್ಮೆ ನಾನು ಬರೆದ ಲೇಖನಗಳಿಗಿಂತ ಅವರ ಪ್ರತಿಕ್ರಿಯೆ ತುಂಬಾ ಚೆನ್ನಾಗಿರುತ್ತದೆ...
ನನಗೇನೋ ಕಾಣದ ಅಪ್ಪನನ್ನು ನೆನಪಿಸಿಕೊಂಡು ಮಿಸ್ ಮಾಡಿಕೊಳ್ಳುತ್ತಿರುವೆ..
ಜೀವನದಲ್ಲಿ ಏನೂ ಅರಿಯದ...
ಓದೂ ಅರಿಯದ ನಮ್ಮಮ್ಮ...
ಬದುಕಿನ ಆಸರೆ...
ಭರವಸೆ...ಆಗಿದ್ದ...
ನಮ್ಮಪ್ಪನ ಅಗಲಿಕೆ ಹೇಗೆ ಸಹಿಸಿಕೊಂಡಿರ ಬಹುದು...
ಸಣ್ಣ ಮಕ್ಕಳಾದ ನಮ್ಮನ್ನು ಬೆಳೆಸಿದಳು...?
ಆ ನೋವನ್ನು ಹೇಗೆ ಸಹಿಸಿಕೊಂಡಿರಬಹುದು...?
ಕೆರೆನೋ, ಬಾವಿನೋ ನೋಡಿಕೊಂಡಿದ್ದರೆ...??
ಬದುಕಿನ.., ಆಸೆಗಳು .., ಭರವಸೆಗಳು...
ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...
ತುಂಬಾ... ಧನ್ಯವಾದಗಳು...
ಏನೆಂದು ಹೇಳಲಿ??? ಕವನ ಚೆನ್ನಾಗಿದೆ ಅನ್ನಲೇ???... ತುಂಬಾ ನಿರ್ಭೀಡೆಯಿಂದ ಮನದ ಮಾತುಗಳನ್ನು ಹಂಚಿಕೊಂಡಿದ್ದನ್ನು ಓದಿ ಸ್ವಲ್ಪ ಬೇಸರವಾಯಿತು... ಇಂಥ ಅಪ್ಪಂದಿರು ಬಹುಶ ತುಂಬಾ ಜನ ಇರ್ತಾರೆ... ಅವರನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳೋದು ಉತ್ತಮ ಅಲ್ಲವೇ?? ಇನ್ನು ಏನು ಹೇಳಲೂ ಮನಸ್ಸಾಗುತ್ತಿಲ್ಲ...
ಉದಯರೇ
ಸಮಯೋಚಿತ ಲೇಖನ. ಅಪ್ಪನ ಕುರಿತಾದ ಪದ್ಯ ಕೂಡಾ ಬಹಳ ಚೆನ್ನಾಗಿ ಮೂಡಿಬ೦ದಿದೆ.
ಉದಯ,
ಇಂತಹ ಅಪ್ಪಂದಿರೂ ಇರುತ್ತಾರೆ. ಕೆಲವರನ್ನು ನಾನೂ ನೋಡಿದ್ದೇನೆ. Frank ಆಗಿ ಹೇಳಿದ್ದು ನಿಮ್ಮ ಹೆಚ್ಚುಗಾರಿಕೆ.
ಶಿವು,
ನಿಮ್ಮ ಪ್ರೀತಿ ಹಾಗು ಅನುಕಂಪಕ್ಕೆ ಥ್ಯಾಂಕ್ಸ್! ನಾನು ಆದಷ್ಟು ಬರಹದಲ್ಲಿ ನೇರ ಹಾಗು ಪ್ರಾಮಾಣಿಕವಾಗಿರಲು ಪ್ರಯತ್ನಿಸುತ್ತೇನೆ. ನನಗೆ ನನ್ನ ತಂದೆಯ ಬಗ್ಗೆ ಹೇಳಿಕೊಳ್ಳುವಾಗ ಯಾವುದೇ ಮುಜುಗುರವಾಗಲಿ, ಅಳುಕಾಗಲಿ ಅಥವಾ ಬೇರೆಯವರು ಏನಂದುಕೊಳ್ಳುತ್ತಾರೋ ಎನ್ನುವ ಭಾವನೆಯಾಗಲಿ ಇರಲಿಲ್ಲ. ಕೆಲವರು ಅಪ್ಪ ಅಮ್ಮ ಅಪ್ಪಟ ಅನಕ್ಷರಸ್ಥರಾಗಿದ್ದರೂ ತಮ್ಮ ಮರ್ಯಾದೆಗೆ ಎಲ್ಲಿ ಕುಂದು ಬರುತ್ತದೋ ಎಂದು ಹೆದರಿ ಅದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸತ್ಯವನ್ನು ಮುಚ್ಚಿಟ್ಟು ಬೇರೇನೋ ಹೇಳಲು ಪ್ರಯತ್ನಿಸುತ್ತಾರೆ.
ನನ್ನ ನೋವಿನ ಹಾದಿಯ ಸಾಧನೆಯ ಕತೆ ಬೇರೆಯವರಿಗೆ ಮಾರ್ಗದರ್ಶಿಯಾಗಲಿ ಎಂದು ಇದನ್ನು ಸೃದಯವರಾದ ನಿಮ್ಮೊಂದಿಗೆ ಹಂಚಿಕೊಂಡೆ. ಏಕೆಂದರೆ ಬೇರೆಯವರು ಅಪ್ಪ ಸರಿಯಿಲ್ಲ ಎನ್ನುವದನ್ನೇ ನೆಪವಾಗಿಟ್ಟುಕೊಂಡು ಏನನ್ನು ಸಾಧಿಸದೆ ಇರುವದನ್ನು ನೋಡಿದ್ದೇನೆ. ಜೀವನದಲ್ಲಿ ಏನನ್ನಾದರು ಸಾಧಿಸಲು ನೆಪಗಳು ಯಾವತ್ತೂ ಅಡ್ಡಿಯಾಗಬಾರದೆಂದು ನಂಬಿದವನು ನಾನು.
ಖ್ಯಾತ ಇಂಗ್ಲೀಷ ಕವಿ T.S.Eliot ಒಂದು ಕಡೆ ಒಂದು ಮಾತನ್ನು ಹೇಳುತ್ತಾನೆ- We learn a little from others mistakes-ಎಂದು. ಇದು ನನ್ನ ಜೀವನದಲ್ಲೂ ಸತ್ಯವಾಗಿದೆ. ನನ್ನ ಅಪ್ಪ ಹಾಗಿದ್ದ ಕಾರಣಕ್ಕೇನೋ ಅವನಂತೆ ನಾನಾಗಬಾರದೆಂದು ನಿರ್ಧರಿಸಿ ಛಲದಿಂದ ಈ ಸ್ಥಾನಕ್ಕೆ ಬಂದಿದ್ದು. ಹಾಗು ಮೊದಲಿನಿಂದಲೂ ನನ್ನ ಮಕ್ಕಳಿಗೆ ಮಾದರಿ ಅಪ್ಪನಾಗಬೇಕೆಂದು ನಿರ್ಧರಿಸಿದ್ದು. ಹೀಗಾಗಿ ನನ್ನ ಮಗಳಿಗೆ ನಾನು ಮಾದರಿ ಅಪ್ಪನಾಗಿದ್ದುದರಲ್ಲಿ ಅಚ್ಚರಿಯಿಲ್ಲ.
ನಿಮ್ಮ ಪ್ರೀತಿ ಹಾಗು ಸಾಂತ್ವನದ ನುಡಿಗಳಿಗೆ ಮತ್ತೊಮ್ಮೆ ಥ್ಯಾಂಕ್ಸ್.
ಪ್ರಕಾಶ್ ಅವರೆ,
“ಬದುಕಿನ.., ಆಸೆಗಳು .., ಭರವಸೆಗಳು...
ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...”
ಎಂಥ ಅದ್ಬುತವಾದ ಮಾತನ್ನು ಹೆಳಿದ್ದೀರಿ. ಅಂದಾಗಲೆ ಅಲ್ಲವೆ ನಾವು ಜೀವನದಲ್ಲಿ ಮೇಲೆ ಬರುವದು? ಬ್ಲಾಗ್ ಮೂಲಕವಷ್ಟೆ ನಾವಿಬ್ಬರು ಸ್ನೇಹಿತರಾದವರು. ಆದರೆ ಇದೀಗ ಅನಿಸುತ್ತದೆ ಬದುಕಿನ ಹಾದಿಯ ಕೊನೆಯವರೆಗೂ ನೀವು ನನಗೆ ಸ್ಪೂರ್ತಿಯಾಗಬಲ್ಲಿರಿ ಹಾಗು ಜೊತೆಯಾಗಿ ಸಾಗುವ ಸ್ನೇಹಿತರಾಗಿರಬಲ್ಲಿರೆಂದು. ಈ ಸಾರಿ ಅಗಷ್ಟ್ ತಿಂಗಳಲ್ಲಿ ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸುವೆ.
ನಿಮ್ಮ ಸಮಾಧಾನದ ಮಾತುಗಳಿಗೆ ಥ್ಯಾಂಕ್ಸ್.
ಪರಾಂಜಪೆ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ರವಿಕಾಂತ್ ಗೋರೆಯವರೆ,
“ಇಂಥ ಅಪ್ಪಂದಿರು ಬಹುಶ ತುಂಬಾ ಜನ ಇರ್ತಾರೆ... ಅವರನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳೋದು ಉತ್ತಮ ಅಲ್ಲವೇ??” ಎನ್ನುವ ನಿಮ್ಮ ಮಾತು ನಿಜ. ಹಾಗೆಂದೇ ನಾನು ನನ್ನಪ್ಪನಿಗೆ ತದ್ವಿರುದ್ದವಾಗಿ ತಿದ್ದಿಕೊಂಡು ಬೆಳೆದಿದ್ದು.
ನಿಮ್ಮ ಸಾಂತ್ವನಕ್ಕೆ ಥ್ಯಾಂಕ್ಸ್.
ಸುನಾಥ್ ಸರ್,
ನೀವು ಹೇಳಿದಂತೆ Frank ಆಗಿ ಹೇಳಿದ್ದು ನನ್ನ ಹೆಚ್ಚುಗಾರಿಕೆಯೆಂದು ಕರೆದಿರುವಿರಿ. ಇದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಇರಲಿ, ನಮ್ಮ ನೋವನ್ನು ಬೇರೆಯವರೊಂದಿಗೆ ಹಂಚಿಕೊಂಡಾಗಲೇ ನಾವು ಹಗುರಾಗುವದಲ್ಲದೆ ನಮಗಿಂತ ದೊಡ್ಡ ದೊಡ್ದ ಸಮಸ್ಯೆಯಲ್ಲಿ ಮುಳುಗಿರುವವರ ನೋವು ಸಹ ನಮಗೆ ಗೊತ್ತಾಗಿ ಅವರ ಮುಂದೆ ನನ್ನದೇನು ಮಹಾ ಎನಿಸಿಬಿಡುತ್ತದಲ್ಲವೆ?
ಶಾಂತಲಾ ಅವರೆ,
ನಿಮ್ಮ ಮನದಾಳದ ಸಾಂತ್ವನದ ನುಡಿಗಳಿಗೆ ಹಾಗು ಶುಭಹಾರೈಕೆಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್. ಇಷ್ಟನ್ನು ಬಿಟ್ಟರೆ ನಿಮ್ಮ ಪ್ರತಿಕ್ರಿಯೆಗೆ ಹೇಗೆ ಸ್ಪಂದಿಸಬೇಕೆಂದು ಗೊತ್ತಾಗದೆ ಬಾಯಿಕಟ್ಟಿ ಹೋಗಿದೆ.
ಉದಯ್ ಸರ್,
ನಿಮ್ಮ ನೇರ ಬರವಣಿಗೆ ನೇರವಾಗಿ ಹ್ರುದಯದೊಳಕ್ಕೇ ಇಳಿಯುತ್ತದೆ.ಅಪ್ಪ ಹೆ೦ಗಿದ್ರು ಅಪ್ಪನೆ.ನನ್ನಪ್ಪನ ಬಗ್ಗೆ ಬರೆದಿರುವೆ.ಬ್ಲಾಗಿಗೊಮ್ಮೆ ಬನ್ನಿ.
ಅಹರ್ನಿಶಿಯವರೆ,
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ಬರವಣಿಗೆ ನೇರವಾಗಿದ್ದಷ್ಟು ಹೃದಯದೊಳಗೆ ತಾನೆ ತಾನಾಗಿ ಇಳಿಯುತ್ತದೆ. ನಿಮ್ಮ ಬ್ಲಾಗಿಗೆ ಭೇಟಿ ನೀಡಿ ಅಲ್ಲಿ ಅಭಿಪ್ರಾಯಿಸುವೆ. ನಿಮ್ಮದು ಮೊದಲ ಭೇಟಿ ನನ್ನ ಬ್ಲಾಗಿಗೆ. ಹೀಗೆ ಬರುತ್ತಿರಿ.
ಉದಯ್
ಬದುಕಿನ ನೋವು,ಅವಮಾನ,ಅಸಹಾಯಕತೆಗಳು ಮನುಷ್ಯನನ್ನು ಗಟ್ಟಿ ಮಾಡುತ್ತವೆ ಎನ್ನುವುದಕ್ಕೆ ನೀವು ಉದಾಹರಣೆ. ಆದರೆ ಎಲ್ಲ ಸಮಯದಲ್ಲಿಯೂ ಹಾಗಾಗುವುದಿಲ್ಲ. ಕೆಲವು ಮಕ್ಕಳು ತಂದೆಯ ಹಾದಿಯನ್ನೇ ಹಿಡಿಯುತ್ತಾರೆ.
ನಿಮ್ಮ ಈ ಕವನದ ಮೇಲೆ ಲಂಕೇಶರ ‘ಅವ್ವ’ ಕವನದ ದಟ್ಟ ಪ್ರಭಾವ ಕಾಣಿಸುತ್ತದೆ. ( ಅದು ಒಂದು compliment!)
ಉದಯ್
ಅಪ್ಪನ ಬಗೆಗಿನ ನಿಮ್ಮ ಸಂಬಂಧದ ವಿಷಾದ, ನೋವು, ಅಸಹಾಯಕತೆ ಇವೆಲ್ಲವನ್ನೂ ಬಹಳ ಚೆನ್ನಾಗಿ ಬಿಂಬಿಸಿರುವಿರಿ, ಬಿಂಬಿಸಿರುವಿರಿ ಎಂದರೆ ತಪ್ಪಾಗುವುದು.ಎಲ್ಲ ಭಾವಗಳಿಗು ಒಂದು outlet ಕೊಟ್ಟಿರುವಿರಿ
ನಿಮ್ಮ ಕವನ ಚೆನ್ನಾಗಿದೆ. ಲಂಕೇಶರ ‘ಅವ್ವ’ ಕವನವನ್ನು ಈ ಕವಿತೆ ನೆನಪಿಸುತ್ತದೆ.
ಚಂದ್ರಕಾಂತ ಮೇಡಂ,
ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಥ್ಯಾಂಕ್ಸ್. ನೀವು ಹೇಳಿದಂತೆ ಕೋಪ, ತಾಪ, ಅಸಹಾಯಕತೆ ಎಲ್ಲವನ್ನು ಒಳಗೊಂಡಿದೆ. ಆದರೆ ಬೇರೆ ಕೄರ ಅಪ್ಪಂದಿರಿಗೆ ಹೋಲಿಸಿಕೊಂಡರೆ ನನ್ನ ಅಪ್ಪ ಎಷ್ಟೋ ಉತ್ತಮನಾಗಿರುವದರಿಂದ ಎದೆಗೆ ಎಷ್ಟೋ ಸಮಾಧಾನ! ಈ ಕಾರಣಕ್ಕೆನೇ ಅವನು ನನಗೆ ಹೆಚ್ಚು ಆಪ್ತನಾಗಿ ಕಾಣುತ್ತಾನೆ. ಅಪ್ಪ ಹಾಗೆ ಇದ್ದುದರಿಂದ ಅವನ ಹಾದಿಗೆ ವಿರುದ್ಧವಾಗಿ ನಡೆದು ಛಲದಿಂದ ಮೇಲೆ ಬಂದಿದ್ದೇನೆ ಎನ್ನುವದಕ್ಕಿಂತ ಅವನ ಆ ಇರುವಿಕೆ ನನ್ನನ್ನು ಈ ರೀತಿಯಾಗಿ ಬೆಳೆಯಲು ಹುರಿದುಂಬಿಸಿರಬದಲ್ಲವೆ? ಅದಕ್ಕಾದರು ಅವನಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಏಕೆಂದರೆ ಕೆಲವು ಒಳ್ಳೆಯ ಅಪ್ಪಂದಿರ ಮಕ್ಕಳು ಕೆಟ್ಟಿರುವದನ್ನು ನಾನು ನೋಡಿದ್ದೇನೆ.
ಇನ್ನು ನನ್ನ ಕವನದ ಮೇಲೆ ಲಂಕೇಶರ “ಅವ್ವ” ಕವನದ ದಟ್ಟ ಪ್ರಭಾವವನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಏಕೆಂದರೆ ಈ ಕವನ ಬರೆದ ಮೇಲೆ ನನಗೂ ಕೂಡ ಹಾಗೆ ಅನಿಸಿತ್ತು.
Anyway, ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು.
ನನಗೆ ಯಾವ ರೀತಿ ಪ್ರತಿಕ್ರಿಯಿಸಬೇಕೋ ಅಂತ ತೆಳಿಯುತ್ತಿಲ್ಲ.
ನೀವು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ನೋವಿಗೆ ಸಾಂತ್ವನ ಹೇಳಬೇಕೋ ?
ಅಥವಾ
ನಿಮ್ಮ ಒಳ್ಳೆಯ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕೋ...?
ಉದಯ್ ಅವರೇ...
ನಿಮ್ಮ ಕವನ ನನ್ನ ಬದುಕಿಗೆ ಕನ್ನಡಿ ಹಿಡಿದ ಹಾಗಿತ್ತು....
ಇದಕ್ಕಿ೦ತ ಹೆಚ್ಚಿಗೆ ಏನೂ ಹೇಳಲಾಗುತ್ತಿಲ್ಲ...
ನನ್ನಪ್ಪ ನೆನಪಾದರು..
-ಧರಿತ್ರಿ
ಉದಯ ಸರ್ ಅಪ್ಪನ ಬಗ್ಗೆ ಚಂದ್ರಕಾಂತ ಮೇಡಂ ಪ್ರಸ್ತಾಪ ಮಾಡಿದ್ದಾರೆ ತಮ್ಮ ಬ್ಲಾಗಿನಲ್ಲಿ...ಅಪ್ಪ ನನ್ನ ಅನಿಸಿಕೆಯಲ್ಲಿ ಮಮತೆ-ಮಾತೆಯ ಪರ್ಯಾಯ ಜವಾಬ್ದಾರಿ, ನಿಷ್ಠುರತೆ, ನಿಖರತೆ ಇತ್ಯಾದಿ ಅಷ್ಟೇನೂ ಆಪ್ಯಾಯವೆನಿಸದ ಗುಣಹೊತ್ತ ವ್ಯಕ್ತಿ...ಅಪ್ಪನಿಲ್ಲದಿದ್ದರೆ, ಲಗಾಮು ಇಲ್ಲದೆ ಕುದುರೆಯಾಗುತ್ತೆ ಮನೆಯಲ್ಲಿರುವವರ ಮನಸು-ಕಾಯಕ. ಯೌವನದವರೆಗೂ ತಾಯ ಮಮತೆ ಹೆಚ್ಚು ತೂಗಿದರೆ ಆನಂತರದ ವ್ಯಕ್ತಿತ್ವ ನಿರ್ಮಾಣಕ್ಕೆ ತಂದೆಯೇ ರೂವಾರಿ.. ಆದ್ರೆ ಅದೇ ಅಪ್ಪ..ಬೇಜವಾಬುದಾರನಾದರೆ...ನಾವಿಕನಿಲ್ಲದ ಹಡಗು...ಕುಟುಂಬ...ಇದು ನನ್ನ ಅನಿಸಿಕೆ...
ಕಾಮೆಂಟ್ ಪೋಸ್ಟ್ ಮಾಡಿ