ಆತ್ಮೀಯರೆ,
ಹಿಂದೆ ಜೀವದ ಗೆಳೆಯ ಮಂಜು “ನಿನ್ನ ಓರಗೆಯವರೆಲ್ಲಾ ಪುಸ್ತಕ ಹೊರತರುತ್ತಿದ್ದಾರೆ. ನೀನ್ಯಾವಾಗ ತರೋದು”? ಎಂದು ಕೇಳಿದ್ದಾಗ ನಾನು ನಕ್ಕು “ಮುಂದೆ ನೋಡಿದರಾಯಿತು” ಎಂದು ಸುಮ್ಮನಾಗಿದ್ದೆ. ಇದೀಗ ನನ್ನ ಬಹಳಷ್ಟು ಆತ್ಮೀಯ ಸ್ನೇಹಿತರು, ಬ್ಲಾಗ್ ಮಿತ್ರರು ಹಾಗು ನನ್ನನ್ನು ಹತ್ತಿರದಿಂದ ಬಲ್ಲವರೆಲ್ಲರ ಒತ್ತಾಸೆಯ ಮೇರೆಗೆ ನಾನು ಇದುವರೆಗೆ ಅನುವಾದಿಸಿದ ಕವನಗಳನೆಲ್ಲ ಸೇರಿಸಿ ಒಂದು ಪುಸ್ತಕವನ್ನು ಹೊರತರಬೇಕೆಂದೆರುವೆ. ಇದು ನನ್ನ ಬಹುದಿನದ ಕನಸು ಕೂಡ ಆಗಿದೆ! ಇದು ನನ್ನ ಚೊಚ್ಚಲ ಪುಸ್ತಕವಾದ್ದರಿಂದ ಅದನ್ನು ಹೊರತರುವ ರೂಪರೇಷೆಗಳಾಗಲಿ ಅಥವಾ ಅದರ ಹಿಂದೆ ಇರುವ ಶ್ರಮದ ತಿಳುವಳಿಕೆಯಾಗಲಿ ನನ್ನಲ್ಲಿಲ್ಲ. ಅಂದರೆ ಪುಸ್ತಕ ತರಲು ಯಾವ ಪ್ರಕಾಶಕರನ್ನು ಭೇಟಿ ಮಾಡಬೇಕು? ಅವರು ಪ್ರಕಟಿಸಲು ಮುಂದಾಗುತ್ತಾರೆಯೆ? ಪ್ರಕಟಿಸಲು ಎಷ್ಟು ದಿನ ತೆಗೆದುಕೊಳ್ಳಬಹುದು? ಇತ್ಯಾದಿಗಳ ಬಗ್ಗೆ ನನ್ನಲ್ಲಿ ಆಳವಾದ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಪುಸ್ತಕ ಹೊರತಂದಿರುವ ಬ್ಲಾಗ್ ಮಿತ್ರರು ನನಗೆ ಪ್ರಕಾಶಕರ ವಿಳಾಸ, ಫೋನ್ ನಂಬರ್ ಹಾಗೂ ಈಮೇಲ್ ವಿಳಾಸಗಳನ್ನು ಕೊಡುವದರೊಂದಿಗೆ ಅದರ ಒಟ್ಟಾರೆ ಕಾರ್ಯವೈಖರಿಯನ್ನು ದಯವಿಟ್ಟು ವಿವರಿಸಿ ಹೇಳಿದರೆ ಅನುಕೂಲ. ಬ್ಲಾಗ್ ಮಿತ್ರರಾದ ಸತ್ಯನಾರಾಯಣವರು, ಚಂದಿನವರು, ತೇಜಸ್ವಿನಿ ಹೆಗಡೆಯವರು, ಕಲಿಗಣನಾಥ್ ಗುಡುದೂರವರು ಈಗಾಗಲೆ ಪುಸ್ತಕ ಹೊರತಂದವರ ಪೈಕಿಯಲ್ಲಿದ್ದಾರೆ. ಬೇರೆಯವರು ಸಹ ತಂದಿರಬಹುದು. ಆದರೆ ನನಗೆ ಅವರ ಬಗ್ಗೆ ಗೊತ್ತಿಲ್ಲ. ತಂದಿದ್ದರೆ ನನ್ನ ಅಲ್ಪಜ್ಞಾನಕ್ಕಾಗಿ ದಯವಿಟ್ಟು ಕ್ಷಮಿಸಿ.
ದೂರದ ಲಿಬಿಯಾದಿಂದ ನಾನು ಈ ಜುಲೈ ಕೊನೆವಾರದಲ್ಲಿ ಒಂದು ತಿಂಗಳ ವಾರ್ಷಿಕ ರಜೆಯ ಮೇರೆಗೆ ಬೆಂಗಳೂರಿಗೆ ಬರುವವನಿದ್ದೇನೆ. ಈ ಒಂದು ತಿಂಗಳ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಜೊತೆಗೆ ಅದರ ಬಿಡುಗಡೆಯ ಕಾರ್ಯಕ್ರಮವೂ ಸಹ ನಡೆದುಹೋಗಬೇಕೆಂದುಕೊಂಡಿದ್ದೇನೆ. ಇದು ಸಾಧ್ಯವಾ? ಸಾಧ್ಯವಾದರೆ ಮೊದಲು ಪ್ರಕಟಣೆಯ ಹಂತಗಳನ್ನು ನಂತರ ಬಿಡುಗಡೆಯ ಹಂತಗಳನ್ನು ವಿವರಿಸಿ ಹೇಳಿ. ಪ್ರಕಟಣೆ ಸಾಧ್ಯವಾದರೆ ನಾನು ಇಲ್ಲಿಂದಾನೆ ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಹೆಂಡತಿ ಹಾಗೂ ಸ್ನೇಹಿತನ ಮೂಲಕ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೇನೆ. ಅಲ್ಲಿಗೆ ಬಂದಾಗ ಬರಿ ಪ್ರಕಟಿಸಿ ಬಿಡುಗಡೆಗೊಳಿಸುವದಷ್ಟೆ ಕೆಲಸವಾಗಲಿ. ನನಗೆ ಗೊತ್ತು ಸಮಯಾವಕಾಶ ತುಂಬಾ ಕಡಿಮೆಯಿದೆಯೆಂದು. ಆದರೆ ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ ಅಲ್ಲವೆ? ಈ ಮಾರ್ಗದಲ್ಲಿ ನೀವೂ ನನ್ನ ಕೈ ಹಿಡಿದು ನಡೆಸುತ್ತೀರಲ್ಲವೆ? ನನ್ನ ಪುಸ್ತಕ ತರುವ ಕನಸನ್ನು ನನಸು ಮಾಡುತ್ತೀರಲ್ಲವೆ? ದಯವಿಟ್ಟು ಮಾಹಿತಿ ನೀಡಿ.
ನಿಮ್ಮವ
ಉದಯ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ತಿಂಗಳ ನಾಟಕ ಓದು1 ವಾರದ ಹಿಂದೆ
-
-
-
"ಮಾದೇವ"ನ ಯಶಸ್ವಿ ಪ್ರದರ್ಶನ...1 ತಿಂಗಳ ಹಿಂದೆ
-
ತರಚೀ ಪುಷ್ಪೋಪಾಖ್ಯಾನ1 ತಿಂಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …7 ತಿಂಗಳುಗಳ ಹಿಂದೆ
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ1 ವರ್ಷದ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
-
Pic by Hengki Lee4 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?7 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!7 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
-
ಮಾಯೆ8 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ8 ವರ್ಷಗಳ ಹಿಂದೆ
-
ಅನುಸಂಧಾನ-೩8 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
-
ಕತ್ತಲೆ.................10 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..10 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ10 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...11 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ11 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
-
ತೀರ....12 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ12 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)13 ವರ್ಷಗಳ ಹಿಂದೆ
-
(ಮಹಿಳಾ)ವಾದ:13 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್14 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು15 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು16 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?16 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಪ್ರತಿಭಾ ನಂದಕುಮಾರ್
- Father
- Here every woman is a Panchali...
- ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
- One should not be afraid to speak in favour of humanity (A conversation with renowned revolutionary Nepali language poet Mr. Manoj Bogati)
- ಮರಭೂಮಿಯೆಂದರೆ ಬರೀ ಮರಳಲ್ಲ..........
- Floods
- ವಿನೂತನ ಶೈಲಿಯ ಉದಯ ಇಟಗಿ ಅವರ ನಾಟಕ- ಶೇಕ್ಸ್ ಪಿಯರನ ಶ್ರೀಮತಿ
- Time
- ಮರಣ ವೃತ್ತಾಂತ
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
14 ಕಾಮೆಂಟ್(ಗಳು):
ನಿಮ್ಮ ಆಲೋಚನೆ ಚೆನ್ನಾಗಿದೆ... ಪುಸ್ತಕ ಪ್ರಕಾಶನ ಮತ್ತು ಇತರೆ ವಿಷಯಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರೋದರಿಂದ ಸದ್ಯಕ್ಕೆ ಏನೂ ಹೇಳಲಾರೆ... ನಿಮ್ಮ ಕಾರ್ಯದಲ್ಲಿ ಜಯಶೀಲರಾಗಿ ಎಂದು ಹಾರೈಸುವೆ... ಬಹುಶ ಬ್ಲಾಗ್ ಬರೆಯೋರಲ್ಲಿ ತುಂಬಾ ಜನ ಪುಸ್ತಕಾನೂ ಬರ್ದಿರೋದ್ರಿಂದ (ನನ್ನ ಅನಿಸಿಕೆ ಪ್ರಕಾರ) ನಿಮಗೆ ಈ ವಿಷಯದಲ್ಲಿ ಜಯ ಖಂಡಿತ... ನಾವು ನಿಮ್ಮೊಂದಿಗಿದ್ದೇವೆ... ಮುಂದುವರೆಯಿರಿ... Wish you all success..
ಉದಯ್
ನನಗೂ ಈ ಬಗ್ಗೆ ಮಾಹಿತಿ ಬೇಕಿದೆ. ಸದ್ಯ ನಾನು ಈ ವಿಚಾರದ ಬಗ್ಗೆ ಅಲ್ಪಜ್ಞ. ನನಗೂ ನಿಮ್ಮ೦ತೆಯೇ ಒ೦ದು ಸ೦ಕಲನ ಹ೦ರ ತರಬೇಕೆ೦ಬ ಆಸೆ ಇದೆ. ಮಾಹಿತಿ ಸಿಕ್ಕ ಕೂಡಲೇ ಅದನ್ನು ನಿಮಗೂ ತಿಳಿಸುವೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎ೦ದು ಆತ್ಮೀಯವಾಗಿ ಹಾರೈಸುವೆ.
ಶುಭವಾಗಲಿ
all the best uday...
ಈ ವಿಷಯದಲ್ಲಿ ನನಗೂ ಮಾಹಿತಿ ಇಲ್ಲ.
ನಿಮಗೆ ಶುಭ ಹಾರೈಸುತ್ತೇನೆ.
udaya avre,
all the best. book release functionge kariyodu maribEDi.. :)
ನೀವು ಜುಲ್ಯ್ ಕೊನೆವಾರದಲ್ಲಿ ಬೆಂಗಳೂರಿಗೆ ಬರುವವರಾಗಿರುವುದರಿಂದ ನಿಮ್ಮ ಕೆಲಸ ಈಗಲೇ ಆರಂಭಿಸಬೇಕು. ನಿಮ್ಮ ಕವನಗಳ ಹಸ್ತಪ್ರತಿಯನ್ನು (ಸಾಪ್ಟ್ ಕಾಪಿ)ಪ್ರಕಾಶಕರಿಗೆ ಕಳುಹಿಸಬೇಕು. ಯಾರು ಆ ಪ್ರಕಾಶಕರು. ನಿಮ್ಮನ್ನು ಬಲ್ಲವರಾಗಿದ್ದರೆ ಚೆನ್ನ. ನಿಮ್ಮ ಕವನಗಳು ಮಾರುಕಟ್ಟೆಯಲ್ಲಿ ಮಾರಾಟವಾಗಬಹುದೆಂಬ ಭರವಸೆ ಇದ್ದರೆ ಒಳ್ಳೆಯ ಪ್ರಕಾಶಕರು ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿ ನಿಮಗೆ ಯಾರಾದರೂ ಸಾಹಿತ್ಯದವರು ಪರಿಚಯವಿದ್ದರೆ ಅವರ ಜತೆ ಸಂಪರ್ಕಿಸಿ ಪುಸ್ತಕ ಪ್ರಕಾಶನದ ಕುರಿತು ಹೇಳಿ.
ಪುಸ್ತಕ ಪ್ರಕಾಶನದ ಕೆಲವು ಹಂತಗಳು: ಹಸ್ತಪ್ರತಿಯನ್ನು ಪ್ರಕಾಶಕರಿಗೆ ಕೊಡುವುದು. ಅವರು ಸ್ವತ: ಅಥವಾ ಇನ್ನೊಬ್ಬ (ಒಳ್ಳೆಯ ಬರಹಗಾರ/ಸಂಪಾದಕ)ರಿಂದ ಅದನ್ನು ಓದಿಸುತ್ತಾರೆ. ನಂತರ ಅದಕ್ಕೆ ಬೇಕಾಗುವ ಮುನ್ನುಡಿ, ಲೇಖಕನ ಮಾತು, ಅರ್ಪಣೆ, ಬ್ಲರ್ಬ್ ಇತ್ಯಾದಿ ಬರೆಸುವುದು, ಮುಖಪುಟ ರಚನೆ, ಮುದ್ರಣ, ಬಿಡುಗಡೆ, ಮಾರಾಟ, ಸರಕಾರದ ಸಂಸ್ಥೆಗಳಿಂದ ಸಗಟು ಖರೀದಿ (೩೦೦ ಪ್ರತಿ)ಇತ್ಯಾದಿ. ಕವನಗಳನ್ನು ಪ್ರಕಟಿಸುವ ನಿಮಗೆ ಯಾವುದೇ ಪ್ರಕಾಶಕ ರಾಯಲ್ಟಿ ಕೊಟ್ಟರೆ ಅದು ಭಾಗ್ಯ. ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕೆಲವು ಪ್ರಕಾಶನ ಸಂಸ್ಥೆಗಳು: ಅಂಕಿತ, ಛಂದ, ಸೃಷ್ಟಿ, ಸಪ್ನಾ, ನವ ಕರ್ನಾಟಕ, ಸಿವಿಜಿ, ಅಭಿನವ,ಧಾರಿಣಿ, ಸುಮುಖ, ಇತ್ಯಾದಿ. ಇನ್ನು ಮಾಹಿತಿಇದ್ದರೆ ಖಾಸಗಿಯಾಗಿ ತಿಳಿಸುವೆ.
ಶುಭವಾಗಲಿ
ಒಲವಿನಿಂದ
ಬಾನಾಡಿ
Prakasha Kambathalli
Ankitha Pusthaka
No.53, Shamsingh Complex
Gandhi Bazar, Basavanagudi
Bengaluru-560004
Ph:080-26617100 (O)
ಬೆಂಗಳೂರಿನಲ್ಲಿರುವ ಪ್ರಕಾಶ್ ಕಂಬತ್ತಳ್ಳಿ ಬಹಳಷ್ಟು ಯುವ ಬರಹಗಾರರ ಬರಹಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ನೀವು ಒಂದು ಸಲ ಫೋನಾಯಿಸಿ ನೋಡಿ.
ಶುಭವಾಗಲೀ
-ಧರಿತ್ರಿ
ಬಾನಾಡಿ ಹಾಗೂ ಧರಿತ್ರಿಯವರಿಗೆ,
ನಿಮ್ಮ ಪ್ರೀತಿ ಹಾಗೂ ಕಳಕಳಿಗೆ ತುಂಬಾ ಧನ್ಯವಾದಗಳು. ನಿಮ್ಮ ಮಾಹಿತಿಯಂತೆ ಮುಂದುವರೆಯುತ್ತೇನೆ. ಧನ್ಯವಾದಗಳು.
ಬಾನಾಡಿಯವರೆ,
ನಿಮ್ಮದು ನನ್ನ ಬ್ಲಾಗಿಗೆ ಮೊದಲ ಭೇಟಿ. ನಿಮಗೆ ಅಭೂತಪೂರ್ವ ಸ್ವಾಗತವನ್ನು ಕೋರುವೆ. ಆಗಾಗ್ಗೆ ಬೇಟಿ ಕೊಡುತ್ತಿರಿ.
ಉದಯ್ ಸರ್,
ಕೆಲ ದಿನ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್ದೆ. ನಿಮ್ಮ ಈ ಪುಟ್ಟ ಲೇಖನ ಓದಿದಾಗ ನನಗೆ ಖುಷಿಯಾಯಿತು. ನೀವು ಈ ವಿಚಾರವಾಗಿ ಮೇಪ್ಲವರ್ ಮೀಡಿಯಾದ ಜಿ.ಎನ್. ಮೋಹನ್ ಅವರನ್ನು ಯಾಕೆ ಸಂಪರ್ಕಿಸಬಾರದು.? ಅವರದೇ ಆದ ಪುಸ್ತಕ ಪ್ರಕಾಶನವಿದೆ.
ಒಳ್ಳೆಯದಾಗಲಿ...all the best...
ಶಿವು,
ನಿಮ್ಮ ಪ್ರೀತಿಗೆ ಹಾಗೂ ಕಾಳಜಿಗೆ ಥ್ಯಾಂಕ್ಸ್. ದಯವಿಟ್ಟು ಮೋಹನ್ವರ ಫೋನ್ ನಂಬರ್ ಅಥವಾ ಈಮೇಲ್ ಇದ್ದರೆ ಕೊಡುತ್ತೀರಾ?
ಉದಯ್ ಸರ್,
ಜಿ.ಎನ್.ಮೋಹನ್ ರವರ email id:
gnmohann@gmail.com
mayflowermh@gmail.com
phone no:9449865390
all the best...
ಪ್ರಿಯ ಮಿತ್ರರೆ,
ನೀವು ಕೊಟ್ಟ ಸಲಹೆಗಳೊಂದಿಗೆ ಮುಂದುವರೆಯುವೆ. ನೋಡುವಾ ಅದೆಷ್ಟರಮಟ್ಟಿಗೆ ಫಲಿಸುತ್ತದೆಂದು. ನಿಮ್ಮ ಈ ಪ್ರೀತಿ ಹಾಗೂ ಕಾಳಜಿ ಹೀಗೆ ಮುಂದುವರೆಯಲಿ. ನಿಮ್ಮ ಅಮೂಲ್ಯ ಸಲಹೆ ಹಾಗೂ ಶುಭಕಾಮನೆಗಳಿಗೆ ವಂದನೆಗಳು.
ನಿಮ್ಮವ
ಉದಯ ಇಟಗಿ
ಕಾಮೆಂಟ್ ಪೋಸ್ಟ್ ಮಾಡಿ